Tag: streetdog

  • ಗುಡಿಸಲಿನಲ್ಲಿ ಮಲಗಿದ್ದ 1 ವರ್ಷದ ಮಗುವನ್ನ ಕೊಂದು ತಿಂದ ಬೀದಿ ನಾಯಿಗಳು

    ಗುಡಿಸಲಿನಲ್ಲಿ ಮಲಗಿದ್ದ 1 ವರ್ಷದ ಮಗುವನ್ನ ಕೊಂದು ತಿಂದ ಬೀದಿ ನಾಯಿಗಳು

    ಹೈದರಾಬಾದ್: ತಂದೆ ಜೊತೆ ಗುಡಿಸಲಿನಲ್ಲಿ (Hut)  ಮಲಗಿದ್ದ ಒಂದು ವರ್ಷ ಮಗು ಮೇಲೆ ಬೀದಿ ನಾಯಿಗಳು  (Street Dogs) ದಾಳಿ ಮಾಡಿ ತಿಂದಿರುವ ಘಟನೆ ತೆಲಂಗಾಣದ (Telangana)  ಶಂಶಾಬಾದ್‌ನಲ್ಲಿ ನಡೆದಿದೆ.

    ಕೆ. ನಾಗರಾಜು (1) ಮೃತಪಟ್ಟ ಮಗು. ಮಗುವಿನ ತಂದೆ ಸೂರ್ಯಕುಮಾರ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಶಂಶಾಬಾದ್‌ನ ರಾಜೀವ್ ಗೃಹಕಲ್ಪ ಸಂಕೀರ್ಣದ ಬಳಿ ಗುಡಿಸಲಿನಲ್ಲಿ ಹಿರಿಯ ಮಗನಾದ ನಾಗರಾಜು ಮತ್ತು 20 ದಿನದ ಮಗುವಿನ ಜೊತೆ ಮಲಗಿದ್ದ. ಈ ವೇಳೆ ಬೀದಿ ನಾಯಿಗಳ ಗುಂಪು ಗುಡಿಸಲಿಗೆ ನುಗ್ಗಿ ಮಕ್ಕಳ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ

    ತಡರಾತ್ರಿ 1:30 ರ ಹೊತ್ತಿಗೆ ಸೂರ್ಯಕುಮಾರ್‌ನನ್ನು ಸ್ಥಳೀಯರು ಎಬ್ಬಿಸಿ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ನಡೆಸಿ ತಿನ್ನುತ್ತಿದ್ದವು ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಸೂರ್ಯ ಹೋಗಿ ನೋಡಿದಾಗ ಮಗು ನಾಯಿಗಳ ಪಾಲಾಗಿತ್ತು. ಇದನ್ನೂ ಓದಿ: ಎರಡನೇ ಐಫೋನ್‌ ಘಟಕ ತೆರೆಯಲು ಮಾತುಕತೆ ಆರಂಭಿಸಿದ ಟಾಟಾ

    ಈವರೆಗೂ ಮಕ್ಕಳ ಮೇಲೆ ನಡೆದ ದಾಳಿಯಲ್ಲಿ ಇದು ಒಂಬತ್ತನೇ ಗಂಭೀರ ಪ್ರಕರಣವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 5 ದಿನ ಇಡಿ ಕಸ್ಟಡಿಗೆ ಹೇಮಂತ್ ಸೋರೆನ್

  • ಬೆಂಗ್ಳೂರಲ್ಲಿ ಬೀದಿನಾಯಿಗಳಿಗೆ ಕಡಿವಾಣ ಹಾಕದ ಬಿಬಿಎಂಪಿ!

    ಬೆಂಗ್ಳೂರಲ್ಲಿ ಬೀದಿನಾಯಿಗಳಿಗೆ ಕಡಿವಾಣ ಹಾಕದ ಬಿಬಿಎಂಪಿ!

    – ಸರಣಿ ದಾಳಿ ಆಗ್ತಿದ್ರೂ ಎಚ್ಚೆತ್ತುಕೊಳ್ತಿಲ್ಲ

    ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಯಾವುದೇ ಕೆಲಸ ಮಾಡಬೇಕು ಅಂದರೂ ಅಲ್ಲಿ ಏನಾದರೂ ಅನಾಹುತಗಳಾಗಬೇಕು. ಅಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲ. ಅದು ರೋಡ್, ಕಸ ಹಾಗೂ ನಾಯಿ ವಿಚಾರವಾದ್ರೂ ಅಷ್ಟೇ. ಇದೀಗ ಬೀದಿ ನಾಯಿಗಳ ನಿಯಂತ್ರಣ ಮಾಡುವಲ್ಲಿ ಬಿಬಿಎಂಪಿಯಿಂದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

    ಹೌದು. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರುತ್ತಿವೆ. ಡಿಸೆಂಬರ್ ನಿಂದ ಒಂದಿಲ್ಲೊಂದು ಭಾಗದಲ್ಲಿ ಬೀದಿನಾಯಿಗಳ ದಾಳಿ ಪ್ರಕರಣಗಳು ಬರುತ್ತಲೇ ಇವೆ. ಇತ್ತೀಚೆಗಷ್ಟೇ ಎಲ್‍ಬಿಸಿ ನಗರದಲ್ಲಿ 9 ವರ್ಷದ ಬಾಲಕ ನಿರ್ಮಲ್ ಕುಮಾರ್ ಮೇಲೆ 8-10 ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡಿದ್ದವು. ಮೂರು ತಿಂಗಳ ಹಿಂದೆ ನಾಯಿ ದಾಳಿಯಿಂದ ವಿಭೂತಿಪುರದ ಬಾಲಕ ಪ್ರವೀಣ್ ಮೃತಪಟ್ಟಿದ್ದ. ಆದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ, ನಾಯಿಗಣತಿ ನಡೆಸ್ತೇವೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ ಅಂತಾರೆ. ಆದರೆ ಬಿಬಿಎಂಪಿ ವರದಿಯ ಪ್ರಕಾರವೇ ನಗರದಲ್ಲಿ 3 ಲಕ್ಷ ಬೀದಿನಾಯಿಗಳಿವೆಯಂತೆ. ಕಾಟಚಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನಾಗೇಶ್ ದೂರಿದ್ದಾರೆ.

    ಬೀದಿ ನಾಯಿ ದಾಳಿಯಿಂದಾದ ಸಾವು-ನೋವುಗಳ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಾಗಿದೆ. ಜೊತೆಗೆ ಇತ್ತೀಚೆಗೆ ಆದ ಬೀದಿನಾಯಿ ದಾಳಿಯ ಬಗ್ಗೆ ಬಿಬಿಎಂಪಿ ವಿರುದ್ಧವೂ ದೂರು ನೀಡಲು ನಾಗೇಶ ಮುಂದಾಗಿದ್ದಾರೆ.

    ಡಿಸೆಂಬರ್‌ನಿಂದ ಮೇವರೆಗೂ ಬೀ ಕೇರ್‌ಫುಲ್‌:
    ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಬ್ರಿಡಿಂಗ್ ಸಮಯವಂತೆ. ಈ ಸಮಯದಲ್ಲಿ ನಾಯಿಗಳು ಹಿಂಡುಹಿಂಡಾಗಿರುತ್ತವೆ. ಜೊತೆಗೆ ಅತಿ ಹೆಚ್ಚು ಸಿಟ್ಟಿನಲ್ಲಿರುತ್ತೆ. ಬಹಳ ಕ್ರೂರಿಯಾಗಿ ವರ್ತಿಸುತ್ತವೆ. ಇಂತಹ ಸಮಯದಲ್ಲಿ ಮನುಷ್ಯರ ಮೇಲೆ ದಾಳಿ ಮಾಡೋ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ಬೇಸಿಗೆ ಸಮಯದಲ್ಲಿ ಬೀದಿ ನಾಯಿಗಳಿಗೆ ತಿನ್ನಲು ಊಟ ಹಾಗೂ ಕುಡಿಯಲು ನೀರು ಸಿಗೋದಿಲ್ಲ. ಈ ಕಾರಣಕ್ಕೆ ನಾಯಿಗಳಿಗೆ ವಿಪರೀತ ಕೋಪಗೊಂಡು ರಸ್ತೆಯಲ್ಲಿ ಓಡಾಡುವ ಮಕ್ಕಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತವೆ ಎಂದು ಪೆಟ್ ಡಾಕ್ಟರ್ ರೋಹಿತ್ ಹೇಳುತ್ತಾರೆ.

    ಪೋಷಕರು ಕೂಡ ಮಕ್ಕಳ ಕೈಯಲ್ಲಿ ಬ್ರೆಡ್, ಬಿಸ್ಕೆಟ್ ಕೊಟ್ಟು ರೋಡಲ್ಲಿ ಬಿಟ್ಟು ಬಿಡ್ತಾರೆ. ಇದನ್ನು ತಿನ್ನಲು ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ. ದಯವಿಟ್ಟು ಪೋಷಕರು ಮಕ್ಕಳನ್ನು ರೋಡಲ್ಲಿ ಆಟವಾಡಲು ಬಿಡುವಾಗ ಎಚ್ಚರಿಕೆಯಿಂದ ಇರುವುದು ಒಳಿತು.

  • ಬೊಗಳುತ್ತದೆ ಎಂದು ನಾಯಿಗೆ ಶೂಟ್ ಮಾಡಿದ್ರು!

    ಬೊಗಳುತ್ತದೆ ಎಂದು ನಾಯಿಗೆ ಶೂಟ್ ಮಾಡಿದ್ರು!

    ಬೆಂಗಳೂರು: ಬೀದಿನಾಯಿಗಳಿಗೆ ವಿಷ ಬೆರೆಸಿ ಹತ್ಯೆ ಮಾಡುವುದು ಕಂಡಿದ್ದೇವೆ. ಆದರೆ ಸಿಲಿಕಾನ್ ಸಿಟಿಯ ಜಯನಗರದಲ್ಲಿ ಕಿಡಿಗೇಡಿಗಳು ಗನ್ ನಲ್ಲಿ ಶೂಟ್ ಮಾಡಿರುವುದು ಬೆಳಕಿಗೆ ಬಂದಿದೆ.

    ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಬೀದಿ ನಾಯಿ ಬೊಗಳುತ್ತೆ ಎಂದು ಸಿಟ್ಟುಗೊಂಡ ದುಷ್ಕರ್ಮಿಗಳು ನಾಯಿ ಮೇಲೆ ಫೈರ್ ಮಾಡಿದ್ದಾರೆ. ಪರಿಣಾಮ ಎರಡು ಬುಲೆಟ್ ನಾಯಿಯ ದೇಹ ಹೊಕ್ಕಿದ್ದು ನಾಯಿ ನರಳಾಡುತ್ತಿದೆ.

    ಸದ್ಯ ನಾಯಿಯನ್ನು ರಕ್ಷಣಾ ತಂಡದ ಪ್ರವೀಣ್ ಆಸ್ಪತ್ರೆಗೆ ಸೇರಿಸಿದ್ದಾರೆ. ವಿಷ ಬೆರೆಸಿ ನಾಯಿಯನ್ನು ಕೊಲ್ಲುತ್ತಾರೆ. ಆದರೆ ಈಗ ಈ ರೀತಿ ಗನ್ ನಲ್ಲಿ ಶೂಟ್ ಮಾಡಿ ನಾಯಿಯನ್ನು ಕೊಲ್ಲಲು ಯತ್ನಿಸಿರುವುದು ಶ್ವಾನಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.