Tag: snake bite

  • ಅಂಗನವಾಡಿಗೆ ತೆರಳಿದ್ದ 3ರ ಬಾಲಕಿಗೆ ಹಾವು ಕಚ್ಚಿ ಸಾವು

    ಅಂಗನವಾಡಿಗೆ ತೆರಳಿದ್ದ 3ರ ಬಾಲಕಿಗೆ ಹಾವು ಕಚ್ಚಿ ಸಾವು

    ಹುಬ್ಬಳ್ಳಿ: ಅಂಗನವಾಡಿಗೆ ತೆರಳಿದ್ದ ಮೂರು ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಕಾರವಾರ (Karwar) ಜಿಲ್ಲೆಯ ಮುಂಡಗೋಡು (Mundagodu) ಅಳೂರು ಓಣಿಯಲ್ಲಿ ನಡೆದಿದೆ.ಇದನ್ನೂ ಓದಿ: ಹೊಸ ವರ್ಷ ಆಚರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡು

    ಮೃತ ಬಾಲಕಿಯನ್ನು ಮಯೂರಿ(3) ಎಂದು ಗುರುತಿಸಲಾಗಿದೆ.

    ಸ್ಥಳೀಯ ಮಾರಿಕಾಂಬ ಅಂಗನವಾಡಿಗೆ ಬಾಲಕಿ ತೆರಳಿದ್ದಳು. ಹೊರಬದಿಯ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಾಲಿಗೆ ಹಾವು ಕಚ್ಚಿದೆ. ಬಳಿಕ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.ಇದನ್ನೂ ಓದಿ: ಅಮಿತ್ ಶಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ.. ಸಚಿವ ಸಂಪುಟದಿಂದ ಕೈಬಿಡಿ: ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹ

  • ಹಾವು ಕಡಿತಕ್ಕೆ ಮುಕ್ತಿ ನೀಡಲು ಸರ್ಕಾರ ಬದ್ಧ – ಚಿಕಿತ್ಸಾ ವ್ಯವಸ್ಥೆ ಸಮರ್ಪಕ ಜಾರಿಗೆ ರಾಜ್ಯಗಳಿಗೆ ಸೂಚನೆ!

    ಹಾವು ಕಡಿತಕ್ಕೆ ಮುಕ್ತಿ ನೀಡಲು ಸರ್ಕಾರ ಬದ್ಧ – ಚಿಕಿತ್ಸಾ ವ್ಯವಸ್ಥೆ ಸಮರ್ಪಕ ಜಾರಿಗೆ ರಾಜ್ಯಗಳಿಗೆ ಸೂಚನೆ!

    ದೇಶದಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಷ್ಟೇ ಪ್ರತಿ ವರ್ಷವೂ ಹೆಚ್ಚು ಸಾವಿಗೆ ಕಾರಣವಾಗುತ್ತಿರುವುದು ಹಾವು ಕಡಿತ. ಗ್ರಾಮೀಣ ಪ್ರದೇಶದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದರು. ಆದ್ರೆ ಇದರ ಬಗ್ಗೆ ಸರ್ಕಾರ ಅಷ್ಟಾಗಿ ಕ್ರಮ ವಹಿಸುತ್ತಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 81,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಂತೆ ಇದರ ಮೂರರಷ್ಟು ಮಂದಿ ಅಂಗಾಗ ವೈಫಲ್ಯಗಳೂ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದೆಲ್ಲದಕ್ಕೂ ಮುಕ್ತಿ ಕೊಡಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಿದೆ.

    ಇತ್ತೀಚೆಗಷ್ಟೇ ಹಾವು ಕಡಿತ ಪ್ರಕರಣಗಳನ್ನು ಕೇಂದ್ರ ಸರ್ಕಾರ ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದ ಬಳಿಕ ರಾಜ್ಯಗಳು ಇದನ್ನು ಸಮರ್ಪಕವಾಗಿ ಜಾರಿಗೆ ತರುವಂತೆ ಸೂಚನೆ ನೀಡಿದೆ. 2030ರ ವೇಳೆಗೆ ಸಾವು ಪ್ರಕರಣಗಳನ್ನು ಶೇ.50 ರಷ್ಟು ಕಡಿಮೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿ ಹಾವು ಕಡಿತವನ್ನು ಅಧಿಸೂಚಿತ ರೋಗಗಳಾಗಿ ಘೋಷಿಸಿ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಹಾವು ಕಡಿತವನ್ನು ವರದಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

    ಹಾವು ಕಡಿತ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ. ಈ ವರ್ಷ 9 ತಿಂಗಳ ಅವಧಿಯಲ್ಲಿಯೇ 9,529 ಹಾವು ಕಡಿತ ಪ್ರಕರಣಗಳು ವರದಿಯಾದರೆ, ಕಡಿತದಿಂದ 69 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಹಾವು ಕಡಿತಕ್ಕೆ ಒಳಗಾದವರ ಹಾಗೂ ಈ ಕಡಿತದಿಂದ ಮೃತಪಟ್ಟವರ ಸಮಗ್ರ ಮಾಹಿತಿ ದೊರೆಯದೇ ಇದ್ದುದರಿಂದಾಗಿ ಆರೋಗ್ಯ ಇಲಾಖೆಯು ಫೆಬ್ರವರಿಯಲ್ಲಿ ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿತ್ತು. ಇದರಿಂದಾಗಿ ಹಾವು ಕಡಿತಕ್ಕೆ ಒಳಗಾಗಿ ಒಳರೋಗಿ ಹಾಗೂ ಹೊರರೋಗಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿದವರು, ಮರಣ ಹೊಂದಿದವರ ವಿವರವನ್ನು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕಡ್ಡಾಯವಾಗಿ ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಡಿ ದಾಖಲಿಸುತ್ತಿವೆ. ಈ ಕ್ರಮವನ್ನು ಇನ್ನಷ್ಟು ಸಮರ್ಪಕವಾಗಿ ಜಾರಿಗೆ ತರಲು ಸೂಚಿಸಿದೆ.

    ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ರಮದಿಂದ ಹಾವು ಕಡಿತ ಪ್ರಕರಣಗಳ ಮೇಲೆ ನಿಗಾ ಮತ್ತು ನಿರ್ವಹಣೆ ಇಲಾಖೆಗೆ ಸಾಧ್ಯವಾಗಿದ್ದು, ಮಾರ್ಚ್ ಬಳಿಕ ಅಧಿಕ ಸಂಖ್ಯೆಯಲ್ಲಿ ಹಾವು ಕಡಿತ ಹಾಗೂ ಮರಣ ಪ್ರಕರಣಗಳು ವರದಿಯಾಗುತ್ತಿವೆ. 2022ರಲ್ಲಿ ರಾಜ್ಯದಲ್ಲಿ 3,425 ಹಾವು ಕಡಿತ ಪ್ರಕರಣಗಳು ವರದಿಯಾದರೆ, 17 ಮಂದಿ ಕಡಿತದಿಂದ ಮೃತಪಟ್ಟಿದ್ದರು. ಕಳೆದ ವರ್ಷ 6,596 ಪ್ರಕರಣಗಳು ವರದಿಯಾಗಿವೆ. ಕಡಿತಕ್ಕೆ ಒಳಗಾದವರಲ್ಲಿ 19 ಮಂದಿ ಮೃತಪಟ್ಟಿದ್ದರು. ಕೃಷಿ ಕೆಲಸದಲ್ಲಿ ತೊಡಗಿರುವಾಗ ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯಿಂದ 1 ಲಕ್ಷ ಪರಿಹಾರ ನೀಡುವ ಯೋಜನೆ ಜಾರಿಯಲ್ಲಿದೆ. ಇತರರಿಗೂ ಪರಿಹಾರ ಒದಗಿಸುವ ಬಗ್ಗೆ ಆರೋಗ್ಯ ಇಲಾಖೆಯಿಂದ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ.

    ಹಾವು ಕಡಿತವನ್ನು ಏಕೆ ʻಅಧಿಸೂಚಿತ ಕಾಯಿಲೆʼ ಎಂದು ಪರಿಗಣಿಸಲಾಗುತ್ತದೆ? ಹಾವು ಕಡಿತಕ್ಕೆ ತಕ್ಷಣದ ಹಾರೈಕೆ ಅಗತ್ಯವಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ರಕ್ತಸ್ರಾವ, ಪಾರ್ಶ್ವವಾಯು, ಅಂಗಾಗ ವೈಫಲ್ಯ ಮಾತ್ರವಲ್ಲದೇ ಸಾವೂ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿಯೇ ಇರುತ್ತದೆ. ಸಾವು ಮತ್ತು ತೀವ್ರತರವಾದ ಅಪಾಯಗಳಿಂದ ರಕ್ಷಣೆ ಮಾಡಲು ಆಂಟಿ ವೆನಮ್‌ ಬಳಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕಾಗಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ.

    ಭಾರತದಲ್ಲಿ 310ಕ್ಕೂ ಹೆಚ್ಚು ಜಾತಿಯ ಹಾವುಗಳಿದ್ದು, ಅವುಗಳಲ್ಲಿ 66 ವಿಷಕಾರಿ ಮತ್ತು 42 ಸೌಮ್ಯ ವಿಷಕಾರಿ, 23 ಪ್ರಭೇದದ ಹಾವುಗಳು ವಿಷಕಾರಿ ಎಂದು ಗುರುತಿಸಲಾಗಿದೆ. ಅದರಲ್ಲೂ ದೇಶದಲ್ಲಿ ನಾಗರಹಾವು, ಸಾಮಾನ್ಯ ಕ್ರೈಟ್, ರಸೆಲ್ಸ್ ವೈಪರ್ ಮತ್ತು ಗರಗಸ-ಸ್ಕೇಲ್ಡ್ ವೈಪರ್‌ ಹಾವುಗಳನ್ನು ಹೆಚ್ಚು ಅಪಾಯಕಾರಿ ಹಾವುಗಳೆಂದು ಗುರುತಿಸಲಾಗಿದೆ. ಸದ್ಯ ವಾಣಿಜ್ಯವಾಗಿ ಲಭ್ಯವಿರುವ ಆಂಟಿ ವೆನಮ್‌, ಶೇ.80 ರಷ್ಟು ಹಾವು ಕಡಿತದಿಂದ ಮರಣ ಪ್ರಮಾಣವನ್ನು ತಪ್ಪಿಸುತ್ತದೆ ಎಂದು ವರದಿಗಳು ಹೇಳಿವೆ.

    ಚಿಕಿತ್ಸಾ ವ್ಯವಸ್ಥೆ ಹೇಗೆ?
    ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಹಾವಿನ ನಂಜಿನ ಲಕ್ಷಣಗಳು ವ್ಯಕ್ತಿಗೆ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ‘ಆ್ಯಂಟಿ ಸ್ನೇಕ್ ವೆನಮ್’ ಒದಗಿಸಲಾಗುತ್ತಿದೆ. 2030ರ ವೇಳೆಗೆ ಹಾವು ಕಡಿತ ಪ್ರಕರಣ ಹಾಗೂ ಮರಣವನ್ನು ಅರ್ಧದಷ್ಟು ಇಳಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಹಾವು ಕಡಿತಕ್ಕೆ ಒಳಗಾದವರಿಗೆ ಅಂಬುಲೆನ್ಸ್‌ ಸೇವೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.

    SNAKE
    ಸಾಂದರ್ಭಿಕ ಚಿತ್ರ

    ʻಕೃಷಿ ಕೆಲಸ ಸೇರಿ ವಿವಿಧ ಸಂದರ್ಭದಲ್ಲಿ ಹಾವು ಕಡಿತಕ್ಕೆ ಒಳಗಾದವರು ಚಿಕಿತ್ಸೆ ಪಡೆಯುವುದು ವಿಳಂಬವಾದಲ್ಲಿ ಜೀವಕ್ಕೆ ತೊಂದರೆಯಾಗುತ್ತದೆ. ಘೋಷಿತ ರೋಗವೆಂದು ಗುರುತಿಸಿದ್ದರಿಂದ ಹಾವು ಕಡಿತದಿಂದ ಉಂಟಾಗುತ್ತಿದ್ದ ಪ್ರಾಣ ಹಾನಿ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಹಾವು ಕಡಿತದಿಂದ ವ್ಯಕ್ತಿ ಮರಣ ಹೊಂದಿದಲ್ಲಿ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಮಾಡಿಸಲಾಗುತ್ತಿದೆ. ಇದರಿಂದಾಗಿ ಹಾವು ಕಡಿತದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿದೆ’ ಎಂದು ಇಲಾಖೆ ತಿಳಿಸಿದೆ.

    ಹಾವು ಕಡಿತವನ್ನು ಏಕೆ ವರದಿ ಮಾಡಬೇಕು?
    ಹಾವು ಕಡಿತ ಪ್ರಕರಣಗಳನ್ನು ವರದಿ ಮಾಡುವುದರಿಂದ ನಿಖರ ಸಂಖ್ಯೆ ನಿರ್ಧರಿಸಲು, ಪ್ರಕರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಸರ್ಕಾರಕ್ಕೆ ಮಾಹಿತಿ ನೆರವು ಪಡೆಯಲು ಅನುಕೂಲವಾಗುತ್ತದೆ. ಇದರಿಂದ ಯಾವ ಪ್ರದೇಶಗಳಲ್ಲಿ ಹಾವು ಕಡಿತ ಹೆಚ್ಚಾಗುತ್ತದೆ ಎಂಬುದನ್ನು ಕಂಡುಕೊಂಡು ʻಆಂಟಿ ವೆನಮ್‌ʼ ಒದಗಿಸಲು ಸಹಾಯಕವಾಗುತ್ತದೆ.

    ಕರ್ನಾಟಕದಲ್ಲಿ ಹಾವು ಕಡಿತ ಪ್ರಕರಣಗಳು
    2022 – 17
    2023 – 19
    2024 – 69

    ಕರ್ನಾಟಕದಲ್ಲಿ ಹಾವು ಕಡಿತದಿಂದ ಆದ ಸಾವುಗಳು
    2022 – 3,425
    2023 – 6,596
    2024 – 9,529

    ಭಾರತದಲ್ಲಿ ಆಂಟಿ ಸ್ನೇಕ್ ವೆನಮ್ (ವಿಷ ನಿರೋಧಕ) ಅನ್ನು ಪ್ರಮುಖ ನಾಲ್ಕು ಜಾತಿಯ ಹಾವುಗಳ ಕಡಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಒಟ್ಟು 290ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿದ್ದು, ಅವುಗಳಲ್ಲಿ ಸಮಾರು 40 ವಿಷಪೂರಿತ ಹಾವುಗಳಿವೆ. ಆದರೆ, ಆಂಟಿ ಸ್ನೇಕ್‌ ವೆನಮ್ ತಯಾರಿಸುವಾಗ ಪ್ರಮುಖ ನಾಲ್ಕು ಹಾವುಗಳ ವಿಷವನ್ನು ಮಾತ್ರ ಬಳಸಲಾಗುತ್ತಿದೆ. ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಹಾವು ಪ್ರಭೇದ ಇವೆ. ಈ ನಾಲ್ಕು ಜಾತಿಗೆ ಸೇರದ ಹಾವುಗಳಿಂದ ಕಡಿತಕ್ಕೊಳಗಾದವರಿಗೆ ಈಗ ಬಳಸುತ್ತಿರುವ ಆ್ಯಂಟಿ ಸ್ನೇಕ್‌ ವೆನಮ್ ಅಷ್ಟು ಉಪಯುಕ್ತವಾಗುವುದಿಲ್ಲ. ಭಾರತದಂಥ ವಿಸ್ತಾರವಾದ, ವೈವಿಧ್ಯಮಯ ದೇಶದಲ್ಲಿ ಇಲ್ಲಿನ ಪ್ರಾದೇಶಿಕ ಭಿನ್ನತೆ, ಹಾವುಗಳ ವೈವಿಧ್ಯಕ್ಕೆ ತಕ್ಕಂತೆ ಆಂಟಿ ಸ್ನೇಕ್ ವೆನಮ್ ತಯಾರಿಸುವ ದಿಸೆಯಲ್ಲಿ ಅಧ್ಯಯನಗಳು ನಡೆಯಬೇಕಿದೆ ಎನ್ನುವುದು ತಜ್ಞರ ನಿಲುವು. ಹಾವುಗಳ ವಿಷದ ಸಾಮರ್ಥ್ಯವು ಅವುಗಳ ವಯಸ್ಸಿನೊಂದಿಗೆ ಮತ್ತು ವಾತಾವರಣಕ್ಕೆ ತಕ್ಕಂತೆ ಬದಲಾಗಿರುತ್ತದೆ ಎಂದು 2020ರಲ್ಲಿ ಪ್ರಕಟವಾದ ಇಂಡಿಯನ್‌ ಜರ್ನಲ್‌ ಆಫ್‌ ಮೆಡಿಕಲ್‌ ಹೇಳಿದೆ.

    ಕೇರಳದಲ್ಲಿ ʻಸರ್ಪ’ ಸಾಧನೆ
    2019ರಲ್ಲಿ ಕೇರಳದ ವಯನಾಡ್‌ನಲ್ಲಿ 5ನೇ ತರಗತಿಯ ಬಾಲಕಿಯೊಬ್ಬಳಿಗೆ ಶಾಲಾ ಕೊಠಡಿಯಲ್ಲಿಯೇ ಹಾವು ಕಚ್ಚಿ, ಆಕೆ ಮೃತಪಟ್ಟಿದ್ದಳು. 2019ರಲ್ಲಿ ರಾಜ್ಯದಲ್ಲಿ ಹಾವು ಕಚ್ಚಿ 130 ಮಂದಿ ಮೃತಪಟ್ಟಿದ್ದರು. 2030ರಲ್ಲಿ ಉತ್ತರಾ ಎನ್ನುವ ಮಹಿಳೆಗೆ ನಿದ್ರೆ ಮಾತ್ರ ನೀಡಿ, ಬೆಡ್ ರೂಮ್‌ ನಲ್ಲಿ ಮಲಗಿದ್ದಾಗ ಅವರ ಮೇಲೆ ಗಂಡನೇ ನಾಗರ ಹಾವನ್ನು ಎಸೆದಿದ್ದ ಹಾವು ಕಚ್ಚಿ ಉತ್ತರಾ ಅವರು ಮೃತಪಟ್ಟರು. ಆ ವರ್ಷ (2020) ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 80. ಈ ಎರಡು ಪ್ರಕರಣಗಳು ಹಾವು ಕಡಿತದ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಪ್ರೇರೇಪಿಸಿತು.

    ಇನ್ನೂ 2023ರಲ್ಲಿ ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 40. 2024ರ ಆರಂಭದ ತಿಂಗಳಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 7. ಕೇರಳ ಕ್ರಮೇಣ ಹಾವು ಕಡಿತದ ಶೂನ್ಯ ಸಾವಿನ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಕೇರಳದ ಈ ಸಾಧನೆಗೆ ಕಾರಣ, ಹಾವಿನ ಬಗ್ಗೆ ಅರಿವು ಮೂಡಿಸುವ ಮತ್ತು ಅವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ರೂಪಿಸಿರುವ ‘ಸರ್ಪ’ (ಸ್ನೇಕ್ ಅವೇರ್‌ನೆಸ್‌ ರನ್ನೂ ಮತ್ತು ಪ್ರೊಟೆಕ್ಷನ್) ಆ್ಯಪ್. ಇದರ ಮೂಲಕ ಸಂತ್ರಸ್ತರು ವೈಜ್ಞಾನಿಕವಾಗಿ ಹಾವನ್ನು ಹಿಡಿಯುವ ತರಬೇತಿ ಪಡೆದವರನ್ನು ಸಂಪರ್ಕಿಸಿ, ಶೀಘ್ರ ಚಿಕಿತ್ಸೆ ಪಡೆಯಬಹುದಾಗಿದೆ.

    ಹಾವು ಕಚ್ಚಿದಾಗ ಏನು ಮಾಡಬೇಕು?
    * ವಿಚಲಿತಗೊಳ್ಳದೆ ಶಾಂತವಾಗಿರಿ. ಕಡಿತಕೊಳ್ಳಗಾದ ವ್ಯಕ್ತಿಯನ್ನು ಸಮಾಧಾನ ಪಡಿಸಿ
    * ಕಚ್ಚಿದ ಜಾಗ ಅಥವಾ ಗಾಯವನ್ನು ಹಾಗೆಯೇ ಬಿಡಿ
    * ಕಡಿತದ ಜಾಗದಿಂದ ಬಿಗಿ ಬಟ್ಟೆ/ಆಭರಣ/ಗಡಿಯಾರ/ಉಂಗುರ/ಬೆಲ್ಫ್ ಪಾದರಕ್ಷೆಗಳನ್ನು ತೆಗೆಯಿರಿ
    * ಕಡಿತಕ್ಕೆ ಒಳಗಾದ ವೃತ್ತಿಯು ಎಡ ಮಗ್ಗುಲಿಗೆ ಮಲಗುವಂತೆ ಮಾಡಿ. ಬಲಗಾಲು ಬಾಗಿರಲಿ, ಕೈಗಳು ತಲೆಯ ಕೆಳಭಾಗದಲ್ಲಿರಲಿ
    * ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿರಿ

    ಏನು ಮಾಡಬಾರದು?
    * ಕಡಿತಕ್ಕೊಳಗಾದ ವ್ಯಕ್ತಿ ಗಾಬರಿಯಾಗುವುದಕ್ಕೆ ಅವಕಾಶ ನೀಡಬೇಡಿ
    * ಕಚ್ಚಿದ ಹಾವನ್ನು ಹೊಡೆಯಬೇಡಿ ಅಥವಾ ಕೊಳ್ಳಬೇಡಿ. ಹೊಡೆದರೆ ಅದು ಮತ್ತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ
    * ಕಡಿತದ ಗಾಯಕ್ಕೆ ವಿಷ ನಿರೋಧಕ ಔಷಧ ಹಾಕಬೇಡಿ
    * ರಕ್ತ ಪರಿಚಲನೆ ತಡೆಯುವುದಕ್ಕಾಗಿ ಕಚ್ಚಿರುವ ಸ್ಥಳವನ್ನು ದಾರ, ಬಟ್ಟೆಯಿಂದ ಕಟ್ಟಬೇಡಿ ಗಾಯನಾಗಿರುವ ಭಾಗವನ್ನು ಕತ್ತರಿಸಬೇಡಿ
    * ಕಡಿತಕ್ಕೊಳಗಾದ ವ್ಯಕ್ತಿಯನ್ನು ಅಂಗಾತವಾಗಿ ಮಲಗಿಸಬೇಡಿ. ದೇಹದಲ್ಲಿ ಗಾಳಿಯ ಸಂಚಾರವನ್ನು ಇದು ತಡೆಯಬಹುದು
    * ಸಾಂಪ್ರದಾಯಿಕ ಅಥವಾ ಅಸುರಕ್ಷಿತವಾದ ಚಿಕಿತ್ಸೆಯನ್ನು ಪಡೆಯಬೇಡಿ ಎಂಬುದು ತಜ್ಞರ ಸಲಹೆ.

  • ತಂದೆಗೆ ರಾತ್ರಿ ಊಟ ಕೊಡಲು ಜಮೀನಿಗೆ ಹೋಗುತ್ತಿದ್ದಾಗ ಹಾವು ಕಡಿದು ಬಾಲಕ ಸಾವು

    ತಂದೆಗೆ ರಾತ್ರಿ ಊಟ ಕೊಡಲು ಜಮೀನಿಗೆ ಹೋಗುತ್ತಿದ್ದಾಗ ಹಾವು ಕಡಿದು ಬಾಲಕ ಸಾವು

    ರಾಯಚೂರು: ತಂದೆಗೆ ಊಟ ಕೊಡಲು ಜಮೀನಿಗೆ (Farm) ತೆರಳಿದ್ದ ಸಂದರ್ಭ ಹಾವು ಕಡಿದು (Snake Bite) ಬಾಲಕ ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಕ್ಯಾದಿಗೇರಾದ ಎ.ಜಿ.ಕಾಲೋನಿಯಲ್ಲಿ ಘಟನೆ ನಡೆದಿದ್ದು, ಆಂಜನೇಯ (15) ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾನೆ. ಜಮೀನಿನಲ್ಲಿದ್ದ ಕುರಿದೊಡ್ಡಿ ಬಳಿ ವಾಸವಿದ್ದ ತಂದೆ-ತಾಯಿಗೆ ರಾತ್ರಿ ಊಟ ಕೊಡಲು ಹೋದಾಗ ಘಟನೆ ನಡೆದಿದೆ. ಬಾಲಕ 10ನೇ ತರಗತಿ ಓದುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್

    ಹಾವು ಕಡಿದ ಕೂಡಲೇ ಬಾಲಕನನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸಮರ್ಪಕ ಚಿಕಿತ್ಸೆ ಸಿಗದ ಹಿನ್ನೆಲೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಬಿಸಿನೀರು ಎರಚಿ ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ಆಂಟಿ!

  • ಗುಡಿಸಲಿನಲ್ಲಿ ಮಲಗಿದ್ದ ಬಾಲಕಿಗೆ  ಹಾವು ಕಚ್ಚಿ ಸಾವು

    ಗುಡಿಸಲಿನಲ್ಲಿ ಮಲಗಿದ್ದ ಬಾಲಕಿಗೆ ಹಾವು ಕಚ್ಚಿ ಸಾವು

    ಹಾವೇರಿ: ಹಾವು ಕಡಿದು ಅಲೆಮಾರಿ ಜನಾಂಗದ ಐದು ವರ್ಷದ ಬಾಲಕಿ ಮೃತಪಟ್ಟ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯ ಹೊರವಲಯದಲ್ಲಿರೋ ಟೆಂಟ್ ನಲ್ಲಿ ನಡೆದಿದೆ.

    ಒಲಿವ್ವ ಸುಂಕಣ್ಣ ಮೋತಿ (5) ಮೃತ ಬಾಲಕಿ. ಗುಡಿಸಲಿನಲ್ಲಿ ಮಲಗಿದ್ದ ಒಲಿವ್ವ ಸುಂಕಣ್ಣ ಮೋತಿಗೆ ಭಾನುವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ವಿಷಪೂರಿತ ಹಾವು ಕಡಿದಿದೆ. ಹಾವು ಕಡಿದಿರುವ ವಿಷಯ ಪಾಲಕರಿಗೆ ಬೆಳಿಗ್ಗೆ 4ಗಂಟೆಗೆ ಗೊತ್ತಾದ ತಕ್ಷಣ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

    ಒಲಿವ್ವ ಗುಡಿಸಲಿನಲ್ಲಿ ನಿದ್ದೆಮಾಡುತ್ತಿದ್ದ ವೇಳೆ ಹಾವು ಕಡಿದು ಮೃತಪಟ್ಟಿದ್ದು, ಪುತ್ರಿಯನ್ನು ಕಳೆದುಕೊಂಡ ಅಲೆಮಾರಿ ಪಾಲಕರು ತೀವ್ರ ದುಖಿಃತರಾಗಿದ್ದಾರೆ. ಗುಡಿಸಲಿಗೆ ಬಾಲಕಿಯ ಶವವನ್ನು ತಗೆದುಕೊಂಡು ಬಂದಿರುವ ಅಲಮಾರಿಳ ದುಖಃದ ಕಟ್ಟೆ ಒಡೆದಿದೆ. ಇದನ್ನೂ ಓದಿ: ಕೆಲವು ಶಾಲೆಯಲ್ಲಿ ಹಿಜಬ್ ಯೂನಿಫಾರ್ಮ್ ಇದೆ, ಪರೀಕ್ಷೆಯಲ್ಲಿ ಹೇಗೆ ಮಾನಿಟರ್ ಮಾಡ್ತೀರಾ?: ದಿನೇಶ್ ಗುಂಡೂರಾವ್

    ಅಲೆಮಾರಿ ಬುಡುಗಜಂಗಮರ ಗುಡಿಸಲಿಗಳಿಲ್ಲ ಮೂಲಸೌಲಭ್ಯ, ಹಾವು ಕಡಿದು ಮೂರು ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ ಮೂವರು ಹಾವು ಕಡಿದು ಸಾವನ್ನಪ್ಪಿದ್ದಾರೆ. ಈಗಲಾದರೂ ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತು ಅಲೆಮಾರಿ ಬುಡುಗಜಂಗಮ ಗುಡಿಸಲುವಸಿಗಳಿಗೆ ಮನೆ ನಿರ್ಮಿಸಿಕಡಬೇಕು. ಮೃತಪಟ್ಟಿರುವ ಬಾಲಕಿಯ ಕುಟುಂಬದವರಿಗೆ ಸೂಕ್ತಪರಿಹಾರ ಕೊಡಬೇಕೆಂದು ಶೆಟ್ಟಿ ವಿಭೂತಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

  • ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

    ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿದ್ದು, ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪಾನ್ವೆಲ್ ಫಾರ್ಮ್ ಹೌಸ್‍ನಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿದೆ. ಈ ಹಾವು ವಿಷಕಾರಿ ಆಗಿರಲಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ನಟನನ್ನು ಚಿಕಿತ್ಸೆಗಾಗಿ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನಂತರ ಬೆಳಗ್ಗೆ 9 ಗಂಟೆಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಈಗ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.  ಸಲ್ಮಾನ್ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ನಾಳೆ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬ ಇರುವುರಿಂದ (ಡಿಸೆಂಬರ್ 27ಕ್ಕೆ) ಫಾರ್ಮ್‍ಹೌಸ್‍ಗೆ ತೆರಳಿದ್ದರು. ಸಲ್ಮಾನ್ ತನ್ನ ವಿಶೇಷ ದಿನವನ್ನು ಪನ್ವೆಲ್ ಫಾರ್ಮ್‍ಹೌಸ್‍ನಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಸ್ನೇಹಿತರೊಂದಿಗೆ ಆಚರಿಸಲಿದ್ದಾರೆ. ಸಲ್ಮಾನ್ ಅವರ ಫಾರ್ಮ್‍ಹೌಸ್ ಸಾಕಷ್ಟೂ ದೊಡ್ಡದಾಗಿದೆ. ಹಲವು ಪ್ರಭೇದದ ಪಕ್ಷಿಗಳು ಮತ್ತು ಪ್ರಾಣಿ, ಸಸ್ಯಗಳು ಫಾರ್ಮ್‍ಹೌಸ್‍ನಲ್ಲಿದೆ.

  • ಮಲಗಿದ್ದಲ್ಲೇ ಕಡಿದ ಹಾವು- ಬೆಳಗಾವಿಯಲ್ಲಿ ಇಬ್ಬರ ಸಾವು

    ಮಲಗಿದ್ದಲ್ಲೇ ಕಡಿದ ಹಾವು- ಬೆಳಗಾವಿಯಲ್ಲಿ ಇಬ್ಬರ ಸಾವು

    ಬೆಳಗಾವಿ: ಜಿಲ್ಲೆಯ ಪ್ರತ್ಯೇಕ ಗ್ರಾಮದಲ್ಲಿ ಹಾವು ಕಡಿತದಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಸವದತ್ತಿ ತಾಲೂಕಿನ ಓಬಲದಿನ್ನಿ ಗ್ರಾಮದಲ್ಲಿ 50 ವರ್ಷದ ಲಕ್ಷ್ಮಣ ಲಿಂಬನ್ನವರ ಅವರಿಗೆ ವಿಷಕಾರಿ ಹಾವು ಕಡಿದಿತ್ತು. ಚಿಕಿತ್ಸೆಗೆ ಸಹಾಯವಾಗಲೆಂದು ಕಡಿದ ಹಾವನ್ನು ಒಂದು ಚೀಲದಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಲಕ್ಷ್ಮಣ್ ಸಾವನ್ನಪ್ಪಿದ್ದಾರೆ. ಚೀಲದಲ್ಲಿ ತೆಗೆದುಕೊಂಡು ಹೋಗಿದ್ದ ಹಾವು ಕೂಡ ಸತ್ತು ಹೋಗಿದೆ.

    ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ 29 ವರ್ಷದ ರಾಮಪ್ಪ ಕೆಳಗಿನಮನಿ ಅವರಿಗೆ ಹಾವು ಕಡಿದಿತ್ತು. ಅವರೂ ಕೂಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

  • ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಒಟ್ಟಿಗೆ ಸಾಯೋಣವೆಂದು ಹೆಂಡತಿಯನ್ನ ಕಚ್ಚಿದ!

    ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಒಟ್ಟಿಗೆ ಸಾಯೋಣವೆಂದು ಹೆಂಡತಿಯನ್ನ ಕಚ್ಚಿದ!

    ಪಾಟ್ನಾ: ವಿಷಕಾರಿ ಹಾವಿನಿಂದ ಕಡಿಸಿಕೊಂಡ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಕೈಯನ್ನು ಕಚ್ಚಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

    ಇಲ್ಲಿನ ಬಿರ್ಸಿಂಗ್‍ಪುರ ಗ್ರಾಮದ ನಿವಾಸಿಯಾದ ಶಂಕರ್ ರೈ ಮಲಗಿದ್ದ ವೇಳೆ ವಿಷಕಾರಿ ಹಾವೊಂದು ಕಚ್ಚಿತ್ತು. ಶಂಕರ್ ಎಚ್ಚರಗೊಂಡಾದ ಅವರ ಪರಿಸ್ಥಿತಿ ತುಂಬಾ ಗಂಭಿರವಾಗಿದ್ದು, ತುಂಬಾ ಭಾವುಕರಾಗಿದ್ರು. ಇನ್ನು ನಾನು ಉಳಿಯಲ್ಲ ಅಂತ ಗೊತ್ತಾಗಿ ಶಂಕರ್ ತನ್ನ ಹೆಂಡತಿ ಅಮಿರಿ ದೇವಿ ಬಳಿ ಹೋಗಿ, ನಾನು ನಿನ್ನನ್ನ ತುಂಬಾ ಪ್ರೀತಿಸ್ತೀನಿ. ನಾವಿಬ್ಬರೂ ಒಟ್ಟಿಗೆ ಸಾಯಬೇಕು ಎಂದು ಹೇಳಿ ಅವರ ಕೈಯನ್ನು ಕಚ್ಚಿದ್ದಾರೆ.

    ಶಂಕರ್ ಅಮಿರಿ ಅವರನ್ನ ಕಚ್ಚಿದ ನಂತರ ಇಬ್ಬರೂ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಂಕರ್ ಸಾವನ್ನಪ್ಪಿದ್ದಾರೆ. ವೈದ್ಯರು ಅಮಿರಿ ಅವರ ಪ್ರಾಣ ಉಳಿಸುವಲ್ಲಿ ಸಫಲರಾಗಿದ್ದಾರೆ.

    ಇದನ್ನೂ ಓದಿ: ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

    ಸರಿಯಾದ ಸಮಯಕ್ಕೆ ಚಿಕಿತ್ಸೆ ಆರಂಭಿಸಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ. ಅವರೀಗ ಸುರಕ್ಷಿತವಾಗಿದ್ದಾರೆ ಅಂತ ಸ್ಥಳೀಯ ವೈದ್ಯರಾದ ಡಾ. ಜಯಕಾಂತ್ ಇಲ್ಲಿನ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಅಮಿರಿ ದೇವಿ ಹೇಳುವ ಪ್ರಕಾರ, ಪತಿ ಶಂಕರ್ ಜೋರಾಗಿ ಕೈಯನ್ನು ಕಚ್ಚಿದ್ದು, ಒಟ್ಟಿಗೆ ಸಾಯಬೇಕೆಂದಿದ್ದರು. ಸಾವಿನ ಬಳಿಕವೂ ಇಬ್ಬರೂ ಜೊತೆಯಾಗಿರಬೇಕೆಂದು ಬಯಸಿದ್ದರು. ಆದ್ರೆ ಅವರ ಆಸೆ ಈಡೇರಲಿಲ್ಲ.

    ನನ್ನ ಪತಿ ನನ್ನನ್ನು ತುಂಬಾ ಪ್ರೀತಿಸುತ್ತೇನೆ ಅಂತ ಹೇಳಿದ್ರು. ಒಟ್ಟಿಗೆ ಸಾಯಬೇಕೆಂದು ನನ್ನ ಕೈಗೆ ಜೋರಾಗಿ ಕಚ್ಚಿದ್ರು. ಅವರು ಕಚ್ಚಲು ನಾನು ಸಮ್ಮತಿಸಿದೆ ಎಂದು ಅಮಿರಿ ದೇವಿ ಹೇಳಿದ್ದಾರೆ.

    ಇದನ್ನೂ ಓದಿ: ಕಾಫಿ ತೋಟದಲ್ಲಿ ಕೇರೆ ಹಾವು ನುಂಗಿದ್ದ ಕಾಳಿಂಗ ಸರ್ಪ ಸೆರೆ- ವಿಡಿಯೋ ನೋಡಿ

    https://www.youtube.com/watch?v=23e5Ur5e-qs

  • ನಾಗರಹಾವಿಗೆ ಮುತ್ತಿಡಲು ಹೋಗಿ 100 ವಿಷಕಾರಿ ಹಾವು ಹಿಡಿದ ಉರಗ ರಕ್ಷಕ ಸಾವು!

    ಮುಂಬೈ: ಅನೇಕ ಸಂದಂರ್ಭಗಳಲ್ಲಿ ಹಾವು ಕಾಣಿಸಿಕೊಂಡಾಗ ಉರಗ ತಜ್ಞರು ಬಂದು ಬೇರೆಯವರ ಪ್ರಾಣ ಕಾಪಾಡಿದ್ದಾರೆ. ಆದ್ರೆ ಮುಂಬೈನಲ್ಲಿ ಉರಗ ರಕ್ಷಕರೊಬ್ಬರು ತಾವೇ ರಕ್ಷಿಸಿದ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.

    ಫೆಬ್ರವರಿ 1ರಂದು ಮುಂಬೈನ ಉರಗ ರಕ್ಷಕ ಸೋಮನಾಥ್ ನಾಗರಹಾವೊಂದನ್ನು ರಕ್ಷಿಸಿದ್ದರು. ಹವಿನೊಂದಿಗೆ ಫೋಟೋ ತೆಗಿಸಿಕೊಳ್ಳುವಾಗ ಅದರ ನೆತ್ತಿಗೆ ಮುತ್ತು ಕೊಡಲು ಮುಂದಾಗಿದ್ದರು. ಈ ವೇಳೆ ಹಾವು ಹಿಂದೆ ತಿರುಗಿ ಸೋಮನಾಥ್‍ಗೆ ಕಚ್ಚಿ ಸಾವನ್ನಪ್ಪಿದ್ದಾರೆ.

    ನವೀ ಮುಂಬೈನ ಸಿಬಿಡಿ ಬಲೇಪುರ್ ನಿವಾಸಿಯಾದ ಸೋಮನಾಥ್, ಅಂದು ಕಾರ್‍ವೊಂದರಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ರಕ್ಷಿಸಲು ಹೋಗಿದ್ದರು. ಕಾರಿನಿಂದ ಹಾವನ್ನು ರಕ್ಷಿಸಿ ಬೇರೆಡೆಗೆ ಅದನ್ನು ತೆಗೆದುಕಂಡು ಹೋಗಿದ್ದರು. ಅಲ್ಲಿ ಸೋಮನಾಥ್ ಹಾವಿನ ನೆತ್ತಿಗೆ ಮುತ್ತು ಕೊಡಲು ಪ್ರಯತ್ನಿಸಿದ್ದರು. ಆದ್ರೆ ಇದ್ದಕ್ಕಿದ್ದಂತೆ ಹಾವು ಹಿಂದೆ ತಿರುಗಿ ಸೋಮನಾಥ್ ಅವರ ಎದೆಗೆ ಕಚ್ಚಿತ್ತು. ನಂತರ ಅವರನ್ನು 5 ದಿನಗಳವರೆಗೆ ನವೀ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆಂದು ಮತ್ತೊಬ್ಬ ಉರಗ ರಕ್ಷಕರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಸೋಮನಾಥ್ ಈ ಹಿಂದೆ ಸುಮಾರು 100 ವಿಷಕಾರಿ ಹಾವುಗಳನ್ನ ರಕ್ಷಿಸಿದ್ದರು.

    ಕಳೆದ 12 ವರ್ಷಗಳಲ್ಲಿ ಹಾವಿಗೆ ಮುತ್ತು ಕೊಡುವ ಸ್ಟಂಟ್ ಮಾಡಲು ಹೋಗಿ ಸತ್ತವರಲ್ಲಿ ಸೋಮನಾಥ್ 31ನೇ ಯವರು ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಾಗರಹಾವಿನಿಂದ ಕಚ್ಚಿಸಿಕೊಂಡು ಈವರೆಗೆ 22 ಉರಗ ರಕ್ಷಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.