Tag: Social distance

  • ಸಾಮಾಜಿಕ ಅಂತರಕ್ಕಾಗಿ ಮರದಲ್ಲೊಂದು ಪುಟ್ಟಮನೆ ಕಟ್ಟಿದ

    ಸಾಮಾಜಿಕ ಅಂತರಕ್ಕಾಗಿ ಮರದಲ್ಲೊಂದು ಪುಟ್ಟಮನೆ ಕಟ್ಟಿದ

    ಲಕ್ನೋ: ಕೊರೊನಾ ವೈರಸ್ ಅನ್ನು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೆ ಮನೆಕಟ್ಟಿ ವಾಸಮಾಡುತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಅಸೋಧಾ ಗ್ರಾಮದ ಮುಕುಲ್ ತ್ಯಾಗಿ ಟ್ರೀಹೌಸ್ ನಿರ್ಮಾಣ ಮಾಡಿದ್ದಾರೆ. ಹಳೆಯ ಮತ್ತು ಒಣಗಿದ ಮರಗಳಿಂದ ಸರಳವಾದ ಮನೆ ನಿರ್ಮಿಸಿದ್ದಾರೆ.

    “ದೇಶದಲ್ಲಿ ಕೊರೊನಾ ವೈರಸ್ ಹರಡಿದಾಗಿನಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮಾತ್ರ ತಡೆಗಟ್ಟಲು ಸಾಧ್ಯ ಎಂದು ಹೇಳಿದ್ದಾರೆ. ಹೀಗಾಗಿ ಸಾಮಾಜಿಕ ಅಂತರದ ನಿಯಮವನ್ನು ಗಮನದಲ್ಲಿಟ್ಟುಕೊಂಡು ನಾನು ಒಬ್ಬನೇ ಬದುಕಲು ನಿರ್ಧರಿಸಿದೆ. ನನ್ನ ಮಗನ ಸಹಾಯದಿಂದ ನಾವು ಮರಗಳನ್ನು ತಂದು ಅವುಗಳನ್ನು ಕತ್ತರಿಸಿ ಹಲಗೆಗಳನ್ನು ಒಟ್ಟಿಗೆ ಸೇರಿಸಿ ಕಟ್ಟಿದ್ದೇವೆ” ಎಂದು ತ್ಯಾಗಿ ಹೇಳಿದ್ದಾರೆ.

    ನನ್ನ ತಂದೆ ಟ್ರೀಹೌಸ್ ನಿರ್ಮಿಸುವ ಬಗ್ಗೆ ನನಗೆ ಹೇಳಿದರು. ಇದಕ್ಕಾಗಿ ನಾವು ಒಣಗಿದ ಮರಗಳನ್ನು ಬಳಸಿದ್ದೇವೆ. ಅವುಗಳನ್ನು ಕತ್ತರಿಸಿ ಹಲಗೆ ರೀತಿಯಲ್ಲಿ ಮಾಡಿದ್ದೇವೆ. ನಂತರ ನಾವು ಆ ಹಲಗೆಗಳನ್ನು ಒಟ್ಟಿಗೆ ಕಟ್ಟಿದ್ದೇವೆ ಎಂದು ತ್ಯಾಗಿ ಮಗ ತಿಳಿಸಿದನು.

    ಇಲ್ಲಿ ವಾಸಿಸುವುದರಿಂದ ನಾನು ಪ್ರಕೃತಿಗೆ ಹತ್ತಿರವಾಗಿದ್ದೇನೆ ಮತ್ತು ಪರಿಸರವೂ ಇಲ್ಲಿ ತುಂಬಾ ಸ್ವಚ್ಛವಾಗಿದೆ. ನನಗೆ ಕಾಡಿನಲ್ಲಿ ವಾಸಿಸುವ ಅನುಭವವಾಗುತ್ತಿದೆ. ನಿಜಕ್ಕೂ ಇಲ್ಲಿಯ ವಾಸ ಚೆನ್ನಾಗಿದೆ ಎಂದು ತ್ಯಾಗಿ ಸಂತಸದಿಂದ ಹೇಳಿದ್ದಾರೆ. ತ್ಯಾಗಿಗೆ ಆಹಾರ ಅವರ ಮನೆಯಿಂದಲೇ ಬರುತ್ತದೆ.

  • ಲಾಕ್‍ಡೌನ್ ನಡುವೆ ಜನ್‍ಧನ್ ಹಣಕ್ಕಾಗಿ ಮುಗಿಬಿದ್ದ ನೂರಾರು ಮಹಿಳೆಯರು

    ಲಾಕ್‍ಡೌನ್ ನಡುವೆ ಜನ್‍ಧನ್ ಹಣಕ್ಕಾಗಿ ಮುಗಿಬಿದ್ದ ನೂರಾರು ಮಹಿಳೆಯರು

    – ಎಸ್‍ಪಿ ಮನವಿಗೂ ಡೋಂಟ್ ಕೇರ್

    ಬೀದರ್: ಜನರಿಗೆ ಎಷ್ಟೇ ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಅಕೌಂಟ್‍ಗೆ ಜಮೆಯಾಗಿರುವ ಹಣವನ್ನು ತೆಗೆದುಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಬೀದರ್ ನಲ್ಲಿ ನೂಕು ನುಗ್ಗಲು ಉಂಟಾಗಿದೆ.

    ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಜನ್‍ಧನ್ ಅಕೌಂಟ್‍ಗೆ ಹಣ ಹಾಕಿದ್ದಾರೆ. ಆದರೆ ಗಡಿ ಜಿಲ್ಲೆ ಬೀದರ್ ನಲ್ಲಿ ಈ ಹಣವನ್ನು ತೆಗೆದುಕೊಳ್ಳಲು ವೇಳೆ ನೂರಾರು ಮಹಿಳೆಯರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಎಲ್ಲಾ ಮಹಿಳೆಯರು ಗುಂಪು ಗುಂಪಾಗಿ ಬ್ಯಾಂಕ್ ಮುಂದೆ ಜಮಾಯಿಸಿದ್ದರು.

    ಬೀದರ್‍ನ ಬ್ರೀಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿರುವ ಎಸ್.ಬಿ.ಐ ಬ್ಯಾಂಕ್‍ನ ಗ್ರಾಹಕರ ಸೇವಾ ಕೇಂದ್ರದಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಸ್ವತಃ ಎಸ್ಪಿ ನಾಗೇಶ್ ಸ್ಥಳಕ್ಕೆ ಬಂದು ಮಹಿಳೆಯರಲ್ಲಿ ಮನವಿ ಮಾಡಿದರೂ ಮಹಿಳೆಯರು ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ.

    ಬೀದರ್ ನಲ್ಲಿ ಈಗಾಗಲೇ 10 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಹತ್ತು ಪ್ರಕರಣಗಳ ಪೈಕಿ ಓಲ್ಡ್ ಸಿಟಿಯಲ್ಲಿ ಬರೋಬ್ಬರಿ 8 ಪ್ರಕರಣಗಳು ಪತ್ತೆಯಾಗಿವೆ. ಜನ್‍ಧನ್ ಹಣ ತೆಗೆದುಕೊಳ್ಳಲು ಬಂದಿರುವ ಮಹಿಳೆಯರು ಬಹುತೇಕ ಓಲ್ಡ್ ಸಿಟಿಯ ನಿವಾಸಿಗಳಾಗಿದ್ದಾರೆ.

  • ಚೀಲವನ್ನು ಸಾಲಗಿ ಇಟ್ಟು ಗುಂಪು ಗುಂಪಾಗಿ ನಿಂತ ಜನ

    ಚೀಲವನ್ನು ಸಾಲಗಿ ಇಟ್ಟು ಗುಂಪು ಗುಂಪಾಗಿ ನಿಂತ ಜನ

    – ಪಡಿತರ ಅಂಗಡಿಯಲಿಲ್ಲ ಸಾಮಾಜಿಕ ಅಂತರ

    ಹಾವೇರಿ: ಕೊರೊನಾ ಸೋಂಕು ತಡೆಗೆ ಲಾಕ್‍ಡೌನ್ ಇದ್ದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಪಡಿತರ ಪಡೆಯಲು ಸೇರಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನಾರಾಯಣಪುರ ದೊಡ್ಡಪ್ರಮಾಣದ ವ್ಯವಸಾಯ ಸಹಕಾರಿ ಸಂಘದ ವಿತರಣಾ ಕೇಂದ್ರದ ಮುಂದೆ ಜನರು ಪಡಿತರ ಪಡೆಯಲು ಜಮಾಯಿಸಿದ್ದಾರೆ. ಪಡಿತರ ವಿತರಣಾ ಕೇಂದ್ರದ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿಲಾಗಿತ್ತು. ಆದರೆ ಜನರು ಮಾತ್ರ ಗುಂಪು ಗುಂಪಾಗಿ ನಿಂತು ಪಡಿತರಕ್ಕಾಗಿ ಕಾಯುತ್ತಿದ್ದಾರೆ. ಸಾಮಾಜಿಕ ಅಂತರ ಅನ್ನೋದನ್ನು ಪಡಿತರ ಪಡೆಯಲು ತಂದ ಚೀಲಗಳಿಗೆ ಮಾತ್ರ ಸೀಮಿತ ಮಾಡಿದ್ದಾರೆ.

    ಪಡಿತರ ಪಡೆಯಲು ತಂದ ಚೀಲಗಳನ್ನು ಸಾಮಾಜಿಕ ಅಂತರದಲ್ಲಿಟ್ಟು, ತಾವು ಮಾತ್ರ ಗುಂಪು ಗುಂಪಾಗಿ ಕುಳಿತು ಪಡಿತರಕ್ಕಾಗಿ ಕಾಯುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮಾತ್ರ ಗುಂಪು ಗುಂಪಾಗಿ ಪಡಿತರ ಪಡೆಯಲು ಜಮಾಯಿಸಿದ್ದಾರೆ.

    ಪೊಲೀಸರು, ಕಂದಾಯ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾಕಷ್ಟು ಅರಿವು ಮೂಡಿಸಿದರೂ, ಜನರು ಮಾತ್ರ ಅದು ತಮಗೆ ಸಂಬಂಧಿಸಿದ್ದೆ ಅಲ್ಲ ಅನ್ನುವಂತೆ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ.

  • ಜನರನ್ನು ಗುಂಪಿನಿಂದ ಬೇರ್ಪಡಿಸಬೇಕೆಂದು ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ ಗ್ರಾಮಸ್ಥರು

    ಜನರನ್ನು ಗುಂಪಿನಿಂದ ಬೇರ್ಪಡಿಸಬೇಕೆಂದು ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ ಗ್ರಾಮಸ್ಥರು

    ಧಾರವಾಡ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟೋದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದರೂ ಕೆಲವು ಜನ ಕೇಳ್ತಾನೆ ಇಲ್ಲ. ಪೊಲೀಸರು ಲಾಠಿ ರುಚಿ ತೋರಿಸಿದರೂ ಕೆಲವರಿಗೆ ಭಯವೇ ಇಲ್ಲವಾಗಿ ಹೋಗಿದೆ. ಹೀಗಾಗಿ ಜನರನ್ನು ಹೇಗಾದರೂ ಮಾಡಿ ಗುಂಪಿನಿಂದ ಬೇರ್ಪಡಿಸಬೇಕು ಎಂದು ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮಸ್ಥರು ಹೊಸ ಪ್ಲಾನ್ ಮಾಡಿದ್ದಾರೆ.

    ಗ್ರಾಮದ ಅರಳಿಮರದ ಕಟ್ಟೆ ಹಿಡಿದು ಗುಂಪು ಗುಂಪಾಗಿ ಕುಳಿತುಕೊಳ್ಳೋರೆಲ್ಲಾ ಈಗ ಅದರಿಂದ ದೂರ ಇರುವಂತೆ ಮಾರಡಗಿ ಗ್ರಾಮಸ್ಥರು ಮಾಡಿದ್ದಾರೆ. ಗ್ರಾಮದ ಪ್ರಮುಖ ವೃತ್ತದಲ್ಲಿರೋ ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ್ದು, ಯಾರು ಕಟ್ಟೆಯ ಮೇಲೆ ಕೂರದಂತೆ ಮಾಡಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಯಾರೂ ಈ ಕಟ್ಟೆಯ ಮೇಲೆ ಕುಳಿತುಕೊಳ್ಳಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಜನರಿಗೆ ಎಷ್ಟೇ ಹೇಳಿದರೂ ಯಾರೂ ಮಾತನ್ನು ಕೇಳಿರಲಿಲ್ಲ. ಗ್ರಾಮಸ್ಥರು ಒಂದು ಗುಂಪಿಗೆ ತಿಳಿ ಹೇಳಿ ಅಲ್ಲಿಂದ ಕಳಿಸುತ್ತಿದ್ದಂತೆ ಮತ್ತೊಂದು ಗುಂಪು ಕಟ್ಟೆ ಮೇಲೆ ಬಂದು ಕುಳಿತುಕೊಳ್ಳುತ್ತಿತ್ತು.

    ಎಷ್ಟೇ ಹೇಳಿದರೂ ಕೇಳದ ಜನರಿಗೆ ಬುದ್ಧಿ ಕಲಿಸಲು ಗ್ರಾಮಸ್ಥರು ಪ್ಲಾನ್ ಮಾಡಿದ್ದು, ಆ ಕಟ್ಟೆಯ ಮೇಲೆ ಡಾಂಬರು ಸುರಿದು ಬಿಟ್ಟಿದ್ದಾರೆ. ಮೊದಲೇ ಈಗ ಬೇಸಿಗೆ, ಸೂರ್ಯ ಶಾಖಕ್ಕೆ ಡಾಂಬರು ಕಾಯುತ್ತಿರೋದು ಒಂದೆಡೆಯಾದ್ರೆ, ಅದು ಅಂಟಿಕೊಂಡ್ರೆ ಮುಗದೇ ಹೋಯ್ತು ಎಂದು ಜನರು ಕಟ್ಟೆಯಿಂದ ದೂರವಿದ್ದಾರೆ. ಹೀಗಾಗಿ ಈಗ ಯಾರೂ ಕೂಡ ಗುಂಪಾಗಿ ಕುಳಿತುಕೊಳ್ಳಲು ಸಾಧ್ಯವಾಗದೆ ತಮ್ಮ ಪಾಡಿಗೆ ತಾವೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.