Tag: Srinivas Poojary

  • ಕರ್ನಾಟಕವನ್ನು ಛಿದ್ರ ಮಾಡಲು ಸಿಎಂ ಹೊರಟಿದ್ದಾರೆ- ಪೂಜಾರಿ ಆಕ್ರೋಶ

    ಕರ್ನಾಟಕವನ್ನು ಛಿದ್ರ ಮಾಡಲು ಸಿಎಂ ಹೊರಟಿದ್ದಾರೆ- ಪೂಜಾರಿ ಆಕ್ರೋಶ

    ಉಡುಪಿ: ಕರ್ನಾಟಕದಲ್ಲಿ ಪ್ರತ್ಯೇಕತೆ ಕೂಗು ಎದ್ದಿದೆ. ಸಿಎಂ ಕುಮಾರಸ್ವಾಮಿ ಕರ್ನಾಟಕವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿಗೆ ಕರ್ನಾಟಕವನ್ನು ಛಿದ್ರವಾಗಿ ನೋಡುವ ಅಸೆ ಇದೆಯೇ? ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ಹೊಣೆಗೇಡಿತನದಿಂದ ಮಾತನಾಡುವುದು ನಿಲ್ಲಿಸಿ. ತಾರತಮ್ಯ ಮಾಡುವುದನ್ನು ಪಲಾಯನ ಸೂತ್ರವನ್ನು ಅನುಸರಿಸಬೇಡಿ. ಅಪಸ್ವರ, ಆಕ್ರೋಶ ಇದ್ದ ಜನ ಪ್ರತಿನಿಧಿಗಳನ್ನು ಕರೆಸಿ ಮಾತನಾಡಿ. ಪ್ರತ್ಯೇಕತೆ ಧನಿಗೆ ಸಿಎಂ ಕುಮಾರಸ್ವಾಮಿ ಕಾರಣ ಅಂತ ಅವರು ಆಕ್ರೋಶ ವ್ಯಕ್ತಪಡಿಸಿದ್ರು

    ಕೈ-ತೆನೆ ಶಾಸಕರು ಬಿಜೆಪಿಯತ್ತ:
    ಪ್ರತ್ಯೇಕತಾ ಹೋರಾಟದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ನಾವು ಯಾವ ಪಕ್ಷದ ಶಾಸಕರನ್ನು ಸೆಳೆಯಲ್ಲ. ಶಾಸಕರೇ ಬಿದ್ದರೆ ನಮ್ಮ ತಪ್ಪಿಲ್ಲ. ಕಾಂಗ್ರೆಸ್ ಗೆ ಜೆಡಿಎಸ್ ಎಂಬ ಧೃತರಾಷ್ಟ್ರನ ಆಲಿಂಗನವಾಗಿದೆ. ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್ ನ ಶಾಸಕರೇ ಮರುಗುತ್ತಿದ್ದಾರೆ. ಎಷ್ಟು ಜನ ಬಿಜೆಪಿಗೆ ಒಲವು ತೋರಿದ್ದಾರೆ ಅನ್ನೋ ಲೆಕ್ಕವನ್ನು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೊಡುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಆದ ಅನ್ಯಾಯದಿಂದ ಶಾಸಕರು ಬಿಜೆಪಿಗೆ ಒಲವು ತೊರಿರಬಹುದು ಎಂದು ಹೇಳಿದರು.

    ಇವರಿಗೆ ಶಾಸನ ಬೇಡ- ಶಾಸ್ತ್ರ ಮಾತ್ರ ಬೇಕು:
    ರಾಜ್ಯ ಸರ್ಕಾರ ಶಾಸನದ ಮೇಲೆ ಆಡಳಿತ ನಡೆಸುತ್ತಿಲ್ಲ. ಸರ್ಕಾರ ಶಾಸ್ತ್ರದ ಆಧಾರದ ಮೇಲೆ ನಡೆಯುತ್ತಿದೆ. ಸಚಿವ ರೇವಣ್ಣ ಗಳಿಗೆ ಗಂಡಾಂತರ, ರಾಹುಕಾಲ ಗುಳಿಗಕಾಲ ನೋಡಿಕೊಂಡು ಕೆಲಸ ಮಾಡುತ್ತಾರೆ ಎಂದು ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದರು. ರೇವಣ್ಣ ಗಳಿಗೆ ನೋಡುತ್ತಾ ಸದನ ಮುಂದೂಡುತ್ತಾ ಬರುತ್ತಿದ್ದಾರೆ ಎಂದು ಟೀಕಿಸಿದರು.

    ಧ್ವಜ ಹಾರಿಸಲು ಮಂತ್ರಿಗಳೇ ಇಲ್ಲ:
    ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿ ನೇಮಕವಾಗಿಲ್ಲ. ಆಗಸ್ಟ್ 15 ಕ್ಕೆ ರಾಷ್ಟ್ರಧ್ವಜ ಆರೋಹಿಸಲು ಜನ ಬೇಕಲ್ವಾ ಅಂತ ಪ್ರಶ್ನೆ ಮಾಡಿದರು. ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಉಸ್ತುವಾರಿ ಮಂತ್ರಿ ನೇಮಕಕ್ಕೂ ಶಾಸ್ತ್ರ ನೋಡುವ ಪರಿಸ್ಥಿತಿ ಬಂದಿದೆ ಎಂದರು.

    ಸಮನ್ವಯ ಸಮಿತಿ ಜಗಳ ಬಿಡಿಸುವ ಸಮಿತಿಯಾಗಿದೆ. ಜಗಳ ಮಾಡುವ ಮನಸ್ಥಿತಿಯವರೇ ಅದರ ಅಧ್ಯಕ್ಷರು ಅಂತ ಮಾಜಿ ಸಿಎಂ ಸಿದ್ದರಾಮಯ್ಯಗೆ ಪೂಜಾರಿ ಕುಟುಕಿದರು.

  • ದಿನೇಶ್ ಅಮಿನ್ ಮಟ್ಟು ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ

    ದಿನೇಶ್ ಅಮಿನ್ ಮಟ್ಟು ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ

    ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನಿಯಮ 68 ರಲ್ಲಿ ವಿಧಾನ ಪರಿಷತ್ ನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಕೋಮು ಗಲಭೆಗಳ ಕೊಲೆಗಳಾದಾಗ ಧರ್ಮ ಜಾತಿ ರಾಜಕಾರಣ ಮಾಡಬೇಡಿ. ಕುದ್ರೋಳಿ ದೇವಸ್ಥಾನಕ್ಕೆ ಸಂಘ ಪರಿವಾರದವರು ಬಂದು ಜನಾರ್ದನ ಪೂಜಾರಿ ಹಾಳಾಗಿದ್ದಾರೆ ಎಂದು ದಿನೇಶ್ ಅಮೀನ್ ಮಟ್ಟು ಮಾತಾನಾಡುತ್ತಾರೆ. ಮಾಧ್ಯಮ ಸಲಹೆಗಾರರು ಹೀಗೆ ಮಾತಾಡುವುದು ಸರಿಯಲ್ಲ ಎಂದು ಹೇಳಿದರು.

    ಗೌರಿ ಹತ್ಯೆಗೈದವರನ್ನು ಹಿಡಿಯಬೇಕಾದವರು ರಾಜ್ಯ ಸರ್ಕಾರ. ಆದರೆ ಮಂಗಳೂರಿನಲ್ಲಿ ಮಾನವ ಸರಪಳಿ ಮಾಡಿ “ನಾನು ಗೌರಿ ನಾವೆಲ್ಲ ಗೌರಿ” ಎಂದು ಹೇಳುವುದು ಎಷ್ಟು ಸರಿ? ಅಧಿಕಾರ ನಿಮ್ಮ ಕೈಯಲ್ಲಿದ್ದು ನೀವೇ ಹಿಡಿಯಬೇಕು. ಗೌರಿಗೆ ಹೇಳಿದಂತೆ “ನಾನು ಸಂತೋಷ್, ನಾನು ಪರೇಸ್ ಮೆಸ್ತಾ” ಎಂಬುದಾಗಿ ಯಾಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್

    ಪರೇಶ್ ಮೆಸ್ತಾ ಸಾವು ಸಹಜ ಸಾವು ಎಂದು ಸರ್ಕಾರ ಹೇಳಿದೆ. ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಸಂತೋಷ್ ಕೊಲೆ ಮಾಡಲಾಗಿದೆ ಎಂದು ಎಂದು ಗೃಹ ಸಚಿವರು ಹೇಳ್ತಾರೆ. ನಮಗೆ ದೀಪಕ್, ಬಷೀರ್ ಹತ್ಯೆ ಎರಡು ಒಂದೇ ಎಂದು ಹೇಳಿದರು. ಇದನ್ನೂ ಓದಿ: ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು

    ಮಂಗಳೂರು ಎಸ್.ಪಿ. ಸುಧೀಂದ್ರ ರೆಡ್ಡಿ ವರ್ಗಾವಣೆ ವಿಷಯ ಪ್ರಸ್ತಾಪಿಸಿದ ಅವರು ಸುಧೀಂದ್ರ ರೆಡ್ಡಿ ಅವರನ್ನು ವರ್ಗಾವಣೆ ಯಾಕೆ ಮಾಡಿದ್ರಿ? ಅಕ್ರಮ ಮರಳುಗಾರಿಕೆ ಮಾಡಿದ್ದಕ್ಕೆ ವರ್ಗಾವಣೆ ಮಾಡಿದ್ದೀರಿ. ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನ ಎತ್ತಂಗಡಿ ಮಾಡಿತ್ತಿದ್ದೀರಿ ಎಂದು ಹೇಳಿ ಸರ್ಕಾರದ ವಿರುದ್ಧ ಪೂಜಾರಿ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟರ ಹಿಂದೂ ಧರ್ಮಕ್ಕೆ ಧಿಕ್ಕಾರ, ಮೋದಿ ದೊಡ್ಡ ಜಾದೂಗಾರ: ಅಮೀನ್ ಮಟ್ಟು