Tag: Subrash Rathoda

  • ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಕಲಬುರಗಿ: ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ ಎಂದು ಚಿಂಚೋಳಿ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ಅವರು ಹೇಳಿದ್ದಾರೆ.

    ಚಿಂಚೋಳಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಉಮೇಶ್ ಜಾಧವ್ ಅವರಿಗೆ ಗರ್ವ ಹೆಚ್ಚಾಗಿದೆ ಎಂದು ಕಿಡಿಕಾರಿದರು.

    ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್‍ಗೆ ಕ್ಷೇತ್ರದ ಯಾವ ಪ್ರದೇಶದ ಬಗ್ಗೆಯೂ ಗೊತ್ತಿಲ್ಲ. ಕೇವಲ ಅವನಿಗಷ್ಟೇ ಅಲ್ಲ ಅವರಪ್ಪ ಉಮೇಶ್ ಜಾಧವ್‍ಗೂ ಕ್ಷೇತ್ರದ ಬಗ್ಗೆ ಅರಿವಿಲ್ಲ. ಕೊಂಚಾವರಂನಲ್ಲಿ ಇಸ್ಪಿಟ್ ಆಡಿಸಿದ್ದು ಬಿಟ್ಟರೇ ಅವರು ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ಉಮೇಶ್ ಜಾಧವ್‍ಗೆ ಗರ್ವ ಎಷ್ಟು ಹೆಚ್ಚಾಗಿದೆ ಅಂದರೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ಸ್ಪರ್ಧಿಸುವ ಭಸ್ಮಾಸುರನಾಗಿದ್ದಾನೆ. ಈ ಭಸ್ಮಾಸುರನಿಗೂ ಒಂದು ದಿನ ಅಂತ್ಯವಿದೆ  ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

    ಈ ಚುನಾವಣೆಯಲ್ಲಿ ಸುಭಾಷ್ ರಾಥೋಡ್ ಮತ್ತು ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮಧ್ಯೆ ನಡೆಯುತ್ತಿದೆ. ಆದರೆ ಬಿಜೆಪಿಯವರು ಜಾಧವ್ ವರ್ಸಸ್ ಖರ್ಗೆ ಚುನಾವಣೆ ಎಂದು ಹೇಳುತ್ತಿದ್ದಾರೆ. ಚಿಂಚೋಳಿಯ ಹಲವು ಹೋರಾಟಗಳಲ್ಲಿ ಭಾಗವಹಿಸಿ ಕ್ಷೇತ್ರದ ಬಗ್ಗೆ ತಿಳಿದುಕೊಂಡಿದ್ದೇನೆ. 2008ರಲ್ಲಿ ಮೀಸಲು ಕ್ಷೇತ್ರವಾದ ಬಳಿಕವೂ ಸ್ಪರ್ಧೆಗೆ ಇಚ್ಚಿಸದೇ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.