Tag: Store

  • ಕಣ್ಣು ಕಾಣಲ್ಲವೆಂದು ಕೊರಗುವವರಿಗೆ ಸ್ಪೂರ್ತಿ ಈ ವ್ಯಕ್ತಿ – ವೀಡಿಯೋ ನೋಡಿ

    ಕಣ್ಣು ಕಾಣಲ್ಲವೆಂದು ಕೊರಗುವವರಿಗೆ ಸ್ಪೂರ್ತಿ ಈ ವ್ಯಕ್ತಿ – ವೀಡಿಯೋ ನೋಡಿ

    – ಬಾಳೆಕಾಯಿ ಚಿಪ್ಸ್ ತಯಾರಿಸಿ ಜೀವನ ಸಾಗಿಸ್ತಿದ್ದಾರೆ

    ಮುಂಬೈ: ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುವುದಕ್ಕೆ ಈ ಕಥೆಯ ಸಾಕ್ಷಿ. ಎರಡು ಕಣ್ಣು ಕಾಣಿಸದಿದ್ದರೂ ವ್ಯಕ್ತಿಯೋರ್ವ ರಸ್ತೆ ಬದಿಯಲ್ಲಿ ಕುಳಿತು ಬಾಳೆಕಾಯಿ ಚಿಪ್ಸ್ ತಯಾರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    blind man

    ವ್ಯಕ್ತಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದು, ನಾಸಿನ್‍ನ ಮಖ್ಮಲಾಬಾದ್ ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ

    blind man

    ವೀಡಿಯೋದಲ್ಲಿ, ಬಾಳೆಕಾಯಿಯನ್ನು ಸಕ್ರಿಯವಾಗಿ ತುರಿದು ಬಾಣಲಿಗೆ ಬಿಡುತ್ತಾನೆ. ನಂತರ ಬಿಸಿ ಎಣ್ಣೆಯಲ್ಲಿ ಅದನ್ನು ಬೇಯಿಸಿ  ದೊಡ್ಡ ಪಾತ್ರೆಗೆ ಹಾಕುತ್ತಾನೆ. ಬಳಿಕ ಸಹಾಯಕನೋರ್ವ ಅದನ್ನು ಮಸಾಲೆಯೊಂದಿಗೆ ಮಿಶ್ರಣ ಮಾಡಿ, ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡುವುದನ್ನು ಕಾಣಬಹುದಾಗಿದೆ.

    ಈ ವೀಡಿಯೋವನ್ನು ಸಂಸ್ಕರ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವ್ಯಕ್ತಿಯನ್ನು ಗೌರವಿಸಿ. ನಾಸಿಕ್‍ನಲ್ಲಿ ನಿಮಗೆ ಯಾರಾದರೂ ತಿಳಿದಿದ್ದರೆ, ಈ ವ್ಯಕ್ತಿಯ ಬಳಿ ಬಾಳೆಕಾಯಿ ಚಿಪ್ಸ್ ಖರೀದಿಸಲು ಹೇಳಿ. ಅವರ ದೃಷ್ಟಿಯಲ್ಲಿ ಮರಳಿ ಪಡೆಯಲು ನಾವೆಲ್ಲರೂ ಒಟ್ಟಾಗಿ ಅವರಿಗೆ ಸಹಾಯ ಮಾಡೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶಾರೂಖ್ ಮಗನ ಅರೆಸ್ಟ್ ಹಿಂದೆ ಬಿಜೆಪಿ ಉಪಾಧ್ಯಕ್ಷ – NCB ಅಧಿಕಾರಿಗಳಿಂದ್ಲೇ ಪಿತೂರಿ ಆರೋಪ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 12 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಈತನ ಸ್ಥಿತಿಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ ಮತ್ತು ಆತನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಏಷ್ಯಾದ ಹಳೆಯ ರಾಷ್ಟ್ರೀಯ ಉದ್ಯಾನವನಕ್ಕೆ ರಾಮಗಂಗಾ ಹೆಸರಿಡುವಂತೆ ಒತ್ತಾಯ

  • ಸೋಮವಾರದಿಂದ ಹೊಸ ರೂಲ್ಸ್, ಹೊಸ ಲೈಫ್ – ಅನ್‍ಲಾಕ್ 2.Oಗೆ ಬೆಂಗಳೂರಿಗರ ಸಿದ್ಧತೆ

    ಸೋಮವಾರದಿಂದ ಹೊಸ ರೂಲ್ಸ್, ಹೊಸ ಲೈಫ್ – ಅನ್‍ಲಾಕ್ 2.Oಗೆ ಬೆಂಗಳೂರಿಗರ ಸಿದ್ಧತೆ

    – ಅಂಗಡಿ, ಮುಗ್ಗಟ್ಟುಗಳ ಸ್ವಚ್ಛತೆ ಕಾರ್ಯ ಆರಂಭ
    – ಡಿಪೋಗಳಿಂದ ಹೊರ ಬಂದು ಬಸ್‍ಗಳ ರೌಂಡ್ಸ್

    ಬೆಂಗಳೂರು: ಸೋಮವಾರದಿಂದ ಎರಡನೇ ಹಂತದ ಅನ್‍ಲಾಕ್ ಆಗಲಿದೆ. ಹಾಗಾಗಿ ನಾಳೆಯ ಹೊಸ ಜೀವನಕ್ಕೆ ಜನ ಇಂದಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬಾಗಿಲು ಹಾಕಿದ್ದ ಅಂಗಡಿಗಳ ಬಾಗಿಲು ತೆರೆದು ಸಿಬ್ಬಂದಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳು ಸೂಪರ್ ಮಾರುಕಟ್ಟೆಗಳಲ್ಲಿ ಹೋಲ್‍ಸೇಲ್ ಖರೀದಿಯತ್ತ ಚಿಂತಿಸಲಿದ್ದಾರೆ. ಹೀಗಾಗಿ ಸೂಪರ್ ಮಾರುಕಟ್ಟೆಗಳಲ್ಲಿ ಇಂದು ಸ್ಟಾಕ್ ಹೆಚ್ಚಳದ ಲಕ್ಷಣಗಳು ಕಾಣುತ್ತಿದೆ.

    ಲಗ್ಗೆರೆ ಖಾಸಗಿ ಸೂಪರ್ ಮಾರುಕಟ್ಟೆಯಲ್ಲಿ ಬಟ್ಟೆ, ಎಲೆಕ್ಟ್ರಿಕ್ ವಸ್ತುಗಳ ಲೋಡ್ ಇಂದು ಲೋಡಿಂಗ್, ಅನ್ ಲೋಡ್ಡಿಂಗ್ ಕೆಲಸ ನಡೆಯುತ್ತಿದೆ .ಸೂಪರ್ ಮಾರುಕಟ್ಟೆಗಳಲ್ಲಿ ಎಂಆರ್ ಪಿಗಿಂತ ಕಡಿಮೆ ದರದಲ್ಲಿ ವಸ್ತುಗಳು ಲಭ್ಯವಿರುತ್ದೆ. ಇದನ್ನ ಖರೀದಿಸಿ ಸಣ್ಣ ಪುಟ್ಟ ಮಳಿಗೆಗಳು ಲಾಕ್‍ಡೌನ್ ಅವಧಿಯನ್ನ ನಷ್ಟ ಭರಿಸುವತ್ತ ಚಿಂತಿಸುತ್ತಿದೆ.

    ಫಿಟ್‍ನೆಸ್ ಪ್ರಿಯರಿಗಾಗಿ ಭಾರೀ ಸಿದ್ಧತೆ: ಆನ್‍ಲಾಕ್ 2ರಲ್ಲಿ ಜಿಮ್ ಗಳು ಶೇ.50 ರಷ್ಟು ಓಪನ್ ಗೆ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ನಗರದ ಬಹುತೇಕ ಜಿಮ್ ಗಳಲ್ಲಿ ಭಾರಿ ತಯಾರಿ ನಡೆಯುತ್ತಿದೆ. ನಾಗರಬಾವಿಯ ಜಿಮ್ ವೊಂದರಲ್ಲಿ ಈಗಾಗಲೇ ಸಿದ್ಧತೆ ಶುರುವಾಗಿದೆ. ಸ್ಯಾನಿಟೈಜರ್ ಹಾಕಿ ಪ್ರತಿಯೊಂದು ಸಲಕರಣೆಗಳನ್ನ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಇದೇ ವೇಳೆ ಪ್ರತಿಯೊಬ್ಬ ಮೆಂಬರ್ ಗೆ ಸರ್ಕಾರದ ಆದೇಶದಂತೆ ಡಬಲ್ ಶೆಡ್ಯೂಲ್ ನಲ್ಲಿ ಬರಲು ತಿಳಿಸಲಾಗುತ್ತಿದೆ. ಅಂದರೆ ಒಂದ್ ಬ್ಯಾಚ್ ಗೆ 20 ಜನ ಇದ್ದರೆ, ಕೇವಲ 10 ಜನ ಅರ್ಧ ಗಂಟೆ ಹಾಗೂ ಉಳಿದ 10 ಜನ ಅರ್ಧ ಗಂಟೆ ಬರುವಂತೆ ಸೂಚನೆ ನೀಡಲಾಗುತ್ತಿದೆ.

    ಇನ್ನು ಮುಂದೆ ಪ್ರತಿಯೊಬ್ಬರು ತಮ್ಮದೇ ಕರವಸ್ತ್ರ, ಸ್ಯಾನಿಟೈಜರ್ , ತಪ್ಪದೇ ಮಾಸ್ಕ್ ತರಲು ಸೂಚಿಸಲಾಗಿದೆ. ಈ ಸಂಬಂಧ ಜಿಮ್ ಮಾಲಿಕ ರಫೀಕ್ ಮಾತನಾಡಿ, ಸರ್ಕಾರ ಅನುಮತಿ ನೀಡಿದೆ ಜತೆಗೆ ಕಟ್ಟಡದ ಮಾಲೀಕರು ಬಾಡಿಗೆ ಒತ್ತಡ ನೀಡುತ್ತಿರುವುದರಿಂದ ರಿಯಾಯಿತಿ ಕೊಡಿಸಿದರೆ ಸೂಕ್ತ ಎಂದು ಮನವಿ ಮಾಡಿದರು.

    ಪ್ರಯಾಣಿಕರ ಹೊತ್ತೊಯ್ಯಲು ಮೆಟ್ರೋ ಸಜ್ಜು: ನಗರದಲ್ಲಿ ಮತ್ತೆ ಮೆಟ್ರೋ ಸೇವೆ ಆರಂಭವಾಗಲಿದೆ. ಸರ್ಕಾರದ ಸೂಚನೆಯಂತೆ ಕೋವಿಡ್ ನಿಯಮಗಳ ಅನುಸರಿಸಿಯೇ ಮೆಟ್ರೋ ರೈಲು ಸಂಚಾರ ಆಗಲಿದೆ. ಮೆಟ್ರೋ ಸ್ಟೇಷನ್ ,ಮೆಟ್ರೋ ಟ್ರೈನ್ ಕ್ಯಾಬಿನ್, ಸೀಟುಗಳು, ಸ್ಟೇಷನ್ ಲಗೇಜ್ ಪರಿಶೀಲನೆ ಮಿಷನ್ ಎಲ್ಲವನ್ನು ಪ್ರತ್ಯೇಕವಾಗಿ ಸ್ಯಾನಿಟೈಜೇಷನ್ ಮಾಡಲಾಗಿದೆ.

    ಮೆಟ್ರೋ ಪ್ರಯಾಣಿಕರು ಪಾಲಿಸಲೇಬೇಕಾದ ನಿಯಮಗಳು:
    * ಮಾಸ್ಕ್ ತಪ್ಪದೇ ಧರಿಸಲೇಬೇಕು.
    * ದೈಹಿಕ ಅಂತರ ಕಾಯಲೇಬೇಕು.
    * ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ಆದ್ಯತೆ.
    * ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿರಬೇಕು.
    * ಮೆಟ್ರೋ ಸಿಬ್ಬಂದಿ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಜ್ ಸೂಚನೆ ನೀಡಿದಾಗ ತಪ್ಪದೇ ಪಾಲಿಸಬೇಕು.

    ಬಸ್‍ಗಳ ರೌಂಡ್ಸ್: ನಗರದ ಜೀವನಾಡಿ ಬಿಎಂಟಿಸಿ ರಸ್ತೆಗೆ ಇಳಿಯಲಿ ಅಣಿಯಾಗುತ್ತಿದೆ. ಇಷ್ಟು ದಿನ ಲಾಕ್‍ಡೌನ್ ಅಂತ ಡಿಪೋಗಳಿಂದ ಹೊರಬಂದು ಬಸ್ ಗಳು ರೌಂಡ್ಸ್ ಮಾಡುತ್ತಿದೆ.

    ಪ್ರಯಾಣಿಕರ ಬೇಡಿಕೆ ಆಧರಿಸಿ ಬಸ್ ಗಳ ಸಂಚಾರ ಇರಲಿದ್ದು, ಶೇ.50 ರಷ್ಟು ಬಸ್ ಓಡಿಸಲು ಅನುಮತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಗರದ ಅತ್ತಿಗುಪ್ಪೆ ಸಾರಿಗೆ ಸಂಕೀರ್ಣದಲ್ಲಿ ಎಲ್ಲ ಬಸ್ ಗಳ ಸ್ವಚ್ಛತಾ ಕಾರ್ಯವನ್ನ ಸಿಬ್ಬಂದಿ ಮಾಡಿದ್ದು, ಇಂದು ಬಸ್ ಕೀಗಳನ್ನ ಅಧಿಕಾರಿಯಿಂದ ಪಡೆಯುತ್ತಿದ್ದರು. ಪ್ರಯಾಣಿಕರಂತೂ ಬಸ್ ಗಳಿಲ್ಲದೇ ಕೆಲಸ ಕಾರ್ಯಗಳಿಗೆ ಹೋಗಲಾಗದೇ ನೊಂದಿದ್ದರು. ಹಲವೆಡೆ ಬಸ್ ಇಲ್ಲ ಎಂದೇ ಅಗತ್ಯ ವಸ್ತುಗಳ ದರ ಸಹ ಡಬಲ್ ಬೆಲೆಗೆ ಮಾರಾಟವಾಗುತ್ತಿತ್ತು. ಈಗ ಬಸ್ ಸಂಚಾರ ಆರಂಭವಾದ ಮೇಲೆ ಎಲ್ಲ ತಹಬದಿಗೆ ಬರುತ್ತಾ ಎಂಬುದನ್ನ ನೋಡಬೇಕಾಗಿದೆ.

    ವ್ಯಾಪಾರ ನಿರೀಕ್ಷೆ ಮಾತ್ರ ಕಷ್ಟ ಕಷ್ಟ: ದೇವರು ವರ ಕೊಟ್ರು ಪೂಜಾರಿ ಕೊಡಲ್ಲ ಎಂಬ ಮಾತಿದೆ. ಇದಕ್ಕೆ ತಕ್ಕ ಹಾಗೇ ಸದ್ಯದ ಕರ್ಮಷಿಯಲ್ ಮಳಿಗೆಗಳ ಪರಿಸ್ಥಿತಿ ಹೋಲಿಕೆ ಆಗುತ್ತಿದೆ. ನಗರದ ಅವಿನ್ಯೂ ರೋಡ್, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಯ ಅಡ್ಡರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಡೀ ರಸ್ತೆಗಳನ್ನ ಅಗೆದು ಕಾಮಗಾರಿಯ ಸಲಕರಣೆಗಳನ್ನ ಹಾಕಲಾಗಿದೆ. ಪರಿಣಾಮ ಬಹುತೇಕ ಶಾಪ್ ಗಳ ಬಾಗಿಲು ತೆಗೆಯುವುದು ಸದ್ಯ ಅಸಾಧ್ಯದ ಮಾತು. ಹೀಗಿರುವಾಗ ವ್ಯಾಪಾರ ಶುರು ಮಾಡಿ ಲಾಭವಂತೂ ದೂರದ ಮಾತಿದೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್‍ಲಾಕ್- ನಿಯಮಗಳೇನು?

    ಬಟ್ಟೆ, ಜ್ಯೂಯೆಲರಿ, ಎಲೆಕ್ಟ್ರಾನಿಕ್ ಗೂಡ್ಸ್ , ಸ್ಟೀಲ್ ಐಟಂ ಎಲ್ಲ ಹೋಲ್ ಸೆಲ್ ದರದಲ್ಲಿ ಸಿಗಲಿದೆ. ಇದಕ್ಕಾಗಿ ವ್ಯಾಪಾರಿಗಳು ಕಷ್ಟದಲ್ಲಿ ಮಳಿಗೆ ಓಪನ್ ಮಾಡಿದರೂ ಗ್ರಾಹಕರು ಬರಲು ಕಷ್ಟದ ಸ್ಥಿತಿ ಇದೆ. ರಸ್ತೆಯ ಒಳಗೆ ಬರಲು ,ಮತ್ತೆ ಶಾಪಿಂಗ್ ಮುಗಿಸಿ ಹೋಗಲು ನಡೆದು ಬರಬೇಕಾಗುತ್ತದೆ. ಕಡಿಮೆ ದರ ಎಂದು ಲೆಕ್ಕ ಹಾಕಿ ಖರೀದಿ ಜಾಸ್ತಿ ಮಾಡಿದರೂ, ಅದನ್ನ ಹೊತ್ತೊಯ್ಯಲು ವಾಹನಗಳ ಲಭ್ಯತೆ ಇರುವುದಿಲ್ಲ.

  • ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು

    ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು

    ರಾಯಚೂರು: ಸಂಪೂರ್ಣ ಲಾಕ್‍ಡೌನ್ ಮಧ್ಯೆ ಇಂದು ರಾಯಚೂರಿನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ಮದ್ಯ ಖರೀದಿಗಾಗಿ ನೂಕುನುಗ್ಗಲು ಆಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ: ಕೆ.ಎಸ್.ಈಶ್ವರಪ್ಪ

    ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ 140 ಬಾರ್ ಮಾಲೀಕರಿಗೂ ಲಾಕ್‍ಡೌನ್ ಸಡಿಲಿಕೆ ಇದ್ದಾಗಲೇ ಮದ್ಯ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ಬಾರ್ ಮಾಲೀಕರು ಮದ್ಯ ಖರೀದಿಗೆ ಗೋದಾಮಿನಲ್ಲಿ ನೂಕು ನುಗ್ಗಲು ಮಾಡಿದ್ದಾರೆ. ಅಧಿಕಾರಿಗಳ ತಾರತಮ್ಯದಿಂದ ನಿಗದಿತ ಪ್ರಮಾಣದಲ್ಲಿ ಮದ್ಯ ಸಿಗದಿರುವ ಹಿನ್ನೆಲೆ ಮದ್ಯದಂಗಡಿ ಮಾಲೀಕರು ಸಹ ಕ್ಯೂ ನಿಂತು ಮದ್ಯಖರೀದಿಸಬೇಕಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?

    ಈಗಾಗಲೇ ಮದ್ಯದಂಗಡಿ ಮಾಲೀಕರು ಮೇಲಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ನೂಕುನುಗ್ಗಲು ಮಾಡಿಕೊಂಡು ಮದ್ಯ ಖರೀದಿಸುತ್ತಾರೆ. ಮದ್ಯ ಖರೀದಿ ಮಾಡಲು ದೊಡ್ಡ ದೊಡ್ಡ ಚೀಲಗಳನ್ನ ಹಿಡಿದು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿರುತ್ತಾರೆ. ಹೆಚ್ಚು ಪ್ರಮಾಣದ ಮದ್ಯ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಜನರಿದ್ದಾರೆ. ಅಧಿಕಾರಿಗಳು ಏನೇ ಕ್ರಮ ಕೈಗೊಂಡರೂ ಲಾಕ್‍ಡೌನ್ ಸಮಯದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ.

  • ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಟೈರ್ ಅಂಗಡಿ- ತಪ್ಪಿದ ಅನಾಹುತ

    ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಟೈರ್ ಅಂಗಡಿ- ತಪ್ಪಿದ ಅನಾಹುತ

    – ಲಕ್ಷಾಂತರ ರೂ. ವಸ್ತುಗಳು ಭಸ್ಮ

    ಕೋಲಾರ: ನೂರಾರು ಜನ ಸೇರುವ ಪ್ರದೇಶದಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡಿದ್ದು, ಟೈರ್ ಅಂಗಡಿಯಲ್ಲಿ ಹೊತ್ತಿ ಉರಿದ ಘಟನೆ ನಗರದ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆ ಬಳಿ ನಡಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಜಾಕೀರ್ ಅವರ ಟೈರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಅಂಗಡಿ ಬೃಹದಾಕಾರವಾಗಿ ಹೊತ್ತಿ ಉರಿಯಲು ಆರಂಭಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

    ಅಲ್ಲಿದ್ದವರು ಏನಾಯ್ತು ಎಂದು ನೋಡುವಷ್ಟರಲ್ಲಿ ಆಕಾಶದೆತ್ತರಕ್ಕೆ ಕಪ್ಪು ಹೊಗೆ ಇಡೀ ಪ್ರದೇಶವನ್ನು ಆವರಿಸಿತ್ತು. ಪಂಕ್ಚರ್ ಅಂಗಡಿಯಲ್ಲಿದ್ದ ಟೈರ್‍ಗಳನ್ನು ಹೊರತೆಗೆದು ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಮೂರು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಿದರು ಬೆಂಕಿ ಆರಲಿಲ್ಲ, ಕೊನೆಗೆ ಜೆಸಿಬಿ ಸಹಾಯದಿಂದ ಟೈರ್ ಅಂಗಡಿಯನ್ನು ತೆರವು ಗೊಳಿಸಿದ ನಂತರ ಬೆಂಕಿ ಹತೋಟಿಗೆ ಬಂತು.

    ಟೈರ್ ಅಂಗಡಿಯ ಹಿಂಭಾಗದಲ್ಲಿ ಬಾರ್ ಇತ್ತು. ಅಲ್ಲಿನ ಕಸದ ರಾಶಿಗೆ ಹಾಕಿದ್ದ ಬೆಂಕಿಯಿಂದ ಅಂಗಡಿಗೆ ಬೆಂಕಿ ಬಿದ್ದಿರಬಹುದು ಎನ್ನಲಾಗಿದೆ. ಅಂಗಡಿಯ ಮೇಲೆ 66 ಕೆವಿ ವಿದ್ಯುತ್ ಲೈನ್ ಹೋಗಿದೆ. ಅಲ್ಲದೆ ಪಕ್ಕದಲ್ಲೇ ಮೂರ್ನಾಲ್ಕು ಅಂಗಡಿಗಳಿಗೆ ಬೆಂಕಿ ವ್ಯಾಪಿಸುವ ಆತಂಕವಿತ್ತು.

    ಅಂಗಡಿಗೆ ಹೊಂದಿಕೊಂಡಂತೆ ಎಪಿಎಂಸಿ ಮಾರುಕಟ್ಟೆ ಇದ್ದು, ನೂರಾರು ಜನ ಕೆಲಸ ಮಾಡುತ್ತಿದ್ದರು. ಅಂಗಡಿಯೊಳಗಿದ್ದ ಕಂಪ್ರಷರ್, ಯಂತ್ರಗಳು ಸಿಡಿಯುವ ಆತಂಕ ಇತ್ತು. ಹೀಗಾಗಿ ಪೊಲೀಸರು ಜನರನ್ನು ಚದುರಿಸಿ ಬೆಂಕಿ ನಂದಿಸಲು ನೆರವು ನೀಡಿದರು. ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಅವಘಡದಿಂದ ಅಂಗಡಿಯಲ್ಲಿದ್ದ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಟೈರ್, ಯಂತ್ರೋಪಕರಣಗಳು, ಎರಡು ಬೈಕ್‍ಗಳು ಸುಟ್ಟು ಕರಕಲಾಗಿವೆ.

  • ಬೆಳ್ಳಂಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಲಕ್ಷಾಂತರ ರೂಪಾಯಿ ವಸ್ತುಗಳು ಬೆಂಕಿಗಾಹುತಿ

    ಬೆಳ್ಳಂಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಲಕ್ಷಾಂತರ ರೂಪಾಯಿ ವಸ್ತುಗಳು ಬೆಂಕಿಗಾಹುತಿ

    ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಅಂಗಡಿಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ.

    ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಈ ಘಟನೆ ನಡೆದಿದೆ. ಬೆಳಗ್ಗೆ ಸುಮಾರು 3.30ರ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಒಂದು ಅಂಗಡಿಗೆ ಬೆಂಕಿ ಹೊತ್ತಿಕೊಂಡು ಬಳಿಕ ಮತ್ತೆರಡು ಅಂಗಡಿಗಳಿಗೂ ವ್ಯಾಪಿಸಿದೆ. ಹಣ್ಣಿನ ಅಂಗಡಿ, ಚಪ್ಪಲಿ ಅಂಗಡಿ ಹಾಗೂ ವಾಚ್ ರಿಪೇರಿ ಅಂಗಡಿ ಬೆಂಕಿಗೆ ಆಹುತಿಯಾಗಿವೆ.

    ಘಟನೆ ವೇಳೆ ಅಂಗಡಿಗಳಲ್ಲಿದ್ದ ಹಣ್ಣು ಸೇರಿದಂತೆ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಕುರಿತಂತೆ ಇದೀಗ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗುಜುರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ – 4 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

    ಗುಜುರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ – 4 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

    ರಾಯಚೂರು: ತಡರಾತ್ರಿ ಗುಜುರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಕೋಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಗುಜುರಿ ಅಂಗಡಿಯು ಸೈಯದ್ ಉಸ್ಮಾನ್ ಎಂಬವರಿಗೆ ಸೇರಿದೆ. ಘಟನೆಯಿಂದ ಅಂಗಡಿಯಲ್ಲಿದ್ದ ನಾಲ್ಕು ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕೂಡಲೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿನಂದಿಸಿದ್ದರಿಂದ ಕೆಲವಷ್ಟು ವಸ್ತುಗಳು ಉಳಿದುಕೊಂಡಿದೆ.

    ಸುಮಾರು ಎಂಟು ಲಕ್ಷ ಮೌಲ್ಯದ ವಸ್ತುಗಳಲ್ಲಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಸ್ತು ಸುಟ್ಟುಹೋಗಿವೆ. ಆದರೆ ಬೆಂಕಿ ಹೊತ್ತಿಕೊಂಡಿದ್ದರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಳೆದ ವರ್ಷ ಸಹ ಗುಜುರಿ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿ ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿದ್ದವು. ಈಗ ಪುನಃ ಬೆಂಕಿ ಅವಘಡ ಸಂಭವಿಸಿದೆ.

    ಈ ಸಂಬಂಧ ಸಿಂಧನೂರು ನಗರ ಪೋಲೀಸ್ ಠಾಣೆಯಲ್ಲಿ ಸೈಯದ್ ಉಸ್ಮಾನ್ ಪ್ರಕರಣ ದಾಖಲಿಸಿದ್ದಾರೆ.

  • ದಿನದ 24 ಗಂಟೆ ಅಂಗಡಿ, ವಾಣಿಜ್ಯ ಮಳಿಗೆ ತೆರೆಯಲು ಅವಕಾಶ

    ದಿನದ 24 ಗಂಟೆ ಅಂಗಡಿ, ವಾಣಿಜ್ಯ ಮಳಿಗೆ ತೆರೆಯಲು ಅವಕಾಶ

    – 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳಿಗೆ ಅನುಮತಿ

    – ಮೂರು ವರ್ಷಕ್ಕೆ ಅಧಿಸೂಚನೆ ಅನ್ವಯ

    ಬೆಂಗಳೂರು: ದಿನದ 24 ಗಂಟೆ ಅಂಗಡಿ ತೆರೆಯಲು ಸರ್ಕಾರ ಅವಕಾಶ ನೀಡಿದ್ದು, 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳು ವಾರದ ಏಳೂ ದಿನ, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಈ ಕುರಿತು ಕಾರ್ಮಿಕ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ ಮೂರು ವರ್ಷ ಈ ಅಧಿಸೂಚನೆ ಅನ್ವಯವಾಗಲಿದೆ. ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು ತಮ್ಮ ನೌಕರರಿಗೆ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಅದನ್ನು ಅಂಗಡಿಯಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ರಜೆ ಹಾಗೂ ವಾರದ ರಜೆಯಲ್ಲಿರುವ ಉದ್ಯೋಗಿಯ ಮಾಹಿತಿಯನ್ನು ಎಲ್ಲರಿಗೂ ಕಾಣಿಸುವಂತೆ ಪ್ರದರ್ಶನ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಕಾರ್ಮಿಕರ ಸಂಬಳ ಮತ್ತು ಹೆಚ್ಚುವರಿ ಅವಧಿಯ ಭತ್ಯೆಯನ್ನು 1963ರ ಸಂಬಳ ಮತ್ತು ಭತ್ಯೆ ಕಾಯ್ದೆ ಅನ್ವಯ ನೀಡಬೇಕು. ಪ್ರತಿಯೊಬ್ಬ ಕಾರ್ಮಿಕರಿಗೆ 8 ಗಂಟೆ ಅವಧಿಗೆ ಮೀರಿ ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಹೆಚ್ಚುವರಿ ಅವಧಿಯೂ ಗರಿಷ್ಠ 2 ಗಂಟೆ ಮೀರುವಂತಿಲ್ಲ. ಮೂರು ತಿಂಗಳಲ್ಲಿ 50 ಗಂಟೆ ಹೆಚ್ಚುವರಿ ಅವಧಿ ಮೀರುವಂತಿಲ್ಲ ಎಂದು ಸೂಚಿಸಿದೆ.

    ಕಾರ್ಮಿಕರನ್ನು ರಜೆಯ ದಿನ ಅಥವಾ ಕೆಲಸದ ಅವಧಿ ಮುಗಿದ ಮೇಲೆ ನಿರ್ಧಿಷ್ಠ ಸೂಚನೆ ಇಲ್ಲದೇ ಹೆಚ್ಚುವರಿ ಅವಧಿ ಕೆಲಸ ಮಾಡಿಸುವುದು ಕಂಡು ಬಂದರೆ ಅಂತಹ ಅಂಗಡಿ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯ ಸಂದರ್ಭದಲ್ಲಿ ರಾತ್ರಿ 8 ಗಂಟೆ ನಂತರ ಮಹಿಳಾ ಕಾರ್ಮಿಕರನ್ನು ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಮಹಿಳಾ ಕಾರ್ಮಿಕರು ಲಿಖಿತ ಒಪ್ಪಿಗೆ ನೀಡಿದರೆ ರಾತ್ರಿ 8 ರಿಂದ ಬೆಳಗಿನ 6 ಗಂಟೆಯ ತನಕ ಅವರ ಗೌರವಕ್ಕೆ ಧಕ್ಕೆ ಬಾರದಂತೆ, ರಕ್ಷಣೆ ನೀಡಿ, ಕೆಲಸ ಒದಗಿಸಬಹುದು.

    ಎಲ್ಲ ಮಹಿಳಾ ಸಿಬ್ಬಂದಿಗೆ ಶಿಫ್ಟ್ ಆಧಾರದಲ್ಲಿಯೇ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಅಂಗಡಿಯ ಬೋರ್ಡ್‍ನಲ್ಲಿ ಮಾಹಿತಿ ಪ್ರದರ್ಶನ ಮಾಡಬೇಕು. ಅಂಗಡಿ ಮಳಿಗೆಗಳಲ್ಲಿ ಕಾರ್ಮಿಕರಿಗೆ ಅಗತ್ಯ ಶೌಚಾಲಯ, ವಿಶ್ರಾಂತಿ ಕೊಠಡಿ, ಸೇಫ್ಟಿ ಲಾಕರ್ ಒದಗಿಸಬೇಕು. ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅಂಗಡಿ ಮಳಿಗೆಗಳು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ದೂರು ಸಲ್ಲಿಸಲು ಆಂತರಿಕ ಸಮಿತಿ ರಚನೆ ಮಾಡಬೇಕು. ಆ ಸಮಿತಿ ಸಕ್ರೀಯವಾಗಿರುವಂತೆ ನೋಡಿಕೊಳ್ಳಬೇಕು.

    ಈ ನಿಯಮಗಳ ಉಲ್ಲಂಘನೆ ಮಾಡುವ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ವಿರುದ್ದ 1961 ವಾಣಿಜ್ಯ ಅಂಗಡಿಗಳು ಮತ್ತು ಮಳಿಗೆಗಳ ಕಾಯ್ದೆ ಪ್ರಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಕರ್ನಾಟಕ ಬಂದ್ – ಟೈರ್‌ಗೆ ಬೆಂಕಿ ಹಚ್ಚಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ ಕನ್ನಡಿಗರು

    ಕರ್ನಾಟಕ ಬಂದ್ – ಟೈರ್‌ಗೆ ಬೆಂಕಿ ಹಚ್ಚಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ ಕನ್ನಡಿಗರು

    ಬೆಂಗಳೂರು: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‍ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೊಸೂರು ರಸ್ತೆಯಲ್ಲಿ ಪ್ರತಿಭಟನಾಕಾರರು ಟೈರ್‌ಗೆ  ಬೆಂಕಿ ಹಚ್ಚಿ ಪ್ರತಿಭಟನೆ ಇಳಿದಿದ್ದಾರೆ.

    ಕಳೆದ 101 ದಿನಗಳಿಂದ ಮೌರ್ಯ ಸರ್ಕಲ್‍ನಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ಮಾಡುತ್ತಿದ್ದು, ಇಂದು ಬಂದ್‍ಗೆ ಕರೆಕೊಟ್ಟಿದ್ದಾರೆ. ಈ ಹಿನ್ನೆಲೆ ಇಂದು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ, ಸರ್ಕಾರ ಡಾ. ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆ ತರಬೇಕೆಂದು ಕನ್ನಡ ಪರ ಸಂಘಟನೆಗಳು ಪ್ರತಿಭಟಿಸುತ್ತಿವೆ.

    ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು 400ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬಂದ್ ಮಾಡುತ್ತಿದ್ದು, ಇತ್ತ ಬೆಳಗ್ಗೆಯೇ ಮಾಗಡಿ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಕನ್ನಡ ಪರ ಸಂಘಟನೆಗಳು ಮುಚ್ಚಿಸೋ ಮೂಲಕ ಬಂದ್‍ಗೆ ಸಹಕಾರ ನೀಡುವಂತೆ ಕೇಳಿವೆ.

    ಇಂದು ಕರ್ನಾಟಕ ಬಂದ್ ಇರುವುದರಿಂದ ಅಂಗಡಿ ತರೆಯದಂತೆ ಅಂಗಡಿ ಮಾಲೀಕರಿಗೆ ಪ್ರತಿಭಟನಾಕಾರರು ಮನವರಿಕೆ ಮಾಡಿಕೊಟ್ಟು, ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ್ದಾರೆ.

  • ಟ್ರಂಪ್ ಮುಖವಾಡ ಧರಿಸಿ ಆಭರಣ ಕಳವುಗೈದ ಕಿಲಾಡಿ!

    ಟ್ರಂಪ್ ಮುಖವಾಡ ಧರಿಸಿ ಆಭರಣ ಕಳವುಗೈದ ಕಿಲಾಡಿ!

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಯುವಕನೊಬ್ಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖವಾಡ ಧರಿಸಿ ಕಳ್ಳತನ ಮಾಡಿದ್ದಾನೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್‍ನಲ್ಲಿ ನಡೆದಿದೆ. ಇಲ್ಲಿನ ಆಭರಣಗಳ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಯುವಕ ಈ ವಿನೂತನ ದಾರಿಯನ್ನು ಬಳಸಿಕೊಂಡಿದ್ದಾನೆ. ಇದೀಗ ಕಳ್ಳನ ಸೆರೆಗೆ ಸಹಾಯ ಮಾಡಿ ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸರು ಟ್ವೀಟ್ ಮಾಡುವ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇತ್ತಿಚಿನ ದಿನಗಳಲ್ಲಿ ಕಳ್ಳರು ಸಿಸಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಹಾಗೆಯೇ ಆಭರಣಗಳ ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದ ಯುವಕ, ಟ್ರಂಪ್ ಅವರ ಮುಖವಾಡ ಧರಿಸಿ ಅಂಗಡಿಯ ಗಾಜನ್ನು ಒಡೆದು ಆಭರಣಗಳನ್ನು ಕಳ್ಳತನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಳ್ಳತನ ಮಾಡಲು ಬಂದ ಯುವಕ ಟ್ರಂಪ್ ಅವರ ಮುಖವಾಡದ ಜೊತೆಗೆ ಕಪ್ಪು ಬಣ್ಣದ ಕೋಟ್, ಕಪ್ಪು ಟ್ರ್ಯಾಕ್ ಪ್ಯಾಂಟ್, ಬಿಳಿ ಬಣ್ಣದ ಬೂಟ್ ಧರಿಸಿದ್ದಾನೆ. ಒಂದು ಆಭರಣದ ಅಂಗಡಿ ಮತ್ತು ಎಲೆಕ್ಟ್ರಾನಿಕ್ ಅಂಗಡಿಯ ಗಾಜನ್ನು ಒಡೆದು ಕಳವು ಮಾಡಿದ್ದಾನೆ. ದರೋಡೆಕೋರನನ್ನು ಕಂಡಲ್ಲಿ ನಮಗೆ ತಿಳಿಸಬೇಕು ಎಂದು ಕ್ವೀನ್ಸ್‍ಲ್ಯಾಂಡ್ ಪೊಲೀಸರು ಸಾರ್ವಜನಿಕರಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ.

  • ಸಚಿವರ ಕಣ್ಣ ಮುಂದೆಯೇ ಗೋಲ್ಮಾಲ್-50 ಕೆಜಿ ಚೀಲದಲ್ಲಿ 48 ಕೆಜಿ ಅಕ್ಕಿ

    ಸಚಿವರ ಕಣ್ಣ ಮುಂದೆಯೇ ಗೋಲ್ಮಾಲ್-50 ಕೆಜಿ ಚೀಲದಲ್ಲಿ 48 ಕೆಜಿ ಅಕ್ಕಿ

    -2 ಕೆಜಿ ಅಕ್ಕಿಯನ್ನ ಇಲಿ, ಹೆಗ್ಗಣ ತಿಂತಂತೆ

    ಬೆಂಗಳೂರು: ಇಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಅಹಮದ್ ದಿಡೀರ್ ಅಂತಾ ನಗರದ ಯಶವಂತಪುರದ ಗೋಡಾನ್ ಮತ್ತು ಸೊಸೈಟಿಗಳಿಗೆ ಭೇಟಿ ನೀಡಿದರು. ಒಂದು ಕ್ಷಣ ಸಚಿವರನ್ನು ನೋಡಿದ ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾದರು. ತಮ್ಮ ಮುಂದೆಯೇ ಗೋಲ್ಮಾಲ್ ನಡೆಯುತ್ತಿದ್ದರು ಸಚಿವರು ಏನನ್ನು ಪರಿಶೀಲಿಸದೇ ನಾಮಾಕವಸ್ಥೆ ಭೇಟಿ ಎಂಬಂತೆ ಹೊರ ನಡೆದರು.

    ಆರಂಭದಲ್ಲಿ ಗೋಡಾನ್ ಗಳಲ್ಲಿ ವಿದ್ಯುತ್ ದೀಪಗಳು ಎಲ್ಲವನ್ನು ಕೆಟ್ಟಿದ್ದರಿಂದ ದಾಸ್ತಾನು ಕೇಂದ್ರ ಕತ್ತಲುಮಯವಾಗಿತ್ತು. ಅದೇಕೆ ಲೈಟ್ಸ್ ಹಾಕಿಲ್ಲ ಅಂತಾ ಸಿಬ್ಬಂದಿ ಮೇಲೆ ಸಚಿವರು ಗರಂ ಆದರು. ಸಚಿವರು ಎದುರು 50 ಕೆಜಿ ಅಕ್ಕಿ ಚೀಲ 48 ಕೆಜಿ ತೂಗುತ್ತಿತ್ತು. ಪ್ರತಿ ಚೀಲದಲ್ಲಿ 2 ಕೆಜಿ ಅಕ್ರಮ ಕಂಡರೂ ಸಚಿವರು ಮಾತ್ರ ಯಾವುದನ್ನು ಪ್ರಶ್ನೆ ಮಾಡಲು ಹೋಗಲಿಲ್ಲ. ಗೋಡಾನ್ ಗಳಲ್ಲಿ ಅಕ್ರಮ ದಾಸ್ತಾನು ಸಂಗ್ರಹಣೆ ಮಾಡಲಾಗುತ್ತಿದ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವರು ದಾಸ್ತನು ಕೇಂದ್ರಗಳಿಗೆ ಭೇಟಿ ನೀಡಿದ್ದರು.

    ಯಶವಂತಪುರ ಗೋಡಾನ್ ಒಂದರಲ್ಲಿ ತುಕ್ಕು ಹಿಡಿದ ಗೋಧಿ ಸಚಿವರ ಕಣ್ಣಿಗೆ ಬಿತ್ತು. ಇದ್ರಿಂದ ಕೆರಳಿದ ಸಚಿವರು ಅಲ್ಲಿನ ಸಿಬ್ಬಂದಿಗೆ ವಾರ್ನಿಂಗ್ ಕೊಟ್ಟು, ಕಳಪೆ ಗುಣಮಟ್ಟದ ಗೋಧಿಯನ್ನ ಸರ್ಕಾರಿ ಆಹಾರ ಗುಣಮಟ್ಟ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಯಿತು. ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, ಇಲಿ ಹೆಗ್ಗಣಗಳು ತಿಂದಿರುತ್ತವೆ. ಹಾಗಾಗಿ 50 ಕೆಜಿ ಅಕ್ಕಿ ಚೀಲದಲ್ಲಿ 2 ಕೆಜಿ ಕಡಿಮೆ ಆಗಿದೆ. ಪ್ರತಿಯೊಂದನ್ನು ತೂಕ ಮಾಡಿಯೇ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

    ಇವತ್ತು ರಜೆ ಇದ್ದರು ಗೋಡಾನ್ ಗಳು ತೆರದಿದ್ದು, ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದರು. ಸಚಿವರು ಬರುವ ಮುನ್ಸೂಚನೆ ಅಧಿಕಾರಿಗಳಿಗೆ ಮೊದಲೇ ಸಿಕ್ಕಿತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ನಡುವೆ ಸಚಿವರು ಸಹ ಒಂದು ವರ್ಷದಿಂದ ಗೋದಾಮಿನಲ್ಲಿರುವ ಹುಳು ತಿಂದಿರುವ ಗೋಧಿಯತ್ತ ಗಮನ ಕೊಡಲೇ ಇಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv