Tag: Sub Registrar

  • ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ

    ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ

    ಬೆಂಗಳೂರು: ರಾಜ್ಯದ ಸಬ್‌ ರಿಜಿಸ್ಟರ್ ಕಚೇರಿಗಳಲ್ಲಿ (Sub-Registrar Office) ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಕಡ್ಡಾಯ. ನಿಮ್ಮ ಯಾವುದಾದರೊಂದು ದಾಖಲೆ ಇರಲೇಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾನು ಫೀಲ್ಡಿಗೆ ಹೋದಾಗ ಎಲ್ಲರೂ ಕೇಳಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರು ಕೂಡ ಸಲಹೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddarmaiah) ಅವರು ಇದಕ್ಕೆ ಸೂಚನೆ ನೀಡಿದ್ದಾರೆ. ಅದರಂತೆಯೇ ಎಲ್ಲಾ ಕಡೆಯಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ ಎಂದಿದ್ದಾರೆ.ಇದನ್ನೂ ಓದಿ: ಜಸ್ಟಿಸ್ ಹೇಮಾ ವರದಿಯಲ್ಲಿಯ ಹೆಸರು ಬಹಿರಂಗ ಪಡಿಸಿ: ಪೃಥ್ವಿರಾಜ್ ಸುಕುಮಾರನ್

    ವಂಚನೆ ಪ್ರಕರಣಗಳನ್ನು ತಪ್ಪಿಸಲು ಆಧಾರ್ ಅಥವಾ ಈ ಮೂರನ್ನು ಒಳಗೊಂಡ ಯಾವುದಾದರೊಂದು ದಾಖಲೆಯನ್ನು ಕೊಡಬೇಕು. ಇದು ಒಂದು ವ್ಯವಸ್ಥೆ ಮೇಲೆ ನಂಬಿಕೆ ಇಡುವಂತೆ ಮಾಡುತ್ತದೆ. ಸಕಾರಾತ್ಮಕವಾಗಿ ಸಾರ್ವಜನಿಕರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಆಧಾರ್ ಜೋಡಣೆ ಮಾಡುವುದರಿಂದ ನಡೆಯುವ ವಂಚನೆಗಳನ್ನು ಕಡಿಮೆಗೊಳಿಸಬಹುದು. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜನರಿಗೆ ಸುಲಲಿತವಾಗಿ ಕೆಲಸವಾಗುವ ರೀತಿಯಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಜೊತೆಗೆ ನೊಂದಣಿ ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆ ತರುತ್ತಿದ್ದೇವೆ.ಇದನ್ನು ಓದಿ: ಟಾರ್ಚ್ ಹಾಕಿ ತಡಕಾಡೋದು ಸಿಎಂಗೆ ಶೋಭೆಯಲ್ಲ – ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಿ: ಹೆಚ್‌ಡಿಕೆ ಎಚ್ಚರಿಕೆ

    ನಕಲಿ ವೈಯಕ್ತಿಕ ದಾಖಲೆಯನ್ನು ಸೃಷ್ಟಿಸಿ, ರಿಜಿಸ್ಟರ್ ಮಾಡಿಕೊಂಡು ವಂಚನೆ ಮಾಡುತ್ತಿದ್ದಾರೆ. ಈ ರೀತಿ ವ್ಯವಸ್ಥಿತವಾಗಿ ಜಮೀನುಗಳನ್ನು ದರೋಡೆ ಮಾಡುವ ಕೆಲಸ ನಡೆಯುತ್ತಿದೆ. ಈ ತರಹದ ವಂಚನೆಗಳನ್ನು ತಡೆಗಟ್ಟಲು ವ್ಯಾಪಕ ದೂರುಗಳು ಈಗಾಗಲೇ ಬಂದಿವೆ. ರಾಜ್ಯದ ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳಲ್ಲೂ ಕಾವೇರಿ-2 (Kaveri-2) ಜಾರಿಗೊಳಿಸಲಾಗಿದೆ. ಅಪಾಂಯ್ಟ್‌ಮೆಂಟ್‌ ಸಿಸ್ಟಮ್ ಸರಿಯಾಗಿ ಪಾಲಿಸದೇ ಇರುವುದರಿಂದ ಇಷ್ಟು ದಿನ ಜನ ಜಂಗುಳಿ ಇರುತ್ತಿತ್ತು. ಈಗ ಅಪಾಂಯ್ಟ್‌ಮೆಂಟ್‌ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಕೊರೊನಾ ಆತಂಕದಲ್ಲಿ ನೆಲಮಂಗಲ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಿಂದ ಕೆಲಸ

    ಕೊರೊನಾ ಆತಂಕದಲ್ಲಿ ನೆಲಮಂಗಲ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಿಂದ ಕೆಲಸ

    ಬೆಂಗಳೂರು: ಪ್ರಪಂಚದಾದ್ಯಂತ ಕೊರೊನಾ ಹರಡುತ್ತಿದೆ. ಅಲ್ಲದೆ ನಮ್ಮ ದೇಶದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ರಾಜ್ಯದಲ್ಲೂ ಕೂಡ ಮಾರ್ಚ್ 31ರವರೆಗೆ ಮೆಡಿಕಲ್ ಎಮರ್ಜೆನ್ಸಿಯನ್ನು ಸಹ ಘೋಷಣೆ ಮಾಡಿದೆ.

    ಮೆಡಿಕಲ್ ಎಮೆರ್ಜೆನ್ಸಿ ಸಮಯದಲ್ಲಿ ಗುಂಪು ಗುಂಪಾಗಿ ಜನ ಸೇರುವುದನ್ನು ನಿಷೇಧಿಸಿದೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ಅಧಿಕಾರಿಗಳು ಕೊರೊನಾ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಶುಕ್ರವಾರ ಹಿನ್ನೆಲೆಯಲ್ಲಿ ರಿಜಿಸ್ಟರ್ ಮಾಡಿಸಲು ಮುಗಿಬಿದ್ದಿದ್ದಾರೆ. ಇದರಿಂದ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನಸಂದಣಿ ಉಂಟಾಗಿದೆ.

    ರಿಜಿಸ್ಟರ್ ಸಮಯದಲ್ಲಿ ಬೆರಳಿನ ಇಂಪ್ರೆಷನ್ ಕೂಡ ನೀಡಬೇಕು ಅನೇಕ ಜನ ಒಂದೇ ಮೆಷಿನ್ ನಲ್ಲಿ ಬೆರಳು ನೀಡುವುದರಿಂದ ಬಹು ಬೇಗನೆ ವೈರಸ್ ಹರಡುವ ಭೀತಿಯಲ್ಲಿ ಇಲ್ಲಿನ ಅಧಿಕಾರಿಗಳು ಸಹ ಕೆಲಸ ಮಾಡುವಂತಾಗಿದೆ.

    ನೆಲಮಂಗಲ ಸಬ್ ರಿಜಿಸ್ಟ್ರಾರ್ ಗಳಾದ ನಾಗೇಂದ್ರ ಮತ್ತು ಗಿರೀಶ್ ಮಾತನಾಡಿ, ಇದು ಸರ್ಕಾರಿ ಕಚೇರಿ ಇಲ್ಲಿಗೆ ಸಾರ್ವಜನಿಕರನ್ನು ಬರಬೇಡಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ನೂರಾರು ಜನ ಒಟ್ಟಿಗೆ ಬಂದು ಹೋಗುತ್ತಾರೆ. ಅದರಲ್ಲಿ ಯಾರಿಗೆ ಸೋಕಿದೆ ಎನ್ನುವುದು ತಿಳಿಯುವುದಿಲ್ಲ, ಎಲ್ಲರ ಜೊತೆ ನಾವು ಮಾತನಾಡಲೇಬೇಕು. ಇದರಿಂದ ನಾವು ಕೂಡ ಮನೆಯಲ್ಲಿ ನಮ್ಮ ಕುಟುಂಬದ ಜೊತೆ ಮುಕ್ತವಾಗಿ ಮಾತನಾಡಲು ಕೂಡ ಭಯಪಡುವಂತಾಗಿದೆ ಎಂದಿದ್ದಾರೆ.

  • ಸಿನಿಮಾ ಸ್ಟೈಲಿನಲ್ಲಿ ಸಬ್‍ ರಿಜಿಸ್ಟಾರ್ ಕಿಡ್ನಾಪ್ – ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್

    ಸಿನಿಮಾ ಸ್ಟೈಲಿನಲ್ಲಿ ಸಬ್‍ ರಿಜಿಸ್ಟಾರ್ ಕಿಡ್ನಾಪ್ – ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್

    ಬೆಂಗಳೂರು: ಸಿನಿಮಾ ಸ್ಟೈಲ್‍ ನಲ್ಲಿ ಅಪಹರಣಕಾರರು ಸಬ್ ರಿಜಿಸ್ಟಾರ್ ಅವರನ್ನು ಕಿಡ್ನಾಪ್ ಮಾಡಿ ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್ ಕೊಟ್ಟಿದ್ದಾರೆ.

    ಇದೇ ಜುಲೈ 5 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆಎಚ್ ರಸ್ತೆಯ ಫುಟ್ ಪಾತ್‍ನಿಂದ ಕಿಡ್ನಾಪ್ ಮಾಡಲಾಗಿತ್ತು. ರಂಗಸ್ವಾಮಿ ಕಿಡ್ನಾಪ್‍ಗೆ ಒಳಗಾದ ಹಿರಿಯ ಸಬ್ ರಿಜಿಸ್ಟಾರ್ ಆಗಿದ್ದು, ಶಾಂತಿನಗರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಜುಲೈ 5ರಂದು ಜನಸಂದಣಿ ಇರುವ ರಸ್ತೆಯಲ್ಲಿ ಕಾರಿನಲ್ಲಿ 20-25 ವರ್ಷದೊಳಗಿನ 10 ಮಂದಿ ಯುವಕರ ಗ್ಯಾಂಗ್ ಕಚೇರಿಯಿಂದನೇ ಕಿಡ್ನಾಪ್ ಮಾಡಿದ್ದಾರೆ. ರಂಗಸ್ವಾಮಿಗೆ ಗ್ಯಾಂಗ್ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ, ಜೋರಾಗಿ ಮ್ಯೂಸಿಕ್ ಹಾಕಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ರಂಗಸ್ವಾಮಿ ಅವರನ್ನು ಕಾರಿನಲ್ಲೇ ಕೂಡಿ ಹಾಕಿದ್ದು, ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ಎಚ್ಚರಿಕೆಯ ಬುದ್ಧಿ ಪಾಠ ಮಾಡಿದ್ದಾರೆ. ಕಿಡ್ನಾಪ್ ಮಾಡಿ ಸಂಜೆ 5 ರಿಂದ ರಾತ್ರಿಯಿಡಿ ಕಾರಿನಲ್ಲಿ ಸುತ್ತಾಡಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ರಾತ್ರಿಯಿಡಿ ಸುತ್ತಾಡಿಸಿ ಜುಲೈ 6ರ ಬೆಳಗಿನ ಜಾವ ಕನಕಪುರ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ.

    ಈ ಕಿಡ್ನಾಪ್ ಕುರಿತಂತೆ ಜುಲೈ 6 ರಂದು ಪೊಲೀಸರಿಗೆ ದೂರನ್ನು ನೀಡಲಾಗಿತ್ತು. ಸದ್ಯಕ್ಕೆ ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.