Tag: Sujeeth Rathod

  • ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

    ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

    ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ಕಡೇಯ ಕ್ಷಣಗಳಲ್ಲಿ ಈ ಸಿನಿಮಾ ಕುರಿತಾದ ಒಂದೊಂದೇ ಕುತೂಹಲಕರ ಅಂಶಗಳನ್ನು ಚಿತ್ರತಂಡ ಜಾಹೀರು ಮಾಡುತ್ತಿದೆ. ಅದರಲ್ಲಿ ತಾರಾಗಣದ ಗುಟ್ಟುಗಳೂ ಸೇರಿಕೊಂಡಿವೆ. ಸುಧಾರಾಣಿ, ತಬಲಾ ನಾಣಿ, ದಿಲೀಪ್ ರಾಜ್, ಅನುಷಾ ರಾವ್ ಸೇರಿದಂತೆ ಅನೇಕರ ತಾರಾಗಣ ಈ ಚಿತ್ರದಲ್ಲಿದೆ. ಹಿರಿಯ ರಂಗಭೂಮಿ ನಟಿ ನಿರ್ವಹಿಸಿರೋ ಕೊರವಂಜಿ ಪಾತ್ರವಂತೂ ಬಹಳಷ್ಟು ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿದೆಯಂತೆ.

    ಸುಜಿತ್ ರಾಥೋಡ್ ಮುಖ್ಯ ಪಾತ್ರದಲ್ಲಿ ನಟಿಸಿರೋ ಈ ಚಿತ್ರವನ್ನು ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಆದರೆ ಇದುವರೆಗೂ ಬಂದಿರೋ ಈ ಜಾನರಿನ ಚಿತ್ರಗಳ ಸಾಲಿನಲ್ಲಿಯೇ ಇದನ್ನೂ ದಾಖಲಿಸುವಂತೆಲ್ಲ. ಯಾಕೆಂದರೆ ಇದು ಕಮರ್ಶಿಯಲ್ ಅಂಶಗಳೊಂದಿಗೆ ಪ್ರಯೋಗಾತ್ಮಕ ಪಟ್ಟುಗಳನ್ನು ಹೊಂದಿರೋ ಚಿತ್ರ.

    ಕಲಾವಿದನೊಬ್ಬ ಬಿಡಿದಿಸಿ ಅಪರಿಚಿತನ ಚಿತ್ರವೇ ಅಘೋರಿಯ ರೂಪದಲ್ಲಿ ಕಾಡೋ ಈ ಸಿನಿಮಾ ಕಥೆ ನಾನಾ ದಿಕ್ಕುಗಳಲ್ಲಿ ಚಲಿಸುತ್ತೆ. ಅಂಥಾ ಸಿಕ್ಕುಗಳನ್ನು ಬಿಡಿಸು ಪಾತ್ರಗಳಿಗೆ ಮತ್ತಷ್ಟು ಓಘ ನೀಓಡೋ ಪಾತ್ರವನ್ನು ಸುಧಾರಾಣಿ ನಿರ್ವಹಿಸಿದರೆ, ಇಡೀ ಚಿತ್ರಪಕ್ಕೆ ಬೇರೆ ದಿಕ್ಕು ತೋರಿಸುವ ಕೊರವಂಜಿಯ ಪಾತ್ರದಲ್ಲಿ ಬಿ ಜಯಶ್ರೀಯವರು ನಟಿಸಿದ್ದಾರೆ. ಇದು ಹೆಚ್ಚು ಅವಧಿಯಲ್ಲೇನೂ ತೆರೆ ಮೇಲಿರೋದಿಲ್ಲ. ಆದರೆ ಅದು ಅಷ್ಟು ಸಲೀಸಾಗಿ ಪ್ರೇಕ್ಷಕರ ಮನದಿಂದ ಮರೆಯಾಗುವುದೂ ಇಲ್ಲ. ನಿಜಕ್ಕೂ ಈ ಪಾತ್ರದಲ್ಲಿ ಅಂಥಾ ವಿಶೇಷಗಳೇನಿವೆ ಎಂಬುದು ಹ್ನ್ನೆರಡನೇ ತಾರೀಕು ಅಂದರೆ ಈ ವಾರ ಗೊತ್ತಾಗಲಿದೆ.

  • ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

    ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

    ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಈ ಚಿತ್ರ ವಿಭಿನ್ನವಾದ ಪೋಸ್ಟರ್ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಚಿತ್ರೀಕರಣದ ಹಂತದಲ್ಲಿಯೇ ಚಿತ್ರಕಥಾ ವೆರೈಟಿ ಪೋಸ್ಟರ್‍ಗಳ ಮೂಲಕ ಸದ್ದು ಮಾಡಿತ್ತು. ಇಡೀ ಚಿತ್ರದ ನವೀನ ಕಥೆಯ ಸುಳಿವು ಇಂಥಾ ಪೋಸ್ಟರ್‍ಗಳ ಮೂಲಕವೇ ಸಿಕ್ಕಿ ಬಿಟ್ಟಿತ್ತು. ಆ ನಂತರದಲ್ಲಿ ಶ್ರೀಮುರುಳಿ ಬಿಡುಗಡೆ ಮಾಡಿದ್ದ ಟ್ರೈಲರ್ ಮೂಲಕವೇ ಈ ಸಿನಿಮಾ ಪಡೆದುಕೊಂಡ ಪ್ರಚಾರ ಅಚ್ಚರಿದಾಯಕವಾದದ್ದು.

    ಪ್ರಜ್ವಲ್ ಎಂ ರಾಜ ನಿರ್ಮಾಣ ಮಾಡಿರೋ ಈ ಚಿತ್ರದ ತುಂಬಾ ಯುವ ಆವೇಗವೇ ತುಂಬಿಕೊಂಡಿದೆ. ಆದರೆ ಹೊಸಬರೇ ಇದ್ದರೂ ಚಿತ್ರ ಮಾತ್ರ ಮಾಗಿದ ಕಥೆಯನ್ನೊಳಗೊಂಡಿದೆ ಎಂಬ ವಿಚಾರ ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಈ ಮೂಲಕವೇ ಯುವ ಪ್ರತಿಭೆ ಸುಜಿತ್ ರಾಥೋಡ್ ನಾಯಕನಾಗಿಯೂ ಎಂಟ್ರಿ ಕೊಡುತ್ತಿದ್ದಾರೆ. ಇದೇ ರೀತಿ ಸದರಿ ಚಿತ್ರ ತಾಂತ್ರಿಕವಾಗಿಯೂ ಮಾಂತ್ರಿಕ ಮೋಡಿ ಮಾಡಲು ರೆಡಿಯಾಗಿದೆ.

    ಈ ಚಿತ್ರದ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಹಿಂದೆ ಹಲವಾರು ವರ್ಷಗಳ ಕಾಲ ತಾಂತ್ರಿಕ ವಿಭಾಗದಲ್ಲಿಯೂ ಅನುಭವ ಹೊಂದಿರುವವರು. ಹಾಗೆ ಸಾಗಿ ಬಂದು ನಿರ್ದೇಶಕರಾಗಿರೋ ಅವರು ತಮ್ಮ ಚೊಚ್ಚಲ ಚಿತ್ರವನ್ನು ತಾಂತ್ರಿಕವಾಗಿಯೂ ಬೆರಗಾಗುವಂಥಾ ಶೈಲಿಯಲ್ಲು ರೂಪಿಸಿದ ಭರವಸೆಯಿಂದಿದ್ದಾರೆ. ಸ್ಕ್ರೀನ್ ಪ್ಲೇ ಸೇರಿದಂತೆ ಎಲ್ಲದರಲ್ಲಿಯೂ ಪ್ರಯೋಗಾತ್ಮಕ ಅಂಶಗಳನ್ನು ಹೊಂದಿರೋ ಈ ಚಿತ್ರ ಕಮರ್ಶಿಯಲ್ ಚಹರೆಯೊಂದಿಗೆ ಮ್ಯಾಜಿಕ್ ಮಾಡುವ ತಯಾರಿಯಲ್ಲಿದೆ.

    ಇದೆಲ್ಲ ವಿಶೇಷತೆಗಳ ಜೊತೆಯಲ್ಲಿಯೇ ಭರ್ಜರಿಯಾದ ತಾರಾಗಣದ ಸಾಥ್ ಕೂಡಾ ಈ ಚಿತ್ರಕ್ಕಿದೆ. ತಬಲಾ ನಾಣಿ, ಸುಧಾ ರಾಣಿ, ಬಿ ಜಯಶ್ರೀ, ದಿಲೀಪ್ ರಾಜ್ ಮತ್ತು ಅಗ್ನಿಸಾಕ್ಷಿ ರಾಧಿಕಾ ಸೇರಿದಂತೆ ಅನೇಕ ಕಲಾವಿದರು ಈ ತಾರಾಗಣದಲ್ಲಿದ್ದಾರೆ. ಹೀಗೆ ಎಲ್ಲ ಥರದಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಚಿತ್ರಕಥಾ ಇದೇ ವಾರ ಅಂದರೆ ಹನ್ನೆರಡನೇ ತಾರೀಕಿನಂದು ಬಿಡುಗಡೆಯಾಗಲಿದೆ.