Tag: Sushma swaraj

  • ಗೀತಾ ಪೋಷಕರನ್ನು ಹುಡುಕಿಕೊಟ್ಟವರಿಗೆ ಸಿಗುತ್ತೆ 1 ಲಕ್ಷ ರೂ. ಬಹುಮಾನ

    ಗೀತಾ ಪೋಷಕರನ್ನು ಹುಡುಕಿಕೊಟ್ಟವರಿಗೆ ಸಿಗುತ್ತೆ 1 ಲಕ್ಷ ರೂ. ಬಹುಮಾನ

    ನವದೆಹಲಿ: ಪಾಕಿಸ್ತಾನದಲ್ಲಿ ಹಲವು ದಶಕಗಳ ಕಾಲ ನೆಲೆಸಿ ಭಾರತಕ್ಕೆ ವಾಪಸ್ಸಾದ ಗೀತಾ ಪೋಷಕರಿಗಾಗಿ ಹುಡುಕಾಟ ಮುಂದುವರಿದಿದ್ದು, ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒಂದು ಲಕ್ಷ ರೂ.ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದ್ದಾರೆ.

    ತನ್ನ ಬಾಲ್ಯದಲ್ಲಿ ಭಾರತದ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಯುವತಿಯನ್ನು ಸುಷ್ಮಾ ಸ್ವರಾಜ್‍ರವರು ಭಾರತಕ್ಕೆ ವಾಪಸ್ ಕರೆತಂದು ಎರಡು ವರ್ಷಗಳೇ ಕಳೆದಿವೆ. ಪ್ರಸ್ತುತ ಗೀತಾ ಅವರು ಇಂದೋರ್‍ನ ಮೂಕ ಹಾಗೂ ಕಿವುಡರ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.

    ಸುಷ್ಮಾ ಅವರು ಈ ಕುರಿತು ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಗೀತಾ ಕುಟುಂಬವರ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಗೀತಾರನ್ನು ಭಾರತಕ್ಕೆ ವಾಪಸ್ ಕರೆತಂದ ಸಂದರ್ಭದಲ್ಲಿ ಹಲವರು ಆಕೆ ತಮ್ಮ ಮಗಳೇ ಎಂದು ಆಗಮಿಸಿದ್ದರು. ಆದರೆ ಇದನ್ನು ಗೀತಾ ತನ್ನ ನಿರಾಕರಿಸಿದ್ದರು. ಗೀತಾ ಪ್ರಸ್ತುತ ಸಂಜ್ಞಾ ಭಾಷೆಯನ್ನು ಕಲಿತ್ತಿದ್ದು, ಕಂಪ್ಯೂಟರ್ ತರಬೇತಿಯನ್ನು ಪಡೆಯುತ್ತಿದ್ದಾರೆ.

    ಗೀತಾ ಪೋಷಕರು ಎಲ್ಲೇ ಇದ್ದರೂ ಆಕೆಯನ್ನು ಕರೆದುಕೊಂಡು ಹೋಗಬೇಕು, ಆಕೆಯ ವಿದ್ಯಾಭ್ಯಾಸ ಮತ್ತು ಮದುವೆಗೆ ಬೇಕಾದ ಎಲ್ಲಾ ಸಹಾಯವನ್ನು ಸರ್ಕಾರವೇ ನೀಡುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.

    ಗೀತಾ ಬಿಹಾರ್ ಅಥವಾ ಜಾರ್ಖಡ್ ರಾಜ್ಯಕ್ಕೆ ಸೇರಿರಬೇಕು, ಆಕೆಯ ಕುರಿತು ವಾರದ 7 ದಿನಗಳು ಹೆಚ್ಚಿನ ಜಾಹೀರಾತನ್ನು ನೀಡಿ ಇದರಿಂದ ಆಕೆಯ ಪೋಷಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಸುಷ್ಮಾ ಸ್ವರಾಜ್ ಮನವಿ ಮಾಡಿಕೊಂಡಿದ್ದಾರೆ.

    ಗೀತಾ ತನ್ನ 7-8 ವಯಸ್ಸಿನಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳುವ ಸಂಜೋತಾ ಎಕ್ಸ್‍ಪ್ರೆಸ್‍ನಲ್ಲಿ ಒಬ್ಬಳೇ ಪ್ರಯಾಣ ಬೆಳೆಸಿ ಲಾಹೋರ್ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿದ್ದಳು. ಈಕೆಯ ಮೂಲ ಹೆಸರು ಗುಡ್ಡಿ ಎಂದಾಗಿದ್ದು, ಪಾಕಿಸ್ತಾನದಲ್ಲಿ ಈಕೆಗೆ ಆಶ್ರಯವನ್ನು ನೀಡಿದ್ದ ಈಧಿ ಸಂಘಟನೆಯವರು ಈಕೆಗೆ ಗೀತಾ ಎಂಬ ಹೆಸರನ್ನು ಇಟ್ಟಿದ್ದರು.

  • 7 ವರ್ಷದ ಪಾಕ್ ಬಾಲಕಿಗೆ ಮಿಡಿದ ಸುಷ್ಮಾ ಹೃದಯ

    7 ವರ್ಷದ ಪಾಕ್ ಬಾಲಕಿಗೆ ಮಿಡಿದ ಸುಷ್ಮಾ ಹೃದಯ

    ನವದೆಹಲಿ: ಪಾಕಿಸ್ತಾನದ ಕರಾಚಿ ನಗರದ ನಿವಾಸಿಯಾಗಿರುವ 7 ಬಾಲಕಿಗೆ ಭಾರತದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ವೀಸಾವನ್ನು ನೀಡಲಾಗಿದೆ.

    ಈ ಕುರಿತು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ನಾವು 7ರ ಬಾಲಕಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ವೈದ್ಯಕೀಯ ವೀಸಾವನ್ನು ನೀಡುತ್ತಿದ್ದು, ಬಾಲಕಿಯ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

    ತನ್ನ ಮಗಳಿಗೆ ವೈದ್ಯಕೀಯ ನೆರವಿನ ಅಗತ್ಯವಿದ್ದು, ಭಾರತಕ್ಕೆ ಆಗಮಿಸಲು ವೀಸಾವನ್ನು ನೀಡುವಂತೆ ಆಗಸ್ಟ್ ತಿಂಗಳಿನಲ್ಲಿ ಬಾಲಕಿಯ ತಾಯಿ ಸುಷ್ಮಾ ಸ್ವರಾಜ್ ಅವರಲ್ಲಿ ಮನವಿ ಮಾಡಿದ್ದರು.

  • ಭಾರತವನ್ನು ಟೀಕಿಸಲು ಹೋಗಿ  ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

    ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

    ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಆರೋಪಗಳನ್ನು ಮಾಡಲು ಹೋಗಿ ತನ್ನ ಮಾನವನ್ನೇ ಹರಾಜು ಹಾಕಿ ನಗೆಪಾಟಲಿಗೆ ಪಾಕಿಸ್ತಾನ ಗುರಿಯಾಗಿದೆ.

    ವಿಶ್ವ ಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ನೈಜ ಬಣ್ಣವನ್ನು ತೆರೆದಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತ ಭಯೋತ್ಪಾದನೆಯ ತವರು ನೆಲ ಎಂಬ ಆರೋಪವನ್ನು ಮಾಡಿತ್ತು. ಆದರೆ ಈ ಆರೋಪವನ್ನು ಮಾಡಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮಾನ ವಿಶ್ವಸಂಸ್ಥೆಯಲ್ಲಿ ತನ್ನ ಅಧಿಕಾರಿಯ ಮೂಲಕ ಹರಾಜು ಆಗಿದೆ.

    ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿವೆ.

    ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ.

     

    ಮಲೇಹಾ ಲೋಧಿ ಹೇಳಿದ್ದು ಏನು?
    ಸುಷ್ಮಾ ಸ್ವರಾಜ್ ಅವರಿಗೆ ತಿರುಗೇಟು ನೀಡಿದ ಲೋಧಿ ಏಷ್ಯಾ ಖಂಡದಲ್ಲಿ ಭಾರತ ಭಯೋತ್ಪದನೆಯ ತವರು ನೆಲ ಎಂಬ ಆರೋಪವನ್ನು ಮಾಡಿದರು. ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದನ ನೆಲೆಗಳಿವೆ ಎಂದಿದ್ದಾರೆ.

    ಸುಷ್ಮ ಸ್ವರಾಜ್ ಅವರು ಶನಿವಾರ ಪಾಕಿಸ್ತಾನದಲ್ಲಿ ನೆಲೆಯುರಿರುವ ಭಯೋತ್ಪಾದನ ಸಂಸ್ಥೆಗಳಾದ ಲಷ್ಕರ್ ಎ ತೋಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಜುಲ್ ಮುಜಾಹಿದೀನ್, ಹಕ್ಕಾನಿಯಂತಹ ಹಲವು ಸಂಘಟನೆಗಳ ಕುರಿತು ವಿಸ್ತಾರವಾದ ಮಾಹಿತಿಯನ್ನು ನೀಡಿದ್ದರು.

    https://www.youtube.com/watch?v=lviT78WtYig

    ಈ ಕುರಿತು ಪ್ರತಿಕ್ರಿಯಿಸಿರುವ ಲೋಧಿ, ಅಂತರಾಷ್ಟ್ರೀಯ ಸಂಸ್ಥೆಗಳು ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾಂತಿ ಹಾಗೂ ಸೌರ್ಹದತೆಯನ್ನು ಬಯಸಿದರೆ, ಭಾರತವು ಗಡಿಯಲ್ಲಿ ಉಂಟುಮಾಡುತ್ತಿರುವ ಪ್ರಚೋದನೆ ಹಾಗೂ ಅಕ್ರಮಾಣಕಾರಿ ಪ್ರವೃತ್ತಿಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು. ಅಲ್ಲದೇ ಭಾರತದ ನೆಲದಲ್ಲಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಪಾಕ್ ಆಕ್ರಮಿತ ಕಾಶ್ಮೀರದ ಬಾಲುಚಿಸ್ತಾನ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಕುರಿತು ಸಹ ಪಾಕಿಸ್ತಾನದಿಂದ ಆಕ್ಷೇಪ ವ್ಯಕ್ತಪಡಿಸಿತು.

    ಯಾವುದೇ ಸಮಸ್ಯೆಯನ್ನು ಎರಡು ದೇಶಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳದಿದ್ದರೆ ಇದರ ವಿಚಾರಣೆಯನ್ನು ನಡೆಸುವ ಅಧಿಕಾರ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಗಿದೆ. ಆದರೆ ಇಂತಹ ನಿಯಮಗಳು ಸಮಯಕ್ಕೆ ಸರಿಯಾಗಿ ಕೈಗೊಳ್ಳಲಾಗುತ್ತಿಲ್ಲ. ನ್ಯಾಯಲಯಕ್ಕೆ ಯಾವುದೇ ಅಂತಿಮ ದಿನವಿರುದಿಲ್ಲ. ಹಾಗೆಯೇ ಮಾನವಿಯತೆಯನ್ನು ಸಮಯದ ಅಧಾರವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಭಾರತವು ವಿಶ್ವ ಸಂಸ್ಥೆಯ ನಿರ್ಧಾರಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

    ಇದೇ ಸಂದರ್ಭದಲ್ಲಿ ಭಾರತದ ಆರೋಪಗಳನ್ನು ತಳ್ಳಿ ಹಾಕಿದ ಅವರು ವಿಶ್ವ ಸಂಸ್ಥೆಯೇ ಭಯೋತ್ಪಾದನೆಯ ವ್ಯಾಖ್ಯಾನವನ್ನು ನೀಡಬೇಕು ಎಂದು ಕೋರಿದರು. ಭಾರತವು ತನ್ನ ನೆರೆಯ ದೇಶಗಳ ಮೇಲೆ ದಾಳಿಯನ್ನು ಮಾಡಲು ಭಯೋತ್ಪಾದನೆಯನ್ನು ಮಾಡಲು ಪೋಷಣೆ ಮಾಡುತ್ತಿದೆ. ಪಾಕಿಸ್ತಾನದ ವಿವಿಧೆಡೆ ವಿದ್ವಾಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಭಾರತವು ಭಯೋತ್ಪಾದನೆಯ ತವರು ನೆಲ ಎಂಬ ಸ್ಪಷ್ಟವಾಗುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಎಂಬುವುದು ವಿಶ್ವ ದೊಡ್ಡ ಬುಟಾಟಿಕೆಯಾಗಿದೆ. ಫ್ಯಾಸಿಸ್ಟ್ ಸಿದ್ಧಾಂತವನ್ನು ಅನುಸರಿಸುವ ಮೂಲಕ ಭಾರತ ತನ್ನ ಅಡಳಿತವನ್ನು ನಡೆಸುತ್ತಿದೆ ಎಂದರು.

    ಪಾಕಿಸ್ತಾನದ ಸ್ಥಾಪಕ ಜಿನ್ನಾ ಅವರ ಕುರಿತ ಹೇಳಿಕೆಗಳನ್ನು ನಿರಾಕರಿಸಿದ ಲೋಧಿ, ಪಾಕಿಸ್ತಾನ ಜಮ್ಮು ಕಾಶ್ಮೀರ ವಿಚಾರವಾಗಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಮಾತುಕತೆಗೆ ಸಿದ್ಧ ಎಂದು ತಿಳಿಸಿದರು.

  • ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಸಾಧನೆ ಹೊಗಳಿದ್ದಕ್ಕೆ ಸುಷ್ಮಾ ಸ್ವರಾಜ್‍ ಗೆ ಥ್ಯಾಂಕ್ಸ್ ಹೇಳಿದ ರಾಹುಲ್

    ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಸಾಧನೆ ಹೊಗಳಿದ್ದಕ್ಕೆ ಸುಷ್ಮಾ ಸ್ವರಾಜ್‍ ಗೆ ಥ್ಯಾಂಕ್ಸ್ ಹೇಳಿದ ರಾಹುಲ್

    ನವದೆಹಲಿ: ‘ಸುಷ್ಮಾ ಜೀ ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ನೆನಪಿಸಿ ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಕೊನೆಗೂ ಒಪ್ಪಿಕೊಂಡಿದ್ದಕ್ಕೆ ತಮಗೆ ಧನ್ಯವಾದಗಳು’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಶನಿವಾರ ನಡೆದ 72 ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಯೋತ್ಪಾದನೆ ಬಗ್ಗೆ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದರು. ಈ ವೇಳೆ ಭಾರತ ಬಡತನ ನಿರ್ಮೂಲನೆಗೆ ಗಮನ ಹರಿಸಿದರೆ ಪಾಕಿಸ್ತಾನ ಉಗ್ರಸಂಘಟನೆಗಳ ಹುಟ್ಟುವಿಕೆಗೆ ಗಮನ ಹರಿಸುತ್ತಿದೆ. ನಾವು ಐಐಟಿ, ಐಐಎಂ, ಎಐಐಎಂಎಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ನೋಡುತ್ತಿದ್ದೇವೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು.

    ಈ ಹೇಳಿಕೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಸ್ವಾಗಸಿದ್ದಾರೆ. 70 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಐಐಟಿ, ಐಐಎಂ, ಏಮ್ಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ನೋಡುವಂತೆ ಮಾಡಿದ್ದು ನಾವು. ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆನಪಿಸಿದ್ದಕ್ಕೆ ತಮಗೆ ಧನ್ಯವಾದಗಳು ಸುಷ್ಮಾ ಜೀ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಬಿಜೆಪಿ ಕಾಲೇಳೆದಿದ್ದಾರೆ.

    ರಾಹುಲ್ ಗಾಂಧಿ ಟ್ವೀಟ್ ಬೆನ್ನಲ್ಲೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರ 70 ವರ್ಷಗಳ ಕಾಲ ಆಡಳಿತ ನಡೆಸಿತ್ತು. ಅಂದು ಮಾಡಿದ ಕಾರ್ಯಗಳನ್ನು ಇಂದು ಬಹಿರಂಗಪಡಿಸಿ ನಮ್ಮ ದಕ್ಷ ಆಡಳಿತವನ್ನು ಮೆಲುಕು ಹಾಕಲು ಸುಷ್ಮಾ ಸ್ವರಾಜ್ ಕನ್ನಡಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಭಾರತದ ಅಭಿವೃಧ್ದಿ ಬಯಸಿತ್ತು.
    ಹೀಗಾಗಿ ಮತ್ತೆ ನಮ್ಮ ಕಾರ್ಯಗಳನ್ನು ಎನ್‍ಡಿಎ ಸರ್ಕಾರ ಒಪ್ಪಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನದ ಭಯೋತ್ಪಾದನೆ ಕುರಿತು ನಿನ್ನೆ ಮಾತನಾಡಿದ್ದರು. ನಾವು ಐಐಟಿ, ಐಐಎಂ, ಏಮ್ಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಕಟ್ಟಿದರೆ, ಪಾಕಿಸ್ತಾನ ಲಷ್ಕರ್ ಎ ತೋಯ್ಬಾ, ಜೈಷ್ ಎ ಮಹಮ್ಮದ್, ಹಖ್ಖಾನಿ ನೆಟ್‍ವರ್ಕ್, ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಗಳನ್ನು ಕಟ್ಟಿ ಹೆಸರು ಮಾಡುತ್ತಿದೆ ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದರು.

  • ಐಸಿಸ್ ಉಗ್ರರಿಂದ ಕಿಡ್ನಾಪ್ ಆಗಿದ್ದ ಬೆಂಗಳೂರಿನ ಪಾದ್ರಿ 18 ತಿಂಗಳ ಬಳಿಕ ಬಿಡುಗಡೆ

    ಐಸಿಸ್ ಉಗ್ರರಿಂದ ಕಿಡ್ನಾಪ್ ಆಗಿದ್ದ ಬೆಂಗಳೂರಿನ ಪಾದ್ರಿ 18 ತಿಂಗಳ ಬಳಿಕ ಬಿಡುಗಡೆ

    ನವದೆಹಲಿ: ಯೆಮನ್ ನಲ್ಲಿ ಐಸಿಸ್ ಉಗ್ರರಿಂದ ಅಪಹರಣಕ್ಕೆ ಒಳಗಾಗಾಗಿದ್ದ ಬೆಂಗಳೂರಿನ ಫಾದರ್ ಟಾಮ್ ಉಳುನ್ನಲಿಲ್ ಅವರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

    18 ತಿಂಗಳ ನಂತರ ಫಾದರ್ ಟಾಮ್ ಬಿಡುಗಡೆಯಾಗಿದ್ದು, ಸುಷ್ಮಾ ಸ್ವರಾಜ್ ಅವರು ಡಾನ್ ಬಾಸ್ಕೋ ಸಂಸ್ಥೆಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ. ಟಾಮ್ ಅವರು ಬಿಡುಗಡೆಯಾಗುತ್ತಿರುವ ವಿಚಾರ ತಿಳಿದು ಡಾನ್ ಬಾಸ್ಕೋದ ಸದಸ್ಯ ಫಾದರ್ ಅನಿಲ್ ಡೆಸ್ಸಾ ಹರ್ಷ ವ್ಯಕ್ತಪಡಿಸಿದ್ದಾರೆ.

    ಏನಿದು ಕಿಡ್ನಾಪ್ ಕೇಸ್?
    ಯೆಮನ್ ನಲ್ಲಿ ಇರುವ ಮದರ್ ತೆರೆಸಾ ಮಿಷನರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಟಾಮ್ ಅವರನ್ನು 2014 ಮಾರ್ಚ್ ತಿಂಗಳಿನಲ್ಲಿ ಐಸಿಸ್ ಉಗ್ರರು ಕಿಡ್ನಾಪ್ ಮಾಡಿದ್ದರು. ಮಾರ್ಚ್ 4ರಂದು ವೃದ್ಧಾಶ್ರಮದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 16 ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ನಾಲ್ವರು ಬಂದೂಕುದಾರಿಗಳು ಅಪಹರಿಸಿದ್ದರು.

  • 3 ತಿಂಗಳ ಹಿಂದೆ ದುಬೈಗೆ ಹೋಗಿ ಸುರಕ್ಷಿತವಾಗಿ ಕೊಪ್ಪಳಕ್ಕೆ ಮರಳಿದ ಮುಸ್ಲಿಮ್ ಮಹಿಳೆ

    3 ತಿಂಗಳ ಹಿಂದೆ ದುಬೈಗೆ ಹೋಗಿ ಸುರಕ್ಷಿತವಾಗಿ ಕೊಪ್ಪಳಕ್ಕೆ ಮರಳಿದ ಮುಸ್ಲಿಮ್ ಮಹಿಳೆ

    ಕೊಪ್ಪಳ: ದುಬೈಯಲ್ಲಿ ಕಿರುಕುಳಕ್ಕೊಳಗಾಗಿದ್ದ ಕೊಪ್ಪಳದ ಮಹಿಳೆ ಚಾಂದ್ ಸುಲ್ತಾನ್ ಗುರುವಾರ ತವರಿಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಕುರಾನ್ ಕಲಿಸಲೆಂದು ಮಂಗಳೂರು ಮೂಲದ ಏಜೆಂಟ್ ಮೂಲಕ ದುಬೈಗೆ ಹೋಗಿದ್ದೆ. ದುಬೈಗೆ ಹೋದ ಬಳಿಕ ಮನೆ ಕೆಲಸದ ಜೊತೆಗೆ ಶೌಚಾಲಯ ಸ್ವಚ್ಛಗೊಳಿಸಲು ಹೇಳುತ್ತಿದ್ದರು. ನಾನು ನಿರಾಕರಿಸಿದ್ದರೆ, ಮನೆ ಮಾಲೀಕರು ನನಗೆ ಕಿರುಕುಳ ನೀಡುತ್ತಿದ್ದರು ಎಂದು ದುಬೈನಲ್ಲಾದ ತೊಂದರೆಯನ್ನು ವಿವರಿಸಿದರು.

    ಗೆಸ್ಟ್ ಹೌಸ್ ಕೋಣೆಯಲ್ಲಿ ಕೂಡಿಹಾಕಿ ಊಟಕ್ಕೆಂದು ಎರಡು ಬ್ರೆಡ್ ಕೊಡುತ್ತಿದ್ದರು. ಜೈಲಿನಲ್ಲಿ ಕೈದಿಗಳನ್ನು ನೋಡುಕೊಳ್ಳುವಂತೆ ನನ್ನನ್ನು ನೋಡುತ್ತಿದ್ದರು. ನಾನು ಮತ್ತೆ ಭಾರತಕ್ಕೆ ಮರಳುವುದಿಲ್ಲ, ಇಲ್ಲಿಯೇ ಸಾಯುತ್ತೇನೆ ಎಂದುಕೊಂಡಿದ್ದೆ. ಇನ್ನು ನಾನು ಬದುಕಿರುವವರೆಗೂ ಮತ್ತೆ ದುಬೈಗೆ ಹೋಗುವುದೇ ಇಲ್ಲ. ಅಲ್ಲಿ ಪಡಬಾರದ ಯಾತನೆಯನ್ನು ಅನುಭವಿಸಿದ್ದೇನೆ. ನಮ್ಮ ಮಕ್ಕಳ ಹಾಗೂ ನನ್ನ ಪತಿ ಮುಖ ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ಅವರು ತಿಳಿಸಿದರು.

    ನಾನು ಸ್ವದೇಶಕ್ಕೆ ಮರಳಲು ಸಹಕರಿಸಿದ್ದಕ್ಕೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಮಾಧ್ಯಮಗಳಿಗೆ ಚಾಂದ್ ಸುಲ್ತಾನ್ ಧನ್ಯವಾದ ಹೇಳಿದರು. ದುಬೈಯಿಂದ ಆಗಮಿಸಿದ ಚಾಂದ್ ಸುಲ್ತಾನ್ ಅವರಿಗೆ ಸಂಸದ ಸಂಗಣ್ಣ ಕರಡಿಯವರು ಮನೆಯಲ್ಲಿ ಸನ್ಮಾನ ಮಾಡಿದರು.

    ದುಬೈನಲ್ಲಿ ಆಗುತ್ತಿದ್ದ ಕಿರುಕುಳದ ವಿಚಾರವನ್ನು ಚಾಂದ್ ಸುಲ್ತಾನ್ ಪತಿಗೆ ತಿಳಿಸಿ ಮರಳಿ ಸ್ವದೇಶಕ್ಕೆ ಬರಲು ಪ್ರಯತ್ನ ಮಾಡಿ ಎಂದು ಕೇಳಿಕೊಂಡಿದ್ದರು. ಪತಿ ಬಾಬಾಜಾನ್ ಅವರು ಸಂಸದ ಸಂಗಣ್ಣ ಕರಡಿ ಬಳಿ ಈ ಎಲ್ಲ ವಿಚಾರಗಳನ್ನು ಹೇಳಿ ಮರಳಿ ಭಾರತಕ್ಕೆ ಬರಲು ಸಹಾಯ ಮಾಡಬೇಕೆಂದು ಮನವಿ ಮಾಡಿದ್ದರು. ಕುಟುಂಬದ ನೋವಿಗೆ ಸ್ಪಂದಿಸಿದ ಸಂಸದ ಸಂಗಣ್ಣ ಕರಡಿಯವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತಿಳಿಸಿದ್ದರಿಂದ ಚಾಂದ್ ಸುಲ್ತಾನ್ ಮರಳಿ ಕೊಪ್ಪಳಕ್ಕೆ ಬಂದಿದ್ದಾರೆ.

    ಇದನ್ನೂ ಓದಿ:ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಕಿರುಕುಳ- ಪತ್ನಿಯ ರಕ್ಷಣೆ ಕೋರಿ ಸಂಸದರ ಮೊರೆ ಹೋದ ಪತಿ

     

  • ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರ ನೋಡುತ್ತಿದ್ದ ವ್ಯಕ್ತಿಯಿಂದ ‘ಕಾಪಾಡಿ’ ಎಂದು ಸುಷ್ಮಾ ಸ್ವರಾಜ್‍ಗೆ ಟ್ವೀಟ್

    ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರ ನೋಡುತ್ತಿದ್ದ ವ್ಯಕ್ತಿಯಿಂದ ‘ಕಾಪಾಡಿ’ ಎಂದು ಸುಷ್ಮಾ ಸ್ವರಾಜ್‍ಗೆ ಟ್ವೀಟ್

    ಮುಂಬೈ: ಬಾಲಿವುಡ್‍ನ `ಜಬ್ ಹ್ಯಾರಿ ಮೆಟ್ ಸೇಜಲ್’ ಸಿನಿಮಾ ನೋಡಿದ ವ್ಯಕ್ತಿಯೊಬ್ಬ ನನ್ನನ್ನು ಕಾಪಾಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ನಟಿ ಅನುಷ್ಕಾ ಶರ್ಮಾ ಮತ್ತು ಶಾರೂಖ್ ಖಾನ್ ನಟಿಸಿರುವ `ಜಬ್ ಹ್ಯಾರಿ ಮೆಟ್ ಸೇಜಲ್’ ಸಿನಿಮಾ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಪುಣೆಯ ವಿಶಾಲ್ ಸೂರ್ಯವಂಶಿ ಎಂಬವರು ನಾನು ಪುಣೆಯ ಹಿಂಜವಾಡಿಯ ಚಿತ್ರಮಂದಿರದಲ್ಲಿ ಜಬ್ ಹ್ಯಾರಿ ಮೆಟ್ ಸೆಜಾಲ್ ಸಿನಿಮಾ ನೋಡುತ್ತಿದ್ದೇನೆ. ಸಾಧ್ಯವಾದ್ರೆ ನನ್ನನ್ನು ರಕ್ಷಿಸಿ ಎಂದು ಎರಡು ಅಳುತ್ತಿರುವ ಎಮೋಜಿಗಳನ್ನು ಹಾಕಿ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಅನೇಕರು ಫನ್ನಿ ಫನ್ನಿಯಾಗಿ ರೀಟ್ವೀಟ್ ಮಾಡಿದ್ದಾರೆ. ಇಮ್ತಿಯಾಜ್ ಅಲೀ ಎಂಬವರು ಜಬ್ ಹ್ಯಾರಿ ಮೆಟ್ ಸೆಜಾಲ್ ಸಿನಿಮಾವನ್ನು ವೀಕ್ಷಿಸುವ ಪ್ರೇಕ್ಷಕರ ಅವಸ್ಥೆಯನ್ನು ಕಾಪಾಡಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದ ನೋಡಲು ಖರ್ಚು ಮಾಡಿದ್ದ ಹಣವನ್ನು ಹಿಂದುರುಗಿಸಿ ಎಂದು ಟ್ವೀಟ್ ಮಾಡಿದ್ದಾರೆ.

    ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರೀಯವಾಗಿರೋ ಸುಷ್ಮಾ ಸ್ವರಾಜ್ ತೊಂದರೆಯಲ್ಲಿರುವ ಭಾರತೀಯರ ರಕ್ಷಣೆಗೆ ಸಹಾಯವನ್ನು ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ವಿಶಾಲ್ ನನ್ನನ್ನು ಈ ಸಿನಿಮಾದಿಂದ ರಕ್ಷಿಸಿ ಎಂದು ವ್ಯಂಗ್ಯವಾಗಿ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ಟ್ವೀಟ್‍ಗೆ ಸುಷ್ಮಾ ಸ್ವರಾಜ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಟ್ವಿಟ್ಟರ್ 80 ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಸುಷ್ಮಾ ಸ್ವರಾಜ್ ಬಹುತೇಕ ಮಂದಿಯ ಟ್ವೀಟ್‍ಗಳಿಗೆ ಉತ್ತರ ನೀಡುವುದಲ್ಲದೆ ಅವರಿಗೆ ಬೇಕಾದ ನೆರವು ಕೂಡ ನೀಡಿದ್ದಾರೆ. ಆದ್ರೆ ಕೆಲವೊಮ್ಮೆ ಟ್ವಿಟ್ಟರಿಗರು ವಿಚಿತ್ರವಾಗಿ ಟ್ವೀಟ್ ಮಾಡಿ ಸಚಿವೆಯನ್ನ ಟ್ಯಾಗ್ ಮಾಡಿದ್ದೂ ಇದೆ.

    ಕೆಲವು ದಿನಗಳ ಹಿಂದೆ ಕರಣ್ ಎಂಬ ವ್ಯಕ್ತಿ, ನಾನು ಮಂಗಳಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ. ಮಂಗಳಯಾನದ ಮೂಲಕ 987 ದಿನಗಳ ಹಿಂದೆ ಕಳಿಸಿದ್ದ ಊಟ ಇನ್ನೇನು ಖಾಲಿಯಾಗುತ್ತಾ ಬಂದಿದೆ. ಮಂಗಳಯಾನ-2 ಯಾವಾಗ ಕಳಿಸ್ತೀರಾ? ಎಂದು ಪ್ರಶ್ನಿಸಿ ಸುಷ್ಮಾ ಸ್ವರಾಜ್ ಅವರ ಖಾತೆಗೆ ಹಾಗೂ ಇಸ್ರೋ ಖಾತೆಗೆ ಟ್ಯಾಗ್ ಮಾಡಿದ್ದಾರೆ.

    ಇದಕ್ಕೆ ಹಾಸ್ಯಾಸ್ಪದವಾಗಿಯೇ ಉತ್ತರ ನೀಡಿರುವ ಸುಷ್ಮಾ ಸ್ವರಾಜ್, ನೀವು ಮಂಗಳಗ್ರಹದಲ್ಲಿ ಸಿಲುಕಿದ್ರೂ ಸರಿ, ಭಾರತೀಯ ರಾಯಭಾರಿಗಳು ನಿಮಗೆ ಸಹಾಯ ಮಾಡಲು ಅಲ್ಲಿರ್ತಾರೆ ಎಂದಿದ್ದಾರೆ.

    ಸಿನಿಮಾದಲ್ಲಿ ಟೂರಿಸ್ಟ್ ಗೈಡ್ ಆಗಿರುವ ಶಾರುಖ್ ಖಾನ್ ಪ್ರವಾಸಿ ಅನುಷ್ಕಾ ಶರ್ಮಾಳ ಕಳೆದುಹೋಗಿರುವ ಉಂಗುರವನ್ನು ಹುಡುಕುವ ಕಥಾಹಂದರವನ್ನು ಹೊಂದಿದೆ. ಸಿನಿಮಾ ಕಥೆಯಲ್ಲಿ ಯಾವುದೇ ಹೊಸತನವಿಲ್ಲದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸಿನಿಮಾದ ಹಾಡುಗಳು ಸಹ ನೆನಪಿನಲ್ಲಿ ಉಳಿಯುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

     

     

  • ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಕಿರುಕುಳ- ಪತ್ನಿಯ ರಕ್ಷಣೆ ಕೋರಿ ಸಂಸದರ ಮೊರೆ ಹೋದ ಪತಿ

    ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಕಿರುಕುಳ- ಪತ್ನಿಯ ರಕ್ಷಣೆ ಕೋರಿ ಸಂಸದರ ಮೊರೆ ಹೋದ ಪತಿ

    ಕೊಪ್ಪಳ: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಹೋಗಿರುವ ಕೊಪ್ಪಳದ ಮಹಿಳೆಯೊಬ್ಬರನ್ನ ಅಲ್ಲಿನ ಕೆಲವರು ಗೃಹಬಂಧನದಲ್ಲಿರಿಸಿ ಕಿರುಕುಳ ನೀಡ್ತಿರೋ ಮಾಹಿತಿ ಬಯಲಾಗಿದೆ.

    ಕೊಪ್ಪಳದ ಬಾಬಾ ಜಾನ್ ಎಂಬವರ ಪತ್ನಿ ಚಾಂದ್ ಸುಲ್ತಾನ್ ಎಂಬ ಮಹಿಳೆ ಸೌದಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಮಹಿಳೆಯೇ ತಮ್ಮ ಪತಿಗೆ ಫೋನ್ ಕರೆ ಮಾಡಿ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಕುಟುಂಬ ಕಂಗಾಲಾಗಿದೆ.

    ಶಿಕ್ಷಕಿ ಕೆಲಸಕ್ಕೆಂದು ನಂಬಿಸಿ ಚಾಂದ್ ಸುಲ್ತಾನಾರನ್ನ ಸೌದಿಗೆ ಕರೆದೊಯ್ಯಲಾಗಿತ್ತು. ಆದ್ರೆ ಇದೀಗ ಬೇರೆ ಕೆಲಸ ಮಾಡುವಂತೆ ಹೇಳ್ತಿದ್ದು, ನಿರಾಕರಿಸಿದ್ದಕ್ಕೆ ಕೊಠಡಿಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂಬುವುದಾಗಿ ತಿಳಿದುಬಂದಿದೆ.

    ಚಾಂದ್ ಸುಲ್ತಾನ್ ಅವರಿಗೆ ದಿನಕ್ಕೊಂದು ಬ್ರೆಡ್ ಮಾತ್ರ ಎಸೆಯುತ್ತಾರಂತೆ. ಇದೀಗ ತಮ್ಮ ಪತ್ನಿಯನ್ನು ರಕ್ಷಿಸಿ ಸ್ವದೇಶಕ್ಕೆ ಕರೆಸಿಕೊಳ್ಳಲು ಸಹಾಯ ಮಾಡಬೇಕೆಂದು ಕೋರಿ ಸಂಸದ ಸಂಗಣ್ಣ ಕರಡಿ ಮೊರೆ ಹೋಗಿದ್ದಾರೆ ಬಾಬಾ ಜಾನ್. ಇದಕ್ಕೆ ಸ್ಪಂದಿಸಿದ ಸಂಸದ ಸಂಗಣ್ಣ, ಸಚಿವೆ ಸುಷ್ಮಾ ಸ್ವರಾಜ್ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

  •  ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಚರ್ಚೆ- ಇಂದು ದೆಹಲಿಗೆ ಬರುವಂತೆ ದೇವೇಗೌಡ್ರಿಗೆ ಸಚಿವೆ ಸುಷ್ಮಾ ಸ್ವರಾಜ್ ಆಹ್ವಾನ

     ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಚರ್ಚೆ- ಇಂದು ದೆಹಲಿಗೆ ಬರುವಂತೆ ದೇವೇಗೌಡ್ರಿಗೆ ಸಚಿವೆ ಸುಷ್ಮಾ ಸ್ವರಾಜ್ ಆಹ್ವಾನ

    ಬೆಂಗಳೂರು: ರಾಷ್ಟ್ರ ರಾಜಕೀಯದಲ್ಲಿ ಮಿಂಚಿನ ಸಂಚಲನ ನಡೆಯುತ್ತಿದೆ. ಇಂದು ದೆಹಲಿಗೆ ಬರಬಹುದೇ ಎಂದು ದೇವೇಗೌಡ್ರಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಆಹ್ವಾನ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸೂಚನೆ ಮೇರೆಗೆ ದೇವೇಗೌಡರಿಗೆ ಕರೆ ಮಾಡಿದ ಸುಷ್ಮಾ ಸ್ವರಾಜ್, ಗೌಡರ ಜೊತೆ ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದು, ಚೆನ್ನಾಗಿದ್ದೀರಾ, ಆರೋಗ್ಯ ಹೇಗಿದೆ? ಈಗ ದೆಹಲಿಗೆ ಬರಬಹುದಾ? ಎಂದು ಕೇಳಿದ್ದಾರೆ. ಬಳಿಕ ನಿಮ್ಮ ಸಲಹೆ ಬೇಕಿದೆ ಎಂದು ದೇವೇಗೌಡರಲ್ಲಿ ಮನವಿ ಮಾಡಿದ್ದು, ಚೀನಾ ಭಾರತ ಗಡಿ ಸಮಸ್ಯೆ ಬಗ್ಗೆ ಚರ್ಚಿಸಲು ದೇವೇಗೌಡರಿಗೆ ಆಹ್ವಾನಿಸಿದ್ದಾರೆ.

    ಆಹ್ವಾನದ ಹಿನ್ನೆಲೆಯಲ್ಲಿ ದೇವೇಗೌಡರು ಪಕ್ಷದ ಮೀಟಿಂಗ್ ಬಿಟ್ಟು ದೆಹಲಿಗೆ ಹೊರಟಿದ್ದಾರೆ. ಹಳೇ ಮೈಸೂರು ಭಾಗದ ಅಭ್ಯರ್ಥಿ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನ ಕುಮಾರಸ್ವಾಮಿ ಅವರಿಗೆ ವಹಿಸಿ ದೆಹಲಿಗೆ ದೇವೇಗೌಡರು ದೌಡಾಯಿಸಿದ್ದಾರೆ. ಸಂಜೆ 5.30 ಕ್ಕೆ ದೆಹಲಿಯ ಜವಾಹರ ಭವನದಲ್ಲಿ ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆಯಲಿದೆ.

    ಜಿಎಸ್‍ಟಿ ಜಾರಿಯ ದಿನ ಪ್ರಧಾನಿ ಪಕ್ಕ ಹೆಚ್‍ಡಿ ದೇವೇಗೌಡರಿಗೆ ಆಸನ ನೀಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಬಗ್ಗೆ ಬಿಜೆಪಿ ವಿಶೇಷ ಆಸಕ್ತಿ ತೋರಿಸುತ್ತಿರುವುದು ಎಲ್ಲರ ಹುಬ್ಬೇರಿಸಿದೆ.

     

  • ಭಾರತದಲ್ಲಿ ಪಾಕ್ ಮಗುವಿನ ಚಿಕಿತ್ಸೆಗೆ ಸುಷ್ಮಾ ನೆರವು

    ಭಾರತದಲ್ಲಿ ಪಾಕ್ ಮಗುವಿನ ಚಿಕಿತ್ಸೆಗೆ ಸುಷ್ಮಾ ನೆರವು

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯದಿಂದಾಗಿ ಪಾಕಿಸ್ತಾನದ ಮೂಲದ ಕುಟುಂಬವೊಂದು ಮಗನ ಚಿಕಿತ್ಸೆಗೆ ಭಾರತಕ್ಕೆ ಆಗಮಿಸಿದೆ.

    ನಾಲ್ಕು ತಿಂಗಳ ಬಾಲಕ ರೋಹನ್ ಹೃದಯದಲ್ಲಿ ರಂಧ್ರ ಇರುವ ಹಿನ್ನೆಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ಹೇಳಿದ್ದರು. ಹಾಗೆ ದೆಹಲಿಯಲ್ಲಿರುವ ನೋಯ್ಡಾದ ಜೆಪಿ ಆಸ್ಪತ್ರೆಯಲ್ಲಿ ರೋಹನ್‍ಗೆ ಚಿಕಿತ್ಸೆ ನೀಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದರು.

    ಭಾರತ ಮತ್ತು ಪಾಕ್ ಸಂಬಂಧ ಸರಿ ಇಲ್ಲದಿರುವುದರಿಂದ ರೋಹನ್ ಪೋಷಕರಿಗೆ ವೈದ್ಯಕೀಯ ವೀಸಾ ಸಿಕ್ಕರಲಿಲ್ಲ. ಹಾಗಾಗಿ ರೋಹನ್ ತಂದೆ ಕನ್ವಾಲ್ ಸಾಧಿಕ್ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ, ವೈದ್ಯಕೀಯ ವೀಸಾ ಕೊಡಿಸುವಂತೆ ಮನವಿ ಮಾಡಿಕೊಂಡರು. ಸಾಧಿಕ್ ಮನವಿಗೆ ಸ್ವಂದಿಸಿ ರೋಹನ್ ಪೋಷಕರಿಗೆ ವೀಸಾ ದೊರಕಿಸುವಂತೆ ಮಾಡಿದ್ದರು.

    ಪೋಷಕರು ಮತ್ತು ರೋಹನ್ ಸೇರಿ ಸೋಮವಾರ ಸಂಜೆ ನೋಯ್ಡಾ ಜೆಪಿ ಆಸ್ಪತ್ರೆಗೆ ಬಂದಿದ್ದಾರೆ. ಈ ಆಸ್ಪತ್ರೆ ರೋಹನ್‍ಗೆ ಚಿಕಿತ್ಸೆ ಕೊಡಿಸಲು ಮುಂದಾಗಿದೆ.