Tag: Sowmya Reddy

  • ಜಯನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡ್ತೀನಿ, ಮಂತ್ರಿ ಸ್ಥಾನ ನೀಡಿದ್ರೆ ಸ್ವೀಕರಿಸಲ್ಲ: ಸೌಮ್ಯಾ ರೆಡ್ಡಿ

    ಜಯನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡ್ತೀನಿ, ಮಂತ್ರಿ ಸ್ಥಾನ ನೀಡಿದ್ರೆ ಸ್ವೀಕರಿಸಲ್ಲ: ಸೌಮ್ಯಾ ರೆಡ್ಡಿ

    ಬೆಂಗಳೂರು: ಜಯನಗರ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದೇನೆ. ಅದು ಬಿಟ್ಟು ಬೇರೆ ಯಾವುದೇ ನಿರೀಕ್ಷೆ, ಆಸೆಯಿಲ್ಲ. ಸಚಿವ ಸ್ಥಾನ ನೀಡಿದರೆ ಸ್ವೀಕರಿಸಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

    ಜಯನಗರ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಗೆಲುವು ಸಾಧಿಸಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ತುಂಬಾ ಸಮಾಜಸೇವೆ ಮಾಡಿರುವುದು ಕೂಡ ಗೆಲುವಿಗೆ ಒಂದು ಕಾರಣವಾಗಿದೆ. ಇಂದು ತಂದೆ, ಕುಟುಂಬ ಹಾಗೂ ಪ್ರತಿಯೊಬ್ಬ ಕಾರ್ಯಕರ್ತರ ಗೆಲುವಾಗಿದೆ ಅಂತ ಹೇಳಿದ್ರು.

    ರಂಜಾನ್ ತಿಂಗಳಾಗಿದ್ದರಿಂದ ಉಪವಾಸವಿದ್ರೂ ನಮ್ಮ ಮುಸ್ಲಿಂ ಬಾಂಧವರು ಕಷ್ಟಪಟ್ಟು ದುಡಿದಿದ್ದಾರೆ. ಇದು ನನ್ನ ಗೆಲುವಲ್ಲ. ಪ್ರತಿಯೊಬ್ಬರ ಗೆಲುವಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹೀಗೆ ಪ್ರತಿಯೊಬ್ಬರೂ ನನಗೆ ಬೆಂಬಲ ಸೂಚಿಸಿದ್ದಾರೆ. ನನನ್ನು ಆರಿಸಿದ್ದ ಜಯನಗರ ಮತದಾರರಿಗೆ ಧನ್ಯವಾದ ಎಂದರು.

    ಜಯನಗರದಲ್ಲಿ ನನ್ನ ಮನೆ ಮಗಳು ತರ ಪ್ರತಿಯೊಬ್ಬರೂ ನೋಡಿದ್ದಾರೆ. ಈ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕೆಂದು ಇದ್ದೇನೆ. ಅದು ಬಿಟ್ಟು ಬೇರೆ ಯಾವುದೇ ನಿರೀಕ್ಷೆ, ಆಸೆಯಿಲ್ಲ ಎಂದು ತಿಳಿಸಿದರು.

    ಪಕ್ಷಕ್ಕೆ ನಷ್ಟ: ಬಿಟಿಎಂ ಲೇ ಔಟ್ ನಲ್ಲಿ ತಂದೆ ರಾಮಲಿಂಗಾರೆಡ್ಡಿ, ಜಯನಗರದಲ್ಲಿ ನೀವು ಗೆದ್ದಿದ್ದೀರಾ ಹೀಗಾಗಿ ಪಕ್ಷ ನಿಮಗೇನಾದ್ರೂ ಸಚಿವ ಸ್ಥಾನ ನೀಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಂದೆ ಯಾವುದೇ ಲಾಬಿ ಮಾಡಿಲ್ಲ. ಸಚಿವ ಸ್ಥಾನ ಬೇಕು ಅಂತ ಕೇಳಿಲ್ಲ. ಸತತ 7 ಬಾರಿ ಜನ ಅವರನ್ನು ಆಯ್ಕೆ ಮಾಡಿದ್ದಾರೆ. ಕಷ್ಟಪಟ್ಟು ದುಡಿದಿದ್ದಾರೆ. ಒಂದು ಬಾರಿನೂ ಅವರು ಪಕ್ಷ ಬಿಟ್ಟು ಹೋಗಿಲ್ಲ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಅಂದ್ರೆ ಅದು ಪಕ್ಷಕ್ಕೆ ನಷ್ಟವಾಗುತ್ತೆ ಅಂತ ಹೇಳಿದ್ರು.

    ಸಚಿವ ಸ್ಥಾನ ನೀಡಿದ್ರೆ ನಾನು ಸ್ವೀಕರಿಸಲ್ಲ ಅಂತ ಹೇಳಿದ ಅವರು, 7 ಬಾರಿ ಆಯ್ಕೆಯಾದ ಶಾಸಕರಿಗೆ ಕೊಟ್ಟಿಲ್ಲ. ಜಯನಗರ ಜನತೆಯ ಸೇವೆ ಮಾಡುವುದು ಬಿಟ್ಟರೆ ಬೇರೆ ಯಾವುದೇ ಆಸೆಯಿಲ್ಲ ಅಂದ್ರು.

    ನಾನು ಮತ್ತು ತಂದೆ ಇಬ್ಬರೂ ಮನಗೆ ಸಚಿವ ಸ್ಥಾನ ಬೇಕು ಅಂತ ಪಟ್ಟು ಹಿಡಿದಿಲ್ಲ. ನಾಲ್ಕೈದು ಬಾರಿ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ಮಾದರಿ ವಿಧಾನಸಭೆಯನ್ನಾಗಿ ಮಾಡೋಣ ಅಂತ ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದ್ರು.

    ಯಾವ ಸುತ್ತಿನಲ್ಲಿ ಯಾರಿಗೆ ಎಷ್ಟು ಮುನ್ನಡೆ?
    * 1ನೇ ಸುತ್ತಿನ ಮತ ಎಣಿಕೆ
    ಬಿಜೆಪಿ 3,322
    ಕಾಂಗ್ರೆಸ್- 3,749

    * 2ನೇ ಸುತ್ತಿನ ಮತ ಎಣಿಕೆ
    ಬಿಜೆಪಿ – 6,453
    ಕಾಂಗ್ರೆಸ್ -6,719

    * 3ನೇಸುತ್ತಿನ ಮತ ಎಣಿಕೆ
    ಕಾಂಗ್ರೆಸ್-11,494
    ಬಿಜೆಪಿ-8,617

    * 4ನೇ ಸುತ್ತಿನ ಮತ ಎಣಿಕೆ
    ಕಾಂಗ್ರೆಸ್-16,438
    ಬಿಜೆಪಿ-11,090

    * 5ನೇ ಸುತ್ತಿನ ಮತ ಎಣಿಕೆ
    ಬಿಜೆಪಿ-16,331
    ಕಾಂಗ್ರೆಸ್-17,923

    * 6ನೇಸುತ್ತಿನ ಏಣಿಕೆ
    ಕಾಂಗ್ರೆಸ್-22,356
    ಬಿಜೆಪಿ-18,813

    * 7ನೇ ಸುತ್ತಿನ ಮತ ಎಣಿಕೆ
    ಕಾಂಗ್ರೆಸ್-27,195
    ಬಿಜೆಪಿ-19,873

    * 8ನೇ ಸುತ್ತಿನ ಮತ ಏಣಿಕೆ
    ಬಿಜೆಪಿ- 21,437
    ಕಾಂಗ್ರೆಸ್- 31,642

    * 9ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-37,288
    ಬಿಜೆಪಿ -21,994

    * 10ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-40,677
    ಬಿಜೆಪಿ -25,779

    * 11ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-43,476
    ಬಿಜೆಪಿ -30,746

    * 12ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-45,978
    ಬಿಜೆಪಿ-35,849

    * 13ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-48,584
    ಬಿಜೆಪಿ-39,970

    * 14ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-51,347
    ಬಿಜೆಪಿ-44,785

    * 15ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-54,457
    ಬಿಜೆಪಿ-49,526

    * 16ನೇ ಸುತ್ತಿನ ಮತ ಏಣಿಕೆ
    ಕಾಂಗ್ರೆಸ್-54,457
    ಬಿಜೆಪಿ-51,568

  • ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಗ್ ಫೈಟ್- ಯಾರ ಮಡಿಲಿಗೆ ‘ಜಯ’ನಗರ..?

    ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಗ್ ಫೈಟ್- ಯಾರ ಮಡಿಲಿಗೆ ‘ಜಯ’ನಗರ..?

    ಬೆಂಗಳೂರು: ಬಿಜೆಪಿಯ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು. ಈ ಕ್ಷೇತ್ರದಲ್ಲಿ ಇಂದು ಮತದಾನ ನಡೆಯಲಿದ್ದು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಜಯನಗರ ಶಾಸಕ ಬಿ.ಎನ್ ವಿಜಯ್ ಕುಮಾರ್ ಅವರಿಗೆ ವಿಧಿ ಕೊನೆಗಳಿಗೆಯಲ್ಲಿ ಕೈ ಕೊಟ್ಟಿತು. ಈ ಹಿನ್ನೆಲೆಯಲ್ಲಿ ಚುನಾವಣೆ ಜೂನ್ 11 ಕ್ಕೆ ಮುಂದೂಡಿಕೆಯಾಗಿತ್ತು. ಈ ಬಾರಿ ವಿಜಯಕುಮಾರ್ ಸಹೋದರ ಚುನಾವಣಾ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದೆ.

    19 ಅಭ್ಯರ್ಥಿಗಳು ಕಣದಲ್ಲಿರುವ ಈ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜೂನ್ 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಪ್ರಕ್ರಿಯೆ ನಡೆಯಲಿದೆ.

    ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಶೇಷತೆಗಳು
    ಒಟ್ಟು ಮತಗಟ್ಟೆಗಳು – 216
    ಪಿಂಕ್ ಮತಗಟ್ಟೆಗಳು – 05
    ಒಟ್ಟು ಮತದಾರರು – 2,03,184
    ಪುರುಷ ಮತದಾರರು – 1.02,668
    ಮಹಿಳಾ ಮತದಾರರು! -1,00,500
    ಇತರೆ – 16
    ಒಟ್ಟು ಅಭ್ಯರ್ಥಿಗಳು – 19
    ಕಾಂಗ್ರೆಸ್ ಅಭ್ಯರ್ಥಿ – ಸೌಮ್ಯ ರೆಡ್ಡಿ
    ಬಿಜೆಪಿ ಅಭ್ಯರ್ಥಿ – ಬಿ.ಎನ್ ಪ್ರಹ್ಲಾದ್

    ಒಟ್ಟಿನಲ್ಲಿ ಜಯನಗರ ಚುನಾವಣೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬ ಕುತೂಹಲ ಹುಟ್ಟಿದ್ದು, ಜೂನ್ 13 ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

  • ಜಯನಗರ ಚುನಾವಣೆ: ಜೆಡಿಎಸ್, ಕಾಂಗ್ರೆಸ್ ಮೈತ್ರಿ

    ಜಯನಗರ ಚುನಾವಣೆ: ಜೆಡಿಎಸ್, ಕಾಂಗ್ರೆಸ್ ಮೈತ್ರಿ

    ಬೆಂಗಳೂರು: ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತಿಗೆ ಮಾಜಿ ಪ್ರಧಾನಿ ಒಪ್ಪಿಗೆ ನೀಡಿದ್ದರಿಂದ ಮೈತ್ರಿ ಯಶಸ್ವಿಯಾಗಿದೆ.

    ಮೈತ್ರಿ ವಿಚಾರವಾಗಿ ಮಾತನಾಡಲು ರಾಮಲಿಂಗಾರೆಡ್ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ರು. ತಮ್ಮ ಮಗಳು ಸ್ಪರ್ಧೆ ಮಾಡ್ತಿರೋದ್ರೀಂದ ಬೆಂಬಲ ನೀಡುವಂತೆ ರಾಮಲಿಂಗಾರೆಡ್ಡಿ ದೇವೇಗೌಡರಿಗೆ ಕೇಳಿಕೊಂಡ್ರು. ರಾಮಲಿಂಗಾರೆಡ್ಡಿ ಮಾತಿಗೆ ಓಕೆ ಅಂದಿರೋ ದೇವೇಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ.

    ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಮೈತ್ರಿಯಿಂದ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹೋರಾಟ ನಡೆಯಲಿದೆ.

    ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರು ಜಯನಗರ ಕ್ಷೇತ್ರದಿಂದ 2 ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ವೇಳೆಯಲ್ಲಿ ವಿಜಯ್ ಕುಮಾರ್ ಅವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ಮೇ 3 ರಂದು ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಕರೆತರುವಾಗಲೇ ಅವರ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದರು. ಹೀಗಾಗಿ ಈಗ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಬಿಜೆಪಿ ಜಯನಗರದ ಟಿಕೆಟ್ ನೀಡಿದೆ.

    2013ರ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರು 12,312 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ವಿಜಯಕುಮಾರ್ ಅವರಿಗೆ 43,990 ಮತಗಳು ಬಿದ್ದಿದ್ದರೆ ಕಾಂಗ್ರೆಸ್ಸಿನ ವೇಣುಗೋಪಾಲ್ ಅವರಿಗೆ 31,678 ಮತಗಳು ಬಿದ್ದಿತ್ತು. ಜೆಡಿಎಸ್ ನ ಸಮಿವುಲ್ಲಾ ಅವರಿಗೆ 12,097 ಮತಗಳು ಸಿಕ್ಕಿತ್ತು.