Tag: sugar cane

  • ಶಾರ್ಟ್ ಸರ್ಕ್ಯೂಟ್‍ನಿಂದ 6 ಎಕರೆ ಕಬ್ಬು ಬೆಂಕಿಗಾಹುತಿ!

    ಶಾರ್ಟ್ ಸರ್ಕ್ಯೂಟ್‍ನಿಂದ 6 ಎಕರೆ ಕಬ್ಬು ಬೆಂಕಿಗಾಹುತಿ!

    ಸಾಂದರ್ಭಿಕ ಚಿತ್ರ

    ಗದಗ: ಟ್ರಾನ್ಸ್ ಫಾರ್ಮರ್ ನಲ್ಲಾದ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಸುಮಾರು 6 ಎಕರೆ ಕಬ್ಬಿನ ಗದ್ದೆ ಧಗಧಗಿಸಿ ಉರಿದು, ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ.

    ಸೂಡಿ ಗ್ರಾಮದ ಶರಣಪ್ಪ ಮಾರನಸಬಸರಿ ಎಂಬ ರೈತನಿಗೆ ಸೇರಿದ್ದ ಕಬ್ಬಿನ ಜಮೀನು ಬೆಂಕಿಗೆ ಆಹುತಿಯಾಗಿದೆ. ಗುರುವಾರ ತಡರಾತ್ರಿ ಓವರ್ ಲೋಡ್ ವಿದ್ಯುತ್ ಪೂರೈಕೆಯಾದ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟು ಭಸ್ಮವಾಗಿದ್ದಲ್ಲದೇ ಅದರ ಕಿಡಿ ಪಕ್ಕದ ಕಬ್ಬಿನ ಜಮೀನಿಗೆ ಸಿಡಿದಿದೆ.  ಕಟಾವಿಗೆ ಬಂದಿದ್ದ ಪೈರಿಗೆ ಬೆಂಕಿ ತಗುಲಿದ್ದರಿಂದ ಇಡೀ 6 ಎಕರೆ ಜಮೀನಲ್ಲಿದ್ದ ಕಬ್ಬು ಧಗಧಗಿಸಿ ಉರಿಯತೊಡಗಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೋಣ, ಗಜೇಂದ್ರಗಡ ಹಾಗೂ ಕುಷ್ಟಗಿ ತಾಲೂಕಿನ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಕಬ್ಬು ಕಟಾವಿಗೆ ಬಂದಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು ಎನ್ನಲಾಗಿದೆ. ಘಟನೆ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಸಾಲಸೂಲ ಮಾಡಿ ಬೆಳೆದಿದ್ದ ಕಬ್ಬಿನ ಬೆಳೆ ಕಣ್ಣಮುಂದೆಯೇ ಬೆಂಕಿಗೆ ಆಹುತಿಯಾದರೂ, ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ರೈತ ಶರಣಪ್ಪ ಕಂಗಾಲಾಗಿದ್ದಾನೆ. ಅಲ್ಲದೇ ಒಂದೆರಡು ವಾರದಲ್ಲಿ ಕಟಾವಿಗೆ ಸಿದ್ಧವಾಗಿದ್ದ ಕಬ್ಬಿನ ಬೆಳೆ, ಏಕಾಏಕಿ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದಾನೆ. ಗಾಯದ ಮೇಲೆ ಬರೆ ಎಂಬಂತೆ ರೈತ ಶರಣಪ್ಪ ಕಣ್ಣಿರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೀಪಾವಳಿಗೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

    ದೀಪಾವಳಿಗೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

    ಗದಗ: ದೀಪಾವಳಿ ಹಬ್ಬಕ್ಕೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

    ಜೂಲಕಟ್ಟಿ ಗ್ರಾಮದ ಶ್ರೀಕಾಂತ ಗುಳದಾಳಿ ಎಂಬ ರೈತ ಗಜೇಂದ್ರಗಡ ಪಟ್ಟಣದ ಡಬಲ್ ರೋಡ್ ಪಕ್ಕ ಕಬ್ಬು ಮಾರಾಟ ಮಾಡುತ್ತಿದ್ದರು. ಸಾಕಷ್ಟು ಜನರು ಸೇರಿರುವುದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಏಕಾಏಕಿ ಬಂದ ಪೊಲೀಸರು ಕಬ್ಬನ್ನು ರಸ್ತೆಗೆ ಎಸೆದು ರೈತನ ತೊಡೆ, ಬೆನ್ನು, ಹಾಗೂ ಕೈಗೆ ಬಾಸುಂಡೆ ಬರುವ ಹಾಗೆ ಹೊಡೆಯುವ ಮೂಲಕ ರೈತನ ಮೇಲೆ ದರ್ಪ ತೋರಿದ್ದಾರೆ.

    ನಿಂಗಪ್ಪ ಹಲವಾಗಲಿ ಹಾಗೂ ಸಿ.ಎಸ್ ಹಾದಿಮನಿ ರೈತನಿಗೆ ಹಿಗ್ಗಾಮುಗ್ಗಾ ಹೊಡೆದ ಪೊಲೀಸ್ ಸಿಬ್ಬಂದಿ ಎಂದು ಹೇಳಲಾಗಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬಳ್ಳಾರಿ: ಆಕಸ್ಮಿಕ ಬೆಂಕಿ, ಲಕ್ಷಾಂತರ ಮೌಲ್ಯದ ಬಾಳೆ ಕಬ್ಬು ಬೆಂಕಿಗಾಹುತಿ !

    ಬಳ್ಳಾರಿ: ಆಕಸ್ಮಿಕ ಬೆಂಕಿ, ಲಕ್ಷಾಂತರ ಮೌಲ್ಯದ ಬಾಳೆ ಕಬ್ಬು ಬೆಂಕಿಗಾಹುತಿ !

    ಬಳ್ಳಾರಿ: ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ, ಕಬ್ಬು ಬೆಂಕಿಗಾಹುತಿಯಾದ ಬೆಂಕಿ ಅವಘಡ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನ ಗುಡಿ ಗೇಟ್ ಬಳಿ ನಡೆದಿದೆ.

    ಮೊದಲಿಗೆ ಶ್ರೀ ರಾಮನಗರ ಮಾಗಣಿ ಪ್ರದೇಶದ ಅಮೀರ್ ಎಂಬವರ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬೆಂಕಿ ಪಕ್ಕದ ಜಮೀನುಗಳಿಗೆ ವ್ಯಾಪಿಸಿಕೊಂಡಿತ್ತು. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಶೀಘ್ರವೇ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬರಗಾಲದ ವೇಳೆಯಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.