ಇತ್ತೀಚೆಗೆ ಸ್ಪೇಸ್ಎಕ್ಸ್ನ ಕೆಲ ಉದ್ಯೋಗಿಗಳು ಮಸ್ಕ್ ಅವರ ನಡವಳಿಕೆ ಆಗಾಗ ಗೊಂದಲ ಹಾಗೂ ಮುಜುಗರಕ್ಕೀಡು ಮಾಡುತ್ತದೆ ಎಂದು ತೆರೆದ ಪತ್ರದಲ್ಲಿ ತಿಳಿಸಿದ್ದಾರೆ. ಎಲೋನ್ ಮಸ್ಕ್ ಕಳುಹಿಸುವ ಪ್ರತಿಯೊಂದು ಟ್ವೀಟ್ ಕೂಡಾ ಸಾರ್ವಜನಿಕ ಹೇಳಿಕೆಯಾಗಿದೆ. ಇದು ನಮ್ಮ ಕೆಲಸ, ಧ್ಯೇಯ ಅಥವಾ ಮೌಲ್ಯಗಳನ್ನು ಬಿಂಬಿಸುವುದಿಲ್ಲ ಎಂಬುದನ್ನು ನಮ್ಮ ತಂಡಕ್ಕೆ ಸ್ಪಷ್ಟಪಡಿಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಟ್ಟು 634 ಕೇಸ್, 2 ಸಾವು – ಸಕ್ರಿಯ ಪ್ರಕರಣಗಳ ಸಂಖ್ಯೆ 4,500ಕ್ಕೆ ಏರಿಕೆ
ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಸ್ಪೇಸ್ ಎಕ್ಸ್ ಅಧ್ಯಕ್ಷ ಗ್ವಿನ್ನೆ ಶಾಟ್ವೆಲ್ ಈ ಪತ್ರವನ್ನು ರಚಿಸಿರುವ ಹಲವು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಈ ಬಗ್ಗೆ ಸ್ಪೇಸ್ಎಕ್ಸ್ ಅಧಿಕೃತ ವಿವರವನ್ನು ನೀಡಿಲ್ಲ. ಯಾರೆಲ್ಲಾ ಹಾಗೂ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬುದನ್ನೂ ಬಹಿರಂಗ ಪಡಿಸಿಲ್ಲ.
ಬೀಜಿಂಗ್ / ನವದೆಹಲಿ: ಟ್ವಿಟ್ಟರ್ ಖರೀದಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪೆನಿಯು ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಕೈಬಿಡುವ ಯೋಚನೆ ಮಾಡಿದೆ.
ಈಗಾಗಲೇ ಮಸ್ಕ್ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ಅವರನ್ನು ಭೇಟಿಯಾಗಿದ್ದಾರೆ. ಇದು ಉತ್ಪಾದನಾ ಘಟಕಗಳಿಗೆ ಜಾಗದ ಹುಡುಕಾಟ ಎಂದುಕೊಳ್ಳಲಾಗಿದೆ. ಇಂಡೋನೇಷ್ಯಾ ಬ್ಯಾಟರಿಗಳಿಗೆ ಪ್ರಮುಖ ಲೋಹವಾದ ನಿಕಲ್ನ ಪ್ರಮುಖ ಉತ್ಪಾದಕ ದೇಶವೂ ಆಗಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ನಡೆದರೆ ಟೆಸ್ಲಾ ಇಂಡೋನೇಷ್ಯಾದಲ್ಲಿ ಬೇರೂರಲಿದೆ.
ಸಿಲಿಕಾನ್ ಸಿಟಿಗೆ ಕೈತಪ್ಪಿದ ಅವಕಾಶ:
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಟೆಸ್ಲಾ ಬೆಂಗಳೂರಿನಲ್ಲಿ ಕಂಪನಿಯನ್ನು ನೊಂದಾಯಿಸಿ, ಮಳಿಗೆ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿತ್ತು. ಒಂದಿಷ್ಟು ಅಧಿಕಾರಿಗಳನ್ನೂ ನೇಮಿಸಿದ್ದ ಕಂಪನಿ, ಆಮದು ಸುಂಕ ಕಡಿತಕ್ಕಾಗಿ ಸರ್ಕಾರದ ಮೇಲೆ ಪದೇ-ಪದೇ ಒತ್ತಡ ಹೇರುತ್ತಲೇ ಇತ್ತು. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋರೂಮ್ ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ರಿಯಲ್ ಎಸ್ಟೇಟ್ ಆಯ್ಕೆಗಳಿಗಾಗಿ ಟೆಸ್ಲಾ ಹಲವು ತಿಂಗಳ ಕಾಲ ಹುಡುಕಾಟ ನಡೆಸಿತ್ತು.
ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಂಡ ಎಲೆಕ್ಟ್ರಿಕ್ ವಾಹನಗಳನ್ನು (ಇವಿಗಳು) ಕಡಿಮೆ ಸುಂಕದಲ್ಲಿ ದೇಶದಲ್ಲಿ ಮಾರಾಟ ಮಾಡುವ ಮೂಲಕ ಬೇಡಿಕೆಯ ವ್ಯಾಪ್ತಿ-ವಿಸ್ತಾರವನ್ನು ಪರೀಕ್ಷಿಸಲು ಯತ್ನಿಸಿತ್ತು. ಇದಕ್ಕಾಗಿ ಆಮದು ಸುಂಕ ಕಡಿತ ಮಾಡುವಂತೆ ಸರ್ಕಾರದ ಜೊತೆ ಸತತ 1 ವರ್ಷಗಳ ಕಾಲ ಮಾತುಕತೆಯನ್ನೂ ನಡೆಸಿತ್ತು. ಆದರೆ, ಮೇಕ್ ಇನ್ ಇಂಡಿಯಾ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಾರತ ಸರ್ಕಾರ ಶೇ.100 ರಷ್ಟು ಸುಂಕ ಕಡಿಮೆ ಮಾಡುವ ಬದಲು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವಂತೆ ಕಂಪೆನಿ ಮೇಲೆ ಒತ್ತಡ ಹೇರಿತ್ತು. ಈ ಕಾರಣಗಳಿಂದಾಗಿ ಟೆಸ್ಲಾ ಭಾರತದಿಂದಲೇ ದೂರ ಉಳಿಯಲು ನಿರ್ಧರಿಸಿದೆ.
ಇದೀಗ ಮಳಿಗೆಗೆ ಸ್ಥಳ ಹುಟುಕಾಟವನ್ನು ನಿಲ್ಲಿಸಿದ್ದು, ಭಾರತದಲ್ಲಿದ್ದ ಆ ತಂಡದ ಒಂದಿಷ್ಟು ಅಧಿಕಾರಿಗಳೂ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಚಿಕ್ಕಮಗಳೂರು: ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನ ಶಕುಂತಲಾ ಎಂಬ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದ್ದು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಆದರೆ, ಈ ಸಾಧನೆಗೆ ಕಾರಣವಾಗಿರುವುದೂ ಒಬ್ಬ ಮುಸ್ಲಿಂ ಯುವಕ.
ಹೌದು. ಭಾರತ ದೇಶಾದ್ಯಂತ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಬಿತ್ತುವ ಘಟನೆಗಳು ನಡೆಯುತ್ತಿರುವ ನಡುವೆ ಮುಸ್ಲಿಂ ಯುವಕನ ಈ ಸಾಧನೆ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಇದನ್ನೂ ಓದಿ: ವಿಎಲ್ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ
ಆಲ್ದೂರಿನ ಶಂಕುತಲಾ ಅಂದರೆ ಈ ಉಪಗ್ರಹದ ಕೇಂದ್ರ ಬಿಂದುವೇ ಆಲ್ದೂರು ಗ್ರಾಮದ ಯುವಕ ಅವೇಜ್ ಅಹಮ್ಮದ್. ಮೂಲತಃ ಚಿಕ್ಕಮಗಳೂರಿನ ಆಲ್ದೂರಿನವರೇ ಆದ ಅವೇಜ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ತಂದೆ ನದೀಪ್ ಅಹಮದ್ ತಮ್ಮದೇ ಮೆಡಿಕಲ್ ಸ್ಟೋರ್ ಇಟ್ಟುಕೊಂಡು ಕುಟುಂಬ ನಡೆಸುತ್ತಿದ್ದಾರೆ.
ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆಲ್ದೂರಿನಲ್ಲೇ ಓದಿದ ಅವೇಜ್, ಚಿಕ್ಕಂದಿನಿಂದಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸಿನೊಂದಿಗೇ ಮುನ್ನಡೆಯುತ್ತಿದ್ದರು. ಇಂದು ತನ್ನ ಬಯಕೆಯಂತೆ 24ನೇ ವಯಸ್ಸಿಗೇ ವಿಜ್ಞಾನಿಯಾಗಿ ಜಗತ್ತೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾನೆ. ಆನಂತರ ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿ ಇಂದು ಏರೋಸ್ಪೇಸ್ ಪಿಕ್ಸೆಲ್ ಹೆಸರಿನಲ್ಲಿ ಉಪಗ್ರಹ ತಯಾರಿಕಾ ಸ್ವಂತ ಕಂಪನಿ ಕೂಡ ಆರಂಭಿಸಿದ್ದಾರೆ. ತನ್ನ 24ನೇ ವಯಸ್ಸಿಗೆ ಕಡಲ ದಾಟಿ ಅಮೆರಿಕಾದಲ್ಲಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಇದನ್ನೂ ಓದಿ: 22 ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದ ಭಾರತ
ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಶಕುಂತಲಾ ಎಂಬ ಉಪಗ್ರಹವನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾರೆ. ಅವೇಜ್ ಅವರ ಈ ಉಪಗ್ರಹವು ಬೇರೆಲ್ಲಾ ಉಪಗ್ರಹಗಳಿಗಿಣದ ಶೇ.50ಕ್ಕೂ ಹೆಚ್ಚು ಡೇಟಾವನ್ನು ಬಿಡುಗಡೆ ಮಾಡುತ್ತದೆ. ಭೂಮಿಯ ಚಲನವಲನದ ಫೊಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.
We have liftoff! Pixxel just launched its first satellite to space 🚀 https://t.co/bRB06TTMXL
ಈ ಮೊದಲು ರಷ್ಯಾದಿಂದ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದ ಅವೇಜ್ ಅಹಮ್ಮದ್ ತನ್ನ ಕನಸಿನ ಯೋಜನೆಯನ್ನು ಪ್ರಧಾನಿ ಮುಂದೆ ಹೇಳಿಕೊಂಡಿದ್ದರು. ಇವರ ಮಾತನ್ನ ಆಲಿಸಿದ ಪ್ರಧಾನಿ, ಮೊದಲ ಉಪಗ್ರಹವನ್ನ ನಮ್ಮ ದೇಶದ ಬಾಹ್ಯಾಕಾಶ ಉಡಾವಣೆ ಕೇಂದ್ರವಾಗಿರುವ ಇಸ್ರೋದಿಂದಲೇ ಹಾರಿಸುವಂತೆ ಸಲಹೆ ನೀಡಿದ್ದರು. ಅದರಂತೆಯೇ ಇಸ್ರೋದಿಂದಲೇ ಬಾಹ್ಯಾಕಾಶ ಸೇರಲು ಮೊದಲ ಉಪಗ್ರಹ ರೆಡಿಯಾಗಿತ್ತು. ಆದರೆ ಸಮಯ ಮಾತ್ರ ಇನ್ನೂ ನಿಗದಿಯಾಗಿಲ್ಲ. ಈ ಮಧ್ಯೆ ಅವೇಜ್ ಅಹ್ಮದ್ ಅವರು 2ನೇ ಉಪಗ್ರಹವನ್ನ ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಎಡಿಟ್ ಬಟನ್ ಬೇಕಾ? – ಸಮೀಕ್ಷೆ ಆರಂಭಿಸಿದ ಮಸ್ಕ್
24ನೇ ವಯಸ್ಸಿಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ ಯುವಕನಿಗೆ ಎಲ್ಲೆಡೆ ಪ್ರಶಂಸೆಯ ಮಹಪೂರವೇ ಹರಿದುಬರುತ್ತಿದೆ. ಅವೇಜ್ ಓದಿದ ಶಾಲೆಯ ಶಿಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಭವಿಷ್ಯಕ್ಕೆ ಶುಭ ಕೋರಿದ್ದಾರೆ.
ವಾಷಿಂಗ್ಟನ್: ಸ್ಟಾರ್ಲಿಂಕ್ ಕಂಪನಿ ಅಗ್ಗದ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಉಡಾಯಿಸಿದ್ದ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ ಎಂದು ಕಂಪನಿ ತಿಳಿಸಿದೆ.
ವಿಶ್ವದ ಶ್ರೀಮಂತ ಎಲೋನ್ ಮಸ್ಕ್ನ ಸ್ಪೇಸ್ಎಕ್ಸ್ ಸ್ಟಾರ್ಲಿಂಕ್ನ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ. ಇವುಗಳನ್ನು ಕಳೆದ ವಾರ ಉಡಾವಣೆ ಮಾಡಲಾಗಿತ್ತು ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಶುಭ ಸುದ್ದಿ – ಅಂತಿಮ ಹಂತದಲ್ಲಿದೆ 5ಜಿ ನೆಟ್ವರ್ಕ್
ಬಿರುಗಾಳಿಯ ತೀವ್ರತೆ ಹೆಚ್ಚಿದ್ದ ಕಾರಣ ವಾತಾವರಣದ ಸೆಳೆತವನ್ನು ತಡೆಯಲಾರದೇ ಉಪಗ್ರಹಗಳು ಹಾಳಾಗಿವೆ. ಸ್ಟಾರ್ಲಿಂಕ್ ತಂಡ ಉಪಗ್ರಹಗಳನ್ನು ರಕ್ಷಿಸಲು ಸುರಕ್ಷಿತ ಮೋಡ್ಗೆ ಚಾಲನೆ ನೀಡಿತ್ತು ಎಂದಿದೆ.
ಈಗಾಗಲೇ ಸ್ಪೇಸ್ಎಕ್ಸ್ 2,000 ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾಗಿದೆ. ಪ್ರಪಂಚದ ವಿವಿಧ ಭಾಗಗಳಿಗೆ ಅಗ್ಗದ ಇಂಟರ್ನೆಟ್ ಸೇವೆ ಒದಗಿಸಲು 12,000 ಉಪಗ್ರಹಗಳನ್ನು ಹಾರಿಸುವ ಯೋಜನೆ ಮಾಡಿದೆ. ಇದನ್ನೂ ಓದಿ: ಖಾಸಗಿ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ
ಉಪಗ್ರಹಗಳು ಹಾಳಾದರೂ ಅದರ ಭಾಗಗಳು ಭೂಮಿಗೆ ಅಪ್ಪಳಿಸುವ ಭೀತಿ ಇಲ್ಲ. ಏಕೆಂದರೆ ಅವು ಮತ್ತೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದಲ್ಲಿ ಅವುಗಳ ರೂಪ ಅವನತಿ ಹೊಂದುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ನವದೆಹಲಿ: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ನ ಕಂಪನಿ ಸ್ಟಾರ್ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜಿನಾಮೆ ನೀಡಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.
2021ರ ಡಿಸೆಂಬರ್ 31ಕ್ಕೆ ತಾವು ಕೊನೆಯದಾಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದಾಗಿ ಹೇಳಿ, ತಮ್ಮ ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ಉಪಗ್ರಹ-ಬ್ರಾಡ್ಬ್ಯಾಂಡ್ ಸೇವೆಯ ಪ್ರಿ-ಬುಕ್ಕಿಂಗ್ ಮಾಡಿದವರಿಗೆ ಕಂಪನಿ ಮರುಪಾವತಿ (ರೀಫಂಡ್) ಮಾಡಲಾಗುವುದು ಎಂದು ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಇದಾದ ಬಳಿಕ ಸಂಜಯ್ ಭಾರ್ಗವ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದ ಕಾರ್ಯಕ್ಷಮತೆಗೆ ವಿಶ್ವದಲ್ಲೇ 8ನೇ ಸ್ಥಾನ
ಸ್ಟಾರ್ಲಿಂಕ್ ಇಂಡಿಯಾದ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ನಾನು ವೈಯಕ್ತಿಕ ಕಾರಣಗಳಿಂದ ಕೆಳಗಿಳಿದಿದ್ದೇನೆ. ನನ್ನ ಕೊನೆಯ ಕೆಲಸದ ದಿನ 2021ರ ಡಿಸೆಂಬರ್ 31. ಮಾಧ್ಯಮಗಳಿಗೆ ಹಾಗೂ ಜನರಿಗೆ ನಾನು ಯಾವುದೇ ಕಾಮೆಂಟ್ ನೀಡಲು ಬಯಸುವುದಿಲ್ಲ. ಆದ್ದರಿಂದ ದಯವಿಟ್ಟು ನನ್ನ ಗೌಪ್ಯತೆಯನ್ನು ಗೌರವಿಸಿ ಎಂದು ಭಾರ್ಗವ ತಡವಾಗಿ ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಚಾಕೋಲೇಟ್ ರಾಕೆಟ್- ವೀಡಿಯೋ ವೈರಲ್
ಭಾರ್ಗವ 1 ಅಕ್ಟೋಬರ್ 2021ರಂದು ಸ್ಟಾರ್ಲಿಂಕ್ ಇಂಡಿಯಾದ ಕಂಟ್ರಿ ಡೈರೆಕ್ಟರ್ ಆಗಿ ಸ್ಪೇಸ್ಎಕ್ಸ್ಗೆ ಸೇರಿದ್ದರು. 2000 ಇಸವಿಯಲ್ಲಿ ಎಲೋನ್ ಮಸ್ಕ್ ಅವರೊಂದಿಗೆ ಕೆಲಸ ಮಾಡಿದ್ದಾಗಿ ಅವರು ಹಿಂದೆ ತಿಳಿಸಿದ್ದರು.
ವಾಷಿಂಗ್ಟನ್: ಸ್ಪೇಸ್ಎಕ್ಸ್ ಕಂಪನಿಯ ಸಿಇಒ ಎಲೋನ್ ಮಸ್ಕ್ ಒಂದು ಹೊಸ ಹೇಳಿಕೆಯನ್ನು ನೀಡುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಮುಂದೆ ನಡೆಯಬಹುದಾದ ಭವಿಷ್ಯದ ಸುಳಿವು ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಾನವನೂ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬಹುದು ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.
ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬೇಕೆಂಬ ಕನಸು ಹಲವು ವಿಜ್ಞಾನಿಗಳದ್ದು. ಈ ವಿಚಾರ ಹೊಸದೇನಲ್ಲ. ಕಳೆದ 2 ದಶಕಗಳಿಂದಲೂ ಇದರ ಬಗ್ಗೆ ಹಲವು ಅನ್ವೆಷಣೆಗಳೂ, ತಂತ್ರಜ್ಞಾನದ ಪರೀಕ್ಷೆಗಳೂ ನಡೆದಿವೆ. ಇದೀಗ ವಿಶ್ವದ ಅತ್ಯಂತ ಶ್ರೀಮಂತನ ಹೇಳಿಕೆಯಿಂದಾಗಿ ವಿಶ್ವವ್ಯಾಪಿ ಜನರು ಮುಂದೆ ನಡೆಯಬಹುದಾದ ಭವಿಷ್ಯವನ್ನು ನೋಡಲು ಕಾತುರರಾಗಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ
ಸ್ಪೇಸ್ಎಕ್ಸ್ನ ಸ್ಟಾರ್ಶಿಪ್ ರಾಕೆಟ್ಗಳಲ್ಲಿನ ಬೆಳವಣಿಗೆಯ ಆಧಾರಗಳ ಮೇಲೆ ಎಲೋನ್ ಮಸ್ಕ್ ಈ ಸುಳಿವನ್ನು ನೀಡಿದ್ದು, ಕಂಪನಿಯ ಪ್ರಯತ್ನ ಎಷ್ಟೊಂದು ಗಂಭೀರವಾದುದು ಎಂಬುದನ್ನು ತಿಳಿಸುತ್ತದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಸ್ಕ್ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಸ್ಪೇಸ್ಎಕ್ಸ್ ಮಂಗಳ ಗ್ರಹದ ಮೇಲೆ ಮಾನವನನ್ನು ಯಾವಾಗ ಹೊತ್ತೊಯ್ಯಬಹುದು ಎಂಬ ಪ್ರಶ್ನೆಗೆ ಮಸ್ಕ್ ಒಳ್ಳೆಯ ಸನ್ನಿವೇಶವಿದ್ದರೆ ಮುಂದಿನ 5 ವರ್ಷಗಳೊಳಗೆ ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬಹುದು. ಅದೇ ಸನ್ನಿವೆಶ ಚೆನ್ನಾಗಿಲ್ಲವೆಂದಾದಲ್ಲಿ ಈ ಸಮಯಾವಕಾಶ 10 ವರ್ಷಗಳ ವರೆಗೆ ವಿಸ್ತರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಮಂಗಳ ಗ್ರಹದ ಮೇಲೆ ಮನುಷ್ಯರು ಇಳಿಯುವ ಬಗ್ಗೆ ಎಲೋನ್ ಮಸ್ಕ್ ಹೇಳಿಕೆ ನೀಡಿರುವುದು ಇದು ಮೊದಲೇನಲ್ಲ. ಈ ತಿಂಗಳಿನ ಪ್ರಾರಂಭದಲ್ಲಿಯೂ ಸಂದರ್ಶನವೊಂದರಲ್ಲಿ ನಾವು 5 ವರ್ಷಗಳಲ್ಲಿ ಮಂಗಳ ಗ್ರಹದ ಮೇಲೆ ಇಳಿಯದಿದ್ದರೆ ನನಗೇ ಆಶ್ಚರ್ಯವಾಗುತ್ತದೆ ಎಂದು ಮಸ್ಕ್ ಹೇಳಿಕೆ ನೀಡಿದ್ದರು.
ವಾಷಿಂಗ್ಟನ್: ಅಮೇರಿಕಾ ಹಾಗೂ ರಷ್ಯಾದ ಒಳ ಜಗಳ ನಿನ್ನೆ ಮೊನ್ನೆಯದಲ್ಲ. ಇತಿಹಾಸದ ಪುಟದಲ್ಲೂ ಬಲಿಷ್ಟ ರಾಷ್ಟ್ರಗಳ ಶೀತಲ ಸಮರದಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಇದೀಗ ಅಮೇರಿಕಾದ ಸ್ಪೇಸ್ ಎಕ್ಸ್ ಕಂಪನಿ ರಷ್ಯಾದ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆ ಮಾಡಿ ಆಶ್ಚರ್ಯ ಮೂಡಿಸಿದೆ
ನಾಸಾ ಹಾಗೂ ರಷ್ಯಾದ ಸ್ಪೇಸ್ ಏಜೆನ್ಸಿ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಲ್ಲಿ ಗಗನಯಾತ್ರಿಯನ್ನು ಉಡಾಯಿಸುವ ಯೋಜನೆ ನಡೆದಿದೆ. ಒಪ್ಪಂದದ ಪ್ರಕಾರ ಬಾಹ್ಯಾಕಾಶ ನೌಕೆಯಲ್ಲಿ ರಷ್ಯಾದ ಮೊದಲ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಪ್ರಯಾಣಿಸಲಿದ್ದಾರೆ.
2022ರಲ್ಲಿ ಸ್ಪೇಸ್ ಎಕ್ಸ್ ಕ್ರ್ಯೂ-5 ಮಿಷನ್ನಲ್ಲಿ ಗಗನಯಾತ್ರಿಯನ್ನು ಉಡಾವಣೆ ಮಾಡುವ ವಿಷಯವನ್ನು ಸ್ಪೇಸ್ ಸ್ಟೇಶನ್ ಪ್ರೋಗ್ರಾಮ್ ಮ್ಯಾನೇಜರ್ ಜೋಯಲ್ ಮೊಂಟಲ್ಬಾನೋ ತಿಳಿಸಿದರು. 2025ರ ಹೊತ್ತಿಗೆ ಬಾಹ್ಯಾಕಾಶ ನಿರ್ವಹಣೆಯಲ್ಲಿ ರಷ್ಯಾ ಹಾಗೂ ಅಮೆರಿಕ ಜಂಟಿಯಾಗಿ ಕಾರ್ಯ ನಿರ್ವಹಿಸುವುದರ ಬಗ್ಗೆ ಸುಳಿವನ್ನೂ ನೀಡಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್ಲಿಂಕ್ ಉಪಗ್ರಹಗಳು? ದರ ಎಷ್ಟು? ನೆಟ್ ಹೇಗೆ ಸಿಗುತ್ತೆ?
ವಾಷಿಂಗ್ಟನ್ ಹಾಗೂ ಮಾಸ್ಕೋ ನಡುವಿನ ಒತ್ತಡದ ಸಂಬಂಧ ಬಾಹ್ಯಾಕಾಶಕ್ಕೆ ವಿಸ್ತರಿಸಿದ್ದರೂ, ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಮಾಸ್ಕೋಗೆ ಭೇಟಿ ನೀಡಿದಾಗ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದದ ಬಗ್ಗೆ ಯೋಜನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ನಲ್ಲಿರುವ ಏಕೈಕ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಅವರನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಅವರು ಈಗಾಗಲೇ ಈ ಯೋಜನೆಗಾಗಿ ಸ್ಪೇಸ್ ಎಕ್ಸ್ನಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಹಾಗೂ ಕ್ರ್ಯೂ-5 ಮಿಷನ್ನಲ್ಲಿ ಗಗನಯಾತ್ರಿಗಳಾದ ನಿಕೋಲ್ ನಮ್ ಹಾಗೂ ಜೋಶ್ ಕಸಾಡಾ ಅವರೊಂದಿಗೆ ಬಾಹ್ಯಾಕಾಶ ಪ್ರಯಾಣ ಬೆಳೆಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 12 ದಿನಗಳ ಬಾಹ್ಯಾಕಾಶ ಪ್ರಯಾಣದಿಂದ ಮರಳಿದ ಜಪಾನ್ ವ್ಯಕ್ತಿ!
ದಶಕಗಳ ಹಿಂದೆ ಅಮೆರಿಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾವನ್ನು ಅವಲಂಬಿಸಿತ್ತು. ಇತ್ತೀಚೆಗೆ ಅಮೇರಿಕಾ ಸ್ಪೇಸ್ ಎಕ್ಸ್ ಕಂಪನಿಯ ಮೂಲಕ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ.
ನಿನ್ನೆ ರಾತ್ರಿ ಕರ್ನಾಟಕದ ಹಲವೆಡೆ ಆಗಸದಲ್ಲಿ ಅಚ್ಚರಿ ಕಾಣಿಸಿತ್ತು. ಉಡುಪಿ, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ ಗೋಚರಿಸಿದ ಈ ವಿಚಿತ್ರ ಏನು ಎಂಬುದರ ಬಗ್ಗೆ ಹಲವರು ಗೊಂದಲಕ್ಕೊಳಗಾಗಿದ್ದಾರೆ.
ಇದು ನಕ್ಷತ್ರ ಸಾಲುಗಳಲ್ಲ. ಬದಲಿಗೆ ಅಮೆರಿಕ ಉಡಾಯಿಸಿದ ಉಪಗ್ರಹಗಳ ಸಾಲು. ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಉಡಾಯಿಸಿದ್ದ ಉಪಗ್ರಹಗಳು ಭಾರತದಲ್ಲಿ ಹಲವೆಡೆ ಕಣ್ಣಿಗೆ ಕಾಣಿಸಿದ್ದು, ಜನರು ಆಶ್ಚರ್ಯಪಟ್ಟಿದ್ದಾರೆ.
ಏನು ಈ ನಕ್ಷತ್ರ ಸಾಲುಗಳು?
ಇದು ಡಿಸೆಂಬರ್ 18ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಈ ಉಪಗ್ರಹಗಳನ್ನು ಉಡವಾಣೆ ಮಾಡಲಾಗಿತ್ತು. ಸ್ಪೇಸ್ ಎಕ್ಸ್ನ 34ನೇ ಉಡಾವಣೆಯಲ್ಲಿ ಒಟ್ಟು 57 ಉಪಗ್ರಹಗಳು ಹಾರಿಸಲಾಗಿತ್ತು. ಇದನ್ನೂ ಓದಿ: ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು
ಏನು ಇದರ ಉದ್ದೇಶ?
ಇಂಟರ್ನೆಟ್ ಸೇವೆ ಒದಗಿಸುವ ಉದ್ದೇಶದಿಂದ ಸ್ಪೇಸ್ ಎಕ್ಸ್ ಕಂಪನಿ ಈ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಒಟ್ಟು 12 ಸಾವಿರ ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವಾದ್ಯಂತ ಇಂಟರ್ನೆಟ್ ಅನ್ನು ಕಡಿಮೆ ಬೆಲೆಗೆ ನೀಡುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಈಗಾಗಲೇ 1,465 ಉಪಗ್ರಹಗಳನ್ನು ಹಾರಿಸಿದ್ದಾರೆ.
ಇವುಗಳಲ್ಲಿ ಬೆಳಕು ಹೇಗೆ?
ಭೂಮಿಯಿಂದ ಎತ್ತರದಲ್ಲಿರುವ ಉಪಗ್ರಹಗಳ ಮೇಲೆ ಅಳವಡಿಸಲಾಗಿರುವ ಸೌರ ಫಲಕಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅದು ಪ್ರತಿಫಲನಗೊಂಡು ನಕ್ಷತ್ರದಂತೆ ಕಾಣಿಸುತ್ತಿವೆ.
ಬೇರೆ ಬೇರೆ ಸಮಯದಲ್ಲಿ ಯಾಕೆ ಕಾಣಿಸಿಕೊಳ್ಳುತ್ತದೆ?
ಇದು ಕರ್ನಾಟಕದ ಮೇಲೆ ಸೋಮವಾರ ಸಂಜೆ ಹಾದು ಹೋಗಿದ್ದರಿಂದ ನಮಗೆ ಗೋಚರವಾಗಿದೆ. ಸೋಮವಾರ ಇದು ಅರಬ್ಬಿ ಸಮುದ್ರದ ಮೇಲೆ ಹಾದು ಹೋಗಿದ್ದರಿಂದ ಪಶ್ಚಿಮ ಭಾಗದಲ್ಲಿ ಕಾಣಿಸಿದೆ. ಎರಡು ದಿನಗಳ ಹಿಂದೆ ದಕ್ಷಿಣ ಭಾರತದಲ್ಲಿ ಕಾಣಿಸಿದರ ಬಗ್ಗೆ ವರದಿಗಳಾಗಿವೆ. ಹೀಗಾಗಿ ಅದು ಕೆಲವೊಂದು ನಿರ್ಧಿಷ್ಟ ಪ್ರದೇಶದಲ್ಲಿ ಮಾತ್ರವೇ ಕಾಣಿಸುತ್ತದೆ.
ಕೆಲವೆಡೆ ಸ್ಪಷ್ಟವಾಗಿ ಹಾಗೂ ಕೆಲವೆಡೆ ಅಸ್ಪಷ್ಟವಾಗಿ ಕಾಣಿಸಲು ಕಾರಣ ಏನು?
ವಾತಾವರಣ ಶುದ್ಧವಾಗಿದ್ದರೆ, ಆಕಾಶದಲ್ಲಿ ಮೋಡ ಇಲ್ಲವಾದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಯೇ ಸೂರ್ಯನ ಪ್ರತಿಫಲನದಿಂದಾಗಿ ಅದು ನಮಗೆ ಗೋಚರವಾಗುವುದರಿಂದ ವ್ಯತ್ಯಾಸಗಳು ಕಂಡುಬರುತ್ತದೆ.
ಉಪಗ್ರಹಗಳು ಸರದಿ ಸಾಲಿನಲ್ಲಿ ಹೋಗಲು ಕಾರಣವೇನು?
ಸ್ಟಾರ್ಲಿಂಕ್ ಸಂಸ್ಥೆ ಉಪಗ್ರಹಗಳನ್ನು ಗುಂಪಿನಲ್ಲಿ ಬಿಡುಗಡೆ ಮಾಡುತ್ತಿದೆ. ಇದು ಒಂದೆರಡು ದಿನಗಳ ವರೆಗೆ ನಮಗೆ ಸಾಲಿನಲ್ಲಿಯೇ ತೋರುತ್ತದೆ. ನಂತರದಲ್ಲಿ ಇವುಗಳಿಗೆ ಒದಗಿಸಿದ ಕೋಡ್ಗಳ ಪ್ರಕಾರ ಅವುಗಳ ಜಾಗವನ್ನು ಸೇರಿಕೊಂಡು ಕಕ್ಷೆಯಲ್ಲಿ ಸುತ್ತುತ್ತಿರುತ್ತದೆ. ಇದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ
ಇಂದು ಆಕಾಶದ ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ?
ಸೋಮವಾರ ಇದು ಪಶ್ಚಿಮ ದಿಗಂತಕ್ಕಿತಂಲೂ ಸ್ವಲ್ಪ ಮೇಲೆ ಕಾಣಿಸಿಕೊಂಡಿತ್ತು. ಮಂಗಳವಾರ ಪಶ್ಚಿಮ ದಿಗಂತದ ಬಳಿಯಲ್ಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗೆಯೇ ಶುಕ್ರ ಗ್ರಹದ ಬಳಿಯಲ್ಲೇ ಹಾದು ಹೋಗುವ ಸಾಧ್ಯತೆ ಇದೆ. ಇಂದು ಇದು ಕೊನೆಯದಾಗಿ ಕಾಣಿಸಿಕೊಳ್ಳಲಿದ್ದು, ನಾಳೆ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.
ಕಡಿಮೆ ಬೆಲೆಗೆ ಇಂಟರ್ನೆಟ್ ಸಿಗುತ್ತಾ?
ಭಾರತದಲ್ಲಿ ಇನ್ನೂ ಈ ಸೇವೆಗೆ ಭಾರತ ಸರ್ಕಾರ ಅನುಮತಿ ನೀಡಿಲ್ಲ. ಈಗ ಪ್ರಯೋಗಗಳು ನಡೆಯುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ಪ್ರಕಾರ ತಿಂಗಳಿಗೆ 7,425 ರೂ. ದರ ನಿಗದಿಯಾಗುವ ಸಾಧ್ಯತೆಯಿದೆ. ಈಗ ಮೊಬೈಲ್ ಟವರ್, ಸಮುದ್ರದ ಆಳದಲ್ಲಿ ಹಾಕಲಾದ ಕೇಬಲ್ ಮೂಲಕ ಇಂಟರ್ನೆಟ್ ಸಂಪರ್ಕ ಸಿಗುತ್ತದೆ. ಆದರೆ ದೂರದ ಪ್ರದೇಶ, ಬೆಟ್ಟಗುಡ್ಡಗಳಲ್ಲಿ ಇಂಟರ್ನೆಟ್ ಸಂಪರ್ಕ ಈಗಲೂ ಅಲಭ್ಯವಾಗಿದೆ. ಉಪಗ್ರಹ ಆಧಾರಿತ ಈ ಇಂಟರ್ನೆಟ್ ಸಂಪರ್ಕ ಪಡೆದರೆ ಈ ಪ್ರದೇಶದಲ್ಲೂ ಇಂಟರ್ನೆಟ್ ಸಂಪರ್ಕವನ್ನು ಪಡೆಯಬಹುದು. ಇದನ್ನೂ ಓದಿ: ಪಿ. ವಿ ಸಿಂಧುಗೆ BWF ಗೌರವ
ಮನೆಗೆ ಹೇಗೆ ಇಂಟರ್ನೆಟ್ ಬರುತ್ತೆ?
ಡಿಟಿಎಚ್ ಮೂಲಕ ಹೇಗೆ ವಾಹನಿಗಳನ್ನು ವೀಕ್ಷಿಸಲಾಗುತ್ತದೋ ಅದೇ ರೀತಿಯ ಸ್ಟಾರ್ ಲಿಂಕ್ ಇಂಟರ್ನೆಟ್ ಪಡೆಯಲು ಮನೆಯ ಹೊರ ಭಾಗದಲ್ಲಿ ಒಂದು ಡಿಶ್ ಆಳವಡಿಸಬೇಕಾಗುತ್ತದೆ. ಈ ಡಿಶ್ ಜೊತೆಗೆ ವೈಫ್ ರೂಟರ್ ಸಹ ಬರುತ್ತದೆ. ಈ ಮೂಲಕ ಇಂಟರ್ನೆಟ್ ಸಂಪರ್ಕ ಪಡೆಯಬಹುದು. ಈಗಾಗಲೇ ಅಮೆರಿಕ, ಕೆನಡಾದಲ್ಲಿ ಜನ ಈ ಸೇವೆಯನ್ನು ಬಳಸುತ್ತಿದ್ದಾರೆ.
ಟೋಕಿಯೋ: ಸ್ಪೇಸ್ ಎಕ್ಸ್ನ ಚಂದ್ರಯಾನದಲ್ಲಿ ಮೊದಲ ಖಾಸಗಿ ಪ್ರಯಾಣಿಕನಾಗಿ ಜಪಾನ್ ಮೂಲದ ಯುಸಾಕು ಮೇಜಾವಾ 12 ದಿನಗಳ ಬಾಹ್ಯಾಕಾಶ ಪ್ರವಾಸದಿಂದ ಮರಳಿದ್ದಾರೆ.
ಜಪಾನಿನ ಕೋಟ್ಯಧೀಶ್ವರ ಮೇಜಾವಾ ಸೋಮವಾರ ಭೂಮಿಗೆ ಮರಳಿದ್ದು, ಕಝಾಕಿಸ್ತಾನ್ನಲ್ಲಿ ಬಂದಿಳಿದಿದ್ದಾರೆ. ಪ್ರಪಂಚದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿ ಚಂದ್ರಯಾನದ ಪರೀಕ್ಷೆಯನ್ನು ಕೈಗೊಂಡಿದ್ದು, ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದನ್ನೂ ಓದಿ: ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈಗೆ ಇ.ಡಿ ಸಮನ್ಸ್
ಡಿಸೆಂಬರ್ 8ರಂದು ಮೇಜಾವಾ ಹಾಗೂ ಅವರ ಸಹಾಯಕ ಈ ಕೋಟ್ಯಂತರ ಮೌಲ್ಯದ ಪ್ರಯಾಣವನ್ನು ಕೈಗೊಂಡಿದ್ದರು. ಒಂದು ದಶಕದಲ್ಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ(ಐಎಸ್ಎಸ್) ಪ್ರಯಾಣಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆ, ಕಾಶಿ ನಂತ್ರ ಮಥುರಾದಲ್ಲೂ ಭವ್ಯ ಮಂದಿರ ನಿರ್ಮಾಣ: ಹೇಮಾ ಮಾಲಿನಿ
ಶ್ರೀಮಂತ ವ್ಯಕ್ತಿಗಳಿಗೆ ಬಾಹ್ಯಾಕಾಶ ಪ್ರಯಾಣ ಒಂದು ಹೊಸ ಯುಗವಾಗಿ ಮಾರ್ಪಡಲು ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿ ಐಎಸ್ಎಸ್ಗೆ ಭೇಟಿ ನೀಡಿದ ಜಪಾನೀ ಪ್ರವಾಸಿ ಮೇಜಾವಾ ಸ್ಪೇಸ್ ಎಕ್ಸ್ನ ಚಂದ್ರಯಾನದಲ್ಲಿ ಮೊದಲ ಖಾಸಗಿ ಪ್ರಯಾಣಿಕರಾಗಲು ಸಿದ್ಧರಾದರು.
ಮಾಸ್ಕೋ: ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ಸ್ಥಾಪಕ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸ್ಟಾರ್ಲಿಂಕ್ ಇಂಟರ್ನೆಟ್ ಬಳಸುವ ಜನರ ಮೇಲೆ ರಷ್ಯಾ ಸರ್ಕಾರ ದಂಡ ವಿಧಿಸುವ ಸಾಧ್ಯತೆಯಿದೆ.
ಸ್ಪೇಸ್ ಎಕ್ಸ್ ಸ್ಟಾರ್ಲಿಂಕ್ ಸರ್ವಿಸ್, ಒನ್ವೆಬ್ ಅಲ್ಲದೇ ರಷ್ಯಾ ಉಪಗ್ರಹ ಹೊರತಾದ ವಿದೇಶಿ ಉಪಗ್ರಹ ಬಳಸಿ ಇಂಟರ್ನೆಟ್ ಬಳಕೆಗೆ ನಿರ್ಬಂಧ ಹೇರುವ ಸಂಬಂಧ ಕಾನೂನು ತರಲು ರಷ್ಯಾ ಸರ್ಕಾರ ಮುಂದಾಗಿದೆ. ಈ ಉಪಗ್ರಹ ಇಂಟರ್ನೆಟ್ಗಳಿಂದ ದೇಶಕ್ಕೆ ಭವಿಷ್ಯದಲ್ಲಿ ಬೆದರಿಕೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ನಿಷೇಧ ಹೇರಲು ಮುಂದಾಗಿದೆ.
ರಷ್ಯಾ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಸಾಮಾನ್ಯ ಜನರು ವಿದೇಶಿ ಉಪಗ್ರಹಗಳ ಇಂಟರ್ನೆಟ್ ಬಳಕೆ ಮಾಡಿದರೆ 135 ಡಾಲರ್ನಿಂದ 405 ಡಾಲರ್(ಅಂದಾಜು 9 ಸಾವಿರದಿಂದ 29 ಸಾವಿರ ರೂ.), ಕಂಪನಿಗಳು ಬಳಕೆ ಮಾಡಿದರೆ 6,750 ಡಾಲರ್ ನಿಂದ 13,500( ಅಂದಾಜು 4.90 ಲಕ್ಷದಿಂದ 9.84 ಲಕ್ಷ ರೂ.) ದಂಡ ವಿಧಸುವ ಸಾಧ್ಯತೆಯಿದೆ.
ರಷ್ಯಾದ ನಿರ್ಧಾರಕ್ಕೆ ಎಲೋನ್ ಮಸ್ಕ್ ಪ್ರತಿಕ್ರಿಯಿಸಿ, ನಾವು ಜನರನ್ನು ಮಂಗಳ ಗ್ರಹಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಸಹಾಯ ಮಾಡುವವರನ್ನು ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.
ಸ್ಪೇಸ್ ಎಕ್ಸ್ ಕಂಪನಿ ತನ್ನ ಫಾಲ್ಕನ್ 9 ರಾಕೆಟ್ನಿಂದ 944 ಉಪಗ್ರಹವನ್ನು ಉಡಾವಣೆ ಮಾಡಿದೆ. ಒಟ್ಟು 42 ಸಾವಿರ ಸ್ಟಾರ್ಲಿಂಕ್ ಉಪಗ್ರಹವನ್ನು ಉಡಾವಣೆ ಮಾಡಿ ವಿಶ್ವಕ್ಕೆ ಸೂಪರ್ ಫಾಸ್ಟ್ ಇಂಟರ್ನೆಟ್ ನೀಡುವ ಮಹತ್ವದ ಯೋಜನೆಗೆ ಮಸ್ಕ್ ಕೈ ಹಾಕಿದ್ದಾರೆ.
We’re just trying to get people to Mars. Help would be appreciated.