Tag: staff

  • ಚಿಂತಾಮಣಿ ತಹಶೀಲ್ದಾರ್ ಹುಟ್ಟುಹಬ್ಬ – ಕಚೇರಿಗೆ ಬೀಗ ಜಡಿದು ಪಾರ್ಟಿಯಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರ್

    ಚಿಂತಾಮಣಿ ತಹಶೀಲ್ದಾರ್ ಹುಟ್ಟುಹಬ್ಬ – ಕಚೇರಿಗೆ ಬೀಗ ಜಡಿದು ಪಾರ್ಟಿಯಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರ್

    – ಕಚೇರಿ ಸಮಯದಲ್ಲಿ ಪಾರ್ಟಿ
    – ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಪರದಾಟ

    ಚಿಕ್ಕಬಳ್ಳಾಪುರ: ಸರ್ಕಾರದ ಸಂಬಳ ಪಡೆದು ಸಾರ್ವಜನಿಕರ ಕೆಲಸ ಮಾಡಬೇಕಾದ ಅಧಿಕಾರಿ, ಸಿಬ್ಬಂದಿ ಕಚೇರಿ ಸಮಯದಲ್ಲಿ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

    ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ್ ಅವರು ಡಿ.6 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು ಸಿಬ್ಬಂದಿಗೆ ಊಟೋಪಚಾರ ಪಾರ್ಟಿ ವ್ಯವಸ್ಥೆ ಮಾಡದ್ದಕ್ಕೆ ಇಂದು ತಮ್ಮ ಹುಟ್ಟು ಹಬ್ಬದ ಸವಿನೆನಪಿಗಾಗಿ ತಹಶೀಲ್ದಾರ್ ಕಚೇರಿಯ ಅಧಿಕಾರಿ ಸಿಬ್ಬಂದಿ ಸ್ಥಳೀಯ ವಿಲೇಜ್ ಅಕೌಂಟೆಂಟ್, ಪಿಡಿಓಗಳು ಸೇರಿದಂತೆ ಗ್ರಾಮಪಂಚಾಯತಿಗಳ ನೌಕರರಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದಾರೆ.

    ಚಿಂತಾಮಣಿ ನಗರ ಹೊರವಲಯದ ಪೆರಮಾಚನಹಳ್ಳಿ ಬಳಿಯ ನೇಚರ್ ಆರೋಮ ರೆಸ್ಟೋರೆಂಟ್ ನಲ್ಲಿ ಎಲ್ಲರಿಗೂ ತಹಶೀಲ್ದಾರ್ ಊಟೋಪಚಾರದ ವ್ಯವಸ್ಥೆ ಮಾಡಿದ್ದು ಮಧ್ಯಾಹ್ನ ಊಟದ ಸಮಯದ ನಂತರ ಎಲ್ಲಾ ಸಿಬ್ಬಂದಿಗಳು ತಮ್ಮ ಕಚೇರಿಗಳಿಗೆ ಬೀಗ ಜಡಿದು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸಹಜವಾಗಿ ತಹಶೀಲ್ದಾರ್ ಕಚೇರಿಗೆ ಬಂದ ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳು ಆಗದೆ ಪರದಾಡಿದ್ದಾರೆ.

    ಈ ವಿಚಾರವನ್ನು ಸಾರ್ವಜನಿಕರು ಪಬ್ಲಿಕ್ ಟಿವಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಪರೀಶೀಲನೆ ನಡೆಸಿದಾಗ ತಾಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿ ಊಟೋಪಚಾರದಲ್ಲಿ ಭಾಗಿಯಾಗಿರೋದು ಖಾತ್ರಿಯಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ತಹಶೀಲ್ದಾರ್ ವಿಶ್ವನಾಥ್, ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದೆವು. ಆದರೆ ಮಧ್ಯಾಹ್ನ ಊಟದ ಸಮಯದಲ್ಲಿ ಹೋಗಿ ಪುನಃ ಕಚೇರಿಗೆ ಹಾಜರಾಗಿದ್ದು, ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಕಚೇರಿಯ ಬಹುತೇಕ ಸಿಬ್ಬಂದಿ ಹಾಗೂ ಅಧಿಕಾರಿಗಳು ತಹಶೀಲ್ದಾರ್ ವಿಶ್ವನಾಥ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕೆ ದೂರದ ಊರಿನಿಂದ ಬಂದಿದ್ದ ಸಾರ್ವಜನಿಕರು ಪರದಾಡಿ ಹಿಡಿಶಾಪ ಹಾಕಿ ತೆರಳಿದ್ದಾರೆ.

  • ದುಬಾರೆಯಲ್ಲಿ ಪ್ರವಾಸಿಗರು, ಸಿಬ್ಬಂದಿ ನಡುವೆ ಮಾರಾಮಾರಿ

    ದುಬಾರೆಯಲ್ಲಿ ಪ್ರವಾಸಿಗರು, ಸಿಬ್ಬಂದಿ ನಡುವೆ ಮಾರಾಮಾರಿ

    ಮಡಿಕೆರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಪ್ರವಾಸಿದಾಮದಲ್ಲಿ ಪ್ರವಾಸಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ.

    ಆನೆ ಕ್ಯಾಂಪ್‍ಗೆ ಮೋಟಾರ್ ಬೋಟ್ ಮೂಲಕ ತೆರಳುವ ವಿಚಾರಕ್ಕೆ ಉಂಟಾದ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತ ತಲಪಿದೆ. ಮಂಗಳೂರಿನ ಪಡೀಲಿನಿಂದ ಒಂದು ಬಸ್‍ನಲ್ಲಿ ಆಗಮಿಸಿದ್ದ ಪ್ರವಾಸಿಗರು ಬೋಟಿಂಗ್ ತೆರಳಲು ಸರದಿಯಲ್ಲಿ ನಿಂತಿದ್ದರು. ಈ ಸಂದರ್ಭ ಸಮಯ ಮೀರಿ ಬೋಟಿಂಗ್ ಸ್ಥಗಿತಗೊಳಿಸಿದ ಕಾರಣ ಆಕ್ರೋಶಗೊಂಡ ಪ್ರವಾಸಿಗರ ಪೈಕಿ ಐವರು ಯುವಕರು ತಮ್ಮ ಮೇಲೆ ಹಲ್ಲೆ ನಡೆಸಿ ತಲೆ ಮತ್ತು ಮುಖಕ್ಕೆ ಘಾಸಿಗೊಳಿಸಿದ್ದಾರೆ ಎಂದು ಅರಣ್ಯ ಇಲಾಖೆಯ ದಿನಗೂಲಿ ನೌಕರರಾದ ರವಿ ತಮ್ಮಯ್ಯ, ರಮೇಶ್ ಆರೋಪಿಸಿದ್ದಾರೆ.

    ಇತ್ತ ಪ್ರವಾಸಿಗರು ತಮ್ಮದೇನೂ ತಪ್ಪಿಲ್ಲ. ನಮ್ಮ ಮುಂದೆ ನಿಂತಿದ್ದ ಕೆಲವು ಪ್ರವಾಸಿಗರು ಈ ಮುಂಚಿತವಾಗಿ ಸಿಬ್ಬಂದಿಯೊಂದಿಗೆ ಜಗಳವಾಡುತ್ತಿದ್ದರು. ಇದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ ನಮ್ಮ ಕೆಲವು ಹುಡುಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಪೋಲೀಸರು ಕ್ರಮಕೈಗೊಂಡಿದ್ದಾರೆ.

  • ಪೆಟ್ರೋಲ್ ಹಣ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುಂಡರ ಹಲ್ಲೆ

    ಪೆಟ್ರೋಲ್ ಹಣ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುಂಡರ ಹಲ್ಲೆ

    ಬೀದರ್: ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡುವ ವಿಚಾರಕ್ಕೆ ಕೆಲ ಪುಂಡರು ಬಂಕ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದ ಭಾರತ್ ಪೆಟ್ರೋಲಿಯಂ ಬಂಕ್ ನಲ್ಲಿ ತಡರಾತ್ರಿ ನಡೆದಿದೆ.

    ತಡರಾತ್ರಿ ನಾಲ್ವರ ತಂಡವೊಂದು ಭಾಲ್ಕಿಯಲ್ಲಿನ ಭಾರತ್ ಪೆಟ್ರೋಲಿಯಂ ಬಂಕ್‍ಗೆ ಬಂದು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಳಿಕ ಸಿಬ್ಬಂದಿ ಹಣ ಕೇಳಿದಾಗ ಪುಂಡರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಂಕ್ ಸಿಬ್ಬಂದಿ ಹಣ ಕೊಡಿ ಎಂದಾಗ ನಮ್ಮ ಬಳಿ ಹಣ ಇಲ್ಲ. ಸ್ವೈಪಿಂಗ್ ಮಿಷನ್ ಇದ್ರೆ ಹೇಳಿ ಅದರಲ್ಲಿ ಹಾಕುತ್ತೇವೆ ಎಂದಿದ್ದಾರೆ. ಆಗ ಬಂಕ್ ಸಿಬ್ಬಂದಿ ನಮ್ಮಲ್ಲಿ ಸ್ವೈಪಿಂಗ್ ಮಿಷನ್ ಇಲ್ಲಾ ಹಣ ಕೊಡಿ ಎಂದಿದ್ದಾರೆ. ಈ ವೇಳೆ ಪುಂಡರು ಹಾಗೂ ಸಿಬ್ಬಂದಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಬಂಕ್ ಸಿಬ್ಬಂದಿಯ ಮೇಲೆ ಪುಂಡರು ಗಂಭೀರವಾಗಿ ಹಲ್ಲೆ ಮಾಡಿದ್ದು ಸಿಬ್ಬಂದಿಗೆ ತೀವ್ರವಾದ ಗಾಯಗಳಗಿವೆ. ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿದ್ದು, ವಿಡಿಯೋ ಆಧಾರದ ಮೇಲೆ ನಗರದ ಪೊಲೀಸರು ತನಿಖೆ ನಡೆಸಿ ವಿಜಯಕುಮಾರ್, ದಿಲೀಪ್ ಹಾಗೂ ಮೇಘರಾಜ್ ಮೂವರು ಆರೋಪಿಗಳನ್ನು ಗುರುತಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಟೋಕಿಯೋ: ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಪ್ರತಿ ಸಿಗರೇಟು ಪ್ಯಾಕ್ ಮೇಲೂ ಬರೆದಿರುತ್ತೆ. ಆದರೂ ಜನರು ಅದನ್ನು ಸೇದುವುದನ್ನು ಬಿಡಲ್ಲ. ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಧೂಮಪಾನ ಹಾನಿಕರ ಎಂದು ಸಾಫ್ಟ್‌ವೇರ್ ಕಂಪನಿಯೊಂದು ಸಿಗರೇಟ್ ಸೇದದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದೆ.

    ಹೌದು ಜಪಾನ್ ಮೂಲದ ಸಾಫ್ಟ್‌ವೇರ್ ಕಂಪನಿ ಹೊಸ ಉಪಾಯ ಮಾಡಿದೆ. ಧೂಮಪಾನ ಮಾಡದ ಸಿಬ್ಬಂದಿಗೆ ವೇತನ ಸಹಿತ 6 ರಜೆಗಳನ್ನು ಹೆಚ್ಚು ತೆಗೆದುಕೊಳ್ಳುವ ಭರ್ಜರಿ ಆಫರ್ ನೀಡಿದೆ. ಧೂಮಪಾನ ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಹಾನಿಕಾರಕವಾಗಿದೆ. ಅದಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಕಂಪನಿ ತಿಳಿಸಿದೆ.

    ಕಂಪನಿಯ ಓರ್ವ ಸಿಬ್ಬಂದಿ 1 ಸಿಗರೇಟು ಸೇದಿ ರೆಸ್ಟ್ ಮಾಡಿ ಬರಲು ಕನಿಷ್ಠ ಹದಿನೈದು ನಿಮಿಷ ತೆಗೆದುಕೊಳ್ಳುತ್ತಾರೆ. ಹೀಗೆ ಕಂಪನಿಯಲ್ಲಿ ಸುಮಾರು 42 ಮಂದಿ ಇದ್ದಾರೆ. ಎಲ್ಲರೂ 15 ನಿಮಿಷ ಸಮಯ ತೆಗೆದುಕೊಂಡರೆ ಕೆಲಸಕ್ಕೆ ಅಡ್ಡಿಯಾಗುತ್ತದೆ. ಸಮಯ ಹಾಳಾಗುತ್ತದೆ. ಇದರಿಂದ ಕೆಲಸದ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಮನಗಂಡ ಕಂಪನಿ ವೇತನ ಸಹಿತ ರಜೆ ಉಪಾಯವನ್ನು ಪ್ರಯೋಗಿಸಿದೆ.

    ಈ ಬಗ್ಗೆ ಕಂಪನಿ ಸಿಇಒ ಮಾತನಾಡಿ, ಈ ಉಪಾಯವು ಸಿಬ್ಬಂದಿ ಧೂಮಪಾನ ಬಿಡುವುದಕ್ಕೆ ಸಹಾಯ ಮಾಡುತ್ತದೆ. ಅವರನ್ನು ಧೂಪಪಾನ ಬಿಟ್ಟು ಆರೋಗ್ಯವಾಗಿರಲು ಪ್ರೋತ್ಸಾಹಿಸುತ್ತದೆ. ಅಲ್ಲದೆ ಈಗಾಗಲೇ 42ರಲ್ಲಿ 4 ಮಂದಿ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

  • ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಗ್ರಾಹಕ

    ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಗ್ರಾಹಕ

    ಚಿಕ್ಕಬಳ್ಳಾಪುರ: ಬ್ಯಾಂಕ್ ಸಿಬ್ಬಂದಿ ಮೇಲೆ ಗ್ರಾಹಕನೋರ್ವ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಘಟನೆ ನಡೆದಿದೆ.

    ದುರ್ಗೆನಹಳ್ಳಿ ಗ್ರಾಮದ ಕುಮಾರ್ ಎಂಬವ ವ್ಯಕ್ತಿ ಕಾರ್ಪೋರೇಷನ್ ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಕ್ಷಣಾರ್ಧದಲ್ಲಿ ಸಿಬ್ಬಂದಿ ಮಚ್ಚಿನ ಏಟಿನಿಂದ ಪಾರಾಗಿದ್ದಾರೆ. ತನ್ನ ಖಾತೆಯಲ್ಲಿರುವ 268 ರೂಪಾಯಿಗಳನ್ನು ನೀಡಲೇಬೇಕೆಂದು ಬ್ಯಾಂಕಿನ ಸಿಬ್ಬಂದಿಯನ್ನು ಕೇಳಿದ್ದಾನೆ. ಬ್ಯಾಂಕ್ ಸಿಬ್ಬಂದಿ ಹಣ ನೀಡಲ್ಲ ಎಂದಾಗ ಹಲ್ಲೆಗೆ ಮುಂದಾಗಿದ್ದಾನೆ.

    ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕಿನ ಸಿಬ್ಬಂದಿ, ಕಳೆದೊಂದು ವರ್ಷದಿಂದ ಬ್ಯಾಂಕಿನಲ್ಲಿ ವ್ಯವಹಾರ ನಡೆಸದಿರುವ ಕಾರಣ ಅಕೌಂಟ್ ಲಾಕ್ ಆಗಿದೆಯೆಂದು ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಕುಮಾರ ಕೂಡಲೇ ಬ್ಯಾಂಕಿನ ಸಿಬ್ಬಂದಿ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದನೆ. ಇದನ್ನು ಕಂಡ ಬ್ಯಾಂಕಿನಲ್ಲಿದ್ದ ಸ್ಥಳೀಯರು ಕುಮಾರನನ್ನು ಕೂಡಲೇ ಹಿಡಿದು, ಮಚ್ಚನ್ನು ಕಸಿದುಕೊಂಡು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯ – ನೀರಿನ ಟ್ಯಾಂಕಿಗೆ ಬಿದ್ದು ಮಗು ಸಾವು

    ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯ – ನೀರಿನ ಟ್ಯಾಂಕಿಗೆ ಬಿದ್ದು ಮಗು ಸಾವು

    ಗದಗ: ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನೀರಿನ ಟ್ಯಾಂಕ್‍ಗೆ 4 ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ನಡೆದಿದೆ.

    ಮೃತ ಮಗುವನ್ನು ದುರಗಪ್ಪ ಮಾದರ (4) ಎಂದು ಗುರುತಿಸಲಾಗಿದೆ. ದುರಗಪ್ಪ ಮಾದರ ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ವೇಳೆ ಅಂಗನವಾಡಿ ಅವರಣದಲ್ಲಿರುವ ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದಾನೆ. ಆದರೆ ಇದನ್ನು ಅಂಗನವಾಡಿ ಸಿಬ್ಬಂದಿ ಗಮನಿಸಿಲ್ಲದ ಕಾರಣ ಮೃತಪಟ್ಟಿದ್ದಾನೆ.

    ಕುರುಡಗಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿರುವ ಅಂಗನವಾಡಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಗದಗ ಜಿಲ್ಲೆ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಟೇಕಾಫ್ ಆದ ಕೂಡಲೇ ನೆಲಕ್ಕುರುಳಿದ ವಿಮಾನ- 29ಕ್ಕೂ ಹೆಚ್ಚು ಮಂದಿ ಸಾವು

    ಟೇಕಾಫ್ ಆದ ಕೂಡಲೇ ನೆಲಕ್ಕುರುಳಿದ ವಿಮಾನ- 29ಕ್ಕೂ ಹೆಚ್ಚು ಮಂದಿ ಸಾವು

    ಗೋಮ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಗೋಮ ನಗರದಲ್ಲಿ ಟೇಕಾಫ್ ಆದ ಕೂಡಲೇ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 29ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದುರಂತ ನಡೆದಿದೆ.

    ಬ್ಯುಸಿ ಬೀ ಎಂಬ ಸ್ಥಳೀಯ ಸಂಸ್ಥೆಗೆ ಸೇರಿದ ವಿಮಾನ ಬೆನಿ ನಗರಕ್ಕೆ ಹೊರಟಿತ್ತು. ಟೇಕಾಫ್ ಆಗುವ ವೇಳೆ ತಾಂತ್ರಿಕ ದೋಷದಿಂದ ವಿಮಾನ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವರು ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಕೊನೆಯುಸಿರು ಎಳೆದಿದ್ದಾರೆ. ಸಾಕಷ್ಟು ಮಂದಿ ಇನ್ನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ನಾರ್ತ್ ಕಿವು ಸರ್ಕಾರ ತಿಳಿಸಿದೆ

    ಈ ವಿಮಾನ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ವಿಮಾನ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಯುರೋಪಿಯನ್ ಒಕ್ಕೂಟದಲ್ಲಿ ಈ ವಿಮಾನಗಳ ಕಾರ್ಯ ನಿರ್ವಹಣೆಯನ್ನು ನಿಷೇಧಿಸಲಾಗಿದೆ. ಟೇಕಾಪ್ ಆದ ಬಳಿಕ ಏರ್‌ಪೋರ್ಟ್‌ ಬಳಿ ಇದ್ದ ವಸತಿ ಪ್ರದೇಶಕ್ಕೆ ವಿಮಾನ ಬಂದು ಅಪ್ಪಳಿಸಿದೆ. 2 ಮನೆಗಳ ಮೇಲೆ ವಿಮಾನ ಬಿದ್ದ ಪರಿಣಾಮ ಮನೆಗಳು ನೆಲಸಮವಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

    ಘಟನಾ ಸ್ಥಳದಲ್ಲಿ ಒಟ್ಟಾರೆ 29 ಮೃತದೇಹಗಳು ಪತ್ತೆಯಾಗಿವೆ. ತಾಂತ್ರಿಕ ಸಮಸ್ಯೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಬೀದರ್: ನಗರದ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ತುಂಬು ಗರ್ಭಿಣಿಯನ್ನು ನಿರ್ಲಕ್ಷಿಸಿದ ಘಟನೆ ಇಂದು ನಡೆದಿದೆ.

    ಮಹಿಳೆ ತಾಂಡದಿಂದ ಅಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ನೀಡದೆ ಬ್ರಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಇದೀಗ ಆಸ್ಪತ್ರೆ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ.

    ಇಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ತಾಂಡದಿಂದ ಹೆರಿಗೆಗಾಗಿ ಬಂದಿದ್ದ ತುಂಬು ಗರ್ಭಿಣಿಗೆ ಸ್ಟ್ರೆಚರ್ ನೀಡಿ ಸಿಬ್ಬಂದಿ ವಾರ್ಡಿಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಗರ್ಭಿಣಿ ಗಂಟೆಗಟ್ಟಲೆ ಕಾದು ಕಾದು ಸುಸ್ತಾದರೂ ಬ್ರಿಮ್ಸ್ ಸಿಬ್ಬಂದಿ ಸ್ಟ್ರೆಚರ್ ನೀಡದ ಕಾರಣ ನಡೆದುಕೊಂಡೇ ಹೋಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಸಿಬ್ಬಂದಿ ಸ್ಟ್ರೆಚರ್ ನೀಡದಿರುವುದರಿಂದ ಹೈರಾಣಾದ ಗರ್ಭಿಣಿ ಭಾಗ್ಯಶಿರಾ ಅಕ್ಷರಃ ನರಕಯಾತನೆ ಅನುಭವಿಸಿದ್ದು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ದುಬಾರೆಯಿಂದ ನಾಪತ್ತೆಯಾದ ಆನೆ- ಶೋಧಕಾರ್ಯದಲ್ಲಿ ಅರಣ್ಯ ಇಲಾಖೆ

    ದುಬಾರೆಯಿಂದ ನಾಪತ್ತೆಯಾದ ಆನೆ- ಶೋಧಕಾರ್ಯದಲ್ಲಿ ಅರಣ್ಯ ಇಲಾಖೆ

    ಮಡಿಕೇರಿ: ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆ ಶಿಬಿರದಲ್ಲಿ ಇದ್ದಂತಹ ಕುಶ ಎಂಬ ಆನೆ ಕಳೆದ ನಾಲ್ಕು ಐದು ದಿನಗಳಿಂದ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

    ಈ ಆನೆಯನ್ನು ಮೇಯಲು ಕಾಡಿಗೆ ಬಿಟ್ಟಂತಹ ಸಂದರ್ಭದಲ್ಲಿ ಶಿಬಿರಕ್ಕೆ ಮರಳದೇ ತಪ್ಪಿಸಿಕೊಂಡಿದೆ ಎನ್ನಲಾಗಿದೆ. ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಕಾವಾಡಿಗಳು ದುಬಾರೆಯ ಅರಣ್ಯದೊಳಗೆಲ್ಲ ಸುತ್ತಾಡಿ ಹುಡುಕಾಟ ನಡೆಸಿದರೂ ಕುಶ ಪತ್ತೆಯಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ವೀರಾಜಪೇಟೆಯ ಬೀಟೆಕಾಡು ಎಸ್ಟೇಟ್‍ನಿಂದ ಎರಡು ಆನೆಗಳನ್ನು ಸೆರೆಹಿಡಿಯಲಾಗಿತ್ತು. ದುಬಾರೆ ಶಿಬಿರದಲ್ಲಿ ಪಳಗಿಸಿದ ಇವುಗಳಿಗೆ ಒಂದಕ್ಕೆ ಲವ ಎಂದು ಮತ್ತೊಂದಕ್ಕೆ ಕುಶ ಎಂದು ನಾಮಕರಣ ಮಾಡಲಾಗಿತ್ತು.

    ಲವ ಆನೆ ಶಿಬಿರದಲ್ಲೇ ಇದೆ, ಆದರೆ ಅಂದಾಜು 28ರ ಪ್ರಾಯದ ಕುಶ ಆನೆ ನಾಪತ್ತೆಯಾಗಿ ಅರಣ್ಯಾಧಿಕಾರಿಗಳ ನಿದ್ದೆ ಕೆಡಿಸಿದೆ. ದುಬಾರೆಯ ಸಾಕಾನೆ ಶಿಬಿರದ ಮೇಲ್ವಿಚಾರಕ ಉಪವಲಯ ಅರಣ್ಯಾಧಿಕಾರಿ ಹಗಲು, ರಾತ್ರಿ ಕುಶನ ಶೋಧದಲ್ಲಿ ತೊಡಗಿದ್ದಾರೆ.

  • ಹೆತ್ತವಳನ್ನು ಆಸ್ಪತ್ರೆಯಲ್ಲೇ ಬಿಟ್ಟೋದ ಮಗಳು- 15 ದಿನಗಳಿಂದ ಸಿಬ್ಬಂದಿಯೆದುರೇ ನರಳಾಟ!

    ಹೆತ್ತವಳನ್ನು ಆಸ್ಪತ್ರೆಯಲ್ಲೇ ಬಿಟ್ಟೋದ ಮಗಳು- 15 ದಿನಗಳಿಂದ ಸಿಬ್ಬಂದಿಯೆದುರೇ ನರಳಾಟ!

    ಚಿತ್ರದುರ್ಗ: ಕಾಯಿಲೆಗೆ ಚಿಕಿತ್ಸೆ ಕೊಡಿಸುವುದಾಗಿ ಸುಳ್ಳು ಹೇಳಿ ಹೆತ್ತ ತಾಯಿಯನ್ನು ಪಾಪಿ ಮಗಳು-ಅಳಿಯ ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದು, ವೃದ್ಧ ತಾಯಿ ಅನ್ನ, ನೀರಿಲ್ಲದೆ ಬೀದಿಗೆ ಬಿದ್ದಿರುವ ಮನಕಲಕುವ ಘಟನೆ ಕೋಟೆನಾಡಿನಲ್ಲಿ ನಡೆದಿದೆ.

    ಕಾಯಿಲೆಯಿಂದ ಬಳಲುತ್ತಿರುವ ವೃದ್ಧೆ ಪಾಪಮ್ಮ ಅವರನ್ನು ಮಗಳು ಹಾಗೂ ಅಳಿಯ ಆಸ್ಪತ್ರೆಯಲ್ಲೇ ಬಿಟ್ಟು ಕೈತೊಳೆದುಕೊಂಡಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೋರೊಪ್ಪನಹಟ್ಟಿ ಗ್ರಾಮದ ನಿವಾಸಿಯಾಗಿರುವ ಪಾಪಮ್ಮ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ನೆಪವನ್ನು ಇಟ್ಟುಕೊಂಡು ನಿಮ್ಮ ಕಾಯಿಲೆಗೆ ಚಿಕಿತ್ಸೆ ಕೊಡಿಸುತ್ತೇವೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಸುಳ್ಳು ಹೇಳಿ ಪಾಪಮ್ಮ ಅವರನ್ನು ಮಗಳು ಮತ್ತು ಅಳಿಯ ನಂಬಿಸಿದ್ದರು. ಇದನ್ನೂ ಓದಿ:ಚಳ್ಳಕೆರೆ ತಾಲೂಕಾಸ್ಪತ್ರೆಯಲ್ಲಿ ಡಾ. ಕಸ ಗುಡಿಸಮ್ಮ – ಡಿ ಗ್ರೂಪ್ ಉದ್ಯೋಗಿ ನೀಡ್ತಾರೆ ಮೆಡಿಸಿನ್

    ಮಗಳು, ಅಳಿಯನನ್ನು ನಂಬಿ ಪಾಪಮ್ಮ ಅವರ ಜೊತೆಗೆ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಆದರೆ ಮಗಳು ಮತ್ತು ಅಳಿಯ ತಾಯಿಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಕೂಡ ವೃದ್ಧೆಗೆ ಚಿಕಿತ್ಸೆ ಕೊಡದೆ ನಿರ್ಲಕ್ಷ್ಯಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

    ಅಷ್ಟೇ ಅಲ್ಲದೆ ಆಸ್ಪತ್ರೆ ಆವರಣದಲ್ಲಿಯೇ ಪಾಪಮ್ಮ ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಮಲಗಿದ್ದರೂ ಆಸ್ಪತ್ರೆ ಸಿಬ್ಬಂದಿ ಕ್ಯಾರೆ ಎಂದಿಲ್ಲ. ಇತ್ತ ಮಗಳು ಮತ್ತು ಅಳಿಯ ಕೂಡ ಪಾಪಮ್ಮ ಅವರನ್ನು ಕರೆದುಕೊಂಡು ಹೋಗಲು ಬರುತ್ತಿಲ್ಲ. ಅತ್ತ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ವೃದ್ಧ ತಾಯಿಗೆ ಯಾರ ಆಸರೆಯೂ ಇಲ್ಲದಂತಾಗಿದ್ದು, ಆಸ್ಪತ್ರೆ ಆವರಣದಲ್ಲಿಯೇ ಆಹಾರ, ನೀರಿಲ್ಲದೆ ನಿತ್ರಾಣ ಸ್ಥಿತಿಗೆ ತಲುಪಿದ್ದಾರೆ. ಇದನ್ನು ಗಮಿನಿಸಿದ ಸಾರ್ವಜನಿಕರು ವೃದ್ಧೆಯ ಮಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.