Tag: south delhi

  • ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ

    ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ

    ನವದೆಹಲಿ: ಬಿಜೆಪಿಗೆ (BJP) ನೀಡಿದ ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿಯ ಪ್ರೀತಿಯ ಸಹೋದರ ಸಹೋದರಿಯರಿಗೆ ನಾನು ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿಕೊಂಡಿದ್ದಾರೆ.

    ದೆಹಲಿ ಚುನಾವಣೆಯಲ್ಲಿ ( Delhi Election) ಪಕ್ಷ ಬಹುಮತ ಪಡೆದ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲಿ ದೆಹಲಿಯನ್ನು ಅಭಿವೃದ್ಧಿಗೆ, ಜನರ ಒಟ್ಟಾರೆ ಜೀವನ ಮಟ್ಟವನ್ನು ಸುಧಾರಣೆಗೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿಯು ಪ್ರಮುಖ ಪಾತ್ರವಹಿಸುತ್ತದೆ. ಜನಶಕ್ತಿಯೇ ಸರ್ವಶ್ರೇಷ್ಠವಾದದ್ದು, ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

    ಪಕ್ಷದ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ಈ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ನಾವು ಇನ್ನೂ ಹೆಚ್ಚು ಹುರುಪಿನಿಂದ ಕೆಲಸ ಮಾಡುತ್ತೇವೆ ಮತ್ತು ದೆಹಲಿಯ ಜನರಿಗೆ ಸೇವೆ ಸಲ್ಲಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

    ದೆಹಲಿಯಲ್ಲಿ ಕಳೆದ 2 ಅವಧಿಯಲ್ಲಿ ಆಡಳಿತ ನಡೆಸಿದ್ದ ಎಎಪಿ (AAP) ಅಧಿಕಾರ ಕಳೆದುಕೊಂಡಿದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ (Congress) ಸತತ ಮೂರನೇ ಭಾರಿಗೆ ಯಾವುದೇ ಕ್ಷೇತ್ರಗಳನ್ನೂ ಗೆಲ್ಲದೇ ಶೂನ್ಯ ಸಾಧನೆ ಮಾಡಿದೆ.

  • ದೆಹಲಿ ಗದ್ದುಗೆ ಏರಲು ಬಿಜೆಪಿ ಸಜ್ಜು – ಗೆಲುವಿಗೆ ಇಲ್ಲಿವೆ 5 ಕಾರಣಗಳು

    ದೆಹಲಿ ಗದ್ದುಗೆ ಏರಲು ಬಿಜೆಪಿ ಸಜ್ಜು – ಗೆಲುವಿಗೆ ಇಲ್ಲಿವೆ 5 ಕಾರಣಗಳು

    ನವದೆಹಲಿ: ಬಿಜೆಪಿಯ (BJP) ʻಡಬಲ್ ಎಂಜಿನ್ʼ ದೆಹಲಿಗೆ (Delhi) ಪ್ರವೇಶಿಸಲಿದೆ. ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಸಜ್ಜಾಗಿದೆ. ಬಜೆಟ್‌ನಲ್ಲಿ ಮಧ್ಯಮ ವರ್ಗದವರನ್ನು ಕೇಂದ್ರಿಕರಿಸಿದ್ದು, ಸ್ಪಷ್ಟವಾದ ಬೆಂಬಲ ಬಿಜೆಪಿಗೆ ಸಿಕ್ಕಿದ್ದು, ಎಎಪಿಗೆ (AAP) ಭಾರೀ ಹೊಡೆತ ನೀಡಿದೆ.

    ಎಎಪಿಯ ಎಲ್ಲಾ ಹಿರಿಯ ನಾಯಕರು ಜೈಲಿಗೆ ಹೋಗಿ ಬಂದಿದ್ದು ಆಡಳಿತ ವಿರೋಧಿ ಅಲೆ ಮತ್ತು ಆಂತರಿಕ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರದ ಚುಕ್ಕಾಣೆ ನೀಡಲು ಮುಂದಾದ ಮತದಾರರ ಮನಸ್ಸಿನ ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

    ಮಧ್ಯಮ ವರ್ಗಕ್ಕೆ ಟ್ಯಾಕ್ಸ್‌ ಫ್ರೀ ಗಿಫ್ಟ್‌!
    ಎಎಪಿ ರಾಜಕೀಯ ಸ್ಥಿತಿಯ ಬಗ್ಗೆ ಮಧ್ಯಮ ವರ್ಗದವರಿಗೆ ಹತಾಶೆ ಉಂಟಾದಂತೆ ತೋರುತ್ತದೆ. 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಕಲ್ಯಾಣ ಯೋಜನೆಗಳು ಬಡವರಿಗಾಗಿ ಮಾತ್ರ ಕೆಲಸ ಮಾಡುವ ಪಕ್ಷವಾಗಿದೆ ಎಂಬ ಅಸಮಾಧಾನ ಮಧ್ಯಮ ವರ್ಗದ ಜನರಲ್ಲಿ ಬಂದಂತಿದೆ.

    ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ತಮ್ಮ ಭಾಷಣಗಳಲ್ಲಿ ಮಧ್ಯಮ ವರ್ಗದ ಜನರಿಗೆ ಯೋಜನೆಗಳನ್ನು ಘೋಷಿಸಿದರು. ಆದರೆ ಅದು ಚುನಾವಣೆಯಲ್ಲಿ ಕೆಲಸ ಮಾಡಿಲ್ಲ.

    ಬಿಜೆಪಿ ಆರ್‌ಡಬ್ಲ್ಯೂಎ ಸಭೆಗಳು ಸೇರಿದಂತೆ ಹಲವಾರು ಸಂಪರ್ಕ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಆಕರ್ಷಿಸಿತು. ಅಲ್ಲದೇ ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ತೆರಿಗೆ ಕಡಿತದ ಘೋಷಣೆ ಬಿಜೆಪಿಗೆ ಭಾರೀ ಲಾಭ ತಂದುಕೊಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಧ್ಯಮ ವರ್ಗದ ಜನಸಂಖ್ಯೆ 45%ರಷ್ಟಿದೆ. ಬಿಜೆಪಿ ಈ ಮತಗಳನ್ನು ಸೆಳೆಯಲು ಯಶಸ್ವಿಯಾಗಿದೆ.

    ಯಾವುದೇ ಆಪ್‌ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂಬ ಘೋಷಣೆ
    ಬಿಜೆಪಿ ಈ ಹಿಂದೆ ಕಲ್ಯಾಣ ಯೋಜನೆಗಳನ್ನು ಉಚಿತ ಎಂದು ಅಪಹಾಸ್ಯ ಮಾಡಿದ್ದರೂ ಸಹ, ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಘೋಷಿಸಿತ್ತು. ಪ್ರಧಾನಿ ಮೋದಿಯವರೇ ಈ ಘೋಷಣೆ ಮಾಡಿದ್ದರು. ಇದು ಬಿಜೆಪಿಗೆ ಮತ ಚಲಾಯಿಸಿದರೆ ಬಡವರು ಯೋಜನೆಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಎಎಪಿಯ ಹೇಳಿಕೆಗೆ ಯಾವುದೇ ಮಹತ್ವ ಕೊಡದಂತೆ ಮಾಡಿತು.

    ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ
    ಎಎಪಿಯ ಜನಪ್ರಿಯತೆ ಕಡಿಮೆಯಾಗಲು ದೊಡ್ಡ ಕಾರಣವೆಂದರೆ ರಾಜಧಾನಿಯ ರಸ್ತೆಗಳು ಮತ್ತು ಒಳಚರಂಡಿಗಳ ಕಳಪೆ ಸ್ಥಿತಿ. ತುಂಬಿ ಹರಿಯುವ ಚರಂಡಿಗಳು, ಗುಂಡಿ ಬಿದ್ದ ರಸ್ತೆಗಳು ಮತ್ತು ಅನಿಯಮಿತ ಕಸ ಸಂಗ್ರಹಣೆ ರಾಷ್ಟ್ರ ರಾಜಧಾನಿಯಾದ್ಯಂತ ಮತದಾರರನ್ನು ಕೆರಳಿಸಿತ್ತು.

    ಎಡೆಬಿಡದ ಎಲ್‌ಜಿ-ಎಎಪಿ ಜಗಳ
    ಕಳಪೆ ರಸ್ತೆಗಾಗಿ ಎಲ್‌ಜಿ ಯೋಜನೆಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು ಎಎಪಿ ಆರೋಪಿಸುತ್ತಿತ್ತು. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ದೆಹಲಿ ಸರ್ಕಾರ ಮತ್ತು ಗಮನಾರ್ಹ ಅಧಿಕಾರ ಹೊಂದಿರುವ ಎಲ್‌ಜಿ ನಡುವಿನ ಹೆಚ್ಚಿದ ದ್ವೇಷದಿಂದ ಜನ ರೋಸಿಹೋಗಿದ್ದರು.

    ಆಡಳಿತ ವಿರೋಧಿ ಅಲೆ
    2012 ರಲ್ಲಿ ರಚನೆಯಾದ ಎಎಪಿ ಸರ್ಕಾರ 2015 ರಿಂದ ನಿರಂತರವಾಗಿ ಅಧಿಕಾರದಲ್ಲಿದೆ. ಇನ್ನೂ ಆಡಳಿತ ವಿರೋಧಿ ಅಲೆಯ ಬಗ್ಗೆ ಎಎಪಿಗೆ ಅರಿವಿತ್ತು ಎಂಬುದು ಅದರ ಅಭ್ಯರ್ಥಿಗಳ ಪಟ್ಟಿಯಿಂದ ಸ್ಪಷ್ಟವಾಗಿದೆ. ಆದಾಗ್ಯೂ, ಕೊನೆಯ ಕ್ಷಣದ ಬದಲಾವಣೆಗಳು ಕೆಲವು ಅಭ್ಯರ್ಥಿಗಳ ಪ್ರಚಾರಕ್ಕೆ ಸಮಯ ಸಾಕಾಗಲಿಲ್ಲ.

  • 2020 ರಲ್ಲಿ 14-1, 2025 ರಲ್ಲಿ 4-11: ರಾಜಧಾನಿ ಹೋರಾಟದಲ್ಲಿ ಎಎಪಿಗೆ ದಕ್ಷಿಣ ದೆಹಲಿ ದೊಡ್ಡ ಹಿನ್ನಡೆ

    2020 ರಲ್ಲಿ 14-1, 2025 ರಲ್ಲಿ 4-11: ರಾಜಧಾನಿ ಹೋರಾಟದಲ್ಲಿ ಎಎಪಿಗೆ ದಕ್ಷಿಣ ದೆಹಲಿ ದೊಡ್ಡ ಹಿನ್ನಡೆ

    ನವದೆಹಲಿ: ದೆಹಲಿ ಚುನಾವಣೆಯ (Delhi Election) ಆರಂಭಿಕ ಮತ ಎಣಿಕೆಯಲ್ಲಿ ಎಎಪಿಗಿಂತ (AAP) ಬಿಜೆಪಿ (BJP) ಮುನ್ನಡೆ ಸಾಧಿಸುತ್ತಿದೆ. ದಕ್ಷಿಣ ದೆಹಲಿಯ (South Delhi) 15 ವಿಧಾನಸಭಾ ಕ್ಷೇತ್ರಗಳಲ್ಲಿ, ಬಿಜೆಪಿ 11 ಮತ್ತು ಎಎಪಿ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

    ಈ 15 ಸ್ಥಾನಗಳಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದ 10 ವಿಧಾನಸಭಾ ಕ್ಷೇತ್ರಗಳು ಮತ್ತು ನವದೆಹಲಿ, ಗ್ರೇಟರ್ ಕೈಲಾಶ್, ಮಾಲ್ವಿಯಾ ನಗರ, ಆರ್‌ಕೆ ಪುರಂ ಮತ್ತು ಕಸ್ತೂರ್ಬಾ ನಗರ ಕ್ಷೇತ್ರಗಳು ಸೇರಿವೆ. 2020ರ ವಿಧಾನಸಭಾ ಚುನಾವಣೆಯಲ್ಲಿ, ಎಎಪಿ ಈ 15 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಎಎಪಿಗೆ ದೊಡ್ಡ ಹಿನ್ನಡೆ ಕಂಡುಬರುತ್ತಿದೆ.

    ಬಿಜೆಪಿ ಮುನ್ನಡೆ ಸಾಧಿಸುತ್ತಿರುವ ಪ್ರಮುಖ ಕ್ಷೇತ್ರಗಳಲ್ಲಿ ಕಲ್ಕಾಜಿ ಕೂಡ ಒಂದು. ಅಲ್ಲಿ ಮುಖ್ಯಮಂತ್ರಿ ಅತಿಶಿ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಮಾಜಿ ಬಿಜೆಪಿ ಸಂಸದ ರಮೇಶ್ ಬಿಧುರಿ ಮತ್ತು ಕಾಂಗ್ರೆಸ್‌ನ ಅಲ್ಕಾ ಲಂಬಾ ವಿರುದ್ಧ ಸ್ಪರ್ಧಿಸಿದ್ದಾರೆ.

    ದೆಹಲಿ ಸಚಿವ ಮತ್ತು ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರ ಭದ್ರಕೋಟೆಯಾದ ಗ್ರೇಟರ್ ಕೈಲಾಶ್ ಎಎಪಿಗೆ ಹಿನ್ನಡೆಯಾಗಿರುವ ಇನ್ನೊಂದು ಪ್ರಮುಖ ಸ್ಥಾನವಾಗಿದೆ. ಎಎಪಿ ನಾಯಕ ಸೋಮನಾಥ್ ಭಾರತಿ ಪ್ರತಿನಿಧಿಸುವ ಮಾಲ್ವಿಯಾ ನಗರ ಈ ಬಾರಿ ಬಿಜೆಪಿ ಕಡೆ ವಾಲುತ್ತಿದೆ.

    ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸ್ಪರ್ಧಿಸಿರುವ ನವದೆಹಲಿ ಕ್ಷೇತ್ರದಲ್ಲಿ ನೇರ ಹೋರಾಟ ನಡೆಯುತ್ತಿದೆ. ಹಿಂದಿನ ಸುತ್ತುಗಳಲ್ಲಿ ಹಿಂದುಳಿದಿದ್ದ ಕೇಜ್ರಿವಾಲ್ ಈಗ ಮುನ್ನಡೆ ಸಾಧಿಸಿದ್ದಾರೆ.

    ಎಣಿಕೆ ಆರಂಭವಾದ ಎರಡು ಗಂಟೆ ಒಳಗೆ ಅಂದರೆ ಬೆಳಿಗ್ಗೆ 10 ಗಂಟೆಗೆ, 70 ಸ್ಥಾನಗಳಲ್ಲಿ 44 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಎಎಪಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಈಗ ಬಿಜೆಪಿ 45, ಎಎಪಿ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

  • ಶಿಕ್ಷಕಿಯ ಮೇಲೆ 2 ವರ್ಷಗಳಿಂದ ಅತ್ಯಾಚಾರವೆಸಗಿದ್ದ ಪ್ರಾಂಶುಪಾಲ ಅರೆಸ್ಟ್

    ಶಿಕ್ಷಕಿಯ ಮೇಲೆ 2 ವರ್ಷಗಳಿಂದ ಅತ್ಯಾಚಾರವೆಸಗಿದ್ದ ಪ್ರಾಂಶುಪಾಲ ಅರೆಸ್ಟ್

    – ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿ ರೇಪ್

    ನವದೆಹಲಿ: ಶಿಕ್ಷಕಿಯ ಮೇಲೆ ಕಳೆದ 2 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದ ಪ್ರಾಂಶುಪಾಲನನ್ನು ದೆಹಲಿ ಪೊಲೀಸರು ಗುರುವಾರ ಬಂದಿಸಿದ್ದಾರೆ.

    ದಕ್ಷಿಣ ದೆಹಲಿಯ ಜಸೋಲ ಖಾಸಗಿ ಶಾಲೆಯ ಪ್ರಾಂಶುಪಾಲ ರಾಕೇಶ್ ಸಿಂಗ್ ಬಂಧಿತ ಪ್ರಾಂಶುಪಾಲ. 27 ವರ್ಷದ ಸಂತ್ರಸ್ತೆ ಬುಧವಾರ ನೀಡಿದ್ದ ದೂರು ಪಡೆದ ಪೊಲೀಸರು ಆರೋಪಿ ರಾಕೇಶ್ ಸಿಂಗ್‍ನನ್ನು ಬಂಧಿಸಿದ್ದಾರೆ.

    ಆಗಿದ್ದೇನು?:
    ಪ್ರಾಶುಂಪಾಲ ರಾಕೇಶ್ ಸಿಂಗ್ 2017ರ ಜೂನ್‍ನಲ್ಲಿ ಶಾಲಾ ಅವಧಿಯ ಬಳಿಕ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಂತೆ ಸಂತ್ರಸ್ತೆಯನ್ನು ಕರೆದಿದ್ದನು. ನಂತರ ಶಿಕ್ಷಕಿಯನ್ನು ತನ್ನ ಕಚೇರಿಗೆ ಕರೆದುಕೊಂಡು ಹೋಗಿ ಮತ್ತು ಬರುವ ಔಷಧ ಬೆರೆಸಿದ ಪಾನೀಯ ನೀಡಿದ್ದನು. ಇದನ್ನು ಕುಡಿದ ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದ ವೇಳೆ ರಾಕೇಶ್ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.

    ಪ್ರಾಂಶುಪಾಲ ತನ್ನ ಬಳಿ ಇದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಮೂಲಕ ಕಳೆದ 5 ವರ್ಷಗಳಿಂದ ಶಾಲೆಯ ಆವರಣದಲ್ಲಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗೆ ಇಬ್ಬರು ಸಹ ಶಿಕ್ಷಕರು ಸಹಾಯ ಮಾಡಿದ್ದಾರೆ. ನಾನು ಗರ್ಭಿಣಿಯಾದಾಗ ಮಗುವನ್ನು ತೆಗೆಸುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಚಿನ್ಮೊಯ್ ಬಿಸ್ವಾಲ್ ವಿವರಿಸಿದ್ದಾರೆ.

    ಈ ಸಂಬಂಧ ಸಂತ್ರಸ್ತೆಯು ಸಾವಿತ್ರಿ ವಿಹಾರ್ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಆರೋಪಿ ರಾಕೇಶ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

  • ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿ, ವಿಡಿಯೋ ಮಾಡಿದ ಪತಿ ವಿರುದ್ಧ ಎಫ್‍ಐಆರ್

    ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿ, ವಿಡಿಯೋ ಮಾಡಿದ ಪತಿ ವಿರುದ್ಧ ಎಫ್‍ಐಆರ್

    ನವದೆಹಲಿ: ಬೇರೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕದಲ್ಲಿ ತೊಡಗುವಂತೆ ಮಾಡಿ ಅದರ ವಿಡಿಯೋ ಚಿತ್ರೀಕರಣ ಮಾಡಿದ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

    ದಕ್ಷಿಣ ದೆಹಲಿ ಮೂಲದ ಒಳಾಂಗಣ ವಿನ್ಯಾಸಕಿಯಾಗಿರೋ 28 ವರ್ಷದ ಮಹಿಳೆ, ತನ್ನ ಪತಿ ಹಣ ಕೀಳುವ ಉದ್ದೇಶದಿಂದ ಈವೆಂಟ್ ಆರ್ಗನೈಸರ್‍ನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿದ್ರು ಎಂದು ಆರೋಪಿಸಿ ಕಳೆದ ತಿಂಗಳು ದೂರು ದಾಖಲಿಸಿದ್ದಾರೆ.

    ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿದ್ದಲ್ಲದೆ ಅದರ ವಿಡಿಯೋ ಮಾಡಿದ್ದಾರೆ. ವಿಡಿಯೋ ಇಟ್ಟುಕೊಂಡು ಅಲಿಯನ್ನು(ಹೆಸರು ಬದಲಾಯಿಸಲಾಗಿದೆ) ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡುವಂತೆ ಒತ್ತಾಯಿಸಿದ್ದಾರೆಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

    ಆರೋಪಿ ಪತಿ ಇಷ್ಟಕ್ಕೇ ಸುಮ್ಮನಾಗದೆ, ಹಣ ಕೀಳಲು ನಾನು ನಿನ್ನನ್ನು ಇನ್ಮುಂದೆ ಯಾವ ವ್ಯಕ್ತಿಯ ಬಳಿಯಾದರೂ ಕಳಿಸಬಹುದು ಎಂದು ಹೇಳಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಪತಿ ಹಾಗೂ ಅಲಿ ವಿರದ್ಧ ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಹಾಗೂ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

    2016ರಲ್ಲಿ ನಮ್ಮಿಬ್ಬರ ವಿವಾಹವಾಯ್ತು. ಮದುವೆಯ ನಂತರ ನನ್ನ ಪತಿಗೆ ದಹಲಿಯಲ್ಲಿ ಮನೆಯಲ್ಲಿವಾದ್ದರಿಂದ ನನ್ನ ತವರು ಮನೆಯಲ್ಲೇ ಅವರೂ ಇದ್ದರು. ಮದುವೆಯಾಗಲು ತುಂಬಾ ಆತುರ ತೋರಿದ್ರು. ಮದುವೆಯ ನಂತರ ಅವರ ನಡವಳಿಕೆ ಇದ್ದಕ್ಕಿದ್ದಂತೆ ಬದಲಾಯಿತು. ಸ್ವಂತ ಉದ್ಯಮ ಶುರು ಮಾಡಲು ಹಣ ಕೊಡುವಂತೆ ಕೇಳಿದ್ರು. ಅವರ ಒತ್ತಾಯ ಮತ್ತು ಬೆದರಿಕೆಗೆ ಮಣಿದು ನಾನು ಮತ್ತು ನನ್ನ ಪೋಷಕರು ವಿವಿಧ ದಿನಾಂಕಗಳಲ್ಲಿ ಸುಮಾರು 2 ಕೋಟಿ ರೂ. ನೀಡಿದ್ದೇವೆ. ನಾವು ಹಣ ಕೊಡಲು ನಿರಾಕರಿಸಿದಾಗ ನನ್ನ ಕುಟುಂಬಸ್ಥರನ್ನ ಬೈಯ್ಯುತ್ತಿದ್ರು. ನನ್ನ ಮೇಲೆ ಹಲ್ಲೆ ಮಾಡ್ತಿದ್ರು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

    ನಂತರ ನನ್ನ ಪತಿ ನನಗೆ ಅರಿವಿಲ್ಲದಂತೆ ನನ್ನ ಫೋನ್‍ನಿಂದ ಅಲಿಗೆ ಅಸಭ್ಯವಾದ ಸಂದೇಶಗಳನ್ನ ಕಳಿಸುತ್ತಿದ್ರು. ಮುಂದೆ ಆತನನ್ನು ಬ್ಲಾಕ್‍ಮೇಲ್ ಮಾಡಬಹುದು ಎಂಬ ದುರುದ್ದೇಶದಿಂದ ನನಗೆ ಆತನೊಂದಿಗೆ ಸ್ನೇಹ ಬೆಳೆಸಿಕೊಳ್ಳುವಂತೆ ಒತ್ತಾಯಿಸಿದ್ರು ಎಂದು ಹೇಳಿದ್ದಾರೆ.

    ಕಳೆದ ನವೆಂಬರ್‍ನಲ್ಲಿ ನನ್ನ ಪತಿ ನನಗೆ ಇಷ್ಟವಿಲ್ಲದಿದ್ರೂ ಅಲಿ ಜೊತೆಗೆ ಲುಧಿಯಾನಾಗೆ ಹೋಗುವಂತೆ ಬಲವಂತ ಮಾಡಿದ್ರು. ಆತನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ರು. ಆದ್ರೆ ನಾನು ಅದಕ್ಕೆ ನಿರಾಕರಿಸಿದೆ. ಜನವರಿಯಲ್ಲಿ ನನ್ನನ್ನು ನೋಯ್ಡಾದ ಫಾರ್ಮ್‍ಹೌಸ್‍ಗೆ ಕರೆದುಕೊಂಡು ಹೋದ್ರು. ಅಲ್ಲಿ ಆಗಲೇ ಅಲಿ ಬಂದು ಕಾಯುತ್ತಿದ್ದ. ಅವನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒತ್ತಾಯಿಸಿದ್ರು. ನಂತರ ಅಲಿ ನನ್ನ ಮೇಲೆ ಅತ್ಯಾಚಾರವೆಸಗಿದ. ಫೆಬ್ರವರಿಯಲ್ಲಿ ನನ್ನ ಪತಿ ನನ್ನ ಡೆಬಿಟ್ ಕಾರ್ಡ್ ಬಳಸಿ ದಕ್ಷಿಣ ದೆಹಲಿಯಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ರು. ನಾನು ಅಲಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ ಯಾವುದೇ ಕಾರಣಕ್ಕೂ ಹಣವನ್ನು ಹಿಂದಿರುಗಿಸುವುದಿಲ್ಲ ಅಂದ್ರು. ನನ್ನ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ರು ಎಂದು ಎಫ್‍ಐಆರ್‍ನಲ್ಲಿ ಮಹಿಳೆ ಆರೋಪಿಸಿದ್ದಾರೆ.

    ಅಂದು ರಾತ್ರಿ ಅಲಿ ನನ್ನ ಮೇಲೆ ಅತ್ಯಾಚಾರ ಮಾಡಿದ. ಆತ ಹೋದ ನಂತರ ನನ್ನ ಪತಿ ರೂಮಿನೊಳಗೆ ಬಂದು ಟಿವಿ ಬಳಿ ಅಡಗಿಸಿಟ್ಟಿದ್ದ ಹಿಡನ್ ಕ್ಯಾಮೆರಾ ಹೊರತೆಗೆದರು. ಅವರು ಇದನ್ನ ರೆಕಾರ್ಡ್ ಮಾಡಿದ್ದಾರೆಂದು ತಿಳಿದು ನನಗೆ ಶಾಕ್ ಆಯ್ತು. ಇನ್ಮುಂದೆ ಅಲಿಯನ್ನು ಬ್ಲಾಕ್‍ಮೇಲ್ ಮಾಡಿ ಹಣ ಕೀಳಬೇಕೆಂದು ನನಗೆ ಹೇಳಿದ್ರು. ಅಲ್ಲದೆ ಇನ್ಮುಂದೆ ಲೈಂಗಿಕ ಕ್ರಿಯೆಗಾಗಿ ನನ್ನನ್ನು ಯಾರ ಬಳಿ ಬೇಕಾದ್ರೂ ಕಳಿಸಬಹುದು ಎಂದು ಹೇಳಿದ್ರು. ಅದಕ್ಕೆ ಒಪ್ಪದಿದ್ರೆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿದ್ರು ಎಂದಿದ್ದಾರೆ.

    ಘಟನೆಯ ನಂತರ 10 ಲಕ್ಷ ಹಾಗೂ 30 ಲಕ್ಷ ರೂ. ಗೆ ಬೇಡಿಕೆ ಇಟ್ರು. ಈ ಬಗ್ಗೆ ನನ್ನ ಪೋಷಕರಿಗೆ ಗೊತ್ತಾದ ನಂತರ ಅವರ ಮರ್ಯಾದೆ ಹಾಳು ಮಾಡುವುದಾಗಿ ಹೆದರಿಸಿದ್ರು. ನನ್ನ ಜೀವನ ಹಾಳಾಗಿದೆ. ಆತ್ಮಹತ್ಯೆ ಮಾಡಿಕೊಳ್ಳದೆ ನನಗೆ ಬೇರೆ ದಾರಿ ಇಲ್ಲ. ಈ ಘಟನೆಯಿಂದಾಗಿ ನಾನು ಯಾರಿಗೂ ಮುಖ ತೋರಿಸದಂತಾಗಿದೆ. ನನ್ನ ಪತಿ ಹಾಗೂ ಆತನ ಸ್ನೇಹಿತ ನನ್ನ ಹಾಗೂ ನನ್ನ ಕುಟುಂಬದ ಮರ್ಯಾದೆಗೆ ಕಳಂಕ ತಂದಿದ್ದಾರೆ ಎಂದು ಮಹಿಳೆ ಪೋಲೀಸರ ಬಳಿ ಹೇಳಿಕೊಂಡಿದ್ದಾರೆ.