Tag: Sri RamSena

  • ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    ಶಿವಮೊಗ್ಗ: ಟಿಪ್ಪು ಪ್ರತಿಮೆಯನ್ನ (Tippu Statue) ಹಠದಿಂದ ಸ್ವಂತ ಜಾಗದಲ್ಲಿ ಕಟ್ಟುತ್ತೀವಿ ಅಂದ್ರೂ ಬಿಡಲ್ಲ. ಬಾಬ್ರಿ ಮಸೀದಿ (Babri Masjid) ಧ್ವಂಸ ಮಾಡಿದ ರೀತಿಯಲ್ಲೇ ಟಿಪ್ಪು ಸುಲ್ತಾನ್ ಮೂರ್ತಿಯನ್ನು ಹೊಡೆದು ಹಾಕ್ತೀವಿ ಎಂದು ಶ್ರೀರಾಮಸೇನೆ (SriRamsena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದ್ದಾರೆ.

    ಮೈಸೂರು ಎನ್.ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ (Tanveer Sait) `100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಮೂರ್ತಿ ಸ್ಥಾಪಿಸೋದು ಖಚಿತ’ ಎಂಬ ಹೇಳಿಕೆಗೆ ಮುತಾಲಿಕ್ (Pramod Muthalik) ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸೋದು ನಿಶ್ಚಿತ: ತನ್ವೀರ್ ಸೇಠ್

    tippu

    ಪ್ರತಿಮೆ ನಿರ್ಮಾಣದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ. ಹಠದಿಂದ ಸ್ವಂತ ಜಾಗದಲ್ಲಿ ಕಟ್ಟುತ್ತೀವಿ ಅಂದ್ರು ಬಿಡಲ್ಲ. ನಿಮ್ದು ಸ್ವಂತ ಜಾಗ ಯಾವುದೂ ಇಲ್ಲ. ಎಲ್ಲಾ ಜಾಗ ಹಿಂದೂಗಳದ್ದು, ಭಾರತ ದೇಶದ್ದು. ಇವತ್ತು ಟಿಪ್ಪು ಸುಲ್ತಾನ್‌ಗೆ ಕೊಟ್ಟರೆ ನಾಳೆ ಔರಂಗಜೇಬ್, ಬಾಬರ್ ಪ್ರತಿಮೆಯನ್ನೂ ಕಟ್ಟುತ್ತೀರಿ. ಹಾಗಾಗಿ ಟಿಪ್ಪು ಮೂರ್ತಿ ಸ್ಥಾಪನೆಗೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ.

    ಶಾಸಕ ತನ್ವೀರ್ ಸೇಠ್ ಮುಸ್ಲಿಮರ (Muslim Community) ತತ್ವ, ಸಿದ್ಧಾಂತಗಳನ್ನ ಗಾಳಿಗೆ ತೂರುತ್ತಿದ್ದಾರೆ. ಒಂದು ವೇಳೆ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಮುಂದಾದರೆ `ಚಲೋ ಮೈಸೂರು’ ಕರೆ ಕೊಡ್ತೀವಿ, ಬಾಬ್ರಿ ಮಸೀದಿ ಧ್ವಂಸ ಮಾಡಿದ ರೀತಿಯಲ್ಲೇ ಮೂರ್ತಿಯನ್ನ ಹೊಡೆದು ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಟಿಪ್ಪು ಸುಲ್ತಾನ್ (Tippu Sultan) ಮತಾಂಧ, ಒಬ್ಬ ದ್ರೋಹಿ, ಕನ್ನಡ ವಿರೋಧಿ, ಸಾವಿರಾರು ದೇವಸ್ಥಾನ ಭಗ್ನಗೊಳಿಸಿ ಮಸೀದಿ ಕಟ್ಟಿಸಿದ ಧೂರ್ತ. ಲಕ್ಷಾಂತರ ಹಿಂದೂಗಳನ್ನು ಕ್ರೌರ್ಯದಿಂದ, ಮೋಸದಿಂದ ಮತಾಂತರ ಮಾಡಿದ. ಮೋಸದಿಂದ ಮೈಸೂರು ಮಹಾರಾಜ, ಮಹಾರಾಣಿ ಅವರನ್ನು ಬಂಧನದಲ್ಲಿಟ್ಟು ಹಾಳು ಮಾಡಿದ ವ್ಯಕ್ತಿ. ಅಂತಹವನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಎಲ್ಲಿಯೂ ಅವಕಾಶ ಕೊಡಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಮತಕ್ಕಾಗಿ ಹಿಂದೂಗಳ ಅವಹೇಳನ ಮಾಡ್ತಿರೋದು ನೀಚ ಕೆಲಸ – ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ

     

    ಈ ಬಾರಿ ಚುನಾವಣೆಯಲ್ಲಿ (Election 2023) ಮುಸ್ಲಿಮರೇ ತನ್ವೀರ್‌ಸೇಠ್ ಅವರಿಗೆ ಓಟ್ ಹಾಕಲ್ಲ. ಆದ್ದರಿಂದ ಅವರೊಬ್ಬ ಕಟ್ಟಾ ಮುಸ್ಲಿಂ ವಾದಿ, ಕಟ್ಟಾ ಟಿಪ್ಪುವಾದಿ ಅಂತಾ ತೋರಿಸುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ನಾನಂತೂ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಂಡಿಯಾ ಪೆಂಡಾಲ್‌ನಲ್ಲಿ ಮುಸ್ಲಿಮ್ ಯುವಕರಿಗೆ ಏನು ಕೆಲಸ – ಮುತಾಲಿಕ್ ಪ್ರಶ್ನೆ

    ದಾಂಡಿಯಾ ಪೆಂಡಾಲ್‌ನಲ್ಲಿ ಮುಸ್ಲಿಮ್ ಯುವಕರಿಗೆ ಏನು ಕೆಲಸ – ಮುತಾಲಿಕ್ ಪ್ರಶ್ನೆ

    ಉಡುಪಿ: ಅಲ್ಲಾಹ್ ಒಬ್ಬನೇ ದೇವರನ್ನುವವರಿಗೆ ನವರಾತ್ರಿ ಉತ್ಸವದಲ್ಲಿ ಏನು ಕೆಲಸ ಎಂದು ಶ್ರೀರಾಮಸೇನೆ (SriRamasena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಪ್ರಶ್ನಿಸಿದ್ದಾರೆ.

    ದೇಶಾದ್ಯಂತ ನಡೆಯುತ್ತಿರುವ ಧಾರ್ಮಿಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ದಾಂಡಿಯಾ ಪೆಂಡಾಲ್‌ಗೆ (Dhadia Pendal) ಮುಸ್ಲಿಂ ಯುವಕರಿಗೆ (Muslim Youth) ನಿರ್ಬಂಧ ಹೇರಬೇಕು ಎಂದಿದ್ದಾರೆ. ಇದನ್ನೂ ಓದಿ: ನವರಾತ್ರಿ ಪೂಜಾ ಕೈಂಕರ್ಯಗಳು ಸಂಪನ್ನ- ನಾಳೆ ಆಯುಧಗಳಿಗೆ ಪೂಜೆ

    ದಾಂಡಿಯಾ ಹಿಂದೂಗಳ ಧಾರ್ಮಿಕ ಸಂಪ್ರದಾಯ. ವಿಕೃತಿ ಮೆರೆಯಲು ಹಾಗೂ ಹಿಂದೂ ಹುಡುಗಿಯರನ್ನು ಪಟಾಯಿಸುವ ಉದ್ದೇಶಕ್ಕೆ ಬರುತ್ತಾರೆ. ಲವ್ ಜಿಹಾದ್ (Love Jihad) ಮಾಡಲು ದಾಂಡಿಯಾ ಪೆಂಡಾಲ್‌ಗೆ ಬರುತ್ತಾರೆ. ನಮ್ಮ ಸಮಾಜ ಅವರನ್ನ ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕು. ಹಿಂದೂ ಶ್ರದ್ಧಾಕೇಂದ್ರ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನ್ಯ ಧರ್ಮೀಯರು, ದುರುದ್ದೇಶದಿಂದ ಬಂದರೆ ಅವರನ್ನು ಸೇರಿಸಿಕೊಳ್ಳಬಾರದು ಎಂದು ಮುತಾಲಿಕ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]