ಮೈಸೂರು: ಭಾರೀ ಕುತೂಹಲ ಕೆರಳಿಸಿದ್ದ ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರಕ್ಕೆ ಎರಡು ಬಾರಿ ಸಂಸದರಾಗಿದ್ದ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಈ ಬಾರಿ ಕಣಕ್ಕಿಳಿದಿದ್ದಾರೆ. ಗೆಲುವಿನ ವಿಶ್ವಾಸ ಹೊಂದಿರುವ ಯದುವೀರ್ ಅವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ರಾಜಕೀಯ ಜೀವನದಿಂದ ಏನು ಬದಲಾವಣೆ ಕಂಡಿದ್ದೀರಿ?
ಯದುವೀರ್: ಮೊದಲೆಲ್ಲ ಎರಡು ಕಾರ್ಯಕ್ರಮಗಳು ಇರ್ತಿದ್ದವು, ಈಗ ದಿನದಲ್ಲಿ 10 ಕಾರ್ಯಕ್ರಮ ಆಗ್ತಿದೆ. ಸಾರ್ವಜನಿಕ ಜೀವನ ಬಂದಾಗ ಜನರಿಗೆ ಮತ್ತು ಜನ ಸೇವೆಗೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಅದರೊಂದಿಗೆ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ.
ಜೆಡಿಎಸ್ ಮುಖಂಡರನ್ನೂ ಹೇಗೆ ಸರಿದೂಗಿಸುತ್ತೀರಿ?
ಯದುವೀರ್: ಎರಡೂ ಪಕ್ಷಗಳ ಮುಖಂಡರ ನಡುವೆ ಹೊಂದಾಣಿಕೆ ಸ್ವಾಭಾವಿಕವಾಗಿದೆ. ಹೋದಲೆಲ್ಲ ಕಾರ್ಯಕರ್ತರಿಂದ ನಾಯಕರವರೆಗೂ ಒಳ್ಳೆಯ ಸಹಕಾರ ಸಿಗುತ್ತಿದೆ. ಇದು ಚುನಾವಣೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ಇದನ್ನೂ ಓದಿ: ಉತ್ತರ ಗೆದ್ದರೆ ಡೆಲ್ಲಿ ಗೆದ್ದಂತೆ! -ಯಾಕೆ ಉತ್ತರ ಪ್ರದೇಶಕ್ಕೆ ಇಷ್ಟೊಂದು ಮಹತ್ವ?
ರಾಜನಾದವರು ಸಾಮಾನ್ಯನಾಗಿ ಕೆಲಸ ಮಾಡ್ತಾರಾ?
ಯದುವೀರ್: ನಾನು ಮೊದಲಿನಿಂದಲೂ ಸ್ವಾಭಾವಿಕವಾಗಿದ್ದೇನೆ. ನೋಡುವ ದೃಷ್ಟಿಕೋನ ಬದಲಾಗಿರಬಹುದು ಅಷ್ಟೆ. ನಾನು ಮಾತ್ರ ಅಲ್ಲ ನಮ್ಮ ಪೂರ್ವಜರೂ ಜನರ ಜೊತೆಗೆ ಇದ್ದು, ಜನಸೇವೆ ಮಾಡಿದವರು. ನಮ್ಮ ತಾತನವರೂ ಸಾರ್ವಜನಿಕರ ಮಧ್ಯೆ ಇದ್ದು ಕೆಲಸ ಮಾಡಿದ್ದಾರೆ. ಭಾರತದಲ್ಲಿ ರಾಜಧರ್ಮ ಬಹಳ ಸ್ಪಷ್ಟವಾಗಿದೆ. ರಾಜ ಅಂದ್ರೆ ಒಡವೆ ಹಾಕಿಕೊಂಡು ಅರಮನೆಯಲ್ಲಿ ಕೂರುವುದಲ್ಲ. ಜನರ ಸೇವೆಗಾಗಿ ನಿಂತಿರುವ ವ್ಯಕ್ತಿ ನಿಜವಾದ ರಾಜ ಆಗ್ತಾನೆ.
ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದರಿಂದ ವಿರೋಧ ಕೇಳಿಬಂತಾ?
ಯದುವೀರ್: ವಿರೋಧ ಯಾರಿಂದಲೂ ಬಂದಿಲ್ಲ. ಪ್ರತಾಪ್ ಸಿಂಹ ಯಾವಾಗಲೂ ನಮ್ಮ ಸಂಪರ್ಕದಲ್ಲಿದ್ದರು, ಅವರು ಒಳ್ಳೆಯ ಮನುಷ್ಯ, ಭವಿಷ್ಯದಲ್ಲಿ ಅವರ ಹೆಸರು ಶಾಶ್ವತವಾಗಿರುತ್ತೆ. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು
ಜನರಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ, ಹೇಗೆ ಪೂರೈಸುತ್ತೀರಾ?
ಯದುವೀರ್: ಜನರಿಗೆ ನಿರೀಕ್ಷೆಯಿದ್ದರೆ ಒಳ್ಳೆಯದು, ಜನಸೇವೆ ಮಾಡೋದಕ್ಕೆ ಸಿದ್ಧನಾಗಿದ್ದೀನಿ. ನಿರೀಕ್ಷೆ ದೊಡ್ಡದಾಗಿದ್ದರೆ, ಅದನ್ನೂ ಪೂರೈಸಲು ನಾನು ಕೈಲಾದ ಪ್ರಯತ್ನ ಮಾಡ್ತೀನಿ. ಪ್ರಧಾನಿ ಮೋದಿ ಅವರ ನಿರೀಕ್ಷೆಗೆ ಪೂರಕವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ.
ಮೈಸೂರು: ರಾಜಮಹಾರಾಜರ ಕಾಲದಿಂದಲೂ ಮೈಸೂರು (Mysuru Lok Sabha) ವಿಶ್ವವಿಖ್ಯಾತಿ ಪಡೆದಿದೆ. ಘಟಾನುಘಟಿ ನಾಯಕರು ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಆದರೆ ಮೈಸೂರಿನಿಂದ ಗೆದ್ದವರು ಈವರೆಗೆ ಕೇಂದ್ರದಲ್ಲಿ ಮಂತ್ರಿಯಾಗಲು ಸಾಧ್ಯವಾಗಿಲ್ಲ.
ಮೈಸೂರು ಲೋಕಸಭಾ ಕ್ಷೇತ್ರ 1952 ರಿಂದಲೂ ಅಸ್ತಿತ್ವದಲ್ಲಿದೆ. ಕಾಂಗ್ರೆಸ್ನ ಎಸ್.ಎಂ.ಸಿದ್ದಯ್ಯ ಸತತ ನಾಲ್ಕು ಬಾರಿ ಗೆದ್ದರೂ ಮಂತ್ರಿಯಾಗಲಿಲ್ಲ. ಹೆಚ್.ಡಿ.ತುಳಸಿದಾಸ್ ಅವರು ಸತತ ಮೂರು ಬಾರಿ ಗೆದ್ದರೂ ಮಂತ್ರಿಯಾಗಲಿಲ್ಲ. ಆದರೆ ಅವರ ತಂದೆ ಹೆಚ್.ಸಿ.ದಾಸಪ್ಪ 1952 ರಲ್ಲಿ ಮೈಸೂರಿನಲ್ಲಿ ಸೋತಿದ್ದರು. ನಂತರ ಅವರು ಎರಡು ಬಾರಿ ಬೆಂಗಳೂರಿನಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದರು. ಇದನ್ನೂ ಓದಿ: ಕಡಿಮೆ ಅಂತರದ ಗೆಲುವು-ಸೋಲು ಕಂಡ ‘ಧೃವ’ ತಾರೆ! ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದ್ದ ಧೃವನಾರಾಯಣ್
ಒಡೆಯರ್ 1984, 1989 ರಲ್ಲಿ ಸತತ ಎರಡು ಬಾರಿ ಗೆದ್ದರೂ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ. ಮೊದಲ ಬಾರಿ ಸದಸ್ಯರು ಎಂಬ ಕಾರಣದಿಂದ 1984 ರಲ್ಲಿ ಅವಕಾಶ ಸಿಗಲಿಲ್ಲ. ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೇ ಮಂತ್ರಿಯಾಗಬಹುದು ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1991 ರಲ್ಲಿ ಬಿಜೆಪಿ ಸೇರಿ ಅಭ್ಯರ್ಥಿಯಾಗಿ ಸೋತರು.
ಮತ್ತೆ ಕಾಂಗ್ರೆಸ್ಗೆ ವಾಪಸ್ ಆಗಿ 1996 ಹಾಗೂ 1999 ರಲ್ಲಿ ಗೆದ್ದರೂ ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. 1996 ರಲ್ಲಿ ಮೊದಲ ಹನ್ನೊಂದು ತಿಂಗಳು ಹೆಚ್.ಡಿ.ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರ್ಕಾರ, ನಂತರ ಐ.ಕೆ.ಗುಜ್ರಾಲ್ ನೇತೃತ್ವದ ಸರ್ಕಾರ, 1999 ರಲ್ಲಿ ಎ.ಬಿ.ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ. ಹೀಗಾಗಿ ಒಡೆಯರ್ ನಾಲ್ಕು ಬಾರಿ ಗೆದ್ದರೂ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ
ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ಗೆ (Srikantadatta Narasimharaja Wadiyar) ಕೇಂದ್ರದಲ್ಲಿ ಮಂತ್ರಿ ಆಗಬೇಕು ಎಂಬ ಮಹದಾಸೆ ಇತ್ತು. ಆದರೆ ನಾಲ್ಕು ಬಾರಿ ಗೆದ್ದರೂ ಅವರಿಗೆ ಮಂತ್ರಿ ಆಗುವ ಯೋಗವೇ ಬರಲಿಲ್ಲ.
ಒಡೆಯರ್ 1984, 1989, 1996 ಹಾಗೂ 1999 ಹೀಗೆ ನಾಲ್ಕು ಬಾರಿ ಗೆದ್ದರೂ ಕೇಂದ್ರದಲ್ಲಿ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಮೊದಲ ಬಾರಿ ಗೆದ್ದಾಗ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು. ಆದರೆ ಒಡೆಯರ್ ಮೊದಲ ಬಾರಿ ಎಂಬ ಕಾರಣಕ್ಕೆ ಮಂತ್ರಿ ಸಿಗಲಿಲ್ಲ. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
1989 ರಲ್ಲಿ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. 1996 ರಲ್ಲಿ ಮೂರನೇ ಬಾರಿ ಗೆದ್ದಾಗ ಹೆಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರ್ಕಾರಗಳಿದ್ದವು. ಇದನ್ನೂ ಓದಿ: ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!
1999 ರಲ್ಲಿ ಗೆದ್ದಾಗ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ. 2004 ರಲ್ಲಿ ಡಾ. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಮೈಸೂರಿನಲ್ಲಿ ಒಡೆಯರ್ ಸೋತಿದ್ದರು. ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಅವಕಾಶ ಅವರಿಗೆ ಸಿಗಲಿಲ್ಲ. ಹೀಗಾಗಿ ಕೇಂದ್ರದಲ್ಲಿ ಮಂತ್ರಿ ಆಗುವ ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು.
ಮೈಸೂರು: ಲೋಕಸಭೆಗೆ (Lok Sabha Election 2024) 14ನೇ ಸಾರ್ವತ್ರಿಕ ಚುನಾವಣೆ 2004 ರಲ್ಲಿ ನಡೆಯಿತು. ಮೈಸೂರು (Mysuru) ಹಾಗೂ ಚಾಮರಾಜನಗರ (Chamarajanagara) ಎರಡೂ ಕಡೆಯೂ ಕಾಂಗ್ರೆಸ್ ಅಭ್ಯರ್ಥಿಗಳು ಸೋತರು. ಮೈಸೂರಿನಲ್ಲಿ ಹಾಲಿ ಸಂಸದರಾಗಿದ್ದ ಕಾಂಗ್ರೆಸ್ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಸೋತಿದ್ದಲ್ಲದೆ ಮೂರನೇ ಸ್ಥಾನಕ್ಕೆ ಕುಸಿದರು.
ಬಿಜೆಪಿಯ ಸಿ.ಹೆಚ್.ವಿಜಯಶಂಕರ್ (C.H.Vijayashankar) ಗೆದ್ದರು. ಒಡೆಯರ್ ಅವರಿಗೆ ಇದು ಎರಡನೇ ಸೋಲು. 1991 ರಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು. ಕಾಂಗ್ರೆಸ್ನಿಂದ 1984, 1989, 1996 ಹಾಗೂ 1999- ಹೀಗೆ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಮರಳಿ ‘ಕೈ’ ಹಿಡಿದು ಮತ್ತೆ ಗೆದ್ದ ಒಡೆಯರ್!
ಮೈಸೂರಿನಲ್ಲಿ (Mysuru Lok Sabha) ಜನತಾ ಪರಿವಾರ ಈವರೆಗೆ ಗೆದ್ದಿಲ್ಲ. 1996 ರಂತೆ ಈ ಚುನಾವಣೆಯಲ್ಲಿಯೂ ಆ ಪಕ್ಷದ ಅಭ್ಯರ್ಥಿ ಎ.ಎಸ್.ಗುರುಸ್ವಾಮಿ ಪ್ರಬಲ ಪೈಪೋಟಿ ನೀಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸೋತ ಒಡೆಯರ್!
ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ 9,57,267 ಮಂದಿ ಮತ ಚಲಾಯಿಸಿದ್ದರು. ಬಿಜೆಪಿಯ ಸಿ.ಹೆಚ್.ವಿಜಯಶಂಕರ್ 3,16,442 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್ನ ಎ.ಎಸ್.ಗುರುಸ್ವಾಮಿ- 3,06,292, ಕಾಂಗ್ರೆಸ್ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್- 2,99,227 ಮತಗಳನ್ನು ಪಡೆದರು.
ಮೈಸೂರು: ಕಾಂಗ್ರೆಸ್ನಲ್ಲಿದ್ದು (Congress) ನಂತರ ಬಿಜೆಪಿ ಸೇರಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಪುನಃ ಕಾಂಗ್ರೆಸ್ಗೆ ಮರಳಿ ಚುನಾವಣೆಯಲ್ಲಿ ಗೆದ್ದಿದ್ದರು.
ಲೋಕಸಭೆಗೆ 11ನೇ (Lok Sabha Election 2024) ಸಾರ್ವತ್ರಿಕ ಚುನಾವಣೆಯು 1996 ರಲ್ಲಿ ನಡೆಯಿತು. ಆಗ ರಾಜ್ಯಾದ್ಯಂತ ಜನತಾದಳದ ಅಲೆ. ಹೀಗಿದ್ದರೂ ಮೈಸೂರಿನಲ್ಲಿ ಜನತಾದಳ ಗೆಲ್ಲಲಿಲ್ಲ. 1984, 1989 ರಲ್ಲಿ ಕಾಂಗ್ರೆಸ್ (Congress) ಟಿಕೆಟ್ ಮೇಲೆ ಗೆದ್ದು, 1991 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಂಗ್ರೆಸ್ಗೆ ಮರಳಿ ಅಭ್ಯರ್ಥಿಯಾಗಿ ಗೆದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
ಆಗ ರಾಜ್ಯದಲ್ಲಿ ಹೆಚ್.ಡಿ.ದೇವೇಗೌಡರ (H.D.Deve Gowda) ನೇತೃತ್ವದ ಜನತಾದಳ ಸರ್ಕಾರ ಅಧಿಕಾರದಲ್ಲಿತ್ತು. ರಾಜ್ಯಾದ್ಯಂತ ಜನತಾದಳದ ಅಲೆ ಕಂಡು ಬಂದಿತ್ತು. ಇದರಿಂದಾಗಿಯೇ ಆ ಪಕ್ಷ 16 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ, ಕೊನೆಗೆ ದೇವೇಗೌಡರೇ ಪ್ರಧಾನಿಯಾಗಲು ಸಾಧ್ಯವಾಯಿತು.
ಆದರೆ ಮೈಸೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ನ ಒಡೆಯರ್ ಗೆದ್ದರು. ಜನತಾದಳದಿಂದ ಕಣದಲ್ಲಿದ್ದ ಜಿ.ಟಿ.ದೇವೇಗೌಡರು ಪ್ರಬಲ ಪೈಪೋಟಿ ನೀಡಿ, ಅಲ್ಪ ಮತಗಳ ಅಂತರದಿಂದ ಪರಾಭವಗೊಂಡರು. ಒಡೆಯರ್ಗೆ 2,58,299 ಮತ್ತು ಜಿ.ಟಿ.ದೇವೇಗೌಡರಿಗೆ 2,46,623 ಮತಗಳು ದೊರೆತಿದ್ದವು. ಇದನ್ನೂ ಓದಿ: ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!
ಮೈಸೂರು: ಲೋಕಸಭೆಗೆ 10ನೇ ಸಾರ್ವತ್ರಿಕ ಚುನಾವಣೆಯು 1991 ರಲ್ಲಿ ನಡೆಯಿತು. ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಮೊದಲ ಬಾರಿಗೆ ಸೋತರು.
ಮೈಸೂರಿನಲ್ಲಿ (Mysuru Lok Sabha) 10,86,432 ಮತದಾರರ ಪೈಕಿ ಶೇ.54.10 ರಷ್ಟು ಮಂದಿ ಅಂದರೆ 5,87,747 ಮಂದಿ ಮತ ಚಲಾಯಿಸಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984 ಹಾಗೂ 1989 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸುಲಭವಾಗಿ ಜಯ ಗಳಿಸಿದ್ದರು. 1984 ರಲ್ಲಿ ಕೇಂದ್ರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಒಡೆಯರ್ ಪ್ರಥಮ ಬಾರಿ ಗೆದ್ದಿದ್ದರಿಂದ ಮಂತ್ರಿ ಸ್ಥಾನ ಸಿಗಲಿಲ್ಲ. 1989 ರಲ್ಲಿ ಒಡೆಯರ್ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಜನತಾರಂಗ ಸರ್ಕಾರ ಅಧಿಕಾರಕ್ಕೆ ಬಂದಿತು. ಹೀಗಾಗಿ ಮಂತ್ರಿ ಆಗಲಿಲ್ಲ. ಇದನ್ನೂ ಓದಿ: ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!
1991ರ ವೇಳೆಗೆ ಅಯೋಧ್ಯೆ ರಾಮಮಂದಿರ (Ayodhya Ram Mandir) ವಿವಾದ ಜೋರಾಗಿತ್ತು. ಆಗ ಕೆಲವು ಹಿತೈಷಿಗಳು ಒಡೆಯರ್ ಅವರನ್ನು ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನೀವು ಮಂತ್ರಿಯಾಗಬಹುದು, ಬಿಜೆಪಿ ಸೇರಿ ಎಂದು ಪುಸಲಾಯಿಸಿದರು. ಇದನ್ನು ನಂಬಿದ ಒಡೆಯರ್ ಬಿಜೆಪಿ ಸೇರಿ ಅಭ್ಯರ್ಥಿಯಾದರು.
ಇದರಿಂದ ಕಾಂಗ್ರೆಸ್ನಲ್ಲಿ (Congress) ಅಭ್ಯರ್ಥಿಯ ಕೊರತೆ ಕಾಡಿತು. ಕೊನೆಗೆ ಒಡೆಯರ್ ವಿರುದ್ದ ಹುಣಸೂರಿನ ಅಂದಿನ ಶಾಸಕಿಯಾಗಿದ್ದ ಮಾಜಿ ಸಚಿವೆ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು (D. Devaraj Urs) ಪುತ್ರಿ ಚಂದ್ರಪ್ರಭ ಅರಸು (Chandra Prabha Urs) ಅವರನ್ನು ಕಾಡಿಬೇಡಿ ಒಪ್ಪಿಸಲಾಯಿತು. ಅವರು ಒಲ್ಲದ ಮನಸ್ಸಿನಿಂದ ಕಣಕ್ಕಿಳಿದಿದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
ಒಡೆಯರ್ ಪರ ಅಂದಿನ ಬಿಜೆಪಿಯ ಘಟಾನುಘಟಿ ನಾಯಕ ಎಲ್.ಕೆ.ಆಡ್ವಾಣಿ ಅವರು ಪುರಭವನ ಮೈದಾನದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಈಗಾಗಲೇ ಒಡೆಯರ್ ಗೆದ್ದಾಗಿದೆ ಎಂದು ಹೇಳಿದ್ದರು. ಆದರೆ ಫಲಿತಾಂಶ ಬಂದಾಗ ಚಂದ್ರಪ್ರಭ ಗೆದ್ದು, ಒಡೆಯರ್ ಸೋತರು. ಚಂದ್ರಪ್ರಭ ಅವರಿಗೆ 2,25,887 ಮತಗಳು ಬಂದರೆ ಒಡೆಯರ್ಗೆ 2,08,999 ಮತಗಳು ದೊರೆತಿದ್ದವು. ಸತತ ಎರಡನೇ ಬಾರಿಗೆ ಜನತಾಪಕ್ಷದಿಂದ ಕಣಕ್ಕಿಳಿದಿದ್ದ ಡಿ. ಮಾದೇಗೌಡರಿಗೆ 1,17,471 ಮತಗಳು ಬಂದಿದ್ದವು.
ಮೈಸೂರು: ಲೋಕಸಭೆಗೆ 9ನೇ ಸಾರ್ವತ್ರಿಕ ಚುನಾವಣೆ 1989ರಲ್ಲಿ ನಡೆಯಿತು. ಮೈಸೂರು (Mysuru Lok Sabha) ಸಾಮಾನ್ಯ ಕ್ಷೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಸತತ ಎರಡನೇ ಬಾರಿಗೆ ಗೆದ್ದಿದ್ದರು.
ಆ ಸಂದರ್ಭದಲ್ಲಿ ಜನತಾ ಪಕ್ಷ ವಿಭಜನೆಯಾಗಿತ್ತು. ಜನತಾದಳ ಹಾಗೂ ಜನತಾಪಕ್ಷ (ಜೆಪಿ) ಎಂದು ಇಬ್ಬಣಗಳಾಗಿ ಕಣದಲ್ಲಿತ್ತು. ಇದರಿಂದ ಕಾಂಗ್ರೆಸ್ಗೆ (Congress) ಸುಲಭ ಜಯ ಸಿಕ್ಕಿತು. ಮೈಸೂರು ಕ್ಷೇತ್ರದಲ್ಲಿ 10,52,491 ಮತದಾರರ ಪೈಕಿ ಶೇ.69.74 ರಷ್ಟು ಮತದಾನವಾಗಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡಯರ್ 3,84,888 ಮತಗಳು ಪಡೆದು ಬಹು ದೊಡ್ಡ ಅಂತರದಿಂದ ಗೆದ್ದಿದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
ಒಡೆಯರ್ ಸಮೀಪದ ಪ್ರತಿಸ್ಪರ್ಧಿ ಜನತಾಪಕ್ಷ (ಜೆಪಿ) ಅಭ್ಯರ್ಥಿ ಡಿ. ಮಾದೇಗೌಡ- 1,35,524, ಜನತಾದಳದ ಪ. ಮಲ್ಲೇಶ್- 1,31,905, ಬಿಜೆಪಿಯ ತೋಂಟದಾರ್ಯ- 25,398, ಪಕ್ಷೇತರರಾದ ಡಿ. ಕಾಳಸ್ವಾಮಿ- 7,013, ಪತ್ರಕರ್ತರಾಗಿದ್ದ ಶಫಿ ಅಹ್ಮದ್ ಷರೀಫ್ – 4,230, ಮೈಸೂರು ಗ್ರಾಹಕ ಪಂಚಾಯತ್ ಭಾಮಿ ವಿ. ಶೆಣೈ- 2,644 ಮತಗಳನ್ನು ಪಡೆದಿದ್ದರು. ಒಡೆಯರ್ ಅವರ ಈ ಗೆಲುವು ಅವತ್ತಿನ ಮಟ್ಟಿಗೆ ದಾಖಲೆ.
– ಕೆ.ಪಿ.ನಾಗರಾಜ್ ಮೈಸೂರು: ಲೋಕಸಭೆಗೆ (Mysuru Lok Sabha 2024) ಎಂಟನೇ ಸಾರ್ವತ್ರಿಕ ಚುನಾವಣೆಯು 1984 ರಲ್ಲಿ ನಡೆಯಿತು. ಆಗ ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಅವರು ಮೊದಲ ಬಾರಿ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಗೆದ್ದರು.
ಜನತಾಪಕ್ಷದ ಬೆಂಬಲದಿಂದ ಕಣಕ್ಕಿಳಿದಿದ್ದ ಅಂದಿನ ಹನೂರು ಶಾಸಕ ಕೆ.ಪಿ. ಶಾಂತಮೂರ್ತಿ 1,83,144 ಮತಗಳು, ಜನತಾಪಕ್ಷದ ಪಿ. ವಿಶ್ವನಾಥ್- 5,696 ಮತಗಳನ್ನು ಪಡೆದಿದ್ದರು.
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮಣಿಸಲು ಜನತಾಪಕ್ಷವು ನಗರದ ಪ್ರಪ್ರಥಮ ಮೇಯರ್ ಎಂಬ ಹೆಗ್ಗಳಿಕೆ ಹೊಂದಿದ್ದ ಪಿ. ವಿಶ್ವನಾಥ್ ಅವರಿಗೆ ಟಿಕೆಟ್ ನೀಡಿತ್ತು. ಅವರು ಶ್ರೀರಂಗಪಟ್ಟಣದಿಂದ ಒಂದು ಬಾರಿ, ಮೈಸೂರು ತಾಲೂಕಿನಿಂದ (ಈಗಿನ ಚಾಮುಂಡೇಶ್ವರಿ) ನಾಲ್ಕು ಬಾರಿ ಹಾಗೂ ಚಾಮರಾಜ ಕ್ಷೇತ್ರದಿಂದ ಒಂದು ಬಾರಿ-ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಹಲವಾರು ಖಾತೆಗಳ ಸಚಿವರಾಗಿದ್ದ ಕೆ. ಪುಟ್ಟಸ್ವಾಮಿ ಅವರ ಪುತ್ರ. ನಂತರ ಅವರ ಬದಲು ಅಂದು ಹನೂರು ಶಾಸಕರಾಗಿದ್ದ ಕೆ.ಪಿ. ಶಾಂತಮೂರ್ತಿ ಅವರನ್ನು ಕಣಕ್ಕಿಳಿಸಲಾಗಿತ್ತು.
ಆದರೆ ಆ ವೇಳೆಗೆ ‘ಬಿ’ ಫಾರಂ ವಿಶ್ವನಾಥ್ ಅವರ ಹೆಸರಿನಲ್ಲಿ ಸಲ್ಲಿಕೆಯಾಗಿದ್ದರಿಂದ ಅವರನ್ನು ಕಣದಿಂದ ನಿವೃತ್ತಗೊಳಿಸಿ, ಕೆ.ಪಿ. ಶಾಂತಮೂರ್ತಿ ಅವರನ್ನು ಜನತಾಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಹೀಗಾಗಿ ಅವರಿಗೆ ಎರಡೆಲೆ ಚಿಹ್ನೆ ದೊರೆತಿತ್ತು. ಈ ಚುನಾವಣೆಯಲ್ಲಿ ‘ಅರಮನೆ’ ಹಾಗೂ ‘ಗುಡಿಸಲು’ ನಡುವೆ ಹೋರಾಟ ಎಂದೇ ಪ್ರಚಾರ ಮಾಡಲಾಗಿತ್ತು. ಇದನ್ನೂ ಓದಿ: ನೀವು ಅರಮನೆಗೆ ಬರಬೇಕಿಲ್ಲ, ನಾನೇ ಹೊರಗೆ ಬರ್ತೀನಿ, ಸಾಮಾನ್ಯನಂತೆ ಕೆಲಸ ಮಾಡ್ತೀನಿ: ಯದುವೀರ್
ಆದರೆ ಇಂದಿರಾ ಗಾಂಧಿ (Indira Gandhi) ಅವರ ಹತ್ಯೆಯ ನಂತರ ನಡೆದ ಈ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 24 ರಲ್ಲಿ ಕಾಂಗ್ರೆಸ್ ಗೆದ್ದಿತು. ಬೆಂಗಳೂರು ದಕ್ಷಿಣ- ವಿ.ಎಸ್. ಕೃಷ್ಣಯ್ಯರ್, ಮಂಡ್ಯ- ಕೆ.ವಿ. ಶಂಕರಗೌಡ, ಕೋಲಾರ- ಡಾ.ವಿ. ವೆಂಕಟೇಶ್ ಹಾಗೂ ಬಿಜಾಪುರ- ಎಸ್.ಎಂ. ಗುರೆಡ್ಡಿ- ಈ ನಾಲ್ಕು ಕಡೆ ಮಾತ್ರ ಜನತಾಪಕ್ಷ ಗೆದ್ದಿತು.
ಭಾರೀ ಕುತೂಹಲ ಕೆರಳಿಸಿದ್ದ ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರಕ್ಕೆ ಎರಡು ಬಾರಿ ಸಂಸದರಾಗಿದ್ದ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರಿಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಗೆಲುವಿನ ವಿಶ್ವಾಸ ಹೊಂದಿರುವ ಯದುವೀರ್ ಅವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಯದುವೀರ್ ಅವರಿಗೆ ಬಿಜೆಪಿಯಿಂದ ಟಿಕೆಟ್ (BJP Ticket) ಸಿಕ್ಕಿರುವುದು ಮೈಸೂರಿನಲ್ಲಿ ರಾಜಪರಿವಾರದವರ ರಾಜಕಾರಣಕ್ಕೆ ಮತ್ತೆ ಚಾಲನೆ ಸಿಕ್ಕಂತಾಗಿದೆ. ಮೈಸೂರು ಸಂಸ್ಥಾನವನ್ನು ಆಳಿದ ಅರಸು ಮನೆತನದವರು, ಸ್ವಾತಂತ್ರ್ಯ ನಂತರವೂ ರಾಜಕೀಯದಲ್ಲಿ ಸಕ್ರೀವಾಗಿದ್ದವರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ದೂರವಿದ್ದರು. ಇದೀಗ ಮೈಸೂರು-ಕೊಡಗು ಕ್ಷೇತ್ರದಿಂದ ಯದುವೀರ್ ಸ್ಪರ್ಧೆಯೊಂದಿಗೆ ಮತ್ತೆ ಮೈಸೂರು ಮಹಾಸಂಸ್ಥಾನದ ರಾಜಕೀಯದ ಪರ್ವ ಮತ್ತೆ ಶುರುವಾಗಿದೆ. ಮೈಸೂರು ಮತ್ತು ಕೊಡಗಿನ ಜನರಿಗೆ ಮೈಸೂರು ರಾಜಮನೆತನ ಬಗ್ಗೆ ಜನರಿಗಿರುವ ಅಭಿಮಾನವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳು ಪ್ರಯತ್ನದ ಭಾಗವಾಗಿ ಯದುವೀರ್ ಚುನಾವಣಾ ರಾಜಕಾರಣಕ್ಕೆ ಹೆಜ್ಜೆಯಿಟ್ಟಿದ್ದು, ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ರಾಜವಂಶಸ್ಥ ಯದುವೀರ್ ಬಗ್ಗೆ ನಿಮಗೆಷ್ಟು ಗೊತ್ತು?
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ ಯದುವಂಶದ 27ನೇ ಉತ್ತರಾಧಿಕಾರಿ ಆಗಿದ್ದಾರೆ. ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಹಾಗೂ ಪ್ರಮೋದಾದೇವಿ ಒಡೆಯರ್ ದಂಪತಿಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ 23 ಫೆಬ್ರವರಿ 2015 ರಂದು ಯದುವೀರ್ ಅವರನ್ನು ದತ್ತುಪುತ್ರನಾಗಿ ಸ್ವೀಕಾರ ಮಾಡಲಾಯಿತು. ಇದನ್ನೂ ಓದಿ: Shivamogga Lok Sabha 2024: ಬಿಎಸ್ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?
ಯದುವೀರ್ ಅವರ ತಂದೆ ಬೆಟ್ಟದಕೋಟೆ ಅರಸು ಪರಂಪರೆಯವರಾಗಿದ್ದು, ಜಯಚಾಮರಾಜ ಒಡೆಯರ್ ಅವರ ಮರಿಮಗ ಆಗಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸೋದರಿ ಗಾಯತ್ರಿ ದೇವಿ ಮತ್ತು ರಾಮಚಂದ್ರ ಅರಸ್ ಅವರ ಪುತ್ರಿಯಾದ ತ್ರಿಪುರಸುಂದರೀದೇವಿ ಮತ್ತು ಸ್ವರೂಪ್ ಗೋಪಾಲ ರಾಜೇ ಅರಸ್ ಅವರ ಪುತ್ರ. ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಐಬಿ ಡಿಪ್ಲೊಮಾ ಕೋರ್ಸ್ ಪೂರೈಸಿ, ಅಮೆರಿಕದ ಮ್ಯಾಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು.
ರಾಜಮನೆತನಕ್ಕೆ ರಾಜಕೀಯ ಹೊಸದಲ್ಲ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಬಳಿಕ ಅರಸು ಸಮುದಾಯದ ಯಾರೊಬ್ಬರೂ ಸಿಎಂ ಹುದ್ದೆಗೆ ಏರಲಿಲ್ಲ. ಆದ್ರೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು 4 ಬಾರಿ ಸಂಸದರಾಗಿದ್ದರು. 1984, 1989 ರಲ್ಲಿ ಗೆದ್ದಿದ್ದ ಒಡೆಯರ್ 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ನಂತರ 1996, 1999 ರಲ್ಲಿ ಮತ್ತೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಗೆದ್ದು ಸಂಸದರಾದರು. 2004ರಲ್ಲಿ ಕೊನೆಯಬಾರಿಗೆ ಚುನಾವಣೆ ಎದುರಿಸಿದ್ದ ಒಡೆಯರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ, ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಹೆಚ್. ವಿಜಯಶಂಕರ್ ವಿರುದ್ಧ ಸೋತಿದ್ದರು. ನಂತರ ರಾಜಕಾರಣದಿಂದ ಹಿಂದೆ ಸರಿದ್ದರು. ಇದೀಗ ಮತ್ತೆ ಯದುವೀರ್ ಅವರಿಗೆ ಬಿಜೆಪಿ ಮಣೆ ಹಾಕಿದ್ದು, ರಾಜಮನೆತನದ ರಾಜಕೀಯ ಪುನಾರಂಭಗೊಂಡಿದೆ.
ಕ್ಷೇತ್ರ ಪರಿಚಯ:
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1952 ರಿಂದ 1996 ರ ವರೆಗೆ `ಕೈ’ ಹಿಡಿತದಲ್ಲಿತ್ತು. 1998 ರಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಜಯಗಳಿಸಿ ಮೊದಲ ಬಾರಿಗೆ ಕಮಲ ಅರಳಿಸಿದರು. ಅದಾದ ಬಳಿಕ 2009 ರ ವರೆಗೂ ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ ಎಂಬಂತೆ ಸೋಲು-ಗೆಲುವಿನ ಆಟ ನಡೆದಿತ್ತು. ನಂತರ ದೇಶದಲ್ಲಿ ನರೇಂದ್ರ ಮೋದಿ ಅಲೆ ಇದ್ದ ಸಂದರ್ಭದಲ್ಲಿ ಎರಡು ಅವಧಿಗೆ (2014, 2019) ಬಿಜೆಪಿಯ ಪ್ರತಾಪ್ ಸಿಂಹ ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಹಿಂದೆ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳು ದಕ್ಷಿಣ ಕನ್ನಡ ಲೋಕಸಭೆಗೆ ಸೇರಿದ್ದವು. 2009 ಕ್ಕೆ ಅವುಗಳನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು. ಇದನ್ನೂ ಓದಿ: ಬಿಹಾರದಲ್ಲಿ ಎನ್ಡಿಎ ಸೀಟು ಹಂಚಿಕೆ ಫೈನಲ್ – ಬಿಜೆಪಿ 17, ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ
ಟಿಕೆಟ್ ಸಿಕ್ಕಮೇಲೆ ಯದುವೀರ್ ಹೇಳಿದ್ದೇನು?
ಸಮಸ್ತ ಮೈಸೂರು-ಕೊಡಗು ಪ್ರಜಾಬಾಂಧವರಿಗೆ ನನ್ನ ನಮಸ್ಕಾರ, ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವಂತೆ, ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಭಾರತೀಯ ಜನತಾ ಪಕ್ಷದಿಂದ ಅವಕಾಶ ನೀಡಲಾಗಿದೆ. ನಮ್ಮ ಪೂರ್ವಜರ ಮಹತ್ತರ ಕೊಡುಗೆಗಳಿಂದ ಕರ್ನಾಟಕ ಜನತೆಯ ಬೆಂಬಲ ಮತ್ತು ಭಾವನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ನಮ್ಮೊಟ್ಟಿಗಿದೆ. ಕಳೆದ ಒಂಭತ್ತು ವರ್ಷಗಳಿಂದ ನಾನು ನಮ್ಮ ಕ್ಷೇತ್ರದ ಹಾಗು ನಮ್ಮ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದು ಅನೇಕ ಪ್ರಜಾಬಾಂಧವರನ್ನು ಭೇಟಿಮಾಡುವ ಅವಕಾಶ ಸಿಕ್ಕಿದ್ದು, ನನ್ನನ್ನು ನೀವೆಲ್ಲರೂ ಮುಕ್ತವಾಗಿ ಒಬ್ಬ ಸ್ನೇಹಿತನಂತೆ ಸ್ವಾಗತಿಸಿ ಆತಿಥ್ಯವನ್ನು ನೀಡಿದ್ದೀರಿ, ಈಗ ಆ ಋಣವನ್ನು ತೀರಿಸಲು ಅವಕಾಶ ಕೇಳುತ್ತಿದ್ದೇನೆ.
ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಆಶಿಸುತ್ತಿದ್ದೇನೆ. ಮೈಸೂರು-ಕೊಡಗಿನ ಜನರ ಶುಭ ಹಾರೈಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇನೆ. ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ನನ್ನ ಮೇಲೆ ನಂಬಿಕೆ ಇಟ್ಟಿರುವ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರಿಗೂ, ಗೃಹಮಂತ್ರಿಗಳಾದ ಅಮಿತ್ ಶಾ ಅವರಿಗೂ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಬಿ.ಎಲ್ ಸಂತೋಷ್, ರಾಜ್ಯ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರಿಗೂ ಹಾಗೂ ವಿಶೇಷವಾಗಿ ಬಿಜೆಪಿ ಪಕ್ಷದ ಆತ್ಮ ಜೀವವಾಗಿರುವ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ನಾನು ಪ್ರತಾಪ್ ಸಿಂಹ ಅವರನ್ನು ಅಭಿನಂದಿಸುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ನಮ್ಮೆಲ್ಲರ ಭವಿಷ್ಯದ ಆಕಾಂಕ್ಷಿಗಳಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ಆಶಿರ್ವಾದಾನುಗ್ರಹಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೆನೆ ಎಂದು ಫೇಸ್ಬುಕ್ ಪುಟದಲ್ಲಿ ತಿಳಿಸಿದ್ದರು.
ಮೈಸೂರು: ರಾಜ ಮನೆತನದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ (Srikantadatta Narasimharaja Wadiyar) ಅವರದ್ದು ವಿಶಿಷ್ಟ ವ್ಯಕ್ತಿತ್ವ. ಮೈಸೂರು (Mysuru) ಅರಸರ ವಂಶದ ಗೌರವಕ್ಕೆ ಯಾವುದೇ ಚ್ಯುತಿ ಬರದಂತೆ ಜೀವನ ಸಾಗಿಸಿದವರು. ರಾಜಕಾರಣಕ್ಕೆ ಬಂದರೂ ಕೂಡ ಹೆಸರು ಕೆಡಿಸಿಕೊಳ್ಳಲಿಲ್ಲ. ಸೋಲು ಗೆಲವು ಎರಡನ್ನೂ ಕಂಡರು ಸಹ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸಿ ದೊಡ್ಡತನ ಪ್ರದರ್ಶಿಸಿದವರು. ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಸೋಲು ಕಂಡಿದ್ದರು.
1984ರಲ್ಲಿ ಕಾಂಗ್ರೆಸ್ನಿಂದ (Congress) ಮೊದಲ ಬಾರಿಗೆ ಲೋಕಸಭಾ ಚುನಾವಣೆಯ ಕಣಕ್ಕೆ ಇಳಿದು 2,47,754 ಮತಗಳನ್ನು ಪಡೆದು ಗೆದ್ದರು. 1989ರಲ್ಲಿ ಎರಡನೇ ಬಾರಿಗೆ 3,84,888 ಮತ ಪಡೆದು ಲೋಕಸಭೆಗೆ ಆಯ್ಕೆಯಾದರು. 1991ರಲ್ಲಿ ಬಿಜೆಪಿಯಿಂದ (BJP) ಕಣಕ್ಕೆ ಇಳಿದಿದ್ದ ಒಡೆಯರ್ 20 ಸಾವಿರ ಮತಗಳ ಅಂತರದಿಂದ ಸೋತಿದ್ದರು. 1996ರಲ್ಲಿ ಮರಳಿ ಕಾಂಗ್ರೆಸ್ನಿಂದ ಅಭ್ಯರ್ಥಿ ಯಾಗಿ 2,58,299 ಮತ ಪಡೆದು ಮೂರನೇ ಬಾರಿಗೆ ಗೆದ್ದರು. 1999ರಲ್ಲಿ 3,38,051 ಮತಗಳನ್ನು ಪಡೆದು ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ್ದರು. 2004ರ ಚುನಾವಣೆಯಲ್ಲಿ 17 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದನ್ನೂ ಓದಿ: UPSCಯಿಂದ ನೇಮಕಗೊಂಡ ಅಧಿಕಾರಿಗಳು ಡಕಾಯಿತರು: ಕೇಂದ್ರ ಸಚಿವ
2006ರ ವೇಳೆಗೆ ಸಿದ್ದರಾಮಯ್ಯ (Siddaramaiah) ಅವರು ಜನತಾಪರಿವಾರ ಬಿಟ್ಟು ಕಾಂಗ್ರೆಸ್ಗೆ ಬಂದರು. ಆಗ ಒಡೆಯರ್ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡರು. ಏಕೆಂದರೆ ಅರಮನೆ ಸ್ವಾಧೀನ ವಿಚಾರದಲ್ಲಿ ಒಡೆಯರ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಒಡೆಯರ್ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದರೂ ಕೂಡ ಕೇಂದ್ರದಲ್ಲಿ ಮಂತ್ರಿಯಾಗಲಿಲ್ಲ. 1984ರಲ್ಲಿ ಮೊದಲ ಬಾರಿ ಗೆದ್ದಿದ್ದರಿಂದ ಕಾಂಗ್ರೆಸ್ ಸರ್ಕಾರ ಇದ್ದರೂ ಮಂತ್ರಿಗಿರಿ ಸಿಗಲಿಲ್ಲ. 1989ರಲ್ಲಿ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂತು. 1996ರಲ್ಲಿ ಮೂರನೇ ಬಾರಿ ಗೆದ್ದಾಗ ಎಚ್.ಡಿ. ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ನೇತೃತ್ವದ ಸಂಯುಕ್ತ ಸರ್ಕಾರ ಅಧಿಕಾರ ಬಂತು. 1999ರಲ್ಲಿ ಗೆದ್ದಾಗ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂತು. ಹೀಗಾಗಿ ಒಡೆಯರ್ ಅವರಿಗೆ ಮಂತ್ರಿಗಿರಿ ಕೈ ತಪ್ಪಿತ್ತು. ಇದನ್ನೂ ಓದಿ: ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡು – ಜಮ್ಶೆಡ್ಪುರದಲ್ಲಿ ಹಿಂಸಾಚಾರ