Tag: Super Moon

  • ಇಂದು ಶ್ರಾವಣ ಸೂಪರ್ ಮೂನ್ – ಒಂದೇ ತಿಂಗಳಲ್ಲಿ ಎರಡನೇ ಹುಣ್ಣಿಮೆ

    ಇಂದು ಶ್ರಾವಣ ಸೂಪರ್ ಮೂನ್ – ಒಂದೇ ತಿಂಗಳಲ್ಲಿ ಎರಡನೇ ಹುಣ್ಣಿಮೆ

    ಉಡುಪಿ: ವಿಶೇಷಗಳಲ್ಲಿ ಬಹು ವಿಶೇಷ ಇಂದಿನ ರಾತ್ರಿ. ಕಾರಣ ಬಾನಂಗಳದಲ್ಲಿ ಚಂದ ಮಾಮ ಇನ್ನೂ ಚಂದವಾಗಿ ಕಾಣಿಸ್ತಾನೆ. ಇವತ್ತು ರಾತ್ರಿ ಸೂಪರ್ ಮೂನ್ (Super Moon). ಈ ವರ್ಷದ 4 ಸೂಪರ್‌ ಮೂನ್‌ಗಳಲ್ಲಿ ಆಗಸ್ಟ್ 31 ರ ಸೂಪರ್‌ ಮೂನ್ ಅತ್ಯಂತ ಹೆಚ್ಚಿನ ಮಹತ್ವದ್ದು. ಈ ವರ್ಷದ ನಾಲ್ಕು ಸೂಪರ್‌ ಮೂನ್‌ಗಳು, ಜುಲೈ 3, ಆಗಸ್ಟ್ 1, ಆಗಸ್ಟ್ 31 ಹಾಗೂ ಸೆಪ್ಟೆಂಬರ್‌ 29 ರಂದು ಗೋಚರವಾಗಲಿದೆ. ಜುಲೈ 3 ರಂದು ಚಂದ್ರ ಭೂಮಿಯಿಂದ 3,61,800 ಕಿಮೀ, ಆಗಸ್ಟ್ 1 ರಂದು 3,57,530 ಕಿಮೀ ಹತ್ತಿರ ಬಂದಿದ್ದ.

    ಇಂದು (ಆಗಸ್ಟ್ 31) 3,57,344 ಕಿಮೀ ಹಾಗೂ ಸೆಪ್ಟೆಂಬರ್‌ 29 ರಂದು 3,61,552 ಕಿಮೀನಷ್ಟು ದೂರಕ್ಕೆ ಬಂದಿದ್ದಾನೆ. ಶ್ರಾವಣದ ಈ ಹುಣ್ಣಿಮೆಯ ಚಂದ್ರ ‘ಸೂಪರ್‌ ಮೂನ್’ ಆಗಿ ಹೆಚ್ಚಿನ ಪ್ರಭೆಯಿಂದ ಕಂಗೊಳಿಸಲಿದ್ದಾನೆ ಎಂದು ಹಿರಿಯ ಖಗೋಳ ತಜ್ಞ ಉಡುಪಿಯ ಎ.ಪಿ. ಭಟ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Super Blue Moon: ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನ

    ಈ ನಾಲ್ಕರಲ್ಲಿ ಇಂದು ಭೂಮಿಗಿ ಹೆಚ್ಚು ಸಮೀಪ ಬರಲಿದೆ. ಈ ಹುಣ್ಣಿಮೆ ಚಂದಿರ ಸುಮಾರು 14 ಅಂಶ ದೊಡ್ಡದಾಗಿ ಕಾಣುತ್ತದೆ. ಅಂತೆಯೇ 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆ ಹೊರ ಸೂಸಲಿದ್ದಾನೆ. ಈ ಸಂದರ್ಭದಲ್ಲಿ ಭಾರತದ ಚಂದ್ರಯಾನ-3 ಸಂಪೂರ್ಣ ಯಶಸ್ಸಿನಲ್ಲಿ ಮುಂದುವರಿಯುತ್ತಿದೆ. ರೋವರ್ ಚಂದ್ರನಲ್ಲಿಗೆ ಕಳುಹಿಸಿ, ವಿಕ್ರಮ್ ಲ್ಯಾಂಡರ್ ಇಳಿಸಿ, ಪ್ರಜ್ಞಾನನ ಪುಟ್ಟ ಪುಟ್ಟ ಹೆಜ್ಜೆಗಳ ತಿರುಗಾಟ ಪ್ರಯೋಗಗಳ ಯಶಸ್ಸು ಕಾಣುತ್ತಿದೆ.

    ಈ ಸಂತೋಷದ ಸಮಯದಲ್ಲಿ ಹುಣ್ಣಿಮೆ ಹೋಳಿಗೆ ಊಟದೊಂದಿಗೆ ಭಾರತೀಯರಿಗೆ ಸಂಭ್ರಮ ಪಡಲೋಸುಗ ಈ ಸೂಪರ್‌ ಮೂನ್ ಬಂದಿದೆಯೋ ಎನ್ನುವಂತಿದೆ. ಆಗಸ್ಟ್ 31 ರ ಸೂಪರ್‌ ಮೂನ್ ಇನ್ನೂ ಒಂದು ವಿಶೇಷ ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳು. ಅದರಲ್ಲೂ ಇವೆರಡೂ ಸೂಪರ್‌ ಮೂನ್. ಇವೆಲ್ಲವೂ ಭಾರತೀಯರು ಖುಷಿಪಡಲು ಪೂರಕವಾಗಿದೆ ಎಂದು ಎ.ಪಿ‌ ಭಟ್‌ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ಜ್ಯೇಷ್ಠ ಮಾಸದ ಹುಣ್ಣಿಮೆ – ಆಗಸದಲ್ಲಿ ಸೂಪರ್ ಮೂನ್ ದರ್ಶನ

    ನಾಳೆ ಜ್ಯೇಷ್ಠ ಮಾಸದ ಹುಣ್ಣಿಮೆ – ಆಗಸದಲ್ಲಿ ಸೂಪರ್ ಮೂನ್ ದರ್ಶನ

    ಉಡುಪಿ: ಜೂನ್ 14 ಜ್ಯೇಷ್ಠ ಮಾಸದ ಹುಣ್ಣಿಮೆ. ಆಗಸದಲ್ಲಿ ಸೂಪರ್ ಮೂನ್ ಗೋಚರವಾಗಲಿದೆ. 28 ದಿನಗಳಿಗೊಮ್ಮೆ ಚಂದ್ರ ಭೂಮಿಯ ಸುತ್ತ ಸುತ್ತುವ ತಿರುಗಾಟದಲ್ಲಿರುವ ಚಂದ್ರ ತನ್ನ ಪರಿಧಿಯಲ್ಲಿ ಭೂಮಿಯ ಸಮೀಪಕ್ಕೆ ಬರಲಿದ್ದಾನೆ.

    ಚಂದ್ರ ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿಮೀ ಹತ್ತಿರ ಬರಲಿದ್ದಾನೆ. ಚಂದ್ರ ತನ್ನ ದೀರ್ಘ ವೃತ್ತಾಕಾರದ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಸಮೀಪ ಬರಲಿದ್ದಾನೆ. ಅಲ್ಲದೆ ದೂರದ ಅಪೊಜಿಯಲ್ಲಿ ಹತ್ತಿರ ಬರುವುದು ವಾಡಿಕೆ. ಈ ಪರಿಧಿಗೆ ಬಂದಾಗ ಹುಣ್ಣಿಮೆಯಾದರೆ ಸೂಪರ್ ಚಂದ್ರನ ಗೋಚರವಾಗುತ್ತದೆ. ಇದನ್ನೂ ಓದಿ: ರೆಸ್ಟೋರೆಂಟ್‍ನಲ್ಲಿದ್ದ ಯುವತಿಯರನ್ನು ಧರಧರನೇ ಎಳೆದು ಹಲ್ಲೆ ನಡೆಸಿದ ಗ್ಯಾಂಗ್

    ಚಂದ್ರ ನಮಗೆ ಸುಮಾರು 15 ಅಂಶ ಗಾತ್ರದಲ್ಲಿ ದೊಡ್ಡದಾಗಿ 25 ಅಂಶ ಹೆಚ್ಚಿನ ಬೆಳಕಿಂದ ಖುಷಿ ಕೊಡುತ್ತದೆ. ಚಂದ್ರ ಭೂಮಿಯ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿಮೀ ಇದ್ದು, ನಾಳೆ 3 ಲಕ್ಷದ 57 ಸಾವಿರ ಕಿಲೋ ಮೀಟರ್ ದೂರದಲ್ಲಿ ಹಾದು ಹೋಗುತ್ತಾನೆ.

    ಭಾರತೀಯರ ಮಾಸಗಳ ಕಲ್ಪನೆ ಬಲು ಚಂದ. ಹುಣ್ಣಿಮೆಯ ಚಂದ್ರ ಆ ದಿನ ಯಾವ ನಕ್ಷತ್ರದ ಜೊತೆಗಿರುವನೋ ಆ ನಕ್ಷತ್ರದ ಹೆಸರನ್ನು ಆ ತಿಂಗಳಿಗೆ ನಮ್ಮ ಹಿರಿಯರು ಇಟ್ಟಿದ್ದಾರೆ. ಪೂರ್ವಜರ ಆಕಾಶ ವೀಕ್ಷಣಾ ಪ್ರೌಢ ಜ್ಞಾನವನ್ನು ಮನಗಾಣಬಹುದು. ಜೂನ್ 14 ವೃಶ್ಚಿಕ ರಾಶಿಯ ಸುಂದರ ನಕ್ಷತ್ರ ಜ್ಯೇಷ್ಠ / ಅಂಟಾರಸ್ ನ ಪಕ್ಕದಲ್ಲಿ ಚಂದ್ರ ಉದಯಿಸುತ್ತದೆ. ಹಾಗಾಗಿ ಈ ತಿಂಗಳಿನ ಹೆಸರು ಜ್ಯೇಷ್ಠ ಮಾಸ. ಈ ಅಂಟಾರಸ್‌ನನ್ನು ಜ್ಯೇಷ್ಠ ಎಂದು ನಾಮಕರಣ ಮಾಡಿದ್ದಾರೆ. ಜ್ಯೇಷ್ಠ ಅಂದರೆ ದೊಡ್ಡದು ಎಂದರ್ಥ.

    ಇಂದಿನ ಖಗೋಳ ವಿಜ್ಞಾನವೂ ಈಗ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಈ ಅಂಟಾರಸ್ ತುಂಬಾ ದೊಡ್ಡ ದೆಂದು ಸಾರಿದ್ದಾರೆ. ಈ ನಕ್ಷತ್ರ ನಮ್ಮ ಸೂರ್ಯನ ವ್ಯಾಸಕ್ಕಿಂತ ಸುಮಾರು 700 ಪಟ್ಟು ದೊಡ್ಡದಿದೆ. ಹಾಗಾಗಿ ಸೂರ್ಯನಿಗಿಂತ ಕೋಟಿ ಕೋಟಿ ಪಟ್ಟು ದೊಡ್ಡದಿದೆ. ಇದನ್ನೂ ಓದಿ: ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ – ಶೀಘ್ರವೇ ಕಾಂಗ್ರೆಸ್‌ ಸೇರಲಿದ್ದಾರೆ ಮಾಜಿ ಎಂಎಲ್‌ಸಿ

    ಭೂಮಿಗೆ ಚಂದ್ರ ಹತ್ತಿರ ಬಂದಾಗಲೆಲ್ಲಾ ಸಮುದ್ರದ ಭರತ ಇಳಿತಗಳ ಅಬ್ಬರ ಜೋರಾಗಿರುತ್ತದೆ. ಇದೀಗ ಮುಂಗಾರು ಅಬ್ಬರಿಸುವ ಸೂಚನೆ ಇರುವುದರಿಂದ ಹುಣ್ಣಿಮೆ ಹಾಗೂ ಸೂಪರ್ ಮೂನ್‌ಗಳಿಂದ ಸಮುದ್ರದ ತೆರೆಗಳ ಅಬ್ಬರ ಹೆಚ್ಚಿರಲಿದೆ.

    ಮಾಹಿತಿ: ಎ.ಪಿ.ಭಟ್, ಉಡುಪಿ, ಭೌತಶಾಸತ್ರಜ್ಞ 

  • ಕೊರೊನಾ ನಡುವೆ ಆಗಸದಲ್ಲಿ ಮೂಡಿದ ಗುಲಾಬಿ ಚಂದ್ರ

    ಕೊರೊನಾ ನಡುವೆ ಆಗಸದಲ್ಲಿ ಮೂಡಿದ ಗುಲಾಬಿ ಚಂದ್ರ

    – ಚಂದ್ರನ ಹೊಸ ಭೂಭಾಗ ಭೂಮಿಗೆ ದರ್ಶನ
    – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ವಿವರಣೆ

    ಉಡುಪಿ: ಕೊರೊನಾ ವೈರಸ್ ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವಾಗ ಖಗೋಳ ವಿಸ್ಮಯವಾಗಿದೆ. ಬಾನಿನಲ್ಲಿ ಚಂದಮಾಮ ಗುಲಾಬಿ ಬಣ್ಣದಲ್ಲಿ ಗೋಚರಿಸಿದ್ದಾನೆ. ಚಂದ್ರ ಭೂಮಿಯ ಸನಿಹ ತನ್ನ ಮತ್ತೊಂದು ಭೂಭಾಗವನ್ನು ಭೂಮಿಯ ಕಡೆ ಪ್ರದರ್ಶಿಸುತ್ತಾ ಹಾದು ಹೋಗುತ್ತಿದ್ದಾನೆ. ಚಂದ್ರ 14 ಪಟ್ಟು ದೊಡ್ಡದಾಗಿ ಕಾಣಿಸಿಕೊಂಡಿದ್ದಾನೆ. ಚಂದ್ರನಿಗೆ ಪಿಂಕ್ ಮೂನ್ ಅಂತ ಅಮೆರಿಕ ಹೆಸರಿಟ್ಟಿದ್ದು, ಭಾರತದಲ್ಲಿ ಈ ಹುಣ್ಣಿಮೆ ಸೂಪರ್ ಮೂನ್ ಎಂದೇ ಪ್ರಸಿದ್ಧವಾಗಿದೆ.

    ಉಡುಪಿಯ ಹಿರಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಈ ಬಗ್ಗೆ ವಿವರಣೆ ನೀಡಿದ್ದು, ಚಂದ್ರ ಭೂಮಿಗೆ ಬಹಳ ಹತ್ತಿರದಲ್ಲಿ ಇರುವಂತಹ ಗ್ರಹ. ಮನುಷ್ಯನಿಗೆ ಬಹಳ ಅಪ್ಯಾಯಮಾನವಾದ ಗ್ರಹನೂ ಹೌದು. ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಇರುವುದರಿಂದ ಚಂದ್ರ ಮನೋಕಾರಕ ಆಗಿರೋದರಿಂದ ಚಿತ್ರಾ ನಕ್ಷತ್ರದವರು, ಕೊರೊನಾ ರೋಗಿಗಳು, ಈ ಬಗ್ಗೆ ಆತಂಕ ಇರುವವರು ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಕ್ಕೆ ಚಂದ್ರ ಸಂಚಾರ ಮಾಡುತ್ತಾ ಇರುತ್ತಾನೆ. ಚಂದ್ರ ಅತಿ ದೊಡ್ಡದಾಗಿ ಕಾಣುವ ಪ್ರಕ್ರಿಯೆಯನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ಬೇರೆ ಬೇರೆ ರಾಶಿಗಳ ಸಂಚಾರ ಸಂದರ್ಭ ಚಂದ್ರನ ಬಣ್ಣ ಬದಲಾಗುತ್ತದೆ. ಭೂಮಿಯ ಮೇಲೆ ಅದು ಬೇರೆ ಬೇರೆ ಬಣ್ಣಗಳಲ್ಲಿ ಬೇರೆ ಬೇರೆ ಆಕಾರಗಳಲ್ಲಿ ಕಾಣಿಸುತ್ತದೆ. ಚಂದಿರ ಈ ಬುಧವಾರ ಹದಿನಾರು ಸಾವಿರ ಕಿಲೋಮೀಟರುಗಳಷ್ಟು ಭೂಮಿಗೆ ಹತ್ತಿರ ಬಂದಿದ್ದಾನೆ.

    ಚಂದ್ರ ಶೀತ ಕಾರಕ. ಚಂದ್ರ ಮನೋಕಾರಕನೂ ಹೌದು. ಚಂದ್ರ ಮನುಷ್ಯನ ಆರೋಗ್ಯವನ್ನು ಸುಧಾರಿಸುವ ಮತ್ತು ಹದಗೆಡಿಸುವ ಶಕ್ತಿಯನ್ನು ಹೊಂದಿದ್ದಾನೆ. ಚಂದ್ರ ಭೂಮಿಗೆ ಹತ್ತಿರ ಬರುವುದು ಖಗೋಳದ ಒಂದು ಪ್ರಕ್ರಿಯೆ. ಆದರೆ ಈ ಬಾರಿ ಸೂಪರ್ ಮೂನ್ ಬೇರೆಯೇ ವಿಚಾರಕ್ಕೆ ಚರ್ಚೆಯ ವಿಷಯವಾಗಿದೆ. ವಿಶ್ವದ ಎಲ್ಲಾ ದೇಶಗಳಿಗೆ ಕೊರೊನಾ ಬಾಧಿಸಿದೆ. ಚಂದ್ರನಿಗೂ ಸಮುದ್ರಕ್ಕೂ ನೇರ ಸಂಪರ್ಕ ಇರುವುದರಿಂದ ಸಮುದ್ರದ ಅಲೆಗಳು ಜಾಸ್ತಿಯಾಗುತ್ತದೆ. ತೀರದ ಊರುಗಳಲ್ಲಿ ಮಳೆಯಾಗಬಹುದು ಎಂದು ಹೇಳಿದರು.

    ಮನೋಕಾರಕನಾಗಿರುವ ಚಂದ್ರ ಮನಸ್ಸಿನಲ್ಲಿ ತಲ್ಲಣಗಳನ್ನು ಉಂಟು ಮಾಡಬಹುದು. ಕೊರೊನಾ ವ್ಯಾಧಿ ಬಾಧಿಸಿರುವವರು ಮತ್ತು ಜನಸಾಮಾನ್ಯರು ಈ ಸಂದರ್ಭದಲ್ಲಿ ಮಾನಸಿಕ ತಲ್ಲಣಗಳನ್ನು ನಿಯಂತ್ರಿಸಬೇಕು. ಸ್ಥಿಮಿತ ಕಳೆದುಕೊಂಡಲ್ಲಿ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಈ ಬಾರಿ ಚಂದ್ರನ ಹೊಸ ಭೂಭಾಗ ಭೂಮಿಯ ಕಡೆ ದರ್ಶನ ಆಗುತ್ತದೆ. ಮುಂದೆ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬ ಕುತೂಹಲ ಇದೆ ಎಂದು ಅಮ್ಮಣ್ಣಾಯ ಹೇಳಿದರು.

    ಚಿತ್ರಾ ನಕ್ಷತ್ರದಲ್ಲಿ ಚಂದ್ರ ಸಂಚಾರ ಇರುವುದರಿಂದ ಈ ನಕ್ಷತ್ರದವರು ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಈ ನಕ್ಷತ್ರದವರಿಗೆ ಪ್ರಖರತೆ ಜಾಸ್ತಿ ಇರುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು ಎಂದರು.

  • ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್

    ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್

    – ವೀಕೆಂಡ್‍ನಲ್ಲಿ ಸೂಪರ್ ಮೂನ್ ಸಂಭ್ರಮ
    – ವಿಜ್ಞಾನಿಗಳ ಪಾಲಿಗೆ ವಿಸ್ಮಯ, ಜ್ಯೋತಿಷಿಗಳ ಪಾಲಿಗೆ ಭಯ

    ಬೆಂಗಳೂರು: ಇಂದು ಹಾಗೂ ನಾಳೆ ಆಗಸದಲ್ಲೊಂದು ವಿಸ್ಮಯ ನಡೆಯಲಿದೆ. ಚಂದದ ಚಂದ್ರಮಾಮ ಇನ್ನಷ್ಟು ಪ್ರಜ್ವಲಿಸುತ್ತಾನೆ. ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್ ಸಂಭ್ರಮ ಇರಲಿದೆ.

    ಪ್ರತಿ ತಿಂಗಳು ಹುಣ್ಣಿಮೆ ಘಟಿಸೋದು ಸಾಮಾನ್ಯ. ಆದರೆ ಇಂದು ಶುರುವಾಗಿ ನಾಳೆ ಭಾನುವಾರದವರೆಗೆ ಆಗಸದಲ್ಲಿ ಕಂಗೊಳಿಸುತ್ತಾನಲ್ಲ ಚಂದಿರ ಅದು ಮಾತ್ರ ಕಣ್ಣಿಗೆ ಸೊಗಸಾದ ದೃಶ್ಯ ವೈಭವ. ಈ ಬಾರಿಯ ಮಾಘ ಮಾಸದಲ್ಲಿ ಬಂದ ಹುಣ್ಣಿಮೆ ಚಂದಿರ, ಸೂಪರ್ ಮೂನ್ ಆಗಿದೆ. ಶನಿವಾರ ಸಂಜೆ 4 ಗಂಟೆ 2 ನಿಮಿಷಕ್ಕೆ ಶುರುವಾಗಿ ಭಾನುವಾರ ಮಧ್ಯಾಹ್ನ 1 ಗಂಟೆ 3 ನಿಮಿಷಕ್ಕೆ ಈ ಮಾಘ ಹುಣ್ಣಿಮೆ ಮುಗಿಯಲಿದೆ.

    ಸೂಪರ್ ಮೂನ್ ನಿಮ್ಮ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಬೇಗನೆ ಉದಯವಾಗುವ ಚಂದ್ರ ನಿಧಾನವಾಗಿ ಮುಳುಗುತ್ತಾನೆ. ಭೂಮಿಯ ಸಮೀಪದಲ್ಲಿ ಬರುವ ಚಂದ್ರ ನಿಮಗೆ ಹತ್ತಿರದಲ್ಲೇ ಇರುವ ಭಾವನೆಯನ್ನ ಮೂಡಿಸುತ್ತಾನೆ. ಈ ಬಾರಿ ಬೆಳದಿಂಗಳು ಬೆಳಕು ದುಪ್ಪಟ್ಟಾಗಲಿದೆ ಎಂದು ಖ್ಯಾತ ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ ಹೇಳಿದರು.

    ವಿಜ್ಞಾನಿಗಳ ಪಾಲಿನ ಈ ವಿಸ್ಮಯ, ಜ್ಯೋತಿಷ್ಯದಲ್ಲಿ ಮಾತ್ರ ಸಣ್ಣ ಆತಂಕ ಹುಟ್ಟಿಸಿದೆ. ಹುಣ್ಣಿಮೆಯು ಶನಿ ನಕ್ಷತ್ರದಲ್ಲಿ ಘಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೌರ್ಣಮಿಯ ಮೇಲೆ ಶನಿಯ ನೇರ ದೃಷ್ಠಿ ಇದೆ. ಗ್ರಹಣದ ಬೆನ್ನಲ್ಲೆ ಬಂದ ಪೌರ್ಣಿಮೆ ಶ್ರೇಷ್ಠದಿನವಾದರೂ ಸೂಪರ್ ಮೂನ್ ಪ್ರಕೃತಿಯ ಮೇಲೆ ಅಸಹಜ ಪರಿಣಾಮ ಬೀರುತ್ತದೆ. ಪೌರ್ಣಿಮೆಯ ಅವಧಿ ಸುದೀರ್ಘವಾಗಿರುವುದರಿಂದ ಮನುಷ್ಯರಲ್ಲಿ ಮಾನಸಿಕ ತೊಳಲಾಟ, ದ್ವಂದ್ವಗಳು ಹೆಚ್ಚಾಗುತ್ತವೆ ಎಂದು ರೇಣುಕಾರಾಧ್ಯ ಗುರೂಜಿ ತಿಳಿಸಿದರು.

    ಈ ಮಾಘ ಹುಣ್ಣಿಮೆಯನ್ನ ಭರತ ಹುಣ್ಣಿಮೆ ಅಂತನೂ ಕರೆಯಲಾಗುತ್ತೆ. ಪೂರ್ಣ ಚಂದಿರನ ದರ್ಶನ ಆಗುವುದರಿಂದ ಜಲಗಂಡಾತರವಾಗುವ ಸಾಧ್ಯತೆ ಇದೆ. ಗ್ರಹಣಗಳ ನಂತರ ಬಂದಿರುವ ಪೂರ್ಣ ಹುಣ್ಣಿಮೆಯ ಪರಿಣಾಮ, ರಾಜ್ಯ ಹಾಗೂ ಕೇಂದ್ರದಲ್ಲೂ ಅವಘಡಗಳು ನಡೆಯಬಹುದು ಎಂದು ಗವಿಗಂಗಾಧರದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತರು ಹೇಳಿದರು.

    ಸೂಪರ್ ಮೂನ್ ಕೆಟ್ಟ ಪರಿಣಾಮ ತಪ್ಪಿಸಲು ಶಿವನ ಆರಾಧನೆ ಮಾಡಬೇಕು ಅನ್ನೋದು ಜ್ಯೋತಿಷಿಗಳ ಸಲಹೆ. ಆದರೆ ಆಗಸ ನೋಡಿ ಚಂದಮಾಮಾನ ಕಣ್ತುಂಬಿಸಿಕೊಳ್ಳಿ ಎಂಬುವುದು ವಿಜ್ಞಾನಿಗಳ ಸಲಹೆ.