Tag: Srirama Mandir

  • ಕನ್ನಡದ ಚಿತ್ರರಂಗ ಕಲಾವಿದರಿಂದ ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ಕನ್ನಡದ ಚಿತ್ರರಂಗ ಕಲಾವಿದರಿಂದ ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಶದ್ಯಾಂತ ಹಣ ಸಂಗ್ರಹಿಸಲಾಗುತ್ತಿದೆ. ಈ ಮಧ್ಯೆ ಕನ್ನಡ ಚಿತ್ರರಂಗ ಕಲಾವಿದರು ಭಕ್ತಿಯಿಂದ ತಮ್ಮ ತಮ್ಮ ನಿಧಿಯನ್ನು ಶ್ರೀರಾಮನಿಗೆ ಸಮರ್ಪಿಸಿದ್ದಾರೆ.

    ನಿಧಿ ಸ್ವೀಕರಿಸಿ ಮಾತನಾಡಿದ ಸಂಘದ ಹಿರಿಯರು ಮತ್ತು ಅಭಿಯಾನದ ಪ್ರಮುಖರಾದ ನಾ. ತಿಪ್ಪೇಸ್ವಾಮಿ ಜಿ, ಶ್ರೀರಾಮ ಪ್ರತಿಯೊಬ್ಬರ ಆದರ್ಶ ಪುರುಷ. ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಇಡೀ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಡವ, ಶ್ರೀಮಂತ ಎನ್ನುವ ಭೇದ, ಭಾವ ಇಲ್ಲದೆ ಪ್ರತಿಯೊಬ್ಬರೂ ಇದು ನಮಗೆ ಸಿಕ್ಕಿದ ಆಜನ್ಮ ಪುಣ್ಯ ಎಂದು ತಿಳಿದು ತಮ್ಮ ಪಾಲಿನ ನಿಧಿ ಸಮರ್ಪಿಸುತ್ತಿದ್ದಾರೆ ಎಂದು ಹೇಳಿದರು.

    ನಿಧಿ ಸಮರ್ಪಣೆ ಬಗ್ಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಸುನಿಲ್ ಪುರಣಿಕ್, ಕಲಾವಿದರು ಮುಕ್ತ ಮನಸ್ಸಿನಿಂದ ಶ್ರೀರಾಮ ಕಾರ್ಯ ಮಾಡಲು ಸಿದ್ಧರಾಗಿದ್ದಾರೆ. ಇದು ಮೊದಲ ಸುತ್ತು ಇನ್ನು ಬಹಳಷ್ಟು ಜನ ಕೊಡುವವರಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಪವನ್ ಒಡೆಯರ್, ರೂಪ ಐಯ್ಯರ್, ಪ್ರಮೀಳಾ ಸುಬ್ರಹ್ಮಣ್ಯ, ಅನಿರುದ್ಧ ಬಾಲಾಜಿ, ಮಾಲತಿ ದೇಶಪಾಂಡೆ, ಸ್ವಾತಿ, ಯಮುನಾ, ಭಾಸ್ಕರ್, ಬಿರಾದಾರ್, ಶಿವಕುಮಾರ್ ಆರಾಧ್ಯ ಎಲ್ಲರೂ ನಿಧಿ ಸಮರ್ಪಣೆ ಮಾಡಿದರು.

  • 500 ಬಾರಿ ಶ್ರೀರಾಮನ ಹೆಸರು ಜಪಿಸಲು ಮುತಾಲಿಕ್ ಕರೆ

    500 ಬಾರಿ ಶ್ರೀರಾಮನ ಹೆಸರು ಜಪಿಸಲು ಮುತಾಲಿಕ್ ಕರೆ

    ಧಾರವಾಡ: ಜೂನ್ 10 ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಾರಂಭದ ದಿನವಾದ್ದರಿಂದ ಆ ದಿನ ದೇಶದ ಎಲ್ಲ ಹಿಂದೂ ಧರ್ಮದವರು ದೇವಸ್ಥಾನಗಳಲ್ಲಿ 500 ಬಾರಿ ಶ್ರೀರಾಮ ಜಯ ರಾಮ, ಜೈ ಜೈ ರಾಮ್ ಎಂಬ ಮಂತ್ರವನ್ನು ಜಪಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸುಮಾರು 500 ವರ್ಷಗಳ ನಂತರ ಶ್ರೀರಾಮನ ಮಂದಿರ ತನ್ನ ಮೂಲ ಸ್ಥಳದಲ್ಲಿ ಮರುನಿರ್ಮಾಣವಾಗುತ್ತಿದೆ. 70 ಯುದ್ಧಗಳು 30 ಲಕ್ಷ ಜನರ ಬಲಿದಾನವಾಗಿದೆ. ಈ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಜೂನ್ 10 ದೇವಸ್ಥಾನ ಮರುನಿರ್ಮಾಣಕ್ಕೆ ಪ್ರಾರಂಭದ ದಿನವಾಗಿದೆ. ಆ ದಿನ ಎಲ್ಲರೂ 500 ಬಾರಿ ಶ್ರೀರಾಮ ಜಯ ರಾಮ, ಜೈ ಜೈ ರಾಮ್ ಮಂತ್ರವನ್ನು ಜಪಿಸಿ ಬೆಂಬಲಿಸಬೇಕು ಎಂದಿದ್ದಾರೆ.

    ರಾಮ ಮಂದಿರಗಳಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿಸಬೇಕು. ಈ ಕುರಿತು ಭಕ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.