Tag: stab

  • ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಮೈಸೂರು: ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದನೆಂದು ಆರೋಪಿಸಿ ಎಸ್‍ಡಿಪಿಐ ಕಾರ್ಯಕರ್ತನ ಮೇಲೆ ಕೈ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಇಂದು ನಡೆದಿದೆ.

    ಮೈಸೂರಿನ ಶಾಂತಿನಗರದ ರಮ್ಜಾ ಮಸೀದಿ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯ ಆರೋಪ ಮಾಡಲಾಗುತ್ತಿದೆ. ಘಟನೆಯಲ್ಲಿ ಓರ್ವ ಎಸ್‍ಡಿಪಿಐ ಕಾರ್ಯಕರ್ತನ ಮುಖ ರಕ್ತಸಿಕ್ತವಾಗಿದ್ದು, ಕೂಡಲೇ ಗಾಯಾಳುವನ್ನು ನಗರದ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನೂತನ ಪಾಲಿಕೆ ಸದಸ್ಯ ಅಯಾಜ್ ಪಾಷಾ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಪಾಗಲ್ ಪ್ರೇಮಿಯಿಂದ ಚೂರಿ ಇರಿತ!

    ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಪಾಗಲ್ ಪ್ರೇಮಿಯಿಂದ ಚೂರಿ ಇರಿತ!

    ಬೆಂಗಳೂರು: ಪತಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಪಾಗಲ್ ಪ್ರೇಮಿಯೊಬ್ಬ ಯದ್ವಾತದ್ವಾ ಚಾಕುವಿನಿಂದ ಇರಿದ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಗ್ರಾಮದಲ್ಲಿ ಘಟನೆ ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಡೆದಿದ್ದು, ಪಾಗಲ್ ಪ್ರೇಮಿಯನ್ನು ಕಂಬಾಳು ಮೂಲದ ಶಶಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?
    29 ವರ್ಷದ ರತ್ನ ಇಂದು ತನ್ನ ಗಂಡನ ಜೊತೆ ಶಿವಗಂಗೆ ದೇವಾಲಯಕ್ಕೆ ಬಂದಿದ್ದರು. ದೇವಸ್ಥಾನದೊಳಗೆ ಪೂಜೆ ನಡೆಯುತ್ತಿತ್ತು. ಬಂದಿರುವ ಭಕ್ತರೆಲ್ಲರು ಪೂಜೆಯಲ್ಲಿ ಮಗ್ನರಾಗಿದ್ದರು. ಈ ವೇಳೆ ರತ್ನ ಪತಿ ದೇವರಿಗೆ ಮುಡಿ ಕೊಡೋದಕ್ಕೆ ಒಳಗೆ ಹೋಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿ ಶಶಿ ಏಕಾಏಕಿ ಬಂದು ಚಾಕುವಿನಿಂದ 5, 6 ಬಾರಿ ರತ್ನರಿಗೆ ಇರಿದಿದ್ದಾನೆ. ಪರಿಣಾಮ ರತ್ನರಿಗೆ ಗಂಭೀರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಅಂತ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಚಾಕುವಿನಿಂದ ಇರಿದಿದ್ದು ಯಾಕೆ?
    ಆರೋಪಿ ಶಶಿ ಕಳೆದ ಮೂರು ವರ್ಷದ ಹಿಂದೆ ರತ್ನರನ್ನು ಪ್ರೀತಿಸುತ್ತಿದ್ದನು. ಆದ್ರೆ ಈತನ ಪ್ರೀತಿಯನ್ನು ರತ್ನ ನಿರಾಕರಿಸಿದ್ದರು. ಅಲ್ಲದೇ ಅವರಿಗೆ ಬೇರೆ ಮದುವೆ ಕೂಡ ಆಗಿತ್ತು. ಇದರಿಂದ ಸಿಟ್ಟುಗೊಂಡಿದ್ದ ಶಶಿ, ರತ್ನ ಅವರು ದೇವಸ್ಥಾನಕ್ಕೆ ಬಂದಿರುವುದನ್ನು ಗಮನಿಸಿ ಹೊಸ ಚಾಕುವಿನೊಂದಿಗೆ ಬಂದು  ಇರಿದಿದ್ದಾನೆ.

    ಘಟನೆಯ ಬಳಿಕ ಗಂಭೀರ ಸ್ಥೀತಿಯಲ್ಲಿದ್ದ ಮಹಿಳೆಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಪ್ ಡೇಟ್:
    ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಪೇದೆಯನ್ನು ಅಪಹರಿಸಿ ಗುಂಡಿಟ್ಟು ಕೊಂದ ಉಗ್ರರು!

    ಪೊಲೀಸ್ ಪೇದೆಯನ್ನು ಅಪಹರಿಸಿ ಗುಂಡಿಟ್ಟು ಕೊಂದ ಉಗ್ರರು!

    ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಅಪಹರಿಸಲ್ಪಟ್ಟಿದ್ದ ಪೊಲೀಸ್ ಪೇದೆಯ ಮೃತದೇಹ ಪತ್ತೆಯಾಗಿದ್ದು, ಉಗ್ರರು ಗುಂಡಿಟ್ಟು ಪೊಲೀಸ್ ಪೇದೆಯನ್ನು ಕೊಲೆ ಮಾಡಿ ವಿಕೃತಿ ತೋರಿದ್ದಾರೆ.

    ಸಲೀಮ್ ಶಾಹ್ ಮೃತ ಪೊಲೀಸ್ ಪೇದೆ. ರಜೆಯಲ್ಲಿದ್ದ ಪೊಲೀಸ್ ಪೇದೆಯನ್ನು ಶುಕ್ರವಾರ ರಾತ್ರಿ ಅಪಹರಣ ಮಾಡಲಾಗಿತ್ತು. ಶನಿವಾರ ಸಂಜೆ ವೇಳೆಗೆ ಮೃತ ದೇಹ ಪತ್ತೆಯಾಗಿದೆ.

    ಪೊಲೀಸ್ ಪೇದೆ ಅಪಹರಣಗೊಂಡ ಮಾಹಿತಿ ತಿಳಿದ ತಕ್ಷಣ ಪೇದೆಯ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಈ ವೇಳೆಗೆ ಉಗ್ರರು ಪೇದೆಯನ್ನು ಕೊಲೆ ಮಾಡಿದ್ದಾರೆ. ಮೃತ ದೇಹದ ಮೇಲೆ ಕೆಲ ಗಾಯದ ಗುರುತು ಪತ್ತೆಯಾಗಿದ್ದು, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.

    ಶಾಹ 2016 ರಲ್ಲಿ ತರಬೇತಿ ಬಳಿಕ ಪೊಲೀಸ್ ಕರ್ತವ್ಯಕ್ಕೆ ಸೇರಿದ್ದು, ಪುಲ್ವಾಮ ಡಿಪಿಎಲ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ವೃದ್ಧ ಪೋಷಕರಿದ್ದು, ಇಬ್ಬರು ಸಹೋದದರು ಹಾಗೂ ಸಹೋದರಿ ಹೊಂದಿದ್ದಾರೆ. ಈ ಕುಟುಂಬಲ್ಲಿ ಶಾಹ ಒಬ್ಬರೇ ದುಡಿದು ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು.

    ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಮಾಡಿದ ದುಷ್ಕರ್ಮಿಗಳಿಗಾಗಿ ತನಿಖೆ ನಡೆಸಿದ್ದಾರೆ. ನಿಷೇಧಿತ ಭಯೋತ್ಪಾದನಾ ಸಂಘಟನೆ ಕೃತ್ಯ ನಡೆಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಮೃತ ಪೇದೆಯ ಸಾವಿಕೆ ನ್ಯಾಯ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಘಟನೆಯನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಖಂಡಿಸಿ ಟ್ವೀಟ್ ಮಾಡಿದ್ದು, ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಮೃತ ಪೇದೆಯ ಕುಟುಂಬಕ್ಕೆ ನೋವು ಬರಿಸುವ ಶಕ್ತಿ ದೇವರು ನೀಡಲಿ ಎಂದು ಬರೆದುಕೊಂಡಿದ್ದಾರೆ.

  • ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

    ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

    ನೊಯ್ಡಾ: 18 ವರ್ಷದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಮಾಲ್ ನಲ್ಲೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ಶುಕ್ರವಾರ ನಡೆದಿದೆ.

    ಆರೋಪಿಯನ್ನು ಕುಲ್ ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯನ್ನು ಕೊಲೆಗೈದ ಬಳಿಕ ಈತನೂ ಚೂರಿ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿ ಚಿಂತಾನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಕುಲ್ ದೀಪ್ ನಗರದಲ್ಲಿರೋ ಮಾಲ್ ಗೆ ಬಂದಿದ್ದಾರೆ. ಯವತಿಯೂ ಅದೇ ಮಾಲ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ಬಳಿಕ ಯುವತಿ ಪ್ರಥಮ ಮಹಡಿಯಲ್ಲಿರೋ ಶೌಚಾಲಯದ ಕಡೆ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಎಳೆದಾಡಿ ಹಲವು ಬಾರಿ ಆಕೆಗೆ ಚೂರಿಯಿಂದ ಇರಿದಿದ್ದಾನೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಯುವತಿಯನ್ನು ಕೊಲೆಗೈದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪೊಲೀಸರನ್ನು ನೋಡುತ್ತಿದ್ದಂತೆಯೇ ತನಗೆ ತಾನೇ ಚೂರಿಯಿಂದ ಇರಿದುಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಕಸ್ನಾ ಪೊಲೀಸ್ ಠಾಣೆಯ ಶಾಲೆಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

    ಕಳೆದ ಕೆಲ ತಿಂಗಳುಗಳಿಂದ ಆರೋಪಿ ಆಕೆಯನ್ನು ಹಿಂಬಾಲಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ಓಡಾಡಲು ಆಟೋ ರಿಕ್ಷಾದ ವ್ಯವಸ್ಥೆ ಮಾಡಿದ್ದರು. ಈಕೆ ತನ್ನ ಕುಟುಂಬದೊಂದಿಗೆ ದಾದ್ರಿ ಎಂಬಲ್ಲಿ ನೆಲೆಸಿದ್ದರು.

    ದಾದ್ರಿಯ ಗೌತಮ್ ಪುರಿ ನಿವಾಸಿಯಾಗಿರೋ ಕುಲ್ ದೀಪ್ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.

  • ಶಾಲೆಯ ವಾಶ್ ರೂಂನಲ್ಲೇ 9ರ ಬಾಲಕನಿಗೆ ಚೂರಿ ಇರಿದ್ರು!

    ಶಾಲೆಯ ವಾಶ್ ರೂಂನಲ್ಲೇ 9ರ ಬಾಲಕನಿಗೆ ಚೂರಿ ಇರಿದ್ರು!

    ಗಾಂಧಿನಗರ: ಕಳೆದ ವರ್ಷ ದೆಹಲಿ ಸಮೀಪದ ಗುರ್ ಗಾಂವ್ ಶಾಲೆಯೊಂದರಲ್ಲಿ ನಡೆದ ಬಾಲಕನ ಕೊಲೆ ಪ್ರಕರಣದಂತೆ ಇದೀಗ ಗುಜರಾತ್ ನ ವಡೋದರಾದಲ್ಲಿ ಅಂತಹದ್ದೆ ಘಟನೆ ನಡೆದಿದೆ.

    ವಡೋದರಾ ಶಾಲೆಯ ಶೌಚಾಲಯದಲ್ಲಿ 14 ವರ್ಷದ ಬಾಲಕ ಕೊಲೆಯಾಗಿ ಪತ್ತೆಯಾಗಿದ್ದಾನೆ. ಈತ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದನು. ಇದನ್ನೂ ಓದಿ: ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

    ಬಾಲಕನ ಹೊಟ್ಟೆಗೆ ಇರಿದು ಕೊಲೆಗೈದ ರೀತಿಯಲ್ಲಿ ಪತ್ತೆಯಾಗಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಇದನ್ನೂ ಓದಿ: ಪ್ರದ್ಯುಮನ್ ಕೊಲೆ ಪ್ರಕರಣ- ವಿದ್ಯಾರ್ಥಿ ಮೇಲೆ ತಿಂಗಳ ಹಿಂದೆಯೇ ಸಿಬಿಐಗೆ ಅನುಮಾನವಿತ್ತು

    ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಗುರ್‍ಗಾಂವ್ ನ ಶಾಲೆಯ ಶೌಚಾಲಯದಲ್ಲಿ 7 ವರ್ಷದ ಬಾಲಕನನ್ನು ಕತ್ತು ಸೀಳೀ ಕೊಲೆಗೈಯಲಾಗಿತ್ತು. ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಅಲ್ಲದೇ ಘಟನೆ ಕುರಿತಂತೆ ಅನೇಕ ಪ್ರತಿಭಟನೆಗಳು ಕೂಡ ನಡೆದಿತ್ತು. ಇದನ್ನೂ ಓದಿ: ಬಾಲಕ ಪ್ರದ್ಯುಮನ್ ಕೊಲೆ ಆರೋಪಿಯನ್ನ ಚಾಕು ಅಂಗಡಿಗೆ ಕರೆದುಕೊಂಡು ಹೋದ ಸಿಬಿಐ

  • ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಮಹಿಳೆಗೆ ಚಾಕು ಇರಿತ!

    ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಮಹಿಳೆಗೆ ಚಾಕು ಇರಿತ!

    ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಗೆ ಚಾಕು ಇರಿದ ಘಟನೆಯೊಂದು ನಗರದ ಕೆಆರ್ ಪುರಂನ ಪೈ ಲೇಔಟ್ ನಲ್ಲಿ ನಡೆದಿದೆ.

    ಲುಮೀನ (35) ಹಲ್ಲೆಗೊಳಗಾದ ಮಹಿಳೆ. ಮಂಗಳವಾರ ತಡರಾತ್ರಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ, ಏಕಾಏಕಿ ಮಹಿಳೆಯಿದ್ದ ಮನೆಗೆ ನುಗ್ಗಿ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ.

    ಘಟನೆಯಿಂದ ಗಂಭೀರ ಗಾಯಗೊಂಡ ಲುಮೀನ ಅವರನ್ನು ಕೂಡಲೇ ಸ್ಥಳೀಯರು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

    ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಹೊಟ್ಟೆಗೆ ಚಾಕು ಇರಿತ- ಚಿಕಿತ್ಸೆ ಫಲಕಾರಿಯಾಗದೇ ಯುವಕ ದುರ್ಮರಣ

    ಹೊಟ್ಟೆಗೆ ಚಾಕು ಇರಿತ- ಚಿಕಿತ್ಸೆ ಫಲಕಾರಿಯಾಗದೇ ಯುವಕ ದುರ್ಮರಣ

    ಕೋಲಾರ: ಚಾಕು ಇರಿತಕ್ಕೆ ಒಳಗಾದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕೋಲಾರದಲ್ಲಿ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು 28 ವರ್ಷದ ಭರತ್ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಶಿವು, ಶಿವರಾಜ್ ಭರತ್ ಗೆ ಚೂರಿ ಇರಿದಿದ್ದರು.

    ಕೋಲಾರ ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿ ಮೇ 21ರಂದು ಕ್ಷುಲ್ಲಕ ಕಾರಣಕ್ಕೆ ಶಿವು ಹಾಗೂ ಶಿವರಾಜ್ ಸೇರಿ ಭರತ್ ಗೆ ಚೂರಿ ಇರಿದಿದ್ದರು. ಹೊಟ್ಟೆ ಭಾಗಕ್ಕೆ ಚಾಕು ಇರಿದ ಪರಿಣಾಮ ಭರತ್ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಭರತ್ ಮೃತಪಟ್ಟಿದ್ದಾರೆ.

    ಭರತ್ ಫ್ಲಂಬಿಂಗ್ ಕೆಲಸ ಮಾಡುತ್ತಿದ್ದು, ರಾಜಶೇಖರ, ಶಿವು, ಶಿವರಾಜ್ ಜೊತೆ ಭರತ್ ನಡುವೆ ಮೊದಲಿನಿಂದಲೂ ಆಗಾಗ ಸಣ್ಣಪುಟ್ಟ ಗಲಾಟೆಗಳು ನಡೆಯುತಿತ್ತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮೂವರು ಅರೋಪಿಗಳನ್ನ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

  • ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚಾಕು ಇರಿತ!

    ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚಾಕು ಇರಿತ!

    ಹಾವೇರಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಚೂರಿ ಇರಿತಕ್ಕೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಅಮೀರ್ ವೀರಾಪುರ(25) ಮೃತ ಯುವಕ. ಮಂಗಳವಾರ ರಾತ್ರಿ ಚೂರಿ ಇರಿತಕ್ಕೆ ಒಳಗಾಗಿದ್ದ ಅಮೀರ್ ಚಿಕಿತ್ಸೆ ಫಲಿಸದೇ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಅಮೀರ್ ಗೆ ಚೂರಿಯಿಂದ ಇರಿದಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಅಮೀರ್ ವೀರಾಪುರ

    ವಿನಾಯಕ ನುಗ್ಗಿಹಳ್ಳಿ(21) ಬಂಧಿತ ಆರೋಪಿ. ವಿನಾಯಕನಿಗೆ ಅಮೀರ್ ಮೇಲೆ ಹಳೆ ವೈಷಮ್ಯವಿತ್ತು. ಹೀಗಾಗಿ ನೀರು ಕೇಳುವ ನೆಪದಲ್ಲಿ ಅಮೀರ್ ಮನೆಗೆ ಬಂದಿದ್ದ ವಿನಾಯಕ ಈ ಕೃತ್ಯವನ್ನ ಎಸಗಿದ್ದಾನೆ.

    ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿನಾಯಕ ನುಗ್ಗಿಹಳ್ಳಿ
  • ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋದ ಪತಿ!

    ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋದ ಪತಿ!

    ಬೆಂಗಳೂರು: ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಬಾಗಿಲು ಹಾಕಿಕೊಂಡು ಹೋದ ಘಟನೆ ಬೆಂಗಳೂರಿನ ಚೋಳೂರುಪಾಳ್ಯದ ಮಂಜುನಾಥನಗರದಲ್ಲಿ ನಡೆದಿದೆ.

    ಮಂಜುನಾಥ್ ಚಾಕು ಇರಿದ ಆರೋಪಿ. ಸೋಮವಾರ ತಡರಾತ್ರಿ ಮಂಜುನಾಥ್ ತನ್ನ ಪತ್ನಿ ವೇದಕುಮಾರಿಗೆ ಚಾಕುವಿನಿಂದ ಇರಿದಿದ್ದನು. ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ಮಂಜುನಾಥ್ ಪ್ರತಿದಿನ ಕುಡಿದು ಮನೆಗೆ ಹೋಗುತ್ತಿದ್ದನು.

    ಮಂಜುನಾಥ್ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು ಚಾಕುವಿನಿಂದ ಇರಿದಿದ್ದಾನೆ. ವೇದಕುಮಾರಿಯ ನರಳಾಟ ಕೇಳಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸದ್ಯ ವೇದಕುಮಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಈ ಪ್ರಕರಣ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೂಕ್ತ ಭದ್ರತೆ ಇದ್ದಿದ್ರೆ, ಲೋಕಾಯುಕ್ತರ ಮೇಲೆ ದಾಳಿ ಆಗ್ತಿರಲಿಲ್ಲ: ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ ಅಡಿ

    ಸೂಕ್ತ ಭದ್ರತೆ ಇದ್ದಿದ್ರೆ, ಲೋಕಾಯುಕ್ತರ ಮೇಲೆ ದಾಳಿ ಆಗ್ತಿರಲಿಲ್ಲ: ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ ಅಡಿ

    ಬಾಗಲಕೋಟೆ: ಸೂಕ್ತ ಭದ್ರತೆ ಇದ್ದಿದ್ದರೆ ಲೋಕಾಯುಕ್ತರ ಮೇಲೆ ದಾಳಿ ಆಗ್ತಿರಲಿಲ್ಲ, ಲೋಕಾಯುಕ್ತರಿಗೆ ಈ ಗತಿಯಾದರೆ ಇನ್ನೂ ಸಾಮಾನ್ಯ ಜನರ ಸ್ಥಿತಿ ಏನಾಗಬೇಡ ಎಂದು ನಿವೃತ್ತ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತರಿಗೆ ಸೂಕ್ತ ಭದ್ರತೆಯನ್ನ ಒದಗಿಸಬೇಕು. ಭದ್ರತೆಗೆ ಕೇವಲ ಪೊಲೀಸರನ್ನ ನಿಯೋಜನೆ ಮಾಡಿದ್ರೆ ಸಾಲದು, ಪರಿಣಿತ ಪೊಲೀಸರನ್ನ ನಿಯೋಜಿಸಬೇಕು. ಅಲ್ಲಿದ್ದ ಪೊಲೀಸರಿಗೆ ಲಾಠಿ, ಕೋಲು ಹಿಡಿಯೋದನ್ನ ಬಿಟ್ಟರೆ ಬೇರೆ ಯಾವ ಅನುಭವ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲೋಕಾಯುಕ್ತರಿಗೆ ಎಲ್ಲೆಲ್ಲಿ ಇರಿಯಲಾಗಿದೆ? ಈಗ ಹೇಗಿದ್ದಾರೆ: ಮಲ್ಯ ಆಸ್ಪತ್ರೆ ವೈದ್ಯರು ಹೇಳ್ತಾರೆ ಓದಿ

    ಹೈಕೋರ್ಟ್, ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳಿಗೆ ಈಗ ಸೆಕ್ಯೂರಿಟಿ ನೀಡಬೇಕಿದೆ. ಲೋಕಾಯುಕ್ತ ಸಂಸ್ಥೆಯ ಭದ್ರತೆಯನ್ನ ಕಡೆಗಣಿಸಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ. ಲೋಕಾಯುಕ್ತ ಸಂಸ್ಥೆ ಇರುವುದು ಜನರಿಗಾಗಿ, ಇಲ್ಲಿ ಎಲ್ಲಾ ರೀತಿಯ ಜನ್ರು ಲೋಕಾಯುಕ್ತರ ಬಳಿ ಬರುತ್ತಿರುತ್ತಾರೆ. ಕೆಲವೊಮ್ಮೆ ಕೆಟ್ಟ ಜನರೂ ಬರ್ತಾರೆ, ಅಂತಹ ಜನರು ಬಂದಾಗ ಸೆಕ್ಯೂರಿಟಿ ಅವಶ್ಯಕವಾಗಿದೆ. ಇಂತಹ ಅನಾಹುತಗಳನ್ನು ತಪ್ಪಿಸಲು ಜನರನ್ನು ಲೋಕಾಯುಕ್ತರಿಂದ ದೂರ ಇಟ್ಟರೆ ಅದರಿಂದ ದುಷ್ಪರಿಣಾಮಗಳೇ ಹೆಚ್ಚಾಗುತ್ತದೆ. ಆದ್ದರಿಂದ ಜನರಿಗೆ ಲೋಕಾಯುಕ್ತರನ್ನ ಭೇಟಿ ಮಾಡಲು ಅವಕಾಶವನ್ನ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಇದು ಸರ್ಕಾರ ಏನ್ರೀ? ಮೊದಲು ಈ ಸರ್ಕಾರ ತೊಲಗಬೇಕು: ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ

    ಹಲ್ಲೆಗೆ ಒಳಗಾಗಿರುವ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಸದ್ಯ ಮಲ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ರಾಜ್ಯ ಸರ್ಕಾರವೂ ಲೋಕಾಯುಕ್ತ ಕಚೇರಿಗೆ ಬಿಗಿ ಭದ್ರತೆಯನ್ನ ಹೆಚ್ಚಿಸಲು ಸುತ್ತೋಲೆಯನ್ನ ಹೊರಡಿಸಿದೆ.