Tag: Sri Rama Navami

  • ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

    ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

    ಹಿಂದೂ ಹಬ್ಬಗಳಲ್ಲಿ ರಾಮನವಮಿಯೂ ಕೂಡ ಒಂದು ಪ್ರಮುಖವಾದ ಹಬ್ಬ. ರಾಮನವಮಿಯನ್ನು ಶ್ರೀ ರಾಮನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಲ್ಲಿ ಅಂದರೆ ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀ ರಾಮನವಮಿ ಆಚರಿಸಲಾಗುತ್ತದೆ. ಅಥವಾ ಯುಗಾದಿ ಹಬ್ಬದ ಎಂಟು ದಿನಗಳ ನಂತರ ರಾಮನವಮಿ ಆಚರಿಸಲಾಗುತ್ತದೆ.

    ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಜನಿಸಿದ್ದು, ಏ.5 ರಂದು ಸಂಜೆ 7: 26ಕ್ಕೆ ತಿಥಿ ಪ್ರಾರಂಭವಾಗಿ ಏ.6 ರಂದು ಸಂಜೆ 7:22 ಕ್ಕೆ ಕೊನೆಗೊಳ್ಳುತ್ತದೆ. ಕೆಲವು ಕಡೆ ಚೈತ್ರ ಮಾಸದ ಪ್ರತಿಪಾದದಿಂದ 9 ದಿನಗಳವರೆಗೆ ರಾಮನವಮಿ ಉತ್ಸವ ನಡೆಯುತ್ತದೆ. ಈ ಸಮಯದಲ್ಲಿ ಕೆಲವರು 9 ದಿನಗಳ ಕಾಲ ಉಪವಾಸ ಮಾಡುವ ಆಚರಣೆಯನ್ನು ಪಾಲಿಸುತ್ತಾರೆ.

    RAMANAVAMI

    ಇತಿಹಾಸ:
    ರಾಮನವಮಿ ಶ್ರೀ ರಾಮಾಯಣದ ಪ್ರಮುಖ ಪಾತ್ರಧಾರಿ ಭಗವಾನ್ ಶ್ರೀರಾಮನ ಜನ್ಮದಿನ. ಅಯೋಧ್ಯಾಧಿಪತಿ ದಶರಥ ಹಾಗೂ ಕೌಸಲ್ಯ ಪುತ್ರನಾದ ಶ್ರೀರಾಮ ವಿಷ್ಣುವಿನ 7ನೆಯ ಅವತಾರದಲ್ಲಿ ಜನಿಸುತ್ತಾನೆ. ಪ್ರಾರಂಭದಲ್ಲಿ ದಶರಥ ಹಾಗೂ ಆತನ ಮೂವರು ಪತ್ನಿಯರಿಗೂ ಸಂತಾನ ಭಾಗ್ಯ ಇರಲಿಲ್ಲ. ಆಗ ಋಷಿ ವಶಿಷ್ಠರ ಸಲಹೆಯ ಮೇರೆಗೆ ದಶರಥ ಮಹಾರಾಜ ಪುತ್ರ ಕಾಮೇಷ್ಟಿ ಯಜ್ಞವನ್ನು ಮಾಡಿದನು. ಬಳಿಕ ರಾಣಿ ಕೌಸಲ್ಯಗೆ ರಾಮ, ಸುಮಿತ್ರಿಗೆ ಶತ್ರುಘ್ನ ಹಾಗೂ ಲಕ್ಷ್ಮಣ, ಕೈಕೆಯಿಗೆ ಭರತ ಜನಿಸಿದರು. ಹೀಗೆ ರಾಮ ಜನಿಸಿದ ದಿನವನ್ನು ಶ್ರೀರಾಮನವಮಿ ಎಂದು ಆಚರಿಸಲಾಗುತ್ತದೆ. ತ್ರೇತಾಯುಗದಲ್ಲಿ ಜನಿಸಿದ ರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ದೈವಿಕ ಶಕ್ತಿ ನೆಲೆಸುತ್ತದೆ ಎಂಬುದು ನಂಬಿಕೆಯಾಗಿದೆ.

    ಆಚರಣೆ ಹೇಗೆ?
    ಶ್ರೀರಾಮ ನವಮಿಯಂದು ಭಕ್ತರು ಉಪವಾಸ ಮಾಡಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಮಾಯಣ ಪಾರಾಯಣ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ಜೊತೆಗೆ ಭಜನೆ ರಾಮನ ಕೀರ್ತನೆಗಳನ್ನು 30 ಪಠಿಸುತ್ತಾರೆ. ಅನೇಕ ಕಡೆಗಳಲ್ಲಿ ರಾಮನ ದೇಗುಲಗಳಲ್ಲಿ ಕೀರ್ತನೆ, ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಕೆಲವು ಕಡೆ 9 ದಿನದ ರಾಮನ ಉತ್ಸವವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕ ಹಾಗೂ ರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ರಾಮನವಮಿಯಂದು ಪಾನಕ ಕೋಸಂಬರಿ ನೈವೇದ್ಯ ಇಟ್ಟು ಪೂಜೆ ಮಾಡೋದು ವಿಶೇಷ. ಇನ್ನು ಕೆಲವರು ರಾಮನವಮಿಯಂದು ರಾಮ ನಾಮ ಬರೆಯುತ್ತಾರೆ.

    ದೇಶದ ಕೆಲವು ಪ್ರದೇಶಗಳಲ್ಲಿ ವಿಜೃಂಭಗಳಿಂದ ರಾಮನವಮಿ ಆಚರಿಸಲಾಗುತ್ತದೆ.
    ಅಯೋಧ್ಯೆ: ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮನವಮಿಯಂದು ವಿಜೃಂಭಣೆಯಿಂದ ಪೂಜೆ, ಪವಿತ್ರ ಸ್ನಾನ, ಭವ್ಯ ಮೆರವಣಿಗೆ, ರಾಮಾಯಣ ಪಾಠ ನಡೆಯುತ್ತದೆ.

    ಸೀತಾಮಡಿ
    ಸೀತಾದೇವಿಯ ಜನ್ಮಸ್ಥಳವಾದ ಸೀತಾಮಡಿಯಲ್ಲಿ ರಾಮನವಮಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ವಿಶೇಷ ಪೂಜೆ, ಜಾತ್ರೆ ಕೂಡ ನಡೆಯುತ್ತದೆ.

    ಭದ್ರಾಚಲಂ:
    ಶ್ರೀರಾಮನವಮಿಯಂದು ಈ ದೇವಾಲಯದಲ್ಲಿ ಶ್ರೀ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ದೇಶದೆಲ್ಲಡೆ ಭಕ್ತಾದಿಗಳು ಈ ದಿವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುತ್ತಾರೆ.

    ರಾಮೇಶ್ವರಂ:
    ರಾಮನ ತೀರ್ಥಯಾತ್ರೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾದ ರಾಮೇಶ್ವರಂ ನಲ್ಲಿ ರಾಮನವಮಿ ಎಂದು ವಿಶೇಷ, ಹೋಮ ಮತ್ತು ಮಹಾಪ್ರಸಾದ ವಿತರಣೆಯೊಂದಿಗೆ ಆಚರಿಸಲಾಗುತ್ತದೆ.

  • ಬೆಂಗಳೂರಿನಲ್ಲಿ ಮೊದಲ ಬಾರಿಗೆ ಶ್ರೀರಾಮ ರಥಯಾತ್ರೆ

    ಬೆಂಗಳೂರಿನಲ್ಲಿ ಮೊದಲ ಬಾರಿಗೆ ಶ್ರೀರಾಮ ರಥಯಾತ್ರೆ

    ಬೆಂಗಳೂರು: ಶ್ರೀರಾಮನವಮಿ ಪ್ರಯುಕ್ತ ಪದ್ಮನಾಭನಗರದಲ್ಲಿ ಅದ್ಧೂರಿ ಶ್ರೀರಾಮ ರಥಯಾತ್ರೆ ನಡೀತು. ಸಾವಿರಾರು ರಾಮನ ಭಕ್ತರು ರಥಯಾತ್ರೆಯಲ್ಲಿ ಭಾಗವಹಿಸಿದ್ದರು. ಎಲ್ಲೆಲ್ಲೂ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು.

    ಪದ್ಮನಾಭನಗರ ಶಾಸಕ ಹಾಗೂ ಕಂದಾಯ ಸಚಿವ ಆರ್‌.ಅಶೋಕ್ ನೇತೃತ್ವದಲ್ಲಿ ಅದ್ಧೂರಿ ರಥಯಾತ್ರೆ ಜರುಗಿತು. ಪದ್ಮನಾಭನಗರದಿಂದ ಸುಮಾರು 6 ಕಿಲೋಮೀಟರ್ ನಡೆದ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಶ್ರೀರಾಮನ ಕೃಪೆಗೆ ಪಾತ್ರರಾದರು. ಕನಕಪೀಠದ ಈಶ್ವರಾನಂದಪುರಿ ಶ್ರೀಗಳು ಹಾಗೂ ಮಾದರ ಚೆನ್ನಯ್ಯ ಶ್ರೀಗಳು ರಥಯಾತ್ರೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದ ಸರ್ಕಾರ

    ಹೂಗಳಿಂದ ಅಲಂಕಾರವಾದ ಭವ್ಯವಾದ ರಥಯಾತ್ರೆಯಲ್ಲಿ ಶ್ರೀರಾಮನು ಕಂಗೊಳಿಸುತ್ತಿದ್ದನು. ಪದ್ಮನಾಭನಗರದಿಂದ ಪ್ರಾರಂಭ ಆದ ರಥಯಾತ್ರೆ, ಕರೀಸಂದ್ರ ವಾರ್ಡ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ತ್ಯಾಗರಾಜನಗರ, ಉಮಾ ಮಹೇಶ್ವರಿ ದೇವಾಲಯ, ಕೆ.ಆರ್. ರೋಡ್, ವ್ಯಾಪ್ತಿಯಲ್ಲಿ ರಥಯಾತ್ರೆ ನಡೀತು. ಅಂತಿಮವಾಗಿ ಅಶೋಕ್ ಕಚೇರಿ ಬಳಿ ರಥಯಾತ್ರೆ ಮುಕ್ತಾಯ ಆಯಿತು. ಇದನ್ನೂ ಓದಿ: ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿದವರು, ತಲೆ ಹೊಡೆದಾಗ ಏಕೆ ತೋರಲಿಲ್ಲ: ಸಿ.ಟಿ.ರವಿ ಪ್ರಶ್ನೆ

    ರಥಯಾತ್ರೆ ಪ್ರಾರಂಭ ಆಗುತ್ತಿದ್ದಂತೆ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು, ಸಾವಿರಾರು ಭಕ್ತರು ಕೇಸರಿ ಶಾಲು, ಕೇಸರಿ ಪೇಟ ಧರಿಸಿ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು. ಎಲ್ಲೆಲ್ಲೂ ಭಗವತ್ ಧ್ವಜ, ರಾಮನ ಧ್ವಜ ರಾರಾಜಿಸಿದವು. ಕರಡಿ ಕುಣಿತ, ಕಂಸಾಳೆ ಪದ ಸೇರಿದಂತೆ ಜನಪದ ಕಲಾ ತಂಡಗಳು ರಥಯಾತ್ರೆಗೆ ಮತ್ತಷ್ಟು ಮೆರುಗು ತಂದವು. ಪಾದಯಾತ್ರೆಯಲ್ಲಿ ಅಶೋಕ್, ಸಂಸದ ತೇಜಸ್ವಿ ಸೂರ್ಯ ನೃತ್ಯ ಮಾಡಿ ರಥಯಾತ್ರೆಯನ್ನು ಸಂಭ್ರಮಿಸಿದರು.

    ರಥಯಾತ್ರೆಯಲ್ಲಿ ಮಾತನಾಡಿದ ಅಶೋಕ್, ಕರ್ನಾಟಕ ರಾಮ ರಾಜ್ಯ ಆಗಬೇಕು. ವಿಜೃಂಭಣೆಯಿಂದ ರಥಯಾತ್ರೆ ಆಗಿದೆ. ಮುಂದಿನ ವರ್ಷದಲ್ಲಿ ಬೆಂಗಳೂರಿನ 27 ಕ್ಷೇತ್ರ ಹಾಗೂ ಇಡೀ ರಾಜ್ಯದಲ್ಲಿ ರಾಮ ರಥಯಾತ್ರೆ ಮಾಡ್ತೀವಿ. ಗಲ್ಲಿ ಗಲ್ಲಿಗಳಲ್ಲಿ ರಾಮನನ್ನು ಪ್ರತಿಷ್ಠಾಪನೆ ಮಾಡ್ತೀವಿ ಎಂದು ಅಭಿಪ್ರಾಯಪಟ್ಟರು.