Tag: stomach

  • ಹೊಟ್ಟೆ ನೋವು- 11 ತಿಂಗಳ ಹಸುಗೂಸಿಗೆ ನೇಣು ಬಿಗಿದು, ತಾನೂ ನೇಣಿಗೆ ಶರಣಾದ ತಾಯಿ

    ಹೊಟ್ಟೆ ನೋವು- 11 ತಿಂಗಳ ಹಸುಗೂಸಿಗೆ ನೇಣು ಬಿಗಿದು, ತಾನೂ ನೇಣಿಗೆ ಶರಣಾದ ತಾಯಿ

    ದಾವಣಗೆರೆ: ಬಹು ದಿನಗಳಿಂದ ಇದ್ದ ಹೊಟ್ಟೆನೋವು ತಾಳಲಾರದೆ 11 ತಿಂಗಳ ಮಗುವಿಗೆ ನೇಣು ಬಿಗಿದು, ತಾನು ನೇಣಿಗೆ ಶರಣಾದ ಮನಕಲುಕುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಶ್ವೇತಾ (26) ಮತ್ತು 11 ತಿಂಗಳ ಜಾಹ್ನವಿ ಮೃತ ದುರ್ದೈವಿಗಳಾಗಿದ್ದು, ಇಂದು ಬೆಳಗ್ಗೆ ಮನೆ ಮುಂದೆ ಚರಂಡಿ ಕಾಮಗಾರಿಗಾಗಿ ಜೆಸಿಬಿ ಬಂದಿದ್ದರಿಂದ ಶ್ವೇತಾಳ ತಂದೆ ತಿಮ್ಮಪ್ಪ ಕೆಲಸಗಾರರಿಂದ ಜೆಸಿಬಿಯ ಕೆಲಸ ಮಾಡಿಸುತ್ತಿದ್ದರು. ಮನೆಯಲ್ಲಿ ಶ್ವೇತಾ ಮತ್ತು ಜಾಹ್ನವಿ ಮಾತ್ರ ಇದ್ದರು. ಅಲ್ಲದೆ ಉಳಿದವರು ತೋಟದಲ್ಲಿ ಪೂಜೆ ನಡೆಯುತ್ತಿದ್ದರಿಂದ ಎಲ್ಲರು ೂ ಅಲ್ಲಿಗೆ ಹೋಗಿದ್ದರು.

    ಮನೆಯಲ್ಲಿ ಶ್ವೇತಾ ಹಾಗೂ 11 ತಿಂಗಳ ಮಗು ಮಾತ್ರ ಇದ್ದು, ಬಹು ದಿನಗಳಿಂದ ತಾಳಲಾರದ ಹೊಟ್ಟೆ ನೋವು ಇದ್ದುದರಿಂದ ಸಾಕಷ್ಟು ಬಾರಿ ಆಸ್ಪತ್ರೆಗೆ ತೋರಿಸಲಾಗಿತ್ತು. ಆದರೂ ಗುಣಮುಖರಾಗಿರಲಿಲ್ಲ ಎನ್ನಲಾಗುತ್ತಿದೆ. ಇದರಿಂದ ಬೇಸತ್ತು ಶ್ವೇತಾ ತನ್ನ ಮಗುವಿಗೆ ನೇಣು ಬಿಗಿದು, ತಾನೂ ನೇಣು ಬಿಗಿದುಕೊಂಡು ಸಾವನ್ನಪ್ಪಿದಾಳೆ ಎಂದು ಪೊಲೀಸ್ ಠಾಣೆಯ ದೂರಿನಲ್ಲಿ ದಾಖಲಾಗಿದೆ. ಶ್ವೇತಾಳ ತಂದೆ ತಿಮ್ಮಪ್ಪ ನೀರು ಕುಡಿಯಲೆಂದು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಮನೆಯ ಅಟ್ಟದ ಮೇಲೆ ತೊಲೆಗೆ ಮಗುವನ್ನು ನೇಣು ಹಾಕಿ, ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಪಿಎಸ್‍ಐ ಶಿವರುದ್ರಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

    ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

    ಲಕ್ನೋ: ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದ ಘಟನೆ ಉತ್ತರಪ್ರದೇಶದ ಆಲಿಘರ್ ನಲ್ಲಿ ನಡೆದಿದೆ.

    ಆಲಿಘರ್ ಜಿಲ್ಲೆಯ ಚಾರ್ರಾ ನಿವಾಸಿ ಸೀತಾರಾಮ್(45) ಸುಮಾರು ಒಂದೂವರೆ ವರ್ಷಗಳಿಂದ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿತ್ತು. ಆಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ(ಎಎಂಯು), ಜವಾಹರ್‍ಲಾಲ್ ನೆಹರು ವೈದ್ಯಕೀಯ ಕಾಲೇಜಿನ (ಜೆಎನ್‍ಎಂಸಿ) ವೈದ್ಯರು ರೋಗಿಯ ಹೊಟ್ಟೆಯಿಂದ ಗಡ್ಡೆ ಹೊರತೆಗೆದಿದ್ದಾರೆ.

    ಪ್ರೊ. ಸೈಯದ್ ಹಸನ್ ಹ್ಯಾರಿಸ್ (ಶಸ್ತ್ರ ಚಿಕಿತ್ಸಾ ವಿಭಾಗ) ಅವರ ಮೇಲ್ವಿಚಾರಣೆಯಲ್ಲಿ ಡಾ. ಶಹಬಾಜ್ ಹಬೀಬ್ ಫರಿಡಿ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡ ಈ ಗಡ್ಡೆಯನ್ನು ಹೊಟ್ಟೆಯಿಂದ ತೆಗೆಯುವಲ್ಲಿ ಸೈ ಎನಿಸಿಕೊಂಡಿದೆ.

    ಈ ಸಂಬಂಧ ಪ್ರೊ. ಹಸನ್ ಹ್ಯಾರಿಸ್ ಮಾತನಾಡಿ, ಸಿತಾರಾಮ್ ಅವರು 2018ರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಯಾಕೆ ಈ ರೀತಿ ಆಗುತ್ತಿದೆ ಎಂದು ತಿಳಿದರಿರಲಿಲ್ಲ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಗ್ಗೆ ಹೇಳಿದರು. ಅಲ್ಲದೆ ಹೊಟ್ಟೆ ನೋವಿಗೆಂದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು, ಆಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋವು ಹೋಗುತ್ತಿತ್ತು ಎಂದು ತಿಳಿಸಿರುವುದಾಗಿ ಹೇಳಿದರು.

    ಸೀತಾರಾಮ್ ಅವರು ಉತ್ತರಪ್ರದೇಶ ಮತ್ತು ದೆಹಲಿಯ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನು ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದರು ಎಂದು ವೈದ್ಯರು ತಿಳಿಸಿದರು. ಕೊನೆಗೆ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಬಳಿಕ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಸದ್ಯ ಸೀತಾರಾಮ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

  • ಹೊಟ್ಟೆನೋವು ಎಂದು ಬಂದವನ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್

    ಹೊಟ್ಟೆನೋವು ಎಂದು ಬಂದವನ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್

    – ಚಾರ್ಜರ್ ಒಳಹೋದ ಕಥೆ ಕೇಳಿ ಬೆಚ್ಚಿಬಿದ್ದ ವೈದ್ಯರು

    ದಿಶ್ಪೂರ್: ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್ ಇರುವುದನ್ನು ಕಂಡು ವೈದ್ಯರೇ ದಂಗಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಗುವಾಹಟಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ಬಂದ 30 ವರ್ಷದ ವ್ಯಕ್ತಿ ನನಗೆ ಹೊಟ್ಟೆನೋವು ಇದೆ ಎಂದು ದಾಖಲಾಗಿದ್ದಾನೆ. ಆದರೆ ನಾನು ಗೊತ್ತಿಲ್ಲದೇ ಮಿಸ್ ಆಗಿ ಮೊಬೈಲ್ ಹೆಡ್ ಫೋನ್ ಅನ್ನು ನುಂಗಿದ್ದೇನೆ ಎಂದು ಹೇಳಿದ್ದಾನೆ. ಆದರೆ ಅವನಿಗೆ ವೈದ್ಯರು ಎಂಡೋಸ್ಕೋಪಿ ಮಾಡಿದ್ದು, ಇದರಲ್ಲಿ ವೈಯರ್ ಇರುವುದು ಕಂಡು ಬಂದಿಲ್ಲ.

    ಈ ವಿಚಾರದ ಬಗ್ಗೆ ಮಾತನಾಡಿರುವ ವೈದ್ಯ ವಲಿಯಲ್ ಇಸ್ಲಾಂ, ಮೊದಲಿಗೆ ಆತ ನಮಗೆ ಹೆಡ್ ಫೋನ್ ನುಂಗಿರುವುದಾಗಿ ಹೇಳಿದ. ನಾವು ಈ ಕಾರಣದಿಂದ ಎಂಡೋಸ್ಕೋಪಿ ಮಾಡಿದವು. ಆದರೆ ಅವನ ಹೊಟ್ಟೆಯಲ್ಲಿ ಆದೂ ಕಾಣಿಸಿಕೊಳ್ಳಲಿಲ್ಲ. ನಂತರ ನಾವು ಅವನನ್ನು ಎಕ್ಸ್-ರೇ ಗೆ ಒಳಪಡಿಸಿದೆವು. ಈ ವೇಳೆ ಅವನ ಮೂತ್ರಕೋಶದಲ್ಲಿ 2 ಮೀಟರ್ ಉದ್ದದ ಮೊಬೈಲ್ ಚಾರ್ಚರ್ ಇರುವುದು ಕಂಡು ಬಂತು ಎಂದು ಹೇಳಿದ್ದಾರೆ.

    ರೋಗಿ ನಮಗೆ ಮೊದಲಿಗೆ ಸುಳ್ಳು ಹೇಳಿದ್ದಾನೆ. ಆತ ಮಿಸ್ ಆಗಿ ಹೆಡ್ ಫೋನ್ ಅನ್ನು ನುಂಗಿಲ್ಲ. ಆದರೆ ಆತನಿಗೆ ಹಸ್ತಮೈಥುನ ಮಾಡಿಕೊಳ್ಳುವ ಅಭ್ಯಾಸವಿದೆ. ಈ ಅಭ್ಯಾಸ ಅತೀರೇಕಕ್ಕೆ ತಿರುಗಿ ಆತ ಕೇಬಲ್ ಅನ್ನು ತನ್ನ ಮರ್ಮಾಂಗದ ಮೂಲಕ ತೂರಿಸಿಕೊಂಡಿದ್ದಾನೆ. ಹೀಗಾಗಿ ಅದು ಮೂತ್ರಕೋಶಕ್ಕೆ ಹೋಗಿ ಸೇರಿಕೊಂಡಿದೆ. ನನ್ನ 25 ವರ್ಷದ ಈ ವೃತ್ತಿಯಲ್ಲಿ ಇದೇ ಮೊದಲ ಬಾರಿಗೇ ಈ ರೀತಿಯ ವಿಚಿತ್ರ ಪ್ರಕರಣವನ್ನು ನೋಡುತ್ತಿದ್ದೇನೆ ಎಂದು ಇಸ್ಲಾಂ ತಿಳಿಸಿದ್ದಾರೆ.

    ವೈದ್ಯರ ಹೇಳುವ ಪ್ರಕಾರ, ರೋಗಿಯು ತನ್ನ ಮರ್ಮಾಂಗ ಮೂಲಕ ಕೇಬಲ್ ಮತ್ತು ಇತರ ವಸ್ತುಗಳನ್ನು ಲೈಂಗಿಕ ಆನಂದಕ್ಕಾಗಿ ಹಾಕಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದಾನೆ. ಈ ಸಂದರ್ಭದಲ್ಲಿ ಲೈಂಗಿಕ ಸುಖ ನಿಯಂತ್ರಣ ತಪ್ಪಿ ಕೇಬಲ್ ಅವನ ಮೂತ್ರಕೋಶವನ್ನು ತಲುಪಿದೆ. ಈಗ ನಾವು ಆಪರೇಷನ್ ಮಾಡಿ ಕೇಬಲ್ ಅನ್ನು ಹೊರಗೆ ತೆಗೆದಿದ್ದು, ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.

    ಮೂತ್ರನಾಳದ ಮೂಲಕ ವಸ್ತುಗಳನ್ನು ಮತ್ತು ದ್ರವವನ್ನು ಹಾಕಿಕೊಳ್ಳುವುದು ಕೂಡ ಒಂದು ರೀತಿಯ ಹಸ್ತಮೈಥುನ. ಈ ವ್ಯಕ್ತಿ ಈ ರೀತಿಯ ಹಸ್ತಮೈಥುನಕ್ಕೆ ದಾಸನಾಗಿದ್ದು, ಈ ರೀತಿ ಮಾಡಿಕೊಂಡಿದ್ದಾನೆ. ಕೇಬಲ್ ದೇಹ ಸೇರಿದ ಐದು ದಿನದ ಬಳಿಕ ವೈದ್ಯರ ಬಳಿ ಬಂದಿದ್ದಾನೆ. ಜೊತೆಗೆ ನಾನು ಬಾಯಿಯಿಂದ ಹೆಡ್ ಫೋನ್ ನುಂಗಿದೆ ಎಂದು ಪದೇ ಪದೇ ಹೇಳಿದ್ದಾನೆ. ಆದರೆ ಆತ ನಮ್ಮ ಬಳಿ ಯಾಕೆ ಸುಳ್ಳು ಹೇಳಬೇಕು ಎಂದು ಡಾ. ಇಸ್ಲಾಂ ಕಳವಳ ವ್ಯಕ್ತಪಡಿಸಿದ್ದಾರೆ.

  • ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ಹೊಟ್ಟೆನೋವೆಂದು ಬಂದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸೆಂದ ವೈದ್ಯ

    ರಾಂಚಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಇಬ್ಬರು ಯುವಕರಿಗೆ ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಸರಿಯಾಗಿ ತಪಾಸಣೆ ಮಾಡದೇ, ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈಗ ಬಾರಿ ಚರ್ಚೆಯಾಗುತ್ತಿದೆ.

    ಜಾರ್ಖಂಡಿನ ಚತ್ರ್ ಜಿಲ್ಲೆಯ ಸಿಮಾರಿಯಾದ ರೆಫರೆಲ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 1 ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಮುಕೇಶ್ ವಿರುದ್ಧ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಗೋಪಾಲ್ ಗಂಜು(22) ಹಾಗೂ ಕಾಮೇಶ್ವರ ಗಂಜು(26) ಅವರಿಗೆ ವೈದ್ಯ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ ಎನ್ನಲಾಗಿದೆ. ಇಬ್ಬರು ಯುವಕರು ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆದ್ದರಿಂದ ಯುವಕರನ್ನು ಅವರ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮುಕೇಶ್ ಅವರಿಬ್ಬರಿಗೂ ಕಾಟಾಚಾರಕ್ಕೆ ತಪಾಸಣೆ ಮಾಡಿ, ಎಚ್‍ಐವಿ, ಎಚ್‍ಬಿಎ, ಎಚ್‍ಸಿವಿ, ಸಿಬಿಸಿ, ಎಚ್‍ಎಚ್2 ಮತ್ತು ಎಎನ್‍ಸಿ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಚೀಟಿ ಬರೆದು ಕೊಟ್ಟಿದ್ದರು. ಜೊತೆಗೆ ಪ್ರಗ್ನೆನ್ಸಿ ಪರೀಕ್ಷೆ ಕೂಡ ಮಾಡಿಸಿಕೊಂಡು ಬರಲು ಬರೆದಿದ್ದಾರೆ.

    ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‍ಗೆ ಹೋದಾಗ ಅಲ್ಲಿನ ಸಿಬ್ಬಂದಿ ಚೀಟಿ ನೋಡಿ ದಂಗಾಗಿದ್ದಾರೆ. ಪ್ರಗ್ನೆನ್ಸಿ ಪರೀಕ್ಷೆ ನಿಮಗಲ್ಲ ಮಹಿಳೆಯರಿಗೆ ಮಾಡುವುದು ಎಂದು ತಿಳಿಸಿದ್ದಾರೆ. ಬಳಿಕ ಯುವಕರು ಯಾವ ಪರೀಕ್ಷೆಯನ್ನೂ ಕೂಡ ಮಾಡಿಸದೆ ಮನೆಗೆ ವಾಪಸ್ ಬಂದಿದ್ದಾರೆ.

    ನಂತರ ನಡೆದ ಘಟನೆ ಬಗ್ಗೆ ನಮ್ಮ ಊರಿನಲ್ಲಿ ಹೇಳಿದ್ದಾರೆ. ಈ ಸುದ್ದಿ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ತಿಳಿದು ಇಡೀ ಜಾರ್ಖಂಡಿನಲ್ಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದ್ರೆ ವೈದ್ಯ ಮಾತ್ರ ಇದು ಸುಳ್ಳುಸುದ್ದಿ. ನನ್ನ ಹೆಸರನ್ನು ಹಾಳು ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದೊಂದು ಪಿತೂರಿ, ನಾನು ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

  • ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಹೊಟ್ಟೆಯಲ್ಲಿತ್ತು 8 ಸ್ಪೂನ್ಸ್, 2 ಸ್ಕ್ರೂ ಡ್ರೈವರ್, ಚಾಕು!

    ಶಿಮ್ಲಾ: ಮನುಷ್ಯನೊಬ್ಬನ ಹೊಟ್ಟೆಯೊಳಗೆ 8 ಸ್ಪೂನ್ಸ್ ಮತ್ತು 2 ಸ್ಕ್ರೂ ಡ್ರೈವರ್, 2 ಟೂತ್‍ಬ್ರೆಶ್ ಮತ್ತು ಚಾಕುವನ್ನು ನೋಡಿದ ಡಾಕ್ಟರ್‍ಗಳು ಶಾಕ್ ಆಗಿದ್ದಾರೆ.

    ಈ ಘಟನೆ ಮಂಡಿ ಎಂಬ ನಗರದಲ್ಲಿ ನಡೆದಿದೆ. ಇಲ್ಲಿನ ಕರ್ನ್ ಸೇನ್ ಎಂಬ 35 ವರ್ಷದ ವ್ಯಕ್ತಿಯು ಅಡುಗೆ ಮನೆಯಲ್ಲಿ ಇರಬೇಕಾದ ಸ್ಪೂನ್ಸ್, ಸ್ಕ್ರೂ ಡ್ರೈವರ್, ಟೂತ್‍ಬ್ರೆಶ್ ಮತ್ತು ಚಾಕು ಎಲ್ಲಾ ವಸ್ತುಗಳನ್ನು ಹೊಟ್ಟೆಯಲ್ಲೇ ಇಟ್ಟಕೊಂಡಿದ್ದಾನೆ.

    ಕೆಲ ದಿನಗಳ ಹಿಂದೆ ಕರ್ನ್ ಸೇನ್ ಹೊಟ್ಟೆಯಲ್ಲಿ ಹುಣ್ಣಿದೆ ಎಂದು ಹೇಳಿದ್ದನು. ಇದರಿಂದ ಮನೆಯವರು ಅವನನ್ನು ಸುಂದರ್ ನಗರದ ಅಸ್ಪತ್ರೆಗೆ ಕೆರದುಕೊಂಡು ಬಂದಿದ್ದಾರೆ. ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಅಸ್ಪತ್ರೆಗೆ ಕಳುಹಿಸಲಾಗಿದೆ.

    ಇಲ್ಲಿ ಅವರಿಗೆ ಎಕ್ಸ್-ರೇ ಮಾಡಲಾಗಿದೆ. ಈ ವೇಳೆ ಅವರ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡು ಬಂದಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಮೂರು ಜನ ವೈದ್ಯರ ತಂಡ 4 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರಕ್ಕೆ ತೆಗೆದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾಕ್ಟರ್, ಇದು ತಂಬ ಅಪರೂಪದ ಪ್ರಕರಣ ಎಕ್ಸ್-ರೇ ಯಲ್ಲಿ ಹೊಟ್ಟೆಯಲ್ಲಿ ಹಲವಾರು ವಸ್ತುಗಳು ಇರುವುದು ಕಂಡುಬಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಹೊರಕ್ಕೆ ತೆಗೆದಿದ್ದೇವೆ. ಈ ರೋಗಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ. ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.

  • ಮಹಿಳೆ ಹೊಟ್ಟೆಯಲ್ಲಿತ್ತು 1.5 ಕೆ.ಜಿ ಕಬ್ಬಿಣದ ವಸ್ತುಗಳು!

    ಮಹಿಳೆ ಹೊಟ್ಟೆಯಲ್ಲಿತ್ತು 1.5 ಕೆ.ಜಿ ಕಬ್ಬಿಣದ ವಸ್ತುಗಳು!

    ಅಹಮದಾಬಾದ್: ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬಳ ಹೊಟ್ಟೆಯಿಂದ ಸುಮಾರು 1.5 ಕೆ.ಜಿಯಷ್ಟು ಕಬ್ಬಿಣದ ವಸ್ತುಗಳನ್ನು ಅಹಮದಾಬಾದ್‍ನ ನಾಗರಿಕ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

    40 ವರ್ಷದ ಸಂಗೀತಾ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಪತ್ತೆಯಾಗಿದೆ. ಮಹಿಳೆಯು ಮೂಲತಃ ಮಹಾರಾಷ್ಟ್ರದ ಶಿರಡಿ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಕಳೆದ ಅಕ್ಟೋಬರ್ 31 ರಂದು ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರದಿಂದ ಸಂಗೀತಾಳನ್ನು ನಾಗರಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ವರ್ಗಾಯಿಸಲಾಗಿತ್ತು.

    ಕೆಲವು ದಿನಗಳಿಂದ ಸಂಗೀತ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. ಇದನ್ನು ಕಂಡ ವೈದ್ಯರು ಆಕೆಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ, ಹೊಟ್ಟೆಯಲ್ಲಿ ಕಬ್ಬಿಣದ ಮೊಳೆಗಳು, ಪಿನ್‍ಗಳು, ಯು-ಪಿನ್‍ಗಳು, ಬಳೆ-ಸರ, ಮಂಗಳಸೂತ್ರ ಸೇರಿದಂತೆ ಹಲವು ಕಬ್ಬಿಣದ ವಸ್ತುಗಳು ಇರುವುದು ಪತ್ತೆಯಾಗಿತ್ತು. ಅದರಲ್ಲೂ ಒಂದು ಪಿನ್ ಸಂಗೀತಾಳ ಕರಳಿಗೆ ಚುಚ್ಚಿಕೊಂಡಿದ್ದ ಕಾರಣ ತಕ್ಷಣ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯಲ್ಲಿದ್ದ ಸರಿಸುಮಾರು 1.5 ಕೆ.ಜಿ ತೂಕದ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯಲಾಯಿತು ಎಂದು ನಾಗರಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಹಿರಿಯ ವೈದ್ಯರಾದ ಡಾ. ನಿತಿನ್ ಪಾಮರ್ ತಿಳಿಸಿದರು.

    ಮಾನಸಿಕ ಅಸ್ವಸ್ಥ ರೋಗಿಗಳಲ್ಲಿ ಅಕ್ಯುಫಾಗಿಯಾ ಎಂಬ ರೋಗ ಲಕ್ಷಣವಿರುವವರು ಕಬ್ಬಿಣದ ವಸ್ತುಗಳು ಹಾಗೂ ಚೂಪಾದ ಯಾವುದೇ ವಸ್ತುಗಳನ್ನು ತಿಂದುಬಿಡುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದರು.

    ಸದ್ಯ ಸಂಗೀತಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಗುಣಮುಖಳಾದ ಮೇಲೆ ಅವಳ ಮನೆಯವರನ್ನು ಪತ್ತೆ ಮಾಡಿ ಆಕೆಯನ್ನು ಮನೆಗೆ ಕಳುಹಿಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಹಿಳೆ ದೇಹದಿಂದ 99 ಕಲ್ಲುಗಳು ತೆಗೆದ ತುಮಕೂರು ವೈದ್ಯರು

    ಮಹಿಳೆ ದೇಹದಿಂದ 99 ಕಲ್ಲುಗಳು ತೆಗೆದ ತುಮಕೂರು ವೈದ್ಯರು

    ತುಮಕೂರು: ಮಹಿಳೆಯೊರ್ವಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಬರೋಬ್ಬರಿ 99 ಕಲ್ಲುಗಳನ್ನು ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ.

    ಸಲ್ಮಾ ಭಾನು (45) ಎಂಬುವರ ದೇಹದಲ್ಲಿ ಪತ್ತೆಯಾದ ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ನಗರದ ಶಾಂತಿನಗರದ ನಿವಾಸಿಯಾದ ಸಲ್ಮಾ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನ್ ಮಾಡಿ ನೋಡಿದಾಗ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂದಿದೆ.

    ತಕ್ಷಣ ಡಾ. ವಾಸಿಂ ಹಾಗೂ ತಂಡ ಶಸ್ತ್ರ ಚಿಕಿತ್ಸೆ ನಡೆಸಿ ಪಿತ್ತಕೋಶದಲ್ಲಿದ್ದ 99 ಕಲ್ಲುಗಳನ್ನು ಹೊರಕ್ಕೆ ತೆಗೆದಿದ್ದಾರೆ. ಹೊಟ್ಟೆಯಲಿ 8 ಮಿಲಿ ಮೀಟರ್ ನಿಂದ 20 ಮಿಲಿ ಮೀಟರ್ ವರೆಗಿನ ಕಲ್ಲುಗಳು ಪತ್ತೆಯಾಗಿತ್ತು.

    ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡದೇ ಇದ್ದರೆ ಸಲ್ಮಾ ಅವರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಕ್ಕೆ ಸಾರ್ವಜನಿಕರು ವೈದ್ಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

  • ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿಯಾಗಿರುವ ಲಕ್ಷ್ಮಿ ಪತ್ತಾರ ಎಂಬವರೇ ಬಾಣಂತಿ. ಕಳೆದ ಎರಡು ದಿನಗಳಿಂದ ಹೆರಿಗೆ ನೋವು ಅನುಭವಿಸಿ, ಕೆರೂರಿನ ಎರಡು ಖಾಸಗಿ ಆಸ್ಪತ್ರೆಗೆ ತೆರಳಿದ್ರು. ಆದ್ರೆ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಲಕ್ಷ್ಮಿ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಬುಧವಾರ ರಾತ್ರಿಯೇ ಲಕ್ಷ್ಮಿ ಅವರ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದ್ರೂ, ತಲೆಕೆಡೆಸಿಕೊಳ್ಳದ ಸರ್ಕಾರಿ ಆಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರನ್ನು ಕುಮಾರೇಶ್ವರ ಆಸ್ಪತ್ರೆಗೆ ತಂದಾಗ, ತಪಾಸನೆ ಮಾಡಿದ ಕುಮಾರೇಶ್ವರ ಆಸ್ಪತ್ರೆ ವೈದ್ಯರು ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಸುದ್ದಿ ತಿಳಿಸಿದ್ದಾರೆ.

    ಬಾಣಂತಿ ಲಕ್ಷ್ಮಿ ಸರ್ಕಾರಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 59 ಇಂಚಿನ ಹೊಟ್ಟೆಯೊಂದಿಗೆ ಪ್ರತಿದಿನ ನರಳಾಡ್ತಿದ್ದಾರೆ ಈ ವ್ಯಕ್ತಿ

    59 ಇಂಚಿನ ಹೊಟ್ಟೆಯೊಂದಿಗೆ ಪ್ರತಿದಿನ ನರಳಾಡ್ತಿದ್ದಾರೆ ಈ ವ್ಯಕ್ತಿ

    ಗುವಾಹಟಿ: ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳೋದು ಅಥವಾ ಹೆಚ್ಚಿಗೆ ಊಟ ಮಾಡಿದಾಗ ಹೊಟ್ಟೆ ಊದಿಕೊಳ್ಳೊದು ಸಾಮಾನ್ಯ. ಆದ್ರೆ ಹೊಟ್ಟೆ ಊತವೇ ಈಗ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿದೆ.

    ಅಸ್ಸಾಂನ ಬಿಕಾಶ್ ಹಜಾರಿಕಾ 61 ಕೆಜಿ ತೂಕವಿದ್ದು, ಅವರ ಹೊಟ್ಟೆ ಊದಿಕೊಂಡಿರುವ ಕಾರಣ ಪ್ರತಿದಿನ ನಡೆದಾಡಲು ಸಾಧ್ಯವಾಗದೆ ನೋವಿನಿಂದ ನರಳುವಂತಾಗಿದೆ. ಇವರು ಕಂಜೆಸ್ಟಿವ್ ಹೆಪಟಾಮೆಗಾಲಿ ಎಂಬ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಲೇ ಅವರ ಹೊಟ್ಟೆ 10 ಕೆಜಿಯಷ್ಟು ಊದಿಕೊಂಡಿದೆ. ಈ ತೊಂದರೆಯಿಂದಾಗಿ 21 ವರ್ಷದ ಬಿಕಾಶ್ ಕಳೆದ 5 ವರ್ಷದಿಂದ ಒಂದು ಸಲಕ್ಕೆ ಸುಮಾರು ಒಂದೂವರೆ ಗಂಟೆಯ ಕಾಲ ಕುಳಿತ ಸ್ಥಿತಿಯಲ್ಲೇ ನಿದ್ದೆ ಮಾಡುವಂತಾಗಿದೆ.

    ಚಿಕಿತ್ಸೆಗೆ ಈಗಾಗಲೇ ತಡವಾಗಿದೆ ಎಂದು ಭಾವಿಸಿರೋ ಬಿಕಾಶ್ ಸದ್ಯ ಬದುಕುವ ಎಲ್ಲಾ ಆಸೆಯನ್ನ ಬಿಟ್ಟಿದ್ದಾರೆ. ಪ್ರತಿದಿನ ನರಳಾಡುತ್ತಿರುವುದರಿಂದ ನಾನು ನಿಧಾನವಾಗಿ ಸಾಯ್ತಿದ್ದೀನಿ. ಏನೇ ಮಾಡಿದ್ರೂ ನೋವನ್ನ ದೂರ ಮಾಡೋಕೆ ಆಗ್ತಿಲ್ಲ ಎಂದು ಬಿಕಾಶ್ ಹೇಳಿದ್ದಾರೆ. ಸರ್ಜರಿಯಿಂದ ಬಿಕಾಶ್ ಅವರನ್ನ ಗುಣಪಡಿಸಬಹುದು. ಆದ್ರೆ ಬಿಕಾಶ್ ತಂದೆ ಗುತ್ತಿಗೆ ನೌಕರರಾಗಿದ್ದು ಸುಮಾರು 5 ಲಕ್ಷಕ್ಕೂ ಮೀರಿದ ಚಿಕಿತ್ಸಾ ವೆಚ್ಛವನ್ನ ಭರಿಸಲು ಕುಟುಂಬಕ್ಕೆ ಸಾಧ್ಯವಿಲ್ಲ.

    ಬಿಕಾಶ್‍ಗೆ ಇದರ ಲಕ್ಷಣ ಕಾಣಿಸಿಕೊಂಡಾದ ಸ್ಥಳೀಯ ವೈದ್ಯರು ಸಣ್ಣ ಇನ್ಫೆಕ್ಷನ್ ಎಂದು ಹೇಳಿ ಕೆಲವು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಆದ್ರೆ ಅದು ಉಲ್ಭಣಿಸಿದ ನಂತರ ಬಿಕಾಶ್ ಅವರ ಔಷಧಿಗಾಗಿ ಕುಟುಂಬದವರು ಮನೆಯನ್ನೇ ಮಾರಬೇಕಾಯ್ತು. ಇದೀಗ ಶಸ್ತ್ರಚಿಕಿತ್ಸೆಗೆ ಹಣವಿಲ್ಲದ ಕಾರಣ ಬಿಕಾಶ್ ಬದುಕುವ ಯಾವುದೇ ಭರವಸೆಯನ್ನ ಇಟ್ಟುಕೊಂಡಿಲ್ಲ.