Tag: Special Pooja

  • ಇಂದು ಚಂದ್ರ ಗ್ರಹಣ – ಶೃಂಗೇರಿಯಲ್ಲಿ ವಿಶೇಷ ಪೂಜೆ, ಹೊರನಾಡಿನಲ್ಲಿ ನಿರಂತರ ಜಲಾಭಿಷೇಕ

    ಇಂದು ಚಂದ್ರ ಗ್ರಹಣ – ಶೃಂಗೇರಿಯಲ್ಲಿ ವಿಶೇಷ ಪೂಜೆ, ಹೊರನಾಡಿನಲ್ಲಿ ನಿರಂತರ ಜಲಾಭಿಷೇಕ

    ಚಿಕ್ಕಮಗಳೂರು: ಇಂದು ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಶೃಂಗೇರಿ ಶಾರದಾಂಭೆ ಹಾಗೂ ಹೊರನಾಡು ಅನ್ನಪೂಣೇಶ್ವರಿ ದೇವಾಲಯದ ಪೂಜಾ ವಿಧಿ-ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

    ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಎಂದಿನಂತೆ ಪೂಜಾ-ಕೈಂಕರ್ಯಗಳು ನಡೆಯಲಿದ್ದು, ಬರುವ ಭಕ್ತರಿಗೆ ದೇವಿಯ ದರ್ಶನಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಇಂದು ಮಧ್ಯಾಹ್ನ 2 ಗಂಟೆಯ ನಂತರ ಊಟದ ವ್ಯವಸ್ಥೆ ಇರುವುದಿಲ್ಲ. ಚಂದ್ರ ಗ್ರಹಣದ ಆರಂಭದ ಕ್ಷಣದಿಂದ ಗ್ರಹಣ ಸಂಪೂರ್ಣವಾಗಿ ಬಿಡುವ ಕ್ಷಣದವರೆಗೂ ಹೊರನಾಡಿನಲ್ಲಿ ಜಗನ್ಮಾತೆ ಅನ್ನಪೂರ್ಣೇಶ್ವರಿ ದೇವಿಗೆ ನಿರಂತರ ಜಲ ಅಭಿಷೇಕ ನಡೆಯಲಿದ್ದು, ಗ್ರಹಣ ಮೋಕ್ಷಗೊಂಡ ಬಳಿಕ ವಿಶೇಷ ಪೂಜೆ ನಡೆಯಲಿದೆ.

    ಶೃಂಗೇರಿಯಲ್ಲೂ ಶಕ್ತಿದೇವತೆಯ ದರ್ಶನದ ಅವಕಾಶಕ್ಕೆ ಯಾವುದೇ ಅಡಚಣೆ ಇಲ್ಲ. ಎಂದಿನಂತೆ ಎಲ್ಲಾ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 2.30ರ ನಂತರ ಊಟದ ವ್ಯವಸ್ಥೆ ಇರುವುದಿಲ್ಲ. ಗ್ರಹಣದ ಆರಂಭದ ಕಾಲದಲ್ಲಿ ಶೃಂಗೇರಿ ಶಾರದಾಂಭೆಗೆ ವಿಶೇಷ ಪೂಜೆ ನಡೆಯಲಿದ್ದು, ಗ್ರಹಣ ಸಂಪೂರ್ಣ ಮುಕ್ತಾಯಗೊಂಡ ಬಳಿಕವೂ ವಿಶೇಷ ಪೂಜೆ ನಡೆಯಲಿದೆ. ಬರುವ ಭಕ್ತರಿಗೆ ಪೂಜೆ ಮಾಡಿಸುವುದಕ್ಕಾಗಲಿ, ದೇವಿಯ ದರ್ಶನ ಮಾಡುವುದಕ್ಕಾಗಲಿ ಯಾವುದೇ ತೊಂದರೆ ಇಲ್ಲ ಎಂದು ಎರಡೂ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

    ಇಂದು ರಾತ್ರಿ 11.44ರಿಂದ ನಸುಕಿನ ಜಾವ 3.49ರರೆಗೂ ಚಂದ್ರಗ್ರಹಣ ಇರಲಿದ್ದು, ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದೇ ಬಣ್ಣಿಸಲಾಗಿದೆ. ಈ ಗ್ರಹಣದ ಅವಧಿಯಲ್ಲಿ ಚಂದ್ರಬಿಂಬ ಕೆಂಬಣ್ಣಕ್ಕೆ ತಿರುಗಲಿದೆ. ಹೀಗಾಗಿ ಇದನ್ನ ರಕ್ತಚಂದ್ರಗ್ರಹಣ ಎಂದು ಬಿಂಬಿಸಲಾಗ್ತಿದೆ. ಗ್ರಹಣದ ವೇಳೆ ಮಂಗಳ ಗ್ರಹ ಭೂಮಿಗೆ ನಿಕಟವಾಗಲಿದ್ದು, ಬುಧ ಗ್ರಹ ತನ್ನ ಕಕ್ಷೆಯಿಂದ ದೂರ ಸರಿಯಲಿದೆ. ಇದು ಖಗೋಳದ ಈ ಸಜಹ ಪ್ರಕ್ರಿಯೆ ಅಂತ ಗೊತ್ತಿದ್ದರೂ ಜನರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಕೆಡುಕುಂಟಾಗುತ್ತೆ ಅಂತ ಭಯಗೊಂಡಿದ್ದಾರೆ.

  • ರಾಮ ವಿಠಲ ದೇವರಿಗೆ ಪೇಜಾವರಶ್ರೀ ನೃತ್ಯ ಸೇವೆ

    ರಾಮ ವಿಠಲ ದೇವರಿಗೆ ಪೇಜಾವರಶ್ರೀ ನೃತ್ಯ ಸೇವೆ

    ಉಡುಪಿ: ರಾಮ ವಿಠಲ ದೇವರ ಸೇವೆ ಮಾಡುತ್ತಾ ಪೇಜಾವರ ಹಿರಿಯ ಶ್ರೀ ವಿಶ್ವೇಶತೀರ್ಥರು ಹರಿವಾಣ ನೃತ್ಯ ಸೇವೆ ಮಾಡಿದ್ದಾರೆ.

    ತಮ್ಮ ಪಟ್ಟದ ದೇವರು ಶ್ರೀರಾಮ ವಿಠಲನ ಮುಂದೆ ಪೇಜಾವರ ಶ್ರೀಗಳು ನರ್ತನ ಸೇವೆ ಮಾಡಿದ್ದಾರೆ. ನಿರ್ಜಲೋಪವಾಸ ಮಾಡಿರುವ ಪೇಜಾವರ ಸ್ವಾಮೀಜಿ ತಟ್ಟೆಯನ್ನು ತಲೆಯ ಮೇಲೆ ಹರಿವಾಣ ಇಟ್ಟು ಸೇವೆ ಸಲ್ಲಿಸಿದ್ದಾರೆ. ದಿನಪೂರ್ತಿ ನೀರು ಕುಡಿಯದೆ ಉಪವಾಸವಿದ್ದ ಪೇಜಾವರಶ್ರೀ, ತನ್ನ 88ನೇ ವಯಸ್ಸಿನಲ್ಲಿ ಈ ಸೇವೆ ಮಾಡುತ್ತಿರುವುದು ವಿಶೇಷ.

    ರಾತ್ರಿ ಪೂಜೆಯ ಬಳಿಕ ಮಹರಿವಾಣ ತಲೆಯಲ್ಲಿಟ್ಟು ದೇವರ ಪ್ರಸಾದವನ್ನು ಹರಿವಾಣದಲ್ಲಿರಿಸಿ ಪೂಜೆ ಮಾಡುವ ಸಂಪ್ರದಾಯವನ್ನು ಹಿರಿಯ ಪೇಜಾವರಶ್ರೀ ಪಾಲಿಸಿಕೊಂಡು ಬರುತ್ತಿದ್ದಾರೆ. ಚೆನ್ನೈನ ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ವಿಶೇಷ ಸೇವೆ ನೀಡಿದ್ದು, ಭಕ್ತರಲ್ಲಿ, ಮಠದ ವಟುಗಳಲ್ಲಿ ಬಹಳ ಆಶ್ಚರ್ಯ ಮೂಡಿಸಿದೆ.

    https://www.youtube.com/watch?v=ndEgP9v-niA

  • ಕುಮಾರಸ್ವಾಮಿ ಸಿಎಂ ಆದ್ರೆ ದೀರ್ಘ ದಂಡ ನಮಸ್ಕಾರ- ಹರಕೆ ತೀರಿಸಿದ ಎಚ್‍ಡಿಕೆ ಅಭಿಮಾನಿ

    ಕುಮಾರಸ್ವಾಮಿ ಸಿಎಂ ಆದ್ರೆ ದೀರ್ಘ ದಂಡ ನಮಸ್ಕಾರ- ಹರಕೆ ತೀರಿಸಿದ ಎಚ್‍ಡಿಕೆ ಅಭಿಮಾನಿ

    ಚಿಕ್ಕೋಡಿ: ರಾಜ್ಯದ 25 ನೇ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ನಾಯಕರು ಕರಾಳ ದಿನಾಚರಣೆಗೆ ಮುಂದಾಗಿದ್ದರೆ, ಇತ್ತ ಜೆಡಿಎಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.

    ಒಂದೆಡೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಹರಕೆ ತೀರಿಸಲು ಟೆಂಪಲ್ ರನ್ ನಡೆಸಿದ್ದಾರೆ. ಇತ್ತ ಎಚ್‍ಡಿಕೆ ಅಭಿಮಾನಿಗಳು ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ದೇವರಿಗೆ ಹೊತ್ತಿದ್ದ ಹರಕೆ ತೀರಿಸುತ್ತಿದ್ದಾರೆ.

    ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಚಿಂಚಲಿ ಮಾಯಕ್ಕಾ ದೇವಿಗೆ ದೀರ್ಘ ದಂಡ ಪ್ರದಕ್ಷಿಣೆ ಹಾಕುವುದಾಗಿ ಹರಕೆ ಹೊತ್ತುಕೊಂಡಿದ್ದ ಪ್ರಭಾಕರ್ ಗಗ್ಗರಿ ಇಂದು ಆ ಹರಕೆಯನ್ನು ತೀರಿಸಿದರು.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಶಕ್ತಿ ದೇವತೆ ಚಿಂಚಲಿ ಮಾಯಕ್ಕಾ ದೇವಿಗೆ ಕಳೆದ ಕೆಲ ತಿಂಗಳುಗಳ ಹಿಂದೆ ಭೇಟಿ ನೀಡಿ, ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳಾದ್ರೆ ತಾನು ಚಿಂಚಲಿ ಮಾಯಕ್ಕಾ ದೇವಿಗೆ ದೀರ್ಘ ದಂಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಇಂದು ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಹಿನ್ನೆಲೆಯಲ್ಲಿ ಪ್ರಭಾಕರ್ ಗಗ್ಗರಿ ತಮ್ಮ ಹರಕೆಯನ್ನು ತೀರಿಸಿದ್ದಾರೆ.

    ಚಿಂಚಲಿ ಕ್ಷೇತ್ರದ ಹಾಲಹಳ್ಳದಿಂದ ಸುಮಾರು 3 ಕಿ.ಮೀ ದೂರವಿರುವ ಮಾಯಕ್ಕಾ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕಿ ಪ್ರಭಾಕರ್ ಗಗ್ಗರಿ ತಮ್ಮ ಹರಕೆ ತೀರಿಸಿದ್ದಾರೆ.

  • ಆತ್ಮಹತ್ಯೆಗಳಿಗೆ ಹೆದರಿ ಕ್ವಾಟರ್ಸ್ ನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಹೋಮ!

    ಆತ್ಮಹತ್ಯೆಗಳಿಗೆ ಹೆದರಿ ಕ್ವಾಟರ್ಸ್ ನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಹೋಮ!

    ಚಾಮರಾಜನಗರ: ಪೊಲೀಸ್ ಕ್ವಾಟರ್ಸ್ ನಲ್ಲಿ ಆತ್ಮಹತ್ಯೆಗಳನ್ನು ತಡೆಗಟ್ಟಿ ಶಾಂತಿ ನೆಲೆಸಲು ಪೊಲೀಸ್ ಸಿಬ್ಬಂದಿ ಕುಟುಂಬ ಸದಸ್ಯರು ಈಗ ಹೋಮ ಹವನದ ಮೊರೆ ಹೋಗಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಪೊಲೀಸ್ ಕ್ವಾಟ್ರಸ್ ನಲ್ಲಿ ಹೆಚ್ಚುತ್ತಿದ್ದ ಆತ್ಮಹತ್ಯೆಗಳನ್ನು ತಡೆಗಟ್ಟಲು ಹೋಮ ಹವನವನ್ನು ಮಾಡಿಸಲಾಗಿದೆ.

    ಕೆಲ ದಿನಗಳ ಹಿಂದೆ ಅಷ್ಟೆ ಈ ಕ್ವಾಟರ್ಸ್ ನಲ್ಲಿ ಇಬ್ಬರು ಪೊಲೀಸ್ ಪೇದೆಗಳು ಆತ್ಮಹತ್ಯೆಗೆ ಶರಣಾಗಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಈ ರೀತಿಯ ಪ್ರಕರಣಗಳು ನಡೆಯದೇ ಇರಲು ಹೋಮ ಮಾಡಿಸಿದ್ದಾರೆ.

    ಈ ಕ್ವಾಟರ್ಸ್ ನ್ನು ಉದ್ಘಾಟಿಸಿದ ಸಂಧರ್ಭದಲ್ಲಿ ಇಲ್ಲಿ ಯಾವುದೇ ರೀತಿಯ ಹೋಮವನ್ನು ಮಾಡಿಸಿಲ್ಲದ ಕಾರಣ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಹೋಮ ಮಾಡಿಸಲಾಗಿದೆ ಎಂದು ಇಲ್ಲಿ ನೆಲೆಸಿರುವ ಜನರ ಹೇಳಿದ್ದಾರೆ.

    ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಸಿಬ್ಬಂದಿ ಕುಟುಂಬ ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದವು. ಹೀಗಾಗಿ ಇಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡಿಸಿ ಕ್ವಾಟರ್ಸ್ ಗೆ ಶಾಂತಿ ಮಾಡಿಸಲಾಯಿತು. ಹಾಗೆ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ಕ್ವಾಟರ್ಸ್ ನಲ್ಲಿ ಮುಂದೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ದೇವರಿಗೆಲ್ಲ ಪ್ರಾರ್ಥನೆ ಮಾಡಲಾಯಿತು.