Tag: step mother

  • ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಂದ ಪಾಪಿ ಮಲತಾಯಿ?

    ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಂದ ಪಾಪಿ ಮಲತಾಯಿ?

    ಯಾದಗಿರಿ: ಮಲತಾಯಿಯೊಬ್ಬಳು ಆಸ್ತಿಗಾಗಿ (Property) ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಲೆಗೈದ ಆರೋಪವೊಂದು ಯಾದಗಿರಿ (Yadagiri) ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಕೇಳಿಬಂದಿದೆ.

    ಈ ಘಟನೆ ಆಗಸ್ಟ್ 30ರಂದು ಬಬಲಾದ ಗ್ರಾಮದಲ್ಲಿ ನಡೆದಿದೆ. ದೇವಮ್ಮ ಚೆಟ್ಟಿಗೇರಿ ಆರೋಪಿಯಾಗಿದ್ದು, ಈಕೆ ಹಸುಗೂಸು ಸಂಗೀತಾ ಚೆಟ್ಟಿಗೇರಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ್ದಾಳೆ.  ಇದನ್ನೂ ಓದಿ: ಸಹೋದರರೇ ಬಿಟ್ಟುಬಿಡಿ ಅಂತಾ ಅಂಗಲಾಚಿದ್ರೂ ಮಹಿಳೆಗೆ ಗುಂಪು ಥಳಿತ!

    ಮೃತ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಿದ್ದಾಗ ಅಲ್ಲಿಗೆ ಬಂದ ದೇವಮ್ಮ, ತಾನು ಹಾಲುಣಿಸುತ್ತೇನೆ ಅಂತಾ ಕರೆದೊಯ್ದಿದ್ದಾಳೆ. ಹೀಗೆ ರೂಮಿಗೆ ಕರೆದೊಯ್ದು ಡೋರ್ ಹಾಕಿ ಹಾಲಿನ ಬಾಟ್ಲಿಯಲ್ಲಿ ವಿಷ ಬೆರೆಸಿ ಕೂಸಿಗೆ ಕೊಟ್ಟಿದ್ದಾಳೆ.

    ವಿಷಬೆರೆತ ಹಾಲು ಕುಡಿದ ಸಂಗೀತಾ 3 ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಸದ್ಯ ವಡಗೇರಾ ಪೊಲೀಸರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ (Vadagera Police Station) ಪ್ರಕರಣ ದಾಖಲಾಗಿದೆ.

    ಕೊಲೆ ಮಾಡಿದ್ದು ಯಾಕೆ?: ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದ. 11 ವರ್ಷಗಳ ಹಿಂದೆ ಸಿದ್ದಪ್ಪ ಮೊದಲು ಶ್ರೀದೇವಿಯನ್ನ ಮದುವೆಯಾಗಿದ್ದ. ಆದರೆ ಮಕ್ಕಳಾಗದ ಹಿನ್ನೆಲೆ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದ. ದೇವಮ್ಮಳನ್ನ ಮದುವೆಯಾದ್ಮೇಲೆ ಮೊದಲ ಪತ್ನಿ ಶ್ರೀದೇವಿ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆಯಲ್ಲಿದ್ದಳು.

    ಹಿರಿಯರ ರಾಜಿ ಸಂಧಾನದ ನಂತರ ಮೂರು ವರ್ಷಗಳ ಹಿಂದೆ ಬಬಲಾದ ಗ್ರಾಮದ ಗಂಡನ ಮನೆಗೆ ಶ್ರೀದೇವಿ ಮತ್ತೆ ಬಂದಿದ್ದಳು. ಕಳೆದ ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿತ್ತು. ಇತ್ತ ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿಯ ಐದು ತಿಂಗಳ ಮಗು ಸಂಗೀತಾಗೆ ಪಾಲು ಹೋಗುತ್ತೆ ಅಂತಾ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 24ರ ವಿಧವೆ ಮಲತಾಯಿಯ ಕೋಣೆಗೆ ನುಗ್ಗಿ ಅತ್ಯಾಚಾರವೆಸಗಿ ಬೆದರಿಕೆ ಹಾಕಿದ!

    24ರ ವಿಧವೆ ಮಲತಾಯಿಯ ಕೋಣೆಗೆ ನುಗ್ಗಿ ಅತ್ಯಾಚಾರವೆಸಗಿ ಬೆದರಿಕೆ ಹಾಕಿದ!

    – ಮಾನಕ್ಕೆ ಹೆದರಿ ದೂರು ನೀಡಬೇಡವೆಂದು ಕುಟುಂಬ
    – ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

    ಭೋಪಾಲ್: ಕಾಮುಕ ಪುತ್ರನೊಬ್ಬ ತನ್ನ ಮಲತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ನೀಚ ಕೃತ್ಯವೊಂದು ನಡೆದಿರುವುದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಭೋಪಾಲ್ ಮೂಲದ 24 ವರ್ಷದ ಮಹಿಳೆ ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಳು. ಮೊದಲ ಪತ್ನಿ ಮೃತಪಟ್ಟಿದ್ದರಿಂದ ಆತನಿಗೆ ಅದು ಎರಡನೇ ಮದುವೆಯಾಗಿತ್ತು. ಮೊದಲ ಪತ್ನಿಯಲ್ಲಿ ಓರ್ವ ಮಗನಿದ್ದು, ಎರಡನೇ ಪತ್ನಿಗೆ ಇಬ್ಬರು ಮಕ್ಕಳಿದ್ದರು. ಆದರೆ ಮೂರು ವರ್ಷಗಳ ಹಿಂದೆ ವ್ಯಕ್ತಿಯೇ ಸಾವನ್ನಪ್ಪಿದ್ದನು. ಹೀಗಾಗಿ ಕಾಮುಕ ಪುತ್ರ ಮಲತಾಯಿಯ ಜೊತೆ ವಾಸವಾಗಿದ್ದನು.

    ಶುಕ್ರವಾರ ರಾತ್ರಿ ಸಂತ್ರಸ್ತೆ ತನ್ನ ಮಕ್ಕಳನ್ನು ಕೋಣೆಯಲ್ಲಿ ಮಲಗಿಸಿ, ಬೇರೊಂದು ಕೋಣೆಯಲ್ಲಿ ಮಲಗಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ ಕಾಮುಕ ಪುತ್ರ ಏಕಾಏಕಿ ಆಕೆಯ ಕೋಣೆಯೊಳಗೆ ನುಗ್ಗಿ, ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.

    ಪುತ್ರನ ವರ್ತನೆಯಿಂದ ಗಾಬರಿಗೊಂಡ ಸಂತ್ರಸ್ತೆ ಹೇಗೋ ಧೈರ್ಯ ಮಾಡಿ ತನ್ನ ಕುಟುಂಬಸ್ಥರ ಬಳಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಆದರೆ ಕುಟುಂಬ ಮಾತ್ರ ಮಾನಕ್ಕೆ ಅಂಜಿ ಯಾರಿಗೂ ಹೇಳಬೇಡ ಎಂದು ಕಿವಿಮಾತು ಹೇಳಿತು. ಇದರಿಂದ ಮತ್ತಷ್ಟು ಭಯಗೊಂಡ ಸಂತ್ರಸ್ತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾಳೆ.

  • 6 ವರ್ಷದ ಮಗನನ್ನ ಕೊಂದು ಸೂಟ್‍ ಕೇಸ್ ನಲ್ಲಿ ತುಂಬಿದ್ಳು ಮಲತಾಯಿ

    6 ವರ್ಷದ ಮಗನನ್ನ ಕೊಂದು ಸೂಟ್‍ ಕೇಸ್ ನಲ್ಲಿ ತುಂಬಿದ್ಳು ಮಲತಾಯಿ

    ಅಹಮದಾಬಾದ್: ಮಲತಾಯಿಯೊಬ್ಬಳು 6 ವರ್ಷದ ಮಗನನ್ನು ಕೊಲೆ ಮಾಡಿ ಸೂಟ್‍ಕೇಸ್ ನಲ್ಲಿ ಶವವನ್ನ ತುಂಬಿದ್ದ ಘಟನೆ ಗುಜರಾತ್‍ನ ಕೃಷ್ಣನಗರ್ ನಲ್ಲಿ ನಡೆದಿದೆ.

    ಝೀನಲ್ ಮಗನನ್ನು ಕೊಲೆ ಮಾಡಿದ ಪಾಪಿ ತಾಯಿ. 6 ವರ್ಷದ ಧ್ರುವ್ ನನ್ನು ಕೊಂದ ಬಳಿಕ ಸೂಟ್‍ಕೇಸ್‍ನಲ್ಲಿ ಶವವನ್ನ ತುಂಬಿದ್ದ ಈಕೆ, 2 ಗಂಟೆಗಳಿಂದ ಮಗ ಕಾಣೆಯಾಗಿದ್ದಾನೆಂದು ಹುಡುಕಾಡುವ ನಾಟಕವಾಡಿದ್ದಳು. ಗಂಡ ಶಾಂತಿಲಾಲ್ ಜೊತೆ ಸೇರಿ ಎಲ್ಲಾ ಕಡೆ ಮಗನಿಗಾಗಿ ಹುಡುಕಾಡಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೊಲೀಸರು ಮನೆಗೆ ಬಂದು ತಪಾಸಣೆ ಮಾಡಿದಾಗ ಸೂಟ್‍ಕೇಸ್ ಪತ್ತೆಯಾಗಿತ್ತು. ಅದನ್ನ ತೆಗೆದು ನೋಡಿದಾಗ ಬಾಲಕನ ಮೃತದೇಹವಿತ್ತು. ಬಾಲಕನನ್ನ ದಾವಣಿಯಿಂದ ಸುತ್ತಲಾಗಿತ್ತು. ಪೊಲೀಸರಿಗೆ ಮಲತಾಯಿ ಝೀನಲ್ ಮೇಲೆ ಅನುಮಾನ ಬಂದು ಕೂಡಲೇ ಆಕೆಯನ್ನ ವಿಚಾರಣೆಗೆ ಒಳಪಡಿಸಿದಾಗ ಮಗನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

    ಝೀನಲ್ ಹಾಗೂ ಶಾಂತಿಲಾಲ್ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಶಾಂತಿಲಾಲ್‍ಗೆ ಮೊದಲನೇ ಮದುವೆಯಿಂದ ಮಗನಿದ್ದರೆ, ಝೀನಲ್‍ಗೆ ಮಗಳಿದ್ದಳು. ಇಬ್ಬರೂ ಮೂರನೇ ಮಗು ಬೇಡವೆಂಬ ಷರತ್ತಿನ ಮೇಲೆ ಮದುವೆಯಾಗಿದ್ದರು. ಆದ್ರೆ ಝೀನಲ್ ಯಾವಾಗ್ಲೂ ತನ್ನ ಮಗಳ ಬಗ್ಗೆಯೇ ಚಿಂತಿಸುತ್ತಿದ್ದು, ಕೊನೆಗೆ ಬಾಲಕನನ್ನು ಕೊಲೆ ಮಾಡಿದ್ದಾಳೆ.

    ಶಾಂತಿಲಾಲ್ ಅವರ ಎಲ್ಲಾ ಆಸ್ತಿ ಮಗನಿಗೆ ಸೇರಿದ್ದಾಗಿದ್ದು, ಮಗಳ ಪಾಡೇನು ಎಂದು ಝೀನಲ್ ಚಿಂತೆಯಲ್ಲಿದ್ದಳು. ಇದೇ ಕಾರಣದಿಂದ ಧ್ರುವ್ ನನ್ನು ಆತನ ಪ್ಯಾಂಟ್ ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ನಂತರ ಜನರ ಮುಂದೆ ನಾಟಕವಾಡಿದ್ದಾಳೆ.

    ಸದ್ಯ ಝೀನಲ್ ಳನ್ನು ಪಲೀಸರು ಬಂಧಿಸಿದ್ದಾರೆ.