Tag: sumalathaambareesh

  • ಮಂಡ್ಯ ಬಳಿಕ ಬೆಂಗ್ಳೂರಲ್ಲಿ ಚಾಲೆಂಜಿಂಗ್ ಸ್ಟಾರ್ ಪ್ರಚಾರ!

    ಮಂಡ್ಯ ಬಳಿಕ ಬೆಂಗ್ಳೂರಲ್ಲಿ ಚಾಲೆಂಜಿಂಗ್ ಸ್ಟಾರ್ ಪ್ರಚಾರ!

    ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿ ಬ್ರೇಕ್ ತೆಗೆದುಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಂಗಳೂರಿನಲ್ಲಿ ಪ್ರಚಾರಕ್ಕೆ ಧುಮುಕಿದ್ದಾರೆ.

    ಹೌದು. ದರ್ಶನ್ ಅವರು ಇಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಈ ಕುರಿತು ಪಿಸ್ ಮೋಹನ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ನನ್ನ ಆತ್ಮೀಯ ಸ್ನೇಹಿತ, ಹಿತೈಷಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಳೆ(ಸೋಮವಾರ) ನನ್ನ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ಜೊತೆಗೆ ಸಿವಿ ರಾಮನ್ ನಗರ ಮತ್ತು ಶಾಂತಿನಗರ ಕ್ಷೇತ್ರಗಳಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದು, ತಾವು ಬನ್ನಿ, ಬೆಂಬಲಿಸಿ, ಆಶೀರ್ವದಿಸಿ ಎಂದು ಬರೆದುಕೊಂಡಿದ್ದರು.

    ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ಸ್ಪರ್ಧಿಸಿದ್ರೆ, ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷದ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರೈ ಕಣಕ್ಕಿಳಿದಿದ್ದಾರೆ. ಇತ್ತ ಬ್ರೇಕ್ ಬಳಿಕ ನಟ ಯಶ್ ಅವರು ಇಂದು ಮಂಡ್ಯದಲ್ಲಿ ಮತ್ತೆ ಸುಮಲತಾ ಪರ ಪ್ರಚಾರ ಆರಂಭಿಸಿದ್ದಾರೆ.

  • ಸುಮಲತಾ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ

    ಸುಮಲತಾ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ

    ಹಾವೇರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ. ಇದರಿಂದ ಭಯಗೊಂಡು ಈ ರೀತಿ ಅವರೆಲ್ಲ ಮತನಾಡುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಟೀಕಿಸುವವರ ವಿರುದ್ಧ ನಟಿ, ಬಿಜೆಪಿ ಮುಖಂಡೆ ಶೃತಿ ಕಿಡಿಕಾರಿದ್ದಾರೆ.

    ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಸಂಸದ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಸ್ಟಾರ್‍ಗಳು ಮಂಡ್ಯ ಪ್ರಚಾರಕ್ಕೆ ಬಂದ್ರೆ ಸೇರಿದ ಜನಸಾಗರ ನೋಡಿ ಜೆಡಿಎಸ್‍ನವರಿಗೆ ಭಯ ತಂದಿದ್ದಾರೆ. ಜೆಡಿಎಸ್ ಪಕ್ಷದವರು ದುಡ್ಡುಕೊಟ್ಟು ಜನರನ್ನು ನಟರ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ ಎಂದರು.

    ಸುಮಲತಾ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ಮಹಿಳೆಗೆ ಇಷ್ಟೊಂದು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಯಾರು ಕ್ಷಮಿಸೋದಿಲ್ಲ. ಸುಮಲತಾ ಜನರ ಧ್ವನಿಯಾಗುವ ಸಲುವಾಗಿ ತನ್ನ ನೋವಿನಲ್ಲೂ ರಾಜಕಾರಣಕ್ಕೆ ಬಂದಿದ್ದಾರೆ. ಮಹಿಳೆಯನ್ನು ಮುಖ್ಯವಾಹಿನಿಗೆ ತಂದು, ಬೆಳೆಸುವಂತಹ ಕೆಲಸ ಮಾಡಬೇಕು. ಆದರೆ ಸಿಎಂ ಕುಮಾರಸ್ವಾಮಿ ತನ್ನ ಮಗನ ಗೆಲುವಿಗಾಗಿ ವೈಯಕ್ತಿಕ ಟೀಕೆ ಮಾಡುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ.

    ಮುಖದಲ್ಲಿ ನೋವು ಕಾಣ್ತಿಲ್ಲ ಅನ್ನೋ ಕುಮಾರಸ್ವಾಮಿಹಾಗೂ ಗಂಡ ಸತ್ತು ನಾಲ್ಕೈದು ದಿನ ಆಗಲಿಲ್ಲ ಅನ್ನೋ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ಇಬ್ಬರಿಗೂ ಶೋಭೆ ತರೋದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು.

  • ಸಿದ್ದರಾಮಯ್ಯ ಭೇಟಿಯ ಕಾರಣ ರಿವೀಲ್ ಮಾಡಿದ್ರು ಸುಮಲತಾ

    ಸಿದ್ದರಾಮಯ್ಯ ಭೇಟಿಯ ಕಾರಣ ರಿವೀಲ್ ಮಾಡಿದ್ರು ಸುಮಲತಾ

    ಬೆಂಗಳೂರು: ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುಮಲತಾ ಅಂಬರೀಶ್ ಭೇಟಿ ಮಾಡಿದ್ದು, ತೀವ್ರ ಕತೂಹಲ ಹುಟ್ಟಿಸಿತ್ತು. ಇದೀಗ ತಾನು ಯಾಕೆ ಮಾಜಿ ಸಿಎಂ ಅವರನ್ನು ಭೇಟಿ ಮಾಡಿದ್ದೇನೆ ಎಂಬುದನ್ನು ಸ್ವತಃ ಸುಮಲತಾ ಅವರೇ ರಿವೀಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನನ್ನ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಈ ಕಾರಣಕ್ಕೆ ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ರು.

    ಕುಮಾರಸ್ವಾಮಿಯವರು ಹೇಳಿಕೆ ಕೊಟ್ಟು ಬಹಳ ದಿನಗಳು ಆದ ಬಳಿಕ ನಾನು ಸಿದ್ದರಾಮಯ್ಯ ಅವರ ಮನೆಗೆ ಭೇಟಿ ಕೊಟ್ಟಿರುವುದು. ಎರಡೂವರೆ ತಿಂಗಳ ಹಿಂದೆ ಎಚ್‍ಡಿಕೆ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆಯನ್ನು ಅವರು ತುಂಬಾ ಮುಕ್ತವಾಗಿಯೇ ಹೇಳಿದ್ದರು ಅಂದ್ರು.

    ಎಚ್‍ಡಿಕೆ ಏನ್ ಹೇಳಿದ್ದರು..?
    ಸುಮಲತಾ ಅವರು ನಮ್ಮ ಪಕ್ಷದವರು ಅಲ್ವಲ್ಲ. ಅವರಿಗೆ ಯಾಕೆ ಟಿಕೆಟ್ ಕೊಡಬೇಕು. ಸುಮಲತಾ ಅವರಿಗೆ ಏನೇ ಇದ್ರೂ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಬಹುದೇನೋ. ಅವರನ್ನೇ ಹೋಗಿ ಕೇಳಲಿ. ನಮ್ಮದೇ ಆದ ಶಕ್ತಿ ಮಂಡ್ಯದಲ್ಲಿದೆ. ಹೀಗಾಗಿ ನಾವು ನಮ್ಮದೇ ಅಭ್ಯರ್ಥಿಯನ್ನು ಅಲ್ಲಿ ನಿಲ್ಲಿಸ್ತೀವಿ. ನಾವು ಬೇರೆ ಯಾರಿಗೂ ಟಿಕೆಟ್ ಕೊಡಲ್ಲ ಎನ್ನುವ ಮಾತನ್ನು ಎಚ್ ಡಿಕೆ ಹೇಳಿದ್ದರು.

    ಅದಾದ ಬಳಿಕ ಮಂಡ್ಯಕ್ಕೆ ಸುಮಲತಾ ಅವರ ಕೊಡುಗೆ ಏನು ಎಂದು ಕೇಳಿದ್ರು. ಅಂಬರೀಶ್ ಅವರ ಕೊಡುಗೆ ಏನು..? ಅದೂ ಶೂನ್ಯ ಎಂದು ಹೇಳಿದ್ದರು. ಇದನ್ನೆಲ್ಲಾ ಇಟ್ಟುಕೊಂಡು ಹೇಗೆ ನಾನು ಅವರನ್ನು ಅಪ್ರೋಚ್ ಮಾಡಲಿ. ನಿಮ್ಮದೇನೂ ಇಲ್ಲ. ನೀವು ಯಾರೂ ಇಲ್ಲ ಅನ್ನೋವಾಗ ನಾನು ಅವರ ಕಡೆ ಹೋಗಿ ಕೇಳೋದ್ರಲ್ಲಿ ಅರ್ಥನೇ ಇಲ್ಲ ಎಂದರು.