Tag: Sri Lanka

  • ವಿಡಿಯೋ ನೋಡಿ: ಲಂಕಾ ಆಟಗಾರರಿಗೆ ಧೋನಿ ಕೋಚಿಂಗ್!

    ವಿಡಿಯೋ ನೋಡಿ: ಲಂಕಾ ಆಟಗಾರರಿಗೆ ಧೋನಿ ಕೋಚಿಂಗ್!

    ಮುಂಬೈ: ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿರುವ ಮಾಜಿ ನಾಯಕ ಎಂ.ಎಸ್ ಧೋನಿ ಲಂಕಾ ಆಟಗಾರರಿಗೆ ಕೋಚ್ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ಹೌದು, ಧೋನಿ ತಮ್ಮ ಕೂಲ್ ವ್ಯಕ್ತಿತ್ವದ ಮೂಲಕ ವಿಶ್ವ ಕ್ರಿಕೆಟ್ ನ ಹಲವು ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೊಂದು ದೊರೆತಿದ್ದು, ಭಾನುವಾರ ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಅಂತಿಮ ಟಿ20 ಪಂದ್ಯದ ಮುಕ್ತಾಯದ ಬಳಿಕ ಲಂಕಾ ಆಟಗಾರರಿಗೆ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

    2017ರಲ್ಲಿ ಭಾರತ ಶ್ರೀಲಂಕಾ ಪ್ರವಾಸ ಮಾಡಿದ್ದರೆ, ಶ್ರೀಲಂಕಾ ಭಾರತ ಪ್ರವಾಸ ಮಾಡಿತ್ತು. ಎರಡು ತಂಡಗಳ ನಡುವಿನ ಟೆಸ್ಟ್, ಏಕದಿನ, ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಭಾನುವಾರ ನಡೆದ ಕೊನೆಯ ಪಂದ್ಯದಲ್ಲೂ ಶ್ರೀಲಂಕಾ ಸೋತು ಸುಣ್ಣವಾಗಿತ್ತು. ಈ ವೇಳೆ ಲಂಕಾ ಆಟಗಾರರ ಮನಸ್ಥಿತಿ ಕಂಡ ಧೋನಿ ಅವರ ಬಳಿಗೆ ತೆರಳಿ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಲಂಕಾದ ಉಪುಲ್ ತರಂಗ, ಅಕಿಲ ಧನಂಜಯ ಮತ್ತು ಸಮರ ವಿಕ್ರಮ ಅವರು ಧೋನಿ ನೀಡುತ್ತಿರುವ ಸಲಹೆಗಳನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಧೋನಿ ಅವರ ಈ ವ್ಯಕ್ತಿತ್ವವನ್ನು ಹಲವು ಕ್ರಿಕೆಟ್ ಅಭಿಮಾನಿಗಳ ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧೋನಿ, 2019ರ ವಿಶ್ವಕಪ್ ಆಡ್ತಾರಾ: ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದು ಹೀಗೆ

    ಧೋನಿ ಅವರು ಲಂಕಾ ವಿರುದ್ಧ ಏಕದಿನ ಸರಣಿಯ ವೇಳೆ ಹಲವರ ಟೀಕೆಗೆ ಗುರಿಯಾಗಿದ್ದರು. ನಂತರದ ಟಿ20 ಸರಣಿಯಲ್ಲಿ ಧೋನಿ ಅವರ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ನೀಡಲಾಗಿತ್ತು. ಈ ವೇಳೆ ಉತ್ತಮ ಪ್ರದರ್ಶನ ನೀಡಿ, ತಮ್ಮ ವಿರುದ್ಧ ಟೀಕೆ ಮಾಡುತ್ತಿದವರ ಬಾಯಿ ಮುಚ್ಚಿಸಿದ್ದಾರೆ. ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹಾಗೂ ಕೋಚ್ ರವಿ ಶಾಸ್ತ್ರಿ ಅವರು ಸಹ ಧೋನಿ ಪರ ಬ್ಯಾಟ್ ಬೀಸಿದ್ದು, 2019 ರ ವಿಶ್ವಕಪ್ ನಲ್ಲಿ ಧೋನಿ ಆಡುವುದನ್ನು ಖಚಿತ ಪಡಿಸಿದ್ದಾರೆ.

    https://twitter.com/VideosShots/status/945136128247640064

     

  • ಶ್ರೀಲಂಕಾ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೂ, ವಿಶ್ವ ದಾಖಲೆ ಜಸ್ಟ್ ಮಿಸ್

    ಶ್ರೀಲಂಕಾ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೂ, ವಿಶ್ವ ದಾಖಲೆ ಜಸ್ಟ್ ಮಿಸ್

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿಯನ್ನು ಕೈ ವಶ ಮಾಡಿಕೊಂಡರೂ ಟೀಂ ಇಂಡಿಯಾ ವಿಶ್ವ ದಾಖಲೆ ನಿರ್ಮಿಸುವ ಅವಕಾಶ ಸ್ಪಲ್ಪದರಲ್ಲಿಯೇ ಕೈ ತಪ್ಪಿದೆ.

    ಹೌದು, ಒಂದು ವೇಳೆ 2 ಪಂದ್ಯಗಳನ್ನು ಗೆದ್ದಿದ್ದರೆ ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಗೆಲುವು ಪಡೆದ ತಂಡ ಎಂಬ ದಾಖಲೆಯನ್ನು ಟೀಂ ಇಂಡಿಯಾ ನಿರ್ಮಿಸುತಿತ್ತು.

    2017ರಲ್ಲಿ ಭಾರತ ಒಟ್ಟು 37 ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಟೀಂ ಇಂಡಿಯಾ ಪಡೆದ 37 ಗೆಲುವುಗಳಲ್ಲಿ 7 ಟೆಸ್ಟ್, 21 ಏಕದಿನ ಪಂದ್ಯ ಹಾಗೂ 9 ಟಿ20 ಪಂದ್ಯಗಳು ಒಳಗೊಂಡಿದೆ.

    ವರ್ಷ ಒಂದರಲ್ಲಿ ಅತಿ ಹೆಚ್ಚು ಪಂದ್ಯ ಗೆಲುವು ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾಗೆ ಮೊದಲ ಸ್ಥಾನ ಸಿಕ್ಕಿದ್ದು, 2003 ರಲ್ಲಿ ರಿಕಿ ಪಾಟಿಂಗ್ ನಾಯಕತ್ವದಲ್ಲಿ 38 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ಇನ್ನು ಮೂರನೇ ಸ್ಥಾನದಲ್ಲಿಯೂ ಆಸ್ಟ್ರೇಲಿಯಾ ತಂಡವೇ ಇದ್ದು, 1999 ರಲ್ಲಿ 35 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪ್ರಸ್ತುತ ವರ್ಷದಲ್ಲಿ ಇಂಗ್ಲೆಂಡ್ (ಏಕದಿನ, ಟಿ20), ಬಾಂಗ್ಲಾದೇಶ (ಟೆಸ್ಟ್), ಆಸ್ಟ್ರೇಲಿಯಾ(ಟೆಸ್ಟ್, ಏಕದಿನ), ವೆಸ್ಟ್ ಇಂಡೀಸ್ (ಏಕದಿನ), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್), ನ್ಯೂಜಿಲೆಂಡ್(ಏಕದಿನ, ಟಿ20), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್) ವಿರುದ್ಧ ಸರಣಿಗಳಲ್ಲಿ ಭಾಗವಹಿಸಿದೆ. ಈ ಮೂಲಕ ಸತತ 9 ಟೆಸ್ಟ್ ಸರಣಿ ಹಾಗೂ 8 ಏಕದಿನ ಸರಣಿಗಳಲ್ಲಿ ಗೆಲುವು ಪಡೆದಿದೆ.

     

  • ಕೊನೆಯಲ್ಲಿ ಕಾರ್ತಿಕ್ ಸಿಕ್ಸರ್, ಕ್ಲೀನ್ ಸ್ವೀಪ್ ಗೈದು ಸರಣಿ ಗೆದ್ದ ಟೀಂ ಇಂಡಿಯಾ

    ಕೊನೆಯಲ್ಲಿ ಕಾರ್ತಿಕ್ ಸಿಕ್ಸರ್, ಕ್ಲೀನ್ ಸ್ವೀಪ್ ಗೈದು ಸರಣಿ ಗೆದ್ದ ಟೀಂ ಇಂಡಿಯಾ

    ಮುಂಬೈ: ಮೂರನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಗೆಲ್ಲಲು 136 ರನ್ ಗಳ ಸವಾಲನ್ನು ಪಡೆದ ಭಾರತ 20 ಓವರ್ 19.2 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು.

    16.1 ಓವರ್ ಗಳಲ್ಲಿ 108 ರನ್ ಗಳಿಸಿದಾಗ ಪಾಂಡ್ಯ ಔಟಾದಾಗ ಶ್ರೀಲಂಕಾದ ಗೆಲುವಿನ ಆಸೆ ಚಿಗುರಿತ್ತು. ಕೊನೆಯಲ್ಲಿ 18 ಎಸೆತಕ್ಕೆ 20 ರನ್ ಬೇಕಿದ್ದರೆ ನಂತರದ ಓವರ್ ನಲ್ಲಿ 12 ಎಸೆತಕ್ಕೆ 15 ರನ್ ಬೇಕಿತ್ತು.

    ಪ್ರದೀಪ್ ಎಸೆದ 19ನೇ ಓವರಿನ ಮೊದಲ ಎಸೆತವನ್ನು ಕಾರ್ತಿಕ್ ಸಿಕ್ಸರ್ ಅಟ್ಟಿದ್ದರಿಂದ ಪಂದ್ಯದ ರೋಚಕ ಚಿತ್ರಣ ಬದಲಾಯಿತು. ಕೊನೆಯ ಓವರ್ ನಲ್ಲಿ 6 ಎಸೆತಕ್ಕೆ 3 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಮ್ಯಾಚ್ ಫಿನಿಶರ್ ಧೋನಿ ಎರಡು ರನ್ ಹೊಡೆದರೆ ಎರಡನೇ ಎಸೆತವನ್ನು ಬೌಂಡರಿಗೆ ಅಟ್ಟಿ ಸರಣಿಯನ್ನು ಗೆದ್ದುಕೊಟ್ಟರು.

    ಕೆಎಲ್ ರಾಹುಲ್ 4 ರನ್ ಗಳಿಸಿ ಔಟಾದರೆ ರೋಹಿತ್ ಶರ್ಮಾ 27 ರನ್(20 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ 30 ರನ್(32 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು.

    ಮನಿಷ್ ಪಾಂಡೆ 32 ರನ್(29 ಎಸೆತ, 4 ಬೌಂಡರಿ) ಹೊಡೆದರೆ ಹಾರ್ದಿಕ್ ಪಾಂಡ್ಯ 4 ರನ್ ಗೊಳಿಸಿ ಔಟಾದರು. ಕೊನೆಯಲ್ಲಿ ಕಾರ್ತಿಕ್ ಮತ್ತು ಧೋನಿ ಮುರಿಯದ 6ನೇ ವಿಕೆಟ್ ಗೆ 31 ರನ್ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಕಾರ್ತಿಕ್ 18 ರನ್(12 ಎಸೆತ, 1 ಬೌಂಡರಿ), ಧೋನಿ 16 ರನ್(10 ಎಸೆತ, 2 ಬೌಂಡರಿ) ಹೊಡೆದರು.

    ಆರಂಭದಿಂದಲೇ ವಿಕೆಟ್ ಪತನ:
    ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಲಂಕಾ ಆರಂಭದಲ್ಲಿ 8 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಪತನಗೊಂಡಿತ್ತು. 85 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 7ನೇ ವಿಕೆಟ್ ಗೆ ಗುಣರತ್ನೆ ಮತ್ತು ಶನುಕ 26 ರನ್ ಜೊತೆಯಾಟ ವಾಡಿದ್ದರೆ, ಮುರಿಯದ 8ನೇ ವಿಕೆಟ್ ಗೆ ಶನುಕ ಮತ್ತು ಧನಂಜಯ 24 ರನ್ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 20 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು.

    ಗುಣರತ್ನೆ 36 ರನ್(37 ಎಸೆತ, 3 ಬೌಂಡರಿ), ಶನುಕ 29 ರನ್(24 ಎಸೆತ, 2 ಸಿಕ್ಸರ್) ಮಧ್ಯಮ ಕ್ರಮಾಂಕದಲ್ಲಿ ಸಮರವಿಕ್ರಮ 21 ರನ್(17 ಎಸೆತ, 3 ಬೌಂಡರಿ) ಹೊಡೆದರು. ಜಯದೇವ್ ಉನದ್ಕತ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್, ಇಂದು ಮೊದಲ ಪಂದ್ಯ ಆಡಿದ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.

    ಈ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಜಯದೇವ್ ಉನದ್ಕತ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    ಲಂಕಾ ಪ್ರವಾಸದಲ್ಲೂ ಭಾರತ ಟೆಸ್ಟ್, ಏಕದಿನ, ಟಿ20 ಸರಣಿಯನ್ನು ಗೆದ್ದುಕೊಂಡಿತ್ತು. ಈಗ ಭಾರತದ ಲಂಕಾ ಪ್ರವಾಸದಲ್ಲೂ ಎಲ್ಲ ಮೂರು ಮಾದರಿಯ ಸರಣಿಯನ್ನು ಗೆದ್ದುಕೊಂಡಿದೆ. ಕಟಕ್ ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 93 ರನ್ ಗಳಿಂದ ಭಾರತ ಜಯಗಳಿಸಿದ್ದರೆ, ಇಂದೋರ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು 88 ರನ್ ಗಳಿಂದ ಜಯಗಳಿಸಿತ್ತು.

  • ವೈರಲ್ ವಿಡಿಯೋ: ಕೋಚ್ ರವಿಶಾಸ್ತ್ರಿ ಅವರಿಗೆ ರೋಹಿತ್ ಶರ್ಮಾ ಮಾಡಿದ ಸಿಗ್ನಲ್ ಏನು?

    ವೈರಲ್ ವಿಡಿಯೋ: ಕೋಚ್ ರವಿಶಾಸ್ತ್ರಿ ಅವರಿಗೆ ರೋಹಿತ್ ಶರ್ಮಾ ಮಾಡಿದ ಸಿಗ್ನಲ್ ಏನು?

    ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಧೋನಿ ಅವರನ್ನು ನಂ.3 ರಲ್ಲಿ ಬ್ಯಾಟಿಂಗ್ ಕಳುಹಿಸುವಂತೆ ಕೋಚ್ ರವಿ ಶಾಸ್ತ್ರಿ ಅವರಿಗೆ ಸಿಗ್ನಲ್ ಮಾಡಿರುವ ವಿಡಿಯೋ ಈ ವೈರಲ್ ಆಗಿದೆ.

    ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿರುವ ವಿಧಾನ ಹಾಗೂ ಅವರ ನಿರ್ಧಾರಗಳು ಹಲವು ಹಿರಿಯ ಆಟಗಾರರ ಮೆಚ್ಚುಗೆಗೆ ಕಾರಣವಾಗಿದೆ.

    ಪಂದ್ಯದ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಜೋಡಿ ಅಬ್ಬರದ ಆಟವಾಡಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿ ಹಲವು ದಾಖಲೆಗಳಿಗೆ ಕಾರಣರಾದರು. ಈ ವೇಳೆ 43 ಎಸೆತಗಳಲ್ಲಿ 118 ರನ್ ಗಳಿದ್ದ ರೋಹಿತ್ ಔಟ್ ಆದ ತಕ್ಷಣ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಯಾರನ್ನು ಬ್ಯಾಟಿಂಗ್ ಗೆ ಕಳುಹಿಸ ಬೇಕು ಎಂಬ ಪ್ರಶ್ನೆಗೆ ರೋಹಿತ್, ಧೋನಿ ಅವರನ್ನು ಸೂಚಿಸಿದರು.

    ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ, ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಧೋನಿ ಬ್ಯಾಟಿಂಗ್ ಅವರಿಗೆ ಮುಂಬಡ್ತಿ ನೀಡುವ ರೋಹಿತ್ ಶರ್ಮಾ ಅವರ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಟೀಂ ಇಂಡಿಯಾದ ಹಲವು ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ಅವರ ನಿರ್ಧಾರಕ್ಕೆ ಮೆಚ್ಚಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ

    ಲಂಕಾ ವಿರುದ್ಧದ ಮೊದಲ ಟಿ2 ಪಂದ್ಯದ ವೇಳೆಯೂ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವನ್ನು 4ನೇ ಸ್ಥಾನಕ್ಕೆ ಹೆಚ್ಚಿಸಿ, ಧೋನಿ ಅವರು ಬ್ಯಾಟಿಂಗ್ ನಡೆಸಲು ಸೂಕ್ತ ಕ್ರಮಾಂಕ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು.

    https://twitter.com/CricketKaVideos/status/944217327637225472

  • ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಕಟಕ್: ಟೀಂ ಇಂಡಿಯಾ – ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದ ಭಾರತದ ಇನ್ನಿಂಗ್ಸ್ ಹೊಡಿ ಬಡಿ ಆಟಕ್ಕೆ ಸಾಕ್ಷಿಯಾದರೆ ಶ್ರೀಲಂಕಾದ ಇನ್ನಿಂಗ್ಸ್ ಎಲ್ಲೂ ಇದು ಟಿ20 ಪಂದ್ಯವೆಂದು ಅನ್ನಿಸಲೇ ಇಲ್ಲ. ಈ ಪಂದ್ಯ ಶ್ರೀಲಂಕಾದ 100ನೇ ಪಂದ್ಯವಾಗಿತ್ತು. ಆದರೆ ಇದರ ಸವಿ ಶ್ರೀಲಂಕನ್ನರಿಗೆ ಸಿಗಲೇ ಇಲ್ಲ. ಕಾರಣ 100ನೇ ಪಂದ್ಯದಲ್ಲಿ ಶ್ರೀಲಂಕಾ 93 ರನ್ ಗಳಿಂದ ಸೋಲನ್ನಪ್ಪಿದೆ.

    ಶ್ರೀಲಂಕಾ ಆಟಗಾರರು ಬ್ಯಾಟ್ ಮಾಡಿದ 16 ಓವರಲ್ಲಿ ಕೇವಲ 4 ಬೌಂಡರಿ ಹಾಗೂ 2 ಸಿಕ್ಸರ್ ಮಾತ್ರ ಬಂತು. ಇಂದಿನ ಪಂದ್ಯದಲ್ಲಿ ಭಾರತದ ಪರವಾಗಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಟ್ಟು 4 ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ಅಲ್ಲದೇ ಚಾಹಲ್ 2017ರಲ್ಲಿ 19 ವಿಕೆಟ್ ಪಡೆದು, ಈ ವರ್ಷ ಗರಿಷ್ಠ ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

    ರೋಹಿತ್ ದಾಖಲೆ!: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಂಜೆಲೋ ಮ್ಯಾಥ್ಯೂಸ್ ಬೌಲಿಂಗಲ್ಲಿ 10ನೇ ಬಾರಿಗೆ ಔಟಾದರು. 2010ರ ಬಳಿಕ ಭಾರತದ ಯಾವುದೇ ಆಟಗಾರ ಒಬ್ಬನೇ ಬೌಲರ್ ಗೆ 10 ಬಾರಿ ಔಟಾದ ದಾಖಲೆಗಳಿರಲಿಲ್ಲ.

    ಧೋನಿ ಸ್ಪೆಷಲ್: ಯಾರು ಏನೇ ಹೇಳಿದರೂ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲೂ ತನ್ನ ಮ್ಯಾಜಿಕ್ ಮುಂದುವರೆಸಿದರು. ಬ್ಯಾಟಿಂಗಲ್ಲಿ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರೆ, ಕೀಪಿಂಗಲ್ಲಿ ಶ್ರೀಲಂಕಾದ ನಾಲ್ವರು ಆಟಗಾರರು ಔಟಾಗುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಇಬ್ಬರು ಆಟಗಾರರನ್ನು ಸ್ಟಂಪಿಂಗ್ ಮಾಡಿದರೆ, ಇನ್ನಿಬ್ಬರು ಆಟಗಾರರು ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ನತ್ತ ಮುಖ ಮಾಡಿದರು.

  • 79 ರನ್‍ಗಳಿಗೆ 9 ವಿಕೆಟ್ ಪತನ: ಭಾರತಕ್ಕೆ ಏಕದಿನ ಸರಣಿ

    79 ರನ್‍ಗಳಿಗೆ 9 ವಿಕೆಟ್ ಪತನ: ಭಾರತಕ್ಕೆ ಏಕದಿನ ಸರಣಿ

    ವಿಶಾಖಪಟ್ಟಣ: ಟೆಸ್ಟ್ ಸರಣಿಯನ್ನು 1-0 ಅಂತರಿಂದ ಗೆದ್ದುಕೊಂಡಿದ್ದ ಭಾರತ ಲಂಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ಮೂರನೇ ಏಕದಿನ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಲಂಕಾ 44.5 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್ ಆಯ್ತು.

    ಸುಲಭದ ಸವಾಲನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 32.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಭಾರತದ ಪರ ಶಿಖರ್ ಧವನ್ 12ನೇ ಶತಕ ಸಿಡಿಸಿ ಮಿಂಚಿದರೆ ಶ್ರೇಯಸ್ ಅಯ್ಯರ್ ಮೊದಲ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಶಿಖರ್ ಧವನ್ ಔಟಾಗದೇ 100 ರನ್(85 ಎಸೆತ, 13 ಬೌಂಡರಿ, 2 ಸಿಕ್ಸರ್), ಶ್ರೇಯಸ್ ಅಯ್ಯರ್ 65 ರನ್(63 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು.

    ಲಂಕಾ ಪರ ಉಪುಲ್ ತರಂಗ 95 ರನ್(82 ಎಸೆತ, 12 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ ಸಮರ ವಿಕ್ರಮ 42 ರನ್(57 ಎಸೆತ, 5 ಬೌಂಡರಿ) ಹೊಡೆದರು. 22.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಲಂಕಾ ನಂತರ 135 ಎಸೆತಗಳಲ್ಲಿ ಕೇವಲ 79 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡ ಪರಿಣಾಮ ಪಂದ್ಯವನ್ನು ಕಳೆದುಕೊಂಡಿತು.

    ಭಾರತದ ಪರ ಕುಲದೀಪ್ ಯಾದವ್ ಮತ್ತು ಚಹಲ್ ತಲಾ ಮೂರು ವಿಕೆಟ್ ಪಡೆದರೆ, ಪಾಂಡ್ಯ ಎರಡು, ಭುವನೇಶ್ವರ್ ಕುಮಾರ್ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು. ಶತಕ ಸಿಡಿಸುವುದರ ಜೊತೆ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ಶಿಖರ್ ಧವನ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಮೊದಲ ಪಂದ್ಯವನ್ನು ಲಂಕಾ 7 ವಿಕೆಟ್ ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯವನ್ನು ಭಾರತ 141 ರನ್ ಗಳಿಂದ ಗೆದ್ದುಕೊಂಡಿತ್ತು. ಲಂಕಾ- ಭಾರತ ನಡುವಿನ ಮೂರು ಟಿ 20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 20 ರಂದು ಕಟಕ್ ನಲ್ಲಿ ನಡೆಯಲಿದೆ.

  • ರೋ’ಹಿಟ್’ ವಿಶ್ವದಾಖಲೆಯ ದ್ವಿಶತಕ: ಭಾರತಕ್ಕೆ 141 ರನ್‍ಗಳ ಭರ್ಜರಿ ಗೆಲುವು

    ರೋ’ಹಿಟ್’ ವಿಶ್ವದಾಖಲೆಯ ದ್ವಿಶತಕ: ಭಾರತಕ್ಕೆ 141 ರನ್‍ಗಳ ಭರ್ಜರಿ ಗೆಲುವು

    ಮೊಹಾಲಿ:  ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ದ್ವಿಶತಕ ಸಿಡಿಸಿದ ಪರಿಣಾಮ 141 ರನ್ ಗಳಿಂದ ಲಂಕಾ ವಿರುದ್ಧದ ಎರಡನೇ ಏಕದಿನದಲ್ಲಿ ಪಂದ್ಯವನ್ನು ಭಾರತ  ಗೆದ್ದುಕೊಂಡಿದೆ.

    ಗೆಲ್ಲಲು 393 ರನ್‍ಗಳ ಕಠಿಣ ಸವಾಲು ಪಡೆದ ಲಂಕಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಲಂಕಾ ಪರ ಏಂಜಲೋ ಮಾಥ್ಯುಸ್ 111 ರನ್(132 ಎಸೆತ, 9 ಬೌಂಡರಿ, 3 ಸಿಕ್ಸರ್) ಸಿಡಿಸಿ ಪ್ರತಿರೋಧ ಒಡ್ಡಿದ್ದರು. ಚಹಲ್ 3 ವಿಕೆಟ್ ಪಡೆದರೆ, ಬುಮ್ರಾ 2 ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ ವಿಶ್ವದಾಖಲೆಯ ದ್ವಿಶತಕದಿಂದಾಗಿ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿತ್ತು. ಔಟಾಗದೇ 208 ರನ್(153 ಎಸೆತ, 13 ಬೌಂಡರಿ, 12 ಸಿಕ್ಸರ್) ಸಿಡಿಸಿ ಏಕದಿನ ಕ್ರಿಕೆಟ್ ನಲ್ಲಿ ಮೂರನೇ ಬಾರಿ ದ್ವಿಶತಕ ಸಿಡಿಸಿದ ಹೆಗ್ಗಳಿಕೆಗೆ ರೊಹಿತ್ ಶರ್ಮಾ ಪಾತ್ರರಾಗಿದ್ದಾರೆ.

    ಇದರ ಜೊತೆ ಭಾರತದ ಪರ ನಾಯಕನಾಗಿ ಅತಿ ಹೆಚ್ಚು ರನ್ ಹೊಡೆದ ಎರಡನೇ ಆಟಗಾರನೆಂಬ ಪಟ್ಟ ರೋಹಿತ್ ಗೆ ಲಭಿಸಿದೆ. ಈ ಪಂದ್ಯವನ್ನು ರೋಹಿತ್ ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ ಪತ್ನಿ ರಿತಿಕಾ ಅವರು ಸ್ಟೇಡಿಯಂನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ರೋಹಿತ್ ಶರ್ಮಾ ದ್ವಿಶತಕ ಸಿಡಿಸುತ್ತಿದ್ದಂತೆ ರಿತಿಕಾ ಸಂತೋಷದಿಂದ ಆನಂದ ಭಾಷ್ಪ ಸುರಿಸಿದ್ದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.1 ಓವರ್ ಗಳಲ್ಲಿ ಶಿಖರ್ ಧವನ್ ಜೊತೆ 115 ರನ್ ಜೊತೆಯಾಟವಾಡಿದರೆ ಎರಡನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಜೊತೆ 213 ರನ್ ಗಳ ಜೊತೆಯಾಟವಾಡಿದರು.

    ರೋಹಿತ್ ಶರ್ಮಾ ಔಟಾಗದೇ 208 ರನ್(13 ಬೌಂಡರಿ, 12 ಸಿಕ್ಸರ್), ಶಿಖರ್ ಧವನ್ 68 ರನ್(67 ಎಸೆತ, 9 ಬೌಂಡರಿ), ಶ್ರೇಯಸ್ ಅಯ್ಯರ್ 88 ರನ್(70 ಎಸೆತ, 9 ಬೌಂಡರಿ, 2 ಸಿಕ್ಸರ್) ಧೋನಿ 7 ರನ್, ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.1 ಓವರ್ ಗಳಲ್ಲಿ ಶಿಖರ್ ಧವನ್ ಜೊತೆ 115 ರನ್ ಜೊತೆಯಾಟವಾಡಿದರೆ ಎರಡನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಜೊತೆ 213 ರನ್ ಗಳ ಜೊತೆಯಾಟವಾಡಿದ್ದರು.

    115 ಎಸೆತದಲ್ಲಿ ಶತಕ ಹೊಡೆದ ರೋಹಿತ್ ಶರ್ಮಾ ನಂತರದ 100 ರನ್ ಗಳನ್ನು 36 ಎಸೆತದಲ್ಲಿ ಹೊಡೆದಿದ್ದರು. ವಿಶೇಷ ಏನೆಂದರೆ ಶತಕದ ಬಳಿಕ 18 ಎಸೆತದಲ್ಲಿ 50 ರನ್ ಹೊಡೆದ ನಂತರ 18 ಎಸೆತದಲ್ಲಿ 50 ರನ್ ಹೊಡೆದು ದ್ವಿಶತಕ ಪೂರ್ಣಗೊಳಿಸಿದ್ದರು. ರೋಹಿತ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ ಕೊನೆಯ 57 ಎಸೆತದಲ್ಲಿ 142 ರನ್ ಗಳಿಸಿತ್ತು.

    ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಶ್ರೀಲಂಕಾ 7 ವಿಕೆಟ್ ಗಳಿಂದ ಜಯಗಳಿತ್ತು. ಸರಣಿಯ ಕೊನೆಯ ಏಕದಿನ ಪಂದ್ಯ ವಿಶಾಖಪಟ್ಟಣದಲ್ಲಿ ಡಿಸೆಂಬರ್ 17 ಭಾನುವಾರದಂದು ನಡೆಯಲಿದೆ.

    ರೋಹಿತ್ ಶರ್ಮಾ ಈ ಹಿಂದೆ 2013ರ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್(158 ಎಸೆತ, 12 ಬೌಂಡರಿ, 16 ಸಿಕ್ಸರ್) ಹೊಡೆಯುವ ಮೂಲಕ ಮೊದಲ ದ್ವಿಶತಕ ಹೊಡೆದಿದ್ದರು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿತ್ತು. 2014ರ ನವೆಂಬರ್ ನಲ್ಲಿ ಲಂಕಾ ವಿರುದ್ಧ ರೋಹಿತ್ ಶರ್ಮಾ 264 ರನ್(173 ಎಸೆತ, 33 ಬೌಂಡರಿ, 9 ಸಿಕ್ಸರ್) ಸಿಡಿಸಿದ್ದರು. ಈ ಮ್ಯಾಚ್ ನಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 404 ರನ್ ಗಳಿಸಿತ್ತು.

    ಸಚಿನ್ ತೆಂಡೂಲ್ಕರ್ (200*) ಏಕದಿನ ಇತಿಹಾಸದಲ್ಲೇ ಮೊದಲ ಬಾರಿಗೆ ದ್ವಿಶತಕ ಸಾಧನೆ ಮಾಡಿದ್ದರೆ ನಂತರ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (219) ಸಹ ಇದೇ ಸಾಲಿಗೆ ಸೇರಿದ್ದರು. ವೆಸ್ಟ್‍ಇಂಡೀಸ್‍ನ ಕ್ರಿಸ್ ಗೇಲ್ (215) ಮತ್ತು ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ (237*) ದ್ವಿಶತಕ ಹೊಡೆದಿದ್ದಾರೆ.

    ರೋಹಿತ್ ರನ್ ಏರಿದ್ದು ಹೀಗೆ:
    50 ರನ್ – 65 ಎಸೆತ, 5 ಬೌಂಡರಿ
    100 ರನ್ – 115 ಎಸೆತ, 115 ಎಸೆತ, 9 ಬೌಂಡರಿ, 1 ಸಿಕ್ಸರ್
    150 ರನ್ – 133 ಎಸೆತ, 10 ಬೌಂಡರಿ, 7 ಸಿಕ್ಸರ್
    200 ರನ್ – 151 ಎಸೆತ, 13 ಬೌಂಡರಿ, 11 ಸಿಕ್ಸರ್
    208 ರನ್ – 153 ಎಸೆತ, 13 ಬೌಂಡರಿ, 12 ಸಿಕ್ಸರ್

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 73 ಎಸೆತ
    100 ರನ್ – 116 ಎಸೆತ
    150 ರನ್ – 161 ಎಸೆತ
    200 ರನ್ – 205 ಎಸೆತ
    250 ರನ್ – 243 ಎಸೆತ
    300 ರನ್ – 263 ಎಸೆತ
    350 ರನ್ – 284 ಎಸೆತ
    392 ರನ್ – 300 ಎಸೆತ

  • 100 ಮೀಟರ್ ಓಡಿದ್ರು ಧೋನಿ, ಪಾಂಡ್ಯ: ವಿನ್ನರ್ ಯಾರು ಗೊತ್ತಾ?

    100 ಮೀಟರ್ ಓಡಿದ್ರು ಧೋನಿ, ಪಾಂಡ್ಯ: ವಿನ್ನರ್ ಯಾರು ಗೊತ್ತಾ?

    ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಮಾಜಿ ನಾಯಕ, ವಿಕೆಟ್ ಕೀಪರ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ 100 ಮೀಟರ್ ಓಟ ಓಡಿದ್ದಾರೆ.

    ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರರು ಮೈದಾನದಲ್ಲಿ ನೆಟ್ ಪ್ರಾಕ್ಟಿಸ್ ಮಡುತ್ತಿದ್ದರು. ಈ ವೇಳೆ ಧೋನಿ ಮತ್ತು ಪಾಂಡ್ಯ ಓಟ ಓಡಿದ್ದಾರೆ. ಈ ಓಟದ ಸ್ಪರ್ಧೆಯಲ್ಲಿ ಧೋನಿ ಜಯಗಳಿಸಿದ್ದು, ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್  ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

    ಬುಧವಾರ ಬೆಳಗ್ಗೆ 10.48 ಕ್ಕೆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ 2,800 ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದರೆ, 8 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

     

  • ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್..!

    ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್..!

    ಧರ್ಮಶಾಲಾ: ಟೆಸ್ಟ್ ಸರಣಿಯ ಗೆಲುವಿನ ಗುಂಗಿನಲ್ಲಿರುವ ಟೀಮ್ ಇಂಡಿಯಾಗೆ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ತಿರುಗೇಟು ನೀಡಿರುವ ಸಿಂಹಳೀಯರು, ಗೆಲುವಿನ ಮುನ್ನುಡಿ ಬರೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ದೆಹಲಿಯ ವಾಯು ಮಾಲಿನ್ಯದ ಬಿಸಿಯ ಬಳಿಕ ಪ್ರಕೃತಿ ರಮಣೀಯ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪಾಲಿಗೆ ಎಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ. ನಾಯಕತ್ವದ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ತಿಸಾರ ಬೌಲಿಂಗ್ ಆಯ್ಕೆ ಮಾಡಿಕೊಂಡರು.

    ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಲಂಕಾ ಬೌಲರ್‍ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಟೀಂ ಇಂಡಿಯಾ ಖಾತೆ ತರೆಯುವ ಮೊದಲೇ ವಿಕೆಟ್ ಕಳೆದುಕೊಂಡಿತು. ಇನ್ನು ಟೀಂ ಇಂಡಿಯಾ 16 ರನ್ ಗಳಿಸುವಷ್ಟರಲ್ಲಿ ಐದು ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿ ನೆಗೆಟಿವ್ ದಾಖಲೆಗೆ ಕಾರಣರಾದರು. ಈ ಹಿಂದೆ 1983ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 17 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಆಶ್ಚರ್ಯವೆಂಬಂತೆ ಆ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು.

    ಟೀಂ ಇಂಡಿಯಾ ಅನುಭವಿ ಆರಂಭಿಕ ಆಟಗಾರ ಶೇಖರ್ ಧವನ್ ಇನ್ನಿಂಗ್ಸ್‍ನ ಎರಡನೇ ಓವರ್‍ನಲ್ಲಿ ಲಂಕಾ ಬೌಲರ್ ಮ್ಯಾಥ್ಯೂಸ್ ಎಸೆತದಲ್ಲಿ ಎಲ್‍ಬಿಡಬ್ಲ್ಯೂ ಆಗಿ ಪೆವಿಲಿಯನ್ ಪೆವಿಲಿಯನ್ ಸೇರಿದರು. ನಂತರ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ 13 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಲಕ್ಮಲ್ ಬೌಲಿಂಗ್ ನಲ್ಲಿ ಕೀಪರ್ ಡಿಕ್ವೆಲ್ಲಾ ಕ್ಯಾಚಿತ್ತು ನಿರ್ಗಮಿಸಿದರು. ಮೂರನೇ ಕ್ರಮಂಕದಲ್ಲಿ ಕ್ರೀಸ್‍ಗಿಳಿದ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಲಂಕಾ ಬೌಲರ್ ದಾಳಿಯನ್ನು ಎದುರಿಸಲಾಗದೆ 9 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು.

    ರಹಾನೆ ಜಾಗದಲ್ಲಿ ಆಡಲು ಅವಕಾಶ ಪಡೆದ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿ, ಬಂದಷ್ಟೇ ವೇಗದಲ್ಲಿ ಮರಳಿದರು. ಇನ್ನು, ಮತ್ತೊಮ್ಮೆ ತನ್ನ ಆಯ್ಕೆಯನ್ನು ಪ್ರಶ್ನಿಸುವಂತೆ ಬ್ಯಾಟ್ ಬೀಸಿದ ಕನ್ನಡಿಗ ಮನೀಶ್ ಪಾಂಡೆ ತಂಡಕ್ಕೆ 2 ರನ್ ಕೊಡುಗೆ ನೀಡಿದರು. ಟೀಂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಕ್ರೀಸ್ ಗಿಳಿದ ಹಾರ್ದಿಕ್ ಪಾಂಡ್ಯಾ ಬಿರುಸಿನಿಂದ ಬ್ಯಾಟ್ ನಡೆಸಿ 10 ಎಸೆತಗಳಲ್ಲಿ 2 ಬೌಂಡಿರಿಗಳ ನೆರವಿನಿಂದ 10 ರನ್ ಗಳಿಸಿ ಪ್ರದೀಪ್‍ಗೆ ವಿಕೆಟ್ ಒಪ್ಪಿಸಿದರು.

    ನಂತರ ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾ ಮಾಜಿ ನಾಯಕ ದೋನಿ ತಂಡಕ್ಕೆ ಆಸರೆಯಾಗಿ 87 ಎಸೆತಗಳಲ್ಲಿ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಬೂಮ್ರ, ಚಹಾಲ್ ಶೂನ್ಯ ಸಂಪಾದಿಸಿದರೆ. ಕುಲ್ದೀಪ್ ಯಾದವ್ 25 ಎಸೆತಗಲ್ಲಿ 19 ರನ್ ಗಳಿಸಿ ಟೀಂ ಇಂಡಿಯಾ ಮೊತ್ತ ಮೂರಂಕಿ ಗಡಿದಾಟಲು ನೆರವಾದರು.

    ಶ್ರೀಲಂಕಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಲಕ್ಮಲ್ 10 ಓವರ್ 13 ರನ್ ಮಾತ್ರ ನೀಡಿ. ನಾಲ್ಕು ಮೆಡಿನ್ ಓವರ್‍ಗಳೊಂದಿಗೆ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪಡೆದರು.

    ಇನ್ನೂಳಿದಂತೆ ಲಂಕಾದ ಫರ್ನಾಂಡೋ 2 ವಿಕೆಟ್ ಹಾಗೂ ಮ್ಯಾಥ್ಯೂಸ್, ಪೆರೇರಾ, ಧನುಂಜಯ್, ಪತಿರಾಣಾ ತಲಾ ಒಂದು ವಿಕೆಟ್ ಪಡೆದು ಟೀಂ ಇಂಡಿಯಾ ಅಲ್ಪ ಮೊತ್ತ ಪಡೆಯಲು ಕಾರಣರಾದರು.

    ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್ :
    0/1
    2/2
    8/3
    16/4
    16/5
    28/6
    29/7
    70/8
    87/9
    112/10

     

  • ಲಂಕಾ ಪರ ಬ್ಯಾಟ್ ಮಾಡಲು ಹೋಗಿ ಟ್ರೋಲ್ ಆದ ರಸೆಲ್ ಅರ್ನಾಲ್ಡ್

    ಲಂಕಾ ಪರ ಬ್ಯಾಟ್ ಮಾಡಲು ಹೋಗಿ ಟ್ರೋಲ್ ಆದ ರಸೆಲ್ ಅರ್ನಾಲ್ಡ್

    ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಪಡೆದಿರುವ ಭಾರತ, ಮುಂಬರುವ ಏಕದಿನ ಸರಣಿಯಲ್ಲಿ ವೈಟ್‍ವಾಶ್ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದ ಶ್ರೀಲಂಕಾ ಮಾಜಿ ಆಟಗಾರ ರಸೆಲ್ ಅರ್ನಾಲ್ಡ್ ಅವರಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮರುಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

    ಭಾರತ- ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ 1-0 ಮುಕ್ತಾಯವಾಗಿದೆ. ಆದರೆ ಕಳೆದ ಬಾರಿ ಹಾಗೇ ಮುಂಬರುವ ಏಕದಿನ ಸರಣಿ 5-0 ಯೊಂದಿಗೆ ಮುಕ್ತಾಯವಾಗುವುದಿಲ್ಲ ಎಂದು ಆಶ್ವಾಸನೆ ನೀಡುವುದಾಗಿ ರೆಸೆಲ್ ಅರ್ನಾಲ್ಡ್ ಟ್ವೀಟ್ ಮಾಡಿದ್ದರು.

    ಅರ್ನಾಲ್ಡ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ವಿವಿಎಸ್ ಲಕ್ಷ್ಮಣ್ ಭಾರತ ಮತ್ತು ಲಂಕಾ ನಡುವಿನ ಏಕದಿನ ಸರಣಿ 3 ಪಂದ್ಯಗಳಿಂದ ಕೂಡಿದ್ದು ನಿಮ್ಮ ಭವಿಷ್ಯ ಸುಳ್ಳಾಗಲಿದೆ ಎಂದು ಮರು ಟ್ವೀಟ್ ಮಾಡಿದ್ದಾರೆ. ಲಕ್ಷ್ಮಣ್ ಅವರ ಟ್ವೀಟ್ ಗೆ ಹಲವು ಟೀಂ ಇಂಡಿಯಾ ಅಭಿಮಾನಿಗಳು ಮರು ಟ್ವೀಟ್ ಮಾಡಿ, ಅರ್ನಾಲ್ಡ್ ಅವರ ಕಾಲೆಳೆದಿದ್ದಾರೆ.

    ವರ್ಷದ ಆರಂಭದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಲಂಕಾ ವಿರುದ್ಧದ ಮೂರು ಮಾದರಿಯ ಕ್ರಿಕೆಟ್ (ಟೆಸ್ಟ್-3, ಏಕದಿನ-3, ಟಿ20-3) ಸರಣಿಯಲ್ಲಿ ಗೆಲವು ಪಡೆದು ವೈಟ್‍ವಾಶ್ ಮಾಡಿತ್ತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಡೆದ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಗೆಲುವು ಪಡೆದಿರುವ ದಾಖಲೆ ನಿರ್ಮಿಸಿದೆ.

    ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದಲ್ಲಿ ಸೋಲು ಪಡೆದಿದೆ. ಡಿಸೆಂಬರ್ 10 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಇದೇ ವಿಚಾರವಾಗಿ ಅರ್ನಾಲ್ಡ್ ಟ್ವೀಟ್ ಮಾಡಿದ್ದರು. ಏಕದಿನ ಸರಣಿಯ ನಂತರ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

    https://twitter.com/sgntweets/status/938719961887002624