Tag: sreeja

  • ತೆಲುಗು ನಟ ಚಿರಂಜೀವಿ ಮಾಜಿ ಅಳಿಯ ಶಿರೀಶ್ ನಿಧನ

    ತೆಲುಗು ನಟ ಚಿರಂಜೀವಿ ಮಾಜಿ ಅಳಿಯ ಶಿರೀಶ್ ನಿಧನ

    ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Mega Star Chiranjeevi) ಮಾಜಿ ಅಳಿಯ, ಶ್ರೀಜಾ ಅವರ ಮೊದಲ ಮಾಜಿ ಪತಿ ಶಿರೀಶ್ ಭಾರದ್ವಾಜ್ (Sirish Bharadwaj) ನಿಧನರಾಗಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿರೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಮೂಲಗಳ ಪ್ರಕಾರ, ಶಿರೀಶ್ ಭಾರದ್ವಾಜ್ ಅವರು ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು (ಜೂನ್ 19) ಬೆಳಗ್ಗೆ ಮೃತಪಟ್ಟಿದ್ದಾರೆ.‌ ಇದನ್ನೂ ಓದಿ:‘ಕುರುಕ್ಷೇತ್ರ’ ಸೆಟ್‌ನಲ್ಲಿ ಪವಿತ್ರಾರನ್ನು ಏನೆಂದು ಪರಿಚಯಿಸಿದ್ರು ದರ್ಶನ್? ‘ಕಾಟೇರ’ ನಟ ಹೇಳಿದಿಷ್ಟು

    ಅಂದಹಾಗೆ,ಶಿರೀಶ್ ಮತ್ತು ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ (Sreeja) ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಶ್ರೀಜಾ ಮನೆಯಿಂದ ಹೊರ ನಡೆದಿದ್ದರು. ಬಳಿಕ ಶ್ರೀಜಾ ಮತ್ತು ಶಿರೀಶ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಕೆಲ ಮನಸ್ತಾಪಗಳಿಂದ ಶ್ರೀಜಾ ತನ್ನ ಪುತ್ರಿಯೊಂದಿಗೆ ಮತ್ತೆ ತಂದೆ ಚಿರಂಜೀವಿ ಮನೆಗೆ ವಾಪಸ್ ಆಗಿದ್ರು.

    2012ರಲ್ಲಿ ಶ್ರೀಜಾ ಕಿರುಕುಳ ನೀಡಿದ್ದಕ್ಕಾಗಿ ಶಿರೀಶ್ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ನಂತರ 2014ರಲ್ಲಿ ಶ್ರೀಜಾ ಅವರು ಶಿರೀಶ್ ಭಾರದ್ವಾಜ್‌ಗೆ ಡಿವೋರ್ಸ್ ನೀಡಿದ್ದರು. ಇದೀಗ ಶಿರಿಷ್ ಭಾರದ್ವಾಜ್ ಬಾರದ ಲೋಕಕ್ಕೆ ಹೋಗಿದ್ದಾರೆ. ಸದ್ಯ ಶಿರೀಶ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

  • ಕಲ್ಯಾಣ್‌ ದೇವ್‌ ಮಾಡಿದ ಪೋಸ್ಟ್‌ನಿಂದ ಬಯಲಾಯ್ತು ಶ್ರೀಜಾ ಜೊತೆಗಿನ ಡಿವೋರ್ಸ್‌ ಗುಟ್ಟು

    ಕಲ್ಯಾಣ್‌ ದೇವ್‌ ಮಾಡಿದ ಪೋಸ್ಟ್‌ನಿಂದ ಬಯಲಾಯ್ತು ಶ್ರೀಜಾ ಜೊತೆಗಿನ ಡಿವೋರ್ಸ್‌ ಗುಟ್ಟು

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಯಲ್ಲಿ ಸದ್ಯ ವರುಣ್ ತೇಜ್- ಲಾವಣ್ಯ (Lavanya) ಎಂಗೇಜ್‌ಮೆಂಟ್ ಆಗಿರುವ ಖುಷಿ ಮನೆ ಮಾಡಿದೆ. ಮತ್ತೆ ಮೆಗಾಫ್ಯಾಮಿಲಿ ಬಗ್ಗೆ ಹೊಸ ವಿಚಾರವೊಂದು ಸೌಂಡ್ ಮಾಡುತ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ (Sreeja) 2ನೇ ಮದುವೆ ಕೂಡ ಸರಿಯಿಲ್ಲ. 2ನೇ ಪತಿ ಕಲ್ಯಾಣಗೂ (Kalyan Dev) ಕೂಡ ಡಿವೋರ್ಸ್ (Divorce) ನೀಡಿದ್ರಾ ಎಂಬ ಅನುಮಾನ ಶುರುವಾಗಿದೆ. ಇದನ್ನೂ ಓದಿ:ನಟಿ ತಮನ್ನಾ ಹಾಟ್‌ ಫೋಟೋಗೆ ಸ್ವೀಟ್‌ 16 ಎಂದ ನೆಟ್ಟಿಗರು

    ಶ್ರೀಜಾ ಅವರು ಚಿಕ್ಕ ವಯಸ್ಸಿನಲ್ಲೇ ಸಿರೀಶ್ ಭಾರಧ್ವಜ್ ಎನ್ನುವವರನ್ನು ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದರು. ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರೂ ಆ ಸಂಬಂಧವನ್ನು ತುಂಬಾ ಉಳಿಸಿಕೊಳ್ಳುವಲ್ಲಿ ಶ್ರೀಜಾ ಸೋತರು. ಮೊದಲ ಪತಿಗೆ ಡಿವೋರ್ಸ್ ನೀಡಿ ಮನೆಗೆ ಬಂದಿದ್ದ ಶ್ರೀಜಾ ಮತ್ತೆ 2ನೇ ಮದುವೆಯಾದರು. ಚಿರಂಜೀವಿ ಅವರೇ ಸೂಚಿಸಿದ, ಉದ್ಯಮಿ ಕಲ್ಯಾಣ್ ದೇವ್ ಜೊತೆ ಶ್ರೀಜಾ 2ನೇ ಬಾರಿ ಬೆಂಗಳೂರಿನಲ್ಲಿ ಮದುವೆಯಾದರು. ಆದರೆ 2ನೇ ಪತಿಯಿಂದನೂ ದೂರ ಆಗಿದ್ದರು. ಇದೀಗ ಕಲ್ಯಾಣ್ ದೇವ್ ಅವರಿಗೆ ಡಿವೋರ್ಸ್ ನೀಡಿರೋದು ಖಚಿತ ಎಂಬುದಕ್ಕೆ ನಟ ಚಿರಂಜೀವಿ ಕುಟುಂಬದಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ ಈಗ ಕಲ್ಯಾಣ ದೇವ್ ಮಾಡಿರುವ ಪೋಸ್ಟ್‌ನಿಂದ ಡಿವೋರ್ಸ್ ಆಗಿರೋದು ಖಚಿತ ಎಂದು ಹೇಳಲಾಗುತ್ತಿದೆ.

    ನಟ ಕಲ್ಯಾಣ್ ದೇವ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗಳ ಜೊತೆ ಕಾಲ ಕಳೆದ ವೀಡಿಯೋ ಶೇರ್ ಮಾಡಿ ಭಾವುಕರಾಗಿದ್ದಾರೆ. ವಾರಕ್ಕೆ 4 ಗಂಟೆ ಮಾತ್ರ ಮಗಳ ಜೊತೆ ಸಮಯ ಕಳೆಯಲು ಸಿಗುತ್ತೆ ಎಂದು ಹೇಳಿದ್ದಾರೆ. ಮತ್ತೊಂದು ವಿಡಿಯೋ ಶೇರ್ ಮಾಡಿ ನಾವು ಮತ್ತೆ ಭೇಟಿಯಾಗುವವರೆಗೂ, ನಿನ್ನ ಈ ವಿಶೇಷ ನೆನಪುಗಳು ಯಾವಾಗಲೂ ನಗುವನ್ನು ತರುತ್ತದೆ. ಮಿಸ್ ಯು ನವ್ವು ಎಂದು ಬರೆದುಕೊಂಡಿದ್ದಾರೆ.

    ಕಲ್ಯಾಣ್ ದೇವ್ ಅವರು ಈ ರೀತಿ ಪೋಸ್ಟ್ ಮಾಡ್ತಿದ್ದಂತೆ ನೆಟ್ಟಿಗರ ಚರ್ಚೆಗೆ ಶ್ರೀಜಾ ದಾಂಪತ್ಯದ ವಿಚಾರ ಸುದ್ದಿಯಾಗುತ್ತಿದೆ. ಇತ್ತೀಚಿಗೆ ವರುಣ್- ಲಾವಣ್ಯ ಎಂಗೇಜ್‌ಮೆಂಟ್‌ಗೆ ಶ್ರೀಜಾ ಪತಿ ಕಲ್ಯಾಣ್ ದೇವ್ ಆಗಲಿ, ನಿಹಾರಿಕಾ (Niharika) ಪತಿ ಚೈತನ್ಯ ಆಗಲಿ ಬಂದಿರಲಿಲ್ಲ. ಹಾಗಾಗಿ ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇಬ್ಬರೂ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.

  • ಮಕ್ಕಳಿಗೆ ಪೋಷಕರ ಪ್ರೀತಿ ಸಿಗಬೇಕು ಎಂದು ಶ್ರೀಜಾಗೆ ಕಲ್ಯಾಣ್ ದೇವ್ ಟಾಂಗ್

    ಮಕ್ಕಳಿಗೆ ಪೋಷಕರ ಪ್ರೀತಿ ಸಿಗಬೇಕು ಎಂದು ಶ್ರೀಜಾಗೆ ಕಲ್ಯಾಣ್ ದೇವ್ ಟಾಂಗ್

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಪುತ್ರಿ ಶ್ರೀಜಾ (Sreeja) ದಾಂಪತ್ಯದಲ್ಲಿ ಬಿರುಕಾಗಿರುವ ವಿಚಾರ ಸಾಕಷ್ಟು ಸಮಯದಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಡಿವೋರ್ಸ್ ಬಗ್ಗೆ ಯಾವುದೇ ಸ್ಪಷ್ಟನೆಯನ್ನ ಇದುವರೆಗೂ ಈ ಜೋಡಿ ನೀಡಿಲ್ಲ. ಹೀಗಿರುವಾಗ ಶ್ರೀಜಾ ಪತಿ ಕಲ್ಯಾಣ್ ದೇವ್ (Kalyan Dev) ಮಾಡಿರುವ ಪೋಸ್ಟ್ ವೈರಲ್ ಆಗಿದೆ.

    ಮೆಗಾ ಫ್ಯಾಮಿಲಿಯಲ್ಲಿ ರಾಮ್ ಚರಣ್ (Ram Charan) ಸಕ್ಸಸ್ ದಾರಿಯಲ್ಲಿ ಸುದ್ದಿ ಮಾಡ್ತಿದ್ರೆ ಶ್ರೀಜಾ ಡಿವೋರ್ಸ್ ವಿಚಾರವಾಗಿ ಸಂಚಲನ ಮೂಡಿಸಿದ್ದಾರೆ. ಶ್ರೀಜಾಗೆ ಈ ಹಿಂದೆಯೇ ಒಂದು ಮದುವೆಯಾಗಿತ್ತು. ತಂದೆ ಚಿರಂಜೀವಿ (Chiranjeevi) ಅವರನ್ನೇ ಎದುರು ಹಾಕಿಕೊಂಡು ಪ್ರೀತಿಸಿದ ಹುಡುಗನ ಮದುವೆಯಾಗಿದ್ದರು. ಆದರೆ ಆ ಬದುಕು ಹೆಚ್ಚು ದಿನ ಕೈಹಿಡಿಯಲಿಲ್ಲ. ಮೊದಲ ಪತಿಗೆ ಡಿವೋರ್ಸ್ ಕೊಟ್ಟು, ಕುಟುಂಬದವರ ಸಮ್ಮತಿಯಂತೆ ಕಲ್ಯಾಣ್ ದೇವ್ ಜೊತೆ 2ನೇ ಮದುವೆಯಾಗಿದ್ದರು. ಇದೀಗ ಕಲ್ಯಾಣ್ ದೇವ್ (Kalyan Dev) ಜೊತೆಗಿನ ದಾಂಪತ್ಯ ಸರಿಯಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ನನ್ನ ಪಯಣ ಮುಗಿಯಿತು : ನಟಿ ಮೇಘಾ ಶೆಟ್ಟಿ ಭಾವುಕ

    ಶ್ರೀಜಾ- ಕಲ್ಯಾಣ್ ಇಬ್ಬರೂ ದೂರಾಗುತ್ತಾರೆ ಎಂದು ಸುದ್ದಿ ಆಗುತ್ತಿದ್ದರೂ ಎರಡು ಫ್ಯಾಮಿಲಿಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು ಶ್ರೀಜಾ ತವರು ಮನೆಯಲ್ಲಿ ಇದ್ದಾರೆ. ಇನ್ನು ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಕಲ್ಯಾಣ್ ಇನ್‌ಸ್ಟಾ ಸ್ಟೋರಿ ಮತ್ತೊಮ್ಮೆ ಡಿವೋರ್ಸ್ ಬಗ್ಗೆ ಅನುಮಾನ ಹುಟ್ಟುಹಾಕಿದೆ.

    ಮಕ್ಕಳು ಪೋಷಕರನ್ನು ನೋಡುತ್ತಿದ್ದಂತೆ ಎಕ್ಸೈಟ್ ಆಗುವ ಫೋಟೊವನ್ನು ಶೇರ್ ಮಾಡಿ ಕಲ್ಯಾಣ್ ದೇವ್ “ಮಕ್ಕಳಿಗೆ ತಂದೆ ತಾಯಿ ಪ್ರೀತಿ, ಬೆಂಬಲ ಬಹಳ ಮುಖ್ಯ, ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತ್ನಿಗೆ ಕಲ್ಯಾಣ್ ಟಾಂಗ್ ಕೊಟ್ಟಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಕಲ್ಯಾಣ್ ದೇವ್ ಹಾಗೂ ಶ್ರೀಜಾ ದೂರ ದೂರ ಇರುವುದು ನಿಜ. ಶೀಘ್ರದಲ್ಲೇ ಡಿವೋರ್ಸ್ ಕೂಡ ತೆಗೆದುಕೊಳ್ಳುತ್ತಾರೆ ಎನ್ನುತ್ತಿದ್ದಾರೆ. ಜೊತೆಗೆ ಗಂಡ ಹೆಂಡತಿ ದೂರಾದರೂ ಮಕ್ಕಳಿಗೆ ಇಬ್ಬರ ಪ್ರೀತಿ ಸಿಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಚಿರು ಪುತ್ರಿ ಶ್ರೀಜಾ ಪತಿಯಿಂದ ಮಕ್ಕಳನ್ನು ದೂರ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಈಗ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆಲ್ಲಾ ದಂಪತಿ ಸ್ಪಷ್ಟನೆ ನೀಡಬೇಕಿದೆ. ಇನ್ನು ಶ್ರೀಜಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಜೊತೆಗಿದ್ದ ಕಲ್ಯಾಣ್ ದೇವ್ ಹೆಸರು ಕೈಬಿಟ್ಟಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

  • ಶ್ರೀಜಾ 3ನೇ ಮದುವೆ ವದಂತಿ ನಡುವೆ ದುಬಾರಿ ಬಂಗಲೆಯನ್ನ ಮಗಳಿಗೆ ಉಡುಗೊರೆ ನೀಡಿದ ಮೆಗಾಸ್ಟಾರ್

    ಶ್ರೀಜಾ 3ನೇ ಮದುವೆ ವದಂತಿ ನಡುವೆ ದುಬಾರಿ ಬಂಗಲೆಯನ್ನ ಮಗಳಿಗೆ ಉಡುಗೊರೆ ನೀಡಿದ ಮೆಗಾಸ್ಟಾರ್

    ಟಾಲಿವುಡ್ (Tollywood) ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮುದ್ದಿನ ಮಗಳು ಶ್ರೀಜಾಳ 3ನೇ ಮದುವೆ ವದಂತಿಯ ಮಧ್ಯೆ ದುಬಾರಿ ಉಡುಗೊರೆಯನ್ನ ಮಗಳಿಗೆ ಚಿರಂಜೀವಿ ಗಿಫ್ಟ್ ಮಾಡಿದ್ದಾರೆ.

    ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿಗೆ ಕಿರಿಯ ಮಗಳು(Daughter) ಶ್ರೀಜಾ (Sreeja) ಅಂದರೆ ಅಚ್ಚು ಮೆಚ್ಚು. ಮಗಳ ಜೀವನದ ಬಗ್ಗೆ ಕೊಂಚ ಕಲೆಕೆಡಿಸಿಕೊಂಡಿರುವ ಮೆಗಾಸ್ಟಾರ್ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಲ್ಯಾಣ್ ದೇವ್ (Kalyan Dev) ಜೊತೆಗಿನ ಡಿವೋರ್ಸ್ ಬೆನ್ನಲ್ಲೇ ಶ್ರೀಜಾ 3ನೇ ಮದುವೆ ಸುದ್ದಿ ಭಾರಿ ಸದ್ದು ಮಾಡ್ತಿದೆ. ಹೀಗಿರುವಾಗ ಪುತ್ರಿ ಶ್ರೀಜಾಗೆ ದುಬಾರಿ ಬಂಗಲೆಯನ್ನೇ ಚಿರಂಜೀವಿ ನೀಡಿದ್ದಾರೆ. ಇದನ್ನೂ ಓದಿ:‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ಶ್ರೀಜಾಗೆ ಬರೋಬ್ಬರಿ 35 ಕೋಟಿ ಮೌಲ್ಯದ ಬಂಗಲೆಯನ್ನು ಕೊಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಎ.ಎಲ್.ಎ ಕಾಲೋನಿಯಲ್ಲಿ ಐಷರಾಮಿ ಬಂಗಲೆಯನ್ನು ಖರೀದಿಸಿ, ಮಗಳಿಗೆ ನೀಡಿದ್ದಾರೆ.

    ಇನ್ನೂ ಬಂಗಲೆ ಉಡುಗೊರೆಯಾಗಿ ನೀಡಿದ ಬೆನ್ನಲ್ಲೇ ಶ್ರೀಜಾ ಮದುವೆಗೆ ಸಕಲ ತಯಾರಿ ನಡೆಯುತ್ತಿದ್ಯಾ ಎಂಬ ವಿಚಾರ ಟಿಟೌನ್ ಅಂಗಳದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂರನೇ ಮದುವೆಗೆ ರೆಡಿಯಾದರಾ ಮೆಗಾ ಸ್ಟಾರ್ ಪುತ್ರಿ

    ಮೂರನೇ ಮದುವೆಗೆ ರೆಡಿಯಾದರಾ ಮೆಗಾ ಸ್ಟಾರ್ ಪುತ್ರಿ

    ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ಶ್ರೀಜಾ ಬದುಕಿಗೆ ಮತ್ತೋರ್ವ ವ್ಯಕ್ತಿ ಪ್ರವೇಶ ಮಾಡಿದ್ದಾರಾ? ಹಾಗೆನ್ನುತ್ತಿದೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್. ಈವರೆಗೂ ತಮ್ಮ ಖಾಸಗಿ ಬದುಕಿನ ಬಗ್ಗೆ ಏನೂ ಹೇಳಿಕೊಳ್ಳದೇ ಶ್ರೀಜಾ ಇದೀಗ ಏಕಾಏಕಿಯಾಗಿ ಇನ್ಸ್ಟಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಡಿಯರ್ 2022, ನೀನು ನನ್ನ ಜೀವನಕ್ಕೆ ಹೊಸ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದೀಯಾ. ಅವನ ಭೇಟಿ ನಿಜಕ್ಕೂ ಒಂದು ಅದ್ಭುತ ಪಯಣವನ್ನೇ ಆರಂಭಿಸಲಿದೆ’ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಈ ಮೊದಲು ಶ್ರೀಜಾಗೆ ಸಿರೀಶ್ ಭಾರಧ್ವಜ್ ಜೊತೆ ಮದುವೆ ಆಗಿತ್ತು. ಕೇವಲ 19 ವರ್ಷದ ಶ್ರೀಜಾ ಮನೆಯವರನ್ನು ವಿರೋಧ ಕಟ್ಟಿಕೊಂಡು ಸಿರೀಶ್ ಜೊತೆ ಮದುವೆ ಆಗಿದ್ದರು. ಈ ಪ್ರೀತಿಯ ಮದುವೆ ತುಂಬಾ ದಿನ ಉಳಿಯಲಿಲ್ಲ. ಮತ್ತೆ ತವರು ಮನೆಗೆ ಬಂದ ಶ್ರೀಜಾ, ಗಂಡನು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ 2011ರಲ್ಲಿ ಡಿವೋರ್ಸ್ ಪಡೆದುಕೊಂಡರು. ಅಲ್ಲಿಗೆ ಮೊದಲ ಮದುವೆ ಮುರಿದು ಬಿದ್ದಿತ್ತು. ಇದನ್ನೂ ಓದಿ: ಗಡಿನಾಡ ಕನ್ನಡಿಗ ವಿವಾದದ ಬಗ್ಗೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ

    ಕುಟುಂಬಸ್ಥರು ಸೇರಿ ಶ್ರೀಜಾಗೆ 2016ರಲ್ಲಿ ಉದ್ಯಮಿ ಕಲ್ಯಾಣ ದೇವ್ ಜೊತೆ ಮದುವೆ ಮಾಡಿದರು. ಅದು ಕುಟುಂಬವೇ ಸೇರಿ ಮಾಡಿದಂತಹ ಮದುವೆ ಆಗಿತ್ತು. ಆನಂತರ ಇಬ್ಬರಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ ಶ್ರೀಜಾ ತಮ್ಮ ಪತಿಯ ಹೆಸರನ್ನು ಸೋಷಿಯಲ್ ಮೀಡಿಯಾದಿಂದ ಕಿತ್ತು ಹಾಕಿದರು. ಅವರನ್ನು ಅನ್ ಫಾಲೋ ಮಾಡಿದರು. ಈ ಮಧ್ಯ ಕಲ್ಯಾಣ್ ದೇವ್ ಕೂಡ ತಮ್ಮ ಬದುಕು ಕಠಿಣ ಅನಿಸುತ್ತಿದೆ ಎಂದು ಬರೆದುಕೊಂಡಿದ್ದರು. ಇಬ್ಬರೂ ದೂರವಾಗಿದ್ದಾರಾ ಅಥವಾ ಡಿವೋರ್ಸ್ ಪಡೆದಿದ್ದಾರಾ ಎನ್ನುವ ಕುರಿತು ಮಾಹಿತಿ ಇಲ್ಲ.

    ಇಷ್ಟರಲ್ಲಿ ಶ್ರೀಜಾ ಮತ್ತೆ ಪೋಸ್ಟ್ ಮಾಡಿ ತಮ್ಮ ಜೀವನಕ್ಕೆ ಮತ್ತೋರ್ವ ವ್ಯಕ್ತಿ ಎಂಟ್ರಿ ಪಡೆದಿರುವ ಹಾಗೂ ಅವನೊಂದಿಗೆ ಹೊಸ ಜೀವನ ನಡೆಸುವ ಕುರಿತು ಸುಳಿವು ನೀಡಿದ್ದಾರೆ. ಆದರೆ, ಈ ಬರಹ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸಂಚಲನವನ್ನಂತೂ ಮೂಡಿಸಿದೆ. ಶ್ರೀಜಾ ಹಾಕಿರುವ ಈ ಪೋಸ್ಟ್ ಹಿಂದಿನ ಅರ್ಥವನ್ನು ಕೆದುಕುವ ಪ್ರಯತ್ನವನ್ನು ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪುತ್ರಿಯ ಮೂರನೇ ಮದುವೆ ಸಿದ್ಧತೆಯ ಬೆನ್ನಲ್ಲೇ ಆಸ್ತಿ ಹಂಚಿಕೆಗೆ ಮೆಗಾಸ್ಟಾರ್ ನಿರ್ಧಾರ

    ಪುತ್ರಿಯ ಮೂರನೇ ಮದುವೆ ಸಿದ್ಧತೆಯ ಬೆನ್ನಲ್ಲೇ ಆಸ್ತಿ ಹಂಚಿಕೆಗೆ ಮೆಗಾಸ್ಟಾರ್ ನಿರ್ಧಾರ

    ಟಾಲಿವುಡ್‌ನ ಬಿಗ್ ಸ್ಟಾರ್ ಚಿರಂಜೀವಿ, ಕುಟುಂಬದ ವಿಚಾರ ಈಗ ಗಾಸಿಪ್ ಮಂದಿಗೆ ಹಾಟ್ ಟಾಪಿಕ್ ಆಗಿದೆ. ಪುತ್ರಿ ಶ್ರೀಜಾಳ ಎರಡೆರೆಡು ಮದುವೆ, ಡಿವೋರ್ಸ್‌ನಲ್ಲಿ ಅಂತ್ಯವಾಗಿರುವ ಬೆನ್ನಲ್ಲೇ ಮೆಗಾಸ್ಟಾರ್ ಚಿರಂಜೀವಿ ಮಹತ್ತರದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ.

    ನೇಮು ಫೇಮು ಎಲ್ಲಾ ಇದ್ದರೂ ನಟ ಚಿರಂಜೀವಿ ಕುಟುಂಬದಲ್ಲಿ ಖುಷಿಯಿಲ್ಲ. ಕೆಲ ವರ್ಷಗಳ ಹಿಂದೆ ಪುತ್ರಿ ಶ್ರೀಜಾ ಪ್ರೀತಿಸಿ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದರು. ಬಳಿಕ ಮೊದಲ ಪತಿಗೆ ಡಿವೋರ್ಸ್ ನೀಡಿ, ಮತ್ತೆ ಮನೆಗೆ ಸೇರಿದ್ದರು. ನಂತರ ಮನೆಯವರೇ ಮುಂದೆ ನಿಂತು ಕಲ್ಯಾಣ್ ಜೊತೆ ಎರಡನೇ ಮದುವೆ ಮಾಡಿದ್ದರು. ಆ ಮದುವೆ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಈಗ ಚಿರಂಜೀವಿ ಪುತ್ರಿ ಮೂರನೇ ಮದುವೆಯ ವಿಚಾರದ ಬೆನ್ನಲ್ಲೇ ಮೆಗಾಸ್ಟಾರ್ ಮಹತ್ತರ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಇದನ್ನೂ ಓದಿ:ವೀಡಿಯೋ ಲೀಕ್ ಬಗ್ಗೆ ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ

    ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರನೇ ಮದುವೆ ಮಾಡಲು ನಿರ್ಧರಿಸಿದ್ದಾರೆ. ಮದುವೆಯ ಬಳಿಕವೇ ಆಸ್ತಿಯನ್ನು ಮಕ್ಕಳ ಹೆಸರಿನಲ್ಲಿ ಹಂಚಿಕೆ ಮಾಡಲು ಮೆಗಾಸ್ಟಾರ್‌ ನಿರ್ಧಾರ ಮಾಡಿದ್ದಾರೆ. ತಮ್ಮ ಅಷ್ಟು ಆಸ್ತಿಯನ್ನು ಪಾಲು ಮಾಡಲು ಮೆಗಾಸ್ಟಾರ್ ರೆಡಿಯಾಗಿದ್ದಾರೆ ಎಂಬ ಮಾತು ಟಿಟೌನ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರಲ್ಲ, ನಾಲ್ಕು ಮದುವೆಯಂತೆ!

    ಚಿರಂಜೀವಿ ಪುತ್ರಿ ಶ್ರೀಜಾಗೆ ಮೂರಲ್ಲ, ನಾಲ್ಕು ಮದುವೆಯಂತೆ!

    ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮದುವೆಯದ್ದೇ ಸುದ್ದಿ. ಕಲ್ಯಾಣ್ ದೇವ್ ಜತೆ ಶ್ರೀಜಾ ಡಿವೋರ್ಸ್ ವದಂತಿಯ ಬೆನ್ನಲ್ಲೇ ಶಾಕಿಂಗ್ ವಿಚಾರವೊಂದು ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ ಮೂರಲ್ಲ, ನಾಲ್ಕು ಮದುವೆ ಆಗುತ್ತಾರೆ ಅಂತಾ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಈಗಾಗಲೇ ಎರಡು ಮದುವೆ ಆಗಿದೆ. ಮೊದಲು ಸಿರೀಶ್ ಜತೆ ಮದುವೆಯಾಗಿದ್ದರು. ಕಾರಣಾಂತರಗಳಿಂದ ಈ ಮದುವೆ ಮುರಿದು ಬಿತ್ತು. ಬಳಿಕ ಮನೆಯಲ್ಲಿ ನಿಶ್ಚಿಯಿಸಿದ ವರ ಕಲ್ಯಾಣ್ ದೇವ್ ಅವರನ್ನ ಶ್ರೀಜಾ ಮದುವೆಯಾಗಿದ್ದರು. ಇದೀಗ ಈ ಸಂಬಂಧವೂ ಕೂಡ ಡಿವೋರ್ಸ್ ಆಗಿದೆ ಎಂಬ ವದಂತಿಯ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಶ್ರೀಜಾ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ:ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?

    ಕಲ್ಯಾಣ್ ದೇವ್‌ಗೆ ಡಿವೋರ್ಸ್ ನೀಡಿದ್ದಾರೆ ಎಂಬ ವದಂತಿಯಿದೆ. ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮೂರಲ್ಲ, ಶ್ರೀಜಾಗೆ ನಾಲ್ಕು ಮದುವೆಯಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಶ್ರೀಜಾ ಜಾತಕದ ಪ್ರಕಾರ ಈಕೆಗೆ ನಾಲ್ಕು ಮದುವೆಯಾಗುತ್ತದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್‌ಗೂ ನಾಲ್ಕು ಮದುವೆಯಾಗುತ್ತದೆ ಎಂದು ವೇಣು ಸ್ವಾಮಿ ಹೇಳಿಕೆ ನೀಡಿದ್ದರು. ಅಷ್ಟಕ್ಕೂ ಈ ಸುದ್ದಿ ನಿಜವಾಗುತ್ತ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮೂರನೇ ಮದುವೆಗೆ ರೆಡಿಯಾದ ಮೆಗಾಸ್ಟಾರ್ ಚಿರಂಜೀವಿ ಪುತ್ರಿ!

    ಮೂರನೇ ಮದುವೆಗೆ ರೆಡಿಯಾದ ಮೆಗಾಸ್ಟಾರ್ ಚಿರಂಜೀವಿ ಪುತ್ರಿ!

    ಮೆಗಾಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಟಾಲಿವುಡ್‌ನ ಗಲ್ಲಿಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಲ್ಯಾಣ್ ಜತೆಗಿನ ಶ್ರೀಜಾ ವಿಚ್ಛೇದನದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಈ ಬೆನ್ನಲ್ಲೇ ಮೂರನೇ ಮದುವೆಗೆ ಚಿರಂಜೀವಿ ಪುತ್ರಿ ರೆಡಿಯಾಗಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಚಿರಂಜೀವಿ ಪುತ್ರಿ ಶ್ರೀಜಾ ಈ ಹಿಂದೆ ಶ್ರೀಜಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೆಸರು ಬದಲಿಸಿಕೊಂಡಿದ್ದರು. ತಮ್ಮ ಹೆಸರಿನಿಂದ ಪತಿಯ ಹೆಸರನ್ನು ತೆಗೆದು ಹಾಕಿದ್ದರು. ಆಗಲೇ ಒಂದಷ್ಟು ಊಹಾ ಪೋಹಗಳು ಹಬ್ಬಿದ್ದವು. ಆದರೆ ಇವರೆಗೂ ಶ್ರೀಜಾ ಮತ್ತು ಕಲ್ಯಾಣ್ ಜತೆಗಿನ ಡಿವೋರ್ಸ್ ಕುರಿತು ಯಾವುದೇ ಅಧಿಕೃತ ಮಾಹಿತಿ ಮೆಗಾಸ್ಟಾರ್ ಕುಟುಂಬ ಕೊಟ್ಟಿಲ್ಲ. ಇದನ್ನೂ ಓದಿ:ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ

    ಶ್ರೀಜಾ 2007ರಲ್ಲಿ ಮನೆಯವರ ವಿರುದ್ಧ ನಿಂತು ಸಿರೀಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಾರಣಾಂತರಗಳಿಂದ ಅವರಿಂದ ಡಿವೋರ್ಸ್ ಪಡೆದು, 2016ರಲ್ಲಿ ತಂದೆ ನೋಡಿರುವ ಹುಡುಗ ಕಲ್ಯಾಣ್ ದೇವ್ ಅವರನ್ನು ಮದುವೆಯಾದರು. ಈಗ ಈ ಜೋಡಿಯ ಕುರಿತು ವಿಚ್ಛೇದನದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಬೆನ್ನಲ್ಲೇ ಮೆಗಾಸ್ಟಾರ್ ಪುತ್ರಿ ಮೂರನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಮೆಗಾಸ್ಟಾರ್ ಕುಟುಂಬದ ಪ್ರತಿಕ್ರಿಯೆ ಸಿಗುವವರೆಗೂ ಕಾದುನೋಡಬೇಕಿದೆ.

    Live Tv

  • ಇನ್‍ಸ್ಟಾ ಖಾತೆಯಿಂದ ಪತಿಯ ಹೆಸರು ಕೈಬಿಟ್ಟ ನಟ ಚಿರಂಜೀವಿ ಪುತ್ರಿ ಶ್ರೀಜಾ

    ಇನ್‍ಸ್ಟಾ ಖಾತೆಯಿಂದ ಪತಿಯ ಹೆಸರು ಕೈಬಿಟ್ಟ ನಟ ಚಿರಂಜೀವಿ ಪುತ್ರಿ ಶ್ರೀಜಾ

    ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ, ತಮ್ಮ ಪತಿಯ ಹೆಸರನ್ನು ಇನ್‍ಸ್ಟಾಗ್ರಾಮ್ ಖಾತೆಯಿಂದ ಕೈಬಿಟ್ಟಿದ್ದಾರೆ. ಇವರ ನಡೆ ಸಾಕಷ್ಟು ಅನುಮಾನ ಮೂಡಿಸಿದೆ.

    ಶ್ರೀಜಾ ಕಲ್ಯಾಣ್ ಎಂದು ಇದ್ದ ಹೆಸರನ್ನು ಶ್ರೀಜಾ ಕೊನಿಡೇಲಾ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬದಲಿಸಿಕೊಂಡಿದ್ದು, ನಟ ಕಲ್ಯಾಣ್ ದೇವ್ ಅವರನ್ನು ಅನ್‍ಫಾಲೋ ಮಾಡಿದ್ದಾರೆ. ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂದು ಟಾಲಿವುಡ್ ಅಂಗಳದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

     

    View this post on Instagram

     

    A post shared by Kalyaan Dhev (@kalyaan_dhev)

    ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಶ್ರೀಜಾ, ಸಿರೀಶ್ ಎಂಬವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಪಾಲಕರ ಒಪ್ಪಿಗೆ ಇಲ್ಲದೆ ಶ್ರೀಜಾ ಮದುವೆಯಾಗಿದ್ದರು. ಒಟ್ಟಿನಲ್ಲಿ ಸಿರೀಶ್‍ರನ್ನು ಚಿರಂಜೀವಿ ಕುಟುಂಬ ತುಂಬ ತಿರಸ್ಕಾರದಿಂದ ನೋಡಿತ್ತು. 2008ರಲ್ಲಿ ಶ್ರೀಜಾ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಆಸ್ಪತ್ರೆಗೆ ಚಿರಂಜೀವಿ ಪತ್ನಿ, ರಾಮ್ ಚರಣ್ ತೇಜ ಮಾತ್ರ ಭೇಟಿ ನೀಡಿದ್ದರು. ಒಟ್ಟಿನಲ್ಲಿ ಶ್ರೀಜಾ, ಸಿರೀಶ್ ಬಾಳಿನಲ್ಲಿ ಏನಾಯ್ತೋ ಏನೋ, ಅವರಿಬ್ಬರೂ ದೂರ ದೂರವಾದರು. 2011ರಲ್ಲಿ ದೌರ್ಜನ್ಯ ಕೇಸ್ ದಾಖಲಿಸುವುದರ ಜೊತೆಗೆ ವಿಚ್ಛೇದನ ಕೂಡ ಪಡೆದುಕೊಂಡಿದ್ದರು.

     

    View this post on Instagram

     

    A post shared by Sreeja (@sreejakonidela)

    ಕುಟುಂಬದ ಒಪ್ಪಿಗೆಯ ಮೇರೆಗೆ 2016ರಲ್ಲಿ ಕಲ್ಯಾಣ್ ಅವರನ್ನು ಶ್ರೀಜಾ ಎರಡನೇ ಬಾರಿಗೆ ಮದುವೆಯಾದರು. 2018ರಲ್ಲಿ ಈ ಜೋಡಿಗೆ ಮಗಳು ಹುಟ್ಟಿದ್ದಳು. ಕಲ್ಯಾಣ್ ಜೊತೆಗಿನ ಖುಷಿಯ ಕ್ಷಣಗಳನ್ನು ಶ್ರೀಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಶ್ರೀಜಾ ಪತಿಯ ಹೆಸರನ್ನು ಸಮಾಜಿಕ ಜಾಲತಾಣಗಳ ಖಾತೆಯಿಂದ ಕೈ ಬಿಟ್ಟಿರುವುದು ಅನುಮಾನ ಮೂಡಿಸಿದೆ. ಈ ಅನುಮಾನಕ್ಕೆ ಶ್ರೀಜಾ ದಂಪತಿ ಸ್ಪಷ್ಟನೆ ನೀಡಬೇಕಿದೆ.

     

    View this post on Instagram

     

    A post shared by Sreeja (@sreejakonidela)

    ನಟಿ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ದರೋ ಆಗಲೇ, ಏನೋ ಸಮಸ್ಯೆಯಾಗಿದೆ ಅಂತ ಅನುಮಾನ ಬಂದಿತ್ತು, ಅದರಂತೆಯೇ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಮಾಡುತ್ತಾರಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.