Tag: Srinivas Thimmaiah

  • ಗುಂಡ-ಶಂಕ್ರನ ಭಾವನಾತ್ಮಕ ಬಾಂದವ್ಯಕ್ಕೆ ಪ್ರೇಕ್ಷಕನ ಕಣ್ಣಾಲಿಗಳು ಒದ್ದೆ!

    ಗುಂಡ-ಶಂಕ್ರನ ಭಾವನಾತ್ಮಕ ಬಾಂದವ್ಯಕ್ಕೆ ಪ್ರೇಕ್ಷಕನ ಕಣ್ಣಾಲಿಗಳು ಒದ್ದೆ!

    ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕ ನಟನನಾಗಿ ಅಭಿನಯಿಸಿರುವ ನಾನು ಮತ್ತು ಗುಂಡ ಚಿತ್ರ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಯಿ ಮತ್ತು ಮಾಲೀಕನ ನಡುವಿನ ಭಾವನಾತ್ಮಕ ಸಂಬಂಧವಿರುವ ಈ ಚಿತ್ರದ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿತ್ತು. ಇಂದು ಚಿತ್ರ ಬಿಡುಗಡೆಯಾಗಿ ಆ ನಿರೀಕ್ಷೆಯನ್ನು ಗೆದ್ದಿದೆ.

    ಆಟೋ ಡ್ರೈವರ್ ಶಂಕ್ರ, ಕವಿತ ಇಬ್ಬರು ಮಧ್ಯಮ ವರ್ಗದ ಸಾಮಾನ್ಯ ಗಂಡ ಹೆಂಡತಿ. ಮಕ್ಕಳಿಲ್ಲದ ಕೊರಗಿನಿಂದ ದಿನಾ ಕುಡಿಯುತ್ತಿದ್ದ ಶಂಕ್ರನಿಗೆ ಗುಂಡ ಎಂಬ ನಾಯಿ ಸಿಗುತ್ತೆ. ಪ್ರತಿನಿತ್ಯ ಸಿಗ್ತಿದ್ದ ಗುಂಡನ ಜೊತೆ ಶಂಕ್ರನಿಗೆ ಆತ್ಮೀಯತೆ ಬೆಳೆಯುತ್ತೆ. ಅದೇ ಪ್ರೀತಿಯಿಂದ ಮನೆಗೆ ಗುಂಡನನ್ನು ಕರೆದುಕೊಂಡು ಬಂದು ಮುದ್ದಾಗಿ ಸಾಕುತ್ತಿರುತ್ತಾನೆ. ಆದ್ರೆ ಹೆಂಡತಿ ಕವಿತಳಿಗೆ ಇದು ಇಷ್ವವಿರೋದಿಲ್ಲ. ಹೀಗೆ ಶಂಕ್ರು ಮತ್ತು ಗುಂಡನ ಆತ್ಮೀಯತೆ, ಗೆಳೆತನ ಗಟ್ಟಿಯಾಗಿರುವಾಗ ಗುಂಡ ಸೇಟು ಮನೆಯ ಕಳೆದೋದ ನಾಯಿ ಎನ್ನುವುದು ಗೊತ್ತಾಗುತ್ತೆ.

    ಕವಿತಾ ಗುಂಡನನ್ನು ಸೇಟುಗೆ ಕೊಡ್ತಾಳೆ ಇದು ಶಂಕ್ರು ಮನಸ್ಸಿಗೆ ನೋವನ್ನುಂಟು ಮಾಡುತ್ತೆ. ಗುಂಡನನ್ನು ಕೊಟ್ಟ ಮೇಲೆ ಮರುಗೋ ಶಂಕ್ರ ಪ್ರತಿನಿತ್ಯ ಸೇಟು ಮನೆಗೆ ಗುಂಡನನ್ನು ನೋಡಲು ಹೋಗ್ತಿರುತ್ತಾನೆ. ಹೀಗೆ ಭಾವನಾತ್ಮಕವಾಗಿ ಸಾಗೋ ಸಿನಿಮಾ ಕಣ್ಣಂಚಲ್ಲಿ ನೀರು ತರಿಸುತ್ತೆ. ಹೀಗೆ ಸಾಗುತ್ತಾ ಹೋಗೋ ಕಥೆ ದ್ವಿತಿಯಾರ್ಧದಲ್ಲಿ ಹೊಸ ತಿರುವನ್ನೆ ಪಡೆದುಕೊಳ್ಳುತ್ತೆ. ಗುಂಡ ಮತ್ತೆ ಶಂಕ್ರು ಬಳಿ ಬರ್ತಾನಾ? ಕವಿತಾ ಗುಂಡನನ್ನು ಪ್ರೀತಿಸುತ್ತಾಳ ಅನ್ನೋದಕ್ಕೆ ನೀವು ಸಿನಿಮಾ ನೋಡಲೇ ಬೇಕು. ಆದ್ರೆ ಚಿತ್ರಮಂದಿರದಿಂದ ಬರ್ತಾ ನಿಮ್ಮ ಕಣ್ಣುಗಳು ಮಾತ್ರ ಒದ್ದೆಯಾಗದೇ ಇರದು. ಅಷ್ಟು ಭಾವನಾತ್ಮಕವಾಗಿ ಕಥೆ ಹೆಣೆದಿದ್ದಾರೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ.

    ನಾಯಿ ಮತ್ತು ಮಾಲೀಕನ ಕಥೆ ಎಂದು ಚಿತ್ರಮಂದಿರದ ಒಳಗೆ ಹೊಕ್ಕ ಪ್ರೇಕ್ಷಕನಿಗೆ ಭಾವನಾತ್ಮಕ ಪ್ರಪಂಚ ಆವರಿಸಿಕೊಳ್ಳುತ್ತೆ. ಅಲ್ಲೇ ಇಡೀ ಚಿತ್ರತಂಡ ಗೆದ್ದು ಬಿಡುತ್ತೆ. ಇನ್ನು ಶಿವರಾಜ್ ಕೆ.ಆರ್.ಪೇಟೆ ಅಭಿನಯ ಮನಮುಟ್ಟುತ್ತದೆ. ತಮ್ಮ ಅಧ್ಬುತ ನಟನಾ ಶಕ್ತಿಯನ್ನು ತೆರೆ ಮೇಲೆ ತೋರಿಸಿದ್ದಾರೆ. ನಾಯಿ ಗುಂಡ ಕೂಡ ಅಧ್ಬುತವಾಗಿ ನಟಿಸಿದೆ. ಸಂಯುಕ್ತ ಹೊರನಾಡು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ನಾನು ಮತ್ತು ಗುಂಡ ಚಿತ್ರ ಪ್ರೇಕ್ಷಕನ ಮನಸ್ಸಿಗೆ ಬಹಳ ಹತ್ತಿರವಾಗಿದ್ದು ಎಲ್ಲರ ಮನಸ್ಸನ್ನು ಗೆದ್ದಿದೆ. ಜಯಭೇರಿ ಬಾರಿಸಿದೆ.

    ಚಿತ್ರ: ನಾನು ಮತ್ತು ಗುಂಡ
    ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
    ನಿರ್ಮಾಪಕ: ರಘು ಹಾಸನ್
    ಸಂಗೀತ: ಕಾರ್ತಿಕ್ ಶರ್ಮ
    ಛಾಯಾಗ್ರಹಣ: ಚಿದಾನಂದ್ ಕೆ.ಕೆ
    ತಾರಾಬಳಗ: ಶಿವರಾಜ್ ಕೆ.ಆರ್.ಪೇಟೆ. ಸಂಯುಕ್ತ ಹೊರನಾಡ್,ಸಿಂಬಾ (ನಾಯಿ ಗುಂಡ), ಇತರರು

    ರೇಟಿಂಗ್: 3.5 / 5

  • ಪ್ರೀಮಿಯರ್ ಶೋ ನೋಡಲು ನಿಮ್ಮ ಮುದ್ದಿನ ನಾಯಿಯೊಂದಿಗೆ ಬನ್ನಿ!

    ಪ್ರೀಮಿಯರ್ ಶೋ ನೋಡಲು ನಿಮ್ಮ ಮುದ್ದಿನ ನಾಯಿಯೊಂದಿಗೆ ಬನ್ನಿ!

    ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ ‘ನಾನು ಮತ್ತು ಗುಂಡ’ ಚಿತ್ರದ ಪ್ರೀಮಿಯರ್ ಶೋ ನಾಳೆ ಬೆಂಗಳೂರಿನ ನಗರ್ತರ ಪೇಟೆಯ ಶಾರದ ಚಿತ್ರಮಂದಿರದಲ್ಲಿ ಸಂಜೆ 7.15ಕ್ಕೆ ಆಯೋಜನೆ ಮಾಡಲಾಗಿದೆ.

    ವಿಶೇಷ ಎಂದರೇ ಇದು ಡಾಗ್ ಪ್ರೀಮಿಯರ್ ಶೋ. ‘ಸೀ ಇಟ್ ಫಸ್ಟ್ ವಿತ್ ಯುವರ್ ಡಾಗ್ಸ್’ ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಪ್ರೀಮಿಯರ್ ಶೋ ಆಯೋಜಿಸಿದೆ. ಭಾರತದ ಸಿನಿಮಾ ಇತಿಹಾಸದಲ್ಲಿ ಈ ರೀತಿಯ ವಿಭಿನ್ನ ಹೆಜ್ಜೆಯನ್ನ ‘ನಾನು ಮತ್ತು ಗುಂಡ’ ಚಿತ್ರತಂಡ ಇಟ್ಟಿದೆ.

    ಈ ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಒಂದು ಪುಟ್ಟ ನಾಯಿ ಅಭಿನಯಿಸಿದೆ. ಮುಗ್ಧನಾಯಿ ಗುಂಡ ಮತ್ತು ಅಟೋಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವನ್ನು ಚಿತ್ರ ತೋರಿಸುತ್ತದೆ. ಎಲ್ಲಿ ಬಿಟ್ಟು ಬಂದರು ಶಂಕ್ರನ ಹಿಂದೆ ಬರುವ ಮುಗ್ಧ ಗುಂಡನ ಜೊತೆ ಶಂಕ್ರನಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆಯುತ್ತದೆಯಂತೆ. ಈ ಭಾವನಾತ್ಮಕ ಸಿನಿಮಾವನ್ನು ನಿಮ್ಮ ನಾಯಿಗಳ ಜೊತೆಗೂಡಿ ನೋಡಿ ಎಂಬ ಸಂದೇಶ ನೀಡುತ್ತಾ ಈ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿದೆಯಂತೆ.

  • ‘ನಾನು ಮತ್ತು ಗುಂಡ’ನಿಗೆ ಶಬ್ಬಾಶ್ ಗಿರಿ!

    ‘ನಾನು ಮತ್ತು ಗುಂಡ’ನಿಗೆ ಶಬ್ಬಾಶ್ ಗಿರಿ!

    ಕಾಮಿಡಿ ಕಿಲಾಡಿಗಳು ಶಿವರಾಜ್ ಕೆ.ಆರ್.ಪೇಟೆ ನಟಿಸುತ್ತಿರುವ ಸಿನಿಮಾ ‘ನಾನು ಮತ್ತು ಗುಂಡ’. ಶಿವರಾಜ್ ಕೆ. ಆರ್ ಪೇಟೆ ಎಂದಾಕ್ಷಣಾ ಅಲ್ಲೊಂದು ಕಾಮಿಡಿ ನೆನಪಾಗುತ್ತದೆ. ಸಿನಿಮಾದಲ್ಲೂ ಕಾಮಿಡಿ ಇರಬಹುದು ಎಂಬ ಊಹೆ ಎಲ್ಲರಲ್ಲೂ ಮೂಡುತ್ತೆ. ಆದ್ರೆ ಈ ಸಿನಿಮಾ ಮನುಷ್ಯ ಹಾಗೂ ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧವನ್ನು ಅನಾವರಣಗೊಳಿಸಲು ಸಜ್ಜಾಗಿದೆ.

    ಸದ್ಯ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗೆ ಹೊಗಳಿಕೆಯ ಸುರಿಮಳೆ ಸುರೀತಾ ಇದೆ. ಸಿನಿಮಾ ಸೆನ್ಸಾರ್ ಗೆ ಹೋಗಿದ್ದು, ಶಬ್ಬಾಶ್ ಗಿರಿಯನ್ನ ಪಡೆದಿದೆ. ಸೆನ್ಸಾರ್ ನಿಂದ ಹೊಗಳಿಕೆ ಸಿಕ್ಕಿರುವ ಕಾರಣ ಚಿತ್ರತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಈಗಾಗಲೇ ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ, ಅಯ್ಯಯ್ಯೋ ರಾಮ ರಾಮ ಎಂಬ ಹಾಡನ್ನು ರಿಲೀಸ್ ಮಾಡಿದೆ. ಕ್ಯಾಚಿ ಲಿರಿಕ್ಸ್ ನಿಂದ ಹಾಡು ಎಲ್ಲರನ್ನು ಮನಸೂರೆಗೊಳಿಸಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಲಭ್ಯವಿದ್ದು, ಕೇಳಿ ಆನಂದಿಸಬಹುದು.

    ಹಾಡು ನೋಡಿದರೇ ಒಂದು ಹಂತಕ್ಕೆ ಸಿನಿಮಾ ಹೇಗಿರಬಹುದು ಎಂಬುದು ತಿಳಿಯುತ್ತದೆ. ಆಟೋ ಡ್ರೈವರ್ ಶಂಕರನ ಬೆನ್ನತ್ತೋ ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿ ಜನಮೆಚ್ಚುಗೆ ಪಡೆಯುತ್ತಿದೆ. ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರೋ ಕ್ಯಾಚಿ ಟ್ಯೂನ್‍ಗೆ ರೋಹಿತ್ ರಮಣ್ ಅಷ್ಟೇ ಕ್ಯಾಚಿಯಾಗಿರೋ ಸಾಹಿತ್ಯವನ್ನ ಕಟ್ಟಿದ್ದಾರೆ. ಈ ಹಾಡು ಚಿತ್ರಪ್ರೇಮಿಗಳ ಹಾಗೂ ಶ್ವಾನಪ್ರೇಮಿಗಳ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿದೆ.