Tag: suv

  • ಕಿಯಾ ಸ್ವದೇಶಿ ಎಸ್‍ಯುವಿ ಕಾರಿನ ವಿನ್ಯಾಸದ ಮಾದರಿ ಬಿಡುಗಡೆ – ಕಾರಿನ ಬೆಲೆ ಎಷ್ಟಿರಬಹುದು?

    ಕಿಯಾ ಸ್ವದೇಶಿ ಎಸ್‍ಯುವಿ ಕಾರಿನ ವಿನ್ಯಾಸದ ಮಾದರಿ ಬಿಡುಗಡೆ – ಕಾರಿನ ಬೆಲೆ ಎಷ್ಟಿರಬಹುದು?

    ಹೈದರಾಬಾದ್: ದಕ್ಷಿಣ ಕೊರಿಯಾದ ಪ್ರಸಿದ್ಧ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಭಾರತದಲ್ಲಿ ಬಿಡುಗಡೆ ಮಾಡಲಿರುವ  ತನ್ನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಾರಿನ ವಿನ್ಯಾಸದ ಮಾದರಿಯನ್ನು ಬಿಡುಗಡೆ ಮಾಡಿದೆ.

    ನೂತನ ಎಸ್‍ಯುವಿ ಕಾರು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಹುಂಡೈ ಕಂಪನಿಯ ಕ್ರೇಟಾ, ಟಾಟಾ ಹ್ಯಾರಿಯರ್, ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 500 ಪ್ರತಿ ಸ್ಪರ್ಧಿಯಾಗಿ ಕಿಯಾ ಎಸ್‍ಯುವಿ ಎಸ್‍ಪಿ2 ಮಾರಕುಟ್ಟೆಗೆ ಇಳಿಯಲಿದೆ.

    ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿ ಎಸ್‍ಯುವಿ ಭಾರತದಲ್ಲಿ ತಯಾರಾಗಿ ವಿದೇಶಕ್ಕೆ ರಫ್ತು ಆಗಲಿದೆ. 12 ಲಕ್ಷ ರೂ. ಆರಂಭಿಕ ಬೆಲೆ ಇರುವ ಈ ಕಾರಿನ ಟಾಪ್ ಎಂಡ್ ಆವೃತ್ತಿಗೆ 16 ಲಕ್ಷ ರೂ. ದರ ನಿಗದಿಯಾಗುವ ಸಾಧ್ಯತೆಯಿದೆ.

    ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಕಿಯಾದಲ್ಲಿ ಶೇ.33.88 ರಷ್ಟು ಷೇರುಗಳನ್ನು ಹುಂಡೈ ಕಂಪನಿ ಖರೀದಿಸಿದೆ.

    ಬೆಂಗಳೂರು ಮತ್ತು ಅನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಎರ್ರಾಮಂಚಿ ಗ್ರಾಮದಲ್ಲಿ ಕಿಯಾ ಮೋಟಾರ್ಸ್ ತನ್ನ ಘಟಕವನ್ನು ತೆರೆದು ಉತ್ಪಾದನಾ ಕಾರ್ಯವನ್ನು ಆರಂಭಿಸಿದೆ. 536 ಎಕ್ರೆ ಜಾಗದಲ್ಲಿ ಘಟಕ ನಿರ್ಮಾಣವಾಗಿದ್ದು, ಕಿಯಾ 100 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಕಿಯಾ ಹಾಕಿಕೊಂಡಿದೆ.

  • ಕಾರುಗಳ ಮೇಲೆ 50 ಸಾವಿರ ರೂ.ಗಳಿಂದ 14 ಲಕ್ಷ ರೂ. ರಿಯಾಯಿತಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    ಕಾರುಗಳ ಮೇಲೆ 50 ಸಾವಿರ ರೂ.ಗಳಿಂದ 14 ಲಕ್ಷ ರೂ. ರಿಯಾಯಿತಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    ನವದೆಹಲಿ: ಕಾರು ತಯಾರಿಕಾ ಕಂಪೆನಿಗಳು ಹೊಸ ವಾಹನಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡಿದ್ದು, ಗ್ರಾಹಕರು 50 ಸಾವಿರ ರೂಪಾಯಿಗಳಿಂದ 14 ಲಕ್ಷ ರೂಪಾಯಿಗಳವರೆಗೆ ಭಾರೀ ರಿಯಾಯಿತಿಯನ್ನು ಪಡೆಯಬಹುದಾಗಿದೆ.

    ಹೌದು, ಹಬ್ಬದ ಸಮಯದಲ್ಲಿ ಗ್ರಾಹಕರಿಗಾಗಿ ಕಂಪೆನಿಗಳು ಭಾರೀ ರಿಯಾಯಿತಿಯನ್ನು ಘೋಷಿಸಿವೆ. ಆದರೆ ಮಾಹಿತಿಗಳ ಪ್ರಕಾರ ರಿಯಾಯಿತಿ ಹಬ್ಬದ ಉದ್ದೇಶವಲ್ಲ. ಬದಲಾಗಿ ಹೆಚ್ಚುತ್ತಿರುವ ಇಂಧನ ಬೆಲೆ, ವಾಹನ ವಿಮಾ ಪಾಲಿಸಿಗಳ ನೂತನ ನೀತಿ ಹಾಗೂ ಪ್ರಕೃತಿ ವಿಕೋಪಗಳಿಂದಾಗಿ ಕಾರು ಕಂಪೆನಿಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ರಿಯಾಯಿತಿ ದರವನ್ನು ಘೋಷಿಸಿವೆ.

    ಯಾವೆಲ್ಲಾ ಕಂಪೆನಿಗಳು ರಿಯಾಯಿತಿ ನೀಡಿವೆ?
    ಹ್ಯಾಚ್‍ಬ್ಯಾಕ್, ಸೇಡನ್ ಹಾಗೂ ಎಸ್‍ಯುವಿ ತಯಾರಿಕಾ ಸಂಸ್ಥೆಗಳಾದ ಮಾರುತಿ ಸುಜುಕಿ, ಹುಂಡೈ, ಮಹೀಂದ್ರ, ಫೋರ್ಡ್ ಮತ್ತು ಟಾಟಾ ಮೋಟಾರ್ಸ್ ಹಾಗೂ ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯೂ, ಆಡಿ, ಮೆರ್ಸಿಡೀಸ್ ಬೆಂಜ್ ಸಹ ರಿಯಾಯಿತಿ ಘೋಷಿಸಿವೆ.

    ಮಾರುತಿ ಸುಜುಕಿ ಕಂಪೆನಿಯು ತನ್ನ ಮಾರುತಿ ಆಲ್ಟೋ ಕಾರಿನ ಮೇಲೆ 50 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದ್ದರೆ, ಮಹೀಂದ್ರ ಕಂಪೆನಿಯು ತನ್ನ ಸ್ಕಾರ್ಪಿಯೋ ಎಸ್‍ಯುವಿ ಮೇಲೆ 70 ಸಾವಿರ ರೂಪಾಯಿ ಕಡಿತಗೊಳಿಸಿದೆ. ಇದಲ್ಲದೇ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯೂ ತನ್ನ 7-ಸೀರಿಸ್ ಮೇಲೆ 14 ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ. ಇದಲ್ಲದೇ ಇತರೆ ಸಂಸ್ಥೆಗಳು ತಮ್ಮಲ್ಲಿ ತಯಾರಿಕೆಯಾಗುವ ಕಾರುಗಳ ಮೇಲೆ 50 ಸಾವಿರ ರೂಪಾಯಿಗಳಿಂದ 14 ಲಕ್ಷ ರೂಪಾಯಿಗಳ ವರೆಗೆ ವಿಶೇಷ ರಿಯಾಯಿತಿ ನೀಡಲಿವೆ.

    ಮಾರುತಿ ಸುಜುಕಿ ಕಂಪೆನಿಯ ಕಾರುಗಳಾದ ಬಲೆನೋ ಮೇಲೆ 25 ಸಾವಿರ ರೂಪಾಯಿ, ಆಲ್ಟೋ ಕೆ-10ಮಾದರಿಗೆ 50 ಸಾವಿರ ರೂಪಾಯಿ ಹಾಗೂ ವ್ಯಾಗನ್ ಆರ್ ಕಾರಿಗೆ 75 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದೆ.

    ಹುಂಡೈ ಕಂಪೆನಿಯ ಕಾರುಗಳಾದ ಎಲೈಟ್ ಐ-20 ಕಾರಿಗೆ 50 ಸಾವಿರ ರೂಪಾಯಿ, ಗ್ರಾಂಡ್ ಐ-10 ಕಾರಿಗೆ 75 ಸಾವಿರ ರೂಪಾಯಿ ರಿಯಾಯಿತಿ ನೀಡಿದೆ. ಇದಲ್ಲದೇ ಟಾಟಾದ ನೆಕ್ಸಾನ್ ಕಾರಿಗೆ 57 ಸಾವಿರ ರೂಪಾಯಿ, ಹೊಂಡಾದ ಹೊಂಡಾ ಸಿಟಿ ಕಾರಿನ ಮೇಲೆ 62 ಸಾವಿರ ರೂಪಾಯಿ, ರೆನಾಲ್ಟ್ ಡಸ್ಟರ್ ಮೇಲೆ 1 ಲಕ್ಷ ರೂಪಾಯಿ, ಟೊಯೋಟಾದ ಯಾರೀಸ್ ಮೇಲೆ 50 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದೆ.

    ಐಶಾರಾಮಿ ಕಾರುಗಳಾದ ಮರ್ಸಿಡೀಸ್ ಬೆಂಜ್ ಸಿಎಲ್‍ಎ ಮಾದರಿಗೆ 5.5 ಲಕ್ಷ ರೂಪಾಯಿ, ಜಿಎಲ್‍ಸಿ ಪೆಟ್ರೋಲ್ ಮಾದರಿಗೆ 6 ಲಕ್ಷ ರಿಯಾಯಿತಿ ನೀಡಿದ್ದರೆ, ಆಡಿ ಕಂಪೆನಿಯು ತನ್ನ ಆಡಿ ಎ6 ಮಾದರಿ ಮೇಲೆ 12.5 ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಹೀಂದ್ರ ಕಂಪೆನಿಯ ಅಧ್ಯಕ್ಷ ರಾಜನ್ ವಾಡೇರಾ, ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದೊಂದು ಬಂಪರ್ ಕೊಡುಗೆಯಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಆಗುತ್ತಿರುವ ನಷ್ಟ ಹಾಗೂ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

    ಹುಂಡೈ ಮತ್ತು ಮಾರುತಿ ಅಧಿಕಾರಿಗಳ ಪ್ರಕಾರ, ಜಾಗತೀಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿತ, ಏರುತ್ತಿರುವ ಇಂಧನ ದರ ಮತ್ತು ವಿಮೆ ದರಗಳ ನೀತಿಯಿಂದ ಗ್ರಾಹಕರು ವಾಹನಗಳ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ದರ ಕಡಿತಗೊಳಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿಯನ್ನು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಡಿ ಹರಿಸ್ತೀನಿ ಅಂದ್ರೂ ಹೆದರಲಿಲ್ಲ- ಎಸ್‍ಯುವಿ ವಾಹನ ಚಾಲಕನಿಗೆ ಪಾಠ ಕಲಿಸಿದ ಬೈಕ್ ಸವಾರ

    ಗಾಡಿ ಹರಿಸ್ತೀನಿ ಅಂದ್ರೂ ಹೆದರಲಿಲ್ಲ- ಎಸ್‍ಯುವಿ ವಾಹನ ಚಾಲಕನಿಗೆ ಪಾಠ ಕಲಿಸಿದ ಬೈಕ್ ಸವಾರ

     

    ಭೋಪಾಲ್: ಒನ್ ವೇನಲ್ಲಿ ರಾಂಗ್ ಸೈಡ್‍ನಿಂದ ಬರೋದು ತಪ್ಪು ಅಂತ ಗೊತ್ತಿದ್ರೂ ಇಲ್ಲೊಬ್ಬ ಎಸ್‍ಯುವಿ ವಾಹನ ಚಾಲಕ, ವಿರುದ್ಧ ದಿಕ್ಕಿನಿಂದ ಬಂದಿದ್ದಲ್ಲದೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾನೆ. ಆದ್ರೆ ಬೈಕ್ ಸವಾರ ಧೈರ್ಯಗೆಡದೆ ಆ ವಾಹನ ಸವಾರನಿಗೆ ತಕ್ಕ ಪಾಠ ಕಲಿಸಿದ್ದಾನೆ.

    ನವೆಂಬರ್ 3ರಂದು ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಈ ಘಟನೆ ನಡೆದಿದೆ. ವಿರುದ್ಧ ದಿಕ್ಕಿನಿಂದ ಬಂದ ಎಸ್‍ಯುವಿ ವಾಹನ ಮುಂದೆ ಹೋಗದಂತೆ ಬೈಕ್ ಸವಾರ ಅಡ್ಡಗಟ್ಟಿ ನಿಂತಿದ್ದರು. ಇದರಿಂದ ಕೋಪಗೊಂಡ ಎಸ್‍ಯುವಿ ವಾಹನ ಚಾಲಕ ಬೈಕ್ ಸವಾರನ ಮೇಲೆ ವಾಹನ ಹರಿಸುವುದಾಗಿ ಹೆದರಿಸಿದ್ದ. ವಾಹನವನ್ನ ಚಲಾಯಿಸಿ ಬೈಕ್‍ಗೆ ತೀರಾ ಸಮೀಪ ತಂದಿದ್ದ.

    ಆದರೂ ಇದಕ್ಕೆಲ್ಲಾ ಹೆದರದ ಬೈಕ್ ಸವಾರ ಅಲ್ಲಿಂದ ಒಂದಿಷ್ಟೂ ಕದಲಲಿಲ್ಲ. ಎಷ್ಟು ಹೊತ್ತಾದ್ರೂ ಎಸ್‍ಯುವಿ ವಾಹನ ಚಾಲಕ ಕೂಡ ಅಲ್ಲಿಂದ ಹಿಂದಕ್ಕೆ ಹೋಗದ ಕಾರಣ ಬೈಕ್ ಸವಾರ ಆ ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದುಕೊಂಡು ಮುಂದೆ ಹೋಗಲು ಗಾಡಿ ಸ್ಟಾರ್ಟ್ ಮಾಡಿದ್ದರು.

    ಆದ್ರೆ ಎಸ್‍ಯುವಿ ಚಾಲಕ ಕೂಡ ಬಂದು ಬೈಕ್ ನಂಬರ್ ಪ್ಲೇಟ್‍ನ ಫೋಟೋ ತೆಗೆದುಕೊಂಡಿದ್ದಾನೆ. ನಂತರ ಇದ್ದಕ್ಕಿದ್ದಂತೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾನೆ. ಬೈಕ್ ಸವಾರನನ್ನು ಬ್ಯಾರಿಕೇಡ್‍ಗಳ ಮೇಲೆ ನೂಕಾಡಿದ್ದು, ರಸ್ತೆಯಲ್ಲೇ ಜಗಳವಾಗಿದೆ. ಇದನ್ನು ನೋಡಿ ಕೆಲ ಸ್ಥಳೀಯರು ಇಬ್ಬರ ಮಧ್ಯೆ ಏನಾಯಿತೆಂದು ವಿಚಾರಿಸಲು ಯತ್ನಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸಿಸಿಟಿವಿ ದೃಶ್ಯಾವಳಿಗಳನ್ನು ಇಂದೋರ್ ನಿವಾಸಿಯಾದ ನಿಲಯ್ ವರ್ಮಾ ಎಂಬವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಈವರೆಗೆ ವಿಡಿಯೋ 1.4 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    ಬೈಕ್ ಸವಾರನ ಧೈರ್ಯವನ್ನು ನಿಲಯ್ ಕೊಂಡಾಡಿದ್ದು, ವಿಡಿಯೋ ನೋಡಿದವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಸ್‍ಯುವಿ ವಾಹನ ಚಾಲಕನ ವಿರುದ್ಧ ದಾಖಲಾದ ಎಫ್‍ಐಆರ್ ಪ್ರತಿಯನ್ನೂ ಕೂಡ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.facebook.com/nilayv/videos/pcb.10155887382929851/10155887380764851/?type=3&theater

    https://www.facebook.com/nilayv/posts/10155887382929851