Tag: suicide bomber

  • ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ – 9 ಪೊಲೀಸರು ಸಾವು

    ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ – 9 ಪೊಲೀಸರು ಸಾವು

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಬಲೂಚಿಸ್ತಾನ್ (Balochistan blast) ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಒಂಭತ್ತು ಪೊಲೀಸರು (Pakistan Police) ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದ ಸಿಬ್ಬಿ ನಗರದಲ್ಲಿ ಈ ದಾಳಿ ನಡೆದಿದೆ. ಬಲೂಚಿಸ್ತಾನ್ ಕಾನ್‌ಸ್ಟಾಬ್ಯುಲರಿಯ ಸದಸ್ಯರು ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಪೊಲೀಸ್‌ ಟ್ರಕ್‌ಗೆ ಮೋಟಾರ್‌ ಬೈಕ್‌ ಡಿಕ್ಕಿ ಹೊಡೆದು ದಾಳಿ ಮಾಡಯಿತು. ಪರಿಣಾಮ ಪೊಲೀಸರು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿದೆ. ಇದನ್ನೂ ಓದಿ: ʼಸ್ವೀಟ್‌ 16ʼ ಬರ್ತ್‌ಡೇ ಪಾರ್ಟಿಯಲ್ಲಿ ಶೂಟೌಟ್‌ – ಇಬ್ಬರು ಸಾವು, 6 ಮಂದಿಗೆ ಗಾಯ

    ಆತ್ಮಹತ್ಯಾ ಬಾಂಬರ್ ಮೋಟಾರ್‌ ಬೈಕನ್ನು ಚಲಾಯಿಸುತ್ತಿದ್ದ. ಹಿಂದಿನಿಂದ ಬಂದು ಟ್ರಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ 9 ಪೊಲೀಸರು ಮೃತಪಟ್ಟಿದ್ದಾರೆ. ದಾಳಿಯಲ್ಲಿ 7 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಹೈ ಅಮೀರ್ ತಿಳಿಸಿದ್ದಾರೆ.

    ದಾಳಿ ಸ್ಥಳದ ಭೀಕರ ದೃಶ್ಯದ ಛಾಯಾಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ರಕ್ತಸಿಕ್ತ ದೇಹಗಳು, ಉರುಳಿಬಿದ್ದ ಬಿಳಿ ಮತ್ತು ನೀಲಿ ಬಣ್ಣದ ಪೊಲೀಸ್ ವ್ಯಾನ್‌ನ ಭಯಾನಕ ದೃಶ್ಯ ಛಾಯಾಚಿತ್ರದಲ್ಲಿದೆ. ಪಾಕಿಸ್ತಾನದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲಿನ ಸರಣಿ ದಾಳಿಯಲ್ಲಿ ಇದು ಇತ್ತೀಚಿನದು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ

    ಬಲೂಚಿಸ್ತಾನ ಮುಖ್ಯಮಂತ್ರಿ ಮಿರ್ ಅಬ್ದುಲ್ ಖುದೂಸ್ ಬಿಜೆಂಜೊ ಅವರು ದಾಳಿಯನ್ನು ಖಂಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಈವರೆಗೂ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

  • ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

    ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೇಶಾವರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯನ್ನು (Suicide Bomb Attack) ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ (Maryam Nawaz) ಖಂಡಿದ್ದಾರೆ.

    ಪೇಶಾವರದ ಮಸೀದಿಯಲ್ಲಿ (Peshawar Mosque) ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದ 101 ಜನರ ಸಾವಿಗೆ ಮಾಜಿ ಐಎಸ್‌ಐ (ISI) ಮುಖ್ಯಸ್ಥ ಹಾಗೂ ಪೇಶಾವರ ಕಾರ್ಪ್ಸ್ ಕಮಾಂಡರ್ ಫೈಜ್ ಹಮೀದ್ ಹೊಣೆಗಾರ ಎಂದು ದೂರಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯು ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಹುಳಿ-ಸಿಹಿ ರುಚಿಯ ನೆಲ್ಲಿಕಾಯಿ ಜ್ಯಾಮ್ ಮಾಡಿ ನೋಡಿ

    ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ - ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಇಮ್ರಾನ್ ಖಾನ್ (Imran Khan) ಯಾರನ್ನ ತನ್ನ ಕಣ್ಣು, ಕೈ ಹಾಗೂ ಕಿವಿ ಎಂದು ಕರೆಯುತ್ತಿದ್ದರೋ ಆ ಒಬ್ಬನನ್ನು ಪೇಶಾವರಲ್ಲಿ ನಿಯೋಜಿಸಲಾಗಿತ್ತು. ಅವನೇಕೆ ಭಯೋತ್ಪಾದಕರಿಗೆ ಬಾಗಿಲು ತೆರೆಯಬೇಕಿತ್ತು? ಭಯೋತ್ಪಾದಕರು ನಮ್ಮ ಸಹೋದರರು ಎಂದು ಏಕೆ ಹೇಳಿದ? ಭಯೋತ್ಪಾದಕನನ್ನ ಪಾಕಿಸ್ತಾನಕ್ಕೆ ಆಹ್ವಾನಿಸಿದ್ದೇಕೆ? ಜೈಲಿನಿಂದ ಹಾರ್ಡ್ಕೋರ್ ಭಯೋತ್ಪಾದಕರನ್ನ ಬಿಡುಗಡೆ ಮಾಡಿದ್ದೇಕೆ? ಅವನು (ಜನರಲ್ ಹಮೀದ್) ನಿಜವಾಗಿಯೂ ಪಾಕಿಸ್ತಾನದ ಕಣ್ಣು, ಕೈ ಮತ್ತು ಕಿವಿ ಆಗಿದ್ದರೆ, ಈ ಪರಿಸ್ಥಿತಿ (ಭಯೋತ್ಪಾದನೆಯ) ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ನನ್ನ ತಂದೆ ದೇಶವನ್ನು ಭಯೋತ್ಪಾದನೆ ದಾಳಿಯಿಂದ ಮುಕ್ತಗೊಳಿದ್ದರು. ಆದರೆ ಇಮ್ರಾನ್ ಖಾನ್ ಆಡಳಿತದ ಕೆಟ್ಟ ನೀತಿಗಳಿಂದ ಮತ್ತೆ ಭಯೋತ್ಪಾದನೆ ಮರಳಿತು. ನವಾಜ್ ಷರೀಫ್ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದರೆ, ಇಮ್ರಾನ್ ಖಾನ್ ಅವರ 4 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹಾಲು ಮತ್ತು ಜೇನುತುಪ್ಪದ ನದಿಗಳು ಹರಿಯಬೇಕಾಗಿತ್ತು. ಆದರೆ ನವಾಜ್ ಷರೀಫ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ದೇಶವನ್ನು ಉಳಿಸಿದ್ದಾರೆ. ಈ ದೇಶವನ್ನು ಶ್ರೀಲಂಕಾದಂತೆ ಆಗುವುದನ್ನು ತಡೆದಿದ್ದಾರೆ ಎಂದು ಸ್ಮರಿಸಿದರು.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಯಾರಿದು ಹಮೀದ್?
    ಐಎಸ್‌ಐ ಮುಖ್ಯಸ್ಥನ ಹುದ್ದೆಯನ್ನು ಪಾಕಿಸ್ತಾನ ಸೇನೆಯಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಲಾಗಿದೆ. ಇದು ತನ್ನ 75 ವರ್ಷಗಳ ಅಸ್ತಿತ್ವದಲ್ಲಿ ಅರ್ಧಕ್ಕಿಂತ ಹೆಚ್ಚು ವರ್ಷಗಳ ಕಾಲ ದೇಶವನ್ನು ಆಳಿದೆ. 2019ರ ಜೂನ್ ನಿಂದ 2021ರ ನವೆಂಬರ್ ವರೆಗೆ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಮುಖ್ಯಸ್ಥನಾಗಿದ್ದ ಲೆಫ್ಟಿನೆಂಟ್ ಜನರಲ್ ಹಮೀದ್, 2021ರ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೊದಲ ಉನ್ನತ ಶ್ರೇಣಿಯ ವಿದೇಶಿ ಅಧಿಕಾರಿ ಎನ್ನಿಸಿಕೊಂಡಿದ್ದ. ಕೊನೆಯದಾಗಿ ಅವರನ್ನು ಪೇಶಾವರಕ್ಕೆ ಕಾರ್ಪ್ಸ್ ಕಮಾಂಡರ್ ಆಗಿ ನಿಯೋಜಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ವಾಯುವ್ಯ ಪೇಶಾವರದ ಮಸೀದಿಯಲ್ಲಿ (Peshawar Mosque) ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಶಂಕಿತ ಉಗ್ರನ ತುಂಡರಿಸಿದ ತಲೆ ಪತ್ತೆಯಾಗಿದೆ.

    ಈಗಾಗಲೇ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ (Suicide Bomb Blast) ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದ್ದು 221 ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಅವಶೇಷಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಸ್ಫೋಟಕ್ಕೂ ಮುನ್ನ ಆತ್ಮಾಹುತಿ ದಾಳಿಕೋರ ಪೊಲೀಸರ ಸಾಲಿನಲ್ಲೂ ಇದ್ದ ಸಾಧ್ಯತೆಗಳಿವೆ. ಅಲ್ಲದೇ ಮಸೀದಿ ಪ್ರವೇಶಿಸಲು ಅಧಿಕೃತ ವಾಹನವನ್ನೇ ಬಳಸಿರಬಹುದು. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನಿ ತಾಲಿಬಾನ್ (Pakistani Taliban) ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯು ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    2014ರಲ್ಲಿಯೂ ಪಾಕಿಸ್ತಾನಿ ತಾಲಿಬಾನ್ (Pakistani Taliban) ವಾಯುವ್ಯ ನಗರದ ಪೇಶಾವರ್‌ನಲ್ಲಿರುವ ಆರ್ಮಿ ಪಬ್ಲಿಕ್ ಸ್ಕೂಲ್ (ಎಪಿಎಸ್) ಮೇಲೆ ದಾಳಿ ಮಾಡಿ 131 ವಿದ್ಯಾರ್ಥಿಗಳು ಸೇರಿದಂತೆ 150 ಮಂದಿಯನ್ನು ಕೊಂದಿತ್ತು. ಇದನ್ನೂ ಓದಿ: ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್‌ ಸ್ಫೋಟ- 28 ಮಂದಿ ಸಾವು, 150 ಮಂದಿಗೆ ಗಾಯ

    ಏನಿದು ಘಟನೆ?
    ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಸೋಮವಾರ (ಜ.30) ಮಧ್ಯಾಹ್ನ 1:40 ಸುಮಾರಿಗೆ ಝುಹರ್ ನಮಾಜ್ ಬಳಿಕ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಮಸೀದಿಯ ಒಂದು ಬದಿ ಕುಸಿದುಬಿದ್ದಿತ್ತು.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಸ್ಫೋಟವನ್ನು ಖಂಡಿಸಿದ್ದರು. ಅಲ್ಲದೇ ಈ ಸ್ಫೋಟ ಇಸ್ಲಾಂನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಭಯೋತ್ಪಾದಕರು ಪಾಕಿಸ್ತಾನ ರಕ್ಷಿಸಲು ಕರ್ತವ್ಯ ನಿರ್ವಹಿಸುವವರನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರಾಚಿ ಸೂಸೈಡ್ ಬಾಂಬರ್ ಎಂಫಿಲ್‌ ಪದವೀಧರೆ, 2 ಮಕ್ಕಳ ತಾಯಿ – ಕೃತ್ಯ ಎಸಗಿದ್ದು ಯಾಕೆ?

    ಕರಾಚಿ ಸೂಸೈಡ್ ಬಾಂಬರ್ ಎಂಫಿಲ್‌ ಪದವೀಧರೆ, 2 ಮಕ್ಕಳ ತಾಯಿ – ಕೃತ್ಯ ಎಸಗಿದ್ದು ಯಾಕೆ?

    ಇಸ್ಲಾಮಾಬಾದ್: ಮಂಗಳವಾರ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಘಟನೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಚೀನಾದ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ಮಹಿಳಾ ಸೂಸೈಡ್ ಬಾಂಬರ್ ಮೂವರು ಚೀನಾದ ಪ್ರಾಧ್ಯಾಪಕರನ್ನೊಳಗೊಂಡಂತೆ ನಾಲ್ವರ ಬಲಿ ಪಡೆದುಕೊಂಡಿದ್ದಳು.

    ಕರಾಚಿ ವಿಶ್ವವಿದ್ಯಾನಿಲಯದ ಬಳಿ ತನ್ನು ತಾನೇ ಸ್ಫೋಟಿಸಿಕೊಂಡಿದ್ದ ಮಹಿಳೆ ಶಾರಿ ಬಲೋಚ್. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಡೆಸಿದ ಆತ್ಮಹತ್ಯಾ ಬಾಂಬಿಂಗ್ ಎಂದು ಬಲೂಚಿಸ್ತಾನ್ ಆರ್ಮಿ ಸಂಘಟನೆ ತಿಳಿಸಿದೆ.

    ಶಾರಿ ಬಲೋಚ್ ಯಾರು?
    30 ವರ್ಷದ ಶಾರಿ ಬಲೋಚ್ ಪ್ರಣಿಶಾಸ್ತ್ರ ಹಾಗೂ ಎಂಫಿಲ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಳು. ಶಾಲೆಯಲ್ಲಿ ಶಿಕ್ಷಕಿಯೂ ಆಗಿದ್ದ ಈಕೆಯ ತಂದೆ ಸರ್ಕಾರಿ ನೌಕರನಾಗಿದ್ದು, ಆಕೆಯ ಪತಿ ದಂತವೈದ್ಯನಾಗಿದ್ದಾನೆ. ಶಾರಿಗೆ 8 ವರ್ಷದ ಹಾಗೂ 4 ವರ್ಷದ ಇಬ್ಬರು ಮಕ್ಕಳಿದ್ದಾರೆ ಎಂದು ಅಫ್ಘಾನಿಸ್ತಾನದ ಪತ್ರಕರ್ತ ಬಶೀರ್ ಅಹ್ಮದ್ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಿಯರನ್ನು ಗುರಿಯಾಗಿಸಿ ಕರಾಚಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು

    ಶಾರಿ ಕುಟುಂಬ ಸುಶಿಕ್ಷಿತವಾಗಿದ್ದು, ಸಶಸ್ತ್ರ ಗುಂಪುಗಳೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. 2 ವರ್ಷಗಳ ಹಿಂದೆ ಶಾರಿ ಸ್ವ-ತ್ಯಾಗ ಮಿಷನ್(ಸೆಲ್ಫ್-ಸ್ಯಾಕ್ರಿಫೈಸಿಂಗ್ ಮಿಷನ್)ಗೆ ಸೇರಿಕೊಂಡಿದ್ದಳು ಎನ್ನಲಾಗಿದೆ.

     

    ಮಂಗಳವಾರ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಶಾರಿ ಪತಿ, ಆಕೆಯ ನಿಸ್ವಾರ್ಥ ಕೃತ್ಯ ಮಾತು ಬರದಂತೆ ಮಾಡಿದೆ. ಆದರೂ ಆಕೆಯ ಈ ಕೃತ್ಯಕ್ಕೆ ಹೆಮ್ಮೆಪಡುತ್ತೇನೆ ಎಂದಿದ್ದಾನೆ. ಇದನ್ನೂ ಓದಿ: ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ: ಪಾಕ್‌ನಲ್ಲಿ ತನ್ನ ಪ್ರಜೆಗಳ ಹತ್ಯೆಗೆ ಚೀನಾ ಕಿಡಿ

    ಕರಾಚಿ ವಿಶ್ವವಿದ್ಯಾನಿಲಯದ ಬಳಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಚೀನೀ ಉಪನ್ಯಾಸಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದರು. ಹಲವರಿಗೆ ಗಾಯಗಳಾಗಿದ್ದವು. ಚೀನಾ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ದಾಳಿಯಲ್ಲಿ ಶಾರಿ ಬುರ್ಕಾ ಧರಿಸಿ ರಸ್ತೆಯ ಬದಿ ನಿಂತುಕೊಂಡಿದ್ದಳು. ಉಪನ್ಯಾಸಕರ ವಾಹನ ಶಾರಿ ಬಳಿ ಬರುತ್ತಿದ್ದಂತೆ ಆಕೆ ರಿಮೋಟ್ ಕಂಟ್ರೋಲ್ ಮೂಲಕ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಳು. ಈ ಘಟನೆಯ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಾನವನಿಗೆ ಹೆಚ್3ಎನ್8 ಹಕ್ಕಿಜ್ವರ – ಚೀನಾದಲ್ಲಿ ಮೊದಲ ಪ್ರಕರಣ ಪತ್ತೆ

    ಆತ್ಮಹತ್ಯಾ ದಾಳಿಗೆ ಕಾರಣವೇನು?
    ಬಲೂಚಿಸ್ತಾನ ಪಾಕಿಸ್ತಾನದಿಂದ ಹಲವು ವರ್ಷಗಳಿಂದ ಸ್ವಾತಂತ್ರ್ಯವನ್ನು ಕೇಳುತ್ತಿದೆ. ಇದರೊಂದಿಗೆ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಇದು ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯವಾಗಿದ್ದರೂ ಅಭಿವೃದ್ಧಿಯಲ್ಲಿ ಮುಂದುವರಿದಿಲ್ಲ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ.5 ರಷ್ಟು ಮಾತ್ರವೇ ಬಲೂಚಿಸ್ತಾನದಲ್ಲಿ ವಾಸವಿದ್ದಾರೆ.

    ಈ ಹಿಂದೆಯೂ ಬಲೂಚಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಬಿಎಲ್‌ಎ ಚೀನಾದ ನಾಗರಿಕ ಮೇಲೆ ದಾಳಿ ನಡೆಸಿದೆ. ಶಾರಿ ಬಲೋಚ್ ಕೂಡಾ ಬಲೂಚಿಸ್ತಾನದ ಹಿಂಸಾಚಾರದ ಬಗ್ಗೆ ತಿಳಿದಿದ್ದು, ಪ್ರತಿಕಾರ ತೀರಿಸಿಕೊಳ್ಳಲು ಆತ್ಮಹತ್ಯಾ ದಾಳಿ ನಡೆಸಿದ್ದಾಳೆ.