Tag: Subudhendra Tirtha Sri

  • ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಸಪ್ತರಾತ್ರೋತ್ಸವಕ್ಕೆ ಚಾಲನೆ

    ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಸಪ್ತರಾತ್ರೋತ್ಸವಕ್ಕೆ ಚಾಲನೆ

    ರಾಯಚೂರು: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಇಂದಿನಿಂದ ಏಳುದಿನಗಳ ಕಾಲ ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

    ಗೋ, ಗಜ,ಅಶ್ವ, ಧಾನ್ಯ,ಲಕ್ಷ್ಮಿ ಪೂಜೆಯೊಂದಿಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಆಗಸ್ಟ್ 8 ರಿಂದ 14 ರವರೆಗೆ ಏಳುದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದ್ದು ಆಗಸ್ಟ್ 10 ಕ್ಕೆ ಪೂರ್ವಾರಾಧನೆ, 11 ಕ್ಕೆ ಮಧ್ಯಾರಾಧನೆ, 12 ಕ್ಕೆ ಉತ್ತರಾರಾಧನೆ ನಡೆಯಲಿದೆ. ಇಂದಿನಿಂದ ಏಳು ದಿನಕಾಲ ರಾಯರ ಮಠದಲ್ಲಿ ವಿಶೇಷ ಪೂಜೆ ,ರಥೋತ್ಸವ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಉತ್ತರಾರಾಧನೆ ದಿನ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ. ಆರಾಧಾನ ಮಹೋತ್ಸವ ಹಿನ್ನೆಲೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಬರುವ ನಿರೀಕ್ಷೆಯಿದೆ. ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮಂತ್ರಾಲಯ ರಾಯರ ಮಠ ಭಕ್ತರನ್ನ ಆಕರ್ಷಿಸುತ್ತಿದೆ.

    ಶ್ರೀಗಳಿಂದ ಗೋಪೂಜೆ

     

    ಸುಬುಧೇಂದ್ರ ತೀರ್ಥ ಶ್ರೀಗಳಿಂದ ಧ್ವಜಾರೋಹಣ
  • ಕೊರೊನಾ ಭೀತಿ – ಮಂತ್ರಾಲಯಕ್ಕೆ ಯಾರೂ ಬರದಂತೆ ಸುಬುಧೇಂದ್ರತೀರ್ಥ ಶ್ರೀ ಮನವಿ

    ಕೊರೊನಾ ಭೀತಿ – ಮಂತ್ರಾಲಯಕ್ಕೆ ಯಾರೂ ಬರದಂತೆ ಸುಬುಧೇಂದ್ರತೀರ್ಥ ಶ್ರೀ ಮನವಿ

    ರಾಯಚೂರು: ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಳ ಹಿನ್ನೆಲೆ ರಾಯರ ಭಕ್ತರಿಗೆ ಮಂತ್ರಾಲಯಕ್ಕೆ ಬರದಂತೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

    ಮಂತ್ರಾಲಯಕ್ಕೆ ಭಕ್ತರು ಆಗಮಿಸದೇ ಶ್ರೀಮಠದ ಶಾಖಾ ಮಠದಲ್ಲೇ ಭಕ್ತಿ ಸಮರ್ಪಿಸಬೇಕು. ದೇಶದ ನಾನಾ ಕಡೆ ಕೊರೊನಾ ಭೀತಿ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಶ್ರೀಮಠಕ್ಕೆ ಭಕ್ತರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತ ಶ್ರೀಗಳು ಹೇಳಿದ್ದಾರೆ.

    ಮಠದಲ್ಲಿ ಎಂದಿನಂತೆಯೇ ಪೂಜೆ ಪುನಸ್ಕಾರಗಳು ನಡೆಯಲಿವೆ. ಕೊರೊನಾ ವೈರಸ್ ಹಾವಳಿ ಕೊನೆಗೊಂಡು ಪರಿಸ್ಥಿತಿ ಸಹಜತೆಗೆ ಮರಳಬೇಕಾಗಿದೆ. ಅಲ್ಲಿಯವರೆಗೂ ಭಕ್ತರಿಗೆ ದರ್ಶನವಕಾಶ ಸಂಪೂರ್ಣ ನಿಷೇಧಿಸಲಾಗಿದೆ ಅಂತ ಪೀಠಾಧಿಪತಿ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

    ಇದುವರೆಗೆ ವಿದೇಶದಿಂದ ಬರುವ ಭಕ್ತರು ಹಾಗೂ ನೆಗಡಿ ಕೆಮ್ಮು ಇರುವವರು ಮಾತ್ರ ಬರಬೇಡಿ ಎಂದು ಮಠದ ಆಡಳಿತ ಮಂಡಳಿ ಸೂಚಿಸಿತ್ತು. ಅಲ್ಲದೆ ಭಕ್ತರಿಗೆ ಪಂಚಾಮೃತ ವಿತರಣೆ ನಿಲ್ಲಿಸಿತ್ತು. ಈಗ ಭೀತಿ ಹೆಚ್ಚಾಗಿರುವುದರಿಂದ ಯಾರೂ ಮಠಕ್ಕೆ ಬರುವುದು ಬರಬೇಡಿ ಎಂದು ಶ್ರೀಗಳು ಮನವಿ ಮಾಡಿದ್ದಾರೆ.