Tag: staffs

  • ಪ್ರತಿನಿತ್ಯ 800 ಮಂದಿಗೆ ಇಫ್ತಾರ್ ಭೋಜನ ವ್ಯವಸ್ಥೆ ಮಾಡುತ್ತಿರುವ ಕ್ರಿಶ್ಚಿಯನ್ ಉದ್ಯಮಿ!

    ಪ್ರತಿನಿತ್ಯ 800 ಮಂದಿಗೆ ಇಫ್ತಾರ್ ಭೋಜನ ವ್ಯವಸ್ಥೆ ಮಾಡುತ್ತಿರುವ ಕ್ರಿಶ್ಚಿಯನ್ ಉದ್ಯಮಿ!

    ದುಬೈ: ಕೇರಳ ಮೂಲದ ಕ್ರಿಶ್ಚಿಯನ್ ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆಂದು ಪ್ರತ್ಯೇಕ ಮಸೀದಿ ನಿರ್ಮಿಸುವುದರೊಂದಿಗೆ ರಂಜಾನ್ ತಿಂಗಳಲ್ಲಿ ಇಫ್ತಾರ್ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು, ಕೇರಳದ ಕಯಾಕುಲಂ ಮೂಲದವರಾಗಿರುವ ಉದ್ಯಮಿ ಸಾಜಿ ಚೆರಿಯನ್(49) 2003ರಿಂದ ಯುಎಇನಲ್ಲಿ ವಾಸವಾಗಿದ್ದಾರೆ. ತಾವು ಕ್ರಿಶ್ಚಿಯನ್ ಆಗಿದ್ದರು ಧರ್ಮಬೇಧ ಮರೆತು ಯುಎಇನಲ್ಲಿ ಮಸೀದಿ ಕಟ್ಟಿಸಿದ್ದಾರೆ. ಜೊತೆಗೆ ರಂಜಾನ್ ತಿಂಗಳ ಪೂರ್ತಿ 800 ಮಂದಿ ಜನರಿಗೆ ಇಫ್ತಾರ್ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದಾರೆ.

    ಪ್ರತಿನಿತ್ಯ ನಮಾಜ್‍ಗೆ ತಮ್ಮ ಸಂಸ್ಥೆಯ ಸಿಬ್ಬಂದಿ ಸಂಬಳದ ಹಣ ಖರ್ಚು ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ಈ ಹಣವನ್ನು ಉಳಿಸಲು ಉದ್ಯಮಿ ಸಾಜಿ ಈ ಉಪಾಯ ಮಾಡಿದ್ದಾರೆ. ಸಿಬ್ಬಂದಿಗಾಗಿ ಮಸೀದಿಯನ್ನೂ ನಿರ್ಮಿಸಿದ್ದಾರೆ. ಮಸೀದಿಗೆ `ಮೇರಿ ದಿ ಮದರ್ ಆಫ್ ಜೀಸಸ್’ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರತಿನಿತ್ಯ ಇಫ್ತಾರ್ ಊಟದಲ್ಲಿ ಬಿರಿಯಾನಿ, ಹಣ್ಣು, ಖರ್ಜೂರ ಸೇರಿದಂತೆ ಹಲವು ಖಾದ್ಯಗಳನ್ನು ಸಿಬ್ಬಂದಿಗೆ ನೀಡುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚೆರಿಯನ್, ಸಿಬ್ಬಂದಿ ನಮಾಜ್ ಮಾಡಲು ದೂರದ ಪ್ರದೇಶಕ್ಕೆ ತೆರಳಬೇಕಾಗಿತ್ತು. ಹಾಗೆಯೇ ಇದಕ್ಕಾಗಿ ಸಂಬಳದ ಹಣವನ್ನು ಖರ್ಚು ಮಾಡುತ್ತಿದ್ದರು. ಜೊತೆಗೆ ಇಫ್ತಾರ್ ಊಟಕ್ಕೂ ಹಣ ಖರ್ಚಾಗುತ್ತಿತ್ತು. ಆದ್ದರಿಂದ ಸಿಬ್ಬಂದಿಯ ಹಣ ಉಳಿಸಲು ಈ ರೀತಿ ಮಾಡಿದ್ದೇನೆ. ರಂಜಾನ್ ಮುಗಿಯುವ ತನಕ ಒಂದೇ ರೀತಿಯ ಆಹಾರ ನೀಡಿದರೆ ಅವರಿಗೆ ಬೇಸರವಾಗುತ್ತದೆ. ಹೀಗಾಗಿ ವಿವಿಧ ರೀತಿಯ ಬಿರಿಯಾನಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಪತ್ರಿಕೆಯೊಂದರ ವರದಿ ಪ್ರಕಾರ ರಂಜಾನ್ ಆಚರಣೆಯ 17 ನೇ ರಾತ್ರಿಯಂದು ಈ ಮಸೀದಿಯನ್ನು ಉದ್ಘಾಟಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ದುಬೈನಲ್ಲಿ ಅಲ್ ಹೈಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈಸ್ಟ್ ವಿಲ್ಲೆ ರಿಯಲ್ ಎಸ್ಟೇಟ್ ಸಂಕೀರ್ಣದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಇದು ಒಂದೇ ಸಮಯದಲ್ಲಿ 250 ಮಂದಿ ಪ್ರಾರ್ಥನೆಯನ್ನು ಸಲ್ಲಿಸುವಷ್ಟು ದೊಡ್ಡ ಸಭಾಂಗಣವನ್ನು ಹೊಂದಿದೆ. ಅಷ್ಟೇ ಅಲ್ಲದೆ ಮಸೀದಿಯ ಹೊರಗಡೆ ತೆರೆದ ಆವರಣದಲ್ಲಿ 700 ಮಂದಿ ಆರಾಧಕರು ಪ್ರಾರ್ಥನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ.

  • ಮನೆಗೆ ನುಗ್ಗಿ 3 ವರ್ಷದ ಬಾಲಕನನ್ನು ಕಚ್ಚಿ ಎಳೆದುಕೊಂಡು ಹೋಯ್ತು ಚಿರತೆ

    ಮನೆಗೆ ನುಗ್ಗಿ 3 ವರ್ಷದ ಬಾಲಕನನ್ನು ಕಚ್ಚಿ ಎಳೆದುಕೊಂಡು ಹೋಯ್ತು ಚಿರತೆ

    ಕಾಶ್ಮೀರ: ಚಿರತೆಯೊಂದು ಮನೆಗೆ ನುಗ್ಗಿ 3 ವರ್ಷದ ಬಾಲಕನನ್ನು ಎಳೆದುಕೊಂಡು ಹೋಗಿ ಸಾಯಿಸಿರುವ ದಾರುಣ ಘಟನೆ ಜಮ್ಮು- ಕಾಶ್ಮೀರದಲ್ಲಿ ನಡೆದಿದೆ.

    ವಾಸಿಮ್ ಅಕ್ರಮ್ ಎಂಬ ಮೂರು ವರ್ಷದ ಬಾಲಕನನ್ನು ಚಿರತೆ ಸಾಯಿಸಿದೆ. ಬಾಲಕ ತನ್ನ ಮನೆಯಲ್ಲಿ ತಾಯಿಯ ಜೊತೆ ಅಡುಗೆ ಮನೆಯಲ್ಲಿದ್ದಾಗ ಚಿರತೆಯೊಂದು ಏಕಾಏಕಿ ನುಗ್ಗಿ ಮಗುವನ್ನು ಬಾಯಿಯಲ್ಲಿ ಕಚ್ಚಿ ಎಳೆದುಕೊಂಡು ಹೋಗಿದೆ.

    ಘಟನೆ ಕುರಿತು ತಕ್ಷಣ ಬಾಲಕನ ತಾಯಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಮಗುವನ್ನು ಹುಡುಕಲು ಅರಣ್ಯಕ್ಕೆ ಹೋದ ಸಿಬ್ಬಂದಿಗೆ ತಲೆ ಇಲ್ಲದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಾಲಕನ ಮೃತದೇಹವನ್ನು ಪೋಷಕರಿಗೆ ಒಪ್ಪಿಸಿದ್ದು, ಚಿರತೆಯನ್ನು ಸೆರೆಹಿಡಿಯುವ ಪ್ರಯತ್ನ ಸಾಗಿದೆ.

    ಬುಧವಾರ ಬೆಳಗ್ಗೆ ಜಮ್ಮುವಿನ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಕೊಂಡಿತ್ತು. ಆದರೆ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಅರಣ್ಯದ ಸಮೀಪ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ ಎಂದು ಜಮ್ಮುವಿನ ಪ್ರದೇಶಿಕ ವನ್ಯಜೀವಿ ಅಧಿಕಾರಿ ತಾಹಿರ್ ಅಹ್ಮದ್ ಶಾವ್ಲ್ ತಿಳಿಸಿದ್ದಾರೆ.

    ಅರಣ್ಯ ಪ್ರದೇಶದಲ್ಲಿ ಮನುಷ್ಯರ ಓಡಾಟ ಇತ್ತೀಚಿಗೆ ಹೆಚ್ಚಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡುವುದರಿಂದ ವನ್ಯಜೀವಿಗಳು ನಾಡಿಗೆ ಬರುತ್ತಿದೆ. ಸುಮಾರು 12 ಸಾವಿರದಿಂದ 14 ಸಾವಿರ ಚಿರತೆಗಳು ಭಾರತದಲ್ಲಿ ಇದೆ. ಆದರೆ 2017ರಲ್ಲಿ 431 ಚಿರತೆಗಳನ್ನು ಭೇಟೆಯಾಡಲಾಗಿದೆ. ನಗರ ಪ್ರದೇಶವು ಬೆಳೆಯುತ್ತಿರುವುದರಿಂದ ಕಾಡು ಪ್ರಾಣಿಗಳು ಜನ ವಾಸಿಸುತ್ತಿರುವ ಜಾಗಗಳಿಗೆ ಬರುತ್ತಿದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv