Tag: sp

  • ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿ ಶಾಲಾ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

    ರಾಯಚೂರು ನಗರದ ಪೊಲೀಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನ ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿ ಮಕ್ಕಳು ಹೆಚ್ಚಾಗಿ ಓದುವ ಶಾಲೆಯಲ್ಲಿನ ಆಹಾರ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು.

    ಶಾಲೆಯಲ್ಲಿ ತಯಾರಾದ ಬಿಸಿಯೂಟದ ಗುಣಮಟ್ಟವನ್ನು ಪರೀಕ್ಷಿಸಿ ಬಳಿಕ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ಕುಳಿತು ಬಿಸಿಯೂಟ ಸೇವಿಸಿದರು. ಶಾಲೆಯ ಮಕ್ಕಳೊಂದಿಗೆ ಮಾತನಾಡಿ ಶಾಲೆಯ ಬಗ್ಗೆ ಮತ್ತು ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಕಷ್ಟಪಟ್ಟು ಚೆನ್ನಾಗಿ ಓದಿ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಮಕ್ಕಳಿಗೆ ಕರೆ ನೀಡಿದರು.

  • ಇದು ಸಿಟಿಯಲ್ಲ ರಾಮನಗರ, ಎಸ್ಪಿಗೆ ಶಿಸ್ತು ಕಲಿಯಲು ಹೇಳು – ಡಿಕೆ ಸುರೇಶ್ ಗರಂ

    ಇದು ಸಿಟಿಯಲ್ಲ ರಾಮನಗರ, ಎಸ್ಪಿಗೆ ಶಿಸ್ತು ಕಲಿಯಲು ಹೇಳು – ಡಿಕೆ ಸುರೇಶ್ ಗರಂ

    ರಾಮನಗರ: ಇದು ಸಿಟಿಯಲ್ಲ ರಾಮನಗರ ಜಿಲ್ಲೆ ನೆನಪಿರಲಿ ಎಸ್ಪಿಗೆ ಶಿಸ್ತು ಕಲಿಯಲು ಹೇಳು ಎಂದು ಸಂಸದ ಡಿಕೆ ಸುರೇಶ್ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.

    ಎಲ್ಲಿ ನಿಮ್ ಎಸ್ಪಿ, ಇದು ಬೇರೆ ತರಹ ಅಲ್ಲ ನಿಮ್ ಎಸ್ಪಿಗೆ ಹೇಳಿ. ಯಶವಂತಪುರಕ್ಕೆ ಏನ್ ಡ್ಯೂಟಿಗೆ ಹೋಗಿದ್ದಾರಾ ಬಂದೋಬಸ್ತ್‍ಗೆ ಹೋಗಿದ್ದಾರಾ? ಎಲೆಕ್ಷನ್ ಅದರ ಪಾಡಿಗೆ ನಡೆಯುತ್ತೆ ಮೀಟಿಂಗ್ ಇದೆ ಬರಬೇಕು. ಇದು ರಾಮನಗರ ಜಿಲ್ಲೆ ಅಂತಾ ಹೇಳಿ. ಬೇರೆ ಎಲ್ಲ ಮಾತನಾಡೋಕೆ ಆಗುತ್ತೆ ಮೀಟಿಂಗ್ ಅಟೆಂಡ್ ಮಾಡೋಕೆ ಆಗಲ್ವಾ ಎಂದು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಮೇಲೆ ಡಿಕೆ ಸುರೇಶ್ ಕಿಡಿಕಾರಿದ್ರು.

    ನಿಮ್ ಎಸ್ಪಿಗೆ ಹೇಳು ಶಿಸ್ತು ಕಲಿತ್ಕೋಳಿ ಅಂತಾ ಗೊತ್ತಾಯ್ತಾ. ಇದು ಬೆಂಗಳೂರು ಸಿಟಿ ಅಲ್ಲ ರಾಮನಗರ ಜಿಲ್ಲೆ ನೆನಪಿರಲಿ. ಪೊಲೀಸ್ ಇಲಾಖೆನಲ್ಲಿ ಕೆಲಸ ಮಾಡ್ತಿರೋದು ಡಿಸಿಪ್ಲೈನ್ ಕಲಿತುಕೊಳ್ಳೋಕೆ ಹೇಳು. ಉಳಿದಿದ್ದನ್ನು ಅಮೇಲೆ ಮಾತನಾಡುತ್ತೇನೆ. ನಾನ್ ಹೇಳ್ದೆ ಎಂದು ನಿಮ್ ಎಸ್ಪಿಗೆ ಹೇಳಿ ಎಂದು ರಾಮನಗರ ಟೌನ್ ಸಬ್ ಇನ್ಸ್ ಪೆಕ್ಟರ್ ಹೇಮಂತ್ ಗೆ ಹೇಳಿದ ಸಂಸದ ಡಿಕೆ ಸುರೇಶ್ ಸೂಚಿಸಿದ್ದಾರೆ.

    ಜಿಲ್ಲೆಗೆ ಬಂದಿರುವ ಅಧಿಕಾರಿಗಳೆಲ್ಲ ಇಲ್ಲಿ ಕೆಲಸ ಮಾಡ್ಕೊಂಡು ಇರಬೇಕು, ನಾನು ಅಷ್ಟು ದುಡ್ಡು ಇಷ್ಟು ದುಡ್ಡು ಕೊಟ್ಟು ಬಂದಿದ್ದೀನಿ ಅನ್ನೋದಲ್ಲ. ಕೆಲಸ ಮಾಡೋಕೆ ಬಂದಿದ್ದೀರಿ ಕೆಲಸ ಮಾಡ್ಕೊಂಡು ಹೋಗಬೇಕು ಅಷ್ಟೇ. ಹೊಸದಾಗಿ ಜಿಲ್ಲೆಗೆ ಬಂದಿರುವವರು ತಮ್ಮ ಪರಿಚಯ ಮಾಡಿಕೊಳ್ಳಿ ಎಂದು ಡಿಸಿಯಿಂದ ಹಿಡಿದು ಸಿಇಓ ಸೇರಿದಂತೆ ಹೊಸದಾಗಿ ಬಂದಿರುವ ಇಲಾಖೆಯ ಅಧಿಕಾರಿಗಳಿಗೆ ಸರೇಶ್ ಅವರು ಹೇಳಿದ್ದಾರೆ.

    ಒಬ್ಬೊಬ್ಬರಾಗಿ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸಾರ್ವಜನಿಕ ಕೆಲಸ ಮಾತ್ರ ಮಾಡಬೇಕು. ಬೇರೆ ರೀತಿಯಲ್ಲಿ ಪಕ್ಷದವರು ಹೇಳಿದರು, ಮುಖಂಡರು, ಕಾರ್ಯಕರ್ತರು ಹೇಳೋದಲ್ಲ ಇಲ್ಲಿ ನಡೆಯಲ್ಲ. ಇಲ್ಲಿ ಅಗಲ್ಲ ಅನ್ನೋರು ಜಾಗ ಖಾಲಿ ಮಾಡ್ಕೊಂಡು ಹೋಗಿ ಎಂದು ಡಿಕೆ ಸುರೇಶ್ ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.

  • ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ, ಎಸ್‍ಪಿಯಿಂದ ಕೆರೆ ಸ್ವಚ್ಛತೆ

    ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ, ಎಸ್‍ಪಿಯಿಂದ ಕೆರೆ ಸ್ವಚ್ಛತೆ

    ದಾವಣಗೆರೆ: ಇಂದು ಬೆಳ್ಳಂಬೆಳಗ್ಗೆ ಜಿಲ್ಲಾಡಳಿತದ ವತಿಯಿಂದ ದಾವಣಗೆರೆಯ ಕುಂದುವಾಡ ಕೆರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

    ನಮ್ಮ ಕೆರೆ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಸಿದ್ದು, ಬೆಳಗ್ಗೆ 6 ಗಂಟೆಯಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‍ಪಿ ಹನುಮಂತರಾಯ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಿಸಿದ್ದು, ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಹಾಗೂ ಎಸ್.ಪಿ ಹನುಮಂತರಾಯ ಕೂಡ ಸ್ವತಃ ಕೆರೆಯ ಏರಿ ಮೇಲಿರುವ ಕಳೆಯನ್ನು ತೆಗೆದು ಸ್ವಚ್ಚಗೊಳಿಸಿದರು. ಪ್ರತಿನಿತ್ಯ ಸಾರ್ವಜನಿಕರು ಕೆರೆಯ ವಾತವರಣದಲ್ಲಿ ವಾಕಿಂಗ್ ಮಾಡುವಾಗ ಕೆಲ ಕಾಲ ಸ್ವಚ್ಛತೆ ಮಾಡಿದರೆ ಇಡೀ ನಗರವನ್ನೇ ಶುಚಿಯಾಗಿಡಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • ಚಂದನ್ ಶೆಟ್ಟಿಗೆ ಬ್ಯಾನ್ ವಾರ್ನಿಂಗ್ ಕೊಟ್ಟ ಎಸ್ಪಿ

    ಚಂದನ್ ಶೆಟ್ಟಿಗೆ ಬ್ಯಾನ್ ವಾರ್ನಿಂಗ್ ಕೊಟ್ಟ ಎಸ್ಪಿ

    ಮೈಸೂರು: ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿದ ಪ್ರಕರಣದ ಬಗ್ಗೆ ಎಸ್‌ಪಿ ರಿಷ್ಯಂತ್ ಚಂದನ್ ಶೆಟ್ಟಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಎಸ್‌ಪಿ ಅವರು, ಈ ರೀತಿ ವರ್ತನೆ ಮರುಕಳಿಸಿದರೆ ಸರ್ಕಾರಿ ಕಾರ್ಯಕ್ರಮದಿಂದ ನಿಮ್ಮನ್ನು ಬ್ಯಾನ್ ಮಾಡುತ್ತೇವೆ ಎಂದು ಚಂದನ್ ಶೆಟ್ಟಿಗೆ ಎಚ್ಚರಿಕೆ ನೀಡಿದ್ದೇವೆ. ಈ ಸಂಬಂಧ ಗಂಭೀರವಲ್ಲದ ಅಪರಾಧ(ಎನ್‌ಸಿ) ಕೂಡ ಮಾಡಲಾಗಿದೆ, ಅದು ಕೂಡ ವಿಚಾರಣೆ ನಡೆಯುತ್ತದೆ. ಚಂದನ್ ಶೆಟ್ಟಿ ಮಾತ್ರವಲ್ಲ ಸರ್ಕಾರಿ ವೇದಿಕೆಯನ್ನು ಖಾಸಗಿ ಕ್ಷಣಕ್ಕೆ ಬಳಸಿಕೊಳ್ಳುವ ಎಲ್ಲಾ ಕಲಾವಿದರಿಗೂ ಈ ಎಚ್ಚರಿಕೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಚಂದನ್- ನಿವೇದಿತಾ ಅದ್ಧೂರಿ ನಿಶ್ಚಿತಾರ್ಥ

    ಚಂದನ್ ಪ್ರಪೋಸ್ ಪ್ರಕರಣದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ವಿಚಾರ ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ. ಅವರು ಎಲ್ಲವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.

    ನಾನು ಯಾವುದೇ ಕೆಟ್ಟ ಉದ್ದೇಶದಿಂದ ಆ ರೀತಿ ಮಾಡಿಲ್ಲ. ವೇದಿಕೆಯಲ್ಲಿ ನಾನು ಮದುವೆ ಅಥವಾ ಎಂಗೆಜ್‌ಮೆಂಟ್ ಆಗಿಲ್ಲ. ವೇದಿಕೆ ಮೇಲೆ ಜನರ ಮುಂದೆ ನಿವೇದಿತಾ ಅವರ ಗಮನ ಸೆಳೆಯಲು ಪ್ರಪೋಸ್ ಮಾಡಿದೆ. ಅದರಲ್ಲಿ ಬೇರೆ ಉದ್ದೇಶ ಇರಲಿಲ್ಲ. ಜನರು ಕೂಡ ಆರ್ಕಷಿತರಾಗುತ್ತಾರೆ ಎಂದು ಈ ರೀತಿ ನಡೆದುಕೊಂಡೆ ಎಂದು ಚಂದನ್ ವಿವರಣೆ ನೀಡಿದ್ದಾರೆ. ಎಂದು ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ:ಟೀಕಾಕಾರರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

    ನಡೆದಿದ್ದೇನು?
    ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾರಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು, ಅಲ್ಲದೇ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದ್ದರು. ಇದನ್ನೂ ಓದಿ:ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

    ಈ ಬೆನ್ನಲ್ಲೇ ಪ್ರಪೋಸ್ ಮಾಡಿರುವ ವಿಚಾರ ಭಾರೀ ವಿವಾದಕ್ಕೀಡಾಯಿತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದ್ದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಅಂದಿದ್ದರು. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದರು.

    ಆದರೆ ಮೈಸೂರಿನ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮೇಲೆ ದೂರು ದಾಖಲು ಮಾಡಿದ್ದರು. ಸರ್ಕಾರಿ ವೇದಿಕೆ ದುರ್ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ಕುರಿತು ಚಂದನ್ ಮೇಲೆ ಕೇಸಾದರೆ, ನಿವೇದಿತಾರಿಂದ ಅತಿಕ್ರಮ ಪ್ರವೇಶ, ಸಂಚುರೂಪಿಸಿ ಪ್ರಚಾರ ಪಡೆದ ಆರೋಪಗಳ ಮೇಲೆ ದೂರು ದಾಖಲು ಮಾಡಲಾಗಿತ್ತು. ಇದನ್ನೂ ಓದಿ:ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ

    ಸರ್ಕಾರಿ ಕಾರ್ಯಕ್ರಮವನ್ನು ತಪ್ಪಾಗಿ ಬಳಸಿಕೊಂಡಿದ್ದಕ್ಕೆ ಚಂದನ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋಸಿನ್ ಖಾನ್ ಆಗ್ರಹಿಸಿದ್ದರು. ಮೈಸೂರು ಯೂತ್ ಕಾಂಗ್ರೆಸ್, ಕರ್ನಾಟಕ ಪ್ರಜಾಪಾರ್ಟಿ, ಸಾಮಾಜಿಕ ಹೋರಾಟಗಾರ ಗಂಗರಾಜುರಿಂದ ದೂರುಗಳು ದಾಖಲಾಗಿದ್ದು, ಚಂದನ್ ಶೆಟ್ಟಿ, ನಿವೇದಿತಾ ಮೇಲೆ ದೂರುಗಳ ಸಂಖ್ಯೆ ಹೆಚ್ಚಾಗಿತ್ತು.

  • ಉತ್ತರ ಪ್ರದೇಶ ಉಪಚುನಾವಣಾ ಫಲಿತಾಂಶ – ಕಮಲ ಕಿಲಕಿಲ

    ಉತ್ತರ ಪ್ರದೇಶ ಉಪಚುನಾವಣಾ ಫಲಿತಾಂಶ – ಕಮಲ ಕಿಲಕಿಲ

    -11ರಲ್ಲಿ ಬಿಎಸ್‍ಪಿ, ಕಾಂಗ್ರೆಸ್ ಶೂನ್ಯ

    ಲಕ್ನೋ: ಈ ಬಾರಿಯ ಉಪಚುನಾವಣೆ ಆಡಳಿತಾ ರೂಢ ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿತ್ತು. ಇತ್ತ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಾರ್ಟಿ (ಎಸ್‍ಪಿ) ಮತ್ತು ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ಗೆ 2022ರ ಚುನಾವಣೆಗೆ ದಿಕ್ಸೂಚಿಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ನಾನಾ ಕಾರಣಗಳಿಂದ ತೆರವಾದ ಉತ್ತರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಹೊರ ಬಂದಿದ್ದು, 11 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.

    ಒಟ್ಟು 11 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. 7 ಬಿಜೆಪಿ, ಮೂರರಲ್ಲಿ ಸಮಾಜವಾದಿ ಪಾರ್ಟಿ ಮತ್ತು ಒಂದರಲ್ಲಿ ಅಪನಾ ದಳ ಗೆಲುವಿನ ನಗೆ ಬೀರಿದೆ. ಬಿಎಸ್‍ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

    ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಪ್ನಾ ದಳದೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದು, ಉತ್ತರ ಪ್ರದೇಶದ ಮಿಂಚಿನಂತೆ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಮುಖಭಂಗವಾಗಿದೆ. ಆಡಳಿತರೂಢ ಬಿಜೆಪಿ ಸರ್ಕಾರದ ಪ್ರಬಲ ಪೈಪೋಟಿಯ ನಡುವೆ ಪ್ರಾದೇಶಿಕ ಪಕ್ಷಗಳಾದ ಎಸ್‍ಪಿ ಮತ್ತು ಬಿಎಸ್‍ಪಿ ನೆಮ್ಮದಿಯ ಉಸಿರು ಬಿಡುವಂತಾಗಿದೆ. 11ರಲ್ಲಿ 8 ಕ್ಷೇತ್ರಗಳಲ್ಲಿ ಈ ಹಿಂದೆ ಬಿಜೆಪಿ ಶಾಸಕರಿದ್ದರು. ಎರಡರಲ್ಲಿ ಬಿಎಸ್‍ಪಿ, ಎಸ್‍ಪಿ ಮತ್ತು ಅಕಾಲಿದಳ ಒಂದರಲ್ಲಿತ್ತು.

    1. ಗಂಗೋಹ: ಗೆಲುವು-ಬಿಜೆಪಿ
    ಬಿಜೆಪಿ: ಕೀರ್ತನಪಾಲ್ ಸಿಂಗ್
    ಎಸ್‍ಪಿ: ಇಂದ್ರಸೇನ್
    ಬಿಎಸ್‍ಪಿ: ಇರ್ಶಾದ್ ಚೌಧರಿ
    ಕಾಂಗ್ರೆಸ್: ನೋಮಾನ್ ಮಸೂದ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು.

    2. ರಾಮಪುರ: ಗೆಲುವು- ಎಸ್‍ಪಿ
    ಬಿಜೆಪಿ: ಭಾರತ್ ಭೂಷಣ್ ಗುಪ್ತಾ
    ಎಸ್‍ಪಿ: ಡಾ.ತಂಜೀನ್ ಫಾತೀಮಾ
    ಬಿಎಸ್‍ಪಿ: ಜುಬೇರ್ ಮಸೂದ್ ಖಾನ್
    ಕಾಂಗ್ರೆಸ್: ಅರ್ಷದ್ ಅಲಿ ಖಾನ್
    ಈ ಹಿಂದೆ ಎಸ್‍ಪಿ ಗೆಲುವು ಕಂಡಿತ್ತು

    3. ಇಗ್ಲಾಸ್: ಗೆಲುವು-ಬಿಜೆಪಿ
    ಬಿಜೆಪಿ: ರಾಜಕುಮಾರ್ ಸಹಯೋಗಿ
    ಎಸ್‍ಪಿ: ಸುಮನ್ ದಿವಾಕರ್ (ರಾಷ್ಟ್ರೀಯ ಲೋಕದಳ)
    ಬಿಎಸ್‍ಪಿ: ಅಕ್ಷಯ್ ಕುಮಾರ್
    ಕಾಂಗ್ರೆಸ್: ಉಮೇಶ್ ಕುಮಾರ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    4. ಲಖ್ನೌ ಕೈಂಟ್: ಗೆಲುವು-ಬಿಜೆಪಿ
    ಬಿಜೆಪಿ: ಸುರೇಶ್ ತಿವಾರಿ
    ಎಸ್‍ಪಿ: ಮೇಜರ್ ಆಶೀಷ್ ಚತುರ್ವೇದಿ
    ಬಿಎಸ್‍ಪಿ: ಅರುಣ್ ದ್ವಿವೇದಿ
    ಕಾಂಗ್ರೆಸ್: ದಿಲ್‍ಪ್ರೀತ್ ಸಿಂಗ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    5. ಗೋವಿಂದನಗರ: ಗೆಲುವು-ಬಿಜೆಪಿ
    ಬಿಜೆಪಿ: ಸುರೇಂದ್ರ ಮೈಥಾನಿ
    ಎಸ್‍ಪಿ: ಸಾಮ್ರಾಟ್ ವಿಕಾಸ್
    ಬಿಎಸ್‍ಪಿ: ದೇವಿ ಪ್ರಸಾದ್ ತಿವಾರಿ
    ಕಾಂಗ್ರೆಸ್: ಕರಿಶ್ಮಾ ಠಾಕೂರ್
    ಈ ಹಿಂದೆ ಬಿಜೆಪಿ ಅಧಿಕಾರದಲ್ಲಿತ್ತು

    6. ಮಾನಿಕಪುರ: ಗೆಲುವು-ಬಿಜೆಪಿ
    ಬಿಜೆಪಿ: ಆನಂದ ಶುಕ್ಲಾ
    ಎಸ್‍ಪಿ: ನಿರ್ಭಯ್ ಸಿಂಗ್ ಪಟೇಲ್
    ಬಿಎಸ್‍ಪಿ: ರಾಜನಾರಾಯಣ್
    ಕಾಂಗ್ರೆಸ್: ರಂಹನಾ ಪಾಂಡೆ
    ಈ ಹಿಂದೆ ಬಿಜೆಪಿ ಇತ್ತು

    7. ಜೋಧಪುರ: ಗೆಲುವು-ಎಸ್‍ಪಿ
    ಬಿಜೆಪಿ: ಅಂಬರೀಶ್ ರಾವತ್
    ಎಸ್‍ಪಿ: ಗೌರವ್ ಕುಮಾರ್ ರಾವತ್
    ಬಿಎಸ್‍ಪಿ: ಅಖಿಲೇಶ್ ಕುಮಾರ್ ಅಂಬೇಡ್ಕರ್
    ಕಾಂಗ್ರೆಸ್: ತನುಜ್ ಪುನಿಯಾ
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    8. ಜಲಾಲ್ಪುರ: ಗೆಲುವು-ಎಸ್‍ಪಿ
    ಬಿಜೆಪಿ: ರಾಜೇಶ್ ಸಿಂಗ್
    ಎಸ್‍ಪಿ: ಸುಭಾಷ್ ರಾಯ್
    ಬಿಎಸ್‍ಪಿ: ಡಾ.ಛಾಯಾ ವರ್ಮಾ
    ಕಾಂಗ್ರೆಸ್: ಸುನಿಲ್ ಮಿಶ್ರಾ
    ಈ ಹಿಂದೆ ಬಿಎಸ್‍ಪಿ ಗೆಲುವು ಕಂಡಿತ್ತು

    8. ಬಾಲ್ಹಾ: ಗೆಲುವು-ಬಿಜೆಪಿ
    ಬಿಜೆಪಿ: ಸರೋಜ್ ಸೋನಕರ್
    ಎಸ್‍ಪಿ: ಕಿರಣ್ ಭಾರತಿ
    ಬಿಎಸ್‍ಪಿ: ರಮೇಶ್ ಚಂದ್ರ
    ಕಾಂಗ್ರೆಸ್: ಮನ್ನಾ ದೇವಿ
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    9. ಘೋಸಿ: ಗೆಲುವು: ಬಿಜೆಪಿ
    ಬಿಜೆಪಿ: ವಿಜಯ್ ರಾಜಭರ್
    ಎಸ್‍ಪಿ: ಸುಧಾಕರ್ ಸಿಂಗ್
    ಬಿಎಸ್‍ಪಿ: ಅಬ್ದುಲ್ ಕಯೂಮ್
    ಕಾಂಗ್ರೆಸ್: ರಾಜಮಂಗಲ್ ಯಾದವ್
    ಈ ಹಿಂದೆ ಬಿಜೆಪಿ ಗೆಲುವು ಕಂಡಿತ್ತು

    10. ಪ್ರತಾಪ್‍ಗಢ: ಗೆಲುವು; ಅಪನಾ ದಳ
    ಬಿಜೆಪಿ: ರಾಜಕುಮಾರ್ ಪಾಲ್ (ಅಪನಾ ದಳ)
    ಎಸ್‍ಪಿ: ಬೃಜೇಶ್ ಸಿಂಗ್ ಪಟೇಲ್
    ಬಿಎಸ್‍ಪಿ: ರಂಜಿತ್ ಸಿಂಗ್ ಪಟೇಲ್
    ಕಾಂಗ್ರೆಸ್: ನೀರಜ್ ತ್ರಿಪಾಠಿ
    ಈ ಹಿಂದೆ ಅಪನಾ ದಳ ಗೆಲುವು ಕಂಡಿತ್ತು

  • ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

    ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

    ಯಾದಗಿರಿ: ನಗರ ಠಾಣೆ ಪಿಎಸ್‍ಐ ಬಾಪುಗೌಡ ಅಮಾನತಿಗೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಪೊಲೀಸ್ ಇಲಾಖೆ ಮತ್ತು ರಾಜಕಾರಣಿಗಳ ತಿಕ್ಕಾಟದ ಸ್ವರೂಪ ಪಡೆದುಕೊಂಡಿದೆ.

    ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಗೆ ಮಣಿದು ಎಸ್.ಪಿ ಋಷಿಕೇಶ್ ಭಗವಾನ್ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡಲು ನಿರ್ಧರಿಸುತ್ತಿದ್ದಂತೆ ಜಿಲ್ಲಾ ಪೋಲಿಸ್ ಇಲಾಖೆ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಎಸ್‍ಐ ಅಮಾನತು ಮಾಡಿದರೆ ಸಾಮೂಹಿಕವಾಗಿ ನಮ್ಮನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದಿರುವ ನಗರ ಠಾಣೆಯ ಸುಮಾರು 69 ಸಿಬ್ಬಂದಿ ಎಸ್ಪಿಗೆ ಒತ್ತಡ ಹಾಕಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಇತ್ತ ಜೆಡಿಎಸ್ ಕಾರ್ಯಕರ್ತರಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ. ಜೆಡಿಎಸ್ ಕಾರ್ಯಕರ್ತರ ಮನವೊಲಿಸಲು ಸ್ವತಃ ಈಶಾನ್ಯ ವಲಯದ ಐಜಿಪಿ ಮನೀಶ್ ಅವರು, ಮಧ್ಯರಾತ್ರಿ 2 ಗಂಟೆಯವರೆಗೂ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಒಂದು ಕಡೆ ರಾಜಕೀಯ ಒತ್ತಡ ಮತ್ತೊಂದು ಕಡೆ ಸಿಬ್ಬಂದಿಗಳ ಒತ್ತಡ ಎಸ್‍ಪಿ ಋಷಿಕೇಶ್ ಭಗವಾನ್ ಅವರಿಗೆ ನುಂಗಲಾರದ ತುಪ್ಪದಂತಾಗಿದೆ.

    ತಮ್ಮ ಬೇಡಿಕೆ ಈಡೇರದ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲವೆಂದು ಜೆಡಿಎಸ್ ಕಾರ್ಯಕರ್ತರರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಾಳೆಯಿಂದ ಉಗ್ರ ರೂಪದ ಹೋರಾಟದ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದು, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈ ಪ್ರತಿಭಟನೆಗೆ ಸಾಥ್ ನೀಡುವ ಸಾಧ್ಯತೆಯಿದೆ.

    ಪ್ರತಿಭಟನೆಗೆ ಕಾರಣವೇನು?
    ಜೆಡಿಎಸ್ ಕಾರ್ಯಕರ್ತ ಮಾರ್ತಾಂಡ ಅವರಿಗೆ ಪಿಎಸ್‍ಐ ಬಾಪುಗೌಡರಿಂದ ಎನ್‍ಕೌಂಟರ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಯಾದಗಿರಿ ನಗರ ಪೊಲೀಸ್ ಠಾಣೆ ಎದುರು ಏಕಾಏಕಿ ಪ್ರತಿಭಟನೆ ಶುರು ಮಾಡಿದ್ದಾರೆ. ಸಿಎಂ ಬಿಎಸ್‍ವೈ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ ಮಾರ್ತಾಂಡ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶರಣನಗೌಡ ಕಂದಕೂರ ಪಾತ್ರವಿದೆ ಎಂದು ಸುಳ್ಳು ಸಾಕ್ಷಿ ಹೇಳಲು ಪಿಎಸ್‍ಐ ಬಾಪುಗೌಡ ಮಾರ್ತಾಂಡ ಅವರಿಗೆ ಬಲವಂತ ಮಾಡಿದ್ದಾರೆ. ಮಾರ್ತಾಂಡ ಮೇಲೆ ಕಾನೂನು ಬಾಹಿರವಾಗಿ ಕ್ರಮಕ್ಕೆ ಪಿಎಸ್‍ಐ ಮುಂದಾಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯುತ್ತಿದೆ.

  • ಧಾರವಾಡದಲ್ಲಿ ಎಸ್‍ಪಿಗಳ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟ

    ಧಾರವಾಡದಲ್ಲಿ ಎಸ್‍ಪಿಗಳ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟ

    ಧಾರವಾಡ: ಅಧಿಕಾರ, ಕುರ್ಚಿಗಾಗಿ ರಾಜಕಾರಣಿಗಳ ಮಧ್ಯೆ ಕಚ್ಚಾಟ ನಡೆಯುವುದು ಸಾಮಾನ್ಯ. ಆದರೆ ಪೊಲೀಸ್ ಇಲಾಖೆಯಂತಹ ಶಿಸ್ತು ಬದ್ಧ ಅಧಿಕಾರಿಗಳು ಸಹ ಸ್ಥಾನಮಾನದ ಕುರಿತು ಗಲಾಟೆ ಮಾಡಿಕೊಳ್ಳುವ ಮೂಲಕ ಮುಜುಗರಕ್ಕೀಡಾಗಿದ್ದಾರೆ.

    ಧಾರವಾಡ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಶಾಲೆ ವಿವಾದದ ಕೇಂದ್ರವಾಗಿದ್ದು, ಹೊಸದಾಗಿ ವರ್ಗವಾಗಿ ಬಂದಿರುವ ಅಧೀಕ್ಷಕರು ಅಧಿಕಾರ ಪಡೆಯಲು ಎರಡು ದಿನದಿಂದ ಹಠ ಹಿಡಿದು ಕುಳಿತಿದ್ದಾರೆ. ಇನ್ನೊಂದೆಡೆ ಪ್ರಸ್ತುತ ಎಸ್‍ಪಿ ಮಾತ್ರ ಕುರ್ಚಿ ಬಿಟ್ಟು ಏಳುತ್ತಿಲ್ಲ. ಸದಾ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗಿರುವ ಈ ಶಾಲೆಯ ಹಾಲಿ ಅಧೀಕ್ಷಕ ಆರ್.ಎ. ಪಾರಶೆಟ್ಟಿಯೇ ಈಗ ಮತ್ತೊಂದು ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.

    ಇವರ ಜಾಗಕ್ಕೆ ವಿಜಯಪುರದಿಂದ ಎನ್.ಬಿ.ಜಾಧವ್ ಎಂಬವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರನ್ವಯ ಅವರು ಆದೇಶ ಪ್ರತಿ ಹಿಡಿದು ಬಂದಿದ್ದಾರೆ. ಆದರೆ ಪಾರಶೆಟ್ಟಿಯವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಜಾಧವ್ ಅವರು ನನಗೆ ನ್ಯಾಯ ದೊರಕಿಸಿಕೊಡಿ ಎಂದು ಗೋಳಿಡುತ್ತಿದ್ದಾರೆ.

    ಒಂದೆಡೆ ಪಾರಶೆಟ್ಟಿ ತಮ್ಮ ಚೇಂಬರ್ ಬೀಗ ಹಾಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಕಾಯುತ್ತ ನಿಂತಿದ್ದ ಜಾಧವ್ ಅವರು, ಪಾರಶೆಟ್ಟಿ ಬಂದು ಚೇಂಬರ್ ಬಾಗಿಲು ತೆರೆಯುತ್ತಿದ್ದಂತೆ ತಾವೂ ಒಳ ಪ್ರವೇಶಿಸಿ, ಅಧಿಕಾರ ಬಿಟ್ಟು ಕೊಡಿ ಎಂದಿದ್ದಾರೆ. ಆಗ ಪಾರಶೆಟ್ಟಿಯವರು ನಾನು ಗೃಹ ಸಚಿವರನ್ನು ಭೇಟಿಯಾಗಿ ಬಂದಿರುವೆ. ನೀವು ಬರುವ ಮುಂಚೆಯೇ ನಾನು ನಿವೃತ್ತಿಯಂಚಿನಲ್ಲಿರುವ ಕಾರಣ ವರ್ಗಾವಣೆ ಮಾಡಬೇಡಿ ಎಂದು ಇಲಾಖೆಗೆ ಮನವಿ ಮಾಡಿಕೊಂಡಿದ್ದೇನೆ. ಈಗ ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆ ಕೂಡ ತರುತ್ತೇನೆ. ಹೀಗಾಗಿ ಈಗ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದರು.

    ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿಯೂ ನಡೆದಿದೆ. ಎಸ್ಪಿ ದರ್ಜೆಯ ಅಧಿಕಾರಿಗಳ ಮಧ್ಯೆ ನಡೆದಿರುವ ಕುರ್ಚಿ ಸಮರ ತರಬೇತಿ ಶಾಲೆ ಆವರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಕಮಲ ಮ್ಯಾಜಿಕ್ ವಿಡಿಯೋ – ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಧ್ವಜ ಬಿಜೆಪಿ ಧ್ವಜವಾಗಿ ಪರಿವರ್ತನೆ

    ಕಮಲ ಮ್ಯಾಜಿಕ್ ವಿಡಿಯೋ – ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಧ್ವಜ ಬಿಜೆಪಿ ಧ್ವಜವಾಗಿ ಪರಿವರ್ತನೆ

    ಲಕ್ನೋ: ಪಕ್ಷದ ಪರವಾಗಿ ನಾಯಕರು ಭಿನ್ನ ಭಿನ್ನ ಪ್ರಚಾರ ನಡೆಸುವುದು ನೀವು ನೋಡಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರೊಬ್ಬರು ಪಕ್ಷದ ಪ್ರಚಾರ ಸಭೆಯಲ್ಲಿ ಮ್ಯಾಜಿಕ್ ಮಾಡಿ ಸುದ್ದಿಯಾಗಿದ್ದಾರೆ.

    ರಾಂಪುರದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅಜಯ್ ದಿವಾಕರ್ ಅವರು ಬಿಎಸ್‍ಪಿ, ಎಸ್‍ಪಿ, ಕಾಂಗ್ರೆಸ್ ಧ್ವಜವನ್ನು ಬಿಜೆಪಿ ಧ್ವಜವನ್ನಾಗಿ ಪರಿವರ್ತಿಸಿ ಮ್ಯಾಜಿಕ್ ಮಾಡಿದ್ದಾರೆ.

    ಆರಂಭದಲ್ಲಿ ವೇದಿಕೆಯ ಮೇಲೆ ಬಂದ ಅಜಯ್ ದಿವಾಕರ್ ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷ, ಬಿಜೆಪಿ ಧ್ವಜವನ್ನು ಎತ್ತಿ ತೋರಿಸುತ್ತಾರೆ. ನಂತರ ವೇದಿಕೆ ಮೇಲೆ ಕುಳಿತ ನಾಯಕರ ಬಳಿ ಈ ಧ್ವಜವನ್ನು ಪರಿಶೀಲಿಸುವಂತೆ ಹೇಳುತ್ತಾರೆ. ಆ ವ್ಯಕ್ತಿ ಕೈಯಲ್ಲಿರುವ ಧ್ವಜವನ್ನು ಪರಿಶೀಲಿಸುತ್ತಾರೆ.

    ಇದಾದ ಬಳಿಕ ಅಜಯ್ ದಿವಾಕರ್ ಎಲ್ಲ ಧ್ವಜಗಳನ್ನು ಒಟ್ಟಿಗೆ ಸೇರಿಸಿ ಗಂಟು ಹಾಕುತ್ತಾರೆ. ಮೂರು ಗಂಟು ಹಾಕಿದ ನಂತರ ಬಿಜೆಪಿಯ ಧ್ವಜದಿಂದ ಎಲ್ಲವನ್ನು ಮುಚ್ಚುತ್ತಾರೆ. ನಂತರ ಕೈಯನ್ನು ಮೂರು ನಾಲ್ಕುಬಾರಿ ಮೇಲೆ ಮಾಡಿ ಬಿಡಿಸಿದಾಗ ಬಿಜೆಪಿಯ ಒಂದೇ ಧ್ವಜವನ್ನು ಪ್ರದರ್ಶಿಸುತ್ತಾರೆ. ಧ್ವಜದ ಹಿಂಭಾಗ ಮತ್ತು ಮುಂಭಾಗವನ್ನು ತೋರಿಸಿ ನೋಡಿ ನನ್ನ ಬಳಿ ಒಂದೇ ಧ್ವಜ ಇರುವುದು ಎಂದು ಎಂದು ಹೇಳುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

  • ರಕ್ತದಾನ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ರಾಯಚೂರು ಎಸ್‍ಪಿ

    ರಕ್ತದಾನ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ರಾಯಚೂರು ಎಸ್‍ಪಿ

    ರಾಯಚೂರು: ರಕ್ತದಾನ ಮಾಡುವ ಮೂಲಕ ರಾಯಚೂರು ಎಸ್‍ಪಿ ಡಾ.ವೇದಮೂರ್ತಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

    ಜಿಲ್ಲಾ ಪೊಲೀಸ್ ಭವನದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ಈ ವೇಳೆ ನೂರಾರು ಜನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.

    48ನೇ ಹುಟ್ಟು ಹಬ್ಬ ಆಚರಿಸಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ನನ್ನ ಹುಟ್ಟುಹಬ್ಬ ಕೇವಲ ನೆಪ ಮಾತ್ರ, ರಕ್ತದಾನ ಮಹಾದಾನ ಎಂದು ಹೇಳಿದರು. ಭಾರತೀಯ ವೈದ್ಯಕೀಯ ಸಂಘ, ರಿಮ್ಸ್ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್‍ಪಿ ಹುಟ್ಟು ಹಬ್ಬ ನಿಮಿತ್ತ ರಕ್ತದಾನ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಗಳು ಖುಷಿ ವ್ಯಕ್ತಪಡಿಸಿದರು.

  • ರಾಜ್ಯದ ಮೇಲೆ ಉಗ್ರರ ಕಣ್ಣು- ನಂದಿಗಿರಿಯಲ್ಲಿ ಎಕೆ 47 ಹಿಡಿದು ಪೊಲೀಸರ ತಾಲೀಮು

    ರಾಜ್ಯದ ಮೇಲೆ ಉಗ್ರರ ಕಣ್ಣು- ನಂದಿಗಿರಿಯಲ್ಲಿ ಎಕೆ 47 ಹಿಡಿದು ಪೊಲೀಸರ ತಾಲೀಮು

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಎಕೆ 47 ರೈಫಲ್ ಗಳನ್ನು ಹಿಡಿದು ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಹಾಗೂ ಯುದ್ಧತಂತ್ರ ಪಡೆಯ ವಿಶೇಷ ಪೊಲೀಸ್ ತಂಡ ನಂದಿಗಿರಿಧಾಮದಲ್ಲಿ ತಾಲೀಮು ನಡೆಸಿದೆ.

    ನಂದಿಗಿರಿಧಾಮದ ಚೆಕ್ ಪೋಸ್ಟ್ ಬಳಿ ಎಕೆ 47 ಹಾಗೂ ಇನ್ಪಾಸ್ ರೈಫಲ್ ಹಿಡಿದು 10 ಮಂದಿ ಪೊಲೀಸರ ತಂಡ ಕಾವಲು ನಡೆಸಿದ್ದು, ನಂದಿಗಿರಿಧಾಮಕ್ಕೆ ಬಂದು ಹೋಗುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇನ್ನೂ ನಂದಿಗಿರಿಧಾಮದ ಮೂಲೆ ಮೂಲೆಯಲ್ಲಿ ಅಲೆದಾಡುತ್ತಿರುವ ವಿಶೇಷ ಪೊಲೀಸ್ ಪಡೆ ಡಿ ಸ್ವಾಟ್ ತಂಡದ ಪೊಲೀಸರು ಪಹರೆ ನಡೆಸಿದ್ದಾರೆ.

    ರಾಜ್ಯದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಅಲರ್ಟ್ ಆಗಿರುವ ರಾಜ್ಯ ಗೃಹ ಇಲಾಖೆಯಿಂದ, ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ಎಸ್‍ಪಿ ಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷ ಯುದ್ಧತಂತ್ರಪಡೆ ರಚಿಸಿ ಅಲರ್ಟ್ ಆಗಿರುವಂತೆ ಸೂಚಿಸಿತ್ತು. ಹೀಗಾಗಿ ಎಚ್ಚೆತ್ತಿರುವ ಚಿಕ್ಕಬಳ್ಳಾಪುರ ಎಸ್‍ಪಿ ಸಂತೋಷ್ ಬಾಬು ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಹಾಗೂ ಯುದ್ಧ ತಂತ್ರ ಪಡೆ ರಚಿಸಿದ್ದು, ಈ ತಂಡ ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವ ಕೆಲಸ ಮಾಡುತ್ತಿದೆ.

    ಡಿ ಸ್ವಾಟ್ ತಂಡದಲ್ಲಿ ವಿಶೇಷ ತರಬೇತಿ ಪಡೆದ 10 ಮಂದಿ ಪೊಲೀಸರಿದ್ದು, ಉಗ್ರರ ದಾಳಿ, ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ನಕ್ಸಲ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಸಮೇತ ಸಜ್ಜಾಗಿ ನಿಲ್ಲುವ ಈ ಪಡೆ ಸಾರ್ವಜನಿಕರಲ್ಲಿ ಉಗ್ರರ ದಾಳಿಯ ವೇಳೆ ಮೂಡುವ ಭಯದ ವಾತಾವಾರಣವನ್ನು ಹೋಗಲಾಡಿಸಿ, ಪರಿಸ್ಥಿತಿಯನ್ನು ನಿಭಾಯಿಸಿ ಉಗ್ರರ ದಮನ ಮಾಡುವ ಕಾರ್ಯ ನಡೆಸಲಿದೆ. ಆದರೆ ಮತ್ತೊಂದೆಡೆ ನಂದಿಗಿರಿಧಾಮದಲ್ಲಿ ರೈಫಲ್ ಸಮೇತ ವಿಶೇಷ ಪೊಲೀಸ್ ಪಡೆ ಕಂಡ ಪ್ರವಾಸಿಗರು, ಪ್ರೇಮಿಗಳು ಅರೇ ಏನಾಯ್ತಪ್ಪ ಎಂದು ಬೆಚ್ಚಿಬಿದ್ದಿದ್ದಾರೆ.