Tag: sode shree

  • 250 ವರ್ಷಗಳ ಬಳಿಕ ಕೃಷ್ಣನೂರಲ್ಲಿ ಐತಿಹಾಸಿಕ ಕ್ಷಣ: ಕುಕ್ಕೆ, ಕೃಷ್ಣಮಠದ ಯತಿಗಳ ಸಮಾಗಮ

    250 ವರ್ಷಗಳ ಬಳಿಕ ಕೃಷ್ಣನೂರಲ್ಲಿ ಐತಿಹಾಸಿಕ ಕ್ಷಣ: ಕುಕ್ಕೆ, ಕೃಷ್ಣಮಠದ ಯತಿಗಳ ಸಮಾಗಮ

    ಉಡುಪಿ : ಕುಕ್ಕೆ ಸುಬ್ರಹ್ಮಣ್ಯ ಮಠ ಮತ್ತು ಉಡುಪಿಯ ಸೋದೆ ವಾದಿರಾಜ ಮಠದ ಯತಿಗಳು 250 ವರ್ಷಗಳ ನಂತರ ಮುಖಾಮುಖಿಯಾಗಿದ್ದಾರೆ.

    ಸಮಾಗಮ ಸಂದರ್ಭದಲ್ಲಿ ಮಾತನಾಡಿದ ಸೋದೆ ಸುಬ್ರಹ್ಮಣ್ಯ ಶ್ರೀಗಳು, ದೇವರ- ಗುರುಗಳ ಪ್ರೇರಣೆಯಾಯ್ತು. ಎರಡು ಮಠಗಳು ಮತ್ತೆ ಒಂದಾಗಿದೆ. ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಇರಬೇಕು. ಎಲ್ಲಾ ಮಠಾಧೀಶರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. 250 ವರ್ಷಗಳಿಂದ ಮನಸ್ತಾಪ ಇತ್ತು. ನಮ್ಮಿಬ್ಬರಿಗೂ ಒಂದಾಗಬೇಕೆಂದು ಇಚ್ಛೆ ಇತ್ತು. ಈಗ ಎಲ್ಲದಕ್ಕೂ ಕಾಲ ಕೂಡಿ ಬಂತು ದೇವರ-ಗುರುಗಳ ಪ್ರೇರಣೆಯಿಂದ ಇದು ಸಾಧ್ಯವಾಯ್ತು ಅಂದ್ರು. ನಾಳೆ ಶಿರಸಿಯ ಸೋದೆಯಲ್ಲಿ ಪುರಪ್ರವೇಶವಿದೆ. 31ಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ದಾಟುತ್ತೇವೆ ಅಂತ ತಿಳಿಸಿದ್ರು.

    ಈ ಬಗ್ಗೆ ಪೇಜಾವರ ಶ್ರೀ ಹೇಳಿಕೆ ನೀಡಿದ್ದು, ಇದೊಂದು ಐತಿಹಾಸಿಕ ದಿನ. ಉಡುಪಿಯಲ್ಲಿ ಸ್ವಾಮೀಜಿಗಳು ಕೋಪ ಮರೆತಿದ್ದಾರೆ. ಶತಮಾನದಿಂದ ಸೌಹಾರ್ದತೆ ಆಗಬೇಕೆಂದು ಎಲ್ಲರ ಅಪೇಕ್ಷೆಯಾಗಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಇಬ್ಬರು ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಮಠಾಧೀಶರಲ್ಲಿ ಬಾಂಧ್ಯವ್ಯ ಬೆಳೆಯಬೇಕು. ಸ್ವಾಮೀಜಿಗಳು ಒಂದಾದರೆ ಜನರು ಒಂದಾಗುತ್ತಾರೆ ಅಂತ ಹೇಳಿದ್ರು.

    ಮುನಿಸಿಗೆ ಕಾರಣವೇನು?:  ಈ ಎರಡು ಮಠಗಳ ಸ್ವಾಮೀಜಿಗಳು ಮಾತು ಬಿಟ್ಟು- ಮುಖಾಮುಖಿಯಾಗದೆ ಸರಿಸುಮಾರು 250 ವರ್ಷಗಳೇ ಕಳೆದಿವೆ. 18ನೇ ಶತಮಾನದ ಕಥೆಯಿದು. ಉಡುಪಿಯ ಉಂಡಾರು ಗ್ರಾಮದ ಸೋದರರು ಸುಬ್ರಹ್ಮಣ್ಯ ಮತ್ತು ಸೋದೆ ಮಠದ ಪೀಠಾಧಿಪತಿಗಳಾದರು. ಸೋದೆ ಮಠದಲ್ಲಿ ವಿಶ್ವನಿಧಿತೀರ್ಥರು ದೀಕ್ಷೆ ಪಡೆದರು. ಅವರ ತಮ್ಮ ವಿಶ್ವಾಧೀಶ್ವರ ತೀರ್ಥರು ಕುಕ್ಕೆಗೆ ಶ್ರೀಗಳಾದರು. ಒಂದು ಬಾರಿ ಕುಕ್ಕೆ ಮಠದ ಪೂಜೆಗೆ ಸೋದೆ ಶ್ರೀಗಳನ್ನು ಆಹ್ವಾನಿಸಲಾಯ್ತು. ಆದ್ರೆ ವಾಹನದ ವ್ಯವಸ್ಥೆಗಳು ಇಲ್ಲದಿರುವುದರಿಂದ ಪೂಜೆಯ ಘಳಿಗೆಗೆ ಸೋದೆ ಶ್ರೀಗಳು ತಲುಪಲಾಗಿಲ್ಲ.

    ಕೋಪಗೊಂಡ ಕುಕ್ಕೆಶ್ರೀಗಳು ಕಾಯದೆ ಪೂಜೆ ಆರಂಭಿಸಿ ಮುಗಿಸಿಯೇ ಬಿಟ್ಟರು. ಸೋದೆಶ್ರೀಗಳು ಇದನ್ನು ಅವಮಾನವೆಂದು ಪರಿಗಣಿಸಿ ಮತ್ತೆಂದೂ ಬರುವುದಿಲ್ಲ. ಇಂದಿನಿಂದ ಮಾತುಕತೆಯಿಲ್ಲ ಎಂದು ಹೇಳಿ ವಾಪಾಸ್ಸಾದರು. ಅಂದಿನಿಂದ ಇಂದಿನ ತನಕವೂ ಎರಡು ಮಠಗಳ ಪರಂಪರೆಯಲ್ಲಿ ಬಂದ ಯತಿಗಳು ಒಬ್ಬರೊಬ್ಬರ ಮುಖ ನೋಡಿಕೊಂಡಿಲ್ಲ. ಎಲ್ಲೂ ಭೇಟಿಯಾಗಿಲ್ಲ. ಸೋದೆ ಶ್ರೀಗಳು ಕುಮಾರಧಾರಾ ನದಿಯನ್ನು ದಾಟಿ ಸುಬ್ರಹ್ಮಣ್ಯ ಊರಿಗೂ ಹೋಗಿಲ್ಲ.

    https://www.youtube.com/watch?v=2zY7QllcGy0&spfreload=10

  • 250 ವರ್ಷಗಳ ಸುದೀರ್ಘ ಮುನಿಸಿಗೆ ತೆರೆ: ಉಡುಪಿಯಲ್ಲಿ ಸೋದೆಶ್ರೀ- ಕುಕ್ಕೆಶ್ರೀಗಳ ಮಹಾ ಸಮಾಗಮ

    250 ವರ್ಷಗಳ ಸುದೀರ್ಘ ಮುನಿಸಿಗೆ ತೆರೆ: ಉಡುಪಿಯಲ್ಲಿ ಸೋದೆಶ್ರೀ- ಕುಕ್ಕೆಶ್ರೀಗಳ ಮಹಾ ಸಮಾಗಮ

    ಉಡುಪಿ: ನಮ್ಮ ನಿಮ್ಮಂತ ಸಾಮಾನ್ಯ ಜನರಿಗೆ ಕೋಪ ಬರುತ್ತೆ. ಮನಸ್ತಾಪ ಆಗುತ್ತೆ. ಆದ್ರೆ ಜೀವನದಲ್ಲಿ ಅರಿಷಡ್ವರ್ಗಗಳನ್ನು ದಾಟಿದ ಸ್ವಾಮೀಜಿಗಳಿಗೂ ಶತ- ಶತಮಾನಗಳಿಗೂ ದ್ವೇಷ ಇರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಮತ್ತು ಉಡುಪಿಯ ಸೋದೆ ವಾದಿರಾಜ ಮಠದ ಯತಿಗಳು ಮುಖಾಮುಖಿಯಾಗಿ 250 ವರ್ಷ ದಾಟಿದೆ. ಆದ್ರೆ ಇದೀಗ ಕೋಪ ಮರೆದು ಬಾಂಧವ್ಯ ಬೆಳೆಸಲು ಎರಡು ಮಠಗಳು ಮುಂದಾಗಿದೆ.

    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ದಕ್ಷಿಣ ಭಾರತದಲ್ಲೇ ಅತೀ ಪ್ರಸಿದ್ಧ ಧಾರ್ಮಿಕ ಕೇಂದ್ರ. ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ವಿದ್ಯಾಪ್ರಸನ್ನ ಶ್ರೀಗಳು ಸದ್ಯದ ಪೀಠಾಧಿಕಾರಿಗಳು. ಇನ್ನು ಉಡುಪಿ ಶ್ರೀಕೃಷ್ಣಮಠಕ್ಕೆ ಒಳಪಡುವ 8 ಮಠಗಳಿವೆ. 800 ವರ್ಷಗಳ ಹಿಂದೆ 8 ಮಠಗಳ ಸ್ವಾಮೀಜಿಗಳ ಪೈಕಿ ಸೋದೆ ಮಠದ ವಾದಿರಾಜ ಸ್ವಾಮಿಗಳು ಹಿರಿಯರು. ಸದ್ಯ ಸೋದೆ ಪೀಠಕ್ಕೆ ವಿಶ್ವವಲ್ಲಭತೀರ್ಥರು ಪೀಠಾಧಿಕಾರಿಗಳು. ಎರಡೂ ಮಠಗಳು ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠ ಮಠಗಳು.

    ಯಾವ ಕಾರಣಕ್ಕೆ ಮುನಿಸು?: ಈ ಎರಡು ಮಠಗಳ ಸ್ವಾಮೀಜಿಗಳು ಮಾತು ಬಿಟ್ಟು- ಮುಖಾಮುಖಿಯಾಗದೆ ಸರಿಸುಮಾರು 250 ವರ್ಷಗಳೇ ಕಳೆದಿವೆ. 18ನೇ ಶತಮಾನದ ಕಥೆಯಿದು. ಉಡುಪಿಯ ಉಂಡಾರು ಗ್ರಾಮದ ಸೋದರರು ಸುಬ್ರಹ್ಮಣ್ಯ ಮತ್ತು ಸೋದೆ ಮಠದ ಪೀಠಾಧಿಪತಿಗಳಾದರು. ಸೋದೆ ಮಠದಲ್ಲಿ ವಿಶ್ವನಿಧಿತೀರ್ಥರು ದೀಕ್ಷೆ ಪಡೆದರು. ಅವರ ತಮ್ಮ ವಿಶ್ವಾಧೀಶ್ವರ ತೀರ್ಥರು ಕುಕ್ಕೆಗೆ ಶ್ರೀಗಳಾದರು. ಒಂದು ಬಾರಿ ಕುಕ್ಕೆ ಮಠದ ಪೂಜೆಗೆ ಸೋದೆ ಶ್ರೀಗಳನ್ನು ಆಹ್ವಾನಿಸಲಾಯ್ತು. ಆದ್ರೆ ವಾಹನದ ವ್ಯವಸ್ಥೆಗಳು ಇಲ್ಲದಿರುವುದರಿಂದ ಪೂಜೆಯ ಘಳಿಗೆಗೆ ಸೋದೆ ಶ್ರೀಗಳು ತಲುಪಲಾಗಿಲ್ಲ.

    ಕೋಪಗೊಂಡ ಕುಕ್ಕೆಶ್ರೀಗಳು ಕಾಯದೆ ಪೂಜೆ ಆರಂಭಿಸಿ ಮುಗಿಸಿಯೇ ಬಿಟ್ಟರು. ಸೋದೆಶ್ರೀಗಳು ಇದನ್ನು ಅವಮಾನವೆಂದು ಪರಿಗಣಿಸಿ ಮತ್ತೆಂದೂ ಬರುವುದಿಲ್ಲ. ಇಂದಿನಿಂದ ಮಾತುಕತೆಯಿಲ್ಲ ಎಂದು ಹೇಳಿ ವಾಪಾಸ್ಸಾದರು. ಅಂದಿನಿಂದ ಇಂದಿನ ತನಕವೂ ಎರಡು ಮಠಗಳ ಪರಂಪರೆಯಲ್ಲಿ ಬಂದ ಯತಿಗಳು ಒಬ್ಬರೊಬ್ಬರ ಮುಖ ನೋಡಿಕೊಂಡಿಲ್ಲ. ಎಲ್ಲೂ ಭೇಟಿಯಾಗಿಲ್ಲ. ಸೋದೆ ಶ್ರೀಗಳು ಕುಮಾರಧಾರಾ ನದಿಯನ್ನು ದಾಟಿ ಸುಬ್ರಹ್ಮಣ್ಯ ಊರಿಗೂ ಹೋಗಿಲ್ಲ.

    ಡೇಟ್ ಫಿಕ್ಸ್: ಇದೀಗ ಎರಡೂ ಮಠಗಳ ಸ್ವಾಮೀಜಿಗಳು ಕೋಪ ಮರೆತು- ಒಂದಾಗೋದಕ್ಕೆ ಡೇಟ್ ಫಿಕ್ಸಾಗಿದೆ. ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಮೇ 29ರಂದು ಉಡುಪಿಯ ಎಲ್ಲಾ ಮಠಾಧೀಶರ ಸಮ್ಮುಖದಲ್ಲಿ ಸುಬ್ರಹ್ಮಣ್ಯಶ್ರೀ ಮತ್ತು ಸೋದೆ ಶ್ರೀಗಳ ಸಮಾಗಮವಾಗಲಿದೆ.

    ಹಿಂದಿನಿಂದ ಆದ ವಿಘಟನೆಯಿಂದ ಅವರನ್ನು ದೂರ ಮಾಡಿರಬಹುದು. ಚಿಂತನೆಯಲ್ಲಿ- ವೈಯಕ್ತಿಕವಾಗಿ ಭಿನ್ನಾಭಿಪ್ರಾಯವಿಲ್ಲ. ಇದೀಗ ಎರಡು ಸ್ವಾಮೀಜಿಗಳ ಸಮಾಗಮವಾಗುತ್ತದೆ. ಇದು ಭಕ್ತರಿಗೆ ಬಹಳ ಸಂತೋಷ ಕೊಡುವ ವಿಚಾರ. ಉಡುಪಿ- ಸುಬ್ರಹ್ಮಣ್ಯ- ಸೋದೆಯಲ್ಲಿ ಪೂಜೆ ನಡೆಯಲಿದೆ. ಕೌಟುಂಬಿಕವಾದ ಜಗಳದಲ್ಲಿ ಅನ್ನ ನೀರು ಬಿಡುವಂತಹ ಹಲವು ಪ್ರಕರಣಗಳು ಕರಾವಳಿಯಲ್ಲಿದೆ. ಇಂತಹ ಮುನಿಸು ಮಾಡಿಕೊಂಡವರು ಕೋಪ ಬಿಡಬಹುದು. ಅದಕ್ಕೊಂದು ಆರಂಭವನ್ನು ಶ್ರೀಧ್ವಯರು ನೀಡುತ್ತಿದ್ದಾರೆ ಎಂದು ಕೃಷ್ಣಮಠದ ಭಕ್ತ ಪ್ರದೀಪ್ ಕುಮಾರ್ ಕಲ್ಕೂರ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

    ದೇವರಲ್ಲಿ ಕ್ಷಮೆ: ನಾಲ್ಕು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಮೊದಲು ಅನಂತೇಶ್ವರ- ನಂತರ ಚಂದ್ರಮೌಳೇಶ್ವರ ಅಲ್ಲಿಂದ ಶ್ರೀಕೃಷ ಮಠಕ್ಕೆ ತೆರಳಿ ಇಬ್ಬರೂ ಜೊತೆಯಾಗಿ ನಿಂತು ದೇವರಲ್ಲಿ ಕ್ಷಮೆ ಕೋರಲಿದ್ದಾರೆ. ಉಡುಪಿಯ ಕಾರ್ಯಕ್ರಮ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯ, ಶಿರಸಿಯ ಸೋಂದಾ ಮಠದಲ್ಲಿ ಅಲ್ಲಿನ ದೇವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿ ಮತ್ತೆ ತಮ್ಮ ಸೋದರತೆಯ ಸಂಬಂಧ ಆರಂಭಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡೂ ಜಿಲ್ಲೆಯ ಸಾವಿರಾರು ಮಂದಿ ಭಕ್ತರು, ರಾಜ್ಯವ್ಯಾಪಿ ಜನರು ಬಂದು ಪಾಲ್ಗೊಳ್ಳುವ ನಿರೀಕ್ಷೆಯಿದೆ.