Tag: Sreeleela

  • ಶ್ರೀಲೀಲಾ ಔಟ್, ವಿಜಯ್ ದೇವರಕೊಂಡಗೆ ಮತ್ತೆ ರಶ್ಮಿಕಾ ಮಂದಣ್ಣ ನಾಯಕಿ

    ಶ್ರೀಲೀಲಾ ಔಟ್, ವಿಜಯ್ ದೇವರಕೊಂಡಗೆ ಮತ್ತೆ ರಶ್ಮಿಕಾ ಮಂದಣ್ಣ ನಾಯಕಿ

    ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್ ಜೊತೆ ಪೈಪೋಟಿ ಕೂಡ ಜೋರಾಗಿದೆ. ಶ್ರೀಲೀಲಾ(Sreeleela) ನಟಿಸಿಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ (Rashmika Mandanna) ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಜೊತೆ ಶ್ರೀಲೀಲಾ ನಾಯಕಿಯಾಗಿ ನಟಿಸಬೇಕಿದ್ದ ಚಿತ್ರದಿಂದ ಔಟ್ ಆಗಿದ್ದಾರೆ. ಮತ್ತೆ 3ನೇ ಬಾರಿ ವಿಜಯ್- ರಶ್ಮಿಕಾ ಒಂದಾಗ್ತಿದ್ದಾರೆ.

    ‘ಜೆರ್ಸಿ’ ಡೈರೆಕ್ಟರ್ ಗೌತಮ್ ನಾಯ್ಡು ತಿಣ್ಣನುರಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಮೇನಲ್ಲಿ ಅನೌನ್ಸ್ ಆಗಿತ್ತು. ವಿಜಯ್ ದೇವರಕೊಂಡಗೆ ಶ್ರೀಲೀಲಾ ನಾಯಕಿ ಎಂದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನೆರವೇರಿತ್ತು. ಆದರೆ ಈಗ ಕೊಂಚ ಬದಲಾವಣೆ ಆಗಿದೆ. ವಿಜಯ್ ಚಿತ್ರವನ್ನು ಶ್ರೀಲೀಲಾ ಕೈಬಿಟ್ಟಿದ್ದಾರೆ.

    9ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿರುವ ಕಿಸ್ ಬೆಡಗಿ ಶ್ರೀಲೀಲಾ, ಡೇಟ್ ಸಮಸ್ಯೆಯಿಂದ ಗೌತಮ್- ವಿಜಯ್ ಕಾಂಬೋ ಸಿನಿಮಾವನ್ನು ಕೈಬಿಟ್ಟಿದ್ದಾರೆ. ಹಾಗಾಗಿ ನಾಯಕಿ ಪಾತ್ರಕ್ಕೆ ರಶ್ಮಿಕಾನೇ ಸೂಕ್ತ ಎಂದೇನಿಸಿ ಚಿತ್ರತಂಡ ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

    ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ವಿಜಯ್- ರಶ್ಮಿಕಾ ಜೋಡಿ ಮೋಡಿ ಮಾಡಿತ್ತು. ಈಗ ಮತ್ತೆ 3ನೇ ಬಾರಿ ಈ ಜೋಡಿ ಒಂದಾಗುತ್ತಿದೆ. ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ವಿಜಯ್- ರಶ್ಮಿಕಾ ಫ್ಯಾನ್ಸ್ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ. ಸಿನಿಮಾತಂಡದಿಂದ ಅಧಿಕೃತ ಘೋಷಣೆ ಆಗಲಿ ಅಂತಾ ಕಾಯುತ್ತಿದ್ದಾರೆ. ರವಿತೇಜ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದರು. ಆ ಚಿತ್ರತಂಡದಿಂದ ಕೂಡ ನಟಿ ಹೊರಬಂದರು. ಆ ಪ್ರಾಜೆಕ್ಟ್ ಕೂಡ ರಶ್ಮಿಕಾ ಪಾಲಾಯ್ತು. ಇದೀಗ ವಿಜಯ್ ಸಿನಿಮಾ ಕೂಡ ಶ್ರೀವಲ್ಲಿ ಕೈ ಸೇರಿದೆ. ಒಟ್ನಲ್ಲಿ ಗೀತಾ ಗೋವಿಂದಂ ಸಿನಿಮಾ ಜೋಡಿ ಮತ್ತೆ ಮೋಡಿ ಮಾಡೋದನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಶ್ಮಿಕಾಗೆ ಪೈಪೋಟಿ, ಅಲ್ಲು ಅರ್ಜುನ್ ಆಯ್ತು ಈಗ ಪ್ರಭಾಸ್‌ಗೆ ಶ್ರೀಲೀಲಾ ನಾಯಕಿ

    ರಶ್ಮಿಕಾಗೆ ಪೈಪೋಟಿ, ಅಲ್ಲು ಅರ್ಜುನ್ ಆಯ್ತು ಈಗ ಪ್ರಭಾಸ್‌ಗೆ ಶ್ರೀಲೀಲಾ ನಾಯಕಿ

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಅವರು ತೆಲುಗು ಚಿತ್ರರಂಗದಲ್ಲಿ ಮೋಡಿ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದು ಶ್ರೀಲೀಲಾ ಬೆಳೆಯುತ್ತಿದ್ದಾರೆ. ಸ್ಟಾರ್ ಅಲ್ಲು ಅರ್ಜುನ್‌ಗೆ (Allu Arjun) ನಾಯಕಿಯಾದ ಮೇಲೆ ಈಗ ಪ್ರಭಾಸ್‌ಗೆ ಕಿಸ್ ನಟಿ ಹೀರೋಯಿನ್ ಆಗಿದ್ದಾರೆ.

    ‘ಬಾಹುಬಲಿ’ (Bahubali) ಪ್ರಭಾಸ್(Prabhas)- ಹನು ರಾಘವಪುಡಿ ಕಾಂಬಿನೇಷನ್‌ನಲ್ಲಿ ಹೊಸ ಪ್ರಾಜೆಕ್ಟ್ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಈ ಚಿತ್ರದ ಅಧಿಕೃತವಾಗಿ ಘೋಷಣೆ ಆಗಿಲ್ಲ. ವರ್ಷದ ಅಂತ್ಯದಲ್ಲಿ ಸಿನಿಮಾ ಶುರುವಾಗಲಿದೆ. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ ಅದ್ದೂರಿ ಮದುವೆ ಫೋಟೋಸ್

    ಶ್ರೀಲೀಲಾ ಕೈಯಲ್ಲಿ ಈಗಾಗಲೇ 9ಕ್ಕೂ ಹೆಚ್ಚು ಸಿನಿಮಾಗಳಿವೆ. ಅಲ್ಲು ಅರ್ಜುನ್ ಅಂತಹ ಬಿಗ್ ಸ್ಟಾರ್ ಜೊತೆ ನಟಿಸಿದ ಬಳಿಕ ಪ್ರಭಾಸ್ ಜೊತೆ ಮಿಂಚಲು ಧಮಾಕ ನಟಿ ಸಜ್ಜಾಗಿದ್ದಾರೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೋರ್ವ ಕನ್ನಡದ ನಟಿಯೇ ಪೈಪೋಟಿ ನೀಡುತ್ತಿದ್ದಾರೆ. ಮೊದಲ ಬಾರಿಗೆ ಪ್ರಭಾಸ್-ಲೀಲಾ ಒಂದಾಗುತ್ತಿರೋದ್ರಿಂದ ಫ್ಯಾನ್ಸ್ ಈ ಜೋಡಿಯನ್ನ ನೋಡಲು ಕಾಯ್ತಿದ್ದಾರೆ.

    ಕಿಸ್ ಹುಡುಗಿಯ ನಟನೆ, ಬ್ಯೂಟಿ, ಡ್ಯಾನ್ಸ್ ಪಡ್ಡೆಹುಡುಗರಿಗೆ ಆಕೆಯ ಮೇಲಿರುವ ಕ್ರೇಜ್‌ಗೆ ಸಿನಿಮಾ ಅವಕಾಶಗಳು ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಟಾಪ್ ನಟಿಯಾಗಿ ಶ್ರೀಲೀಲಾ ನಿಲ್ಲೋದು ಗ್ಯಾರೆಂಟಿ ಅಂತಿದ್ದಾರೆ ಸಿನಿ ಪಂಡಿತರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಲೀಲಾ ಔಟ್‌, ರವಿತೇಜಗೆ ರಶ್ಮಿಕಾ ಮಂದಣ್ಣ ನಾಯಕಿ

    ಶ್ರೀಲೀಲಾ ಔಟ್‌, ರವಿತೇಜಗೆ ರಶ್ಮಿಕಾ ಮಂದಣ್ಣ ನಾಯಕಿ

    ಟಾಲಿವುಡ್‌ನಲ್ಲಿ (Tollywood) ತೆಲುಗು ನಟಿಮಣಿಯರಿಗಿಂತ ಕನ್ನಡದ ನಟಿಯರ ದರ್ಬಾರ್ ಜೋರಾಗಿದೆ. ಅದರಲ್ಲೂ ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ ನಡುವೆ ಸಖತ್ ಪೈಪೋಟಿಯಿದೆ. ಇದೀಗ ಶ್ರೀಲೀಲಾ (Sreeleela) ನಾಯಕಿಯಾಗಬೇಕಿದ್ದ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ. ಶ್ರೀಲೀಲಾ ಬದಲು ರಶ್ಮಿಕಾ ಮಂದಣ್ಣಗೆ ಚಿತ್ರತಂಡ ಮಣೆ ಹಾಕಿದೆ.

    ಮಾಸ್ ಮಹರಾಜ ರವಿತೇಜ ನಟನೆಯ ಹೊಸ ಸಿನಿಮಾಗೆ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು, ಶ್ರೀಲೀಲಾ. ಈ ಹಿಂದೆ ಧಮಾಕಾ ಚಿತ್ರದಲ್ಲಿ ರವಿತೇಜಗೆ (Ravi Teja) ನಾಯಕಿಯಾಗಿ ಶ್ರೀಲೀಲಾ ಗಮನ ಸೆಳೆದಿದ್ದರು. ಹಾಗಾಗಿ ಈ ಸಿನಿಮಾಗೂ ಇದೇ ಜೋಡಿಯನ್ನೇ ಮತ್ತೆ ಒಂದಾಗಲಿದೆ ಎನ್ನಲಾಗಿತ್ತು. ಆದರೆ ಈಗ ಶ್ರೀಲೀಲಾ ಬದಲು ರಶ್ಮಿಕಾ ಮಂದಣ್ಣಗೆ ಆ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಬಳುಕುವ ಬಳ್ಳಿಯಂತೆ ಮಿಂಚಿದ ಶ್ರೀಲೀಲಾ

    ಹೊಸ ಸಿನಿಮಾಗೆ ಹೊಸ ಜೋಡಿ ಇರಲಿ. ರವಿತೇಜ (Ravi Teja) ಜೊತೆ ರಶ್ಮಿಕಾ ನಟಿಸಿದ್ರೆ ಚೆಂದ ಎಂದೆನಿಸಿ ಪುಷ್ಪ ಬ್ಯೂಟಿಯನ್ನ ತಂಡ ಫೈನಲ್ ಮಾಡಿದೆ. ನಟಿಯ ಸಂಭಾವನೆ ಎಷ್ಟೇ ದುಬಾರಿ ಆದರೂ ಓಕೆ ಎಂದು ತಂಡ ನಿರ್ಧರಿಸಿದೆ. ಈ ಚಿತ್ರದ ಕಥೆ ಕೇಳಿ ಶ್ರೀವಲ್ಲಿ ಕೂಡ ಓಕೆ ಎಂದಿದ್ದಾರಂತೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

    ಈ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ವರಲಕ್ಷ್ಮಿ ಶರತ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಸದ್ಯ ರವಿ ತೇಜ, ರಶ್ಮಿಕಾ, ಗೋಪಿಚಂದ್ ಮಲಿನೇನಿ ಕಾಂಬೋದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಮೂಡಿ ಬರಲಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಬಳುಕುವ ಬಳ್ಳಿಯಂತೆ ಮಿಂಚಿದ ಶ್ರೀಲೀಲಾ

    ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಬಳುಕುವ ಬಳ್ಳಿಯಂತೆ ಮಿಂಚಿದ ಶ್ರೀಲೀಲಾ

    ನ್ನಡದ ನಟಿಮಣಿ ಶ್ರೀಲೀಲಾ (Sreeleela) ತೆಲುಗು ನೆಲದಲ್ಲಿ (Tollywood) ಮೋಡಿ ಮಾಡ್ತಿದ್ದಾರೆ. ಸದ್ಯ ಶೋಲ್ಡರ್‌ಲೆಸ್ ಡ್ರೆಸ್ ಫೋಟೋ ಶೇರ್ ಮಾಡುವ ಮೂಲಕ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ. ಇದನ್ನೂ ಓದಿ:‘ಜಲಂಧರ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಪ್ರಮೋದ್ ಶೆಟ್ಟಿ

    ಪಿಂಕ್ ಮತ್ತು ಬ್ಲ್ಯಾಕ್ ಮಿಶ್ರಿತ ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಕಿಸ್ ಬೆಡಗಿ ಶ್ರೀಲೀಲಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೆಂದದ ಡ್ರೆಸ್‌ಗೆ ಸಿಂಪಲ್ ಜ್ಯುವೆಲ್ಲರಿ ಹಾಕಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್‌ ಆಗಿ ಪೋಸ್ ಕೊಟ್ಟಿದ್ದಾರೆ.

    ಇತ್ತೀಚೆಗೆ ದುಬೈನಲ್ಲಿ ಸೈಮಾ ಅವಾರ್ಡ್ (Siima 2023) ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ಶ್ರೀಲೀಲಾ ಕೂಡ ಭಾಗಿಯಾಗಿದ್ದರು. ತೆಲುಗಿನ ‘ಧಮಾಕಾ’ (Dhamaka) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಬೆಸ್ಟ್ ನಟಿ ಎಂದು ಶ್ರೀಲೀಲಾಗೆ ಪ್ರಶಸ್ತಿ ಲಭಿಸಿದೆ.

    ಕಿಸ್, ಭರಾಟೆ ಸಿನಿಮಾದ ನಟಿ ಶ್ರೀಲೀಲಾಗೆ ತೆಲುಗಿನಲ್ಲಿ ಸಖತ್ ಡಿಮ್ಯಾಂಡ್ ಇದೆ. 9ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿ ನಟಿ ಬುಕ್ ಆಗಿದ್ದಾರೆ. ಇದನ್ನೂ ಓದಿ:ವಿವಾದ ಮಾಡುವುದಕ್ಕೆ ಸಿನಿಮಾ ಮಾಡಲ್ಲ : ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

    ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ರಾಮ್ ಪೋತಿನೇನಿ, ಮಹೇಶ್ ಬಾಬು, ಸೇರಿದಂತೆ ಟಾಪ್ ಸ್ಟಾರ್‌ಗಳಿಗೆ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಲೀಲಾ, ರಶ್ಮಿಕಾಗೆ ಹೆಚ್ಚಿದ ಬೇಡಿಕೆ- ಸೈಡ್ ಲೈನ್ ಆಗೋದ್ರಾ ಪೂಜಾ ಹೆಗ್ಡೆ?

    ಶ್ರೀಲೀಲಾ, ರಶ್ಮಿಕಾಗೆ ಹೆಚ್ಚಿದ ಬೇಡಿಕೆ- ಸೈಡ್ ಲೈನ್ ಆಗೋದ್ರಾ ಪೂಜಾ ಹೆಗ್ಡೆ?

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಈಗ ಮಾರ್ಕೆಟ್ ಡೌನ್ ಆಗಿದೆ. ಕೈಯಲ್ಲಿ ಒಂದೇ ಒಂದು ಸಿನಿಮಾ ಇಲ್ಲದೇ ಪರದಾಡುತ್ತಿದ್ದಾರೆ. ಚಿತ್ರರಂಗ ಅವರನ್ನ ಐರೆನ್ ಲೆಗ್ ಎಂದು ಕರೆಯುತ್ತಿದೆ. ಶ್ರೀಲೀಲಾ (Sreeleela), ರಶ್ಮಿಕಾ (Rashmika Mandanna) ಎಂಟ್ರಿಯಿಂದ ನಟಿ ಸೈಡ್ ಲೈನ್ ಆಗ್ತಿದ್ದಾರಾ?

    ಸೌತ್- ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ನಟಿ ಪೂಜಾ ಹೆಗ್ಡೆ ಇತ್ತೀಚಿಗೆ ಬೀಸ್ಟ್, ರಾಧೆ ಶ್ಯಾಮ್ (Radhe Shyam) ಸೇರಿದಂತೆ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಚಿತ್ರತಂಡದಲ್ಲಿ ಕಿರಿಕ್ ಮಾಡಿಕೊಂಡು ಕೆಲ ಪ್ರಾಜೆಕ್ಟ್‌ಗಳಿಂದ ಹೊರಬಂದಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಒಂದೇ ಒಂದು ಸಿನಿಮಾ ಕೂಡ ಇಲ್ಲ. ಇದನ್ನೂ ಓದಿ:‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್

    ಶ್ರೀಲೀಲಾ, ರಶ್ಮಿಕಾ ಮಂದಣ್ಣಗೆ ಹೆಚ್ಚಿದ ಬೇಡಿಕೆಯಿಂದ ಕೊಂಚ ಪೂಜಾ ಮಾರ್ಕೆಟ್ ಡಲ್ ಆಗಿರೋದು ನಿಜ. ಸಿನಿಮಾ ಚಾನ್ಸ್ ಇಲ್ಲದೇ ಇರುವ ಕಾರಣ ನಟಿ ಜಾಹೀರಾತು ಪ್ರಮೋಟ್ ಮಾಡ್ತಿದ್ದಾರೆ.

    ಪ್ರತಿಭೆ ಇದ್ದರೂ ಪೂಜಾ ಎಡವಿದ್ದು ಎಲ್ಲಿ? ಸಿನಿಮಾ ಆಯ್ಕೆಯಲ್ಲಿ ಎಡವಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ಒಟ್ನಲ್ಲಿ ಎಲ್ಲಾ ಅಡೆತಡೆಗಳನ್ನ ಮೀರಿ ಲೈಮ್ ಲೈಟ್‌ಗೆ ಬರುತ್ತಾರಾ ಪೂಜಾ ಹೆಗ್ಡೆ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ಟಾಲಿವುಡ್ (Tollywood) ಅಂಗಳದಲ್ಲಿ ಕನ್ನಡದ ನಟಿಮಣಿಯರ ದರ್ಬಾರ್ ಜೋರಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ(Sreeleela), ನೇಹಾ ಶೆಟ್ಟಿ (Neha Shetty) ಬಳಿಕ ತೆಲುಗಿನಲ್ಲಿ ಬಂಪರ್ ಆಫರ್‌ನ ಆಶಿಕಾ ರಂಗನಾಥ್ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಎವರ್‌ಗ್ರೀನ್ ಹೀರೋ ನಾಗಾರ್ಜುನಗೆ ಆಶಿಕಾ ನಾಯಕಿಯಾಗಿದ್ದಾರೆ. ಈ ಮೂಲಕ ಮತ್ತೆ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಅಕ್ಕಿನೇನಿ ನಾಗಾರ್ಜುನ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವಿಶೇಷ ದಿನದಂದು ಅವರ ಹೊಸ ಸಿನಿಮಾ ಘೋಷಣೆ ಆಯಿತು. ಈ ಚಿತ್ರಕ್ಕೆ ‘ನಾ ಸಾಮಿ ರಂಗ’ (Naa Saami Ranga) ಎನ್ನುವ ಶೀರ್ಷಿಕೆ ಇಡಲಾಗಿದೆ. ಸಖತ್ ರಗಡ್ ಅವತಾರದಲ್ಲಿ ನಾಗಾರ್ಜುನ (Nagarjuna) ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ವಿಜಯ್ ಬಿನ್ನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಚಿತ್ತುರಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ (Ashika Ranganath) ಅವರನ್ನು ನಾಯಕಿಯನ್ನಾಗಿ (Heroine) ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ‘ಲಿಯೋ’ ಸಿನಿಮಾ ಮುಂದೆ ಬರಲಿದೆಯಾ ಸಲಾರ್? ಇಲ್ಲಿದೆ ಅಪ್‌ಡೇಟ್

    ಇತ್ತೀಚೆಗೆ ಹೈದರಾಬಾದ್‌ನಲ್ಲಿ ಫೋಟೋಶೂಟ್ ನಡೆದಿದೆ ಎಂದು ತಿಳಿದು ಬಂದಿದೆ. ಆಶಿಕಾ ಅವರು ಸಖತ್ ಗ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ತೆಲುಗು ಭಾಷೆಯ ಮೇಲೆ ಹಿಡಿತ ಇದೆ. ನಟನೆಯಲ್ಲೂ ಅವರು ಪಳಗಿದ್ದಾರೆ. ಈ ಕಾರಣದಿಂದ ಆಶಿಕಾ ಅವರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ. ಈ ವರ್ಷ ಕಲ್ಯಾಣ್ ರಾಮ್ (Kalyan Ram) ನಟನೆಯ ತೆಲುಗಿನ ‘ಅಮಿಗೋಸ್’ ಚಿತ್ರದಲ್ಲಿ ಆಶಿಕಾ ನಟಿಸಿದ್ದರು. ಈಗ ಅವರಿಗೆ ಮತ್ತೊಂದು ಟಾಲಿವುಡ್ ಆಫರ್ ಬಂದಿದೆ.

    ಕ್ರೇಜಿ ಬಾಯ್ ಸಿನಿಮಾ ಮೂಲಕ ತೆಲುಗಿಗೆ ಪರಿಚಿತರಾದ ನಟಿ ಆಶಿಕಾ, ಕನ್ನಡದ ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಗಮನ ಸೆಳೆದರು. ಈಗ ತೆಲುಗಿನಲ್ಲಿ ನಾಯಕಿನಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ತಯಾರಿ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾಗಿರುವ ಡಿಮ್ಯಾಂಡ್ ನಡುವೆ ಆಶಿಕಾ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡತಿ ಶ್ರೀಲೀಲಾ ನಟನೆಯ ‘ಸ್ಕಂದ’ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ

    ಕನ್ನಡತಿ ಶ್ರೀಲೀಲಾ ನಟನೆಯ ‘ಸ್ಕಂದ’ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ

    ಶ್ರೀಲೀಲಾ (Sreeleela) ಸಿನಿಮಾಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಇದು ಸ್ಯಾಡ್ ನ್ಯೂಸ್. ರಾಮ್ ಪೋತಿನೇನಿ ಜೊತೆಗಿನ ಶ್ರೀಲೀಲಾ ನಟನೆಯ ‘ಸ್ಕಂದ’ (Skanda Film) ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಹೊಸ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ಅನೌನ್ಸ್ ಮಾಡಿದೆ.‌ ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಮತ್ತೆ ಬಿಕಿನಿ ಫೋಟೋ ಹಂಚಿಕೊಂಡ ಸೋನು

    ರಾಮ್ ಪೋತಿನೇನಿ (Ram Pothineni)- ಶ್ರೀಲೀಲಾ ನಟನೆಯ ‘ಸ್ಕಂದ’ ಸಿನಿಮಾ ಸೆಪ್ಟೆಂಬರ್ 15ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ, ಈಗ ತಂಡ ಸಿನಿಮಾ ರಿಲೀಸ್ ದಿನಾಂಕವನ್ನು ಎರಡು ವಾರ ಮುಂದಕ್ಕೆ ಹಾಕಿದೆ. ಸೆ.28ರಂದು ಚಿತ್ರ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿಕೊಂಡಿದೆ.

    ಬೋಯಪಾಟಿ ಶ್ರೀನು ಆಕ್ಷನ್ ಕಟ್ ಹೇಳಿರುವ ‘ಸ್ಕಂದ’ ಸಿನಿಮಾದ ಟ್ರೈಲರ್, ಹಾಡುಗಳು ಭಾರೀ ಸದ್ದು ಮಾಡಿವೆ. ಪ್ರೀ ರಿಲೀಸ್ ವ್ಯವಹಾರದಲ್ಲಿಯೂ ದಾಖಲೆ ಬರೆದಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ.

    ಇಷ್ಟು ದಿನಗಳ ಕಾಲ ಲವರ್ ಬಾಯ್ ಆಗಿ ಮಿಂಚಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ‘ಸ್ಕಂದ’ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕನ್ನಡತಿ ಶ್ರೀಲೀಲಾ, ರಾಮ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್‌ಎಸ್ ಮ್ಯೂಸಿಕ್ ಕಿಕ್ ಈ ಚಿತ್ರಕ್ಕಿದೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾವನ್ನು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಸೆ. 28ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ `ಸ್ಕಂದ’ ಸಿನಿಮಾ ತೆರೆ ಕಾಣುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bhagavanth Kesari: ಬಾಲಯ್ಯ ಜೊತೆ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶ್ರೀಲೀಲಾ

    Bhagavanth Kesari: ಬಾಲಯ್ಯ ಜೊತೆ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ ಶ್ರೀಲೀಲಾ

    ಶ್ರೀಲೀಲಾಗೆ(Sreeleela) ಹೊಸ ಚಿಕ್ಕಪ್ಪ ಸಿಕ್ಕಿದ್ದಾನೆ. ಕನ್ನಡ ನೆಲದಿಂದ ತೆಲುಗು (Tollywood) ಮಣ್ಣಿಗೆ ಹಾರಿದ ಈ ಹುಡುಗಿಗೆ ನೋಡನೋಡುತ್ತಲೇ ಒಬ್ಬ ಸ್ಟಾರ್ ಹೀರೋ ‘ಕೂಸೇ’ ಎಂದು ಕರೆದಿದ್ದಾನೆ. ಇದೇನಾಯಿತು ಶ್ರೀಲೀಲಾ ಬಣ್ಣದ ಲೋಕದ ಬದುಕಿನಲ್ಲಿ? ಮಗಳೆ ಹೀಗಂತ ಕೂಗಿ ಕೇಕೆ ಹಾಕಿ ಕುಣಿದಿದ್ದು ಯಾವ ಹೀರೋ? ಇಲ್ಲಿದೆ ಮಾಹಿತಿ.

    ಶ್ರೀಲೀಲಾ ಕೆಮ್ಮಿದರೂ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಅಂತಾರಲ್ಲ.ಹಾಗೆ ಈ ಹುಡುಗಿ ಮಾಡಿದ್ದೆಲ್ಲ ಸಿನಿಮಾ ಹಿಟ್ ಲಿಸ್ಟ್‌ಗೆ ಅನಿವಾರ್ಯವಾಗಿ ಸೇರುವಂತಾಗಿದೆ. ಎರಡೇ ಸಿನಿಮಾಕ್ಕೆ ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೇರಲು ಸಜ್ಜಾಗಿದ್ದಾರೆ. ಇದೀಗ ಬಾಲಕೃಷ್ಣ ಜೊತೆ ಭಗವಂತ ಕೇಸರಿ(Bhagavanth Kesari) ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ. ಅದರ ಹಾಡು ಇದೀಗ ರಿಲೀಸ್ ಆಗಿದೆ. ಅದೇ ಗಣೇಶ ಹಬ್ಬದ ಸುತ್ತ ಚಿತ್ರಿಸಲಾದ ಹಾಡಿನಲ್ಲಿ ಶ್ರೀಲೀಲಾ ಹಾಗೂ ಬಾಲಕೃಷ್ಣ(Balakrishna), ಮಗಳು- ಚಿಕ್ಕಪ್ಪನಾಗಿ ಮಸ್ತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ನಿರ್ದೇಶನಕ್ಕಿಳಿದ ಸುದೀಪ್- ಕಿಚ್ಚನ ಕೈಜೋಡಿಸಿದ KRG Studios

     

    View this post on Instagram

     

    A post shared by Anil Ravipudi (@anilravipudi)

    ಇದುವರೆಗೆ ಹೀರೋ ಜೊತೆ ಕುಣಿದಿದ್ದ ಶ್ರೀಲೀಲಾ ಇದೇ ಮೊದಲ ಬಾರಿಗೆ ಸ್ಟಾರ್ ಹೀರೋ ಕಮ್ ಚಿಕ್ಕಪ್ಪ ಬಾಲಕೃಷ್ಣ ಜೊತೆ ಹೆಜ್ಜೆ ಹಾಕಿದ್ದಾರೆ. ಭಗವಂತ ಕೇಸರಿ ಸಿನಿಮಾ ಶ್ರೀಲೀಲಾ ವೃತ್ತಿ ಬದುಕಿಗೆ ಹೊಸ ದಿಕ್ಕು ತೋರಿಸುವುದು ಖಚಿತ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಿಸ್ ಬೆಡಗಿಯ ಕಿಸ್ಮತ್ ಬದಲಿಸಲಿದೆ.

    ಇತ್ತೀಚಿಗೆ ಸ್ಕಂದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಾಲಯ್ಯ ಭಾಗಿಯಾಗಿದ್ದರು. ನಟನೆ, ಡ್ಯಾನ್ಸ್, ಆಕೆಯ ಸ್ವಭಾವ ಎಲ್ಲಾ ನೋಡಿ ಶ್ರೀಲೀಲಾ ಸರಸ್ವತಿ ದೇವಿಯ ವರಪ್ರಸಾದ ಎಂದು ಹಾಡಿಹೊಗಳಿದ್ದರು. ಈ ಬೆನ್ನಲ್ಲೇ ಭಗವಂತ ಕೇಸರಿ ಸಿನಿಮಾದಲ್ಲಿ ಬಾಲಯ್ಯ ಜೊತೆ ಲೀಲಾ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿರೋದು ಸಖತ್ ಸದ್ದು ಮಾಡ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಶ್ಮಿಕಾ, ಶ್ರೀಲೀಲಾ ನಡುವೆ ‘ಕಾಂತಾರ’ ಚೆಲುವೆ ಎಂಟ್ರಿ- ತೆಲುಗಿನತ್ತ ಸಪ್ತಮಿ

    ರಶ್ಮಿಕಾ, ಶ್ರೀಲೀಲಾ ನಡುವೆ ‘ಕಾಂತಾರ’ ಚೆಲುವೆ ಎಂಟ್ರಿ- ತೆಲುಗಿನತ್ತ ಸಪ್ತಮಿ

    ನ್ನಡದ ಕಾಂತಾರ ಚೆಲುವೆ ಸಪ್ತಮಿ ಗೌಡ (Saptami Gowda) ಇದೀಗ ಟಾಲಿವುಡ್ (Tollywood) ರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ(Sreeleela) ಪೈಪೋಟಿ ನಡುವೆ ಕಾಂತಾರ (Kantara) ನಟಿ ಎಂಟ್ರಿ ಕೊಟ್ಟಿದ್ದು, ಇಬ್ಬರಿಗೂ ಠಕ್ಕರ್ ಕೊಡಲು ಕನ್ನಡದ ಮತ್ತೋರ್ವ ನಟಿಮಣಿ ಸಜ್ಜಾಗಿದ್ದಾರೆ.

    ‘ಕಾಂತಾರ’ ಸಿನಿಮಾದ ಸಕ್ಸಸ್ ನಂತರ ಪ್ಯಾನ್‌ ಇಂಡಿಯಾ ನಾಯಕಿಯಾಗಿ ಮಿಂಚ್ತಿರುವ ಬೆಂಗಳೂರಿನ ಬೆಡಗಿ ಸಪ್ತಮಿ, ಈಗ ತೆಲುಗು ಸಿನಿಮಾಗೆ ನಾಯಕಿಯಾಗಿ ಫೈನಲ್ ಆಗಿದ್ದಾರೆ. ಭೀಷ್ಮ ಹೀರೋ ನಿತಿನ್ ನಟನೆಯ ‘ತಮ್ಮುಡು’ ಸಿನಿಮಾಗೆ ಸಪ್ತಮಿ ಗೌಡ ಹೀರೋಯಿನ್ ಆಗಿದ್ದಾರೆ. ಈ ಮೂಲಕ ತೆಲುಗು ಅಂಗಳಕ್ಕೆ ಮತ್ತೋರ್ವ ನಟಿ ಲಗ್ಗೆ ಇಡ್ತಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ ಅಮೆರಿಕಾಗೆ ಹಾರಿದ ಹರ್ಷಿಕಾ ದಂಪತಿ

    ಹೌದು.. ನಿತಿನ್ (Nithin) ನಾಯಕಿಯಾಗಿ ಸಪ್ತಮಿ ಗೌಡ (Saptami Gowda) ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೇಣು ಶ್ರೀರಾಮ್ ನಿರ್ದೇಶನದಲ್ಲಿ ತಮ್ಮುಡು ಸಿನಿಮಾ ಮೂಡಿ ಬರುತ್ತಿದ್ದು, ದಿಲ್ ರಾಜು (Dilraju) ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ಹಿಂದೆ ತಮ್ಮುಡು ಚಿತ್ರದ ಟೈಟಲ್‌ನಲ್ಲಿ ಪವನ್ ಕಲ್ಯಾಣ್ ನಟಿಸಿ ಗಮನ ಸೆಳೆದಿದ್ದರು. ಈಗ ಅದೇ ಟೈಟಲ್‌ನಲ್ಲಿ ಭಿನ್ನವಾಗಿರೋ ಕಥೆ ಮಾಡಲು ಚಿತ್ರತಂಡ ಹೊರಟಿದೆ.

    ಈ ಹಿಂದೆ ನಿತಿನ್ ಚಿತ್ರದಿಂದ ರಶ್ಮಿಕಾ ಹೊರ ಬಂದಿದ್ದರು. ಬಳಿಕ ಆ ಸಿನಿಮಾ ಶ್ರೀಲೀಲಾ ಪಾಲಾಗಿತ್ತು. ಈಗ ನಿತಿನ್ ಮುಂದಿನ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಕಾಂತಾರ ಸಿನಿಮಾ ಕೂಡ ತೆಲುಗಿನಲ್ಲಿ ಡಬ್ ಆಗಿ ಸಕ್ಸಸ್ ಕಂಡಿತ್ತು. ಈಗಾಗಲೇ ತೆಲುಗು ಸಿನಿರಸಿಕರಿಗೆ ನಟಿ ಪರಿಚಿತರಾಗಿದ್ದಾರೆ. ಹಾಗಾಗಿ ರಶ್ಮಿಕಾ, ಶ್ರೀಲೀಲಾ, ನಭಾ, ನೇಹಾ ಶೆಟ್ಟಿ(Neha Shetty) ಮೀರಿ ಸಪ್ತಮಿ ಬೆಳೆಯುವ ಸೂಚನೆ ಸಿಕ್ತಿದೆ ಅಂತಿದ್ದಾರೆ ಸಿನಿಪಂಡಿತರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    ನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ತೆಲುಗು ಚಿತ್ರರಂಗದಲ್ಲಿ (Tollywood) ಸೌಂಡ್ ಮಾಡ್ತಿದ್ದಾರೆ. ಟಾಪ್ ಸ್ಟಾರ್ ನಟರಿಗೆ ನಾಯಕಿಯಾಗಿ ಶ್ರೀಲೀಲಾ ಮೆರೆಯುತ್ತಿದ್ದಾರೆ. ‘ಧಮಾಕ’ (Dhamaka)  ಸಕ್ಸಸ್ ನಂತರ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಲೀಲಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಕನ್ನಡದ ನಟಿಮಣಿಗೆ ಇರುವ ಡಿಮ್ಯಾಂಡ್ ನೋಡಿ, ಸಮಾರಂಭವೊಂದರಲ್ಲಿ ಶ್ರೀಲೀಲಾ ಸರಸ್ವತಿ ವರಪ್ರಸಾದ ಎಂದು ಹಾಡಿಹೊಗಳಿದ್ದಾರೆ.

    ರಾಮ್ ಪೋತಿನೇನಿ(Ram Pothineni)- ಶ್ರೀಲೀಲಾ ನಟನೆಯ ಸ್ಕಂದ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಶ್ರೀಲೀಲಾ ಅತಿಥಿಯಾಗಿ ಆಗಮಿಸಿದ್ದರು. ಆಗ ಶ್ರೀಲೀಲಾ ಬಗ್ಗೆ ನಟನೆ, ಆಕೆಯ ಶಿಸ್ತಿನ ಬಗ್ಗೆ ಬಾಲಯ್ಯ ಕೊಂಡಾಡಿದ್ದರು. ಶ್ರೀಲೀಲಾ ಸಂಪ್ರದಾಯಬದ್ಧ ತೆಲುಗು ಹುಡುಗಿ. ತೆಲುಗು ಚಿತ್ರರಂಗಕ್ಕೆ ಹಲವು ನಟಿಯರು ಬಂದಿದ್ದಾರೆ. ಆದರೆ ಕೆಲವರಿಗೆ ಮಾತ್ರವೇ ಇಲ್ಲಿಯೇ ನೆಲೆ ನಿಲ್ಲಲು ಸಾಧ್ಯವಾಗಿದೆ. ಅಂತೆಯೇ ಶ್ರೀಲೀಲಾಗೂ ಸಹ ಇಲ್ಲಿ ಬಹಳ ಒಳ್ಳೆಯ ಭವಿಷ್ಯವಿದೆ ಎಂದ ಬಾಲಕೃಷ್ಣ(Balakrishna) ಶ್ರೀಲೀಲಾ ಅಂದದ ಬಗ್ಗೆ ಹಿಂದಿಯಲ್ಲಿ ಯಾರಿಗೂ ಅರ್ಥವಾಗದಂಥಹಾ ಡೈಲಾಗ್ ಒಂದನ್ನು ಸಹ ಹೊಡೆದರು. ಬಾಲಕೃಷ್ಣ ಡೈಲಾಗ್‌ಗೆ ಶ್ರೀಲೀಲಾ ಸಹಿತ ಎಲ್ಲರೂ ನಕ್ಕರಾದರೂ ಯಾರಿಗೂ ಅರ್ಥವಾಗಲಿಲ್ಲ. ಇದನ್ನೂ ಓದಿ:ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ- ಜೋಡೆತ್ತು ಜೊತೆ ಡಿ ಬಾಸ್ ಪೋಸ್ಟ್ ವೈರಲ್

    ಶ್ರೀಲೀಲಾಗೆ ಸೌಂದರ್ಯವಿದೆ ಜೊತೆಗೆ ಅಭಿನಯವೂ ಇದೆ. ಅಭಿನಯದ ಜೊತೆಗೆ ಡ್ಯಾನ್ಸ್ ಕಲೆಯೂ ಇದೆ. ಇವೆಲ್ಲವನ್ನೂ ಸೇರಿಸಿ ನಮಗೆ ಸಿಕ್ಕಿರುವ ಒಳ್ಳೆಯ ನಟಿ. ಸರಸ್ವತಿ ದೇವಿಯ ವರ ಪ್ರಸಾದ. ನಾನೂ ಸಹ ಅವರೊಟ್ಟಿಗೆ ‘ಭಗವಂತ್ ಕೇಸರಿ’ (Bhagavantha Kesari) ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸೆಟ್‌ನಲ್ಲಿ ಅವರ ಶ್ರಮ, ಪ್ರತಿ ಸೀನ್ ಮಾಡುವಾಗಲೂ ತೋರುವ ಶ್ರದ್ಧೆಯನ್ನು ಪ್ರತಿದಿನವೂ ನೋಡುತ್ತಿದ್ದೇನೆ. ಇಷ್ಟು ಒಳ್ಳೆಯ ನಟಿಯಾಗಿದ್ದರೂ, ಇಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಾಮಾನ್ಯರಂತೆ ವರ್ತಿಸುತ್ತಾರೆ ಅದು ನನಗೆ ಬಹಳ ಇಷ್ಟವಾಗುತ್ತದೆ. ಆಕೆಗೆ ಒಳ್ಳೆಯ ಭವಿಷ್ಯ ಸಿಗಲಿ ಎಂದು ಬಾಲಯ್ಯ ಹಾರೈಸಿದ್ದಾರೆ.

    ಕನ್ನಡದ ‘ಕಿಸ್’ (Kiss Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ತೆಲುಗಿನ ಪೆಳ್ಳಿ ಸಂದಡಿ, ‘ಧಮಾಕ’ ಸಿನಿಮಾದ ಮೂಲಕ ಸಕ್ಸಸ್ ಕಂಡರು. ಈಗ ವಿಜಯ್ ದೇವರಕೊಂಡ, ನಿತಿನ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಸೂಪರ್ ಸ್ಟಾರ್‌ಗಳಿಗೆ ಶ್ರೀಲೀಲಾ ಹೀರೋಯಿನ್ ಆಗಿ ರಶ್ಮಿಕಾ ಠಕ್ಕರ್ ಕೊಡ್ತಿದ್ದಾರೆ. ನಿರ್ದೇಶಕರ ಪಾಲಿನ ನೆಚ್ಚಿನ ನಟಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]