Tag: Srirama Sene

  • ಗೌರಿ ಲಂಕೇಶ್ ಹತ್ಯೆ: ಪ್ರಮೋದ್ ಮುತಾಲಿಕ್ ಹೇಳಿದ್ದೇನು?

    ಗೌರಿ ಲಂಕೇಶ್ ಹತ್ಯೆ: ಪ್ರಮೋದ್ ಮುತಾಲಿಕ್ ಹೇಳಿದ್ದೇನು?

    ಬೆಳಗಾವಿ: ಗೌರಿ ಲಂಕೇಶ್ ಅವರನ್ನು ಕೊಂದರೆ ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ಯಾರೇ ಆಗಲಿ ಶಾರೀರಿಕ ಸಂಘರ್ಷಕ್ಕೆ ಇಳಿಯಬಾರದು ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮುತಾಲಿಕ್, ಪತ್ರಕರ್ತೆ- ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ತಕ್ಷಣ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಅಂತ ಹೇಳಿದ್ರು.

    ಈ ರೀತಿ ಕೊಲೆ ಮಾಡುವ ವಿಕೃತಿ ಸರಿಯಲ್ಲ. ವಿಚಾರವಾದಿಗಳದ್ದಿರಬಹುದು, ಇನ್ಯಾವುದೇ ಹಿಂದೂ ಕಾರ್ಯಕರ್ತರದ್ದಿರಬಹುದು, ಹತ್ಯೆ ಮಾಡುವುದು ಸರಿಯಲ್ಲ. ವೈಚಾರಿಕ ಸಂಘರ್ಷ ಆಗಲಿ ಆದ್ರೆ ಶಾರೀರಿಕ ಸಂಘರ್ಷ ಸರಿಯಲ್ಲ. ಇದನ್ನ ಒಪ್ಪುವುದಿಲ್ಲ. ಸರ್ಕಾರ ಇಂತಹ ಪ್ರಕರಣಗಳನ್ನ ಗಂಭೀರವಾಗಿ ತೆಗೆದುಕೊಂಡು ಕೂಡಲೇ ತನಿಖೆಯಾಗಿ ಶಿಕ್ಷೆಯಾಗುವಂತಹ ಪ್ರಕ್ರಿಯೆ ದೀರ್ಘ ಕಾಲ ಎಳೆದುಕೊಂಡು ಹೋಗುತ್ತಿರುವುದರಿಂದ ಕೊಲೆಗಡುಗರಿಕೆ ಭಯ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಇದು ಅಪಾಯಕಾರಿ ಅಂತ ಹೇಳಿದ್ರು.

    ವ್ಯಕ್ತಿಯ ವಿಚಾರವನ್ನ ಪ್ರಕಟ ಮಾಡುವಂತಹ ಸ್ವಾತಂತ್ರ್ಯ ನಮಗೆ ಡಾ. ಅಂಬೇಡ್ಕರ್ ಸಂವಿಧಾನ ಕೊಟ್ಟಿದೆ. ಕೊಲೆಯ ಮೂಲಕ ಅಂತಹ ವಿಚಾರವನ್ನ ಹತ್ತಿಕ್ಕುವ ಪ್ರಯತ್ನ ಸರಿಯಲ್ಲ. ಅದು ಸಾಧ್ಯವೂ ಇಲ್ಲ. ವೈಚಾರಿಕತೆ ಜೀವಂತವಾಗಿರುತ್ತದೆ. ವ್ಯಕ್ತಿಯ ದೇಹ ಹೋಗಬಹುದು ಆದ್ರೆ ವಿಚಾರ ಉಳಿಯುತ್ತದೆ. ಕೊಲೆಗಡುಕರು ಅರ್ಥ ಮಾಡಿಕೊಳ್ಳಬೇಕು. ಕೊಲೆಯಿಂದ ಅವರ ವಿಚಾರವನ್ನ ನಿಲ್ಲಿಸಲು ಸಾಧ್ಯವಿಲ್ಲ ಅಂದ್ರು.

    ಕರ್ನಾಟಕ ಪೊಲೀಸರು ಸಮರ್ಥವಾಗಿದ್ದಾರೆ. ಕೊಲೆಗಾರರನ್ನು ಬಂಧಿಸುವುದರಲ್ಲಿ ನಿಶ್ಚಿತವಾಗಿ ಯಶಸ್ಸು ಗಳಿಸುತ್ತಾರೆ ಅಂತ ಮುತಾಲಿಕ್ ಹೇಳಿದ್ರು.

    https://www.youtube.com/watch?v=4ltP25aJrF4&feature=youtu.be

  • ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ: ಶಿವಸೇನೆ

    ಕರ್ನಾಟಕದ ಹೆಚ್ಚಿನ ಜನರಿಗೆ ರಾಷ್ಟ್ರಗೀತೆ ಹಾಡಲು ಬರಲ್ಲ: ಶಿವಸೇನೆ

    ಪಣಜಿ: ಕರ್ನಾಟಕದ ವಿರುದ್ಧ ಇಲ್ಲ ಸಲ್ಲದ ವಿಚಾರಗಳನ್ನು ಎತ್ತಿ ಕ್ಯಾತೆ ತೆಗೆಯುತ್ತಿರುವ ಶಿವಸೇನೆ ಈಗ ರಾಷ್ಟ್ರಗೀತೆ ವಿಚಾರದಲ್ಲಿ ಕ್ಯಾತೆ ತೆಗೆದಿದೆ. ಕರ್ನಾಟಕದ ಹಲವಾರು ಜನರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ ಎಂದು ಶಿವಸೇನೆಯ ಮುಖ್ಯಸ್ಥ ಶಿವಪ್ರಸಾದ್ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಗೋವಾದ ಜನ ತುಂಬಾ ದೇಶಭಕ್ತರು. ಅಲ್ಲಿ ತುಂಬಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ರಾಷ್ಟ್ರಗೀತೆ ಹಾಡುತ್ತಾರೆ. ಆದ್ರೆ ಕರ್ನಾಟಕದ ಹಲವಾರು ಜನರಿಗೆ ರಾಷ್ಟ್ರಗೀತೆ ಹಾಡವುದು ಹೇಗೆ ಎನ್ನುವುದೇ ಗೊತ್ತಿಲ್ಲ. ನಮ್ಮ ರಾಷ್ಟ್ರಪಿತ ಯಾರು ಎಂಬುದು ಅವರಿಗೆ ಮೊದಲೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಮಹಾದಾಯಿ ನೀರು ಹಂಚಿಕೆಯ ಸಂಬಂಧಿಸಿದಂತೆ ಗೋವಾ-ಕರ್ನಾಟಕ ನಡುವಿನ ವಿವಾದದ ಹಿನ್ನೆಲೆಯ ಸಂದರ್ಭದಲ್ಲಿ ಶಿವಪ್ರಸಾದ್ ಜೋಶಿ ಈ ಮಾತನ್ನು ಹೇಳಿದ್ದಾರೆ.

    ಮುತಾಲಿಕ್ ಬಗ್ಗೆ ಮೆಚ್ಚುಗೆ:
    ಕರ್ನಾಟಕದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಮುತಾಲಿಕ್ ಅವರನ್ನು ಮಹಿಳೆಯರ ರಕ್ಷಕ. ಮುತಾಲಿಕ್ ಅವರು ಕರ್ನಾಟಕದಲ್ಲಿ ಅಪಾರ ಕೆಲಸ ಮಾಡಿರುವ ಬಗ್ಗೆ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2009ರಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪಬ್‍ಗೆ ಹೋಗಿ ಅಲ್ಲಿಯ ಸಹೋದರಿಯರಿಗೆ ಇದು ನಮ್ಮ ಸಂಸ್ಕೃತಿ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ಯುವತಿಯ ಪೋಷಕರ ತಂದೆ-ತಾಯಿ ಅವರೇ ಬಂದು ಶ್ರೀರಾಮ ಸೇನೆ ಕಾರ್ಯಕರ್ತರಿಗೆ ಅವರಿಗೆ ಧನ್ಯವಾದ ಹೇಳಿದ್ದರು. ಪಬ್‍ಗಳು ನಿಷೇಧಿಸಬೇಕು ಎಂದು ಶಿವಸೇನೆ ಹೇಳುತ್ತಿಲ್ಲ. ಆದ್ರೆ ತಡರಾತ್ರಿಗಳಲ್ಲೂ ಪಬ್‍ಗಳು ತರೆದಿರುವುದಕ್ಕೆ ವಿರೋಧವಿದೆ ಎಂದು ಶಿವಪ್ರಸಾದ್ ಜೋಶಿ ಹೇಳಿದರು.