Tag: Srujan Lokesh

  • ಸಚಿವ ವಿ.ಸೋಮಣ್ಣ ಪುತ್ರ ಮತ್ತು ನಟ ಸೃಜನ್ ಲೋಕೇಶ್ ಮಧ್ಯ ಡಿಶುಂ ಡಿಶುಂ?

    ಸಚಿವ ವಿ.ಸೋಮಣ್ಣ ಪುತ್ರ ಮತ್ತು ನಟ ಸೃಜನ್ ಲೋಕೇಶ್ ಮಧ್ಯ ಡಿಶುಂ ಡಿಶುಂ?

    ಜಾ ಟಾಕೀಸ್ ಮೂಲಕ ಮನೆಮಾತಾಗಿರುವ ಸೃಜನ್ ಲೋಕೇಶ್ ಮತ್ತು ಸಚಿವ ವಿ.ಸೋಮಣ್ಣ (V. Somanna) ಪುತ್ರ ಅರುಣ್ ಸೋಮಣ್ಣ ನಡುವೆ ಬೆಂಗಳೂರಿನ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್ ನಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ತಡ ರಾತ್ರಿ ಈ ಘಟನೆ ನಡೆದಿದ್ದು, ಪಾರ್ಟಿ ಮಾಡುವಾಗ ಜೋರಾಗಿ ಗಲಾಟೆ ಮಾಡಿದರು ಎನ್ನುವ ಕಾರಣಕ್ಕಾಗಿ  ಹೊಡೆದಾಟವಾಗಿದೆಯಂತೆ.

    ಬ್ಯಾಡ್ಮಿಂಟನ್ (Badminton) ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ (Srujan Lokesh) ಟೀಮ್ ಪ್ರಾಕ್ಟಿಸ್ ಮಾಡುತ್ತಿದೆ. ಪ್ರಾಕ್ಟಿಸ್ ಮುಗಿಸಿಕೊಂಡು ರಾತ್ರಿ ಕಿಂಗ್ಸ್ ಕ್ಲಬ್ ನಲ್ಲಿ ಪಾರ್ಟಿಗಾಗಿ ಜಮಾವಣೆಗೊಂಡಿದೆ. ಈ ಟೀಮ್ ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರಂತೆ. ಇದೇ ವೇಳೆಯೇ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ (Arunna Somanna)  ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡುವ ಮಟ್ಟಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಮಲಯಾಳಂಗೆ ಹಾರಿದ ರಾಜ್ ಬಿ. ಶೆಟ್ಟಿ : ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಾಯಕಿ

    ಈ ಕುರಿತು ಟೂರ್ನಮೆಂಟ್ ಆಟಗಾರ ಮತ್ತು ಅಂದು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿಕಾಸ್ ಅನ್ನುವವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಾತ್ರಿ ಪ್ರಾಕ್ಟಿಸ್ ಮತ್ತು ಮೀಟಿಂಗ್ ಇತ್ತು. ಆದರೆ, ಗಲಾಟೆ ಆಗುವಂಥದ್ದು ಏನೂ ಆಗಿಲ್ಲ. ಅವತ್ತು ಅರುಣ್ ಸೋಮಣ್ಣ ಅವರು ಅಲ್ಲಿ ಇರಲೇ ಇಲ್ಲ. ಸೃಜನ್ ಲೋಕೇಶ್ ಅವರು ಬೇಗನೆ ಹೊರಟರು. ನಾವೂ ನಂತರ ಹೊರಟೆವು. ಗಲಾಟೆ ಆಗಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎನ್ನುತ್ತಾರೆ.

    ಈ ಕುರಿತು ಸಚಿವ ಸೋಮಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಸುಮ್ನೆ ಏನೇನೋ ಹೇಳೋಕ್ ಹೋಗ್ಬೇಡಿ, ಬಿಟ್ಬಿಡಿ. ಗೊತ್ತಿಲ್ಲದೆ ಇರೋದಕ್ಕೆಲ್ಲ ಹಿಟ್ ಅಂಡ್ ರನ್ ಕೆಲಸ ಬೇಡ. ನಾನು ಒಬ್ಬ ರಾಜಕಾರಣಿ, ಯಾರಾದರೂ ತಪ್ಪು ಮಾಡಿದ್ರೆ ತಪ್ಪೆ.ಆ ತರಹ ನನಗೆ ಏನೂ ಮಾಹಿತಿ ಇಲ್ಲ. ನನ್ನ ಮಗ ನನ್ನ ಜೊತೆ ಇಲ್ಲ. ಸುಮಾರು ಹತ್ತು ಹನ್ನೆರಡು ವರ್ಷದಿಂದ ಅವರು ಬೇರೆ ಮನೆಯಲ್ಲಿ ಇದ್ದಾರೆ. ಸುಮ್ನೆ ಏನೇನೋ ಮಾತಾಡೋದ್ರಲ್ಲಿ ಅರ್ಥ ಇಲ್ಲ. ಸತ್ಯಾಸತ್ಯತೆ ಪರಾಮರ್ಶೆ ಮಾಡೋದು ಒಳ್ಳೆದು ಇದರ ಬಗ್ಗೆ ನನಗೆ ಕಿಂಚಿತ್ತು ಮಾಹಿತಿ ಇಲ್ಲ’ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಕಿರುತೆರೆಯ ಜನಪ್ರಿಯ ಶೋ `ಗಿಚ್ಚಿ ಗಿಲಿಗಿಲಿ’ (Gicchi Giligili) ಶೋಗೆ ತೆರೆಬಿದ್ದಿದೆ. ಕಾಮಿಡಿ ಶೋನ ವಿನ್ನರ್ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿತ್ತು. ಇದೀಗ ಈ ರಿಯಾಲಿಟಿ ಶೋನ ವಿನ್ನರ್ ನಾನ್ ಆಕ್ಟರ್ ವಿಭಾಗದಲ್ಲಿ ವನ್ಷಿಕಾ(Vamshika) ಗೆದ್ದಿದ್ದಾರೆ. ರನ್ನರ್ ಅಪ್ ಆಗಿ ನಿವೇದಿತಾ ಗೌಡ(Niveditha Gowda) ಎರಡನೇ ಸ್ಥಾನ ಸಿಕ್ಕಿದೆ.

    ಅಭಿಮಾನಿಗಳ ಅಚ್ಚು ಮೆಚ್ಚಿನ ಕಾಮಿಡಿ ಶೋ ಆಗಿ ʻಗಿಚ್ಚಿ ಗಿಲಿಗಿಲಿʼ ಮನೆ ಮಾತಾಗಿತ್ತು. ಕಳೆದ ಸೆಪ್ಟೆಂಬರ್ 17 ಮತ್ತು 18ರಂದು ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಈ ರಿಯಾಲಿಟಿ ಶೋನಲ್ಲಿ ಎರಡು ಆಕ್ಟರ್ ಮತ್ತು ಎರಡು ನಾನ್ ಆಕ್ಟರ್ ವಿಭಾಗದಲ್ಲಿ ವಿನ್ನರ್ ಮತ್ತು ರನ್ನರ್ ಅಪ್‌ ಅನೌನ್ಸ್ ಮಾಡಲಾಯಿತು. ಸೃಜನ್ ಲೋಕೇಶ್ ಮತ್ತು ನಟಿ ಶ್ರುತಿ, ಮಾಲಾಶ್ರೀ ಅವರ ನೇತೃತ್ವದಲ್ಲಿ ಶೋ ಅದ್ಬುತವಾಗಿ ಮೋಡಿ ಬಂದಿದೆ.

    `ಗಿಚ್ಚಿ ಗಿಲಿಗಿಲಿ’ ಸೀಸನ್ ವಿನ್ನರ್, ನಾನ್ ಆಕ್ಟರ್ ವಿಭಾಗದಲ್ಲಿ ವನ್ಷಿಕಾ ಅಂಜನಿ ಕಶ್ಯಪಾಗೆ ಗೆಲುವಿನ ಕಿರೀಟ ಒಲಿದು ಬಂದಿದೆ. ಆಕ್ಟರ್ ವಿಭಾಗದಲ್ಲಿ ಶಿವುಗೆ ವಿನ್ನರ್ ಪಟ್ಟ ದಕ್ಕಿದೆ. ಇನ್ನೂ ಈ ಸೀಸನ್‌ನ ರನ್ನರ್ ಅಪ್, ನಾನ್ ಆಕ್ಟರ್ ವಿಭಾಗದಲ್ಲಿ ನಿವೇದಿತಾ ಗೌಡ ಗುರುತಿಸಿಕೊಂಡ್ರೆ, ಆಕ್ಟರ್ ವಿಭಾಗದಲ್ಲಿ ವಿನೋದ್ ಎರಡನೇ ಸ್ಥಾನ ಒಲಿದಿದೆ. ಇದನ್ನೂ ಓದಿ: ಪತ್ನಿ ಮಹಾಲಕ್ಷ್ಮಿಗಾಗಿ ‘ಡೆಲಿವರಿ ಬಾಯ್’ ಆದರಂತೆ ರವೀಂದರ್: ಮನದಾಳ ಬಿಚ್ಚಿಟ್ಟ ಮನ್ಮಥ

    ಇನ್ನೂ ಮೊದಲ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಜೊತೆ 5 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಎರಡನೇ ಸ್ಥಾನ ಪಡೆದವರಿಗೆ ರನ್ನರ್ ಅಪ್ ಟ್ರೋಫಿ ಜೊತೆ 3 ಲಕ್ಷ ರೂಪಾಯಿ ಬಹುಮಾನ ಕೊಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • Exclusive- ಅಮ್ಮ ಮತ್ತು ಮಗನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್

    Exclusive- ಅಮ್ಮ ಮತ್ತು ಮಗನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್

    ನ್ನಡದ ಟಾಕಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ಸೃಜನ್ ಲೋಕೇಶ್ (Srujan Lokesh) ಮೊನ್ನೆಯಷ್ಟೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ನಟನೆ ಮಾತ್ರವಲ್ಲ, ಇನ್ಮುಂದೆ ನಿರ್ದೇಶನವನ್ನೂ ಮಾಡುತ್ತಿದ್ದೇನೆ ಎಂದು ಘೋಷಿಸಿದ್ದರು. ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ಕೊಡುತ್ತಿರುವುದಾಗಿ ತಿಳಿಸಿದ್ದರು. ಈ ಸಿನಿಮಾದ ಬಗೆಗಿನ ಹೊಸ ಅಪ್ ಡೇಟ್ ಅಂದರೆ, ಈ ಸಿನಿಮಾದಲ್ಲಿ ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ ಜೊತೆಗೆ ಸೃಜನ್ ಪುತ್ರ (Son) ಕೂಡ ನಟಿಸುತ್ತಿದ್ದಾರೆ.

    ಸೃಜನ್ ನಿರ್ದೇಶನದ (Direction) ಜೊತೆಗೆ ನಾಯಕನಾಗಿ ನಟಿಸುತ್ತಿದ್ದರೆ, ಗಿರಿಜಾ ಲೋಕೇಶ್ (Girija Lokesh) ಮತ್ತು ಸೃಜನ್ ಪುತ್ರ ಯಾವೆಲ್ಲ ಪಾತ್ರ ಮಾಡಲಿದ್ದಾರೆ ಎನ್ನುವುದು ಸಸ್ಪೆನ್ಸ್. ಒಂದೇ ಸಿನಿಮಾದಲ್ಲಿ ಒಂದು ಕುಟುಂಬದ ಮೂರು ತಲೆಮಾರಿನ ಕಲಾವಿದರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸಿನಿಮಾ ಟೈಟಲ್, ಮುಹೂರ್ತ, ಶೂಟಿಂಗ್ ಇತ್ಯಾದಿ ವಿಷಯಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿರುವ ಸೃಜನ್, ನಾಯಕಿಗಾಗಿ ಹುಡುಕಾಟ ನಡೆಸಿದ್ದಾರಂತೆ. ಇದನ್ನೂ ಓದಿ: ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಸಿನಿಮಾದ ಸ್ಕ್ರಿಪ್ಟ್ ಬಹುತೇಕ ಮುಗಿದಿದೆ. ನಾಯಕಿಯ ಹುಡುಕಾಟ ನಡೆದಿದೆ. ಎರಡೆರಡು ಜವಾಬ್ದಾರಿಯನ್ನು ಸೃಜನ್ ಹೊತ್ತಿರುವುದರಿಂದ ಪಕ್ಕಾ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರಂತೆ. ಈಗಾಗಲೇ ನಿರ್ಮಾಣದ ಜೊತೆಗೆ ನಟನೆಯನ್ನೂ ಮಾಡಿರುವ ಸೃಜನ್, ಈ ಬಾರಿ ಸಂದೇಶ್ ಪ್ರೊಡಕ್ಷನ್ (Sandesh Production) ಜೊತೆ ಕೈ ಜೋಡಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ಜೊತೆ ಈ ಹಿಂದೆಯೇ ಸೃಜನ್ ಸಿನಿಮಾ ಮಾಡಬೇಕಿತ್ತು. ಅದೀಗ ಈಡೇರಿದಂತಾಗಿದೆ.

    ಕಿರುತೆರೆಯಲ್ಲಿ ಸೃಜನ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಅದರಿಂದ ಕೊಂಚ ಬಿಡುವು ತಗೆದುಕೊಂಡು ತಮ್ಮ ಚೊಚ್ಚಲು ನಿರ್ದೇಶನದ ಚಿತ್ರದತ್ತ ಚಿತ್ತ ಹರಿಸಿದ್ದಾರೆ. ಶೂಟಿಂಗ್ ಗೂ (Shooting) ಮುನ್ನ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ತಮ್ಮ ತಂಡದೊಂದಿಗೆ ನಿರಂತರ ಕೆಲಸ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲೇ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಸೃಜನ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Exclusive- ನಟನೆ ಜೊತೆ ನಿರ್ದೇಶನಕ್ಕೂ ಮುಂದಾದ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್

    Exclusive- ನಟನೆ ಜೊತೆ ನಿರ್ದೇಶನಕ್ಕೂ ಮುಂದಾದ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್

    ನ್ನಡ ಕಿರುತೆರೆ ಮತ್ತು ಸಿನಿಮಾ ರಂಗದ ಟಾಕಿಂಗ್ ಸ್ಟಾರ್ ಎಂದೇ ಫೇಮಸ್ ಆಗಿರುವ ಸೃಜನ್ ಲೋಕೇಶ್ (srujan lokesh) ತಮ್ಮ ಅಭಿಮಾನಿಗಳು ಸಿಹಿ ಸುದ್ದಿ ಕೊಟ್ಟಿದ್ದಾರೆ. ಮೈಸೂರಿನ ಚಾಮುಂಡಿ ದರ್ಶನ ಪಡೆದ ನಂತರ ಅಲ್ಲಿಂದಲೇ ಅವರು ಸಿನಿಮಾ ನಿರ್ದೇಶನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಹತ್ತು ಹಲವು ಸಾಹಸ ಕೆಲಸಗಳನ್ನೂ ಮಾಡಲು ಮುಂದಾಗಿದ್ದಾರೆ. ಸೃಜನ್ ನಿರ್ದೇಶನದ ಮೊದಲ ಸಿನಿಮಾಗೆ ಸಂದೇಶ್ ಪ್ರೊಡಕ್ಷನ್ ಕೂಡ ಕೈ ಜೋಡಿಸಿದ್ದು ವಿಶೇಷ.

    ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಸೃಜನ್ ಲೋಕೇಶ್, ‘ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ತುಂಬಾ ದಿನಗಳ ಆಸೆ ಆಗಿತ್ತು. ಹಾಗಾಗಿ ನಾನೇ ಒಂದು ಕಥೆ ಮಾಡಿಕೊಂಡು ಅದರ ಮೇಲೆ ಕೆಲಸ ಮಾಡುತ್ತಿದ್ದೆ. ಹೀಗೆ ಮಾತನಾಡುತ್ತಿದ್ದಾಗ ಸಂದೇಶ್ ಅವರ ಜೊತೆ ಸಿನಿಮಾ ಮಾಡುವ ವಿಚಾರ ಹಂಚಿಕೊಂಡೆ. ಮತ್ತು ಅವರಿಗಾಗಿ ನಾನೊಂದು ಸಿನಿಮಾ ಮಾಡಬೇಕಿತ್ತು. ಇದೀಗ ಎಲ್ಲವೂ ಕೂಡಿ ಬಂದು ಈ ಸಿನಿಮಾ ಆಗುತ್ತಿದೆ’ ಅಂದರು.

    ನಟನೆ ಮಾಡುತ್ತಲೇ ನಿರ್ದೇಶನ ಮಾಡುವುದು ಸುಲಭವಲ್ಲ. ಹಾಗಂತ ಸೃಜನ್ ಲೋಕೇಶ್ ಅವರಂಥ ಸೃಜನಶೀಲರಿಗೆ ಕಷ್ಟವೂ ಅಲ್ಲ. ಸೃಜನ್ ಅವರ ತಾತ ಮತ್ತು ತಂದೆ ಇಂತಹ ಅನೇಕ ಸಾಹಸಗಳನ್ನು ಮಾಡಿದ್ದಾರೆ. ಈ ಕುಟುಂಬದ ಮೂರನೇ ತಲೆಮಾರು ಸೃಜನ್ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಂದಹಾಗೆ ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ಹಾರರ್ ಕಾಮಿಡಿ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಿದ್ದಾರಂತೆ. ಇದನ್ನೂ ಓದಿ:ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ಮಗನ ಮೊದಲನೇ ಸಿನಿಮಾಗೆ ಸೃಜನ್ ತಾಯಿ ಗಿರಿಜಾ ಲೋಕೇಶ್ (girija lokesh) ಅವರು ಸಾಥ್ ನೀಡುತ್ತಿದ್ದು, ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ. ತಾಯಿಗೆ ಆ್ಯಕ್ಷನ್ ಕಟ್ ಹೇಳುವ ಭಾಗ್ಯ ಸೃಜನ್ ಅವರಿಗೆ ಸಿಕ್ಕಿದೆ. ಈಗಾಗಲೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಕೆಲಸವನ್ನೂ ಮುಗಿಸಿರುವ ಸೃಜನ್, ನಾಯಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ಮತ್ತು ಲೋಕೇಶ್ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಮನ್ವಿ ಮುಂದೆ ದೊಡ್ಡ ಸ್ಟಾರ್‌ ಆಗುತ್ತಿದ್ದಳು: ಸೃಜನ್‌ ಲೋಕೇಶ್‌ ಭಾವುಕ

    ಸಮನ್ವಿ ಮುಂದೆ ದೊಡ್ಡ ಸ್ಟಾರ್‌ ಆಗುತ್ತಿದ್ದಳು: ಸೃಜನ್‌ ಲೋಕೇಶ್‌ ಭಾವುಕ

    ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್‌ ಸ್ಟಾರ್‌ ಶೋನ ಸ್ಪರ್ಧಿ ಸಮನ್ವಿ ನೆನೆದು ನಟ ಸೃಜನ್‌ ಲೋಕೇಶ್‌ ಭಾವುಕರಾದರು.

    ಪುಟಾಣಿ ಸಾವಿನ ಸುದ್ದಿ ಕೇಳಿ ಮನಸ್ಸು ತುಂಬಾ ಡಿಸ್ಟರ್ಬ್‌ ಆಗಿದೆ. ರಾತ್ರಿ ಕೂಡ ನಿದ್ರೆ ಮಾಡಲಾಗಲಿಲ್ಲ. ಕಣ್ಣು ಮುಚ್ಚಿದರೂ ಆ ಮಗುವಿನ ಬಿಂಬವೇ ಬರುತ್ತಿತ್ತು. ಇಂತಹ ಸನ್ನಿವೇಶಗಳನ್ನು ನೋಡಿದಾಗ ನಮ್ಮ ಮಕ್ಕಳ ವಿಚಾರದಲ್ಲೂ ನಾವು ಜಾಗೃತರಾಗಬೇಕು ಎನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

    ಮುದ್ದಾದ ಮಗು ಅದು. ಕಾರ್ಯಕ್ರಮದಲ್ಲಿ ಬಹಳ ಖುಷಿ ಖುಷಿಯಾಗಿ ಇರುತ್ತಿದ್ದಳು. ಅಂಥ ಮಗು ಅಪಘಾತದಲ್ಲಿ ಸಾವನ್ನಪ್ಪಿದ್ದು ನಿಜಕ್ಕೂ ಘೋರ. ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ದುಃಖಿಸಿದರು.

    ಪರದೆಯ ಮುಂದೆ ಚೆನ್ನಾಗಿ ಅಭಿನಯಿಸುತ್ತಿದ್ದ ಸಮನ್ವಿ, ತುಂಬಾ ಪ್ರತಿಭಾವಂತೆ. ಮುಗ್ದತೆ, ಪ್ರೀತಿ ಎಲ್ಲವನ್ನೂ ತುಂಬಿಕೊಂಡಿದ್ದ ಮಗು. ಮುಂದೆ ದೊಡ್ಡ ಸ್ಟಾರ್‌ ಆಗುತ್ತಾಳೆ ಎನ್ನುತ್ತಿದ್ದೆವು. ಕಾರ್ಯಕ್ರಮ ಮುಗಿಸಿ ಹೊರಬಂದಾಗ ನನ್ನನ್ನು ಜಡ್ಜ್‌ ಬಾಯ್‌ ಅಂತ ಪ್ರೀತಿಯಿಂದ ಕರೆಯುತ್ತಿದ್ದಳು ಎಂದು ನೆನೆದರು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಕೊರೊನಾ ವೈರಸ್‌ ಬಂದಾಗಲೂ ನಮ್‌ ಜೀವನ ನಮ್ಮ ಕೈಯಲ್ಲಿಲ್ಲ. ವಾಹನ ಓಡಿಸುತ್ತಿದ್ದಾಗಲೂ ಹೀಗೆಯೇ ಅಂದುಕೊಳ್ಳಬೇಕು. ಅಪ್ಪು ಅವರು ತೀರಿಕೊಂಡ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಇದರ ಮಧ್ಯೆಯೇ ಮಗು ಸಾವನ್ನಪ್ಪಿದ ಸುದ್ದಿ ಬಂದು, ಬರೆ ಮೇಲೆ ಬರೆ ಹಾಕಿದಂತಾಗಿದೆ ಎಂದು ವಿಷಾದಿಸಿದರು.

    ಇಂತಹ ಸಂದರ್ಭದಲ್ಲಿ ಸಮನ್ವಿ ತಾಯಿ ಅಮೃತಾ ನಾಯ್ಡು ಪರಿಸ್ಥಿತಿ ನೆನೆದರೆ ನೋವಾಗುತ್ತದೆ. ಅಮೃತಾ ಮೊದಲು ಒಂದು ಮಗುವನ್ನು ಕಳೆದುಕೊಂಡಿದ್ದರು. ನಂತರ ಸಮನ್ವಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ಸಮನ್ವಿ ಒಂಟಿಯಾಗುತ್ತಾಳೆ ಎಂಬ ಕಾರಣಕ್ಕೆ ಮತ್ತೊಂದು ಮಗು ಹೊಂದಲು ಯೋಜಿಸಿದ್ದೇವೆ ಅಂತ ಅಮೃತ ಹೇಳುತ್ತಿದ್ದಳು. ಆ ದಂಪತಿ ಈ ನೋವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂದು ನೊಂದು ನುಡಿದರು.

  • ಭೂಮಿ ಮೇಲೆ ಕೆಟ್ಟೋಗಿರೋ ನನ್ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ- ಅಪ್ಪು ನಿಧನಕ್ಕೆ ಯೋಗಿ ಕಂಬನಿ

    ಭೂಮಿ ಮೇಲೆ ಕೆಟ್ಟೋಗಿರೋ ನನ್ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ- ಅಪ್ಪು ನಿಧನಕ್ಕೆ ಯೋಗಿ ಕಂಬನಿ

    – ದೇವರು ಪುನೀತ್ ಅವರನ್ನ ಬೇಗ ಕರೆದುಕೊಂಡು ಬಿಟ್ಟ

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ದೇಶಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಅಂತೆಯೇ ಪುನೀತ್ ಜೊತೆ ಒಡನಾಟ ಹೊಂದಿದ್ದ ನಟ ಲೂಸ್ ಮಾದ ಯೋಗಿ ಇಂದು ಕಂಬನಿ ಮಿಡಿಯುತ್ತಲೇ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

    PUNEET RAJKUMAR

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗಿ, ಪುನೀತ್ ರಾಜ್‍ಕುಮಾರ್ ನನಗೆ ಇನ್ನೊಬ್ಬ ಅಣ್ಣ ಇದ್ದಂತೆ ಇದ್ದರು. ಅವರ ಜೊತೆ ಸಾಕಷ್ಟು ಒಡನಾಟ ಕೂಡ ಇತ್ತು. ಅವರ ಜೊತೆ ಚಿತ್ರೀಕರಣದ ವೇಳೆ 200 ಕ್ಕೂ ಹೆಚ್ಚು ದಿನ ಕಾಲ ಕಳೆದಿದ್ದೆ ಎಂದು ಭಾವುಕರಾದರು. ಇದನ್ನೂ ಓದಿ: ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಕೊನೆಗೂ ಅವಕಾಶ

    ಮುಂದಿನ ದಿನಗಳಲ್ಲಿ ನನ್ನ ಬ್ಯಾನರ್ ನಲ್ಲೇ ಒಟ್ಟಿಗೆ ಚಿತ್ರ ಮಾಡೋಣ ಅಂತ ಹೇಳಿದ್ದರು. ಆದರೆ ವಿಧಿ ಅದನ್ನ ಕೈಗೂಡುವುದಕ್ಕೆ ಬಿಡಲಿಲ್ಲ. ಭೂಮಿ ಮೇಲೆ ಸಾಕಷ್ಟು ಕೆಟ್ಟ ನನ್ನ ಮಕ್ಕಳಿಗೆ ಇನ್ನೂ ಸಾವು ಬಂದಿಲ್ಲ. ಆದರೆ ಇಂತಹ ವ್ಯಕ್ತಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬ, ಅಭಿಮಾನಿಗಳಿಗೆ ನೋವು ತಡೆದುಕೊಳ್ಳೊ ಶಕ್ತಿಯನ್ನ ದೇವರು ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಇದೇ ವೇಳೆ ಪುನೀತ್ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು. ಅಭಿಮಾನಿಗಳು ದುಡುಕಿ ಕೆಟ್ಟ ನಿರ್ಧಾರಗಳನ್ನ ಕೈಗೊಳ್ಳಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು

    ಈ ಹಿಂದೆ ನಟ ಸೃಜನ್ ಲೋಕೇಶ್ ಕೂಡ ಆಕ್ರೋಶ ಹೊರಹಾಕಿದ್ದರು. ಎಂಥೆಂತಹ ಕೆಟ್ಟ ಮನಸ್ಸಿರುವ ಕಳ್ಳರು, ಕೊಲೆಗಾರರು ಎಲ್ಲರೂ ಬದುಕಿರುತ್ತಾರೆ. ಆದರೆ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಂತಹ ವ್ಯಕ್ತಿ, 46 ವರ್ಷ ದಷ್ಟಪುಷ್ಟವಾಗಿದ್ದಂತಹ ಉತ್ತಮ ಲೈಫ್ ಸ್ಟೈಲ್ ಇದ್ದಂತಹ ವ್ಯಕ್ತಿ ಹೋಗುತ್ತಾರೆ ಎಂದರೆ ಇದಕ್ಕೆ ಅರ್ಥನೇ ಇಲ್ಲ. ಇದು ಆಗಬಾರದಿತ್ತು. ಇದು ಅನ್ಯಾಯ. ದೇವರು ಮಾಡಿರುವ ಅನ್ಯಾಯ ಎಂದು ಭಾವುಕರಾಗಿದ್ದರು.

  • ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್

    ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್

    ಬೆಂಗಳೂರು: ಪುನೀತ್ ಸಾವು ದೊಡ್ಡ ಅನ್ಯಾಯ. ಇದು ಒಬ್ಬ ವ್ಯಕ್ತಿ ಅಥವಾ ನಟಿನಿಗೆ ಆಗಿರುವ ಅನ್ಯಾಯ ಅಲ್ಲ ಎಲ್ಲರಿಗೂ ಆಗಿರುವ ಅನ್ಯಾಯ. ದೇವರು ಮಾಡಿರುವಂತಹ ದುರಂತ ಇದು. ದೇವರಿಗೆ ಮನಸ್ಸಿಲ್ಲ ಎಂಬುವುದು ಇದರಿಂದ ನನಗೆ ಗೊತ್ತಾಗುತ್ತಿದೆ ಎಂದು ನಟ ಸೃಜನ್ ಲೋಕೇಶ್ ಪುನೀತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    PUNEET RAJKUMAR

    ಇಂದು ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಥೆಂತಹ ಕೆಟ್ಟ ಮನಸ್ಸಿರುವ ಕಳ್ಳರು, ಕೊಲೆಗಾರರು ಎಲ್ಲರೂ ಬದುಕಿರುತ್ತಾರೆ. ಆದರೆ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಂತಹ ವ್ಯಕ್ತಿ, 46 ವರ್ಷ ದಷ್ಟಪುಷ್ಟವಾಗಿದ್ದಂತಹ ಉತ್ತಮ ಲೈಫ್ ಸ್ಟೈಲ್ ಇದ್ದಂತಹ ವ್ಯಕ್ತಿ ಹೋಗುತ್ತಾರೆ ಎಂದರೆ ಇದಕ್ಕೆ ಅರ್ಥನೇ ಇಲ್ಲ. ಇದು ಆಗಬಾರದಿತ್ತು. ಇದು ಅನ್ಯಾಯ. ದೇವರು ಮಾಡಿರುವ ಅನ್ಯಾಯ ಎಂದಿದ್ದಾರೆ. ಇದನ್ನೂ ಓದಿ: ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು

    ಇದೇ ವೇಳೆ, ನಾನು ಚಿಕ್ಕವಯಸ್ಸಿನಲ್ಲಿ ಪ್ರತಿ ಎರಡನೇ ಭಾನುವಾರ ಅಣ್ಣಾ ಅವರ ಮನೆಗೆ ಹೋಗುತ್ತಿದ್ದೇವು. ಚಿಕ್ಕ ವಯಸ್ಸಿನಲ್ಲಿ ನಾನು, ಅಪ್ಪು, ನನ್ನ ಅಕ್ಕ ಎಲ್ಲರೂ ಒಟ್ಟಿಗೆ ಬೆಳೆದವರು. ಈ ವೇಳೆ ಅಣ್ಣಾವ್ರು ಹಾಗೂ ನನ್ನ ತಂದೆ ಇಬ್ಬರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಿದ್ದರು. ಆಗ ನಾನು ಅಪ್ಪು ಹೊಟ್ಟೆ ಹಸಿವು ಎಂದು ಒಟ್ಟಿಗೆ ಕದ್ದು ತಿಂಡಿ ತಿಂದು ಬರುತ್ತಿದ್ದೇವು. ಈ ರೀತಿಯ ಸಿಹಿಯಾದ ನೆನಪುಗಳಿದೆ. ಆದರೆ ಈಗ ಈ ರೀತಿ ಕಹಿ ನೆನಪು ಕೂಡ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಇದು ನನಗೆ ನೆನಪಾಗಿ ಉಳಿಯಲೇ ಬರದಿತ್ತು. ನಾನು ಇದನ್ನು ನೋಡಲೇ ಬಾರದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಅಪ್ಪು ಅವರ ಸಾವು ನಿಜ ಅಂತ ಅನಿಸುತ್ತಿಲ್ಲ: ಅದಿತಿ ಪ್ರಭುದೇವ

    ನಂತರ ಗುರುಕಿರಣ್ ಬರ್ತ್‍ಡೇ ಪಾರ್ಟಿಯಲ್ಲಿ ಖುಷಿಯಾಗಿ ಅಪ್ಪು ಹೇಗಿರುತ್ತಿದ್ದರು. ಹಾಗೆಯೇ ಇದ್ದರು. ಯಾವುದೇ ರೀತಿಯ ಸೂಚನೆ ಕೂಡ ಇರದಂತೆ ಅಷ್ಟು ಖುಷಿಯಾಗಿ ಸಂತೋಷದಿಂದ ಇದ್ದರು. ಇನ್ನೂ ನೀವು ನಮ್ಮ ಮನೆಗೆ ಬರುವುದಿಲ್ಲವಾ ಎಂದಾಗ, ಇಲ್ಲ ನಾನು ಅಮ್ಮನನ್ನು ಭೇಟಿಯಾಗಬೇಕು. ನಿಮ್ಮ ಮಗನನ್ನು ನೋಡಬೇಕು ಹಾಗಾಗಿ ಬರುತ್ತೇನೆ ಎಂದು ಹೇಳಿದ್ದರು.

  • ಸೃಜನ್ ಜೊತೆಗಿನ ಮದುವೆ ಮುರಿದಿದ್ದಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ

    ಸೃಜನ್ ಜೊತೆಗಿನ ಮದುವೆ ಮುರಿದಿದ್ದಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ

    ಬೆಂಗಳೂರು: ಸದಾ ಫೇಸ್‍ಬುಕ್ ಲೈವ್ ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಂಡು ಕಣ್ಣೀರು ಹಾಕುತ್ತಿರುವ ನಟಿ ವಿಜಯಲಕ್ಷ್ಮಿ ಇದೀಗ ಮತ್ತೆ ವೀಡಿಯೋ ಹರಿ ಬಿಟ್ಟಿದ್ದಾರೆ. ಈ ಬಾರಿ ನಟ ಸೃಜನ್ ಲೋಕೇಶ್ ಜೊತೆಗಿನ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

    ಹೌದು. ಈ ಹಿಂದೆ ನಟಿ ಲೈವ್ ಗೆ ಬಂದು ಕಣ್ಣೀರಾಕಿದ್ದ ಸಂದರ್ಭದಲ್ಲಿ ಅನೇಕ ಮಂದಿ ಸೃಜನ್ ಗೆ ಮೋಸ ಮಾಡಿ ಬೀದಿಗೆ ಬಂದಿರುವುದಾಗಿ ಕಾಮೆಂಟ್ ಮಾಡಿದ್ದರು. ಈ ವಿಚಾರ ಸಂಬಂಧ ಇದೀಗ ವಿಜಯಲಕ್ಷ್ಮಿ ಅವರೇ ಲೈವ್ ಗೆ ಬಂದು ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

    ಲೈವ್ ನಲ್ಲಿ ನಟಿ ಹೇಳಿದ್ದೇನು..?
    ಇತ್ತೀಚೆಗೆ ನನ್ನ ಹಾಗೂ ಸೃಜನ್ ಲೋಕೇಶ್ ಬಗ್ಗೆ ಬಹಳಷ್ಟು ವಿಚಾರಗಳು ಹರಿದಾಡುತ್ತಿದೆ. ನಾನು ಮತ್ತೆ ಕರ್ನಾಟಕಕ್ಕೆ ಬರುತ್ತಿದ್ದೇನೆ ಅಂದಾಗ ‘ಸೃಜನ್ ಗೆ ಯಾಮಾರಿಸಿದ್ದಕ್ಕೆ ಬೀದಿಗೆ ಬಂದ್ಬಿಟ್ಟೆ’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಗಮಂಡಲ ಚಿತ್ರದ ಕ್ಲೈಮಾಕ್ಸ್ ನಲ್ಲಿ ‘ನೀವು ನನ್ನ ಪ್ರೀತಿಸಿದಾಗ ನಾನು ಗುಬ್ಬಿಯಾಗಿದ್ದೆ, ಆದ್ರೆ ಈವಾಗ ನನಗೆ ಎಲ್ಲಾ ಗೊತ್ತಾಗುತ್ತಿದೆ. ನನಗೆ ಉತ್ತರ ಕೊಡಿ’ ಎಂದು ನಾಗಪ್ಪ ಬಳಿ ಕೇಳುವ ಒಂದು ಸನ್ನಿವೇಶ ಬರುತ್ತದೆ. ಇದೇ ರೀತಿ ಈಗ ನನ್ನ ಜೀವನದಲ್ಲಿ ಆಗಿದೆ. 20 ವರ್ಷ ನನ್ನ ಬಗ್ಗೆ ಏನೇನೋ ವಿವಾದಗಳು ಆಗಿವೆ. ಆದರೂ ಸುಮ್ಮನಿದ್ದೆ. ಈಗ ನನ್ನ ಜೀವನ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಈಗ ನನಗೆ 39 ವರ್ಷ ವಯಸ್ಸಾಗಿದ್ದು, ನಾನು ಚಿಕ್ಕ ಮಗುವಲ್ಲ ಮಹಿಳೆಯಾಗಿದ್ದೇನೆ. ನನ್ನ ಜೀವನದಲ್ಲಿ ಏನೇನು ಆಗಿದೆ ಎಂಬುದು ಹಿರಿಯರಿಗೆ ತಿಳಿದಿದ್ದು, ಹೀಗಾಗಿ ಅವರು ಕೂಡ ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನನ್ನ ಮಾತೃ ಭಾಷೆ ತಮಿಳು. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಯಶವಂಪುರದಲ್ಲಿರುವ ಮನೆಯಲ್ಲಿ. ನಾಗಮಂಡಲದ ಮೂಲಕ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಒಟ್ಟಿನಲ್ಲಿ ನನ್ನ ಫೌಂಡೇಶನ್ ಕರ್ನಾಟಕದಲ್ಲಿ. ಫ್ರೆಂಡ್ಸ್ ಅನ್ನೋ ತಮಿಳೂ ಚಿತ್ರದ ಮೂಲಕ ನನ್ನ ಜೀವನ ಪ್ರಾರಂಭವಾಗಿದೆ. ಇಂದಿಗೂ ಎಲ್ಲರೂ ನನ್ನ ಬೆಂಗಳೂರು ವಿಜಯಲಕ್ಷ್ಮಿ ಅಂತಾನೆ ರೆಫರ್ ಮಾಡುತ್ತಾರೆ ಎಂದರು.

    ಎಲ್ಲರೂ ಸೃಜನ್ ಯಾಮಾರಿಸಿಬಿಟ್ಟಳು, ಬೀದಿಯಲ್ಲಿ ನಿಂತಳು ಅಂತ ಮಾತಾಡ್ತಾರೆ. ಆದರೆ ಯಾವ ಬೀದಿಯಲ್ಲಿ ನಿಂತಿದ್ದೀನಿ ಅನ್ನೋದು ನನಗೆ ಗೊತ್ತಾಗಬೇಕಿದೆ. ಲಕ್ಷ ಲಕ್ಷ ಖರ್ಚು ಮಾಡಿ ಚೆನ್ನೈನಲ್ಲಿ ಎಂಗೇಜ್ಮೆಂಟ್ ಅನ್ನು ನಾವೇ ಮಾಡಿಸಿದ್ವಿ. ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡುತ್ತಿರುವ ಸಂದರ್ಭದಲ್ಲಿ ‘ಹೋ ನೀವು ತಮಿಳುರು ಅಲ್ವಾ.. ನಾವು ಕನ್ನಡದವರು..’ ಅನ್ನೋ ಮಾತುಗಳು ಬಹಳಷ್ಟು ಬಾರಿ ಪ್ರಸ್ತಾಪ ಆಯಿತು. ಪ್ರತಿನಿತ್ಯ ಈ ವಿಚಾರದಲ್ಲಿಯೇ ಮಾತಿಗೆ ಮಾತು ಬೆಳೆಯುತ್ತಿತ್ತು. ಆದರೆ ನನ್ನ ಹಾಗೂ ಸೃಜನ್ ನಡುವಿನ ಸಂಬಂಧದಲ್ಲಿ ಯಾವುದೇ ಬಿರುಕು ಮೂಡಿರಲಿಲ್ಲ. ಯಾಕಂದ್ರೆ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

    ನಮ್ಮ ಅಪ್ಪ ತೀರಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ನಾವು ಮೂವರು ಹುಡುಗಿಯರು ಕಷ್ಟಪಡುತ್ತಿರುವುದನ್ನು ಕಂಡ ಸೃಜನ್, ಮದುವೆ ಮಾಡಿಕೊಳ್ಳಬೇಕು ಎಂಬ ಒಳ್ಳೆಯ ಉದ್ದೇಶದಿಂದಲೇ ಬಂದಿದ್ದರು. ಹೀಗಾಗಿ ನಮ್ಮಿಬ್ಬರ ಮಧ್ಯೆ ಭಾಷೆಯ ಬಗ್ಗೆ ಏನೂ ಇರಲಿಲ್ಲ. ಮದುವೆ ಅಂತ ಬಂದಾಗ ಸಾಮಾನ್ಯವಾಗಿ ಎಲ್ಲಾ ವಿಚಾರಗಳು ಎಲ್ಲರ ಮನೆಯಲ್ಲೂ ಪ್ರಸ್ತಾಪ ಆಗಿಯೇ ಆಗುತ್ತದೆ. ಹಾಗೆಯೇ ನಮ್ಮಲ್ಲೂ ‘ನೀವು ತಮಿಳರಲ್ವಾ…’ ಎಂಬ ಮಾತು ಬಂತು. ಇದನ್ನು ಸರಿ ಮಾಡಲು ಆಗುತ್ತಾ ಅಂತ ತುಂಬಾ ಸಮಯದವರೆಗೆ ನೋಡಿದೆ, ಹೋರಾಡಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸೃಜನ್ ಹಾಗೂ ನಾನು ಕೂತುಕೊಂಡು ಈ ಬಗ್ಗೆ ಮಾತುಕತೆ ನಡೆಸಿದೆವು. ಈ ವೇಳೆ ಮನೆಯಲ್ಲಿ ಎಲ್ಲರೂ ಏನು ಆಸೆ ಪಡುತ್ತಾರೋ, ಆ ರೀತಿಯಾದ ಹೆಣ್ಣು ಅವರಿಗೆ ಸಿಗಬೇಕು, ಅವರು ಚೆನ್ನಾಗಿರಬೇಕು ಎಂದು ನಾನು ಬಯಸಿದೆ. ಇದನ್ನು ನಾನು ಸ್ವಚ್ಛವಾದ ಪ್ರೀತಿ ಎಂದು ನಾನು ಭಾವಿಸ್ತೀನಿ ಎಂದರು.

    ನಮಗೊಬ್ಬರು ಸಿಗ್ತಾರೋ, ಇಲ್ಲವೋ ಅನ್ನೋದು ಪ್ರೀತಿಯಲ್ಲ, ಅವರು ಚೆನ್ನಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ. ಅಂದು ನಾನು ಕೂಡ ಇದನ್ನೇ ಮಾಡಿದೆ. ಭಾಷೆ ಅನ್ನೋ ವಿಚಾರದಲ್ಲಿ ಮದುವೆಗಿಂತ ಮುಂಚೆನೇ ಕಿರಿಯಾಗುತ್ತಿದೆ ಅಂದ್ರೆ ಬಿಟ್ಟುಬಿಡೋಣ ಎಂದು ನಾನು ಸೃಜನ್ ಅವರ ಮುಂದೆ ಪ್ರಸ್ತಾಪ ಮಾಡಿದೆ. ಅಂದು ನಾನು ಏನು ಅಂದ್ಕೊಂಡೆನೋ ಅದೇ ರೀತಿ ಸೃಜನ್ ಅವರ ಬದುಕು ಈಗ ಸಾಗುತ್ತಿದೆ. ಇದು ನನಗೆ ಖುಷಿ ನೀಡಿದೆ. ಆದರೆ ಜನ ನೀನು ಮಾಡಿದ ಮೋಸದಿಂದ ಬೀದಿಗೆ ಬಂದಿದ್ದೀಯಾ ಅಂತಾರೆ. ಇದು ನನಗೆ ತುಂಬಾ ನೋವು ಕೊಡುತ್ತಿದೆ. ನಾನೇನು ಮೋಸ ಮಾಡಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ಮಾಡಿಕೊಂಡು, ನಂತರ ಜಗಳ ಮಾಡಿಕೊಂಡು ಆಮೇಲೆ 1 ಕೋಟಿ ಕೊಟ್ಟು ವಿಚ್ಚೇದನ ಕೊಡು ಎಂದು ನಾನು ಜಗಳ ಮಾಡಿಲ್ಲ. ಕರ್ನಾಟಕದ ಎಲ್ಲಾ ನಾಯಕಿಯರ ಜೀವನದಲ್ಲಿಯೂ ಡಿವೋರ್ಸ್ ಗಳಾಗಿವೆ, ಹಾಗೆಯೇ ಮತ್ತೆ ಮರು ಜೀವನ ಆರಂಭಿಸಿದ್ದಾರೆ. ಹಾಗಂತ ಎಲ್ಲಾ ನಟಿಯರ ಬಗ್ಗೆ ಈ ರೀತಿ ಬರೆಯಲ್ಲ. ಆದರೆ ವಿಜಯಲಕ್ಷ್ಮಿ ಬಗ್ಗೆ ಮಾತ್ರ ಈ ರೀತಿ ಬರೆಯುತ್ತೀರಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ಹೀಗೆ ಅನೇಕ ವಿಚಾರಗಳ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.

  • ಗೆಳೆಯ ಮತ್ತೆ ಹುಟ್ಟಿಬಂದ – ಚಿರು ಮಗು ನೋಡಿ ಸಂಭ್ರಮಿಸಿದ ಸೃಜನ್

    ಗೆಳೆಯ ಮತ್ತೆ ಹುಟ್ಟಿಬಂದ – ಚಿರು ಮಗು ನೋಡಿ ಸಂಭ್ರಮಿಸಿದ ಸೃಜನ್

    ಬೆಂಗಳೂರು: ಶುಕ್ರವಾರ ಜನಿಸಿದ ನಟ ಚಿರಂಜೀವಿ ಸರ್ಜಾ ಅವರ ಪುತ್ರನನ್ನು ನೋಡಲು ನಟ ಸೃಜನ್ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಕಳೆದ ಜೂನ್ 7ರಂದು ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಅವರು ಸಾವನ್ನಪ್ಪಿದರು. ಅವರು ಸಾವನ್ನಪ್ಪಿದ ವೇಳೆ ಅವರ ಪತ್ನಿ ನಟಿ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದರು. ಶುಕ್ರವಾರ ಅವರಿಗೆ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿದೆ. ಈ ಮೂಲಕ ಸರ್ಜಾ ಕುಟುಂಬದವರಿಗೂ ಮತ್ತು ಚಿರಂಜೀವಿ ಅಭಿಮಾನಿಗಳು ಖುಷಿ ನೀಡಿದೆ.

    ಇಂದು ಜೂನಿಯರ್ ಚಿರುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ನಟ ಸೃಜನ್ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅವರು ಮಗುವನ್ನು ನೋಡಿ ಸಂಭ್ರಮ ಪಟ್ಟಿದ್ದಾರೆ. ಅದರಲ್ಲೂ ಗಿರಿಜಾ ಲೋಕೇಶ್ ಅವರು ಮಗು ನೋಡಿ ಚಿರಂಜೀವಿ ರೀತಿಯೇ ಮಗುವಿನ ಹೋಲಿಕೆ ಇದೆ ಖುಷಿಪಟ್ಟಿದ್ದಾರೆ. ನಂತರ ಸೃಝನ್ ಲೋಕೇಶ್ ಅವರು ಮಗುವಿನ ಮೂಗು ಚಿರಂಜೀವಿ ರೀತಿಯೇ ಇದೆ ಗೆಳೆಯ ಮತ್ತೆ ಹುಟ್ಟಿಬಂದ ಎಂದು ಹೇಳಿದ್ದಾರೆ. ಮಗು ಹುಟ್ಟಿದ ದಿನ ಟ್ವೀಟ್ ಮಾಡಿದ್ದ ಸೃಜನ್ ಅಂದೇ ವೆಲ್‍ಕಮ್ ಬ್ಯಾಕ್ ಗೆಳಯ ಎಂದು ಬರೆದುಕೊಂಡಿದ್ದರು. ಇದನ್ನು ಓದಿ: ಥೇಟ್ ಚಿರು ಮೂಗಿನಂತೆ ಮಗುವಿನ ಮೂಗಿದೆ: ಐಶ್ವರ್ಯಾ ಸರ್ಜಾ

    ಇಂದು ತಂಗಿಯ ಮಗನ ಮಗುವನ್ನು ನೋಡಲು ಹಿರಿಯ ನಟ ಅರ್ಜುನ್ ಸರ್ಜಾ ಅವರು ಕೂಡ ಆಸ್ಪತ್ರೆಗೆ ಬಂದಿದ್ದಾರೆ. ನಂತರ ಮಾತನಾಡಿದ ಅವರು, 20 ವರ್ಷದ ನಂತರ ಚಿರು ಮಗನನ್ನು ನಾನೇ ಬಹುಶಃ ಲಾಂಚ್ ಮಾಡ್ತೀನಿ. ಸೀಮಂತದ ಸಮಯದಲ್ಲಿ ಹಾಟ್ರ್ಲಿ ವೆಲ್ಕಮ್ ಜೂನಿಯರ್ ಚಿರು ಅಂತ ಎಲ್ಲರೂ ಹಾಡಿದ್ವಿ. ನಮಗೂ ಗಂಡು ಮಗು ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದರು.

  • ಒಂದೇ ವಿಡಿಯೋ – 20 ಕ್ಯಾಮೆರಾಮ್ಯಾನ್‍ಗಳಿಗೆ ಕೆಲಸ ಕೊಟ್ಟ ಸೃಜನ್

    ಒಂದೇ ವಿಡಿಯೋ – 20 ಕ್ಯಾಮೆರಾಮ್ಯಾನ್‍ಗಳಿಗೆ ಕೆಲಸ ಕೊಟ್ಟ ಸೃಜನ್

    – ಬನ್ನಿ ಮತ್ತೆ ದುಡಿಯೋಣ ನಮ್ಮ ದೇಶ ಮತ್ತೆ ಕಟ್ಟೋಣ

    ಬೆಂಗಳೂರು: ಲಾಕ್‍ಡೌನ್‍ನಿಂದ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿವೆ. ಇದರಿಂದ ಕಲಾವಿದರು, ಕ್ಯಾಮೆರಾಮ್ಯಾನ್‍ಗಳು ಸೇರಿದಂತೆ ಅನೇಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಆತ್ಮನಿರ್ಭರ್ ಭಾರತಕ್ಕೆ ಕೈ ಜೋಡಿಸುವ ಮೂಲಕ ಕಲಾವಿದರಿಗೆ ಸಹಾಯ ಮಾಡಿದ್ದಾರೆ.

    ನಟ ಸೃಜನ್ ಲೋಕೇಶ್ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಕ್ರಿಯೇಟಿವ್ ವಿಡಿಯೋ ತಯಾರಿಸಿದ್ದಾರೆ. 20 ಕ್ಯಾಮೆರಾಮ್ಯಾನ್‍ಗಳನ್ನು ಬಳಸಿ ಈ ವಿಡಿಯೋ ತಯಾರಿಸಿದ್ದು, ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಬೇಕೆಂಬ ಉದ್ದೇಶದಿಂದ ಈ ರೀತಿ ವಿಡಿಯೋವನ್ನು ತಯಾರಿಸಿದ್ದಾರೆ. 20 ಶಾಟ್‍ಗಳ ಮೂಲಕ ಸೃಜನ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಇದಕ್ಕಾಗಿ ನಟ ಸೃಜನ್ ಲೋಕೇಶ್ ಅವರಿಗೆ ಸಂಭಾವನೆ ಕೂಡ ನೀಡಿದ್ದಾರೆ.

    ಸೃಜನ್ ಲೋಕೇಶ್ ಇನ್‍ಸ್ಟಾಗ್ರಾಮ್, ಫೇಸ್‍ಬುಕ್‍ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋಗೆ “ಬನ್ನಿ ಮತ್ತೆ ದುಡಿಯೋಣ ನಮ್ಮ ದೇಶವನ್ನ ಮತ್ತೆ ಕಟ್ಟೋಣ” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆ #beindianbuyindian ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

    “ಎಲ್ಲರಿಗೂ ನಮಸ್ಕಾರ ಅಂದಿನಿಂದ ಇಂದಿನವರೆಗೆ ಎಂತಹ ಯುದ್ಧನೇ ಆಗಿರಲಿ, ಎಂತಹ ಸಂಕಷ್ಟನೇ ಆಗಿರಲಿ. ಈಗಿನ ಮಹಾಮಾರಿ ಕೊರೊನಾವೇ ಆಗಿರಲಿ ಸಮಸ್ಯೆಗೆ ಹೆದರಿ ಮುಂದಿಟ್ಟಿದ್ದ ಹೆಜ್ಜೆಯನ್ನು ಹಿಂದಿಟ್ಟ ಇತಿಹಾಸ ನಮ್ಮ ಭಾರತದಲ್ಲೇ ಇಲ್ಲ. ಆರೋಗ್ಯವೇ ನಮ್ಮ ಭಾಗ್ಯ, ಇಷ್ಟು ದಿನ ದೇಹದ ಆರೋಗ್ಯಕ್ಕಾಗಿ ಹೋರಾಡುದ್ವಿ, ಇನ್ನೂ ಮುಂದೆ ದೇಶದ ಸಂಪತ್ತಿಗೋಸ್ಕರ ಹೋರಾಡೋಣ. ಹೂ, ಹಣ್ಣು, ತರಕಾರಿನೇ ಆಗಿರಲಿ, ದಿನ ಬಳಸುವ ವಸ್ತುಗಳಾಗಿರಲಿ, ಲೋಕಲ್‍ನಿಂದ ಗ್ಲೋಬಲ್‍ವರೆಗೂ ಬೆಳೆಯೋಣ. ‘beindianbuyindian’ ಆತ್ಮನಿರ್ಭರ್ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ” ಎಂದು ಸಂದೇಶ ಸಾರಿದರು.

    40 ಸೆಕೆಂಡ್‍ವರೆಗೂ ಮಾತನಾಡುವ ವಿಡಿಯೋದಲ್ಲಿ ಸೃಜನ್ ತುಂಬಾ ಶಾಟ್ ತೆಗೆದುಕೊಂಡಿದ್ದಾರೆ. ಅಲ್ಲದೇ ಯಾಕೆ ಇಷ್ಟೊಂದು ಶಾಟ್ ತೆಗೆದುಕೊಂಡೆ ಎಂಬುದನ್ನು ಅವರೇ ತಿಳಿಸಿದ್ದಾರೆ. ಇಷ್ಟು ಮಾತನ್ನು ಒಂದೇ ಶಾಟಿನಲ್ಲಿ ಹೇಳಬಹುದಿತ್ತು. ಆದ್ರೆ ಇಷ್ಟು ಶಾಟ್ ಕಟ್ ಯಾಕೆಂದು ಥಿಂಕ್ ಮಾಡುತ್ತಿದ್ದೀರ. ಈ ಶಾಟ್ ಕಟ್‍ಗಳ ಹಿಂದೆಯೂ ಒಂದು ಕಥೆಯಿದೆ ಎಂದು ತಿಳಿಸಿದರು.

    “ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಕಲಾವಿದರು, ದಿನಗೂಲಿ ಕಾರ್ಮಿಕರು, ಟೆಕ್ನಿಷಿಯನ್ಸ್ ಸೇರಿದಂತೆ ಅನೇಕರಿಗೆ ತುಂಬಾನೇ ಕಷ್ಟವಾಗಿದೆ. ಇದಕ್ಕೆ ಸ್ಪಂದಿಸಿ ಹಲವಾರು ಜನರು ಸಹಾಯ ಮಾಡಿದ್ದಾರೆ. ಅವರಿಗೆಲ್ಲ ಧನ್ಯವಾದ, ಆದರೆ ನಮ್ಮ ಲೋಕೇಶ್ ಪ್ರೊಡಕ್ಷನ್‍ನಲ್ಲಿ ಕೆಲಸ ಮಾಡುತ್ತಿರುವ ಕ್ಯಾಮೆರಾಮ್ಯಾನ್‍ಗಳು, 10 ವರ್ಷದಿಂದ ನನ್ನ ಜೊತೆ ಕೆಲಸ ಮಾಡುತ್ತಿರುವವರಿಗೆ ಸಹಾಯ ಮಾಡಬೇಕೆಂದುಕೊಂಡೆ.

    ಆದ್ರೆ ಅವರು, ನಮಗೆ ಸಹಾಯ ಮಾಡಬೇಕು ಎನಿಸಿದರೆ ದಯವಿಟ್ಟು ಕೆಲಸ ಕೊಡಿ ಎಂದು ಕೇಳಿಕೊಂಡರು. ಈ ವಿಡಿಯೋದಲ್ಲಿರುವ 20 ಶಾಟ್‍ಗಳನ್ನು ನನ್ನ 20 ಜನ ಕ್ಯಾಮೆರಾಮ್ಯಾನ್‍ಗಳು ಕಂಪೋಸ್ ಮಾಡಿ ಅವರ ಸಂಭಾವನೆಯನ್ನ ಅವರೇ ದುಡಿದಿದ್ದಾರೆ. ಈ ಲಾಕ್‍ಡೌನ್ ಸಮಯದಲ್ಲಿ ನನ್ನ ಕೈಯಲ್ಲಿ ಅವರಿಗೆ ಈ ಕೆಲಸ ಕೊಡಲು ಮಾತ್ರ ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ. ಜೊತೆಗೆ ಪ್ರತಿಯೊಬ್ಬ ಕ್ಯಾಮೆರಾಮ್ಯಾನ್‍ ಹೆಸರುಗಳನ್ನು ವಿಡಿಯೋ ನಮೂದಿಸಿದ್ದಾರೆ.

    ಈ ಜೀವನ ಭಗವಂತ ಹೇಳಿದ ಆ್ಯಕ್ಷನ್‍ನಿಂದ ಶುರುವಾಗುತ್ತೆ, ಅವನು ಹೇಳಿದ ಕಟ್‍ನಿಂದ ಮುಕ್ತಾಯವಾಗುತ್ತೆ. ಈ ಆ್ಯಕ್ಷನ್-ಕಟ್ ಮಧ್ಯದ ಜೀವನದಲ್ಲಿ ನಾವು ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡೋಣ. ಬನ್ನಿ ಮತ್ತೆ ನಾವೆಲ್ಲರೂ ಸೇರಿ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಸಂದೇಶವನ್ನು ಸಾರಿದ್ದಾರೆ.

    https://www.facebook.com/srujanlokesh/videos/vb.490600890982778/1165816490464005/?type=2&theater