Tag: Sudeep Fans

  • ರಾತ್ರಿನೇ ಸಿಗೋಣವಾ ಎಂದ ಕಿಚ್ಚ; ಅಭಿಮಾನಿಗಳಿಗೆ ಸುದೀಪ್‌ ಪತ್ರ

    ರಾತ್ರಿನೇ ಸಿಗೋಣವಾ ಎಂದ ಕಿಚ್ಚ; ಅಭಿಮಾನಿಗಳಿಗೆ ಸುದೀಪ್‌ ಪತ್ರ

    ಕಿಚ್ಚ ಸುದೀಪ್ ಹುಟ್ಟುಹಬ್ಬವೆಂದ್ರೆ ಅವರ ಅಭಿಮಾನಿಗಳು ವಾರದ ಮುಂಚೆಯೇ ವಿಧ ವಿಧವಾಗಿ ಪ್ಲ್ಯಾನ್‌ ಮಾಡಿಕೊಂಡಿರ್ತಾರೆ. ಈ ಸಲವೂ ಅವರ ಫ್ಯಾನ್ಸ್‌ ಹುಟ್ಟುಹಬ್ಬಕ್ಕಾಗಿ ಕಾದು ಕುಳಿತಿದ್ದರು. ಈ ವೇಳೆ ನಟ ಸುದೀಪ್ ಅವರ ಅಭಿಮಾನಿಗಳಿಗೆ ಪತ್ರದ ಮೂಲಕ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಸೆಪ್ಟಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬ, ಈ ವರ್ಷ 52ನೇ ವಸಂತಕ್ಕೆ ಕಾಲಿಡಲಿದ್ದಾರೆ ಕಿಚ್ಚ ಸುದೀಪ್. ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕಾಯುವ ಅಭಿಮಾನಿಗಳಿಗೆ ನಿರಾಸೆ ಮಾಡಲಾರೆ. ಆದ್ರೆ ಸೆಪ್ಟಂಬರ್‌ 2ಕ್ಕೆ ಅಲ್ಲ, ಬದಲಾಗಿ ಒಂದರ ರಾತ್ರಿಯೇ ಸಿಗೋಣವಾ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಜೊತೆಗೆ ಸೆ.2ರಂದು ಮನೆಯಲ್ಲಿ ಇರೊಲ್ಲ ಹಾಗಾಗಿ ಮನೆ ಬಳಿ ಬಂದು ಯಾರೂ ಕಾಯುವುದು, ಗಲಾಟೆ ಮಾಡೋದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳಾಪುರಂ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಗೌತಮಿ ನಾಯಕಿ

    “ಸೆಪ್ಟಂಬರ್ 1ರ ರಾತ್ರಿ 12 ಗಂಟೆಗೆ ಗಡಿಯಾರದ ಶಬ್ದದ ಜೊತೆ ನಿಮ್ಮ ಶುಭಾಶಯಗಳೇ ನನ್ನ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟಂಬರ್ 1ರ ರಾತ್ರಿ ನಾವೆಲ್ಲ ಒಂದು ಕಡೆ ಸೇರೋಣ. ಜಾಗ ಎಲ್ಲಿ, ಹೇಗೆ..? ಅನ್ನೋದನ್ನ ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟಂಬರ್ 2ರಂದು ನಾನು ಊರಿನಲ್ಲಿ ಇರುವುದಿಲ್ಲ. ಯಾರೂ ದಯವಿಟ್ಟು ಮನೆ ಹತ್ತಿರ ಬಂದು ಕಾಯುವುದು ಬೇಡ. ನಾನಿರುವುದಿಲ್ಲ ಎಂದು ಹೇಳಿದಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸ್ಸಿಗೆ ನೋವಾಗುತ್ತೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ, ನೀವು ನನ್ನನ್ನ ಅರ್ಥಮಾಡಿಕೊಳ್ಳುವಿರೆಂದು. ಅದು ಬಿಟ್ಟರೆ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ, ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ. ಎಂದು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ ನಟ ಕಿಚ್ಚ ಸುದೀಪ್. ಇದನ್ನೂ ಓದಿ: ಮದರಾಸಿ ಟ್ರೈಲರ್‌ ರಿಲೀಸ್ – ಮಾಸ್ ಲುಕ್‌ನಲ್ಲಿ ಶಿವಕಾರ್ತಿಕೇಯನ್

  • ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

    ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

    – ದರ್ಶನ್‌-ನಾನು ಕಷ್ಟಪಟ್ಟು ಮೇಲೆ ಬಂದಿದ್ದೇವೆ
    -‌ ಹಿಂದೆ ದರ್ಶನ್‌ ಫ್ಯಾನ್ಸ್‌ಗೆ ಬೈಬೇಡಿ ಅಂತ ನಾನೇ ಹೇಳಿದ್ದೆ ಎಂದ ಕಿಚ್ಚ

    ಬೆಂಗಳೂರು: ಯಶ್, ದರ್ಶನ್ (Darshan), ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಅದರ ಹೊರತಾಗಿ ನಾವು ಯಾರಿಗೂ ಟಾಂಟ್‌ ಕೊಡಲ್ಲ, ಯಾಕೆ ಕೊಡಬೇಕು ಎಂದು ನಟ ಕಿಚ್ಚ ಸುದೀಪ್‌ (Kichcha Sudeep) ಹೇಳಿದ್ದಾರೆ.

    ಮ್ಯಾಕ್ಸ್‌ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಮಾತನಾಡಿದ ಕಿಚ್ಚ ಸುದೀಪ್‌, ʻಬಾಸ್ ಕಾಲ ಮುಗಿತು ಮ್ಯಾಕ್ಸ್ ಮಾಸ್ ಆಟ ಶುರುʼ ಕೇಕ್ ಕಂಟ್ರೋವರ್ಸಿಗೆ (Cake Controversy) ಕ್ಲಾರಿಟಿ ಕೊಟ್ಟಿದ್ದಾರೆ.

    ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಇದೆ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳ್ದಾಗ ನಾನು ಫ್ಯಾನ್ಸ್‌ಗೆ ಬೈಬೇಡಿ ಅಂದಿದ್ದೆ. ಅವರು ನೋವಿನಲ್ಲಿದ್ದಾರೆ ಏನ್‌ ಮಾತಡಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳಿದೆ. ನಾವ್ಯಾಕೆ ಟಾಂಟ್‌ ಕೊಡಬೇಕು? ಯಶ್, ಶಿವಣ್ಣ, ಧ್ರುವ ಉಪ್ಪಿಗೆ ಬಾಸ್ ಅಂತ ಕರಿಯೋದಿಲ್ವಾ? ನನಗೂ ದರ್ಶನ್‌ಗೂ ಏನು ಇಲ್ಲ ಸರ್. ದರ್ಶನ್ ನಾನು ಇಬ್ರು ಕಷ್ಟ ಪಟ್ಟು ಮೇಲೆ ಬಂದಿದ್ದೀವಿ. ನನ್ನ ಫ್ಯಾನ್ಸ್ ಎಲ್ಲಾ ಹೀರೋಗಳ ಸಿನಿಮಾ ನೋಡ್ತಾರೆ. ಕೆಟ್ಟ ಅಹಂಕಾರ ನಮ್ಮಲಿ ಇದೆ ಅಂದು ಕೊಂಡಿರೋದೇ ತಪ್ಪು ಎಂದು ಹೇಳಿದ್ದಾರೆ.

    ಟಾಂಟ್ ಯಾಕ್ ಕೊಡ್ಬೇಕು ನಾವು.. ನಾವೇನು ಚಕ್ರವರ್ತಿಗಳಾ..? ಸಿನಿಮಾ ಮಾಡೋಣ ಖುಷಿ ಪಡೋಣ ಅಷ್ಟೇ. ಯಾರಿಗೆ ಟಾಂಗ್ ಕೊಡ್ತಾರೋ..? ಯಶ್ ಗೆ ಯಶ್ ಬಾಸ್ ಅಂತಾ ಕರಿಯೊಲ್ವಾ..? ಧ್ರುವಗೆ ಧ್ರುವ ಬಾಸ್ ಅಂತಾ ಕರಿಯಲ್ವಾ? ಶಿವಣ್ಣಗೆ ಶಿವಣ್ಣ ಬಾಸ್ ಅಂತಾ ಕರಿಯಲ್ವಾ? ಉಪ್ಪಿ ಬಾಸ್ ಅಂತಾ ಕರಿಯಲ್ವಾ..? ಒಂದು ಸಿನಿಮಾ ಹಿಟ್‌ ಆದಾಗ ಇನ್ನಷ್ಟು ಒಳ್ಳೆ ಸಿನಿಮಾ ಮಾಡೋಣ, ಚಿತ್ರರಂಗದ ಬೆಳವಣಿಗೆಗೆ ಶ್ರಮಿಸೋಣ. ನಾನು ನಮ್ ತಂದೆಗೆ ಬಾಸ್ ಅಂತಾ ಕರಿಯೋದು.. ಕನ್ನಡ ಚಿತ್ರರಂಗ ಮುಖ್ಯನಾ..? ನಾನು ಮುಖ್ಯನಾ..? ಇದೆಲ್ಲವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸುದೀಪ್‌ ಹೇಳಿದ್ದಾರೆ.

  • ಇಂದು ಕಿಚ್ಚನ ಹುಟ್ಟುಹಬ್ಬ: ಸೆಲೆಬ್ರೆಷನ್‌ಗೆ ಜಯನಗರದಲ್ಲಿ ಭರ್ಜರಿ ತಯಾರಿ

    ಇಂದು ಕಿಚ್ಚನ ಹುಟ್ಟುಹಬ್ಬ: ಸೆಲೆಬ್ರೆಷನ್‌ಗೆ ಜಯನಗರದಲ್ಲಿ ಭರ್ಜರಿ ತಯಾರಿ

    ಬೆಂಗಳೂರು: ಇಂದು ಅಭಿನಯ ಚಕ್ರವರ್ತಿ ಸುದೀಪ್ (Sudeep) ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಲ್ಲಿ ಸೆಲೆಬ್ರೆಷನ್ ಜೋರಾಗಿದೆ. ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ (MES Ground Jayanagar) ಬರ್ತಡೇಗೆ ಭರ್ಜರಿ ತಯಾರಿ ನಡೆದಿದೆ.

    ಸ್ಯಾಂಡಲ್‌ವುಡ್ ಬಾದ್‌ಶಾ (Sandalwood Badshaah) ಕಿಚ್ಚ ಸುದೀಪ್ ಇಂದು (ಸೆ.2)ರಂದು ತಮ್ಮ 51ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಮೂಲಕ 50 ಮುಗಿದು 51ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.ಇದನ್ನೂ ಓದಿ: ಅಪರಾಧಿಗಳು ನಿರ್ಭೀತಿಯಿಂದ ಓಡಾಟ, ಸಂತ್ರಸ್ತರ ಪರದಾಟ: ದ್ರೌಪದಿ ಮುರ್ಮು ಕಳವಳ

    ಇತ್ತೀಚಿಗಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸುದೀಪ್ ಮನೆಯ ಬಳಿ ಯಾವುದೇ ಆಚರಣೆ ಇರುವುದಿಲ್ಲ ಎಂಬ ಮನವಿ ಮಾಡಿದ್ದರೂ, ಮಧ್ಯರಾತ್ರಿಯೇ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಅಲ್ಲಿ ಯಾವುದೇ ಸೆಲೆಬ್ರೇಷನ್‌ಗೂ ಕೂಡ ಅವಕಾಶ ಇರಲಿಲ್ಲ. ಪೊಲೀಸರು ಸುದೀಪ್ ಮನೆಯ ಬಳಿಯ ರಸ್ತೆಯನ್ನ ಬಂದ್ ಮಾಡಿದ್ದರು. ಸುದೀಪ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಬಾಸ್ ಬಾಸ್ ಕಿಚ್ಚ ಬಾಸ್ ಎಂದು ಘೋಷಣೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

    ಈ ವರ್ಷ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದು, ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಸಕಲ ತಯಾರಿ ನಡೆದಿದೆ. ಇದೇ ವೇಳೆ ಸುದೀಪ್ ಫ್ಯಾನ್ಸ್‌ಗೆ ಸರ್‌ಪ್ರೈಸ್‌ ನೀಡಲಿದ್ದಾರೆ. ಬಿಲ್ಲಾರಂಗಾ ಬಾದ್‌ಶಾ ಸಿನಿಮಾ ಟೀಸರ್ ರಿಲೀಸ್ ಆಗಲಿದೆ. ಜೊತೆಗೆ ಮ್ಯಾಕ್ಸ್ ಸಿನಿಮಾದ ಸಾಂಗ್ ಕೂಡ ರಿಲೀಸ್ ಮಾಡಲಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಪ್ರೊಡಕ್ಷನ್‌ನಲ್ಲಿ ಸುದೀಪ್ ನಿರ್ದೇಶನದ ಹೊಸ ಸಿನಿಮಾ ಕೂಡ ಇಂದು ಅನೌನ್ಸ್ ಆಗಲಿದೆ.ಇದನ್ನೂ ಓದಿ: ಸಿಎಂ ಬಳಿಕ ಹಲವು ಕೈ ನಾಯಕರಿಗೆ ಪ್ರಾಸಿಕ್ಯೂಷನ್‌ ಭೀತಿ

    ಬರ್ತ್ಡೇಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಸ್ಯಾಂಡಲ್‌ವುಡ್ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತ್ಡೇಗೆ ಪ್ರೀತಿಯಿಂದ ಶುಭ ಕೋರಿದ್ದಾರೆ. ಸೃಜನ್ ಲೋಕೇಶ್ (Srujan Lokesh), ಇಂದ್ರಜಿತ್ ಲಂಕೇಶ್ ಸೇರಿ ಹಲವರು ಸುದೀಪ್ ನಿವಾಸಕ್ಕೆ ತೆರಳಿ ಶುಭ ಕೋರಿದ್ದಾರೆ.

  • ಗೌರವ ಡಾಕ್ಟರೇಟ್ ನಿರಾಕರಿಸಿದ್ದು ಯಾಕೆ ಎಂದು ಹೇಳಿ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಸುದೀಪ್

    ಗೌರವ ಡಾಕ್ಟರೇಟ್ ನಿರಾಕರಿಸಿದ್ದು ಯಾಕೆ ಎಂದು ಹೇಳಿ ಮ್ಯಾಕ್ಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಸುದೀಪ್

    ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯವು (Tumkuru University) ನಟ ಸುದೀಪ್ (Actor Sudeep) ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಡಾಕ್ಟರೇಟ್ (Doctorate) ಘೋಷಣೆ ಮಾಡಿತ್ತು. ಆದರೆ ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ಡಾಕ್ಟರೇಟ್‌ನ್ನು ನಿರಾಕರಿಸಿದ್ದರು. ಅಂದು ಸುದೀಪ್ ಅವರ ಆ ನಡೆ ಅಭಿಮಾನಿಗಳಿಗೆ ಇಷ್ಟವಾಗಿತ್ತು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ನಾನು ಅಂತದ್ದೇನು ಮಾಡಿಲ್ಲ. ಹತ್ತಾರು ಸಿನಿಮಾ ಮಾಡಿದ್ದೀನಿ ಅಷ್ಟೇ, ನಾನು ಇನ್ನೂ ಲೈಫ್‌ಲ್ಲಿ ಮಾಡೋದು ತುಂಬಾ ಇದೆ. ನನ್ನ ಪ್ರಕಾರ ನಾನು ಏನಾದರೂ ಮಾಡಿದ್ದೀನಿ ಅಂತ ಅನಿಸಿದಾಗ ನಾನೇ ಪತ್ರ ಬರೆದು ಡಾಕ್ಟರೇಟ್ ಕೊಡಿ ಎಂದು ಕೇಳ್ತೀನಿ. ಆದರೆ ಅವರು ಕೊಟ್ಟಿರುವ ಡಾಕ್ಟ್ರೇಟ್ ಮೇಲೆ ನನಗೆ ತುಂಬಾ ಗೌರವವಿದೆ ಎಂದರು.ಇದನ್ನೂ ಓದಿ: ಸಿನಿಮಾಗೆ ಬರೋಲ್ಲ, ನೋಡಲ್ಲ ಅನ್ನೋವಾಗ್ಲೆ ಗತ್ತು ಗಾಂಭೀರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾ: ದರ್ಶನ್‌ ಫ್ಯಾನ್ಸ್‌ಗೆ ಕಿಚ್ಚನ ಖಡಕ್‌ ರಿಪ್ಲೈ

    ಸೆ.2 ರಂದು ಮ್ಯಾಕ್ಸ್ ರಿಲೀಸ್ (Max Release) ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು. ಅದೇ ದಿನ ತನ್ನ ಹುಟ್ಟು ಹಬ್ಬ ಇರುವ ಕಾರಣ, ಅದೇ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮನೆಯ ಬಳಿ ಯಾರೂ ಬರ್ತ್ ಡೇ ಆಚರಿಸೋದು ಬೇಡ. ವರ್ಷ ಕಳೆದ ಹಾಗೇ ಮನೆಯ ಬಳಿ ಸೇರುವ ಅಭಿಮಾನಿಗಳು ಜಾಸ್ತಿಯಾಗುತ್ತಿದ್ದಾರೆ. ನನ್ನ ಅಕ್ಕ-ಪಕ್ಕದ ಮನೆಯವರಿಗೆ ಸಮಸ್ಯೆಯಾಗುತ್ತದೆ. ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಈ ಬಾರಿಯ ಬರ್ತ್ ಡೇ ಪ್ಲ್ಯಾನ್‌ ಮಾಡಲಾಗಿದೆ. ಅಂದು ಬೆಳಗ್ಗೆ 10 ರಿಂದ 12 ರವರೆಗೆ ಸಮಯ ಇದೆ. ಆದರೆ ಎಲ್ಲರನ್ನೂ ಮೀಟ್ ಮಾಡುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

    ಕಳೆದ ವರ್ಷ ತುಂಬಾ ಅನಾನುಕೂಲ ಉಂಟಾಗಿ ಬ್ಯಾರಿಕೇಡ್ ಒಡೆದು ಹೋಯಿತು. ಈ ಬಾರಿ ಅದೇ ರೀತಿ ಆಗೋದು ಬೇಡ. ಬರ್ತ್ ಡೇ ದಿನ ಸಿನಿಮಾ ಅನೌನ್ಸ್ ಮಾಡ್ತೀನಿ. ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಸೆ.2ಕ್ಕೆ ಮ್ಯಾಕ್ಸ್ ಅಂತ ಸುದ್ದಿ ಹರಿದಾಡ್ತಿತ್ತು ಅವತ್ತೇ ಬರುತ್ತಾ? ಬರಲ್ವಾ ? ಅನ್ನೋದು ಹೇಳಕ್ಕೂ ಸಾಧ್ಯ ಇಲ್ಲ. ಸದ್ಯದಲ್ಲೇ ಈ ವಿಷಯದ ಬಗ್ಗೆ ಸ್ಷಷ್ಟನೆ ನೀಡುತ್ತೇವೆ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳು ಸೆ.2 ರಂದು ಸುದೀಪ್ ಅವರ ಸಿನಿಮಾಗೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಹೊರಬರಲಿದೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್