Tag: Sreeleela

  • ನಟಿಸಿದ ಸಿನಿಮಾಗಳು ತೋಪು- ಆದ್ರೂ ಶ್ರೀಲೀಲಾಗೆ ಭಾರೀ ಬೇಡಿಕೆ

    ನಟಿಸಿದ ಸಿನಿಮಾಗಳು ತೋಪು- ಆದ್ರೂ ಶ್ರೀಲೀಲಾಗೆ ಭಾರೀ ಬೇಡಿಕೆ

    ಶ್ರೀಲೀಲಾ (Sreeleela) ಸದ್ದು ಮಾಡುತ್ತಿಲ್ಲ. ಕಳೆದ ವರ್ಷ ಬರೋಬ್ಬರಿ 4 ಫ್ಲಾಪ್ ಸಿನಿಮಾ ಕೊಟ್ಟು ಅನಾಮತ್ತು ಹುಡುಗರ ನಿದ್ದೆ ಕೆಡಿಸಿದ್ದ ಶ್ರೀಲೀಲಾ ಈಗ ಸೈಲೆಂಟ್ ಆಗಿದ್ದಾರೆ. ಹೀಗಿದ್ದರೂ ಶ್ರೀಲೀಲಾ ಕೋಟಿ ಕೋಟಿ ಕಾಸು ಪಡೆಯುತ್ತಿದ್ದಾರೆ. ಹಾಗಿದ್ದರೆ ಕಿಸ್ ಬೆಡಗಿ ಈ ವರ್ಷದ ಹಣೆ ಬರಹ ಏನು? ಎಷ್ಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ? ಇಲ್ಲಿದೆ ಮಾಹಿತಿ.

    ರವಿತೇಜಾ ಜೊತೆ ‘ಧಮಾಕಾ’ (Dhamaka) ಸೂಪರ್ ಹಿಟ್ ಆಗಿದ್ದೇ ತಡ, ಶ್ರೀಲೀಲಾ ಮುಟ್ಟಿದ್ದೆಲ್ಲ ಚಿನ್ನವಾಯಿತು. ಕಾರಣ ಅಷ್ಟೊಂದು ಕಿಕ್ ಕೊಟ್ಟಿದ್ದರು ಇವರು. ಆದರೆ ಅದಾದ ಮೇಲೆ 4 ಸಿನಿಮಾ ರಿಲೀಸ್ ಆದವು. ಅದರಲ್ಲಿ ಬಾಲಕೃಷ್ಣ ಜೊತೆಗಿನ ‘ಭಗವಂತ ಕೇಸರಿ’ ಹಿಟ್ ಆಯಿತು. ಆದರೆ ಅದರ ಕ್ರೆಡಿಟ್ ಸಿಕ್ಕಿದ್ದು ಬಾಲಯ್ಯನಿಗೆ ಶ್ರೀಲೀಲಾ ಮುಡಿಗಲ್ಲ. ಸಂಕ್ರಾಂತಿಗೆ ಬಂದಿದ್ದು ‘ಗುಂಟೂರೂ ಖಾರಂ’ ಸಿನಿಮಾ. ಹಂಗೂ ಹಿಂಗೂ ನೂರು ಕೋಟಿ ಮಾಡಿತು. ಈ ಸಿನಿಮಾದ ಸಕ್ಸಸ್ ಕೂಡ ಮಹೇಶ್ ಬಾಬು (Mahesh Babu) ಪಾಲಿಗೆ ಸೇರಿತು. ಹೀಗಾಗಿ ಶ್ರೀಲೀಲಾ ಹೊಸ ಚಿತ್ರ ಒಪ್ಪಿಕೊಳ್ಳುತ್ತಿಲ್ಲ. ಇದನ್ನೂ ಓದಿ:ಅಬುದಾಬಿಯಲ್ಲಿ ಮೊಳಗಿತು ‘ಕರಟಕ ದಮನಕ’ ಸಾಂಗ್

    ರಶ್ಮಿಕಾ (Rashmika Mandanna) ಬಾಲಿವುಡ್‌ನಲ್ಲಿ (Bollywood) ಮೆರೆಯುತ್ತಿದ್ದಾರೆ. ಟಾಲಿವುಡ್ ಅಂಗಳ ಖಾಲಿ ಖಾಲಿ. ಆ ಜಾಗವನ್ನು ತುಂಬಬೇಕಿದ್ದ ಶ್ರೀಲೀಲಾ ತಣ್ಣಗಾಗಿದ್ದಾರೆ. ಸೋಲು ಅವರನ್ನು ದಿಕ್ಕೆಡಿಸಿದೆ. ಹೀಗಿದ್ದರೂ ಸಂಭಾವನೆ ಕಮ್ಮಿ ಆಯಿತಾ? ನೋ ಚಾನ್ಸ್. ಆದ್ರೂ 3ರಿಂದ 4 ಕೋಟಿ ರೂ. ಶ್ರೀಲೀಲಾ ಪಡೆಯುತ್ತಾರೆ. ಇವರಿಗೆ ಸಮನಾದ ಇನ್ನೊಂದು ಹುಡುಗಿ ಇಲ್ಲ. ಶ್ರೀಲೀಲಾ ಕೇಳಿದಷ್ಟು ಕೊಡದೇ ನಿರ್ಮಾಪಕರಿಗೆ ಬೇರೆ ದಾರಿ ಇಲ್ಲ. ಪರಿಣಾಮ ಶ್ರೀಲೀಲಾ ರಾಕಿಂಗ್ ಅಂಡ್ ಡಾನ್ಸಿಂಗ್. ಮತ್ತೊಬ್ಬ ನಟಿ ಟಾಲಿವುಡ್‌ಗೆ ಎಂಟ್ರಿ ಆಗಬೇಕು. ಆಕೆ ಹಿಟ್ ಕೊಡಬೇಕು. ಆಗ ಮಾತ್ರ ಶ್ರೀಲೀಲಾ ಸೀಟು ಖಾಲಿ.

    ಇತ್ತೀಚೆಗೆ ನಟಿಸಿದ ಸಿನಿಮಾಗಳ ಸಕ್ಸಸ್ ಕ್ರೆಡಿಟ್ ಶ್ರೀಲೀಲಾ ಪಾಲಿಗೆ ಇಲ್ಲದೇ ಇದ್ರೂ. ಕನ್ನಡದ ಬ್ಯೂಟಿಗಿರುವ ಡಿಮ್ಯಾಂಡ್ ಕೊಂಚವು ಕಮ್ಮಿಯಾಗಿಲ್ಲ.

  • ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

    ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?

    ನ್ನಡದ ಹುಡುಗಿ, ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ಅವರಿಗೆ ಇದೀಗ ಟಾಲಿವುಡ್‌ನಲ್ಲಿ (Tollywood) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸೋಲನ್ನು ಕಂಡ ‘ಕಿಸ್’ ನಟಿಗೆ ಈಗ ‘ಗುಂಟೂರು ಖಾರಂ’ ಸಿನಿಮಾದಿಂದ ಯಶಸ್ಸು ಸಿಕ್ಕಿದೆ.

    ಕಿಸ್, ಭರಾಟೆ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ಶ್ರೀಲೀಲಾ ಬಳಿಕ ತೆಲುಗಿಗೆ ಹಾರಿದ್ದರು. ಧಮಾಕಾ’ ಚಿತ್ರದ ಸಕ್ಸಸ್ ಬಳಿಕ ‘ಸ್ಕಂದ’, ‘ಆದಿಕೇಶವ’, ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಸೋಲಿನಿಂದ ಕಂಗೆಟ್ಟ ನಟಿಗೆ ‘ಗುಂಟೂರು ಖಾರಂ’ ಚಿತ್ರದಿಂದ ಯಶಸ್ಸು ಸಿಕ್ಕಿದೆ. ಇದನ್ನೂ ಓದಿ:ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್- 55 ಲಕ್ಷ ಮೊತ್ತದಲ್ಲಿ ಲೀಲಾವತಿ ಸ್ಮಾರಕ

    ಜನವರಿ 12ರಂದು ರಿಲೀಸ್ ಆದ ‘ಗುಂಟೂರು ಖಾರಂ’ (Guntur Kaaram) ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್, ಚಿತ್ರದ ಕಥೆ ಬಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಪ್ರಿನ್ಸ್- ಶ್ರೀಲೀಲಾ ಜೋಡಿ ಮೋಡಿ ಮಾಡುತ್ತಿದೆ.

    ರಶ್ಮಿಕಾ(Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Krithi Shetty) ಠಕ್ಕರ್ ಕೊಟ್ಟು ಮತ್ತೆ ಸಕ್ಸಸ್ ರೇಸ್‌ನಲ್ಲಿದ್ದಾರೆ ಶ್ರೀಲೀಲಾ. ಈಗ ಮತ್ತೆ ಶ್ರೀಲೀಲಾಗೆ ಸ್ಟಾರ್ ನಟರ ಚಿತ್ರಗಳು ಅರಸಿ ಬರುತ್ತಿದೆ. ಇದರ ನಡುವೆ ನಟಿ, ಎಂಬಿಬಿಎಸ್ ಫೈನಲ್ ಇಯರ್ ಓದುತ್ತಿದ್ದಾರೆ. ಎಕ್ಸಾಂ ಹತ್ತಿರವಿರುವ ಕಾರಣ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ.

    ಅದೃಷ್ಟ ಕೈ ಹಿಡಿದಿರೋ ಸಮಯದಲ್ಲಿ ಕನ್ನಡದ ಬ್ಯೂಟಿ ಮತ್ತೆ ಸಿನಿಮಾಗಳನ್ನು ಮಾಡುತ್ತಾರಾ? ಅಥವಾ ಎಜುಕೇಷನ್‌ಗೆ ಒತ್ತು ಕೊಟ್ಟು ವಿರಾಮ ತೆಗೆದುಕೊಳ್ತಾರೆ ಕಾಯಬೇಕಿದೆ. ಡಿಮ್ಯಾಂಡ್‌ ಇರೋವಾಗಲೇ ಹುಡುಕಿ ಬಂದಿರೋ ಅದೃಷ್ಟದ ಕಡೆ ತಿರುಗಿ ನೋಡಬೇಕಲ್ಲವೇ? ಹಾಗಾದ್ರೆ ‘ಕಿಸ್‌’ ನಟಿ ಮುಂದೆ ಏನ್ಮಾಡ್ತಾರೆ ಕಾದುನೋಡೋಣ.

  • ಶ್ರೀಲೀಲಾ ಕುಣಿತಕ್ಕೆ ಸುಸ್ತಾದೆ- ಕನ್ನಡದ ನಟಿಯನ್ನು ಹಾಡಿ ಹೊಗಳಿದ ಮಹೇಶ್ ಬಾಬು

    ಶ್ರೀಲೀಲಾ ಕುಣಿತಕ್ಕೆ ಸುಸ್ತಾದೆ- ಕನ್ನಡದ ನಟಿಯನ್ನು ಹಾಡಿ ಹೊಗಳಿದ ಮಹೇಶ್ ಬಾಬು

    ‘ಗುಂಟೂರು ಖಾರಂ’ ಇನ್ನೇನು ಬರಲಿದೆ. ಜನವರಿ 12ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಪ್ರಿನ್ಸ್ ಮಹೇಶ್ ಬಾಬು- ಶ್ರೀಲೀಲಾ (Sreeleela) ಕಾಂಬಿನೇಶನ್ ಭರ್ಜರಿ ಸದ್ದು ಮಾಡುತ್ತಿದೆ. ಅದಕ್ಕೆ ಸರಿಯಾಗಿ ಮಹೇಶ್ ಬಾಬು ಕೂಡ ಶ್ರೀಲೀಲಾ ಕುಣಿತಕ್ಕೆ ಮಾರು ಹೋಗಿದ್ದಾರೆ. ಇನ್ನೆಂದೂ ನಾನು ಶ್ರೀಲೀಲಾ ಜೊತೆ ಕಾಂಪಿಟೇಶನ್ ಮಾಡಲ್ಲ ಎಂದಿದ್ದಾರೆ. ಇದನ್ನು ಕೇಳಿ ಶ್ರೀಲೀಲಾ ಥ್ರಿಲ್ ಆಗಿದ್ದಾರೆ.

    ಕಳೆದ ವರ್ಷ ನಾಲ್ಕು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದರು. ಆದರೆ 3 ಸಿನಿಮಾಗಳು ಮಕಾಡೆ ಮಲಗಿದೆ. ‘ಭಗವಂತ ಕೇಸರಿ’ ಗೆದ್ದರೂ ಅದರ ಕ್ರೆಡಿಟ್ ಈಕೆಗೆ ಸಲ್ಲಲಿಲ್ಲ. ಬಾಲಕೃಷ್ಣ ಪಾಲಾಯಿತು. ಈಗ ‘ಗುಂಟೂರೂ ಖಾರಂ’ (Guntur Kaaram) ಬರಲಿದೆ. ಜನವರಿ 12ಕ್ಕೆ ಬಿಡುಗಡೆಯಾಗುತ್ತಿದೆ. ಟಾಲಿವುಡ್ ಹ್ಯಾಂಡ್ಸಮ್ ಹಂಕ್ ಮಹೇಶ್ ಬಾಬು (Mahesh Babu) ಜೊತೆ ಶ್ರೀಲೀಲಾ ಕುಣಿದಿದ್ದಾರೆ. ಅದು ಗೆದ್ದರೆ ಶ್ರೀಲೀಲಾ ಭವಿಷ್ಯ ಉಜ್ವಲ. ಇನ್ನೂ ಸಿನಿಮಾ ಪ್ರಚಾರ ಕಾರ್ಯದ ವೇಳೆ, ಪ್ರಿನ್ಸ್ ಶ್ರೀಲೀಲಾ ಅಭಿನಯ ಹಾಗೂ ಕುಣಿತವನ್ನು ಮನಸಾರೆ ಹೊಗಳಿದ್ದಾರೆ. ಇದನ್ನೂ ಓದಿ:ರಜನಿ ಅಭಿಮಾನಿಗಳಿಗೆ ನಿರಾಸೆ : ಸಂಕ್ರಾಂತಿಗೆ ಬರ್ತಿಲ್ಲ ‘ಲಾಲ್ ಸಲಾಂ’

    ಶ್ರೀಲೀಲಾ ಕುಣಿತಕ್ಕೆ (Dance) ನಾನು ಹೆಜ್ಜೆ ಹಾಕುವುದರಲ್ಲಿ ಸುಸ್ತಾಗಿ ಹೋದೆ. ನಿಜಕ್ಕೂ ಆ ಹುಡುಗಿ ಅದ್ಭುತ. ನನಗೆ ಆ ಹುಡುಗಿ ಜೊತೆ ಕಾಂಪೀಟ್ ಮಾಡೋಕೆ ಆಗಲ್ಲ. ಮಹೇಶ್ ಬಾಬು ಮಾತು, ಶ್ರೀಲೀಲಾಗೂ ಇದು ಖುಷಿ ಕೊಟ್ಟಿದೆ. ಮತ್ತಷ್ಟು ಸಿನಿಮಾ ಬಗ್ಗೆ ಆಸಕ್ತಿ ಕಿಸ್ ನಟಿಗೆ ಹೆಚ್ಚಾಗಿದೆ. ಇದೆಲ್ಲದರ ನಡುವೆ ಶ್ರೀಲೀಲಾ- ಮಹೇಶ್ ಬಾಬು ಜೋಡಿಯ ಕಾಂಬಿನೇಷನ್ ಬೆಳ್ಳಿಪರದೆ ಮೇಲೆ ನೋಡಲು ಕಾಯುತ್ತಿದ್ದಾರೆ. 3 ಚಿತ್ರಗಳ ಸೋಲಿನ ನಂತರ ಗುಂಟೂರು ಖಾರಂ ಕೈ ಹಿಡಿಯುತ್ತದಾ ಇಲ್ಲವಾ? ಕಾದುನೋಡಬೇಕಿದೆ.

    ಕನ್ನಡದ ಕಿಸ್, ಭರಾಟೆ, ಸಿನಿಮಾಗಳ ಮೂಲಕ ನಾಯಕಿಯಾಗಿ ಪರಿಚಿತರಾದ ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡ್ತಿದ್ದಾರೆ. ಟಾಪ್ ಹೀರೋಗಳಿಗೆ ನಾಯಕಿಯಾಗಿ ಕನ್ನಡದ ನಟಿ ಸದ್ದು ಮಾಡ್ತಿದ್ದಾರೆ.

  • Guntur Kaaram: ಮಹೇಶ್ ಬಾಬು ಆ್ಯಕ್ಷನ್, ಶ್ರೀಲೀಲಾ ಗ್ಲ್ಯಾಮರ್‌ ಟ್ರೈಲರ್‌ ಸೂಪರ್

    Guntur Kaaram: ಮಹೇಶ್ ಬಾಬು ಆ್ಯಕ್ಷನ್, ಶ್ರೀಲೀಲಾ ಗ್ಲ್ಯಾಮರ್‌ ಟ್ರೈಲರ್‌ ಸೂಪರ್

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಸದ್ಯ ತೆಲುಗಿನಲ್ಲಿ ಹವಾ ಕ್ರಿಯೆಟ್ ಮಾಡುತ್ತಿದ್ದಾರೆ. ‘ಗುಂಟೂರು ಖಾರಂ’ ಚಿತ್ರದ ಮೂಲಕ ಸಕ್ಸಸ್‌ಗಾಗಿ ಎದುರು ನೋಡ್ತಿದ್ದಾರೆ. ಮಹೇಶ್ ಬಾಬು (Mahesh Babu) ಆ್ಯಕ್ಷನ್, ಶ್ರೀಲೀಲಾ ಗ್ಲ್ಯಾಮರ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಗುಂಟೂರು ಖಾರಂ ಚಿತ್ರದ ಟ್ರೈಲರ್‌ ಪ್ರಿನ್ಸ್ ಅಭಿಮಾನಿಗಳು ಮೆಚ್ಚುಗೆಗೆ ಕಾರಣವಾಗಿದೆ.

    ಪವರ್ ಪ್ಯಾಕ್ಡ್ ಟ್ರೈಲರ್‌ನಲ್ಲಿ ಮಹೇಶ್ ಬಾಬು ಸಖತ್ ಮಾಸ್ ಆಗಿ ಎನರ್ಜಿಟಿಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರಕಾಶ್ ರಾಜ್, ರಮ್ಯಾ ಕೃಷ್ಣ (Ramya Krishna), ಜಯರಾಂ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ರವಿ ಬಸ್ರೂರ್ ಪುತ್ರನ ಚಿತ್ರಕ್ಕೆ ಇಂಜಿನಿಯರ್ ಶಶಿಕಿರಣ್ ಡೈರೆಕ್ಟರ್

    ಹೀರೋ ರಮಣ್ ಅಂದರೆ, ಮಹೇಶ್ ಬಾಬು ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ರಾಜಕಾರಣಿ ಆಗಿ ಪ್ರಕಾಶ್‌ ರಾಜ್‌ ಅಭಿನಯಿಸಿದ್ದಾರೆ. ಲವ್, ರೊಮ್ಯಾನ್ಸ್, ತಾಯಿಯ ಸೆಂಟಿಮೆಂಟ್ ಹೊಂದಿರುವ ಕಥೆ ಇದಾಗಿದೆ.

    ನಟಿ ಶ್ರೀಲೀಲಾ ಟ್ರೆಡಿಷನಲ್ ಮತ್ತು ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು- ಶ್ರೀಲೀಲಾ ಕೆಮಿಸ್ಟ್ರಿ ಟ್ರೈಲರ್‌ನಲ್ಲಿ ಮೋಡಿ ಮಾಡ್ತಿದೆ. ಅದರಲ್ಲೂ ಇಬ್ಬರ ಡ್ಯಾನ್ಸ್ ಮಸ್ತ್ ಆಗಿ ಮೂಡಿ ಬಂದಿದೆ. ಸಿನಿಮಾ ಇದೇ ಜನವರಿ 12ಕ್ಕೆ ರಿಲೀಸ್ ಆಗುತ್ತಿದೆ.

    ಆದಿಕೇಶವ, ಸ್ಕಂದ ಚಿತ್ರದ ಸೋಲಿನ ಸುಳಿಯಲ್ಲಿರೋ ಶ್ರೀಲೀಲಾಗೆ ‘ಗುಂಟೂರು ಖಾರಂ’ (Guntur Kaaram) ಸೂಪರ್ ಸಕ್ಸಸ್ ಕೊಡುತ್ತಾ ಕಾಯಬೇಕಿದೆ.

  • ಶ್ರೀಲೀಲಾಗೆ ಹೋಲಿಕೆ ಮಾಡಿದ್ದಕ್ಕೆ ‘ರಣವಿಕ್ರಮ’ ನಟಿ ಅಂಜಲಿ ಗರಂ

    ಶ್ರೀಲೀಲಾಗೆ ಹೋಲಿಕೆ ಮಾಡಿದ್ದಕ್ಕೆ ‘ರಣವಿಕ್ರಮ’ ನಟಿ ಅಂಜಲಿ ಗರಂ

    ನ್ನಡದ ರಣವಿಕ್ರಮ, ಬೈರಾಗಿ(Bhairagi), ಹೊಂಗನಸು ಚಿತ್ರಗಳ ನಾಯಕಿ ಅಂಜಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಶ್ರೀಲೀಲಾರನ್ನ ಹೋಲಿಕೆ ಮಾಡಿದ್ದಕ್ಕೆ ಅಂಜಲಿ ಗರಂ ಆಗಿದ್ದಾರೆ. ಶ್ರೀಲೀಲಾ (Sreeleela) ವಿಚಾರಕ್ಕೆ ಅಂಜಲಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:‘ಯುಐ’ ಟೀಸರ್ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚ, ಶಿವಣ್ಣ, ಅಲ್ಲು ಅರವಿಂದ್

    ಸೌತ್ ನಟಿ ಅಂಜಲಿ(Anjali) ಅವರು ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪುವ ಮೂಲಕ ಟಾಕ್‌ನಲ್ಲಿದ್ದಾರೆ. ಹೊಸ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ರಾಂಗ್ ಆಗಿದ್ದಾರೆ. ಶ್ರೀಲೀಲಾ ಮತ್ತು ಅವರ ಸಿನಿಮಾ ಕೆರಿಯರ್ ಸಂಬಂಧಿಸಿದ ಕೆಲ ಪ್ರಶ್ನೆಗಳು ಅಂಜಲಿಗೆ ಕೇಳಲಾಗಿದೆ. ಈ ವೇಳೆ, ನಟಿ ಗರಂ ಆಗಿದ್ದಾರೆ.

    ನಾನು ನಿಮ್ಮ ಅಭಿಮಾನಿ, ತೆಲುಗಿನ ಹುಡುಗಿ ಎಂಬ ಕಾರಣಕ್ಕೆ ನಿಮಗೆ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂದು ಎಂದಾದರೂ ಅಂದುಕೊಂಡಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಕೊಂಚ ಖಾರವಾಗಿಯೇ ಅಂಜಲಿ ಉತ್ತರಿಸಿದ್ದಾರೆ. ನನಗೆ ಬ್ರೇಕ್ ಸಿಗದೇ ಇದ್ದರೆ ನೀವು ಹೇಗೆ ನನಗೆ ಅಭಿಮಾನಿ ಆಗುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ. ತೆಲುಗಿನಲ್ಲಿ ನಾನು ಸಿನಿಮಾಗಳನ್ನು ಮಾಡದೇ ಇರಬಹುದು, ತಮಿಳಿನಲ್ಲೂ ಸಿನಿಮಾ ಮಾಡುತ್ತಿದ್ದೇನೆ ಎಂದರು. ಪತ್ರಕರ್ತೆಯೊಬ್ಬರು ಮಾತು ಮುಂದುವರೆಸಿ ಶ್ರೀಲೀಲಾ (Sreeleela) ರೇಂಜ್‌ನಲ್ಲಿ ನೀವು ಯಾಕೆ ಯಶಸ್ವಿಯಾಗಲಿಲ್ಲ ಎಂದು ಮತ್ತೆ ಕೇಳಿದ್ದಾರೆ. ಸಿಟ್ಟಾದ ಅಂಜಲಿ, ನಾನು ಈ ನಂಬರ್ ಗೇಮ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ಇಷ್ಟವಾದ ಪಾತ್ರಗಳನ್ನು ನಾನು ಮಾಡುತ್ತೇನೆ ಎಂದಿದ್ದಾರೆ.

    ತೆಲುಗಿನಲ್ಲಿ (Tollywood) ಸಿನಿಮಾ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ನಾನು ಖಾಲಿ ಕೂತಿಲ್ಲ. ಬೇರೆ ಭಾಷೆಗಳಲ್ಲಿಯೂ ನಟಿಸುತ್ತಿದ್ದೇನೆ. ಸಿನಿಮಾಗಳ ಜೊತೆಗೆ ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದೀನಿ. ಹಾಗಾಗಿ ತೆಲುಗಿನಲ್ಲಿ ನಾನು ಕಡಿಮೆ ನಟಿಸುವಂತೆ ನಿಮಗೆ ಅನ್ನಿಸಬಹುದು ಎಂದು ಹೇಳಿದ್ದಾರೆ.

  • ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ

    ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ

    ನ್ನಡದ ನಟಿ ಶ್ರೀಲೀಲಾ (Sreeleela) ಹೊಸ ವರ್ಷದಲ್ಲಿ ಹೊಸ ಶಫಥ ಮಾಡಿದ್ದಾರೆ. ಇನ್ನೇನು ನನ್ನನ್ನು ಹಿಡಿಯೋರು ಯಾರೂ ಇಲ್ಲ ಎಂದು ಶ್ರೀಲೀಲಾ ಮೆರೆಯುತ್ತಿದ್ದರು. ಆದರೆ ಕಳೆದ ವರ್ಷ ಮೂರು ಸಿನಿಮಾ ಮಕಾಡೆ ಮಲಗಿತ್ತು. ಇದೇ ಕಂಟಿನ್ಯೂ ಆದರೆ ಬಣ್ಣದ ಲೋಕವೂ ದೂರ ಸರಿಸುವುದು ನಿಶ್ಚಿತ. ಅದು ಶ್ರೀಲೀಲಾ ಅರಿವಿಗೂ ಬಂದಿದೆ. ಹಾಗಾಗಿ ಹೊಸ ವರ್ಷದ ಆರಂಭದಲ್ಲೇ ಹೊಸ ಶಪಥ ಮಾಡಿದ್ದಾರೆ.

    ಶ್ರೀಲೀಲಾ ಟಾಲಿವುಡ್‌ನ (Tollywood) ಹಾಟ್ ಬ್ಯೂಟಿ. ಒಂದೇ ಒಂದು ಸಿನಿಮಾದಿಂದ ಹತ್ತತ್ತು ಸಿನಿಮಾ ಹೊಸಿಲಿಗೆ ಬಂದು ಬಿದ್ದವು. ಬಂದಾಗಲೇ ಬಾಚಿಕೊಳ್ಳಬೇಕೆನ್ನುವ ಹಪಹಪಿಗೆ ಬಿದ್ದ ಶ್ರೀಲೀಲಾ ಈಗ 3 ಚಿತ್ರದ ಸೋಲಿನ ನಂತರ ಹೊಸ ಸಿನಿಮಾ ಒಪ್ಪಿಕೊಳ್ಳೋಕೆ ಯೋಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

    ಅದಕ್ಕಾಗಿ ಹೊಸ ವರ್ಷದಲ್ಲಿ ಈ ಹಿಂದೆ ಒಪ್ಪಿಕೊಂಡ ಸಿನಿಮಾ ಬಿಟ್ಟು ಹೊಸ ಸಿನಿಮಾ ಒಪ್ಪಿಲ್ಲ. ಪ್ರಿನ್ಸ್ ಜೊತೆ ‘ಗುಂಟೂರು ಖಾರಂ’ ಚಿತ್ರ, ಪವನ್‌ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’ ಹಾಗೂ ವಿಜಯ್ ದೇವರಕೊಂಡ ಸಿನಿಮಾ. ಇಷ್ಟನ್ನೇ ನೆಚ್ಚಿಕೊಂಡಿದ್ದಾರೆ. ಮಹೇಶ್ ಬಾಬು (Mahesh Babu) ಜೊತೆಗಿನ ಚಿತ್ರ ಸಂಕ್ರಾಂತಿಗೆ ಬರಲಿದೆ. ಇನ್ನು ಎರಡು ಚಿತ್ರ ಅಲ್ಲಲ್ಲೇ ಮರಗಟ್ಟಿವೆ. ಮುಂದೇನು ಶ್ರೀಲೀಲಾ ಮಾಸ್ಟರ್ ಪ್ಲಾನ್ ಎಂದು ಕಾದುನೋಡಬೇಕಿದೆ.

    ‘ಗುಂಟೂರು ಖಾರಂ’ ಇದರ ಮೇಲೆ ಶ್ರೀಲೀಲಾ (Sreeleela) ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಉಳಿದಿಬ್ಬರ ಹೀರೋ ಸಿನಿಮಾ ಯಾವಾಗಲಾದರೂ ಶುರುವಾಗಲಿ, ಮುಗಿಯಲಿ ಆಮೇಲೆ ಹೊಸ ಸಿನಿಮಾ ಸಹಿ ಮಾಡೋಣ ಎನ್ನುವುದು ನಟಿಯ ನಿರ್ಧಾರ. ಶ್ರೀಲೀಲಾ ಮೆದುಳು ಈಗಲಾದರೂ ಕೆಲಸ ಮಾಡುತ್ತಿದೆ. ಕನ್ನಡದ ಹುಡುಗಿ ಬೇಗ ಮನೆ ಮೂಲೆ ಸೇರಬಾರದು. ಯಾವುದೇ ಭಾಷೆಯಾದರೂ ಸರಿ ಗೆದ್ದು ಬೀಗಬೇಕು ಎಂಬುದು ಅಭಿಮಾನಿಗಳ ಆಶಯ.

  • ಮಹೇಶ್ ಬಾಬು ಜೊತೆ ಸಖತ್ತಾಗಿ ಕುಣಿಯಲಿದ್ದಾರೆ ಕನ್ನಡತಿ ಶ್ರೀಲೀಲಾ

    ಮಹೇಶ್ ಬಾಬು ಜೊತೆ ಸಖತ್ತಾಗಿ ಕುಣಿಯಲಿದ್ದಾರೆ ಕನ್ನಡತಿ ಶ್ರೀಲೀಲಾ

    ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಮುಖ್ಯಭೂಮಿಕೆಯ ಗುಂಟೂರು ಖಾರಂ ಸಿನಿಮಾದ ಟಪ್ಪಾಂಗುಚ್ಚಿ ಹಾಡಿಗೆ ಕನ್ನಡತಿ ಶ್ರೀಲೀಲಾ (Sreeleela) ಹೆಜ್ಜೆ ಹಾಕಲಿದ್ದಾರೆ. ಅದೊಂದು ಡಾನ್ಸ್ ನಂಬರ್ ಸಾಂಗ್ ಆಗಿದ್ದು, ಶ್ರೀಲೀಲಾ ಮೈಚಳಿ ಬಿಟ್ಟು ಕುಣಿಯಲಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಬೇಕಾಗಿದೆ.

    ಗುಂಟೂರು ಖಾರಂ (Guntur Kharam) ಸಿನಿಮಾಗೆ ನಾಯಕಿ ಯಾರು ಎನ್ನುವ ಚರ್ಚೆ ಹಲವು ದಿನಗಳಿಂದ ನಡೆಯುತ್ತಲೇ ಇತ್ತು. ಪೂಜಾ ಹೆಗಡೆ (Pooja Hegde) ಬಿಟ್ಟು ಹೋದ ಸ್ಥಾನವನ್ನು ತುಂಬುವವರು ಯಾರು? ಎನ್ನುವ ಪ್ರಶ್ನೆ ಮೂಡಿತ್ತು. ಶ್ರೀಲೀಲಾ, ತ್ರಿಷಾ ಸೇರಿದಂತೆ ಹಲವರು ಹೆಸರು ನಾಯಕಿ ಸ್ಥಾನಕ್ಕಾಗಿ ಕೇಳಿ ಬಂದಿತ್ತು. ಈ ಎಲ್ಲ ಸ್ಟಾರ್ ನಟಿಯರಿಗೆ ಕೊಕ್ ನೀಡಿ, ಯುವ ನಟಿಗೆ ಮಣೆ ಹಾಕಿತ್ತು ಚಿತ್ರತಂಡ.

    ಹೌದು, ಈ ಹಿಂದೆ ಕನ್ನಡದ ನಟಿ ಶ್ರೀಲೀಲಾ ಅಥವಾ ಸ್ಟಾರ್ ನಟಿ ತ್ರಿಷಾ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಯುವ ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಎಂಟ್ರಿಯಾಗಿತ್ತು.  ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು ಮೀನಾಕ್ಷಿ. ಆನಂತರ ಸಿನಿಮಾ ರಂಗವನ್ನು ಪ್ರವೇಶ ಮಾಡಿದವರು. ಹಿಟ್ : ದಿ ಸೆಕೆಂಡ್ ಕೇಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

    ಮೀನಾಕ್ಷಿ ನಾಯಕಿಯಾಗಿ ನಟಿಸುತ್ತಿದ್ದರೆ, ಹಾಟ್ ಬ್ಯೂಟಿ ರಮ್ಯಾ ಕೃಷ್ಣ (Ramya Krishna) ವಿಶೇಷ ಪಾತ್ರವೊಂದನ್ನು ಮಾಡಲಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿನಿ ಪಾತ್ರ ಮಾಡಿದ್ದ ರಮ್ಯಾ ಕೃಷ್ಣ ಅಲ್ಲಿಂದ ಅವರು ಮತ್ತೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಮಹೇಶ್ ಬಾಬು ಸಿನಿಮಾವನ್ನು ರಮ್ಯಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರಿಗಾಗಿಯೇ ಪಾತ್ರವನ್ನು ಹಿಗ್ಗಿಸಿದ್ದಾರಂತೆ ಚಿತ್ರತಂಡ.

     

    ಗುಂಟೂರು ಖಾರಂ’ ಸಿನಿಮಾ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು ಬರುವ ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗಲ್ಲ ಎನ್ನುವ ವಾದ ಶುರುವಾಗಿದೆ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ಈಗ ಡೇಟ್ಸ್ ಸಮಸ್ಯೆ ಕಾರಣದಿಂದಾಗಿ ಶೂಟಿಂಗ್ ಮುಂದೂಡಲ್ಪಟ್ಟಿತ್ತು. ಕೆಲವು ದೃಶ್ಯಗಳನ್ನು ರೀಶೂಟ್ ಮಾಡುವಂತೆ ಮಹೇಶ್ ಬಾಬು ತಿಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

  • ಶೂಟಿಂಗ್‌ಗೆ ಚಕ್ಕರ್‌, ಶ್ರೀಲಂಕಾಗೆ ಹಾರಿದ ಶ್ರೀಲೀಲಾ

    ಶೂಟಿಂಗ್‌ಗೆ ಚಕ್ಕರ್‌, ಶ್ರೀಲಂಕಾಗೆ ಹಾರಿದ ಶ್ರೀಲೀಲಾ

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಏಕಾಏಕಿ ಶ್ರೀಲಂಕಾಕ್ಕೆ ಹೋಗಿದ್ದಾರೆ. ಭರ್ತಿ ಎರಡು ದಿನ ಅಲ್ಲಿ ಕಳೆಯಲಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ. ಒಂದೊಂದು ಗಂಟೆ ಟೈಮ್‌ಗೂ ಒದ್ದಾಡುತ್ತಿದ್ದಾರೆ ಶ್ರೀಲೀಲಾ. ಶೂಟಿಂಗ್, ಮೆಡಿಕಲ್ ಪರೀಕ್ಷೆ, ಪ್ರಚಾರಕ್ಕೆಲ್ಲಾ ಸಮಯ ಕೊಡಲಾರದ ಹುಡುಗಿ ಶ್ರೀಲಂಕಾಕ್ಕೆ ಹೋಗಿದ್ಯಾಕೆ? ಇಲ್ಲಿದೆ ಮಾಹಿತಿ.

    ‘ಗುಂಟೂರು ಖಾರಂ’ ಶೂಟಿಂಗ್ ನಡೆಯುತ್ತಿದೆ. ಪ್ರಿನ್ಸ್ ಮಹೇಶ್‌ ಬಾಬು ಜೊತೆ ನಟಿ ಬ್ಯುಸಿ. ಇದರ ನಡುವೆ ನಿತಿನ್ ಜೊತೆಗಿನ ‘ಎಕ್ಸಾರ್ಡನರಿ ಮ್ಯಾನ್’ ಬಿಡುಗಡೆ ಪ್ರಚಾರಕ್ಕೆ ಹೋಗಬೇಕು. ಇದು ಸಾಲದು ಎಂಬಂತೆ ಜನವರಿಗೆ ಮೆಡಿಕಲ್ ಪರೀಕ್ಷೆ ಕೂಡ ಇದೆ. ಒಂದೇ ಒಂದು ಗಂಟೆಗಾಗಿ ನಿರ್ಮಾಪಕರು ಕಾಯುತ್ತಿದ್ದಾರೆ. ಶ್ರೀಲೀಲಾ ಸಮಯ ಹೊಂದಿಸಲು ಒದ್ದಾಡುತ್ತಿದ್ದಾರೆ. ಹೀಗಿರುವಾಗ ಪುರುಸೊತ್ತು ಇಲ್ಲದ ಸಮಯದಲ್ಲಿ ಶ್ರೀಲೀಲಾ ಶ್ರೀಲಂಕಾಕ್ಕೆ ಹಾರಿದ್ದಾರೆ. ಇದನ್ನೂ ಓದಿ:ರಸ್ತೆಯಲ್ಲಿ ಕುಡಿದು ತೂರಾಡಿದ್ದ ಫೋಟೋಗೆ ಸ್ಪಷ್ಟನೆ ನೀಡಿದ ಸನ್ನಿ

    ‘ಬಾಹುಬಲಿ’ (Bahubali) ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ಮದುವೆ ಇಂದು (ಡಿ.6) ನಡೆಯುತ್ತಿದೆ. ಹುಡುಗಿ ಪ್ರತ್ಯೂಶಾ. ಈಕೆಗಾಗಿ ಶ್ರೀಲೀಲಾ ಶ್ರೀಲಂಕಾಕ್ಕೆ ಹೋಗಿದ್ದಾರೆ. ಬಾಲ್ಯದ ಗೆಳತಿ ಪ್ರತ್ಯೂಶಾ- ಶ್ರೀಲೀಲಾ ಅಮೆರಿಕಾದಲ್ಲಿ ಇಬ್ಬರೂ ಒಂದೇ ಕಾಲೇಜಿನ ಗೆಳತಿಯರು. ಹೀಗಾಗಿ ಇದ್ದ ಬದ್ದ ಕೆಲಸವೆಲ್ಲಾ ಪಕ್ಕಕ್ಕಿಟ್ಟು ಶ್ರೀಲೀಲಾ ಮದುವೆಗೆ ಹಾಜರಾಗಿದ್ದಾರೆ.

    ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್ ಮತ್ತು ಸಿನಿಮಾ ರಿಲೀಸ್‌ನಲ್ಲಿ ಬ್ಯುಸಿಯಿದ್ದ ‘ಕಿಸ್’ ನಟಿ. ಕೊಂಚ ತೆಗೆದುಕೊಂಡು ಶ್ರೀಲಂಕಾಗೆ ಹಾರಿದ್ದಾರೆ. ಅಂದಹಾಗೆ, ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಶ್ರೀಲೀಲಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

  • ಶ್ರೀಲೀಲಾಗೆ ಠಕ್ಕರ್, ನಾಗಾರ್ಜುನಗೆ ಆಶಿಕಾ ರಂಗನಾಥ್ ನಾಯಕಿ

    ಶ್ರೀಲೀಲಾಗೆ ಠಕ್ಕರ್, ನಾಗಾರ್ಜುನಗೆ ಆಶಿಕಾ ರಂಗನಾಥ್ ನಾಯಕಿ

    ನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಇದೀಗ ಟಾಲಿವುಡ್‌ನತ್ತ (Tollywood) ಮುಖ ಮಾಡಿದ್ದಾರೆ. ‘ಅಮಿಗೋಸ್’ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಬೆನ್ನಲ್ಲೇ ಸ್ಟಾರ್ ನಟ ನಾಗಾರ್ಜುನಗೆ ಆಶಿಕಾ ನಾಯಕಿಯಾಗಿ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಮೂಲಕ ಬೇಡಿಕೆಯಲ್ಲಿರೋ ಶ್ರೀಲೀಲಾಗೆ (Sreeleela) ಆಶಿಕಾ ಠಕ್ಕರ್ ಕೊಟ್ಟಿದ್ದಾರೆ.

    ಆಶಿಕಾ ರಂಗನಾಥ್‌ಗೆ ಅಷ್ಟಾಗಿ ಕನ್ನಡದ ಚಿತ್ರಗಳು ಕೈಹಿಡಿಯುತ್ತಿಲ್ಲ. ಇದೀಗ ಎಲ್ಲರಂತೆ ಪಟಾಕಿ ಪೋರಿ ಕೂಡ ತೆಲುಗಿಗೆ ಹಾರಿದ್ದಾರೆ. ಟಾಲಿವುಡ್‌ನಲ್ಲಿ ಗೆದ್ದು ನಿಲ್ಲಲು ನಟಿ ಗಟ್ಟಿ ಮನಸ್ಸು ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್, ಸಪ್ತಮಿ ಗೌಡ ಬಳಿಕ ಆಶಿಕಾ ರಂಗನಾಥ್ ಕೂಡ ಆ ಸಾಲಿಗೆ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಸಿನಿಮಾದ ಟೀಸರ್ ರಿಲೀಸ್

    ಟಾಲಿವುಡ್ ಕಿಂಗ್ ನಾಗಾರ್ಜುನಗೆ (Nagarjuna) ಆಶಿಕಾ ನಾಯಕಿಯಾಗಿದ್ದಾರೆ. ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಚಿತ್ರದಲ್ಲಿ ವರಲಕ್ಷ್ಮಿ ಎಂಬ ಪಾತ್ರಕ್ಕೆ ಆಶಿಕಾ ಜೀವ ತುಂಬಲಿದ್ದಾರೆ. ವಿಜಯ್ ಬಿನ್ನಿ ನಿರ್ದೇಶನ ಮಾಡಿದ್ರೆ, ಚಿತ್ರಕ್ಕೆ ಎಂ.ಎಂ ಕೀರವಾಣಿ ಸಂಗೀತವಿದೆ. ಈ ಸಿನಿಮಾಗೆ ಶ್ರೀನಿವಾಸ ಚಿಟ್ಟೂರಿ ನಿರ್ಮಾಣ ಮಾಡುತ್ತಿದ್ದಾರೆ.

     

    View this post on Instagram

     

    A post shared by Ashika Ranganath (@ashika_rangnath)

    60 ವರ್ಷವಾಗಿದ್ರೂ ಇನ್ನೂ ಚಾರ್ಮ್ ಉಳಿಸಿಕೊಂಡಿರೋ ನಾಗಾರ್ಜನಗೆ ಆಶಿಕಾ ನಾಯಕಿಯಾಗಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇಬ್ಬರ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ.

    ತೆಲುಗಿನಲ್ಲಿ ಕನ್ನಡದ ನಟಿ ಮಣಿಯರೇ ಮಿಂಚುತ್ತಿರೋ ಈ ಟೈಮ್‌ನಲ್ಲಿ ಅದರಲ್ಲೂ ಶ್ರೀಲೀಲಾ ಜಮಾನ ಇರೋವಾಗಲೇ ಆಶಿಕಾ ಎಂಟ್ರಿ ಕೊಟ್ಟಿರೋದು ಅಭಿಮಾನಿಗಳಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕನ್ನಡದ ನಟಿಮಣಿಯರ ಮುಂದೆ ಜಾಗ ಗಟ್ಟಿ ಮಾಡಿಕೊಂಡು ತೆಲುಗು ಪ್ರೇಕ್ಷಕರ ಮನಗೆಲ್ಲುತ್ತಾರಾ ಕಾದುನೋಡಬೇಕಿದೆ.

  • ಶ್ರೀಲೀಲಾಗೆ ಲಕ್ ಕೈ ಕೊಡ್ತಾ? ನಟಿಸಿದ ಎರಡೂ ಸಿನಿಮಾ ಅಟ್ಟರ್ ಫ್ಲಾಪ್

    ಶ್ರೀಲೀಲಾಗೆ ಲಕ್ ಕೈ ಕೊಡ್ತಾ? ನಟಿಸಿದ ಎರಡೂ ಸಿನಿಮಾ ಅಟ್ಟರ್ ಫ್ಲಾಪ್

    ಶ್ರೀಲೀಲಾ (Sreeleela) ಅಭಿಮಾನಿಗಳು ಕಂಗಾಲಾಗಿದ್ಧಾರೆ. ಇದೇನಾಗುತ್ತಿದೆ ನಮ್ಮ ದೇವತೆ ಬದುಕಿನಲ್ಲಿ? ನಾಯಕಿ ಪಟ್ಟ ಕಳೆದುಕೊಳ್ಳುತ್ತಾರಾ ಲೀಲಾ. ಅವಸರಕ್ಕೆ ಬಿದ್ದು ಅವಲಕ್ಷಣ ಮಾಡಿಸಿಕೊಂಡರಾ, ಪ್ರಿನ್ಸ್ ಹಾಗೂ ಪವನ್ ಕಲ್ಯಾಣ್ (Pawan Kalyan) ಸಿನಿಮಾ ಕೈ ಹಿಡಿಯದಿದ್ದರೆ ಭವಿಷ್ಯದ ಗತಿ ಏನು? ಇದು ಖುದ್ದು ಶ್ರೀಲೀಲಾಗೂ ಕಂಗಾಲು ಮಾಡಿದೆ. ಏನದು ಸೀಕ್ರೆಟ್.

    ಶ್ರೀಲೀಲಾ ಅಭಿನಯದ ಮೂರು ಸಿನಿಮಾ ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾದವು. ಅದರಲ್ಲಿ ಬಾಲಕೃಷ್ಣ (Balayya) ಜೊತೆ ನಟಿಸಿದ, ಅಂದರೆ ಮಗಳಾಗಿ ಕಾಣಿಸಿದ್ದ ಭಗವಂತ ಕೇಸರಿ ಹಿಟ್ ಆಯಿತು. ಆದರೆ ಕ್ರೆಡಿಟ್ ಪೂರ್ತಿ ಬಾಲಯ್ಯ ನುಂಗಿ ನೀರು ಕುಡಿದರು. ಶ್ರೀಲೀಲಾ ಗೆದ್ದೂ ಸೋತರು. ಈ ನಡುವೆ ‘ಸ್ಕಂದ’ (Skanda) ಹಾಗೂ ‘ಆದಿಕೇಶವ’ ಬಂತು ನೋಡಿ. ‘ಸ್ಕಂದ’ ಚಿತ್ರದಲ್ಲಿ ಹಾಡು ಕೆಲವು ದೃಶ್ಯ ಅಷ್ಟೇ ಪಾಲಿಗೆ ಬಂದ ಪಂಚಾಮೃತ. ಇದನ್ನೂ ಓದಿ:ಕಾರ್ತಿಕ್‌ಗೆ ಗುನ್ನ ಕೊಟ್ಟ ಡ್ರೋನ್‌ಗೆ ‘ಬಿಗ್ ಬಾಸ್’ ತಿರುಮಂತ್ರ

    ಹತ್ತತ್ತು ಸಿನಿಮಾ ಕೈಯಲ್ಲಿವೆ. ಹ್ಯಾಪ್‌ನಿಂಗ್ ಸ್ಟಾರ್ ಶ್ರೀಲೀಲಾಗೆ ಪ್ರಿನ್ಸ್ ಹಾಗೂ ಪವನ್ ಜೊತೆ ಅವಕಾಶ ಸಿಕ್ಕಿದೆ. ಈಗಾಗಲೇ ಶ್ರೀಲೀಲಾ ಫ್ಯಾನ್ಸ್ ದಿಕ್ಕೆಟ್ಟಿದ್ದಾರೆ. ‘ಗುಂಟೂರು ಖಾರಂ’ ಹಾಗೂ ‘ಉಸ್ತಾದ್ ಭಗತ್‌ಸಿಂಗ್’ ಎರಡರಲ್ಲೂ ಶ್ರೀಲೀಲಾಗೆ ಹಾಡು ಮತ್ತು ಕುಣಿತಕ್ಕಷ್ಟೇ ಜಾಗ ಕೊಟ್ಟರೆ ಬದುಕು ಕಷ್ಟ ಕಷ್ಟ.

    ಅಕಸ್ಮಾತ್ ಅಲಾ ವೈಕುಂಠಪುರಂಲೋದಲ್ಲಿ ಪೂಜಾ ಹೆಗ್ಡೆಗೆ (Pooja Hegde) ಸಿಕ್ಕಂಥ ಅವಕಾಶ ಈಕೆಗೂ ದಕ್ಕಿದರೆ ಮಾತ್ರ ಬದುಕು ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ. ಮುಂಬರುವ ಅವಕಾಶಗಳಲ್ಲಿ ಶ್ರೀಲೀಲಾ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.