Tag: Sri Lanka

  • ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ

    ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ

    ಬೀಜಿಂಗ್: ಚೀನಾದ ಸಂಶೋಧನಾ ನೌಕೆ ಮಂಗಳವಾರ ಶ್ರೀಲಂಕಾವನ್ನು ತಲುಪಿದ್ದು, ಅದು ನಡೆಸುವ ಚಟುವಟಿಕೆ ಯಾವುದೇ ದೇಶಗಳಿಗೂ ತೊಂದರೆ ಕೊಡುವುದಿಲ್ಲ ಎಂದು ಚೀನಾ ಭರವಸೆ ನೀಡಿದೆ.

    ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಯುವಾನ್ ವಾಂಗ್ 5 ಹಡಗು ಶ್ರೀಲಂಕಾದ ಸಹಕಾರದಿಂದಾಗಿ ಯಶಸ್ವಿಯಾಗಿ ಹಂಬನತೋಟಾ ಬಂದರಿನಲ್ಲಿ ಲಂಗರು ಹಾಕಿದೆ. ಚೀನಾದಿಂದ ಸಾಲ ಪಡೆದು ದಿವಾಳಿಯಾಗಿರುವ ಶ್ರೀಲಂಕಾಗೆ ಬೆಂಬಲ ವಿಸ್ತರಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ ಎಂದು ಹೇಳಿದರು.

    ಚೀನಾ ಕಳುಹಿಸಿರುವ ಹಡಗಿನ ಬಗ್ಗೆ ಭಾರತ ಹಾಗೂ ಅಮೆರಿಕ ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿದ ವಾಂಗ್, ಯುವಾನ್ ವಾಂಗ್ 5 ಹಡಗು ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದಗಳಿಗೆ ಬದ್ಧವಾಗಿದೆ. ಇದನ್ನು ನಾನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇನೆ, ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವುದು ಸಾಂಪ್ರದಾಯಿಕ ಅಭ್ಯಾಸ ಎಂದರು. ಇದನ್ನೂ ಓದಿ: ಶ್ರೀಲಂಕಾ ತಲುಪಿದ ಚೀನಾದ ಸರ್ವೇಕ್ಷಣಾ ಹಡಗು – ಈ ನೌಕೆಯ ವಿಶೇಷತೆ ಏನು?

    ಹಡಗಿನ ಕಾರ್ಯಾಚರಣೆ ಯಾವುದೇ ದೇಶದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮ ಕಾರ್ಯಾಚರಣೆಗೂ ಯಾವುದೇ ದೇಶಗಳು ಅಡ್ಡಿ ಪಡಿಸಬಾರದು ಎಂದು ವಿನಂತಿಸಿದರು.

    ಉಪಗ್ರಹ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಟ್ರ್ಯಾಕಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ಚೀನಾದ ಯುವಾನ್ ವಾಂಗ್ ಹಡಗಿನ ಬಗ್ಗೆ ಭಾರತ ಹಾಗೂ ಅಮೆರಿಕ ಕಳವಳ ವ್ಯಕ್ತಪಡಿಸಿದ್ದರಿಂದ ಶ್ರೀಲಂಕಾ ಹಡಗಿನ ಆಗಮನವನ್ನು ವಿಳಂಬಗೊಳಿಸುವಂತೆ ಚೀನಾವನ್ನು ಕೇಳಿತ್ತು. ಬಳಿಕ ಶ್ರೀಲಂಕಾ ಆಗಸ್ಟ್ 16 ರಿಂದ 22ರ ವರೆಗೆ ಹಡಗಿನ ಪ್ರವೇಶಕ್ಕೆ ಅನುಮತಿ ನೀಡಿತು. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ – ಬಿಜೆಪಿ ನಾಯಕನ ವಿರುದ್ಧ ಕೇಸ್

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ತಲುಪಿದ ಚೀನಾದ ಸರ್ವೇಕ್ಷಣಾ ಹಡಗು – ಈ ನೌಕೆಯ ವಿಶೇಷತೆ ಏನು?

    ಶ್ರೀಲಂಕಾ ತಲುಪಿದ ಚೀನಾದ ಸರ್ವೇಕ್ಷಣಾ ಹಡಗು – ಈ ನೌಕೆಯ ವಿಶೇಷತೆ ಏನು?

    ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದ ದಕ್ಷಿಣದ ಬಂದರಿಗೆ ಮಂಗಳವಾರ ಚೀನಾದ ಸರ್ವೇಕ್ಷಣಾ ಹಡಗು ತಲುಪಿದೆ. ಭಾರತದ ಸೇನಾ ನೆಲೆಯ ಮೇಲೆ ಚೀನಾ ಕಣ್ಣಿಡುವ ಆತಂಕದ ನಡುವೆಯೂ ಹಡಗು ಶ್ರೀಲಂಕಾವನ್ನು ಪ್ರವೇಶಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.

    ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ‍್ಯಾಕಿಂಗ್ ಹಡಗು ಯುವಾನ್ ವಾಂಗ್ 5 ಸ್ಥಳೀಯ ಕಾಲಮಾನ ಬೆಳಗ್ಗೆ 8:20ಕ್ಕೆ ಶ್ರೀಲಂಕಾದ ಹಂಬನತೋಟದ ದಕ್ಷಿಣದ ಬಂದರಿಗೆ ಆಗಮಿಸಿದೆ. ಇದು ಆಗಸ್ಟ್ 22 ರವರೆಗೆ ಅಲ್ಲಿಯೇ ಲಂಗರು ಹಾಕಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚೀನಾದ ಹಡಗು ಆಗಸ್ಟ್ 11 ರಂದೇ ಶ್ರೀಲಂಕಾ ತಲುಪಬೇಕಿತ್ತು. ಆದರೆ ಶ್ರೀಲಂಕಾದ ಅಧಿಕಾರಿಗಳು ಅನುಮತಿ ನೀಡಿರದ ಕಾರಣ ವಿಳಂಬವಾಗಿತ್ತು. ಚೀನಾದ ಹಡಗಿನ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಹಡಗು ಪ್ರವೇಶವನ್ನು ಮುಂದೂಡುವಂತೆ ಚೀನಾವನ್ನು ಕೋರಿತ್ತು. ಬಳಿಕ ಶ್ರೀಲಂಕಾ ಶನಿವಾರದಂದು ಆಗಸ್ಟ್ 16 ರಿಂದ 22ರ ವರೆಗೆ ಭೇಟಿಗೆ ಅನುಮತಿ ನೀಡಿತು.

    ಹಡಗಿನ ವಿಶೇಷತೆ:
    ಯುವಾನ್ ವಾಂಗ್ 5 ಹಡಗು ಬಾಹ್ಯಾಕಾಶ ಹಾಗೂ ಉಪಗ್ರಹ ಟ್ರ್ಯಾಕಿಂಗ್‌ನಲ್ಲಿ ಕರಗತವಾಗಿದೆ. ಇದರ ಮೂಲಕ ಉಪಗ್ರಹಗಳು, ರಾಕೆಟ್ ಮಾತ್ರವಲ್ಲದೇ ವಿದೇಶಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉಡಾವಣೆಯನ್ನು ಟ್ರ್ಯಾಕ್ ಮಾಡಬಹುದು. ಚೀನಾ ಯುವಾನ್ ವಾಂಗ್‌ನ 7 ಹಡಗುಗಳನ್ನು ಹೊಂದಿದ್ದು, ಬೇಹುಗಾರಿಕೆಯ ಉದ್ದೇಶದಿಂದಲೇ ನಿರ್ಮಿಸಲಾಗಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಯುವಾನ್ ವಾಂಗ್ 5 ಸೇನಾ ಹಡಗು ಅಲ್ಲ. ಆದರೆ ಅದು ಮಾಡುವ ಕೆಲಸ ಅತ್ಯಂತ ಆಘಾತಕಾರಿ. ಯಾವುದೇ ದೇಶಗಳು ಕ್ಷಿಪಣಿಗಳನ್ನು ಹಾರಿಸುವಾಗ ಹಡಗು ತನ್ನ ಚಲನೆಯನ್ನು ತೋರಿಸುತ್ತದೆ. 750 ಕಿ.ಮೀ ದೂರದಿಂದಲೂ ನೀವು ಮಾತನಾಡುವುದನ್ನು ಈ ಹಡಗಿನಲ್ಲಿ ಕುಳಿತು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು. ಈ ಹಡಗಿನಲ್ಲಿ 400 ಸಿಬ್ಬಂದಿ ಇರುವುದಾಗಿ ತಿಳಿದುಬಂದಿದೆ.

    ಯುವಾನ್ ವಾಂಗ್ 5 ಹಡಗು ಶ್ರೀಲಂಕಾಗೆ ಸಂಶೋಧನೆ ಹಾಗೂ ಸಮೀಕ್ಷೆ ನಡೆಸುವ ಸಲುವಾಗಿ ಆಗಮಿಸಿದೆ ಎನ್ನಲಾಗಿದೆ. ಆದರೆ ಹಡಗು 2 ರೀತಿ ಕೆಲಸ ಮಾಡಬಲ್ಲ ಪತ್ತೆದಾರಿ ಹಡಗು ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಚೀನಾದ ಹಡಗು ತನ್ನ ಕಾರ್ಯಾಚರಣೆ ನಡೆಸುವ ವೇಳೆ ಭಾರತದ ಸೇನಾ ನೆಲೆಯ ಮೇಲೆ ಕಣ್ಣಿಡುವ ಸಾಧ್ಯತೆ ಇದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮೆಟ್ರೋ ಸ್ಟೇಷನ್ ಒಳಗೂ ಸಾವರ್ಕರ್ ಫೋಟೋಗೆ ಆಕ್ಷೇಪ- ಟ್ವಿಟ್ಟರ್‌ನಲ್ಲಿ ಅಭಿಯಾನ

     

    ಶ್ರೀಲಂಕಾ ತಾನು ಮಾಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆ 2017ರಲ್ಲಿ ಹಂಬನತೋಟ ಬಂದರನ್ನು 99 ವರ್ಷಗಳ ಗುತ್ತಿಗೆಗೆ ಚೀನಾಗೆ ಹಸ್ತಾಂತರಿಸಿದೆ. ಈ ಬಂದರು ಚೀನಾದ ನೌಕಾ ನೆಲೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹಾಗೂ ಅಮೆರಿಕ ಕಳವಳ ವ್ಯಕ್ತಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಚೀನಾದ ಸರ್ವೇಕ್ಷಣಾ ಹಡಗಿಗೆ ಲಂಕಾ ಪ್ರವೇಶಕ್ಕೆ ಅನುಮತಿ – ಭಾರತಕ್ಕೆ ಕಳವಳ

    ಚೀನಾದ ಸರ್ವೇಕ್ಷಣಾ ಹಡಗಿಗೆ ಲಂಕಾ ಪ್ರವೇಶಕ್ಕೆ ಅನುಮತಿ – ಭಾರತಕ್ಕೆ ಕಳವಳ

    ಕೊಲಂಬೋ: ಭಾರತದ ಸೇನಾ ನೆಲೆಗಳ ಮೇಲೆ ಚೀನಾ ಕಣ್ಣಿಡುವ ಭೀತಿಯ ನಡುವೆಯೇ ಚೀನಾದ ಸರ್ವೇಕ್ಷಣಾ ಹಡಗಿಗೆ ಶ್ರೀಲಂಕಾ ಪ್ರವೇಶಿಸಲು ಅನುಮತಿ ದೊರೆತಿದೆ. ಶನಿವಾರ ಶ್ರೀಲಂಕಾ ಸರ್ಕಾರ ಚೀನಾದ ನೌಕೆಗೆ ದ್ವೀಪವನ್ನು ಪ್ರವೇಶಿಸಲು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶ್ರೀಲಂಕಾ ದಡಕ್ಕೆ ಬರುತ್ತಿರುವ ಚೀನಾದ ಯುವಾನ್ ವಾಂಗ್ 5 ಹಡಗು ಸಂಶೋಧನೆ ಹಾಗೂ ಸಮೀಕ್ಷೆ ನಡೆಸುವ ಸಲುವಾಗಿ ಆಗಮಿಸುತ್ತಿದೆ ಎನ್ನಲಾಗಿದೆ. ಆದರೆ ಈ ಹಡಗು 2 ರೀತಿಯ ಕೆಲಸ ಮಾಡಬಲ್ಲ ಪತ್ತೇದಾರಿ ಹಡಗು ಎಂದು ಭಾರತ ಕಳವಳ ವ್ಯಕ್ತಪಡಿಸುತ್ತಿದೆ. ಇದನ್ನೂ ಓದಿ: ಕೋವಿಡ್ ಏರಿಳಿತ; ರಾಜ್ಯದಲ್ಲಿಂದು 1,329 ಮಂದಿಗೆ ಕೊರೊನಾ – ಮೂರೇ ದಿನಗಳಲ್ಲಿ 16 ಜೀವ ಬಲಿ

    ಯುವಾನ್ ವಾಂಗ್ ಹಡಗು ಜುಲೈ 13 ರಂದು ಚೀನಾದಿಂದ ಹೊರಟಿತ್ತು. ಇದರ ಆಗಮನಕ್ಕೆ ಶ್ರೀಲಂಕಾ ಈಗಾಗಲೇ ಅನುಮತಿ ನೀಡಿದ್ದು, ಇದು ಆಗಸ್ಟ್ 17ರ ವರೆಗೂ ಶ್ರೀಲಂಕಾದಲ್ಲಿಯೇ ಉಳಿಯುವ ಸಾಧ್ಯತೆಗಳಿವೆ. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ದುರಾಲೋಚನೆಯನ್ನು ಮೈಗೂಡಿಸಿಕೊಂಡಿರುವ ಚೀನಾ ತನ್ನ ಸ್ಥಾನವನ್ನು ಭದ್ರಪಡಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲದು ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಉಪಸ್ಥಿತಿ ಹಾಗೂ ಶ್ರೀಲಂಕಾದ ವರ್ತನೆ ಭಾರತವನ್ನು ಗೊಂದಲಕ್ಕೀಡು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಕೊಲಂಬೋ: ದೇಶದಲ್ಲಿ 50 ಬಂಕ್‌ಗಳನ್ನು ತೆರೆಯಲು ಇಂಡಿಯನ್‌ ಆಯಿಲ್‌ ಕಂಪನಿಗೆ  ಶ್ರೀಲಂಕಾ ಸರ್ಕಾರ ಅನುಮತಿ ನೀಡಿದೆ.

    ಇಂಧನ ಸಮಸ್ಯೆಯನ್ನು ಪರಿಹರಿಸಲು ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ (LIOC) 50 ಹೊಸ ಇಂಧನ ಕೇಂದ್ರಗಳನ್ನು ತೆರೆಯಲು ಶ್ರೀಲಂಕಾ ಅನುಮೋದನೆ ನೀಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

    LIOC ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಂಗ ಸಂಸ್ಥೆಯಾಗಿದೆ ಮತ್ತು ಕೊಲಂಬೋ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಮಾಡಲಾಗಿದೆ.

    ಶ್ರೀಲಂಕಾದ ಅತಿ ದೊಡ್ಡ ಸರ್ಕಾರಿ ನಿಯಂತ್ರಣದಲ್ಲಿರುವ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ದೇಶದಲ್ಲಿ ಸುಮಾರು 1,190 ಇಂಧನ ಕೇಂದ್ರಗಳನ್ನು ನಿರ್ವಹಿಸುತ್ತದೆ.  ಇದನ್ನೂ ಓದಿ: ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

    ಎಲ್‌ಐಒಸಿ ಶ್ರೀಲಂಕಾದಲ್ಲಿರುವ ಸಣ್ಣ ಕಂಪನಿಯಾಗಿದ್ದು 216 ಇಂಧನ ಕೇಂದ್ರಗಳನ್ನು ಹೊಂದಿದೆ. ಮುಂದೆ 2 ಶತಕೋಟಿ ರೂ. ಬಂಡವಾಳವನ್ನು ಹೂಡಲಿದೆ ಎಂದು ಕಂಪನಿಯ ನಿರ್ದೇಶಕ ಮನೋಜ್‌ ಗುಪ್ತಾ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಸಿಪಿಸಿಗೆ ಎಲ್‌ಐಒಸಿ ಇಂಧನವನ್ನು ಸರಬರಾಜು ಮಾಡಿತ್ತು.

    ಇಂಧನ, ಆಹಾರ, ರಸಗೊಬ್ಬರ ಖರೀದಿ ಸಂಬಂಧ ಭಾರತ ಶ್ರೀಲಂಕಾಗೆ  ಈ ವರ್ಷ  ಒಟ್ಟು 4 ಶತಕೋಟಿ ಡಾಲರ್‌ ಹಣವನ್ನು ನೀಡಿದೆ. ಆರ್ಥಿಕ ಸಮಸ್ಯೆಯಿಂದ ಪಾರಾಗಲು 3 ಶತಕೋಟಿ ಡಾಲರ್‌ ಪ್ಯಾಕೇಜ್‌ ನೀಡುವಂತೆ ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಬಳಿ ಶ್ರೀಲಂಕಾ ಮನವಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

    ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

    ಬೀಜಿಂಗ್: ಆಯಕಟ್ಟಿನ ಹಂಬಂಟೋಟಾ ಬಂದರಿನಲ್ಲಿ ಚೀನಾದ ಉನ್ನತ ತಂತ್ರಜ್ಞಾನದ ಸಂಶೋಧನಾ ನೌಕೆಯ ಯೋಜಿತ ಡಾಕಿಂಗ್ ಅನ್ನು ಮುಂದೂಡಲು ಶ್ರೀಲಂಕಾದ ಮನವಿಯಿಂದ ರೊಚ್ಚಿಗೆದ್ದ ಚೀನಾ, ಕೊಲಂಬೊದ ಮೇಲೆ ಒತ್ತಡ ಹೇರುವುದು ಅರ್ಥಹೀನ ಎಂದು ಸೋಮವಾರ ಭಾರತವನ್ನು ಕೇಳಿಕೊಂಡಿದೆ.

    ಕೊಲಂಬೊದ ವರದಿಗಳ ಪ್ರಕಾರ, ಭಾರತವು ಭದ್ರತಾ ಕಳವಳ ವ್ಯಕ್ತಪಡಿಸಿದೆ. ಈ ಕಾರಣ ಆಗಸ್ಟ್ 11 ರಿಂದ 17 ರವರೆಗೆ ಹಂಬನ್‍ತೋಟ ಬಂದರಿನಲ್ಲಿ ಡಾಕಿಂಗ್ ಮಾಡಲು ನಿಗದಿಯಾಗಿದ್ದ ಚೀನಾದ ಬಾಹ್ಯಾಕಾಶ ಮತ್ತು ಉಪಗ್ರಹ ಟ್ರ್ಯಾಕಿಂಗ್ ಸಂಶೋಧನಾ ನೌಕೆ ‘ಯುವಾನ್ ವಾಂಗ್ 5’ ಆಗಮನವನ್ನು ಮುಂದೂಡುವಂತೆ ಶ್ರೀಲಂಕಾ ಬೀಜಿಂಗ್‍ಗೆ ಕೇಳಿಕೊಂಡಿದೆ. ಇದನ್ನೂ ಓದಿ: ಅಕ್ರಮ ಗೋಹತ್ಯೆ ಮನೆ ಮೇಲೆ ದಾಳಿ – ವಿದ್ಯುತ್ ಸಂಪರ್ಕ ಕಟ್, ಶರಣಾಗಲು ಸೂಚನೆ 

    ವರದಿಗಳಿಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಬೀಜಿಂಗ್ ವರದಿಗಳನ್ನು ಗಮನಿಸಿದೆ. ಚೀನಾ ಮತ್ತು ಶ್ರೀಲಂಕಾ ನಡುವಿನ ಸಹಕಾರವು ಎರಡು ದೇಶಗಳ ಸ್ವತಂತ್ರ ಆಯ್ಕೆಯಾಗಿದೆ. ಎರಡು ದೇಶಗಳು ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಇದು ಯಾವುದೇ ಮೂರನೇ ವ್ಯಕ್ತಿಯನ್ನು ಗುರಿಯಾಗಿಸಿಲ್ಲ ಎಂದು ಟೀಕಿಸಿದರು.

    China Seeks Urgent Meeting After Sri Lanka Relents To India Pressure: Report

    ಭದ್ರತಾ ಕಾಳಜಿಯ ವಿಷಯವನ್ನು ಉಲ್ಲೇಖಿಸಿ ಶ್ರೀಲಂಕಾದ ಮೇಲೆ ಒತ್ತಡ ಹೇರುವುದು ಅರ್ಥಹೀನವಾಗಿದೆ. ಶ್ರೀಲಂಕಾ ಸಾರ್ವಭೌಮ ರಾಷ್ಟ್ರವಾಗಿದೆ. ಅದು ತನ್ನ ಸ್ವಂತ ಅಭಿವೃದ್ಧಿ ಹಿತಾಸಕ್ತಿಗಳ ಬೆಳಕಿನಲ್ಲಿ ಇತರ ದೇಶಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು. ಇದನ್ನೂ ಓದಿ:  ಉಕ್ರೇನ್ ಯುದ್ಧದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ವೀಡಿಯೋ ಶೇರ್ ಮಾಡಿದ ರಷ್ಯಾ

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದತ್ತ ಸಾಗುತ್ತಿದೆ ಪತ್ತೇದಾರಿ, ಬ್ಯಾಲಿಸ್ಟಿಕ್‌ ಕ್ಷಿಪಣಿ ಹೊತ್ತ ಚೀನಿ ಹಡಗು

    ಶ್ರೀಲಂಕಾದತ್ತ ಸಾಗುತ್ತಿದೆ ಪತ್ತೇದಾರಿ, ಬ್ಯಾಲಿಸ್ಟಿಕ್‌ ಕ್ಷಿಪಣಿ ಹೊತ್ತ ಚೀನಿ ಹಡಗು

    ಕೊಲಂಬೋ: ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ ಭೇಟಿ ಬಳಿಕ ಕೆಂಡಾಮಂಡಲವಾಗಿರುವ ಚೀನಾ ಈಗ ಬ್ಯಾಲಿಸ್ಟಿಕ್‌ ಕ್ಷಿಪಣಿ ಮತ್ತು ಉಪಗ್ರಹಗಳನ್ನು ಪತ್ತೆಹಚ್ಚಲು ಸಾಧ್ಯವಾಗುವ ಹಡಗನ್ನು ಶ್ರೀಲಂಕಾಗೆ ಕಳುಹಿಸಿಕೊಟ್ಟಿದೆ.

    ಯುವಾನ್ ವಾಂಗ್ 5 ಹೆಸರಿನ ಹಡಗು ಆಗಸ್ಟ್ 11 ಅಥವಾ 12 ರಂದು ಹಂಬನ್‌ತೋಟ ಬಂದರಿಗೆ ಆಗಮಿಸುವ ಸಾಧ್ಯತೆಯಿದೆ. 400 ಸಿಬ್ಬಂದಿಯನ್ನು ಹೊಂದಿರುವ ಹಡಗಿನಲ್ಲಿ ಟ್ರ್ಯಾಕಿಂಗ್ ಆಂಟೆನಾ ಮತ್ತು ವಿವಿಧ ಸಂವೇದಕಗಳನ್ನು ಅಳವಡಿಸಲಾಗಿದೆ.

    ಹಿಂದೂ ಮಹಾಸಾಗರದ ಭಾಗದಲ್ಲಿ ಈ ಹಡಗನ್ನು ನಿಯೋಜಿಸಿದರೆ ಒಡಿಶಾದ ಕರಾವಳಿಯ ವೀಲರ್ ದ್ವೀಪದಿಂದ ಭಾರತದ ಕ್ಷಿಪಣಿ ಪರೀಕ್ಷೆಗಳನ್ನು ಟ್ರ್ಯಾಕ್‌ ಮಾಡಲು ಸಾಧ್ಯವಾಗುತ್ತದೆ. ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳನ್ನು ಪತ್ತೆಹಚ್ಚಿ, ಕ್ಷಿಪಣಿಗಳ ಕಾರ್ಯಕ್ಷಮತೆ ಮತ್ತು ಅವುಗಳ ನಿಖರ ವ್ಯಾಪ್ತಿಯ ಮಾಹಿತಿಯನ್ನು ಚೀನಾ ಸಂಗ್ರಹಿಸಬಹುದಾಗಿದೆ.

    ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಇಡಲು ಹಡಗನ್ನು ಕಳುಹಿಸುತ್ತಿದ್ದೇವೆ ಎಂದು ಚೀನಾ ನಮಗೆ ತಿಳಿಸಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ಮಾಧ್ಯಮ ವಕ್ತಾರ ಕರ್ನಲ್ ನಲಿನ್ ಹೆರಾತ್ ಹೇಳಿದ್ದಾರೆ. ಇದನ್ನೂ ಓದಿ: ತೈವಾನ್ ಆಯ್ತು ಈಗ ಜಪಾನಿನ ಮೇಲೂ ಚೀನಾ ಕ್ಷಿಪಣಿ ದಾಳಿ

    ಚೀನಾದಿಂದ ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗದ ಕಾರಣ 2017ರಲ್ಲಿ ಲಂಕಾ ಸರ್ಕಾರ ಹಂಬನ್‌ತೋಟ ಬಂದರನ್ನು 99 ವರ್ಷಗಳ ಕಾಲ ಚೀನಾದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ.

    2014 ರಲ್ಲಿ ಚೀನಾದ ಜಲಾಂತರ್ಗಾಮಿ ನೌಕೆ ಹಂಬನ್‌ತೋಟ ಬಂದರಿನಲ್ಲಿ ಲಂಗರು ಹಾಕಿತ್ತು. ಇದು ಭಾರತದ ಆತಂಕಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಇಲ್ಲಿಯವರೆಗೆ ಲಂಕಾ ಬಂದರುಗಳಿಗೆ ಚೀನೀ ಜಲಾಂತರ್ಗಾಮಿ ನೌಕೆಗಳು ಲಂಗರು ಹಾಕಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    ಕೊಲಂಬೋ: ಗೊಟಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷರಾಗಿದ್ದಾಗ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದ್ದ ಸಂದರ್ಭ ಅವರ ಮನೆಯಲ್ಲಿ ಪತ್ತೆಯಾಗಿದ್ದ ಲಂಕಾದ ಲಕ್ಷಾಂತರ ರೂ. ಹಣವನ್ನು ಶ್ರೀಲಂಕಾ ಪೊಲೀಸರು ನ್ಯಾಯಾಲಯದ ಕೈಗೆ ಒಪ್ಪಿಸಿದ್ದಾರೆ.

    ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದ ಜನರು 3 ವಾರಗಳ ಹಿಂದೆ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಮನೆಗೆ ನುಗ್ಗಿ ಆಕ್ರೋಶ ಹೊರ ಹಾಕಿದ್ದರು. ಸರ್ಕಾರದ ವಿರುದ್ಧದ ದಂಗೆಗೆ ಹೆದರಿ ರಾಜಪಕ್ಸೆ ಪಲಾಯನಗೈದಿದ್ದರು.

    ರಾಜಪಕ್ಸೆ ಲಂಕಾ ತೊರೆದು ಮಾಲ್ಡೀವ್ಸ್ ಹಾಗೂ ಸಿಂಗಾಪುರಕ್ಕೆ ತೆರಳಿ, ಅಲ್ಲಿ ಅವರು ಇ-ಮೇಲ್ ಮೂಲಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಅವರ ನಿವಾಸದಿಂದ 1.8 ಕೋಟಿ ಶ್ರೀಲಂಕಾ ರೂ. ಪತ್ತೆ ಮಾಡಿದ್ದರು. ಬಳಿಕ ಅದನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

    ಕೊಲಂಬೋ ಕೇಂದ್ರೀಯ ಅಪರಾಧಗಳ ತನಿಖಾ ವಿಭಾಗದ ಉಸ್ತುವಾರಿ ಪೊಲೀಸ್ ಅಧಿಕಾರಿ ಗುರುವಾರ ನೀಡಿದ ಆದೇಶದ ಮೇರೆಗೆ ಶುಕ್ರವಾರ ಎಲ್ಲಾ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಈ ಹಣವನ್ನು ಕಳೆದ 3 ವಾರಗಳಿಂದ ನ್ಯಾಯಾಲಯಕ್ಕೆ ಏಕೆ ಸಲ್ಲಿಸಲಿಲ್ಲ ಎಂದು ನ್ಯಾಯಾಧೀಶ ತಿಲಿನಾ ಗಮೇಜ್ ಪ್ರಶ್ನಿಸಿದ್ದಾರೆ.

    ಹಣವನ್ನು ನ್ಯಾಯಾಲಯದ ವಶಕ್ಕೆ ನೀಡುವಲ್ಲಿ ಆಗಿರುವ ವಿಳಂಬದ ಕುರಿತು ತನಿಖೆ ನಡೆಸುವಂತೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ಗೆ(ಐಜಿಪಿ) ಆದೇಶಿಸಲಾಗಿದ್ದು, ಇದಕ್ಕಾಗಿ ವಿಶೇಷ ತನಿಖಾ ಘಟಕದ ನಿರ್ದೇಶಕರನ್ನು ನೇಮಕ ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ: ಸ್ಪೇನ್‌ ಪ್ರಧಾನಿ

    Live Tv
    [brid partner=56869869 player=32851 video=960834 autoplay=true]

  • ಪ್ರತಿಭಟನಾ ಶಿಬಿರ ಧ್ವಂಸಗೊಳಿಸಿದ ಶ್ರೀಲಂಕಾ ಭದ್ರತಾ ಪಡೆ

    ಪ್ರತಿಭಟನಾ ಶಿಬಿರ ಧ್ವಂಸಗೊಳಿಸಿದ ಶ್ರೀಲಂಕಾ ಭದ್ರತಾ ಪಡೆ

    ಕೊಲಂಬೊ: ಶ್ರೀಲಂಕಾದ ಭದ್ರತಾ ಪಡೆಗಳು ಶುಕ್ರವಾರ ರಾಜಧಾನಿಯಲ್ಲಿನ ಪ್ರಮುಖ ಸರ್ಕಾರಿ ವಿರೋಧಿ ಪ್ರತಿಭಟನಾ ಶಿಬಿರವನ್ನು ಧ್ವಂಸಗೊಳಿಸಿದೆ.

    sri lanka

    ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಸ್ಥಿತಿ ಗಂಭೀರವಾಗಿದ್ದು, ಸರ್ಕಾರದ ವಿರುದ್ಧವೇ ಜನರು ಆಕ್ರೋಶಗೊಂಡು ಹಿಂಸಾಚಾರದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಈ ಹಿನ್ನೆಲೆ ಭದ್ರತಾ ಪಡೆಗಳು ಮತ್ತು ಪೊಲೀಸ್ ವಿಶೇಷ ಕಾರ್ಯಪಡೆಯ ಕಮಾಂಡೋಗಳು ಜನರ ಮೇಲೆ ಲಾಠಿ ಪ್ರಯೋಗಿಸಿ ಸ್ಥಿತಿಯನ್ನು ಶಾಂತಿಗೆ ತರಲು ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸರ್ಕಾರದ ವಿರೋಧಿ ಪ್ರತಿಭಟನಾ ಶಿಬಿರವನ್ನು ಭದ್ರತಾ ಪಡೆ ಧ್ವಂಸ ಮಾಡಿದೆ. ಇದನ್ನೂ ಓದಿ: ನಲಪಾಡ್ ಮಾಡಿರೋ ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ: ಅಶೋಕ್ ಪಟ್ಟಣ

    ಕೊಲಂಬೊದಲ್ಲಿನ ಸಮುದ್ರ ಮುಂಭಾಗದ ಅಧ್ಯಕ್ಷೀಯ ಸಚಿವಾಲಯವನ್ನು ಮುತ್ತಿಗೆ ಹಾಕುವ ಜನರ ಮೇಲೆ ಸ್ವಯಂಚಾಲಿತ ಆಕ್ರಮಣಕಾರಿ ರೈಫಲ್‍ಗಳಿಂದ ದಾಳಿ ಮಾಡಲು ಸಿಬ್ಬಂದಿ ಸಜ್ಜಾಗಿದ್ದರು. ವಸಾಹತುಶಾಹಿ ಕಟ್ಟಡದ ಹೊರಗೆ ನೂರಾರು ಸೈನಿಕರು ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಗೇಡ್‍ಗಳು ಮತ್ತು ಡೇರೆಗಳನ್ನು ಹಾಕಲಾಗಿತ್ತು. ಆದರೂ ಸಹ ಪ್ರತಿಭಟನಾಕಾರರು ಅದನ್ನು ಮೀರಿ ಆವರಣದ ಮೆಟ್ಟಿಲುಗಳ ಮೇಲೆ ಬಂದರು. ಪರಿಣಾಮ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿತ್ತು.

    ಹೊಸ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಹಳೆಯ ಸ್ನೇಹಿತನನ್ನು ಪ್ರಧಾನಿಯಾಗಿ ಮತ್ತು ಉಚ್ಚಾಟಿತ ರಾಷ್ಟ್ರದ ಮುಖ್ಯಸ್ಥರ ವಕೀಲರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸುವ ಕೆಲವೇ ಗಂಟೆಗಳ ಮೊದಲು ಈ ಘಟನೆ ನಡೆದಿದೆ. ಇದನ್ನೂ ಓದಿ:  2 ವರ್ಷಗಳ ನಂತರ ಸೋಫಾದಲ್ಲಿ ಪತ್ತೆಯಾದ ಮಹಿಳೆ ಅಸ್ಥಿಪಂಜರ 

    ಸಿಂಗಾಪುರದಿಂದ ಪಲಾಯನ ಮಾಡಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಸ್ಥಾನಕ್ಕೆ ಬುಧವಾರ ವಿಕ್ರಮಸಿಂಘೆ ಅವರನ್ನು ಆಯ್ಕೆ ಮಾಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ಧನಾ ಪ್ರಮಾಣ ವಚನ ಸ್ವೀಕಾರ

    ಶ್ರೀಲಂಕಾ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ಧನಾ ಪ್ರಮಾಣ ವಚನ ಸ್ವೀಕಾರ

    ಕೊಲಂಬೋ: ಶ್ರೀಲಂಕಾದ ನೂತನ ಪ್ರಧಾನ ಮಂತ್ರಿಯಾಗಿ ಹಿರಿಯ ರಾಜಕಾರಣಿ ಮತ್ತು ಮಾಜಿ ಗೃಹ ಸಚಿವ ದಿನೇಶ್ ಗುಣವರ್ಧನಾ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ರಾಜಕೀಯದಲ್ಲಿ ಧೀಮಂತ ವ್ಯಕ್ತಿ ಎಂದೇ ಖ್ಯಾತಿ ಪಡೆದಿರುವ 73 ವರ್ಷದ ಗುಣವರ್ಧನಾ ಅವರು ಈ ಹಿಂದೆ ವಿದೇಶಾಂಗ ಸಚಿವ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಏಪ್ರಿಲ್‍ನಲ್ಲಿ ಆಗಿನ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಗೃಹ ಸಚಿವರಾಗಿ ನೇಮಿಸಿದ್ದರು. ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಕೂಡ ಶುಕ್ರವಾರದಂದು ಹಿಂದಿನ ಸರ್ಕಾರದ ಸದಸ್ಯರನ್ನು ಒಳಗೊಂಡ ತಮ್ಮ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಇದನ್ನೂ ಓದಿ: ಸಾರ್ವಜನಿಕವಾಗಿ ಕಾರಿಗೆ ಅಲ್ಲ, ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು – ಕಾಂಗ್ರೆಸ್‍ಗೆ ಆರಗ ತಿರುಗೇಟು

    ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ದೇಶ ಬಿಟ್ಟು ಪಲಾಯನ ಮಾಡಿ, ನಂತರ ತಮ್ಮ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಗೋತಬಯ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ 73 ವರ್ಷದ ವಿಕ್ರಮಸಿಂಘೆ ಅವರು ದೇಶದ ಎಂಟನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಬ್ಯಾಗ್‍ನಲ್ಲಿ ಬಾಂಬ್ ಇದೆ ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

    ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

    ಕೊಲಂಬೋ: ರನಿಲ್ ವಿಕ್ರಮಸಿಂಘೆ ಗುರುವಾರ ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಬುಧವಾರ ಅಧ್ಯಕ್ಷೀಯ ಚುನಾವಣೆಯಲ್ಲಿ 134 ಮತಗಳನ್ನು ಪಡೆಯುವ ಮೂಲಕ ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ರನಿಲ್ ವಿಕ್ರಮ ಸಿಂಘೆ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದ್ದರೂ ಇದರ ನಡುವೆಯೇ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಪ್ರಧಾನಿಯಾಗಿದ್ದಾಗ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ, ಬೆಂಕಿ ಹಚ್ಚಿ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಬ್ಯಾಂಕ್ ಮುಂದೆ ಪ್ರತಿಭಟನೆ – ಜನರನ್ನು ಚದುರಿಸಲು ಯುದ್ಧ ಟ್ಯಾಂಕರ್ ನಿಲ್ಲಿಸಿದ ಚೀನಾ

     

    ಬುಧವಾರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ವಿಕ್ರಮಸಿಂಘೆ, ಸಂಸತ್ತಿನ ಸಂಕೀರ್ಣದ ಒಳಗಡೆ ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಬೇಕೆಂದು ಸ್ಪೀಕರ್ ಅವರಿಗೆ ಮನವಿಯಿಟ್ಟರು. ಶ್ರೀಲಂಕಾವನ್ನು ಈ ಭೀಕರ ಬಿಕ್ಕಟ್ಟಿನಿಂದ ಪಾರು ಮಾಡಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡುವುದಾಗಿ ಪ್ರತಿಪಕ್ಷಗಳಿಗೆ ಭರವಸೆ ನೀಡಿದರು. ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು

    Live Tv
    [brid partner=56869869 player=32851 video=960834 autoplay=true]