Tag: space

  • ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿಯೂ ಕಸ

    ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿಯೂ ಕಸ

    ವಾಷಿಂಗ್ಟನ್: ತಜ್ಞರು ನಡೆಸಿದ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಬಾಹ್ಯಕಾಶದಲ್ಲಿ 6 ಸಾವಿರ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂಬ ಸತ್ಯ ಹೊರಬಿದ್ದಿದೆ.

    ವಿಜ್ಞಾನಿಗಳು ಎಲ್ಲಾ ಉಪಗ್ರಹಗಳ ಕುರಿತಂತೆ ಹಲವು ರೀತಿಯ ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತಾರೆ. ಈಗಾಗಲೇ ಮಾನವರು ಹಾರಿಬಿಟ್ಟ ಬಾಹ್ಯಕಾಶ ಕುರಿತಂತೆ ಇತ್ತೀಚೆಗೆ ತಜ್ಞರು ನಡೆಸಿದ ಅಧ್ಯಯನದಲ್ಲಿ ಸಂಶೋಧನಾ ಸಾಧನಗಳು, ಉಪಗ್ರಹಗಳು, ನಿಷ್ಕ್ರಿಯಗೊಂಡ ಉಪಗ್ರಹ ಪಳೆಯುವಿಕೆ ಸೇರಿ 6 ಸಾವಿರ ಟನ್ ತ್ಯಾಜ್ಯ ಬಾಹ್ಯಾಕಾಶದಲ್ಲಿ ಸಂಗ್ರಹವಾಗಿದೆ. ಅಂದರೆ ಬಾಹ್ಯಕಾಶದಲ್ಲಿ ಅಂದಾಜಿನ ಪ್ರಕಾರ 12.8 ಕೋಟಿ ತುಣುಕುಗಳು ಸೇರಿಕೊಂಡಿದ್ದು ಅದರಲ್ಲಿ 1 ಮಿ.ಮೀಟರ್ ನಿಂದ 10 ಸೆಂ.ಮೀ ಗಾತ್ರದ ಅವಶೇಷಗಳು ಸೇರಿಕೊಂಡಿದೆ.

    ಈ ಕುರಿತಂತೆ 2018ರಲ್ಲಿ ನಾಸಾ ನಡೆಸಿದ ಅಧ್ಯನಯನ ಪ್ರಕಾರ ಅಂದಾಜು 5 ಲಕ್ಷಕ್ಕೂ ಅಧಿಕ ನಿಷ್ಕ್ರಿಯ ಉಪಗ್ರಹ ಅವಶೇಷ ಬಾಹ್ಯಕಾಶದಲ್ಲಿ ಭೂಮಿಯನ್ನು ಸುತ್ತುತ್ತಿದ್ದು, ಇಲ್ಲಿಯವರೆಗೂ ಅವಶೇಷಗಳಿಂದ ಭೂಮಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಮೂಲಗಳು ತಿಳಿಸಿದೆ. ಆದರೆ ಉಪಗ್ರವೊಂದು 2015ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪ್ಪಳಿಸುವ ಅಪಾಯದ ಸವಾಲು ಎದುರಾಗಿತ್ತು. ಆದ್ರೆ ಅದೃಷ್ಟವಶತ್ ಅಂತಹ ಯಾವುದೇ ಘಟನೆ ಸಂಭವಿಸಲಿಲ್ಲ. ಮುಂದೆ ಹೆಚ್ಚಿನ ಉಪಗ್ರಹಗಳ ಉಡಾವಣೆ ಮಾಡುವ ಯೋಜನೆಯನ್ನು ವಿಜ್ಞಾನಿಗಳು ಹೊಂದಿದ್ದು, ಭವಿಷ್ಯದಲ್ಲಿ ಯಾವುದೇ ಉಪಗ್ರಹಗಳು ಅಪ್ಪಳಿಸುವ ಸಾಧ್ಯತೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹಲವು ವರ್ಷಗಳಿಂದ ಇದ್ದ ತ್ಯಾಜ್ಯಗಳು ಇದೀಗ ಆಯುಷ್ಯ ಕಳೆದುಕೊಂಡು ಅವಸಾನ ಹೊಂದಲಿದೆ. ಹೀಗಾಗಿ ಇದಕ್ಕೆಲ್ಲಾ ಪರಿಹಾರ ವಿಶ್ವದ ನಂ1 ಉದ್ಯಮಿ ಎಲಾನ್ ಮಾಸ್ಕ್ ಕಾರಣ ಈ ಹಿಂದೆ 2018ರಲ್ಲಿ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಬಾಹ್ಯಕಾಶ ನಿಲ್ದಾಣಕ್ಕೆ ಫಾಲ್ಕನ್-9 ರಾಕೆಟ್ ನನ್ನು ಪ್ರಾಯೋಗಿಕವಾಗಿ ಸೇಸ್ ಸ್ವೀಪರ್ ಬಳಸುವ ಮೂಲಕ ತ್ಯಾಜ್ಯ ಸಂಗ್ರಹಿಸಲು ಸಾಹಾಯ ಮಾಡಿತ್ತು. ಮತ್ತೆ ಇದೀಗ ಬಾಹ್ಯಕಾಶದಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಲು ಈ ಸಂಸ್ಥೆಯ ಸಹಾಯಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

  • ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ

    ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ

    ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಅತೀ ಕಡಿಮೆ ಗುರುತ್ವಾಕಷಣೆ ಅಡಿಯಲ್ಲಿ ನಾಸಾ ಮೂಲಂಗಿಯನ್ನು ಬೆಳೆದಿದೆ.

    ನಾಸಾದ ವಿಜ್ಞಾನಿಗಳು ಮೈಕ್ರೋಗ್ರಾವಿಟಿಯಡಿ ತರಕಾರಿಯನ್ನು ಬೆಳೆಯುವ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ. ಕಡಿಮೆ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ನಾಸಾ ಮೂಲಂಗಿಯನ್ನು ಬೆಳೆದಿದೆ.

    ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ನಾಸಾ ಈಗ ಕೆಲವು ಪ್ರಯೋಗಗಳನ್ನು ಮಾಡುತ್ತಿದೆ.

    ಭೂಮಿಯಿಂದ ಲಕ್ಷಾಂತರ ಮೈಲಿ ದೂರ ಅನ್ಯಗ್ರಹಗಳಿಗೆ ಹೊಗುವ ಗಗನಯಾನಿಗಳಿಗೆ ನಿಯಮಿತವಾಗಿ ತಾಜಾ ಆಹಾರ ಮೂಲ ಬೇಕಾಗಬಹುದು ಎಂಬ ಉದ್ದೇಶದಿಂದ ಈ ಪ್ರಯೋಗವನ್ನು ಮಾಡಿದೆ.


    ಮೂಲಂಗಿ ಬೆಳದಿದ್ದು ಹೇಗೆ:
    ಗುರುತ್ವಾಕರ್ಷಣೆ ಕಡಿಮೆ ಇರುವ ಹಿನ್ನೆಲೆ ಆ ಸ್ಥಳದಲ್ಲಿ ಗಿಡದ ಬುಡಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೀಗಾಗಿ ದಿಂಬುಗಳಲ್ಲಿ ಬೀಜಗಳನ್ನು ಹಾಕಿ ಬೆಳೆಯಲಾಗಿದೆ. ಗಿಡದ ಬುಡಕ್ಕೆ ನೀರು ಹಾಗೂ ಗೊಬ್ಬರ ಪೂರೈಕೆ ಮಾಡಲು ದಿಂಬನ್ನು ಬಳಸಲಾಗಿದೆ.

    ಮೂಲಂಗಿಯೇ ಯಾಕೆ?
    ಮೂಲಂಗಿ ಅತೀ ಕಡಿಮೆ ಅವಧಿಯಲ್ಲಿ ಫಲ ಕೊಡುತ್ತದೆ. ಅಲ್ಲದೆ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡುವ ಸಸ್ಯ ಥಳಿಗೆ ಮೂಲಂಗಿ ಹೋಲುತ್ತದೆ. ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಹೀಗಾಗಿ ಮೂಲಂಗಿ ಬೆಳೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಮೂಲಂಗಿ ಹಸಿಯಾಗಿ ತಿನ್ನಲು ಯೋಗ್ಯವಾಗಿದೆ.

    ಬಾಹ್ಯಾಕಾಶದಲ್ಲಿ ಬೆಳೆದಿರುವ ಕಡುಗೆಂಪು ಬಣ್ಣದ ಮೂಲಂಗಿ ಕಟಾವಿಗೆ ಸಿದ್ಧವಾಗಿದೆ. ಇದರ ಸ್ಯಾಂಪಲ್‍ಗಳನ್ನು ಅಧ್ಯಯನಕ್ಕಾಗಿ ಭೂಮಿಗೆ ಕಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.

  • 328 ದಿನ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಯನ್ನು ಅಪ್ಪಿ ಮುದ್ದಾಡಿದ ಶ್ವಾನ – ವಿಡಿಯೋ

    328 ದಿನ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಯನ್ನು ಅಪ್ಪಿ ಮುದ್ದಾಡಿದ ಶ್ವಾನ – ವಿಡಿಯೋ

    ವಾಷಿಂಗ್ಟನ್: 328 ದಿನ ಬಾಹ್ಯಾಕಾಶದಲ್ಲಿ ಇದ್ದು ಬಂದ ನಾಸಾದ ಮಹಿಳಾ ಗಗನಯಾತ್ರಿಯನ್ನು ಶ್ವಾನ ಅಪ್ಪಿ ಮುದ್ದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ನಾಸಾದ ಗಗನಯಾತ್ರಿ ಕ್ರಿಸ್ಟನ್ ಕೋಚ್ 328 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದು, ಫೆಬ್ರವರಿ 6 ರಂದು ವಾಪಸ್ ಬಂದಿದ್ದು ಮನೆಗೆ ತೆರಳಿದ್ದಾರೆ. ಮನೆಗೆ ಹೋದಾಗ ಆಕೆ ಪ್ರೀತಿಯ ನಾಯಿ ಅವರನ್ನು ಬರಮಾಡಿಕೊಂಡ ರೀತಿಯನ್ನು ವಿಡಿಯೋ ಮಾಡಿ ಕೋಚ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಶ್ವಾನದ ಪ್ರೀತಿಯನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

    ಕೋಚ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ 30 ಸೆಕೆಂಡಿನ ವಿಡಿಯೋದಲ್ಲಿ, ಕೋಚ್ ತನ್ನ ಪತಿಯ ಜೊತೆ ಬರುವುದನ್ನು ಗಮನಿಸಿದ ಶ್ವಾನ ಅವರು ಮನೆಯೊಳಗೆ ಬರುವ ಮುಂಚೆಯೇ ಬಾಗಿಲ ಬಳಿ ಬಹಳ ಉತ್ಸಾಹದಿಂದ ಕಾಯುತ್ತಿರುತ್ತದೆ. ಬಾಗಿಲು ತೆರೆದು ಒಳ ಬಂದ ಕೋಚ್ ಅವರನ್ನು ತುಂಬ ಖುಷಿಯಾಗಿ ಅಪ್ಪಿಕೊಂಡು ಮುದ್ದಾಡುತ್ತದೆ. ವಿಡಿಯೋದಲ್ಲಿ ಬಹಳ ದಿನದ ನಂತರ ಕೋಚ್ ಅವರನ್ನು ಕಂಡ ಶ್ವಾನದ ಸಂತೋಷವನ್ನು ನಾವು ಕಾಣಬಹುದು.

    ಕ್ರಿಸ್ಟನ್ ಕೋಚ್ ಅವರು ಈ ಶ್ವಾನವನ್ನು ಮಾನವೀಯ ಸಮಾಜದಿಂದ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೋಚ್ ಅವರು, ಯಾರು ಹೆಚ್ಚು ಉತ್ಸುಕರಾಗಿದ್ದರೋ ಎಂದು ನನಗೆ ಗೊತ್ತಿಲ್ಲ. ಒಂದು ವರ್ಷದ ನಂತರ ಅವಳು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ನಾಸಾದಲ್ಲಿ 2013 ರಿಂದ ಗಗನಯಾತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಸ್ಟನ್ ಕೋಚ್, 2019 ಮಾರ್ಚ್ 14 ರಂದು ಬಾಹ್ಯಕಾಶಕ್ಕೆ ಹೋಗಿ ಸತತ 328 ದಿನಗಳ ನಂತರ ಅಂದರೆ ಫೆಬ್ರವರಿ 6 ರಂದು ಭೂಮಿಗೆ ವಾಪಸ್ ಆಗಿದ್ದರು. ಈ ಮೂಲಕ ಅತೀ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದು ಬಂದ ಮಹಿಳೆ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

  • ಚಂದ್ರಯಾನಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ: ಇಸ್ರೋ

    ಚಂದ್ರಯಾನಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ: ಇಸ್ರೋ

    ಶ್ರೀಹರಿಕೋಟಾ: ಚಂದ್ರಯಾನ-2ಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ ಇದ್ದೇವೆ. ಜುಲೈ 22ಕ್ಕೆ ಭೂ ಕಕ್ಷೆಯಿಂದ ದೂರವಾಗಿ ಚಂದ್ರನ ಕಕ್ಷೆಯನ್ನು ತಲುಪಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ನಾಲ್ಕು ಕಕ್ಷೆಗಳನ್ನು ಪೂರ್ಣಗೊಳಿಸಿ ಸೆಪ್ಟೆಂಬರ್ 7ರ ರಾತ್ರಿ 1 ಗಂಟೆಗೆ 55 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಇಂದು ಬೆಳಗ್ಗೆ 9 ಗಂಟೆಗೆ ಚಂದ್ರಯಾನ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ. ಈ ವೇಳೆ 30 ನಿಮಿಷ ನನ್ನ ಹೃದಯ ಬಡಿತವೇ ನಿಂತ ಅನುಭವ ನನಗೆ ಆಯ್ತು. ಇದೀಗ ಚಂದ್ರಯಾನ ಚಂದ್ರನ ಪರಿಭ್ರಮಣೆ ನಡೆಸುತ್ತಿದೆ ಎಂದು ಶಿವನ್ ಹೇಳಿದರು.

    ನಮ್ಮ ತಂಡ ಅತ್ಯಂತ ನಿಖರತೆಯಿಂದ ಕೆಲಸ ಮಾಡುತ್ತಿದ್ದು, ಮಿಶನ್ ಚಂದ್ರಯಾನ-2ನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡುವತ್ತ ಕಾರ್ಯ ನಿರ್ವಹಿಸುತ್ತಿದೆ. ಆಗಸ್ಟ್ 28, 30 ಮತ್ತು ಸೆಪ್ಟೆಂಬರ್ 1ರಂದು ಚಂದ್ರಯಾನ-2ನ್ನು 18 ಸಾವಿರ ಕಿಲೋಮೀಟರ್ ಅಂತರದಿಂದ 100/100 ಕಿಲೋಮೀಟರ್ ಎತ್ತರದವರೆಗೆ ತರಲಾಗುವುದು ಎಂದರು.

    ಸೆಪ್ಟೆಂಬರ್ 1ರಂದು ಆರ್ಬಿಟರ್ ಲ್ಯಾಂಡರ್ ನಿಂದ ಪ್ರತ್ಯೇಕಗೊಳ್ಳಲಿದೆ. ಈ ಸಮಯದಲ್ಲಿ ಲ್ಯಾಂಡರ್ ಮೇಲೆ ಎಲ್ಲರ ಗಮನ ಕೇಂದ್ರಕೃತವಾಗಿರುತ್ತದೆ. ಸೆಪ್ಟೆಂಬರ್ 3ರಂದು ಲ್ಯಾಂಡರ್ ನ್ನು ಪೂರ್ಣವಾಗಿ ಪರಿಶೀಲನೆ ನಡೆಸಲಾಗುವುದು. ಮದುವೆಯ ಸಂದರ್ಭದಲ್ಲಿ ವಧುವನ್ನು ಹೇಗೆ ತಾಯಿ-ತಂದೆಯಿಂದ ದೂರ ಮಾಡಿ ವರನ ಮನೆಗೆ ಕರೆದುಕೊಂಡು ಹೋಗಲಾಗುತ್ತದೋ ಅದೇ ರೀತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ ಎಂದು ಉದಾಹರಣೆಯೊಂದಿಗೆ ಶಿವನ್ ವಿವರಿಸಿದರು.

    ಸೆಪ್ಟೆಂಬರ್ 7ಕ್ಕೆ ಪವರ್ ಮಿಶನ್: ಸೆಪ್ಟೆಂಬರ್ 7ರ ರಾತ್ರಿ ಪವರ್ ಮಿಶನ್ ಆರಂಭಗೊಳ್ಳಲಿದೆ. ರಾತ್ರಿ 1.55 ನಿಮಿಷಕ್ಕೆ ಚಂದ್ರನ 27 ಡಿಗ್ರಿ ದಕ್ಷಿಣ, 22 ಡಿಗ್ರಿ ಪೂರ್ವಕ್ಕೆ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡ್ ಮಾಡಲಾಗುಗುವುದು. 3 ಗಂಟೆ 10 ನಿಮಿಷಕ್ಕೆ ರೋವರಿನನ ಸೋಲಾರ್ ಪ್ಯಾನಲ್ ತನ್ನ ಕಾರ್ಯವನ್ನು ಆರಂಭಿಸುತ್ತದೆ. 3 ಗಂಟೆಯ ನಂತರ ರೋವರ್ ಪ್ರಜ್ಞಾನನ್ನು ಲ್ಯಾಂಡರ್ ನಿಂದ ಪ್ರತ್ಯೇಕಗೊಳಿಸಲಾಗುವುದು. 4 ಗಂಟೆಯ ನಂತರ ರೋವರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.

    ಪ್ರಧಾನಿಗಳಿಗೆ ಆಹ್ವಾನ: ಸೆಪ್ಟೆಂಬರ್ 7ರ ರಾತ್ರಿ 1.55ಕ್ಕೆ ಚಂದ್ರನ ಮೇಲ್ಮೈ ಯಶಸ್ವಿಯಾಗಿ ಪ್ರವೇಶಿಸಲಿದ್ದೇವೆ. ತದನಂತರ ಎರಡನೇ ಹಂತದ ಕೆಲಸಗಳು ನಡೆಯಲಿವೆ. ಚಂದ್ರಯಾನ-2ರ ಟಚ್-ಡೌನ್ ವೀಕ್ಷಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಆಹ್ವಾನಿಸಲಾಗಿದೆ. ಈ ಸಂಬಂಧ ಪ್ರಧಾನಿಗಳ ಕಾರ್ಯಾಲಯದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಶಿವನ್ ಮಾಹಿತಿ ನೀಡಿದರು.

    ಸೇಫ್ ಲ್ಯಾಡಿಂಗ್ ಕಷ್ಟ: ಚಂದ್ರನ ಮೇಲೆ ಲ್ಯಾಡಿಂಗ್ ಮಾಡುವ ಕೆಲಸ ಅತ್ಯಂತ ಕ್ಲಿಷ್ಟ ಮತ್ತು ಕಷ್ಟಕರವಾಗಿದೆ. ಕಾರಣ ಮೊದಲ ಬಾರಿಗೆ ಈ ಸಾಹಸ ಕಾರ್ಯಕ್ಕೆ ಇಸ್ರೋ ಮುಂದಾಗಿದ್ದು, ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ನಂಬಿಕೆಯನ್ನು ಹೊಂದಿದ್ದೆವೆ. ಸಾಫ್ಟ್ ಲ್ಯಾಂಡಿಂಗ್ ನಲ್ಲಿ ಸಕ್ಸಸ್ ರೇಟ್ ಶೇ.37ರಷ್ಟು ಮಾತ್ರ ಇದೆ. ಆದರೂ ನಾವು ಮಿಶನ್ ನಲ್ಲಿ ಯಶಸ್ವಿಯಾಗಲಿದ್ದೇವೆ. ಈ ಸಂಬಂಧ ಎಲ್ಲ ಆಯಾಮಗಳಿಂದಲೂ ನಾವು ಸಿದ್ಧಗೊಂಡಿದ್ದೇವೆ ಎಂದು ಶಿವನ್ ಸ್ಪಷ್ಟಪಡಿಸಿದರು.

    ಲ್ಯಾಂಡಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ?
    ಚಂದ್ರಯಾನವನ್ನು ಲ್ಯಾಂಡರ್ ನಿಂದ ಇಳಿಸುವ ಮುನ್ನ ಪೃಥ್ವಿಯಿಂದ ಎರಡು ಸಂದೇಶಗಳನ್ನು ಕಳುಹಿಸಲಾಗುವುದು. ಲ್ಯಾಂಡರ್ ವೇಗ ಮತ್ತು ದಿಕ್ಕು ಸುಧಾರಣೆಯಾಗಿ ನಿಧಾನವಾಗಿ ಚಂದ್ರನ ಮೇಲ್ಮೈ ಪ್ರವೇಶಿಸುವ ಸಂದೇಶವನ್ನು ಕಮಾಂಡ್ ಒಳಗೊಂಡಿರುತ್ತದೆ. ಅರ್ಬಿಟರ್ ಮತ್ತು ಲ್ಯಾಂಡರ್ ನಲ್ಲಿಯ ಕ್ಯಾಮೆರಾದಲ್ಲಿ ನಿಖರ ಸಮಯ ದಾಖಲಾಗಲಿದೆ. ಲ್ಯಾಂಡರ್ ಕೆಳಭಾಗದಲ್ಲಿ ಅಳವಡಿಸಲಾಗಿರುವ ಚಂದ್ರನ ಮೇಲ್ಮೈ ಸ್ಪರ್ಶಿಸುವ ಸಮಯ ಮತ್ತು ದೃಶ್ಯಗಳನ್ನು ದಾಖಲಿಸಿಕೊಳ್ಳಲಿದೆ. ಒಂದು ವೇಳೆ ಚಂದ್ರನ ಮೇಲ್ಮೈ ಸ್ಪರ್ಶಿಸುವಾಗ ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ.

    ಭೂಮಿ ಮತ್ತು ಚಂದ್ರನ ನಡುವೆ ಅಂದಾಜು 3 ಲಕ್ಷ 84 ಸಾವಿರ ಕಿಲೋಮೀಟರ್ ಅಂತರವಿದೆ. ಚಂದ್ರಯಾನ-2ರಲ್ಲಿ ಲ್ಯಾಂಡರ್-ವಿಕ್ರಂ ಮತ್ತು ರೋವರ್-ಪ್ರಜ್ಞಾನ ಚಂದ್ರನ ಸನಿಹದವರೆಗೂ ಹೋಗಲಿವೆ. ಚಂದ್ರನ ಮೇಲ್ಮೈ ಪ್ರವೇಶಿಸುವ ನಾಲ್ಕು ದಿನ ಮುನ್ನವೇ ರೋವರ್ ‘ವಿಕ್ರಂ’ ಲ್ಯಾಂಡಿಂಗ್ ಸ್ಥಳದ ಪರಿಶೀಲನೆ ನಡೆಸಿ ಸ್ಕ್ಯಾನ್ ಮಾಡಲಿದೆ. ಸ್ಥಳ ಅಂತಿಮಗೊಂಡ ಬಳಿಕ ಸೆಪ್ಟೆಂಬರ್ 6-8ರ ನಡುವೆ ಈ ಲ್ಯಾಂಡಿಂಗ್ ಚಟುವಟಿಕೆ ನಡೆಯಲಿದೆ.

    ಲ್ಯಾಡಿಂಗ್ ಬಳಿಕ ಆರು ಚಕ್ರಗಳುಳ್ಳ ರೋವರ್-ಪ್ರಜ್ಞಾನ ಲ್ಯಾಂಡರ್ ನಿಂದ ಪ್ರತ್ಯೇಕಗೊಳ್ಳುತ್ತದೆ. ಪ್ರತ್ಯೇಕಗೊಳ್ಳುವ ಪ್ರಕ್ರಿಯೆ 4 ಗಂಟೆ ಸಮಯ ವ್ಯಯವಾಗುತ್ತದೆ. ಅಂದರೆ 1 ಸೆಂಟಿಮೀಟರ್ ಪ್ರತಿ ಸೆಕೆಂಡ್ ಗೆ 500 ಮೀಟರ್ ವರೆಗೆ ದೂರವಾಗುತ್ತಾ ಹೋಗುತ್ತದೆ. ಬೇರ್ಪಟ್ಟ ರೋವರ್ ಚಂದ್ರನ ಮೇಲ್ಮೈ ಚಿತ್ರಗಳು, ಲಭ್ಯವಿರುವ ಖನಿಜ ಸಂಪನ್ಮೂಲಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ನಡೆಸಲಿದೆ.

  • ಭಾರತದ ‘ಬಾಹುಬಲಿ’ಯಲ್ಲಿ ಬೆಂಗಳೂರಿನಲ್ಲಿ ಓದಿದ ‘ರಾಕೆಟ್ ಮಹಿಳೆ’ಯ ಸಾಧನೆ ಓದಿ

    ಭಾರತದ ‘ಬಾಹುಬಲಿ’ಯಲ್ಲಿ ಬೆಂಗಳೂರಿನಲ್ಲಿ ಓದಿದ ‘ರಾಕೆಟ್ ಮಹಿಳೆ’ಯ ಸಾಧನೆ ಓದಿ

    ನವದೆಹಲಿ: ಚಂದ್ರಯಾನ-2 ಉಡಾವಣೆಯನ್ನು ಯಶಸ್ವಿಗೊಳಿಸುವಲ್ಲಿ ವರ್ಷಗಳಿಂದ ಹಲವಾರು ಪುರುಷರು ಹಾಗೂ ಮಹಿಳೆಯರ ತಂಡ ಕೆಲಸ ಮಾಡಿದೆ. ಆದರೆ, ಈ ಬಾರಿಯ ಚಂದ್ರಯಾನದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವನಿರ್ವಹಿಸಿದ್ದು ಅದರಲ್ಲೂ ಇಬ್ಬರು ಪ್ರಮುಖ ಪಾತ್ರವಹಿಸಿದ್ದಾರೆ.

    ಯೋಜನಾ ನಿರ್ದೇಶಕಿ ಮುತ್ತಯ್ಯ ವನಿತಾ ಕೆಲಸ ಮಾಡಿದ್ದರೆ ಚಂದ್ರನಲ್ಲಿ ಉಪಗ್ರಹ ಇಳಿಯಬೇಕಾದ ಸ್ಥಳವನ್ನು ಗುರುತಿಸುವಲ್ಲಿ ಮಿಷನ್ ನಿರ್ದೇಶಕಿ ರಿತು ಕರಿಧಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

    ವಿಶೇಷವೆಂದರೆ ಉಪಗ್ರಹದ ಬಾಹ್ಯ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಚಂದ್ರಯಾನ-2ರ ಮಿಷನ್ ಡೈರೆಕ್ಟರ್ ರಿತು ಕರಿಧಾಲ್ ಅವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್(ಐಐಎಸ್‍ಸಿ)ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    ಮಂಗಳಯಾನದ ಉಪ ಕಾರ್ಯಾಚಣೆ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವ ಕರಿಧಾಲ್ ಅವರಿಗಿದ್ದು ಭಾರತದ ‘ರಾಕೆಟ್ ಮಹಿಳೆ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

    ಚಂದ್ರಯಾನ-2ರ ಯೋಜನಾ ನಿರ್ದೇಶಕಿ ಮುತ್ತಯ್ಯ ವನಿತಾ ಅವರು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಇಂಜಿನಿಯರ್ ಆಗಿದ್ದು, ಉಪಗ್ರಹಗಳಿಗೆ ಡೇಟಾ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಹೀಗಾಗಿ ಇವರನ್ನು ಯೋಜನಾ ನಿರ್ದೇಶಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ವನಿತಾ ಅವರು ಜವಾಬ್ದಾರಿಯನ್ನು ಹೊರಲು ಮುಂದಾಗಿರಲಿಲ್ಲ. ಆದರೆ, ಚಂದ್ರಯಾನ-1ರ ಯೋಜನಾ ನಿರ್ದೇಶಕ ಎಂ.ಅಣ್ಣಾದುರೈ ಅವರ ಒತ್ತಾಯದ ಮೇರೆಗೆ ಈ ಹೊಣೆಯನ್ನು ವಹಿಸಿಕೊಂಡಿದ್ದರು.

    ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ನಿರ್ವಹಣಾ ಸಾಮಥ್ರ್ಯ ಹಾಗೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಮುತ್ತಯ್ಯ ವನಿತಾ ಅವರಿಗಿದೆ. ಹೀಗಾಗಿ ಅವರಿಗೆ ಈ ಜವಾಬ್ದಾರಿ ವಹಿಸಿದರೆ ಒಳ್ಳೆಯದು ಎಂದು ಅಣ್ಣಾದುರೈ ಇಸ್ರೋ ತಂಡಕ್ಕೆ ಸಲಹೆ ನೀಡಿದ್ದರು.

    ಕರಿಧಾಲ್ ಅವರು ಇಸ್ರೋ ಕೊಡಮಾಡುವ ಎಂಓಎಂ, ಉಮೆನ್ ಅಚೀವರ್ಸ್ ಇನ್ ಏರೋಸ್ಪೇಸ್ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಏರೋಸ್ಪೇಸ್ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವವಿದೆ.

    ಕರಿಧಾಲ್ ಮತ್ತು ವನಿತಾ ಅವರಲ್ಲಿ ಇರುವ ಮತ್ತೊಂದು ಸಾಮ್ಯತೆ ಎಂದರೆ ಇಬ್ಬರೂ ಸಹ ಸಮಯವನ್ನು ಲೆಕ್ಕಿಸದೇ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಇವರಿಬ್ಬರು ಮಾತ್ರವಲ್ಲ ಶೇ.30ರಷ್ಟು ಮಹಿಳೆಯರು ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದು, ಚಂದ್ರಯಾನ-2ಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

  • ಚಂದ್ರಯಾನ-2: ನೆಹರು ವಿಷನ್ ನೆನಪಿಸಿಕೊಳ್ಳಲು ಇದು ಸಕಾಲ ಎಂದ ಕಾಂಗ್ರೆಸ್

    ಚಂದ್ರಯಾನ-2: ನೆಹರು ವಿಷನ್ ನೆನಪಿಸಿಕೊಳ್ಳಲು ಇದು ಸಕಾಲ ಎಂದ ಕಾಂಗ್ರೆಸ್

    ನವದೆಹಲಿ: ಚಂದ್ರಯಾನ 2 ಯಶಸ್ಸಿಗೆ ಇಡೀ ದೇಶವೇ ಇಸ್ರೋಗೆ ಶುಭಹಾರೈಸಿದೆ. ಆದರೆ, ರಾಜಕೀಯದ ದುರ್ಗಂಧ ಇಲ್ಲೂ ಬಡಿದಿದೆ. ಇಸ್ರೋ ಸಾಧನೆಯ ಕುರಿತು ಶುಭಕೋರಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಗ್ಗೆ ತೆಗೆದಿದ್ದಂತೆ ಚಂದ್ರಯಾನ 2 ಬಗ್ಗೆಯೂ ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    ‘ನೆಹರು ವಿಷನ್ ನೆನಪಿಸಿಕೊಳ್ಳಲು ಇದು ಸಕಾಲ. ಬಾಹ್ಯಾಕಾಶ ಸಂಶೋಧನೆಗೆ ನೆಹರು ಅವರು 1962ರಲ್ಲಿ, ಇನ್‍ಕಾಸ್‍ಪರ್ (IಓಅಔSPಂಖ) ಸ್ಥಾಪಿಸಿದರು. ನಂತರ ಇದೇ ಇಸ್ರೋ ಅಂತ ಮರುನಾಮಕರಣವಾಯಿತು. ಜೊತೆಗೆ, ಮನಮೋಹನ್ ಸಿಂಗ್ ಅವರು 2008ರಲ್ಲಿ ಚಂದ್ರಯಾನಕ್ಕೆ ಹಣಕಾಸು ಬಿಡುಗಡೆ ಮಾಡಿದ್ದರು’ ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದೆ.

    ಇತ್ತ ಪ್ರಧಾನಿ ಮೋದಿ ಅವರು ತಮ್ಮ ಕಚೇರಿಯಲ್ಲೇ ಚಂದ್ರಯಾನ 2 ಉಡಾವಣೆಯ ನೇರ ಪ್ರಸಾರ ವೀಕ್ಷಿಸಿದ್ರು. ಮಿಷನ್ ಮೂನ್‍ನಿಂದ ಚಂದ್ರನ ಮೇಲಿನ ಹೊಸ ಜ್ಞಾನ ಸಂಪಾದನೆಗೆ ಜಗತ್ತಿಗೇ ಅನುಕೂಲವಾಗಲಿದೆ ಎಂದು ವರ್ಣಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಟ್ವೀಟಿಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಪಕ್ಷ ಕೀಳುಮಟ್ಟದ ಹೇಳಿಕೆ ನೀಡಿ ಬಾಹ್ಯಾಕಾಶ ಯೋಜನೆಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.

  • ಚಂದ್ರಯಾನ 2 ರದ್ದು- ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಮುಂದೂಡಿಕೆ

    ಚಂದ್ರಯಾನ 2 ರದ್ದು- ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಮುಂದೂಡಿಕೆ

    – ಶೀಘ್ರದಲ್ಲೇ ಹೊಸ ಸಮಯ ನಿಗದಿ

    ನವದೆಹಲಿ: ಕೋಟ್ಯಂತರ ಕಂಗಳು ಕಾಯುತ್ತಿದ್ದು ಚಂದ್ರಯಾನ-2 ಕೊನೆ ಕ್ಷಣದಲ್ಲಿ ಮುಂದೂಡಿಕೆ ಮಾಡಲಾಗಿದೆ. ರಾಕೆಟ್‍ನ ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ರದ್ದುಗೊಳಿಸಲಾಗಿದೆ.

    ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳ ಸಮಾಲೋಚನೆ ನಡೆಸಿದ ಇಸ್ರೋ ಸುದ್ದಿಗೋಷ್ಠಿ ಕರೆದು ಚಂದ್ರಯಾನ-2 ರದ್ದು ಮಾಡಲಾಗಿದ್ದು, ಶೀಘ್ರದಲ್ಲಿಯೇ ಮುಂದಿನ ಉಡಾವಣಾ ಸಮಯ ಘೋಷಿಸುವುದಾಗಿ ಹೇಳಿದೆ.

    ಏನೇನಾಯ್ತು…?
    * ರಾತ್ರಿ 1 ಗಂಟೆ 55 ನಿಮಿಷ 24 ಸೆಕೆಂಡ್- ಚಂದ್ರಯಾನ-2ರಲ್ಲಿ ತಾಂತ್ರಿಕ ದೋಷ ಪತ್ತೆ
    * ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆ
    * ತಕ್ಷಣ ಅಧಿಕಾರಿಗಳಿಂದ ಸಮಾಲೋಚನೆ
    * 2 ಗಂಟೆ 9 ನಿಮಿಷಕ್ಕೆ ಚಂದ್ರಯಾನ- 2 ತಾತ್ಕಾಲಿಕ ತಡೆ
    * 2 ಗಂಟೆ 16 ನಿಮಿಷಕ್ಕೆ ಚಂದ್ರಯಾನ- 2 ರದ್ದು
    * ಬಳಿಕ ಟ್ವಿಟ್ಟರ್ ನಲ್ಲಿ ಚಂದ್ರಯಾನ- 2 ರದ್ದುಗೊಂಡ ಬಗ್ಗೆ ಸ್ಪಷ್ಟನೆ
    * 2.40ಕ್ಕೆ ಇಸ್ರೋ ಅಧಿಕಾರಿಯಿಂದ ಸುದ್ದಿಗೋಷ್ಠಿ- ಚಂದ್ರಯಾನ-2 ರದ್ದು ಬಗ್ಗೆ ಸ್ಪಷ್ಟನೆ

    ಚಂದ್ರಯಾನ 2ರದ್ದುಗೊಂಡ ಬಗ್ಗೆ ಇಸ್ರೋ ಅಧಿಕಾರಿ ಮಾಹಿತಿ ನೀಡಿದರು. ರಾಕೆಟ್ ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆಯನ್ನು ಗಮನಿಸಿದ್ದೇವೆ. ಉಡಾವಣೆಗೆ ನಿಗದಿಪಡಿಸಿದ ಸಮಯದಲ್ಲಿ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಚಂದ್ರಯಾನ 2 ರದ್ದುಗೊಳಿಸಿದ್ದು ಮುಂದಿನ ದಿನಾಂಕ ಶೀಘ್ರದಲ್ಲೇ ಪ್ರಕಟ ಮಾಡುತ್ತೇವೆ ಎಂದು ಇಸ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದರೆ.

  • ಬಾಹ್ಯಾಕಾಶದಲ್ಲಿ ಉದ್ಯಮ – ಇಸ್ರೋ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ

    ಬಾಹ್ಯಾಕಾಶದಲ್ಲಿ ಉದ್ಯಮ – ಇಸ್ರೋ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ

    ನವದೆಹಲಿ: ಬಾಹ್ಯಾಕಾಶದಲ್ಲಿ ಉದ್ಯಮ ನಡೆಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಭಾರತ ಬಾಹ್ಯಾಕಾಶದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದು, ಹೀಗಾಗಿ ಬಾಹ್ಯಾಕಾಶ ಇಲಾಖೆಯ ಹೊಸ ವಾಣಿಜ್ಯ ಸಂಸ್ಥೆಯಾಗಿ ಸ್ಥಾಪಿಸಲಾಗುವುದು. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್‍ಎಸ್‍ಐಎಲ್) ಹೆಸರಿನ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

    ಐದು ವರ್ಷಗಳ ಹಿಂದೆ 6 ಸಾವಿರ ಕೋಟಿ ರೂ. ಅನುದಾನ ಪಡೆಯುತ್ತಿದ್ದ ಇಸ್ರೋ ಬಜೆಟ್ ಈಗ 10 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

    ವಿಶ್ವದಲ್ಲೇ ಈಗ ಇಸ್ರೋ ದೊಡ್ಡ ಬಾಹ್ಯಾಕಾಶ ಕ್ಷೇತ್ರವಾಗಿದ್ದು ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು. ಕೆಲ ವರ್ಷಗಳಿಂದ ಇಸ್ರೋ ವಿದೇಶ ಉಪಗ್ರಹಗಳನ್ನು ಉಡಾವಣೆ ಮಾಡಲು ಆರಂಭಿಸಿದೆ.

  • ಅಂತರಿಕ್ಷದಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ: ಇಸ್ರೋ ಮುಖ್ಯಸ್ಥ

    ಅಂತರಿಕ್ಷದಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ: ಇಸ್ರೋ ಮುಖ್ಯಸ್ಥ

    ನವದೆಹಲಿ: ಚಂದ್ರಯಾನ 2ಕ್ಕೆ ಸಜ್ಜಾಗುತ್ತಿರುವ ಇಸ್ರೋ ಇದೀಗ ಮತ್ತೊಂದು ಮಹತ್ವಾಕಾಂಕ್ಷೆಯ ಕೆಲಸಕ್ಕೆ ಕೈ ಹಾಕಿದ್ದು, ಬಾಹ್ಯಾಕಾಶ ಸಮರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಪ್ಲಾನ್ ಮಾಡಿದೆ.

    ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್, 2030ರ ಹೊತ್ತಿಗೆ ಭಾರತ, 20 ಟನ್ ತೂಕದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಯೋಜನೆಗೆ ಯಾವ ದೇಶದ ನೆರವನ್ನು ಪಡೆಯುತ್ತಿಲ್ಲ. ಈ ನಿಲ್ದಾಣದಲ್ಲಿ ಸಣ್ಣ ಪ್ರಮಾಣದ ಗುರುತ್ವ ಪರೀಕ್ಷೆಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಚಿಕ್ಕ ಪ್ರಮಾಣದ ಗಗನ ನೌಕೆಯ ಉಡಾವಣೆ ಮತ್ತು ಮೈಕ್ರೊಗ್ಯಾವಿಟಿ ಪರೀಕ್ಷೆ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ 2022ರಲ್ಲಿ ಗಗನಯಾನ ಮಿಷನ್ ಅಡಿ ಭಾರತದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಕೂಡ ರೂಪಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಅರ್ಹರನ್ನು ಆಯ್ಕೆ ಮಾಡಿ 2 ವರ್ಷ ತರಬೇತಿ ನೀಡಲಾಗುವುದು ಎಂದು ಶಿವನ್ ತಿಳಿಸಿದ್ದಾರೆ.

  • ದೇಶಭಕ್ತಿಯ ಜೋಶ್ ಆಕಾಶವನ್ನು ಬಿಟ್ಟಿಲ್ಲ: ಮೆಹಬೂಬಾ ಮುಫ್ತಿ ಕಿಡಿ

    ದೇಶಭಕ್ತಿಯ ಜೋಶ್ ಆಕಾಶವನ್ನು ಬಿಟ್ಟಿಲ್ಲ: ಮೆಹಬೂಬಾ ಮುಫ್ತಿ ಕಿಡಿ

    ನವದೆಹಲಿ: ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳಿಗೆ ‘ಜೈ ಹಿಂದ್’ ಎಂದು ಹೇಳುವುದು ಕಡ್ಡಾಯಗೊಳಿಸಿದ್ದ ಅಧಿಕಾರಿಗಳ ಕ್ರಮವನ್ನು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಾಬೂಬಾ ಮುಫ್ತಿ ಟೀಕೆ ಮಾಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೊಹಬೂಬಾ ಮುಫ್ತಿ, ಚುನಾವಣೆಯ ಸಂದರ್ಭದಲ್ಲಿ, ದೇಶಭಕ್ತಿಯ ಜೋಶ್ ಅಕಾಶವನ್ನು ಬಿಟ್ಟಿಲ್ಲ ಎಂದಿದ್ದಾರೆ. ಅಲ್ಲದೇ ಇದು ಸ್ವಲ್ಪ ಅಚ್ಚರಿಯನ್ನು ತಂದಿದೆ ಎಂದಿದ್ದಾರೆ.

    ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಿದ ಬಳಿಕ ‘ಜೈ ಹಿಂದ್’ ಹೇಳುವುದು ಕಡ್ಡಾಯಗೊಳಿಸಿ ಆದೇಶ ನೀಡಿದ ಒಂದು ದಿನದ ಬಳಿಕ ಮುಫ್ತಿ ಅವರು ಈ ಹೇಳಿಕೆ ನೀಡಿದ್ದಾರೆ. ನಿನ್ನೆಯಷ್ಟೇ ಏರ್ ಇಂಡಿಯಾ ಸಂಸ್ಥೆ ತನ್ನ ವಿಮಾನ ಸೇವಾ ಸಿಬ್ಬಂದಿಗೆ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಿದ ಬಳಿಕ ‘ಜೈ ಹಿಂದ್’ ಎಂದು ಹೇಳುವುದು ಕಡ್ಡಾಯ ಎಂದು ಆದೇಶ ಮಾಡಿತ್ತು.

    ಏರ್ ಇಂಡಿಯಾ ನಿರ್ದೇಶಕ ಅಮಿತಾಬ್ ಸಿಂಗ್ ಅವರು ಈ ಆದೇಶ ಹೊರಡಿಸಿದ್ದರು. ಕೇವಲ ವಿಮಾನ ಸೇವಾ ಸಿಬ್ಬಂದಿ ಮಾತ್ರವೇ ಅಲ್ಲದೆ ಕಾಕ್ ಪಿಟ್ ನಿಂದ ಹೊರಡುವ ಸೂಚನೆಗಳ ನಂತರವೂ ‘ಜೈ ಹಿಂದ್’ ಎಂದು ಹೇಳುವಂತೆ ಸೂಚಿಸಲಾಗಿದೆ. ಅಲ್ಲದೇ ತತ್‍ಕ್ಷಣದಿಂದಲೇ ಈ ಆದೇಶ ಪಾಲಿಸುವಂತೆ ತಿಳಿಸಲಾಗಿದೆ.

    ಈ ಹಿಂದೆ 2016ರಲ್ಲೂ ಕೂಡ ಏರ್ ಇಂಡಿಯಾದ ಚೇರ್‍ಮನ್ ಆಗಿದ್ದ ಅಶ್ವಿನಿ ಲೋಹಾನಿ ಅವರು ಇಂತಹದ್ದೇ ಆದೇಶ ನೀಡಿದ್ದರು. ಆದರೆ ಆ ಆದೇಶವನು ಕಾರಣಾಂತರಗಳಿಂದ ಪಾಲಿಸಲಾಗಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv