Tag: Subudhendra teertha shree

  • ಬಾಲ್ಯದಿಂದಲೂ ಪೇಜಾವರ ಶ್ರೀಗಳ ಜೊತೆ ತುಂಬಾ ಒಡನಾಟವಿತ್ತು: ಸುಬುಧೇಂದ್ರತೀರ್ಥ ಸ್ವಾಮೀಜಿ

    ಬಾಲ್ಯದಿಂದಲೂ ಪೇಜಾವರ ಶ್ರೀಗಳ ಜೊತೆ ತುಂಬಾ ಒಡನಾಟವಿತ್ತು: ಸುಬುಧೇಂದ್ರತೀರ್ಥ ಸ್ವಾಮೀಜಿ

    ರಾಯಚೂರು: ಪೇಜಾವರ ಶ್ರೀಗಳ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರು ಕೃಷ್ಣೈಕ್ಯರಾಗಿರುವ ಬಗ್ಗೆ ತಿಳಿದು ಆಘಾತವಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಗಳು ಕಂಬನಿ ಮಿಡಿದಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸುಬುಧೇಂದ್ರತೀರ್ಥ ಶ್ರೀಗಳು, ಪೇಜಾವರ ಶ್ರೀಗಳ ಅಗಲಿಕೆಯಿಂತ ಆಘಾತವಾಗಿದೆ. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರು ಕಿರಿಯ ವಯಸ್ಸಿನಲ್ಲೇ ಸಾಮಾಜಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅಲ್ಲದೆ ದೇಶದ ವಿವಿಧ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಧಾರ್ಮಿಕವಾಗಿ ಸಲಹೆ ಸೂಚನೆಗಳನ್ನ ನೀಡಿ ದೇಶದ ಅಭಿವೃದ್ಧಿಗೆ, ಒಳಿತಿಗೆ ಶ್ರೀಗಳು ತಮ್ಮ ಅಮೂಲ್ಯ ಸೇವೆ ಸಲ್ಲಿಸಿರುವವರು ಎಂದು ಪೇಜಾವರ ಶ್ರೀಗಳ ಸೇವೆಯನ್ನು ನೆನೆದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ

    ಮಂತ್ರಾಲಯ ಮಠಕ್ಕೂ ಪೇಜಾವರ ಮಠಕ್ಕೂ ಸುಮಾರು 5 ತಲೆಮಾರಿನ ಸಂಬಂಧವಿದೆ. ನಮ್ಮ ಬಾಲ್ಯದಿಂದಲೂ ಪೇಜಾವರ ಶ್ರೀಗಳ ಜೊತೆ ತುಂಬಾ ಒಡನಾಟವಿತ್ತು. ಪೂರ್ವಾಶ್ರಮದಲ್ಲಿದ್ದಾಗ ಅವರ ಜೊತೆ ಅನುಬಂಧ ಹೆಚ್ಚಿತ್ತು. ಅವರ ಈ ಇಹಲೋಕ ಯಾತ್ರೆ ಪೂರ್ಣವಾಗಿರುವುದನ್ನ ಜೀರ್ಣಿಸಿಕೊಳ್ಳಲು ನಮಗೆ ಕಷ್ಟವಾಗುತ್ತಿದೆ ಎಂದು ದು:ಖ ವ್ಯಕ್ತಪಡಿಸಿದರು. ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

    ಪೇಜಾವರ ಶ್ರೀಗಳು ಇಲ್ಲದೇ ಶ್ರೀ ಮಠದ ಕಾರ್ಯಕ್ರಮ ಮಾಡಿದ್ದೇ ಇಲ್ಲ. ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮಗಳಿಗೆ ಪೇಜಾವರ ಶ್ರೀಗಳು ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ವೇಳೆ ಸಮಾಜದ ಬಗ್ಗೆ ಅನೇಕ ಹಿತ ನುಡಿಗಳನ್ನು ನಮಗೆ ತಿಳಿಸಿದ್ದರು. ಅವರು ಯಾವಾಗಲೂ ಹಿಂದೂ ಸಂಘಟನೆ, ಸಮಾಜದ ವಿಚಾರದಲ್ಲಿ ನಮಗೆ ನೀವು ಉತ್ತರಾಧಿಕಾರಿಗಳು ಇದ್ದಂತೆ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದನ್ನ ಸುಬುಧೇಂದ್ರತೀರ್ಥ ಶ್ರೀಗಳು ಸ್ಮರಿಸಿದರು.

    ಇಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಅವರು ಉಡುಪಿಗೆ ಹೋದಾಗ ಶ್ರೀಗಳಿಗೆ ಅನಾರೋಗ್ಯ ಕಾಡಿತ್ತು. ಆಗ ನಾವು ಕೂಡ ಉಡುಪಿ ಮಠಕ್ಕೆ ತೆರೆಳಿ ಶ್ರೀಗಳನ್ನು ಭೆಟಿ ಮಾಡಿ, ಆರೋಗ್ಯ ವಿಚಾರಿಸಿದ್ದೆವು. ರಾಜ್ಯದಲ್ಲೆಡೆ ಇರುವ ನಮ್ಮ ಶ್ರೀಮಠದ ಶಾಖಾ ಮಠಗಳಲ್ಲಿ ಅವರ ಆರೋಗ್ಯ ಸುಧಾರಣೆಗೆ ಹೋಮ, ಹವನ, ಪ್ರಾರ್ಥನೆ ಮಾಡಿಸಿದ್ದೆವು. ಪೇಜಾವರ ಶ್ರೀಗಳನ್ನು ಆಸ್ಪತ್ರೆಯಿಂದ ಉಡುಪಿ ಮಠಕ್ಕೆ ಕರೆತರುವಾಗ ವರುಣ ದೇವ ಕೂಡ ಹನಿ ಹನಿ ಮಳೆ ಸುರಿಸಿದನು. ಇದು ಶ್ರೀಗಳ ತಪಸ್ಸು, ಸಾಧನೆ, ಒಳ್ಳೆತನಕ್ಕೆ ಸಾಕ್ಷಿ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

    ಪೇಜಾವರ ಶ್ರೀಗಳಿಗೆ ಮುಖ್ಯವಾಗಿ ನಮ್ಮ ಹಿಂದೂ ಸಂಸ್ಕೃತಿ, ಸಮಾಜ ಸುಧಾರಣೆಗೊಳ್ಳಬೇಕು ಎಂಬ ಆಸೆ ಇತ್ತು. ಅದೇರೀತಿ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಎಲ್ಲೆಡೆ ಶಾಂತಿ ನೆಲೆಗೊಳ್ಳಬೇಕು, ಮತ-ಮತಗಳ ಸಾಮರಸ್ಯ ಉಂಟಾಗಬೇಕು ಎನ್ನುವ ಹಲವು ಸಾಮಾಜಿಕ ಕಳಕಳಿಗಳ ಬಗ್ಗೆ ಶ್ರೀಗಳು ತಿಳಿಸಿದ್ದರು. ನಾವೆಲ್ಲರೂ ಅವರ ಅಭಿಮಾನಿಗಳು, ಅವರ ಒಡನಾಟ ಇರುವಂತವರು. ಅವರಿಂದ ಸಹಾಯ ಪಡೆದಂತಹ ಪ್ರತಿಯೊಬ್ಬರು ಕೂಡ ಅವರ ಆಶಯಗಳ ಬಗ್ಗೆ, ಅನಿಸಿಕೆಗಳ ಬಗ್ಗೆ, ಯೋಜನೆಗಳ ಬಗ್ಗೆ ಎಲ್ಲರೂ ಕೂಡಿ ಹೆಜ್ಜೆ ಇಟ್ಟಾಗ ಅವರ ಆತ್ಮಕ್ಕೆ ಸಂತೋಷವಾಗುತ್ತದೆ ಎಂದು ಪೇಜಾವರ ಶ್ರೀಗಳ ಸೇವೆ, ಆಸೆಗಳ ಬಗ್ಗೆ ಸುಬುಧೇಂದ್ರತೀರ್ಥ ಶ್ರೀಗಳು ಹಂಚಿಕೊಂಡರು.

  • ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಗುರುವೈಭವೋತ್ಸವ

    ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಗುರುವೈಭವೋತ್ಸವ

    -ಅಯೋಧ್ಯ ರಾಮ ಮಂದಿರದ ಕುರಿತು ಸುಬುಧೇಂದ್ರ ತೀರ್ಥ ಶ್ರೀಗಳ ಮಾತು
    -ಯೋಧರಿಗಾಗಿ ರುದ್ರಯಾಗ

    ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವೈಭೋತ್ಸವ ಕಾರ್ಯಕ್ರಮಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಚಾಲನೆ ನೀಡಿದ್ದು, ಇಂದಿನಿಂದ ಆರು ದಿನಗಳ ಕಾಲ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿದೆ.

    ಗುರು ರಾಯರ 424ನೇ ವರ್ಧಂತೋತ್ಸವ ಹಾಗು 398ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದೆ. ಈ ಕಾರ್ಯಕ್ರಮಗಳು ಮಾರ್ಚ್ 13ರ ವರೆಗೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೂ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಈ ಆರು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯುತ್ತವೆ. ಹಾಗೆಯೇ ಪ್ರತಿದಿನ ಸಂಜೆ ಅನುಗ್ರಹ ಪ್ರಶಸ್ತಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೆ ಕೊನೆಯ ದಿನ ನಾದಹಾರ ಕಾರ್ಯಕ್ರಮ ನಡೆಯಲಿದ್ದು, ಭಜನಾ ಮಂಡಳಿಗಳ ನೂರಾರು ಸಂಗೀತಗಾರರು ಒಟ್ಟಿಗೆ ರಾಯರ ಕೀರ್ತನೆ ಹಾಡಲಿದ್ದಾರೆ.

    ಈ ವೈಭವೋಪೇತ ಕಾರ್ಯಕ್ರಮವನ್ನು ವೀಕ್ಷಿಸಲು ಹಾಗೂ ರಾಯರ ಆಶೀರ್ವಾದ ಪಡೆಯಲು ಗುರುವೈಭವೋತ್ಸವಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

    ಅಲ್ಲದೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಬಳಿಕ, ಸುಬುಧೇಂದ್ರ ತೀರ್ಥ ಶ್ರೀಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿದರು. ಅಯೋಧ್ಯ ಸಂಧಾನಕ್ಕೆ ಸಂಧಾನಕಾರರನ್ನ ನೇಮಿಸಿರುವುದು ಸ್ವಾಗತರ್ಹ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ರಾಮ ಜನಿಸಿದ ನಾಡಿನಲ್ಲಿ ಮಂದಿರ ನಿರ್ಮಾಣವಾಗಬೇಕು. ಆದ್ರೆ ಶಾಂತಿ ಮತ್ತು ಸೌಹಾರ್ದತೆಯಿಂದ ಮಂದಿರ ನಿರ್ಮಾಣವಾಗಬೇಕು. ನ್ಯಾಯಾಲಯ ಈ ನಿಟ್ಟಿನಲ್ಲಿ ಸಂಧಾನ ಸಮಿತಿ ರಚಿಸಿರುವುದನ್ನ ಸ್ವಾಗತಿಸುತ್ತೇವೆ ಎಂದರು. ಇದನ್ನೂ ಓದಿ:ಸಂಧಾನದ ಮೂಲಕವೇ ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳಿ- ಸುಪ್ರೀಂ ಕೋರ್ಟ್

    ನಿವೃತ್ತ ನ್ಯಾಯಮೂರ್ತಿ ಎಫ್.ಎಂ ಇಬ್ರಾಹಿಂ ಖಲೀಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಸಂಧಾನ ತಜ್ಞ ವಕೀಲ ಶ್ರೀರಾಮ್ ಪಾಂಚುರನ್ನ ಸಂಧಾನಕಾರರಾಗಿ ಆಯ್ಕೆ ಮಾಡಿರುವುದಕ್ಕೆ ಸಹಮತ ಸೂಚಿಸಿದರು. ಹಾಗೆಯೇ ದೇಶದಲ್ಲಿ ಶಾಂತಿ ನೆಲಸಲು, ಯೋಧರ ರಕ್ಷಣೆಗಾಗಿ ಶ್ರೀ ಮಠದಲ್ಲಿ ಮಾರ್ಚ್ 12 ರಂದು ಮಹಾರುದ್ರ ಯಾಗವನ್ನು ನಡೆಸಲಾಗುವುದು. ದೇಶದ ನಾನಾ ಕಡೆಯಿಂದ 200 ಜನ ರುದ್ರಯಾಗ ಮಾಡುವವರು ಆಗಮಿಸಲಿದ್ದಾರೆ ಅಂತ ಸುಬುಧೇಂದ್ರ ತೀರ್ಥ ಶ್ರೀಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv