Tag: swachch bharath

  • ಸ್ವಚ್ಛ ಭಾರತ್ ಮಿಷನ್ ಯೋಜನೆ – ಕೋಲಾರ ನಗರಸಭೆಯಲ್ಲಿ ಭಾರಿ ಗೋಲ್‌ಮಾಲ್!

    ಸ್ವಚ್ಛ ಭಾರತ್ ಮಿಷನ್ ಯೋಜನೆ – ಕೋಲಾರ ನಗರಸಭೆಯಲ್ಲಿ ಭಾರಿ ಗೋಲ್‌ಮಾಲ್!

    ಕೋಲಾರ: ಸ್ವಚ್ಛ ಭಾರತ್ ಮಿಷನ್ (Swachh Bharat Mission) ಯೋಜನೆಯಡಿ ನಗರದ ತ್ಯಾಜ್ಯ ನಿರ್ವಹಣೆಗೆ 8 ಎಲೆಕ್ಟ್ರಿಕ್‌ ವಾಹನಗಳನ್ನು (Electric Vehicle) ಖರೀದಿಸಿದ್ದು, ಇದರಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ. 16 ಸಾವಿರದ ರೂ ಚಾರ್ಜಿಂಗ್ ಪಿನ್‌ಗೆ 5 ಲಕ್ಷ ರೂ. ಬಿಲ್ ತೋರಿಸಿರುವ ಭಾರೀ ಗೋಲ್‌ಮಾಲ್ ನಡೆದಿದೆ.

    ನಾಲ್ಕೈದು ತಿಂಗಳು ಕಳೆದರೂ ನಿಂತಲ್ಲೇ ನಿಂತಿರುವ ಕಸ ಎತ್ತುವ ವಾಹನಗಳು, ಮತ್ತೊಂದೆಡೆ ಚಾರ್ಜಿಂಗ್ ಪಾಯಿಂಟ್‌ನಲ್ಲಿ (Charging Point) ಆಗಿರುವ ಗೋಲ್ ಮಾಲ್ ಕುರಿತು ನಗರಸಭೆಯಲ್ಲಿ ಸದಸ್ಯರು ಆರೋಪಿಸಿದ್ದಾರೆ. ಘನ ತ್ಯಾಜ್ಯ ವಿಲೇವಾರಿಗಾಗಿ ಸುಮಾರು 8 ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಿದ್ದಾರೆ. ಇದರ ಜೊತೆಗೆ ವಾಹನಗಳ ಚಾರ್ಜಿಂಗ್‌ಗಾಗಿ ಖರೀದಿ ಮಾಡಿರುವ ಚಾರ್ಜಿಂಗ್ ಪಾಯಿಂಟ್‌ನ ಮೊತ್ತದ ಬಗ್ಗೆ ಅವ್ಯವಹಾರದ ಶಂಕೆಯನ್ನು ವ್ಯಕ್ತಪಡಿಸಿದ್ದು, ಜೊತೆಗೆ ತನಿಖೆಗೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: Bilkis Bano case | ಕಟು ಟೀಕೆಯನ್ನು ಆದೇಶದಿಂದ ತೆಗೆಯುವಂತೆ ಗುಜರಾತ್ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

    ನಗರಸಭೆ ಅಧಿಕಾರಿಗಳು 2023ರ ಡಿಸೆಂಬರ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ 1 ಯೋಜನೆಯಡಿ, ಘನತ್ಯಾಜ್ಯ ವಸ್ತು ನಿರ್ವಹಣೆ ಸಂಬಂಧ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್ ಪಾಯಿಂಟ್ ಖರೀದಿಗಾಗಿ ಜಿಲ್ಲಾಧಿಕಾರಿಗಳಿಗೆ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಲಿಸಿದ್ದರು. ಅದರಲ್ಲಿ ಎರಡು ಉಪಕರಣ ಖರೀದಿಗೆ ಬರೋಬ್ಬರಿ 8 ಲಕ್ಷ ರೂ. ಆಗಬಹುದೆಂದು ಅಂದಾಜು ಮೊತ್ತವನ್ನು ನಗರಸಭೆ ನಮೂದಿಸಿತ್ತು.

    ಜಿಲ್ಲಾಧಿಕಾರಿಯು ಕೆಲ ಷರತ್ತುಗಳೊಂದಿಗೆ ಜ.1ರಂದು ಕ್ರಿಯಾಯೋಜನೆಗೆ ಅನುಮೋದನೆಯನ್ನು ನೀಡಿದ್ದರು. ಎರಡು ಉಪಕರಣಗಳಿಗೆ ಬಿಲ್ 6.77 ಲಕ್ಷ ರೂ. ಹಾಗೂ ಜಿಎಸ್‌ಟಿ 1.22 ಲಕ್ಷ ಸೇರಿ ಒಟ್ಟು 8 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದಾರೆ. ಆದರೆ ಇದೇ ಉಪಕರಣಕ್ಕೆ ಕಂಪನಿಯ ವೆಬ್‌ಸೈಟ್‌ನಲ್ಲಿರುವ ಮೌಲ್ಯ ಒಂದಕ್ಕೆ 16,500 ರೂ. ಆಗಿರುವುದರಿಂದ ಸದಸ್ಯರು ಇದರಲ್ಲಿ ದೊಡ್ಡಮಟ್ಟದ ಗೋಲ್ ಮಾಲ್ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

    ನಗರಸಭೆ ಖರೀದಿ ಮಾಡಿರುವ ಜಾರ್ಜಿಂಗ್ ಪಾಯಿಂಟ್ ಒಂದಕ್ಕೆ 3.38 ಲಕ್ಷ ರೂ.ನಂತೆ ಖರೀದಿಸಲಾಗಿದೆ. ಎರಡಕ್ಕೂ ಜಿಎಸ್‌ಟಿ ಸೇರಿ ಬರೋಬ್ಬರಿ 7.99 ಲಕ್ಷ ರೂ. ಬಿಲ್ ಆಗಿದೆ. ಖರೀದಿ ಮಾಡಿರುವ ಬೋಲ್ಟ್ ಅರ್ತ್ ಕಂಪನಿಯ ಈ ಜಾರ್ಜಿಂಗ್ ಪಾಯಿಂಟ್‌ನ ಮಾರುಕಟ್ಟೆ ಮೌಲ್ಯ ಒಂದಕ್ಕೆ ಕೇವಲ 16,500 ರೂ. ಇದೆ. ಬೋಲ್ಟ್ ಅರ್ತ್ ಕಂಪನಿಯ ವೆಬ್‌ಸೈಟ್ ಪರಿಶೀಲಿಸಿದಾಗಲೂ ಇದೇ ಮಾಹಿತಿ ಲಭ್ಯವಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಶಾಸಕ ಕೊತ್ತೂರು ಮಂಜುನಾಥ್, ಈ ಉಪಕರಣಗಳನ್ನು ನಗರಸಭೆ ಹೆಸರಿನಲ್ಲಿ ಬೆಂಗಳೂರಿನ ಇನ್‌ಫ್ಯಾಂಟ್ರಿ ರಸ್ತೆ ಬಳಿಯ ಅಲ್ಫಾ ಟೆಕ್ನಾಲಾಜಿಸ್‌ನಿಂದ ಜುಲೈ 19ರಂದು ಖರೀದಿಸಿರುವ ಬಗ್ಗೆ ಮಾಹಿತಿಯಿದ್ದು, ಜಾರ್ಜಿಂಗ್ ಪಾಯಿಂಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಒಂದು ಚಾರ್ಜಿಂಗ್ ಪಾಯಿಂಟ್ ಉಪಕರಣವನ್ನು ಕೋಲಾರ ನಗರಸಭೆ ಕಚೇರಿಯ ಆವರಣದಲ್ಲಿ ಅಳವಡಿಸಲಾಗಿದೆ. ಮತ್ತೊಂದು ಉಪಕರಣವನ್ನು ಕೆಂದಟ್ಟಿಯ ಎಸ್‌ಟಿಪಿ ಘಟಕದಲ್ಲಿ ಅಳವಡಿಸಲಾಗಿದೆ. ಇನ್ನು ಜಾರ್ಜಿಂಗ್ ಪಾಯಿಂಟ್‌ನಲ್ಲಿ ಯಾವುದೇ ರೀತಿಯ ಗೋಲ್ ಮಾಲ್ ನಡೆದಿಲ್ಲ, ಥರ್ಢ್ ಪಾರ್ಟಿ ಪರಿಶೀಲನೆ ಸಹ ನಡೆಸಲಾಗಿದೆ. ಪ್ಯಾಕೇಜ್ ಸಿಸ್ಟಮ್‌ನಲ್ಲಿ ಖರೀದಿ ಮಾಡಲಾಗಿದ್ದು, ಇದರಲ್ಲಿ ಯಾವುದೇ ಲೋಪವಾಗಿಲ್ಲ. ಇನ್ನು ನೊಂದಣಿಯಾಗದೆ ನಿಂತಿರುವ ವಾಹನವನ್ನು ಕೂಡಲೇ ನೋಂದಣಿ ಮಾಡಿಸಿ ವಾಹನಗಳನ್ನು ನಗರದ ಸ್ವಚ್ಛತೆಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್‌ನಲ್ಲಿ ಖರೀದಿ ಮಾಡಿರುವ ಜಾರ್ಜಿಂಗ್ ಪಾಯಿಂಟ್ ಬಗ್ಗೆ ಹಾಗೂ ಗೋಲ್ ಮಾಲ್ ಕುರಿತು ನಗರ ಸಭೆ ಸದಸ್ಯರೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಶೀಲನೆ ಮಾಡಿ ಸತ್ಯಾಸತ್ಯೆಯನ್ನು ಹೊರತರಬೇಕು ಎಂಬುದು ಜನರ ಆಶಯವಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಸಿಬಿಐ ಡೈರೆಕ್ಟ್ ಎಂಟ್ರಿಗೆ ಬ್ರೇಕ್ – ʻರಕ್ಷಣಾತ್ಮಕʼ ಆಟಕ್ಕಿಳಿದ ಸಿದ್ದರಾಮಯ್ಯ ಸರ್ಕಾರ!

  • ಸ್ವಚ್ಛ ನಗರಿ ಎಂದು ಕರೆಸಿಕೊಂಡ ಕೋಲಾರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆ!

    ಸ್ವಚ್ಛ ನಗರಿ ಎಂದು ಕರೆಸಿಕೊಂಡ ಕೋಲಾರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆ!

    ಕೋಲಾರ: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡುವುದಕ್ಕೂ ಮೊದಲೇ ಕೋಲಾರ ಸ್ವಚ್ಛ ನಗರಿ ಎಂದು ಹೆಸರು ಮಾಡಿತ್ತು.

    ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಿ ಎಲ್ಲಾ ಜಿಲ್ಲೆಗಳಿಗೂ ಬಂಗಾರದ ನಾಡು ಮಾದರಿಯಾಗಿತ್ತು. ಆದರೆ ಕೋಲಾರ ನಗರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆಯೇ ಶಾಪವಾಗಿ ಪರಿಣಮಿಸಿದೆ. ರಾಜ್ಯದ ಶೇ.98ರಷ್ಟು ನಗರಸಭೆ ಮತ್ತು ಪುರಸಭೆಗಳು ಸರ್ಕಾರದ ಅನುದಾನದಿಂದ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಿವೆ.

    ಕೋಲಾರ ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಗೆ ಇನ್ನೂ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೋಲಾರ ನಗರದಲ್ಲಿ ಜನಸಂಖ್ಯೆ 2 ಲಕ್ಷ ದಾಟಿದೆ. 35 ವಾರ್ಡ್‍ಗಳಲ್ಲಿ ದಿನಕ್ಕೆ 64 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಕನಿಷ್ಟ 15 ರಿಂದ 20 ಟನ್ ನಷ್ಟು ಕಸ ಬೀಳುತ್ತದೆ.

    ನಗರದಲ್ಲಿ ಕಸ ವಿಲೇವಾರಿಗೆ ಜಾಗವಿಲ್ಲದೆ ರಸ್ತೆಗಳಲ್ಲಿ, ಹೊರವಲಯದ ಪಾಳು ಬಾವಿಗಳಲ್ಲಿ ಕಸ ಹಾಕುವ ಪರಿಸ್ಥಿತಿ ಎದುರಾಗಿದೆ. ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಮಾತ್ರ ಶೀಘ್ರವೇ ಕ್ರಮ ಕೈಗೊಳುತ್ತೀವಿ ಎಂದು ಸಾಗ ಹಾಕುತ್ತಿದ್ದಾರೆ.

  • ಬಾಹುಬಲಿ ಪ್ರಭಾಸ್ ಮೆಸೇಜ್ ನೋಡಿ ಅಭಿಮಾನಿಗಳು ಫಿದಾ!

    ಬಾಹುಬಲಿ ಪ್ರಭಾಸ್ ಮೆಸೇಜ್ ನೋಡಿ ಅಭಿಮಾನಿಗಳು ಫಿದಾ!

    ಹೈದರಾಬಾದ್: ಬಾಹುಬಲಿಯ ನಟ ಪ್ರಭಾಸ್ ಫೇಸ್‍ಬುಕ್‍ನಲ್ಲಿ ಗಾಂಧೀಜಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತದ ಬಗ್ಗೆ ಉತ್ತಮ ಸಂದೇಶವನ್ನು ಪೋಸ್ಟ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮಹಾತ್ಮ ಗಾಂಧೀಜಿಯವರು ದೇಶದ ಸ್ವಚ್ಛತೆಗಾಗಿ ಶ್ರಮಿಸಿದ್ದರು. ಈ ಬಾರಿ ನಡೆಯಲಿರುವ ಸ್ವಚ್ಛ ಭಾರತ್‍ನಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಕೆಲವೊಮ್ಮೆ ವೈಯಕ್ತಿಕವಾಗಿ ಈ ವಿಷಯದ ಬಗ್ಗೆ ಯೋಚಿಸುತ್ತೇನೆ. ದೇಶದ ನಾಗರಿಕನಾಗಿ ಇದು ನಮ್ಮ ಕರ್ತವ್ಯ ಮಾತ್ರ ಅಲ್ಲ ಇದು ಹವ್ಯಾಸ ಆಗಬೇಕೆಂದು ಅವರು ಹೇಳಿದ್ದಾರೆ.

    ಈ ರೀತಿಯ ಯೋಚನೆ ಮಾಡುವ ನಾವೆಲ್ಲ ಸೇರಿಕೊಂಡಿ ಭಾರತವನ್ನು ಸ್ವಚ್ಛವಾಗಿ ಇಡೋಣ ಹಾಗೂ ನಾವೆಲ್ಲರೂ ಜೊತೆಯಾಗಿದ್ದರೆ ಭಾರತವನ್ನು ಇನ್ನಷ್ಟು ಸುಂದರವಾಗಿಸಬಹುದು ಎಂದು ಪ್ರಭಾಸ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದಿದ್ದಾರೆ.

  • ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ದಾವಣಗೆರೆ: ಪಾಳು ಬಿದ್ದ ಪುಷ್ಕರಣಿಯನ್ನು ಅಧಿಕಾರಿಗಳೊಂದಿಗೆ ಸೇರಿ ಸ್ವಚ್ಛತೆ ಮಾಡಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ತೋರಿಸಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಕೊಣಚಗಲ್ಲು ಗ್ರಾಮದ ಐತಿಹಾಸಿಕ ಪುಷ್ಕರಣಿಯು ಹಲವು ವರ್ಷಗಳಿಂದ ಪಾಳು ಬಿದ್ದು, ಯಾವುದಕ್ಕೂ ಉಪಯೋಗವಾಗುವುದಿಲ್ಲ ಎನ್ನುವಂತಿತ್ತು. ಇದನ್ನ ಅರಿತ ಸಿಇಒ ಅಶ್ವತಿ ಮಂಗಳವಾರ ಬೆಳ್ಳಂಬೆಳಗ್ಗೆ ಸ್ವತಃ ಅವರೇ ಕೈಯಲ್ಲಿ ಪೆÇರಕೆ, ಕುಡಗೋಲು ಹಿಡಿದುಕೊಂಡು ತನ್ನ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನು ಜೊತೆಗೂಡಿಸಿಕೊಂಡು ಪುಷ್ಕರಣಿ ಸ್ವಚ್ಛ ಮಾಡಿದ್ದಾರೆ.

    ಸ್ವಚ್ಛಗೊಳಿಸಿದ ನಂತರ ಸ್ವಚ್ಛತೆಯ ಬಗ್ಗೆ ಜನರಿಗೆ ತಿಳುವಳಿಕೆಯನ್ನು ಸಹ ನೀಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಮನವಿಯನ್ನು ಮಾಡಿಕೊಂಡರು. ಇದೇ ವೇಳೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರು ಇನ್ನು ಮುಂದೆ ಪುಷ್ಕರಣಿಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ಸಹ ನೀಡಿದರು.

    ಅಶ್ವತಿ ಅವರು ಈ ರೀತಿಯ ಹಲವು ಜನಪ್ರಿಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಶೌಚಾಲಯಕ್ಕಾಗಿ ಗುದ್ದಲಿ ಹಿಡಿದಿದ್ರು ಜಿ.ಪಂ. CEO- ಗ್ರಾ.ಪಂ. ಸಿಬ್ಬಂದಿಯಿಂದಲೇ ಗೋಲ್ಮಾಲ್ !

  • ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಭೋಪಾಲ್: ಬಯಲಿನಲ್ಲಿ ಶೌಚಾಲಯ ಮಾಡಿದ್ದಕ್ಕೆ ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆಯು ಅಮಾನತು ಮಾಡಿದೆ.

    ಅಶೋಕ್ ನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿ ಆದಿತ್ಯಾ ನಾರಾಯಣ ಮಿಶ್ರಾ ಅವರು ಈ ಅದೇಶವನ್ನು ಹೊರಡಿಸಿ ಬುಡೇರಾ ಶಾಲೆಯ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ. ಬಯಲಿನಲ್ಲಿ ಶೌಚಾಲಯ ನಡೆಸಿ ಸರ್ಕಾರಿ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸ್ವಚ್ಛ ಭಾರತದ ಅಭಿಯಾನದ ಅಡಿಯಲ್ಲಿ ಎಲ್ಲಾ ಶಾಲಾ ಶಿಕ್ಷಕರಿಗೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಶಿಕ್ಷಕ ಬಯಲು ಶೌಚಕ್ಕೆ ತೆರಳುವುದನ್ನು ನೋಡಿದವರು ಜಿಲ್ಲೆಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಈ ವರದಿಯನ್ನು ಅಧರಿಸಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಅಧಿಕಾರಿ ಮಿಶ್ರಾ ತಿಳಿಸಿದ್ದಾರೆ.

    ಇದೇ ವರ್ಷ ಜೂನ್ ತಿಂಗಳಿನಲ್ಲಿ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ವೀರ್ ಪುರ್ ಪಂಚಾಯತ್ ಅಧಿಕಾರಿಗಳು ಬಯಲು ಶೌಚ ಮಾಡಿದ 13 ಕುಟುಂಬಗಳಿಗೆ 4 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಅಭಿಯಾನವನ್ನು 2014ರ ಅಕ್ಟೋಬರ್ 02 ರಂದು ಆರಂಭಿಸಿದ್ದು, 2019 ರ ವೇಳೆಗೆ ಬಯಲು ಶೌಚಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

  • ಪ್ರಧಾನಿ ಮೋದಿ ಬರ್ತ್‍ಡೇಯಂದು ಸಾರ್ವಜನಿಕರಿಗೆ ಸಿಗಲಿದೆ ಬಂಪರ್ ಸೇವೆ!

    ಪ್ರಧಾನಿ ಮೋದಿ ಬರ್ತ್‍ಡೇಯಂದು ಸಾರ್ವಜನಿಕರಿಗೆ ಸಿಗಲಿದೆ ಬಂಪರ್ ಸೇವೆ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯುವರು ಇದೇ ಭಾನುವಾರ 67ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮಂತ್ರಿಗಳು ಮತ್ತು ಸಂಸದರು ದೇಶದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಿದ್ದಾರೆ.

    ಈ ಕುರಿತು ಈಗಾಗಲೇ ಎಲ್ಲ ಸಂಸದರಿಗೂ ಸೂಚನೆಗಳನ್ನು ನೀಡಲಾಗಿದ್ದು, ಕೇವಲ ಪ್ರಚಾರಕ್ಕಾಗಿ ಈ ಕಾರ್ಯದಲ್ಲಿ ಭಾಗವಹಿಸದೇ, ಉತ್ತಮ ಉದ್ದೇಶ ಸಾಧನೆಗಾಗಿ ಕೈ ಜೋಡಿಸುವಂತೆ ತಿಳಿಸಲಾಗಿದೆ.

    ಮಂಗಳವಾರ ರಾತ್ರಿ ನಡೆದ ಬಿಜೆಪಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಗೊಂಡಿದ್ದು, ಈ ಸ್ವಚ್ಛತಾ ಕಾರ್ಯಕ್ರಮಕ್ಕೆ `ಸೇವಾ ದಿವಸ್’ ಎಂದು ಹೆಸರಿಡಲಾಗಿದೆ. ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಭಾರತದ ಪ್ರಮುಖ ಸ್ಥಳಗಳಾದ ಇಂಡಿಯಾ ಗೇಟ್, ಜುಹೂ ಬೀಚ್,  15 ಪ್ರವಾಸಿ ಸ್ಥಳ, ಸ್ಲಂಗಳಲ್ಲಿ ಈ ಸ್ವಚ್ಛತಾ ಕಾರ್ಯ ನಡೆಯಲಿದೆ.

    ಮೋದಿ ಜನ್ಮ ದಿನಕ್ಕೆ ಎರಡು ದಿನಗಳ ಮೊದಲು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೆಪ್ಟೆಂಬರ್ 15 ರಂದು ತಮ್ಮ ಜನ್ಮ ಭೂಮಿಯಾದ ಕಾನ್ಪುರ್‍ಗೆ ಭೇಟಿ ನೀಡಲಿದ್ದು, ಅಂದೇ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

    2014 ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಅವರ ಜನ್ಮ ದಿನದಂದು ಸ್ವಚ್ಛ ಭಾರತ ಅಭಿಯಾನವನ್ನು ಮೋದಿ ಆರಂಭಿಸಿದ್ದರು. ಸಂಸದರ ಸ್ವಚ್ಛತಾ ಕಾರ್ಯ ಫೋಟೊ ಫ್ರೇಮ್‍ಗಳಿಗೆ ಸೀಮಿತವಾಗಬಾರದು ಎನ್ನುವ ಸಲಹೆಗಳು ಬಂದಿದೆ.

  • ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ- ಈ ಬಾರಿ ಮೈಸೂರಿಗೆ ಎಷ್ಟನೇ ಸ್ಥಾನ?

    ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ- ಈ ಬಾರಿ ಮೈಸೂರಿಗೆ ಎಷ್ಟನೇ ಸ್ಥಾನ?

    ನವದೆಹಲಿ: ಭಾರತದ 25 ಅತ್ಯಂತ ಸ್ಚಚ್ಛ ನಗರಗಳ ಪಟ್ಟಿಯನ್ನು ಇಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪ್ರಕಟಿಸಿದ್ದಾರೆ. ಸ್ವಚ್ಛ್ ಸರ್ವೇಕ್ಷಣ್-2017ರ ಭಾಗವಾಗಿ ಸ್ವಚ್ಛ ನಗರಗಳನ್ನ ಪಟ್ಟಿ ಮಾಡಲಾಗಿದ್ದು, 73 ನಗರಗಳಿಂದ ಸುಮರು 37 ಲಕ್ಷ ಮಂದಿ ಇದಕ್ಕೆ ಓಟ್ ಮಾಡಿದ್ದಾರೆ.

    ಈ ಬಾರಿ ಮಧ್ಯಪ್ರದೇಶದ ಇಂದೋರ್ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನ ಕೂಡ ಇದೇ ರಾಜ್ಯದ ಭೋಪಾಲ್ ನಗರಕ್ಕೆ ಸಿಕ್ಕಿದೆ. ಇನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ ಮೂರನೇ ಸ್ಥಾನದಲ್ಲಿದೆ. ಗುಜರಾತ್‍ನ ಸೂರತ್ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ 5 ನೇ ಸ್ಥಾನಕ್ಕೆ ಇಳಿದಿದೆ.

    ಟಾಪ್ 10 ಅತ್ಯಂತ ಸ್ವಚ್ಛ ನಗರಗಳು:
    1. ಇಂದೋರ್- ಮಧ್ಯಪ್ರದೇಶ
    2. ಭೋಪಾಲ್- ಮಧ್ಯಪ್ರದೇಶ
    3. ವಿಶಾಖಪಟ್ಟಣ – ಆಂಧ್ರಪ್ರದೇಶ
    4. ಸೂರತ್ – ಗುಜರಾತ್
    5. ಮೈಸೂರು – ಕರ್ನಾಟಕ
    6. ತಿರುಚಿರಾಪಳ್ಳಿ – ತಮಿಳುನಾಡು
    7. ನವದೆಹಲಿ ಪುರಸಭೆ
    8. ನವೀ ಮುಂಬೈ – ಮಹಾರಾಷ್ಟ್ರ
    9. ತಿರುಪತಿ – ಆಂಧ್ರಪ್ರದೇಶ
    10. ವಡೋದರಾ – ಗುಜರಾತ್

    ಅತ್ಯಂತ ಸ್ಚಚ್ಛ ನಗರಗಳ ಪಟ್ಟಿ ಮಾಡಲು ನಡೆಸಿದ ಸಮೀಕ್ಷೆಯಲ್ಲಿ ಜನರಿಗೆ ಹಲವು ಪ್ರಶ್ನೆಗಳ ಮೇಲೆ ಓಟ್ ಮಾಡಲು ಕೇಳಲಾಗಿತ್ತು. ಸರ್ಕಾರದ ಮಾಹಿತಿಯ ಪ್ರಕಾರ ಜನರು ತಮ್ಮ ನಗರಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸುಧಾರಣೆಯಾಗಿದೆ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

    ಜನರು ನೀಡಿದ ಪ್ರತಿಕ್ರಿಯೆಯ ಜೊತೆಗೆ ಒಂದು ಪ್ರದೇಶದ ಸ್ವಚ್ಛತಾ ಕಾರ್ಯ ಮತ್ತು ನೈರ್ಮಲ್ಯತೆಯ ಬಗ್ಗೆ ಅಲ್ಲಿನ ಸ್ಥಳೀಯ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಸ್ವಚ್ಛ ನಗರಗಳ ಪಟ್ಟಿಯನ್ನ ಸಿದ್ಧಪಡಿಸಲಾಗಿದೆ.

    2019ರೊಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಗುರಿಯನ್ನು ಸಕಾರಗೊಳಿಸಲು ತೆಗೆದುಕೊಳ್ಳಲಾಗಿರುವ ಪ್ರಮುಖ ಹೆಜ್ಜೆಗಳಲ್ಲಿ ಈ ಸಮೀಕ್ಷೆಯೂ ಒಂದಾಗಿದೆ. ಬಯಲು ಶೌಚ ಮುಕ್ತವಾಗಲು ಭಾರತಕ್ಕೆ ಸರಿಸುಮಾರು 11.1 ಕೋಟಿ ಶೌಚಾಲಯಗಳ ಅಗತ್ಯವಿದ್ದು, ಈವರೆಗೆ ಸರ್ಕಾರ 3 ಕೋಟಿ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

  • ಮಾಂಗಲ್ಯ ಮಾರಿ ಟಾಯ್ಲೆಟ್ ಕಟ್ಟಿಸಿದ್ದ ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮಗೆ ಮೋದಿಯಿಂದ ಪುರಸ್ಕಾರ

    ಮಾಂಗಲ್ಯ ಮಾರಿ ಟಾಯ್ಲೆಟ್ ಕಟ್ಟಿಸಿದ್ದ ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮಗೆ ಮೋದಿಯಿಂದ ಪುರಸ್ಕಾರ

    ಕಲಬುರಗಿ: ಹಳ್ಳಿಯಲ್ಲಿ ಟಾಯ್ಲೆಟ್ ಕಟ್ಟಲು ಮಾಂಗಲ್ಯ ಮಾರಿ ಗಮನ ಸೆಳೆದಿದ್ದ, ಕಲಬುರಗಿಯ ಪಬ್ಲಿಕ್ ಹೀರೋ ಅಕ್ಕಮ್ಮ ಅವರಿಗೆ ಪ್ರಧಾನಿ ಮೋದಿ ಮಹಿಳಾ ಚಾಂಪಿಯನ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ.

    ಸ್ವಚ್ಛ ಭಾರತ ಮಿಷನ್ ಅಡಿ ಅಕ್ಕಮ್ಮ ಮಾಂಗಲ್ಯ ಸೂತ್ರ ಮಾರಿ ಹರವಾಳ ಗ್ರಾಮದಲ್ಲಿನ ಮನೆಗಳಿಗೆ ಟಾಯ್ಲೆಟ್ ನಿರ್ಮಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿಯ ಬಿಗ್ ಬುಲೆಟನ್ ನಲ್ಲಿ ಅಕ್ಕಮ್ಮ ಅವರನ್ನ ಪಬ್ಲಿಕ್ ಹೀರೋ ಅಂತಾ ವಿಸ್ಕøತ ವರದಿ ಪ್ರಸಾರ ಮಾಡಿತ್ತು. ಇದನ್ನು ಕಂಡ ರಾಜ್ಯ ಸರ್ಕಾರ ರಾಜ್ಯದಿಂದ ಮಹಿಳಾ ಚಾಂಪಿಯನ್ ಪುರಸ್ಕಾರಕ್ಕೆ ಅಕ್ಕಮ್ಮ ಅವರನ್ನು ಆಯ್ಕೆ ಮಾಡಿತ್ತು .

    ಗುಜರಾತ್‍ನ ಗಾಂಧಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಖುದ್ದು ಅಕ್ಕಮ್ಮ ಅವರಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.

    https://www.youtube.com/watch?v=EKG8lI91xBE