ಶ್ರೀಶೈಲ ಎಂಬ ಮಹಿಳೆ ಜಡ್ಚರ್ಲಾ ಪುರಸಭೆಯಲ್ಲಿರುವ ಅಯ್ಯಂಗಾರ್ ಬೇಕರಿಯಿಂದ ಎಗ್ ಪಪ್ಸ್ (Egg Pups) ಹಾಗೂ ಕರ್ರಿ ಪಪ್ಸ್ ಖರೀದಿಸಿದ್ದರು. ಅಲ್ಲಿಂದ ಮನೆಗೆ ಬಂದ ಮಹಿಳೆ ತಮ್ಮ ಮಕ್ಕಳೊಂದಿಗೆ ತಿನ್ನಲು ಕುಳಿತರು. ಈ ವೇಳೆ ರ್ರಿ ಪಪ್ಸ್ ತೆರೆದಾಗ ಅದರಲ್ಲಿ ಹಾವು ಇರುವುದು ಪತ್ತೆಯಾಗಿದೆ.
ಶ್ರಾವಣ ಮಾಸ ಬಂತೆಂದರೆ ಸಾಲುಸಾಲು ಹಬ್ಬಗಳು ಶುರುವಾಗುತ್ತದೆ. ಶ್ರಾವಣದಲ್ಲಿ ಬರುವ ಮೊದಲ ಹಬ್ಬವೇ ನಾಗರ ಪಂಚಮಿ. ನಾಗರ ಪಂಚಮಿ ದಿನ ನಾಗನಿಗೆ ಹಾಲೆರೆದು, ವಿವಿಧ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಪೂಜಿಸಲಾಗುತ್ತದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಜನರ ಮನೆಯೇ ಹಾವುಗಳ ವಾಸಸ್ಥಾನವಾಗಿದೆ. ಅರೇ ಇದೇನಿದು ಹಾವುಗಳನ್ನು ನೋಡಿದ್ರೆನೇ ಭಯವಾಗುತ್ತೆ. ಅಂಥದ್ರಲ್ಲಿ ಮನುಷ್ಯರು ಹಾವುಗಳೊಂದಿಗೆ ವಾಸಿಸಲು ಸಾಧ್ಯನಾ ಎಂದು ಯೋಚಿಸುತ್ತಿದ್ದೀರಾ? ಹೌದು, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶೆಟ್ಪಾಲ್ ಗ್ರಾಮದಲ್ಲಿ ಜನರು ಹಾವುಗಳೊಂದಿಗೆ ವಾಸಿಸುವುದಲ್ಲದೇ, ಅವುಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ಹಾಗಿದ್ರೆ ಇಲ್ಲಿನ ಜನರು ಹಾವುಗಳೊಂದಿಗೆ ವಾಸಿಸುವುದೇಕೆ ಎಂಬ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.
ಹಾವಿಗೆ ನಮ್ಮ ದೇಶದಲ್ಲಿ ಮಹೋನ್ನತ ಸ್ಥಾನವಿದೆ. ನಾಗರಹಾವನ್ನು ದೇವರ ಸ್ಥಾನದಲ್ಲಿ ನಾವು ನೋಡುತ್ತೇವೆ. ನಾಗರಾಜನಿಗೆ ಹಾಲೆರೆದು ಭಕ್ತಿಯಿಂದ ನಮಿಸುವ ಸಂಪ್ರದಾಯ ಇರುವ ದೇಶ ನಮ್ಮದು. ಅದೇ ಕಾರಣಕ್ಕೆ ನಮ್ಮಲ್ಲಿ ನಾಗರಪಂಚಮಿಗೆ ಬಹಳ ಮಹತ್ವವಿದೆ. ಹಾವುಗಳನ್ನು ದೇವರೆಂದು ಪೂಜಿಸುವ ಊರುಗಳ ಪೈಕಿ ಶೆಟ್ಪಾಲ್ ಕೂಡ ಒಂದು. ಇಲ್ಲಿ ನಾಗರ ಪಂಚಮಿಗೆ ಮಾತ್ರವಲ್ಲದೇ ಪ್ರತಿದಿನ ಹಾವುಗಳನ್ನು ಪೂಜಿಸಲಾಗುತ್ತದೆ. ಅಲ್ಲದೇ ಹಾವುಗಳೊಂದಿಗಿನ ಜನರ ನಂಟು ಕೂಡ ಮಹತ್ವವಾದದ್ದು.
ಸಾಂದರ್ಭಿಕ ಚಿತ್ರ
ಹಾವುಗಳೊಂದಿಗೆ ಜನರ ನಂಟು:
ಶೆಟ್ಪಾಲ್ ಗ್ರಾಮವನ್ನು ʼಭಾರತದ ಹಾವಿನ ಗ್ರಾಮʼ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಮನೆಗಳಲ್ಲಿ ಹಾವುಗಳು ಸರಾಗವಾಗಿ ಓಡಾಡಿಕೊಂಡಿರುತ್ತವೆ.ಈ ಹಳ್ಳಿಯಲ್ಲಿ ಹಾವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಉಪಚರಿಸಲಾಗುತ್ತದೆ. ಅಲ್ಲಿನ ಸ್ಥಳೀಯರ ಪ್ರಕಾರ, ಹಾವುಗಳಿಗೆ ಸಹ ಮನೆಯಲ್ಲಿ ವಿಶೇಷವಾದ ಜಾಗವನ್ನು ನೀಡಲಾಗುತ್ತದೆ. ಅವುಗಳು ಮನೆಯಲ್ಲಿ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ಇಲ್ಲಿ ಹಾವುಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಹಳ್ಳಿಯ ಜನರು ಈ ಹಾವುಗಳಿಗೆ ಮುಕ್ತವಾಗಿ ತಿರುಗಾಡಲು ಅವಕಾಶ ಮಾಡಿಕೊಡುತ್ತಾರೆ.
ಹಾವುಗಳಿಗೆಂದೇ ವಿಶೇಷ ಮಂದಿರ:
ಹಾವು ಮತ್ತು ಆಧ್ಯಾತ್ಮ ಒಟ್ಟಿಗೆ ಸಾಗುತ್ತದೆ ಎಂಬುದು ಈ ಗ್ರಾಮದ ಜನರ ನಂಬಿಕೆ. ಅವರು ಹಾವುಗಳನ್ನು ಪೂಜಿಸುವುದು ಮಾತ್ರವಲ್ಲ, ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇಲ್ಲಿ ಪ್ರತಿ ಮನೆಯಲ್ಲೂ ಹಾವುಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ. ಹಾವುಗಳಿಗೆ ಮುಡಿಪಾದ ಆಲಯವು ಕೂಡ ಇದೆ. ಈ ವಿಶೇಷ ಸ್ಥಳವನ್ನು ‘ಮಂದಿರ’ ಎಂದು ಕರೆಯಲಾಗುತ್ತದೆ. ಜನರು ಹೊಸ ಮನೆಯನ್ನು ಕಟ್ಟುವಾಗ ಹಾವಿಗೆ ವಿಶೇಷ ಸ್ಥಳವನ್ನು ನಿರ್ಮಿಸಲು ಮರೆಯುವುದಿಲ್ಲ.
ಈ ಊರಿನಲ್ಲಿ ಪ್ರತಿಯೊಬ್ಬರ ಹೃದಯದಲ್ಲೂ ನಾಗರಹಾವಿನ ಬಗ್ಗೆ ಶ್ರದ್ಧೆಯಿದೆ, ಭಕ್ತಿ ಇದೆ. ಹೀಗಾಗಿ, ಪ್ರತಿಯೊಬ್ಬರು, ಪ್ರತಿ ಮನೆಯಲ್ಲೂ ಮನೆಗೆ ಬರುವ ಹಾವಿಗೆ ಪೂಜೆ ಸಲ್ಲಿಸುತ್ತಾರೆ. ತಂಪನ್ನರಸಿ ಹಾವುಗಳು ಬಂದರೆ ಅವುಗಳಿಗೆ ಹಾಯಾಗಿ ಮಲಗಲು ಸಹಾಯವಾಗಲಿ ಎಂದು ಮಂದಿರಗಳನ್ನು ನಿರ್ಮಿಸಲಾಗುತ್ತದೆ.
ಗ್ರಾಮಸ್ಥರು ನಾಗರ ಹಾವುಗಳನ್ನು ಶಿವನ ದ್ಯೋತಕವೆಂದು ಪರಿಗಣಿಸುತ್ತಾರೆ. ಅವುಗಳನ್ನು ಬಹಳ ಘನತೆ ಮತ್ತು ಗೌರವದಿಂದ ಪರಿಗಣಿಸಲಾಗುತ್ತದೆ. ಹಾವುಗಳಿಗಾಗಿ ಈ ಗ್ರಾಮದಲ್ಲಿ ವಿಶೇಷ ಪೂಜೆ ಮತ್ತು ಆಚರಣೆಗಳನ್ನು ನಡೆಸಲಾಗುತ್ತದೆ. ಈ ಗ್ರಾಮದಲ್ಲಿ ಹಾವುಗಳ ಸಂಖ್ಯೆ ಮನುಷ್ಯರ ಜನಸಂಖ್ಯೆಯನ್ನು ಮೀರಿದೆ. ಗ್ರಾಮಸ್ಥರೇ ಹಾವುಗಳಿಗೆ ಆಹಾರ ನೀಡುತ್ತಾರೆ ಎಂಬುದು ಇಲ್ಲಿನ ವಿಶೇಷ.
ಈ ಗ್ರಾಮದ ಮಕ್ಕಳಿಗೆ ಹಾವಿನ ಭಯವೇ ಇಲ್ಲ. ಏಕೆಂದರೆ ಜನಸಾಮಾನ್ಯರಲ್ಲಿ ಹಾವುಗಳು ಬೆಳೆಯುತ್ತಿವೆ. ಮಕ್ಕಳು ಕೂಡ ಹಾವು ಕೊರಳಲ್ಲಿ ಹಾಕಿಕೊಂಡು ಓಡಾಡುತ್ತಾರೆ. ಈ ಊರಿಗೆ ಹೋದರೆ ಹಾವು ಕಚ್ಚುತ್ತದೆ ಎಂಬ ಭಯ ಹಲವರದ್ದು. ಆದರೆ ಅಂತಹ ಸಂಗತಿಗಳು ಇಲ್ಲಿ ನಡೆಯುವುದಿಲ್ಲ. ಇದುವರೆಗೂ ಈ ಊರಲ್ಲಿ ಒಂದೇ ಒಂದು ಹಾವು ಕಚ್ಚಿದ ಪ್ರಕರಣ ವರದಿಯಾಗಿಲ್ಲ.ಇಲ್ಲಿ ಕೇವಲ ನಾಗರ ಹಾವು ಮಾತ್ರವಲ್ಲದೇ ನಾನಾರೀತಿಯ ಹಾವುಗಳು ವಾಸಿಸುತ್ತವೆ.
ಈ ಊರಿನಲ್ಲಿ ಸುಮಾರು 2,600ಕ್ಕೂ ಅಧಿಕ ಗ್ರಾಮಸ್ಥರಿದ್ದಾರೆ. ಆದರೂ ಹಾವುಗಳ ಸಂಚಾರಕ್ಕೆ ಇಲ್ಲಿ ಎಂದೂ ಅಡ್ಡಿ ಎದುರಾಗಿದ್ದೇ ಇಲ್ಲ. ಜನರು ಯಾರೂ ಹಾವುಗಳಿಗೆ ತೊಂದರೆ ಮಾಡಿದ್ದೇ ಇಲ್ಲ. ವಿಶೇಷ ಅಂದರೆ ಹಾವುಗಳು ಮನೆಗೆ ಬಂದರೆ ಇಲ್ಲಿನ ಜನ ಓಡಿ ಹೋಗುವುದಿಲ್ಲ. ಬದಲಾಗಿ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಹಾವುಗಳಾಗಲಿ, ಜನರಾಗಲಿ ಇಲ್ಲಿ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅದೂ ಅಲ್ಲದೆ, ಇದುವರೆಗೆ ಇಲ್ಲಿ ಹಾವು ಕಚ್ಚಿ ಅಥವಾ ಹಾವಿನಿಂದ ಏನಾದರೂ ತೊಂದರೆ ಆದ ಒಂದೇ ಒಂದು ಉದಾಹರಣೆ ಇಲ್ಲ ಎನ್ನುತ್ತಾರೆ ಜನ. ಇದನ್ನು ಕೇಳುವಾಗಲೇ ಮೈ ರೋಮಾಂಚನವಾಗುತ್ತದೆ. ಈ ಊರಿನಲ್ಲಿ ಸಿದ್ದೇಶ್ವರ ದೇಗುಲ ಇದೆ. ಒಂದೊಮ್ಮೆ ಬೇರೆ ಊರಿನಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಅವರನ್ನು ಇಲ್ಲಿಗೆ ಕರೆತಂದರೆ ರೋಗಿ ತಕ್ಷಣ ಗುಣಮುಖರಾಗುತ್ತಾರೆ ಎಂಬ ನಂಬಿಕೆಯೂ ಇಲ್ಲಿನ ಜನರಿಗಿದೆ.
ಈ ಗ್ರಾಮದಲ್ಲಿ ಈ ರೀತಿಯ ಸಂಪ್ರದಾಯ ಯಾವಾಗ ಶುರುವಾಯಿತು ಎಂದು ಯಾರಿಗೂ ತಿಳಿದಿಲ್ಲ. ಹಲವಾರು ವರ್ಷಗಳಿಂದ ಜನ ಈ ಊರಲ್ಲಿ ಹಾವುಗಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಇಲ್ಲಿನ ಜನರು ಹಾವುಗಳನ್ನು ಮನೆ ಸದಸ್ಯರಂತೆ ನೋಡುತ್ತಾರೆ ಎಂಬುದು ಇಂದಿಗೂ ನಿಗೂಢವಾಗಿದೆ.
ಶೆಟ್ಪಾಲ್ ಎಲ್ಲಿದೆ?
ಶೆಟ್ಪಾಲ್ ಪುಣೆಯಿಂದ 200 ಕಿಮೀ ಮತ್ತು ಮುಂಬೈನಿಂದ 350 ಕಿಮೀ ದೂರದಲ್ಲಿದೆ. ಮೊಡ್ನಿಂಬ್ ರೈಲು ನಿಲ್ದಾಣ ಹತ್ತಿರದ ನಿಲ್ದಾಣವಾಗಿದೆ.
ಪ್ರೀತಿ… ಇದು ಜಗತ್ತಿನ ಮೂಲೆ ಮೂಲೆಗಳಲ್ಲೂ ಹಬ್ಬಿರುವ ಒಂದು ಸಂಬಂಧ. ಸಾಮಾನ್ಯವಾಗಿ ವ್ಯಕ್ತಿಗಳ ನಡುವೆ ಪ್ರೇಮ ಕಾವ್ಯ, ವಸ್ತು ಹಾಗೂ ವ್ಯಕ್ತಿಗಳ ನಡುವಿನ ಸಂಬಂಧ, ಪ್ರಾಣಿ ಹಾಗೂ ವ್ಯಕ್ತಿಗಳ ನಡುವೆ ಸಂಬಂಧ ಇವೆಲ್ಲವುಗಳನ್ನು ದಿನನಿತ್ಯ ನಾವು ಕಣ್ತುಂಬಿ ಕೊಳ್ಳುತ್ತೇವೆ. ಹೀಗಿರುವಾಗ ಕೆಲವು ವಿಭಿನ್ನ, ಆಶ್ಚರ್ಯಕರ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತದೆ.
ಅಂತಹದ್ದೇ ಆದ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿತ್ತು. ಹೌದು, ಮಧ್ಯ ಪ್ರದೇಶದ ಮೊರೆನಾ ಎಂಬಲ್ಲಿ ವಿಚಿತ್ರ ಘಟನೆ ಎಂದು ಸಂಭವಿಸಿತ್ತು. ಇದನ್ನು ನೋಡಿದ ಹಲವರು ನಿಜಕ್ಕೂ ಇದು ವಿಚಿತ್ರವೇ ಹೌದು ಎಂದಿದ್ದಾರೆ. ಅದೊಂದು ದಿನ ರಸ್ತೆಯ ಮೇಲೆ ನಾಗರಹಾವು ಹಾದು ಹೋಗಬೇಕಾದರೆ ವಾಹನವೊಂದು ಅದರ ಮೇಲೆ ಹರಿದುಹೋದ ಪರಿಣಾಮ ಹಾವು ರಸ್ತೆಯಲ್ಲಿ ಸಾವನ್ನಪ್ಪಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ರಸ್ತೆ ಬದಿಯ ಪೊದೆಯಿಂದ ಹೊರಬಂದ ಹಾವು ಒಂದು ಸತ್ತು ಬಿದ್ದ ಹಾವಿನ ಬಳಿಗೆ ಬಂತು. ಆ ಹಾವು ಸತ್ತ ಬಿದ್ದ ಹಾವಿನ ಪಕ್ಕದಲ್ಲಿಯೇ 24 ಗಂಟೆ ಇದ್ದು ಬಳಿಕ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ದೃಶ್ಯ ನಿಜಕ್ಕೂ ವಿಚಿತ್ರವೇನಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡಿದ ನಂತರ ಹಲವು ರೀತಿಯ ಕಾಮೆಂಟ್ಗಳು ಉದ್ಭವವಾಗಿದ್ದವು. ಹೆಣ್ಣು ಹಾವು ಸತ್ತಿರುವ ಗಂಡು ಹಾವಿಗಾಗಿ ಶೋಕ ವ್ಯಕ್ತಪಡಿಸಿ ಬಳಿಕ ತಾನು ಸಾವನ್ನಪ್ಪಿದೆ. ಇನ್ನು ಕೆಲವರು ಇದೊಂದು ದುರಂತ ಪ್ರೇಮಕಥೆ ಎಂದಿದ್ದಾರೆ. ತನ್ನ ಪ್ರೀತಿಯನ್ನು ಕಳೆದುಕೊಂಡು ಸಹಿಸಲಾಗದೆ ಸ್ವಇಚ್ಛೆಯಿಂದ ತಾನು ಪ್ರಾಣ ಬಿಟ್ಟಿದೆ ಎಂದಿದ್ದಾರೆ. ಜೊತೆಗೆ ಈ ಎರಡು ಹಾವುಗಳಿಗೂ ಪುರಾಣದಲ್ಲಿ ಪ್ರೀತಿ ಇತ್ತು ಎಂತಲೂ ಹೇಳಿದ್ದಾರೆ. ನಿಜಕ್ಕೂ ಪುರಾಣದಲ್ಲಿ ನಾಗಲೋಕದಲ್ಲಿ ಹಾವಿಗೆ ಪ್ರೀತಿಯಿತ್ತಾ? ಪುರಾಣಗಳ ಪ್ರೀತಿ ಇಂದಿಗೂ ಶಾಶ್ವತವಾಗಿದೆಯಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಭಾರತೀಯ ಪರಂಪರೆ ಅಥವಾ ಸಂಪ್ರದಾಯದಲ್ಲಿ ಹಾವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದನ್ನು ಪೂಜಿಸುವುದು ಹೌದು. ಇನ್ನು ನಾಗರಹಾವು ಹಾಗೂ ಶಿವನಿಗೆ ನಿಕಟವಾದ ಸಂಬಂಧವಿದ್ದು, ಸದಾ ಶಿವನ ಕೊರಳಲ್ಲಿ ಇರುವ ನಾಗನಿಗೂ ವಿಭಿನ್ನ ಕಥೆಗಳು ಹಾಗೂ ಜಾನಪದ ನಂಬಿಕೆಯೂ ಇದೆ. ಕಥೆಗಳ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಹಾವುಗಳು ಸೇಡು ತೀರಿಸಿಕೊಳ್ಳುವುದು ಕಂಡುಬಂದಿದೆ. ಇಷ್ಟೇ ಅಲ್ಲದೆ ಹಲವು ಸಿನಿಮಾ ಹಾಗೂ ಧಾರವಾಹಿಗಳ ಮೂಲಕ ನಾಗಲೋಕದ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಪುರಾಣ ಒಂದು ಕಡೆಯಾದರೆ ವಿಜ್ಞಾನವು ಇನ್ನೊಂದು ರೀತಿಯಲ್ಲಿ ಹೇಳುತ್ತದೆ.
ಸಾಮಾನ್ಯವಾಗಿ ಹಾವುಗಳಿಗೆ ಭಾವನೆಗಳು ಇರುತ್ತವೆ. ಆದರೆ ಮನುಷ್ಯರಂತೆ ಪ್ರೀತಿ ಹಾಗೂ ಸಂತೋಷದ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಭಯ, ಒತ್ತಡ ಇಂತವುಗಳನ್ನು ಮಾತ್ರ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಾವುಗಳು ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಬೆಸೆಯುವುದಿಲ್ಲ. ಹಾವು ಹಾಗೂ ಇನ್ನಿತರೆ ಸಸ್ತನಿಗಳಿಗೆ ಭಾವನಾತ್ಮಕ ಸಂಬಂಧ ಇರುವುದಿಲ್ಲ. ಆದರೆ ಪ್ರಸ್ತುತ ಈ ಘಟನೆಯಲ್ಲಿ ಹಾವಿನ ಪಕ್ಕದಲ್ಲಿ ಇನ್ನೊಂದು ಹಾವು ಇರುವುದು ಭಾವನೆಯನ್ನು ಉಂಟುಮಾಡುತ್ತದೆ.
ಈ ಕುರಿತು ಸಂಶೋಧಕರು ಹೇಳಿದ್ದೇನು?
– ಸಾಮಾನ್ಯವಾಗಿ ಹಾವುಗಳು ಒಂಟಿಯಾಗಿರುತ್ತವೆ. ಆದರೆ ತಮ್ಮ ಪ್ರಾಥಮಿಕ ಸಮ್ಮಿಲನಕ್ಕಾಗಿ ಒಟ್ಟಿಗೆ ಸೇರುತ್ತವೆ. ಜೊತೆಗೆ ತಕ್ಷಣವೇ ಬೇರ್ಪಡುತ್ತವೆ.
– ಹಾವುಗಳು ತಮ್ಮ ಸಂಗಾತಿಯನ್ನು ಗುರುತಿಸುತ್ತವೆ. ಅಥವಾ ನೆನಪಿಸಿಕೊಳ್ಳುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.
– ಅನ್ನು ಹೊರತುಪಡಿಸಿ ಯಾವುದೇ ರೀತಿಯ ಭಾವನಾತ್ಮಕ ಸಂಬಂಧಗಳಿರುವುದಿಲ್ಲ
– ಪ್ರಾಣಿ ಜಗತ್ತಿನಲ್ಲಿ ಕೆಲವೇ ಕೆಲವು ಬೆರಳೆಣಿಕೆ ಎಷ್ಟು ಜಾತಿಗಳು ಮಾತ್ರ ತಮ್ಮ ಸಂಗಾತಿಯನ್ನು ಬಿಟ್ಟು ಕೊಡದೆ ಇರುವುದು, ತಮ್ಮ ಸಂಗಾತಿಗಾಗಿ ಭಾವನೆಯನ್ನು ವ್ಯಕ್ತಪಡಿಸುವುದನ್ನು ಮಾಡುತ್ತವೆ. ಆದರೆ ಹಾವುಗಳು ಈ ವರ್ಗಕ್ಕೆ ಸೇರುವುದಿಲ್ಲ
ಹಾಗಾದರೆ ಹಾವಿನ ಪಕ್ಕದಲ್ಲಿ ಹಾವು ಸತ್ತಿದ್ದು ಹೇಗೆ?
– ತಜ್ಞರ ಪ್ರಕಾರ, ಗಂಡು ಹಾವಿನ ವಾಸನೆಗೆ ಆಕರ್ಷಿತವಾಗಿ ಅದು ಅಲ್ಲಿಗೆ ಹೋಗಿರಬಹುದು.
– ವಾತಾವರಣದಲ್ಲಿನ ತಾಪಮಾನದಿಂದಾಗಿ ಅದರ ಚಲನಾ ಶಕ್ತಿ ಕಡಿಮೆಯಾಗಿ ಅದು ಒತ್ತಡಕ್ಕೆ ಒಳಗಾಗಿ ಅಲ್ಲಿಯೇ ಉಳಿದಿರಬಹುದು. ಅಥವಾ ಉದ್ದೇಶಪೂರ್ವಕವಾಗಿ ಹಾವಿನ ಪಕ್ಕದಲ್ಲಿ ಉಳಿದಿರಬಹುದು ಎನ್ನಲಾಗಿದೆ.
– ಇನ್ನು ಹಾವು ಸತ್ತ 24 ಗಂಟೆಗಳ ಬಳಿಕ ಇನ್ನೊಂದು ಹಾವು ಸತ್ತಿರುವುದು ಕಾಕತಾಳೀಯ. ಆದರೆ ಸತ್ತ ಹಾವಿನ ಗಾಯದಿಂದಾಗಿ ಅಥವಾ ಯಾವುದಾದರೂ ವಿಷಕಾರಿ ಪ್ರಾಣಿಯನ್ನು ಅಥವಾ ಕೀಟವನ್ನು ಸೇವಿಸಿ, ಬಳಿಕ ಅದೇ ವಿಷಯವನ್ನು ಈ ಹಾವು ಸೇವಿಸಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.
ಹಾವಿನ ಜಾತಿಯಾದ ಕಿಂಗ್ ಕೋಬ್ರಾ ಹಾವುಗಳು ಮಿಲನದ ನಂತರ ಜೊತೆಯಾಗಿರುವುದಿಲ್ಲ. ಆದರೆ ತನ್ನ ಮೊಟ್ಟೆಯ ರಕ್ಷಣೆಗಾಗಿ ಹಾವುಗಳು ಅದರ ಜೊತೆಗೆ ಇರುತ್ತವೆ. ಇದು ಗಂಡು ಹಾಗೂ ಹೆಣ್ಣು ಹಾವುಗಳು ಜೊತೆಗೆ ಇರುವ ಉದ್ದೇಶದಿಂದಲ್ಲ. ಇದು ತಮ್ಮ ಸಂತತಿಯ ರಕ್ಷಣೆಗಾಗಿ ಎರಡು ಹಾವುಗಳು ಜೊತೆಗಿರುತ್ತವೆ. ಆದರೆ ಅದಾದ ನಂತರ ಹಾವುಗಳು ಜೀವನ ಪರ್ಯಂತ ಸಂಗಾತಿಯಾಗಿರುವುದಿಲ್ಲ ಹಾಗೂ ನೋವನ್ನು ಅನುಭವಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಇನ್ನೂ ಕೆಲವು ಮಾಹಿತಿಗಳ ಪ್ರಕಾರ, ಗಂಡು ಹಾವು ಹೆಣ್ಣು ಹಾವಿನೊಂದಿಗೆ ಮಿಲನದ ಸಲುವಾಗಿ ಕಾಯುತ್ತಿರುತ್ತವೆ. ಇನ್ನು ಹೆಣ್ಣು ಹಾವುಗಳು ಕೂಡ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹಲವು ಗಂಡು ಹಾವಿನೊಂದಿಗೆ ಸಂಗಾತಿಯಾಗಿರುತ್ತವೆ.
ಪುರಾಣ ಹೇಳುವುದೇನು?
ಪುರಾಣಗಳ ಪ್ರಕಾರ ಹಾವುಗಳು ತಮ್ಮ ಸಂಗಾತಿ ಜೊತೆಗಿರುತ್ತವೆ. ಜೊತೆಗಿಲ್ಲದೆ ಇರುವಾಗ ಅವುಗಳಿಗಾಗಿ ದುಃಖಿಸುತ್ತದೆ ಎಂದು ತೋರಿಸಿಕೊಂಡು ಬಂದಿದೆ. ಬಹಳ ಹಿಂದಿನಿಂದಲೂ ನಾಗರಿಕತೆಗಳಲ್ಲಿ ಹಾವಿನ ಬಗ್ಗೆ ಭಯ, ಪೂಜೆ ಹಾಗೂ ಪ್ರೀತಿ ಇವೆಲ್ಲವು ಜನರನ್ನು ಆಕರ್ಷಿಸಿದೆ. ಇನ್ನು ಹಾವಿನ ಕಲ್ಪನೆಯ ಜೀವನವನ್ನು ಧರ್ಮ, ಜಾನಪದ ಹಾಗೂ ಸಿನಿಮಾದಲ್ಲಿ ವಿಭಿನ್ನ ರೀತಿಯಾಗಿ ಕಥೆ ಕಟ್ಟಲಾಗಿದೆ.
ಪ್ರತಿಯೊಂದು ಕಥೆಯಲ್ಲಿಯೂ ನಾಗ ನಾಗಿಣಿಯ ಹುಡುಕಾಟದಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಶಿವಪುರಾಣ, ಮಹಾಭಾರತ ಹಾಗೂ ಭಗವತ ಪುರಾಣಗಳಲ್ಲಿ ಹಾವಿನ ಪ್ರೀತಿ ಕಂಡು ಬರುತ್ತದೆ.
ಅದೇ ರೀತಿ ಈ ಮೊರೆನಾದ ನಾಗರಹಾವುಗಳ ಕಥೆಯು ಪ್ರೀತಿ ಅಥವಾ ತ್ಯಾಗದ ಭಾವನೆ ಇರಬಹುದು ಎಂದು ಕಲ್ಪನೆ ಮಾಡಿಕೊಳ್ಳಬಹುದು ವಿನಃ ಇನ್ಯಾವುದೇ ಸಂಬಂಧವಿಲ್ಲ. ಈ ರೀತಿಯ ಘಟನೆಗಳು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಅಪರೂಪವಾಗಿ ಸಂಭವಿಸುವ ಒಂದು ಸಂಗತಿ. ಇನ್ನು ಇವುಗಳ ಪ್ರೀತಿ ಪ್ರೇಮ ಎಂದು ಹೇಳುವುದು ಕಾಕತಾಳೀಯವಷ್ಟೇ. ಆದರೆ ಇದಕ್ಕೂ ವಿಜ್ಞಾನಕ್ಕೂ ಪುರಾಣಕ್ಕೂ ಯಾವುದೇ ಸಂಬಂಧವಿಲ್ಲ.
ರಾಯಚೂರು: ಹಾವು (Snake) ಕಚ್ಚಿ ತಾಯಿ ಹಾಗೂ ಮಗ ಸಾವನ್ನಪ್ಪಿದ ದಾರುಣ ಘಟನೆ ದೇವದುರ್ಗ (Devadurga) ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಸುಬ್ಬಮ್ಮ (35) ಹಾಗೂ ಬಸವರಾಜ (10) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಹಾವು ಕಡಿದಿದೆ. ಮನೆಗೆ ಬರುತ್ತಿದ್ದಂತೆ ಇಬ್ಬರಿಗೂ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಕುಟುಂಬಸ್ಥರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲೇ ತಾಯಿ ಮಗ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಚಾಕೊಲೇಟ್ಗಾಗಿ ಹಣ ಕೇಳಿದ್ದಕ್ಕೆ 4 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ
ಹೆರುಂಡಿ ಗ್ರಾಮದ ಕುಟುಂಬ ಕೂಲಿ ಕೆಲಸಕ್ಕಾಗಿ ಅಮರಾಪುರ ಗ್ರಾಮದಲ್ಲಿ ನೆಲೆಸಿತ್ತು. ಎಂದಿನಂತೆ ಕೃಷಿ ಕೆಲಸಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಇದು ಮಂಡಲದ ಹಾವಾಗಿದ್ದು ವಿಷಕಾರಿ ಅಲ್ಲ. ಈ ಹಾವು ಕಚ್ಚಿದರೆ ಜನರು ಸಾಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ಹಾವಿನ ಜಾತಿಯ ಬಗ್ಗೆ ರಾಜು ಅರಿವು ಮೂಡಿಸಿದರು.
ಸುಮಾರು ಎರಡು ಅಡಿಯ ಉದ್ದದ ಹಾವು ಇದಾಗಿದ್ದು, ಇದು ಮನೆಯ ಗೋಡೆ ಹಾಗೂ ಸಂದಿಗೊಂದಿಗಳಲ್ಲಿ ಸಂಚರಿಸುತ್ತದೆ. ಅಡಗಿರುವ ಇಲಿಯನ್ನು ಬೇಟೆಯಾಡುತ್ತದೆ. ಆಹಾರ ಅರಸುತ್ತಾ ಡಿಸಿ ಕಚೇರಿಗೆ ಬಂದಿರಬಹುದು ಎಂದು ರಾಜು ಹೇಳಿದರು.
ಚಿಕ್ಕಮಗಳೂರು: ಕಾರು (Car) ಹರಿದು ಗಂಭೀರವಾಗಿ ಗಾಯಗೊಂಡಿದ್ದ ಎರಡು ನಾಗರಹಾವುಗಳಿಗೆ (Snake) ಪಶುವೈದ್ಯರು (Doctor) ಚಿಕಿತ್ಸೆ ನೀಡಿದ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.
ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವಿನ ಮೇಲೆ ಕಾರು ಹರಿದಿದೆ. ಪರಿಣಾಮ ಹಾವು ಹಾಗೂ ಅದರ ಮರಿ ಗಂಭೀರವಾಗಿ ಗಾಯಗೊಂಡಿದ್ದವು. ಎರಡೂ ಹಾವನ್ನು ಉರಗ ತಜ್ಞ ಆರೀಫ್ ಪಶು ಆಸ್ಪತ್ರೆಗೆ ತಂದಿದ್ದರು. ಹಾವಿಗೆ ಪಶುವೈದ್ಯಾಧಿಕಾರಿ ಚೈತ್ರ ಅವರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ವೈದ್ಯರು ನೀಡಿದ ಔಷಧಿಯನ್ನು ಆರೀಫ್ ಹಚ್ಚಿದ್ದಾರೆ. ಬಳಿಕ ಹಾವುಗಳು ಚೇತರಿಸಿಕೊಂಡಿದ್ದು, ಅವನ್ನು ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಮಂಗಳೂರು: ಹೆಬ್ಬಾವಿನ (Python) ಮರಿ ಎಂದು ವಿಷದ (Venom) ಹಾವಿನ ಮರಿಯನ್ನ ಬರಿಗೈಯಲ್ಲಿ ಹಿಡಿದ ವ್ಯಕ್ತಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳೂರು (Mangaluru) ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ.
ಈ ವೇಳೆ ಹಾವಿನ ಮರಿ ಕೈಗೆ ಕಚ್ಚಿದ್ದರೂ ಅದು ಹೆಬ್ಬಾವಿನ ಮರಿ ಎಂದು ನಿರ್ಲಕ್ಷಿಸಿದ್ದರು. ಬಳಿಕ ರಾಮಚಂದ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಆಸ್ಪತ್ರೆ ದಾಖಲು ಮಾಡಲಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪಾಟ್ನಾ: ಹಾವೊಂದು ಕಾರ್ಮಿಕನಿಗೆ ಎರಡು ಬಾರಿ ಕಚ್ಚಿದ್ದು, ಇದರಿಂದ ಕೋಪಗೊಂಡ ಆತ ಹಾವಿಗೆ ಮೂರು ಬಾರಿ ಕಚ್ಚಿದ್ದ ವಿಲಕ್ಷಣ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.
ಈ ಘಟನೆ ನವಾಡದ ರಾಜೌಲಿ ಪ್ರದೇಶದಲ್ಲಿ ನಡೆದಿದೆ. ಹಾವಿಗೆ ಕಚ್ಚಿದವನನ್ನು ಸಂತೋಷ್ ಲೋಹರ್ ಎಂದು ಗುರುತಿಸಲಾಗಿದ್ದು, ಇವರು ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ನಡೆದಿದ್ದೇನು..?: ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್ನಲ್ಲಿ ಮಲಗಿದ್ದರು. ಈ ವೇಳೆ ಅವರಿಗೆ ಹಾವು ಕಚ್ಚಿದೆ. ಗಾಬರಿಯಾಗುವ ಬದಲು ಸಿಟ್ಟಿಗೆದ್ದ ಸಂತೋಷ್, ಕಬ್ಬಿಣದ ಸಲಾಕೆಯನ್ನು ಬಳಸಿಕೊಂಡು ಹಾವನ್ನು ಹಿಡಿದಿದ್ದಾರೆ. ಬಳಿಕ ಒಂದಲ್ಲ ಬರೋಬ್ಬರಿ ಮೂರು ಬಾರಿ ಕಚ್ಚಿದ್ದಾರೆ. ಕೊನೆಗೆ ಹಾವನ್ನು ಕೊಂದು ಹಾಕಿದ್ದಾರೆ. ಇದನ್ನೂ ಓದಿ: ಕುಖ್ಯಾತ ರೌಡಿಶೀಟರ್ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್ ಮೇಲೆ ಸಿಸಿಬಿ ಕಣ್ಣು
ಬಳಿಕ ಈ ಬಗ್ಗೆ ಕಾರ್ಮಿಕನನ್ನು ಕೇಳಿದಾಗ, ಹಳ್ಳಿಯಲ್ಲಿ ಹಾವು ಕಚ್ಚಿದರೆ ಅದನ್ನು ಎರಡು ಬಾರಿ ನಾವು ಕಚ್ಚಬೇಕು. ಹೀಗೆ ಮಾಡಿದರೆ ಹಾವಿನ ವಿಷ ಹರಡಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೂಢನಂಬಿಕೆ ನಂಬಿ ಸಂತೋಷ ಈ ನಿರ್ಧಾರ ತೆಗೆದುಕೊಂಡಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಘಟನೆ ವರದಿಯಾದ ತಕ್ಷಣ ರೈಲ್ವೇ ಅಧಿಕಾರಿಗಳು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಾವು ವಿಷಕಾರಿಯಾಗಿರಲಿಲ್ಲ, ಇಲ್ಲವಾದಲ್ಲಿ ಸಂತೋಷ್ನ ಜೀವಕ್ಕೆ ಗಂಭೀರ ಅಪಾಯ ಉಂಟಾಗಬಹುದೆಂದು ಸ್ಥಳೀಯರು ಊಹಿಸಿದ್ದಾರೆ.
ಜಾರ್ಖಂಡ್ ಮೂಲದ ಸಂತೋಷ್ ಅವರು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ.
ಭುವನೇಶ್ವರ್: ವಿಷಪೂರಿತ ಹಾವನ್ನು (Snake) ಹೆಂಡತಿ (Wife) ಮತ್ತು ಮಗಳು ಮಲಗಿದ್ದ ಕೋಣೆಗೆ ಬಿಟ್ಟು ಅವರನ್ನು ಕೊಲೆಗೈದಿದ್ದ ಆರೋಪಿಯನ್ನು ಒಡಿಶಾ (Odisha) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೆ.ಗಣೇಶ್ (25) ಎಂದು ಗುರುತಿಸಲಾಗಿದೆ. ಆರೋಪಿ ಅಧೇಗಾಂವ್ ಗ್ರಾಮದ ತನ್ನ ಮನೆಯಲ್ಲಿ ಹೆಂಡತಿ ಬಸಂತಿ ಪತ್ರಾ (23) ಹಾಗೂ ತನ್ನ 2 ವರ್ಷದ ಮಗಳು ದೇಬಾಸ್ಮಿತಾ ಮಲಗಿದ್ದ ವೇಳೆ ಅವರನ್ನು ಕೊಲ್ಲುವ ಉದ್ದೇಶದಿಂದ ರೂಂ ಒಳಗೆ ಹಾವನ್ನು ಬಿಟ್ಟಿದ್ದ. ಬಳಿಕ ಆಕಸ್ಮಿಕವಾಗಿ ಹಾವು ಕಚ್ಚಿದೆ ಎಂಬಂತೆ ಬಿಂಬಿಸಿದ್ದ. ಇದನ್ನೂ ಓದಿ: ಡ್ರಗ್ಸ್ ಖರೀದಿಸಲು 74,000 ರೂ.ಗೆ ಹೆತ್ತ ಮಕ್ಕಳನ್ನೇ ಮಾರಾಟ ಮಾಡಿದ ಪೋಷಕರು – ಅಪ್ಪ-ಅಮ್ಮ ಅರೆಸ್ಟ್
ಈ ಸಂಬಂಧ ಮೃತ ಮಹಿಳೆಯ ಮಾವ ಅನುಮಾನ ವ್ಯಕ್ತಪಡಿಸಿ, ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಪೊಲೀಸರು ಭಾವಿಸಿದ್ದರು. ಬಳಿಕ ತನಿಖೆ ನಡೆಸಿ ಸಾಕ್ಷ್ಯ ಕಲೆಹಾಕಿ ಘಟನೆ ನಡೆದ ಒಂದು ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಕ್ಟೋಬರ್ 6 ರಂದು ಹಾವಾಡಿಗನಿಂದ, ಧಾರ್ಮಿಕ ಕಾರ್ಯಕ್ರಮಕ್ಕೆ ಎಂದು ಹಾವು ತಂದಿದ್ದ ಎಂದು ತಿಳಿದು ಬಂದಿದೆ. ಮೊದಲು ಆರೋಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದ. ಬಳಿಕ ತೀವ್ರ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಹಾಗೂ ಆತನ ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ 2020ರಲ್ಲಿ ಕೇರಳದ ಕೊಲ್ಲಂನಲ್ಲಿ ಆಸ್ತಿಗಾಗಿ ವ್ಯಕ್ತಿಯೊಬ್ಬ ಪತ್ನಿಯನ್ನು ಇದೇ ಮಾದರಿಯಲ್ಲಿ ಕೊಲೆಗೈದು ಹಾವಿನ ದ್ವೇಷದ ಕಥೆ ಕಟ್ಟಿದ್ದ. ಬಳಿಕ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಂಚಲ್ ನಿವಾಸಿ ಸೂರಜ್ (27) ಕೊಲೆಗೈದ ಪತಿ ಹಾಗೂ ಸುರೇಶ್ ಕೊಲೆಗೆ ಸಹಕರಿಸಿದ ಹಾವಾಡಿಗನಾಗಿದ್ದ. ಎಸ್.ಉತ್ತರ (25) ಕೊಲೆಯಾದ ಮಹಿಳೆ ಆಗಿದ್ದಳು. ಇದನ್ನೂ ಓದಿ: ಮಥುರಾದ ಪಟಾಕಿ ಮಳಿಗೆಯಲ್ಲಿ ಅಗ್ನಿ ಅವಘಡ- ಮೃತರ ಸಂಖ್ಯೆ 12ಕ್ಕೆ ಏರಿಕೆ
ಕಲಬುರಗಿ: ಹಾವು ಕಂಡ್ರೆ ಸಾಕು ಜನ ಮಾರುದ್ದ ಹೌಹಾರಿ ಓಡಿ ಹೋಗುತ್ತಾರೆ. ಅಂಥದ್ದರಲ್ಲಿ ಕಲಬುರಗಿಯ (Kalaburagi) ಓರ್ವ ಬಾಲಕನಿಗೆ ಕಳೆದ ಎರಡು ತಿಂಗಳಲ್ಲಿಯೇ 9 ಬಾರಿ ಹಾವು ಕಚ್ಚಿದೆಯಂತೆ.
ಹೌದು. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್ಗೆ ಜುಲೈ 3ರಂದು ಮನೆ ಅಂಗಳದಲ್ಲಿ ಆಟವಾಡುವಾಗ ಹಾವು (Snake Bite) ಕಚ್ಚಿದೆ. ಆಗ ಈ ಬಾಲಕನ ಪೋಷಕರು ಬೇವಿನ ಮರದ ಎಲೆ ಹಾಗೂ ಖಾರದ ಪುಡಿ ತಿನ್ನಿಸಿದ್ದಾರೆ. ಆಗ ಬಾಯಿಗೆ ಸಿಹಿ, ಖಾರ ಎರಡೂ ಹತ್ತುತ್ತಿಲ್ಲ ಅಂತಾ ಬಾಲಕ ಹೇಳಿದ್ದಾನೆ. ಕೂಡಲೇ ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಅದಾದ ಬಳಿಕ ನಾಲ್ಕು-ಐದು ದಿನಗಳ ಮಧ್ಯೆದಲ್ಲಿ ಈ ಬಾಲಕನಿಗೆ ನಿರಂತರವಾಗಿ ಇಲ್ಲಿಯವರೆಗೆ ಒಟ್ಟು 9 ಬಾರಿ ಹಾವು ಕಡಿತವಾಗಿರೋದು ಬೆಳಕಿಗೆ ಬಂದಿದೆ.
ಸದ್ಯ ಇಲ್ಲಿಯವರೆಗೆ 9 ಬಾರಿ ಹಾವು ಕಚ್ಚಿರುವ ಗುರುತುಗಳು ಕೂಡ ಆತನ ಕಾಲಿನಲ್ಲಿದೆ. ಅದರಲ್ಲಿ 5 ಬಾರಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರೆ, ಇನ್ನುಳಿದ 4 ಬಾರಿ ಸ್ಥಳೀಯ ನಾಟಿ ವೈದ್ಯರಿಂದ ಔಷಧಿಯನ್ನು ಪೋಷಕರು ಕೊಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಆ ಹಾವು ಪ್ರಜ್ವಲ್ ಬಿಟ್ಟು ಯಾರ ಕಣ್ಣಿಗೂ ಸಹ ಕಂಡಿಲ್ಲ. ಹೀಗಾಗಿ ಆತನ ಮನೆ ಸುತ್ತ ಹಾವು ಹುಡುಕುವುದೇ ಸದ್ಯ ನೆರೆಹೊರೆಯವರ ಕೆಲಸವಾಗಿದೆ. ಇದನ್ನೂ ಓದಿ: ಲೇಟ್ ಆದ್ರೂ ಲೆಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ
ಪ್ರತಿ ಬಾರಿ ಈ ಬಾಲಕ ಒಬ್ಬನ ಮೇಲೆ ಮಾತ್ರ ಹಾವು ಕಚ್ಚಿರುವುದಾಗಿ ಹೇಳುತ್ತಿರುವುದು ಸಹ ಹಲವು ಅನುಮಾನಕ್ಕೂ ಸಹ ಎಡೆಮಾಡಿಕೊಟ್ಟಿದೆ. ಇನ್ನು ಪ್ರತಿ ಬಾರಿ ಹಾವು ಕಚ್ಚಿದೆ ಅಂದಾಗ ಸಾವಿರಾರು ರೂಪಾಯಿ ಖರ್ಚು ಮಾಡಿ ಇತನ ಪೋಷಕರು ಮಗನಿಗೆ ಚಿಕಿತ್ಸೆ ಕೊಡಿಸುತ್ತಾ ಇದೀಗ ದಿಕ್ಕು ಕಾಣದಂತಾಗಿದೆ. ಹೀಗಾಗಿ ಈತನ ಪೋಷಕರು ಸಿಕ್ಕ ಸಿಕ್ಕ ದೇವರುಗಳ ಮೊರೆ ಹೋಗುತ್ತಿದ್ದಾರೆ.