Tag: Statue of Mahatma Gandhi

  • ನ್ಯೂಯಾರ್ಕ್‍ನಲ್ಲಿ ಗಾಂಧೀಜಿ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು!

    ನ್ಯೂಯಾರ್ಕ್‍ನಲ್ಲಿ ಗಾಂಧೀಜಿ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು!

    ನ್ಯೂಯಾರ್ಕ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ವಿಗ್ರಹವನ್ನು ನ್ಯೂಯಾರ್ಕ್‍ನಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

    ಮ್ಯಾನ್‍ಹ್ಯಾಟನ್ ಬಳಿಯ ಯೂನಿಯನ್ ಸ್ಕ್ವೇರ್‍ನಲ್ಲಿ ಮಹಾತ್ಮ ಗಾಂಧೀಜಿ ಕಂಚಿನ ಪ್ರತಿಮೆಯನ್ನು ನಿಲ್ಲಿಸಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಗಾಂಧೀಜಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಈ ಕೃತ್ಯವನ್ನು ಭಾರತೀಯ ಕಾನ್ಸುಲೇಟ್ ಜನರಲ್ ‘ತುಚ್ಫ’ ಕೆಲಸವೆಂದು ಖಂಡಿಸಿದ್ದಾರೆ. ಈ ಮೂಲ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ಆಘಾತ ಮತ್ತು ನಿರಾಶೆಯನ್ನು ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

    ಶನಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಕೆಲವು ಅಪರಿಚಿತ ವ್ಯಕ್ತಿಗಳು ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ನ್ಯೂಯಾರ್ಕ್‍ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ. ಈ ವಿಧ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ವಿರೋಧಿಸಿದರು. ಪ್ರಕರಣ ಕುರಿತು ಯುಎಸ್ ಸ್ಟೇಟ್ ಡಿಪಾಟ್ರ್ಮೆಂಟ್ ತನಿಖೆಯನ್ನು ಕೈಗೊಂಡಿದೆ. ಈ ಹೇಯ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

    8 ಅಡಿ ಎತ್ತರದ ಪ್ರತಿಮೆಯನ್ನು ಗಾಂಧಿ ಮೆಮೋರಿಯಲ್ ಇಂಟರ್‍ನ್ಯಾಶನಲ್ ಫೌಂಡೇಶನ್ ಕೊಡುಗೆಯಾಗಿ ನೀಡಿತು. ಈ ಪ್ರತಿಮೆಯನ್ನು 1986 ರ ಅಕ್ಟೋಬರ್ 2 ರಂದು ಗಾಂಧೀಜಿ ಅವರ 117ನೇ ಜನ್ಮದಿನದಂದು ಸಮರ್ಪಿಸಲಾಯಿತು. ಈ ಸಮಾರಂಭದಲ್ಲಿ ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಬೇಯಾರ್ಡ್ ರಸ್ಟಿನ್ ಮುಖ್ಯ ಭಾಷಣ ಮಾಡಿದ್ದರು. ನಂತರ ಈ ಪ್ರತಿಮೆಯನ್ನು 2002ರಲ್ಲಿ ಲ್ಯಾಂಡ್‍ಸ್ಕೇಪ್ ಗಾರ್ಡನ್ ನಲ್ಲಿ ಮರುಸ್ಥಾಪಿಸಲಾಯಿತು. ಕಳೆದ ತಿಂಗಳು, ಅಪರಿಚಿತ ವ್ಯಕ್ತಿಗಳು ಯುಎಸ್ ಕ್ಯಾಲಿಫೋರ್ನಿಯಾದ ಉದ್ಯಾನವನದಲ್ಲಿ ಗಾಂಧಿಯವರ ಮತ್ತೊಂದು ಪ್ರತಿಮೆಯನ್ನು ಮುರಿದು ಕಿತ್ತುಹಾಕಿದ್ದರು. ಇದನ್ನೂ ಓದಿ: ಭಾರತಕ್ಕೆ ಇಂದು ಪ್ರಧಾನಿ ಇಲ್ಲ, ಏನೇ ಮಾಡಿದ್ರೂ ಜನ ಸುಮ್ಮನಿರಬೇಕೆನ್ನುವ ರಾಜನಿದ್ದಾನೆ: ರಾಗಾ

  • ಮಹಾತ್ಮ ಗಾಂಧೀಜಿ ಪ್ರತಿಮೆ ಎದುರೇ ಬಾರ್ ಓಪನ್

    ಮಹಾತ್ಮ ಗಾಂಧೀಜಿ ಪ್ರತಿಮೆ ಎದುರೇ ಬಾರ್ ಓಪನ್

    – ಸಾಮಾಜಿಕ ಕಾರ್ಯಕರ್ತರಿಂದ ಬಿಬಿಎಂಪಿಗೆ ದೂರು

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿರ ಬೃಹತ್ ಪ್ರತಿಮೆ ಎದುರೇ ಬಾರ್ ಶಾಪ್ ಓಪನ್ ಆರಂಭವಾಗುತ್ತಿದ್ದು, ನಗರದ ಎಂ.ಜಿ.ರಸ್ತೆಯ ಜಂಕ್ಷನ್ ಬಳಿ ಮಹಾತ್ಮಗಾಂಧೀ ಉದ್ಯಾನವನವಿದೆ. ಈ ಉದ್ಯಾನವನದಲ್ಲಿ ಬೃಹತ್ ಗಾಂಧೀಜಿಯವರ ಪ್ರತಿಮೆ ಎದುರೇ ಟಾನಿಕ್ ಎನ್ನುವ ಹೆಸರಿನಲ್ಲಿ ಬೃಹತ್ ಬಾರ್ ಶಾಪ್ ಓಪನ್ ಆಗುತ್ತಿದೆ.

    ಏಷ್ಯಾದ ಬಿಗ್ಗೆಸ್ಟ್ ಬಾರ್ ಟಾನಿಕ್ ಎಂದು ಹೇಳಲಾಗುತ್ತಿದ್ದು, ಈ ಬಾರಿನ 10 ಅಡಿ ದೂರದಲ್ಲಿ ಅತಿ ದೊಡ್ಡ ಚರ್ಚ್ ಮತ್ತು ಪೊಲೀಸ್ ಠಾಣೆ ಕೂಡ ಇದೆ. ಬಾರಿನಿಂದ 100 ಮೀಟರ್ ವ್ಯಾಪ್ತಿಯಲ್ಲಿ ದೇವಸ್ಥಾನ ಮತ್ತು ಮಹಾತ್ಮ ಗಾಂಧಿ ಪ್ರತಿಮೆ ಇದೆ. 100 ಮೀಟರ್ ಅಂತರದಲ್ಲೇ ದೇವಸ್ಥಾನ ಸೇರಿದಂತೆ ಗಾಂಧೀಜಿ ಪ್ರತಿಮೆ ಇದ್ದರೂ ಕೂಡ ಅಬಕಾರಿ ನಿಯಮಗಳ ಗಾಳಿಗೆ ತೂರಿ ಬಾರ್ ಶಾಪ್ ಓಪನ್ ಮಾಡಲಾಗುತ್ತಿದೆ.

    ಗಾಂಧೀಜಿ ಪ್ರತಿಮೆ ಎದುರೇ ಬಾರ್ ತೆರೆಯುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರು, ಚಿಂತಕರು ಸೋಶಿಯಲ್ ಮೀಡಿಯಾದಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಬಿಬಿಎಂಪಿ ಮತ್ತು ಆರ್.ಟಿ.ಓ ಇಲಾಖೆಗೂ ದೂರು ನೀಡಿದ್ದಾರೆ. ಟಾನಿಕ್ ಎಂಬ ಹೆಸರಿನಲ್ಲಿ ಓಪನ್ ಆಗುತ್ತಿರುವ ಈ ಬಾರ್ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದರ ಹಿಂದೆ ಕಾಣದ ಕೈವಾಡ ಇದೆ. ಹಲವಾರು ಜನ ವಿರೋಧ ಮಾಡಿದ್ದರೂ ಬಾರ್ ತೆರೆಯಲು ಮುಂದಾಗುತ್ತಿದ್ದಾರೆ. ಪರಿಣಾಮ ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

    ಹಲವಾರು ದಿನಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿ ಎಷ್ಟು ದೂರು ಕೊಟ್ಟರು ಅಧಿಕಾರಿಗಳು ಮಾತ್ರ ಕ್ರಮ ಜರುಗಿಸುತ್ತಿಲ್ಲ. ಆದಷ್ಟು ಬೇಗ ಅಧಿಕಾರಿಗಳು ಇದರ ಬಗ್ಗೆ ಕ್ರಮ ಜರುಗಿಸಲಿಲ್ಲ ಅಂದರೆ ಪ್ರತಿಭಟನೆಗಳು, ಹೋರಾಟಗಳು ಹೆಚ್ಚಾಗುವ ಎಚ್ಚರಿಕೆ ನೀಡಲಾಗಿದೆ.