Tag: Story

  • ಗಿಣಿ ಹೇಳಿದ ಕಥೆ: ನೋಡದಿದ್ರೆ ಮಿಸ್ ಆಗುತ್ತೆ ಮಧುರಾನುಭೂತಿ!

    ಗಿಣಿ ಹೇಳಿದ ಕಥೆ: ನೋಡದಿದ್ರೆ ಮಿಸ್ ಆಗುತ್ತೆ ಮಧುರಾನುಭೂತಿ!

    ಬೆಂಗಳೂರು: ಬುದ್ಧ ಚಿತ್ರಾಲಯ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಗಿಣಿ ಹೇಳಿದ ಕಥೆ ಈ ವಾರದಿಂದ ಶುರುವಾಗಲಿದೆ. ಶುದ್ಧ ಕನ್ನಡತನದ ಶೀರ್ಷಿಕೆ ಮತ್ತು ಹೊಸ ಬಗೆಯ ಕಥೆಯ ಹೊಳಹಿನಿಂದ ಈಗಾಗಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಅದುವೇ ಹೊಸ ಪ್ರಯತ್ನವೊಂದರ ಗೆಲುವಿನ ಹೆಜ್ಜೆಯಾಗಿಯೂ ಗೋಚರವಾಗುತ್ತಿದೆ.

    ಈ ವಾರ ಗಿಣಿ ಹೇಳ ಹೊರಟಿರೋದು ಪಕ್ಕಾ ಭಿನ್ನವಾದ ಕಥೆ. ಹಾಗಂತ ಇದು ಕಲಾತ್ಮಕ ಚಿತ್ರ ಅಂದುಕೊಳ್ಳಬೇಕಿಲ್ಲ. ಆದರೆ ಸಿದ್ಧ ಸೂತ್ರಗಳ ಕಮರ್ಶಿಯಲ್ ಚೌಕಟ್ಟೂ ಕೂಡಾ ಇದಕ್ಕಿಲ್ಲ. ನಮ್ಮ ನಡುವಿನ ಪಾತ್ರಗಳೇ ತೆರೆ ಮೇಲೆ ಕದಲುತ್ತಿವೆ, ನಮ್ಮದೇ ಮಾತುಗಳಿಗೆ ಆ ಪಾತ್ರಗಳು ಬಾಯಾಗಿವೆ ಎಂಬಂಥಾ ವಿಶಿಷ್ಟವಾದ ಫೀಲ್ ಹುಟ್ಟಿಸೋ ರೀತಿಯಲ್ಲಿ ಇಡೀ ಸಿನಿಮಾ ರೂಪುಗೊಂಡಿದೆಯಂತೆ.

    ಅದು ಯಾವ ವಿಚಾರವೇ ಆಗಿರಬಹುದು. ನೇರಾ ನೇರ ಮುಖಕ್ಕೆ ಹೊಡೆದಂತೆ ಹೇಳೋದರಿಂದ ಘರ್ಷಣೆ, ವೈಮನಸ್ಯದ ಹೊರತಾಗಿ ಬೇರ್ಯಾವ ಪ್ರಯೋಜನವೂ ಆಗೋದಿಲ್ಲ. ಅದನ್ನೇ ಕೂಲಾಗಿ, ತಮಾಷೆಯಾಗಿ ಹೇಳಿದರೆ ಅದರ ಎಫೆಕ್ಟೇ ಬೇರೆ. ಅಂಥಾದ್ದೊಂದು ಸೂತ್ರದಿಂದ ಗಂಭೀರವಾದ ವಿಚಾರವನ್ನೂ ಕೂಡಾ ಲಘುವಾದ ಶೈಲಿಯಲ್ಲಿ ಇಲ್ಲಿ ಹೇಳಲಾಗಿದೆ. ಮನರಂಜನೆಯನ್ನೇ ಮುಖ್ಯ ಉದ್ದೇಶವಾಗಿಸಿಕೊಂಡಿರೋ ಈ ಚಿತ್ರ ಪ್ರೇಕ್ಷಕರ ಪಾಲಿಗೆ ಹೊಸ ವರ್ಷಾರಂಭದಲ್ಲಿಯೇ ಮಧುರಾನುಭೂತಿ ನೀಡಲಿರೋದಂತೂ ನಿಜ.

    ದೇವ್ ರಂಗಭೂಮಿ ಈ ಚಿತ್ರದ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ನಾಯಕನಾಗಿಯೂ ನಟಿಸಿದ್ದಾರೆ. ಇವರಿಗಿಲ್ಲಿ ಗುಂಗುರು ಕೂದಲ ಚೆಲುವೆ ಗೀತಾಂಜಲಿ ನಾಯಕಿಯಾಗಿ ಜೊತೆಯಾಗಿದ್ದಾರೆ. ಗಿಣಿ ಹೇಳಿದ ಕಥೆಯ ಬಗ್ಗೆ ಪ್ರೇಕ್ಷಕರಲ್ಲೊಂದು ಕಲ್ಪನೆ ಇದೆಯಲ್ಲಾ? ಅದನ್ನೂ ಮೀರಿದ ಸೊಗಸನ್ನು ಈ ಚಿತ್ರ ತುಂಬಿಕೊಂಡಿದೆ. ಅಂತೂ ಈ ವರ್ಷದ ಆರಂಭದಲ್ಲಿಯೇ ಹೊಸ ಅಲೆಯ ಚಿತ್ರವೊಂದು ಗೆದ್ದು ಸದ್ದು ಮಾಡೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಚಿತ್ರಕ್ಕೆ ಬೇಕಿದ್ದದ್ದು ಗುಂಗುರು ಕೂದಲ ಗಿಣಿ!

    ಈ ಚಿತ್ರಕ್ಕೆ ಬೇಕಿದ್ದದ್ದು ಗುಂಗುರು ಕೂದಲ ಗಿಣಿ!

    ಬೆಂಗಳೂರು: ಅಪ್ಪಟ ಕನ್ನಡದ ಶೀರ್ಷಿಕೆ ಮತ್ತು ಅಗಾಧವಾಗಿ ಹಬ್ಬಿಕೊಂಡಿರೋ ಕುತೂಹಲ… ಇಂಥಾದ್ದರ ಒಡ್ಡೋಲಗದಲ್ಲಿ ಗಿಣಿ ಹೇಳಿದ ಕಥೆ ಚಿತ್ರ ಇದೇ ತಿಂಗಳ 11ರಂದು ತೆರೆ ಕಾಣಲು ತಯಾರಾಗಿದೆ. ದೇವ್ ರಂಗಭೂಮಿ ನಿರ್ಮಾಣದ ಈ ಸಿನಿಮಾ ಹೊಸಾ ಅಲೆಯದ್ದು. ಏನಾದರೊಂದು ಕಮಾಲ್ ಸೃಷ್ಟಿಸುತ್ತೆ ಎಂಬ ಪ್ರೇಕ್ಷಕರ ಭರವಸೆ ತುಂಬಿದ ನಿರೀಕ್ಷೆ ಗಿಣಿ ಹೇಳಿದ ಕಥೆಯ ಮೇಲಿದೆ.

    ಒಂದು ಚಿತ್ರವೆಂದ ಮೇಲೆ ಹೀಗೀಗೇ ಇರಬೇಕೆಂಬ ಅಳತೆಗೋಲುಗಳಿವೆ. ಅದನ್ನು ಮೀರಿಕೊಂಡ ಸಿನಿಮಾಗಳು ಗೆಲುವು ದಾಖಲಿಸಿದ್ದೂ ಇದೆ. ಅದೇ ಪಥದಲ್ಲಿರೋ ಚಿತ್ರ ಗಿಣಿ ಹೇಳಿದ ಕಥೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಾಯಕನಾಗಿಯೂ ದೇವ್ ನಟಿಸಿದ್ದಾರೆ. ನಿರ್ಮಾಣದ ಭಾರವನ್ನೂ ಅವರೇ ಹೊತ್ತುಕೊಂಡಿದ್ದಾರೆ.

    ಈ ಚಿತ್ರದಲ್ಲಿ ಎಂಭತ್ತಕ್ಕೂ ಹೆಚ್ಚು ಪಾತ್ರಗಳಿವೆ. ಆ ಅಷ್ಟೂ ಪಾತ್ರಗಳಿಗೂ ಅಳೆದೂ ತೂಗಿ ಹೊಂದುವಂಥಾ ನಟ ನಟಿಯರನ್ನೇ ದೇವ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಿದ್ದ ಮೇಲೆ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡುವಾಗ ಎಚ್ಚರ ವಹಿಸದೇ ಇರ್ತಾರಾ? ಈ ಕಥೆಗೆ ಗುಂಗುರು ಕೂದಲಿನ, ಮುಗ್ಧ ಮುಖಭಾವ ಹೊಂದಿರೋ ಹುಡುಗಿ ಬೇಕಿತ್ತು. ಇದಕ್ಕಾಗಿ ದೇವ್ ಆಡಿಷನ್ ನಡೆಸಿದ್ದರು. ಅದರಲ್ಲಿ ಹತ್ತಾರು ಹುಡುಗಿಯರು ಪಾಲ್ಗೊಂಡಿದ್ದರು. ಅವೆಲ್ಲರ ಮಧ್ಯೆ ಗೀತಾಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದರು.

    ಆಕೆ ಗುಂಗುರು ಕೂದಲು ಹೊಂದಿದ್ದಾರೆಂಬುದು ಮಾತ್ರವೇ ಆಯ್ಕೆಗೆ ಕಾರಣವಾಗಿರಲಿಲ್ಲ. ನಟಿಸೋ ಕಲೆಯೂ ಗೀತಾಂಜಲಿಗಿತ್ತು. ಅಂತೂ ದೇವ್ ಈ ಕಥೆ ಕೇಳುತ್ತಿದ್ದ ಕರ್ಲಿ ಕೂದಲ ಗಿಣಿಯನ್ನು ಹುಡುಕಿದ್ದೂ ಕೂಡಾ ಒಟ್ಟಾರೆ ಚಿತ್ರ ರೂಪುಗೊಂಡ ಶ್ರದ್ಧೆಗೆ ಕನ್ನಡಿಯಂತಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಫರೆಂಟಾದ ಕಥೆ ಹೇಳಹೊರಟಿದೆ ಗಿಣಿ!

    ಡಿಫರೆಂಟಾದ ಕಥೆ ಹೇಳಹೊರಟಿದೆ ಗಿಣಿ!

    ಈಗ ಎಲ್ಲೆಡೆ ಗಿಣಿ ಹೇಳಿದ ಕಥೆ ಚಿತ್ರದ ಬಗ್ಗೆ ಚರ್ಚೆಗಳಾಗುತ್ತಿವೆ. ಹೊಸಾ ಥರದ ಶೀರ್ಷಿಕೆಯಿಂದಲೇ ಗಮನ ಸೆಳೆದ ಒಂದಷ್ಟು ಚಿತ್ರಗಳಿವೆಯಲ್ಲಾ ಆ ಸಾಲಿಗೆ ಈ ಸಿನಿಮಾವೂ ಸೇರುತ್ತದೆ. ಅಪ್ಪಟ ಕನ್ನಡತನದ ಕಥೆಯ ಜೊತೆಗೆ, ಅಷ್ಟೇ ಭಿನ್ನವಾದ ಕಥೆಯೊಂದನ್ನು ಈ ಗಿಣಿ ಹೇಳ ಹೊರಟಿದೆ.

    ಗಿಣಿ ಹೇಳಿದ ಕಥೆಯನ್ನು ಬುದ್ಧ ಚಿತ್ರಾಲಯ ಲಾಂಛನದಲ್ಲಿ ದೇವ್ ರಂಗಭೂಮಿ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದೂ ಅವರೇ. ಇದರೊಂದಿಗೆ ನಾಯಕನಾಗಿಯೂ ಅವರು ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಇದನ್ನು ನಾಗರಾಜ್ ಉಪ್ಪುಂದ ನಿರ್ದೇಶನ ಮಾಡಿದ್ದಾರೆ.

    ಹಾಗಾದರೆ ಈ ಗಿಣಿ ಯಾವ ಜಾಡಿನ ಕಥೆ ಹೇಳ ಹೊರಟಿದೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿದೆ. ಅದಕ್ಕೆ ಚಿತ್ರತಂಡದ ಕಡೆಯಿಂದ ಮತ್ತಷ್ಟು ಕೌತುಕ ಮೂಡಿಸೋ ಒಂದಷ್ಟು ವಿಚಾರಗಳೇ ಹೊರ ಬೀಳುತ್ತವೆ. ಈ ಚಿತ್ರದಲ್ಲಿ ಸಿದ್ಧಸೂತ್ರಗಳ ಸುಳಿವಿರೋದಿಲ್ಲ. ಇದರ ಪ್ರಧಾನ ಉದ್ದೇಶವೇ ಮನರಂಜನೆ. ಭರಪೂರ ಹಾಸ್ಯದ ಜೊತೆಗೇ ಗಂಭೀರವಾದ ವಿಚಾರಗಳನ್ನೂ ದಾಟಿಸೋ ಸದುದ್ದೇಶವನ್ನ ಈ ಚಿತ್ರ ಒಳಗೊಂಡಿದೆ. ಪ್ರತೀ ವರ್ಗದ ಪ್ರೇಕ್ಷಕರಿಗೂ ತಲುಪಿಕೊಳ್ಳುವ ಮಹದಾಸೆಯಿಂದಲೇ ಒಟ್ಟಾರೆ ಚಿತ್ರ ಸಿದ್ಧಗೊಂಡಿದೆ.

    ಗಿಣಿ ಹೇಳಿದ ಕಥೆಯಲ್ಲಿ ಒಂದು ಮಧುರವಾದ ಪ್ರೇಮ ಕಥೆಯೂ ಇದೆ. ಗೀತಾಂಜಲಿ ಎಂಬ ಹೊಸ ಹುಡುಗಿ ಈ ಮೂಲಕ ನಾಯಕಿಯಾಗಿ ದೇವ್ ಗೆ ಜೊತೆಯಾಗಿದ್ದಾರೆ. ಇಲ್ಲಿ ಹೀರೋಯಿಸಂ ಇಲ್ಲ. ಆದರೆ ನಿಜವಾದ ಹೀರೋಗಳು ಯಾರೆಂಬುದರ ಬಗ್ಗೆ ವಿವರಣೆಯಿದೆ. ಕಥೆಯೇ ಪಾತ್ರಗಳನ್ನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ಕೊಂಡೊಯ್ದು ಬಿಡುವಂಥಾ ಕೆಲಸವನ್ನೂ ನಿಭಾಯಿಸುತ್ತದೆಯಂತೆ.

    ಇನ್ನುಳಿದಂತೆ ಸಂಗೀತ, ಸಂಕಲನ, ಛಾಯಾಗ್ರಹಣ ಎಲ್ಲದರಲ್ಲಿಯೂ ಹೊಸತನವೇ ನಿಗಿ ನಿಗಿಸುವಂತೆ ಈ ಚಿತ್ರವನ್ನ ದೇವ್ ರೂಪಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಗಿಣಿ ಹೇಳೋ ಕಥೆ ಕೇಳುವ ಸೌಭಾಗ್ಯ ಪ್ರೇಕ್ಷಕರದ್ದಾಗಲಿದೆ.

    https://www.facebook.com/publictv/videos/1499818953482880/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ನೇರ ನುಡಿಯಾದ್ರು ಹಸನ್ಮುಖಿಯಾಗಿ ಕಾಣಿಕೊಳ್ಳುವ ನಟಿ ಶೀತಲ್ ಶೆಟ್ಟಿ ಆ್ಯಕರಿಂಗ್‍ಗೆ ಗುಡ್ ಬೈ ಹೇಳಿದ ಬಳಿಕ ಮತ್ತೊಮ್ಮೆ ತಮ್ಮದೇ ನಟನೆಯ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕರನ್ನು ಸಂದರ್ಶನ ಮಾಡಿದ್ದಾರೆ. ಪಬ್ಲಿಕ್ ಟಿವಿಯ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಕೇಶ್ ಅವರನ್ನು ಶೀತಲ್ ಮಾತನಾಡಿಸಿ ಚಿತ್ರದ ಇಂಟ್ರೆಸ್ಟಿಂಗ್ ಕಥೆಯನ್ನು ರಿವಿಲ್ ಮಾಡಿಸಿದ್ದಾರೆ.

    ವಿಭಿನ್ನ ಟೈಟಲ್ ಮೂಲಕವೇ ಗಮನ ಸೆಳೆದಿರುವ ಪತಿಬೇಕು ಡಾಟ್‍ಕಮ್ ಸಿನಿಮಾ ನಿರ್ದೇಶಕನಾಗಿರುವುದು ನನಗೆ ಹೆಮ್ಮೆಯ ಅಂಶವಾಗಿದ್ದು, ಕುಟುಂಬ ಪ್ರಧಾನ ಸಿನಿಮಾ ಮಾಡಿದ ಗೌರವ ಈ ಸಿನಿಮಾ ನೀಡುವ ವಿಶ್ವಾಸವಿದೆ. ಏಕೆಂದರೆ ಈ ಹಿಂದಿನ ಸಿನಿಮಾ ನನ್ನ ತಾಯಿ, ಕುಟುಂಬದೊಂದಿಗೆ ನೋಡಲು ಸಾಧ್ಯವಾಗಿರಲಿಲ್ಲ. ಅದ್ದರಿಂದ ಕುಟುಂಬದ ಎಲ್ಲರೊಟ್ಟಿಗೆ ಕುಳಿತು ನೋಡುವಂತಹ ಯೋಚನೆಯಿಂದ ಸಿನಿಮಾ ಕಥೆ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು ನಿರ್ದೇಶಕ ರಾಕೇಶ್.

    ಪತಿಬೇಕು ಡಾಟ್ ಕಮ್ ಕಥೆಯೇ ಸಿನಿಮಾಗೆ ಜೀವ:
    ಸಿನಿಮಾ ಪ್ರಮುಖ ಪಾತ್ರದ ಕುರಿತು ಯಾರ ಆಯ್ಕೆ ಎಂಬ ಯೋಚನೆ ಬಂದ ಕೂಡಲೇ ನನಗೆ ಮೊದಲು ನೆನಪು ಬಂದಿದ್ದು ಶೀತಲ್ ಅವ್ರು, ಏಕೆಂದರೆ ಕರ್ನಾಟಕದ ಮನೆ ಹುಡುಗಿಯಾಗಿ ಶೀತಲ್ ಹೆಸರು ಪಡೆದಿದ್ದಾರೆ. ಕಥೆಗೂ ಅವರ ಆಯ್ಕೆ ಸೂಕ್ತ ಎನಿಸಿದ್ದರಿಂದ ಸಿನಿಮಾ ಜರ್ನಿ ಆರಂಭವಾಯ್ತು. ಚಿತ್ರಕಥೆಯೇ ಸಿನಿಮಾದ ಹೀರೋ ಆಗಿದ್ದು, ಎಲ್ಲ ಪಾತ್ರಗಳು ಉತ್ತಮವಾಗಿ ಮೂಡಿಬಂದಿದೆ. ಸದ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನಿರ್ದೇಶಕನಾಗಿ ಕಥೆಯ ಮೇಲಿನ ಭರವಸೆಯೇ ಇಷ್ಟು ಬೇಗ ಚಿತ್ರ ಮೂಡಿಬರಲು ಕಾರಣ. ಸಿನಿಮಾ ಅಭಿಮಾನಿಗಳು ಚಿತ್ರ ನೋಡಿ ಹೊಸ ಪ್ರಯತ್ನಕ್ಕೆ ಬೆಂಬಲ ನೀಡುವ ನಂಬಿಕೆ ಎಂದು ಅನುಭವ ಹಂಚಿಕೊಂಡರು.

    ಚಿತ್ರದ ಟೀಸರ್, ಹಾಡು ಈಗಾಗಲೇ ಜನರಿಗೆ ಇಷ್ಟವಾಗಿದ್ದು, ಎಲ್ಲೆಡೆ ಕೇಳಿ ಬರುತ್ತದೆ. ಚಿತ್ರದ ಕ್ಯಾಮೆರಾಮನ್ ಯೋಗಿ ಪ್ರತಿಯೊಂದು ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡಿದ್ದು, ವಿಜಯ್ ಎಂ ಕುಮಾರ್ ಸಂಕಲನವಿದೆ. ಚಿತ್ರ ಪ್ರಮುಖ ಪಾತ್ರದಲ್ಲಿರುವ ಕೃಷ್ಣ ಅಡಿಗ, ಅರುಣ್ ಗೌಡ ಅನುಭವಿ ತಂಡವಿದೆ. ಅಲ್ಲದೇ ಸೆನ್ಸರ್ ಬೋರ್ಡ್‍ನಲ್ಲಿ ಸಿನಿಮಾದ ಒಂದು ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದೆ, ಒಂದು ಮ್ಯೂಟ್ ಮಾಡದೇ ಪ್ರಮಾಣ ಪತ್ರ ನೀಡಿ ಹೆಗ್ಗಳಿಕೆಯೂ ಚಿತ್ರತಂಡಕ್ಕಿದೆ.

    ನಮ್ಮ ಹೊಸ ಪ್ರಯತ್ನದ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರು ಹಾಡು, ಟೀಸರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಇಂತಹ ಸ್ಟಾರ್‍ಗಳು ಚಿತ್ರದ ಬಗ್ಗೆ ವಿಶ್ವಾಸ ಮಾತು ಆಡಿದ್ದು ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಗಸ್ಟ್ 05 ಬಂದರೆ ಸಾಕು ಸ್ನೇಹ ಬಳಗದಲ್ಲೊಂದು ಸಂಭ್ರಮದ ವಾತಾವರಣ. ಎಲ್ಲ ಸ್ನೇಹಿತರು ಪರಸ್ಪರ ಒಬ್ಬರಿಗೊಬ್ಬರು ಸ್ನೇಹಿತರ ದಿನದ ಶುಭಕೋರುತ್ತಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ಗೆಳೆಯ/ಗೆಳತಿಯರಿಗೆ ಉಡುಗೊರೆಯನ್ನು ನೀಡುತ್ತಾರೆ. ಇಂದು ಸ್ನೇಹಿತರಿಗಾಗಿ ಸ್ನೇಹತನ ಹೇಳುವ ಕಥೆ ನಿಮಗಾಗಿ ಇಲ್ಲಿದೆ

    ಕೆಲವು ವರ್ಷಗಳ ಹಿಂದೆ ಅಂಕಿತ್ ಮತ್ತು ಸೂರಜ್ ಎಂಬ ಗೆಳೆಯರಿದ್ದರು. ಬಾಲ್ಯದಿಂದ ಒಟ್ಟಾಗಿಯೇ ಶಿಕ್ಷಣ ಮುಗಿಸಿದ ಗೆಳೆಯರಿಗೆ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ. ಆದ್ರೆ ಇಲ್ಲಿ ಇಬ್ಬರು ಉದ್ಯೋಗಕ್ಕಾಗಿ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಇಬ್ಬರು ಗೆಳೆಯರು ಹೋಗುವ ಮುನ್ನ ಮುಂದಿನ 10 ವರ್ಷಗಳ ನಂತರ ನಾವಿಬ್ಬರು ಇದೇ ಸ್ಥಳ, ಇದೇ ಸಮಯಕ್ಕೆ ಭೇಟಿ ಆಗೋಣ. ಅಂದು ಯಾರು ಎಷ್ಟು ಯಶಸ್ಸು ಹೊಂದಿರುತ್ತಾರೆ ಎಂಬುದನ್ನು ಲೆಕ್ಕ ಹಾಕೋಣ ಎಂದು ಹೇಳಿ ಹೊರಡುತ್ತಾರೆ.

    10 ವರ್ಷಗಳ ಬಳಿಕ ಇಬ್ಬರು ಭೇಟಿಯಾಗುವ ಸಮಯ ಬರುತ್ತದೆ. ತಮ್ಮ ಯೋಚನೆಯಂತೆಯೇ ಇಬ್ಬರೂ 10 ವರ್ಷಗಳ ಹಿಂದೆ ತೀರ್ಮಾನಿಸಿದ ರೀತಿಯಲ್ಲಿ ಅದೇ ಸ್ಥಳ ಮತ್ತು ಸಮಯಕ್ಕೆ ಭೇಟಿಯಾಗಲು ಬರುತ್ತಾರೆ. ಮೊದಲಿಗೆ ಬಂದ ಅಂಕಿತ್, ಹೋಟೆಲೊಂದರ ಬಾಗಿಲ ಬಳಿಯೇ ಗೆಳೆಯ ಸೂರಜ್ ಗಾಗಿ ಕಾಯುತ್ತಿರುತ್ತಾನೆ. ಅಂಕಿತ್ ಒಳ್ಳೆಯ ಬಟ್ಟೆ ತೊಟ್ಟು ಗೆಳೆಯನ ನಿರೀಕ್ಷೆಯಲ್ಲಿ ಇರುತ್ತಾನೆ. ಅದೇ ವೇಳೆ ಹೋಟೆಲ್‍ಗೆ ಬಂದ ಪೊಲೀಸ್ ಅಧಿಕಾರಿಯೊಬ್ಬ ಅಂಕಿತ್‍ನನ್ನು ಪ್ರಶ್ನಿಸುತ್ತಾರೆ.

    ಪೊಲೀಸ್ ಅಧಿಕಾರಿ: ಯಾರು ನೀವು? ರಾತ್ರಿ 10ಗಂಟೆಗೆ ಏನು ಮಾಡುತ್ತಿದ್ರಿ?
    ಅಂಕಿತ್: ನಾನೊಬ್ಬ ವ್ಯಾಪಾರಸ್ಥ, ನನ್ನ ಗೆಳೆಯನಿಗಾಗಿ ಕಾಯುತ್ತಿದ್ದೇನೆ.
    ಪೊಲೀಸ್ ಅಧಿಕಾರಿ: ಈ ವೇಳೆ ಇಲ್ಲಿ ನೀವು ನಿಲ್ಲೋದು ಸೂಕ್ತವಲ್ಲ ಬೇಗ ಹೊರಡಿ (ಪೊಲೀಸ್ ಅಧಿಕಾರಿ ಹಿಂದಿರುಗುತ್ತಾರೆ)

    (ಕೆಲ ಸಮಯದ ನಂತರ) ದೂರದಲ್ಲಿ ಓರ್ವ ವ್ಯಕ್ತಿ ಬರೋದನ್ನು ಅಂಕಿತ್ ಕಾಣುತ್ತಾನೆ. ಆತ ಹತ್ತಿರ ಬರುತ್ತಲೇ ನೀನು ಸೂರಜ್ ಅಲ್ವ ಎಂದು ಅನುಮಾನದ ರೀತಿಯಲ್ಲಿ ಕೇಳುತ್ತಾನೆ. ಆ ವ್ಯಕ್ತಿ ಹೌದು ಎಂದು ತಲೆ ಅಲ್ಲಾಡಿಸುತ್ತಾನೆ. ಇಬ್ಬರು ಹಲವು ಮಾತುಗಳನ್ನಾಡುತ್ತಾರೆ. ಒಳ್ಳೆಯ ಊಟವನ್ನು ಮಾಡುತ್ತಾರೆ.

    ಅಂಕಿತ್: ಸೂರಜ್, ಜೀವನಕ್ಕೆ ಏನು ಮಾಡಿಕೊಂಡಿದ್ದೀಯಾ?
    ವ್ಯಕ್ತಿ: ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದೇನೆ. ನೀನು ಏನ್ ಮಾಡುತ್ತೀದ್ದಿಯಾ?
    ಅಂಕಿತ್: ಬಂಗಾರ ವ್ಯಾಪಾರಿ (ಈ ಮಧ್ಯೆ ಅಂಕಿತ್‍ಗೆ ಇವನು ನನ್ನ ಗೆಳೆಯನಲ್ಲ ಎಂಬ ಅನುಮಾನ ಮೂಡುತ್ತದೆ)
    ಅಂಕಿತ್: (ಸಿಟ್ಟಿನಿಂದ) ಯಾರು ನೀನು? ನೀವು ನನ್ನ ಗೆಳೆಯ ಸೂರಜ್ ಅಲ್ಲ ಎಂದು ಕಿರುಚುತ್ತಾನೆ.

    ಆ ವ್ಯಕ್ತಿ ಅಂಕಿತ್ ಕೈಗೆ ಪತ್ರವೊಂದನ್ನು ನೀಡುತ್ತಾರೆ. ಈ ಮೊದಲು ಮಾತನಾಡಿಸಿದ್ದ ಪೊಲೀಸ್ ಅಧಿಕಾರಿಯೇ ಸೂರಜ್ ಎಂದು ಆ ವ್ಯಕ್ತಿ ಎಂದು ಹೇಳುತ್ತಾರೆ. ಇಂದು ಸೂರಜ್, ಕಳ್ಳ ಸಾಗಾಟಗಾರನನ್ನು ಹಿಡಿಯಲು ಹೋಟೆಲ್‍ಗೆ ಬಂದಿದ್ದರು. ಆದ್ರೆ ಆ ಸ್ಮಗಲರ್ ತನ್ನ ಆಪ್ತ ಗೆಳೆಯ ಅಂಕಿತ್ ಎಂದು ತಿಳಿದ ಕೂಡಲೇ ಕೇವಲ ಮಾತನಾಡಿಸಿ ನನ್ನ ಬಳಿ ಬಂದರು. ಅಲ್ಲದೇ ನನ್ನ ಗೆಳೆಯನನ್ನು ಬಂಧಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಇದೇ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ರು. ಹಾಗಾಗಿ ನಿಮ್ಮನ್ನು ಬಂಧಿಸಲು ನಾನು ಬಂದಿದ್ದೇನೆ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿ ಹೇಳುತ್ತಾರೆ.

    ತನಗಾಗಿ ಸಾವನ್ನಪ್ಪಿದ ಗೆಳೆಯನಿಗಾಗಿ ಅಂಕಿತ್ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗುತ್ತಾನೆ.

  • ಮರ್ಡರ್ ಮಿಸ್ಟರಿಯನ್ನು `ವೆನಿಲ್ಲಾ’ ಐಸ್‍ಕ್ರೀಂನೊಂದಿಗೆ ಸವಿಯಿರಿ!

    ಮರ್ಡರ್ ಮಿಸ್ಟರಿಯನ್ನು `ವೆನಿಲ್ಲಾ’ ಐಸ್‍ಕ್ರೀಂನೊಂದಿಗೆ ಸವಿಯಿರಿ!

    ಮರ್ಡರ್ ಮಿಸ್ಟರಿಯ ಕಥೆಗಳಿಗೆ ಕೊರತೆಯಿಲ್ಲ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ ಕಥೆಯನ್ನು ಸರಿಯಾಗಿ ನಿರೂಪಿಸದ ಕಾರಣ ಸಿನಿಮಾಗಳಿಗೆ ಸೋಲಾಗುತ್ತದೆ. ಆದರೆ ಸದಭಿರುಚಿಯ ಸಿನಿಮಾಗಳ ನಿರ್ದೇಶಕ ಎಂದೇ ಪ್ರಸಿದ್ಧರಾಗಿರುವ ಜಯತೀರ್ಥ ಅವರು ಸಿನಿ ಪ್ರಿಯರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಸುಂದರವಾಗಿ ಸವಿಯಲು `ವೆನಿಲ್ಲಾ’ವನ್ನು ನಿಮ್ಮ ಮುಂದಿಟ್ಟಿದ್ದಾರೆ.

    ಒಂದು ಭಯಾನಕ ಕೊಲೆ, ಕ್ಷಣಕ್ಷಣಕ್ಕೂ ರೋಚಕ ಟ್ವಿಸ್ಟ್, ಕೊಲೆಗೂ ನಾಯಕ ನಟಿಗೂ ಇರೋ ಸಂಬಂಧ ಏನು? ಕೊಲೆ ಮಾಡಿದ್ದು ಯಾಕೆ? ಕೊಲೆ ಮಾಡಿದವರು ಯಾರು? ಈ ರೀತಿಯಾಗಿ ಪ್ರತಿಹಂತದಲ್ಲಿ ವೀಕ್ಷಕರಿಗೆ ರೋಚಕತೆಯನ್ನು ತೋರಿಸುವಲ್ಲಿ ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ಯಶಸ್ವಿಯಾಗಿದ್ದಾರೆ.

    ಮರ್ಡರ್, ಒಂದು ಭಯಾನಕ ರೋಗ ಮತ್ತು ಎಂಥಾ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಪ್ರಾಂಜಲ ಪ್ರೀತಿಯ ಸುತ್ತಾ ಸುತ್ತುವ ಈ ಕಥೆಯಲ್ಲಿ ನಾಯಕ ಮತ್ತು ನಾಯಕಿ ಬಾಲ್ಯ ಸ್ನೇಹಿತರು. ಈ ನಡುವೆ ನಾಯಕಿಯ ಕಡೆಯಿಂದ ಅಚಾನಕ್ಕಾಗುವ ಒಂದು ಆಕ್ಸಿಡೆಂಟ್, ಅದಕ್ಕೆ ತಲೆ ಕೊಟ್ಟು ಹೋರಾಡುವ ಹೀರೋ ಹೀಗೆ ಒಂದು ಚಿತ್ರಕ್ಕೆ ಏನೆಲ್ಲ ಫ್ಲೇವರ್ ಗಳು ಬೇಕೋ ಆ ಎಲ್ಲ ಫ್ಲೇವರ್ ಗಳ ಘಮ ವೆನಿಲ್ಲಾದಲ್ಲಿದೆ.

    ಮಂಡ್ಯ ರಮೇಶ್ ಗರಡಿಯಲ್ಲಿ ಪಳಗಿ ರಂಗಭೂಮಿಯಲ್ಲಿ ಸೈ ಎನಿಸಿ ಉತ್ತಮ ಕಥೆಯ ಮೂಲಕವೇ ಕನ್ನಡ ಚಿತ್ರದಲ್ಲಿ ಎಂಟ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದ ಅವಿನಾಶ್ ಅವರು ಅನುಭವಿ ನಟನಂತೆ ಅಭಿನಯಿಸಿದ್ದಾರೆ. ಅವಿನಾಶ್ ಮತ್ತು ಸ್ವಾತಿ ಕೊಂಡೆ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದ್ದು ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವಿದೆ. ಪ್ರತೀ ಕ್ಷಣವೂ ಕುತೂಹಲವನ್ನು ಮೂಡಿಸುವ `ವೆನಿಲ್ಲಾ’ವನ್ನು ಥಿಯೇಟರ್ ನಲ್ಲಿ ಕುಳಿತು ಚೆನ್ನಾಗಿ ಸವಿಯಬಹುದು.