Tag: Sky

  • ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ

    ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ

    ಉಡುಪಿ: ಬಾನಲ್ಲಿ ಬೆಳ್ಳಿ ಚುಕ್ಕಿಗಳ ನಡುವೆ ಶುಕ್ರ ಗ್ರಹ (Venus) ಈಗ ಅತ್ಯಂತ ಸುಂದರವಾಗಿ ಗೋಚರಿಸಲಿದೆ. ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯುತ್ತಿದೆ.

    ಜುಲೈ ತಿಂಗಳ ಅಂತ್ಯದವರೆಗೂ ಶುಕ್ರ ಹೊಳೆಯುತ್ತಾ ಆಗಸ್ಟ್ ಪ್ರಾರಂಭದಲ್ಲಿ ಕಣ್ಮರೆಯಾಗುತ್ತದೆ. ಆಗಸ್ಟ್ 8 ರಿಂದ ಆಗಸ್ಟ್ 19 ರವರೆಗೆ ಸೂರ್ಯನಿಗೆ (Sun) ನೇರ ಬಂದು ಕಾಣದಾದಾಗ ಆ ವಿದ್ಯಾಮಾನವನ್ನು ಶುಕ್ರಾಸ್ತ ಎನ್ನಲಾಗುತ್ತದೆ. ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಶುಕ್ರನ ಗೋಚರವಾಗಲಿದೆ. ಮೇ 30 ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ, ಪ್ರಭೆ ಹೆಚ್ಚಿಸಿಕೊಳ್ಳುತ್ತಾ ಜುಲೈ 7 ರಂದು ಅತಿ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ.

    ಶುಕ್ರ ಈಗ ಭೂಮಿಯಿಂದ (Earth) ಸುಮಾರು 15 ಕೋಟಿ ಕಿ.ಮೀ ದೂರದಿಂದ ಆಗಸ್ಟ್ 8ರ ಹೊತ್ತಿಗೆ 4 ಕೋಟಿ ಕಿ.ಮೀ ಗೆ ಸಮೀಪಿಸುತ್ತದೆ. ಹೀಗೆ ಶುಕ್ರ ಗ್ರಹ ಕಾಣಲು ಪ್ರಮುಖ ಕಾರಣ ಬುಧ ಗ್ರಹದಂತೆ ಸೂರ್ಯ ಭೂಮಿಯ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ ಕಿ.ಮೀ ದೂರ ಆದರೆ ಭೂಮಿ 15 ಕೋಟಿ ಕಿ.ಮೀ ದೂರವಿದೆ. ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಮಾತ್ರ. ಇದನ್ನೂ ಓದಿ: ಬ್ರಿಜ್‌ ಭೂಷಣ್‌ ತೆಗೆದು ಆ ಸ್ಥಾನಕ್ಕೆ ಮಹಿಳೆ ನೇಮಿಸಿ – ಅಮಿತ್‌ ಶಾಗೆ ಕುಸ್ತಿಪಟುಗಳ ಬೇಡಿಕೆ

    ಸಂಜೆ ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ ಮತ್ತೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಿಸುತ್ತದೆ. ಸೂರ್ಯನಿಂದ ಶುಕ್ರ ಸುಮಾರು 11 ಕೋಟಿ ಕಿ.ಮೀ ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ದೂರದಲ್ಲಿ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತಿ ಸಮೀಪ ದೂರ 4 ಕೋಟಿ ಕಿ.ಮೀ (ಆಗಸ್ಟ್ 13 ಇನ್ಫೀರಿಯರ್ ಕಂಜಂಕ್ಷನ್) ನಂತರ ಜನವರಿ 2025 ರಲ್ಲಿ ಅತ್ಯಂತ ದೂರ 26 ಕೋಟಿ ಕಿ.ಮೀ (ಸುಪೀರಿಯರ್ ಕಂಜಂಕ್ಷನ್) ಇರುತ್ತದೆ ಎಂದು ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಎಪಿ ಭಟ್ ಮಾಹಿತಿ ನೀಡಿದ್ದಾರೆ.

    ಗ್ರಹಗಳಲ್ಲಿ ಬರಿಗಣ್ಣಿಗೆ ಶುಕ್ರನೇ ಚೆಂದ. ಸುಮಾರು 95% ಇಂಗಾಲದ ಆಕ್ಸೈಡುಗಳ ವಾತಾವರಣ ಸ್ವಲ್ಪ ರಂಜಕದ ಡೈಆಕ್ಸೈಡುಗಳಿಂದ ಅತಿ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಪಳಪಳ ಹೊಳೆಯುತ್ತಾನೆ. ದೂರದರ್ಶಕದಲ್ಲೀಗ ಶುಕ್ರ ಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗುತ್ತಾನೆ ಎಂದು ಡಾ. ಎಪಿ ಭಟ್ ವಿವರಿಸಿದ್ದಾರೆ. ಇದನ್ನೂ ಓದಿ: ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ

  • ಸಿಕ್ಸರ್‌ ವೀರ ಸೂರ್ಯ Vs ಎಬಿಡಿ – ಇಬ್ಬರಲ್ಲಿ ಯಾರು ಬೆಸ್ಟ್‌? – ಟ್ವಿಟ್ಟರ್‌ನಲ್ಲಿ ಟ್ರೆಂಡ್‌

    ಸಿಕ್ಸರ್‌ ವೀರ ಸೂರ್ಯ Vs ಎಬಿಡಿ – ಇಬ್ಬರಲ್ಲಿ ಯಾರು ಬೆಸ್ಟ್‌? – ಟ್ವಿಟ್ಟರ್‌ನಲ್ಲಿ ಟ್ರೆಂಡ್‌

    ವೆಲ್ಲಿಂಗ್ಟನ್: ಟಿ20 ಸ್ಪೆಷಲಿಸ್ಟ್ ಆಗಿರುವ ಟೀಂ ಇಂಡಿಯಾ (Team India) ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನ ಅಭಿಮಾನಿಗಳು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್‌ಗೆ (Ab de Villiers) ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಶುರು ಮಾಡಿದ್ದಾರೆ.

    ಪ್ರತಿ ಇನ್ನಿಂಗ್ಸ್‌ನಲ್ಲೂ ಒಂದಿಲ್ಲೊಂದು ದಾಖಲೆ ಬರೆಯುತ್ತಿರುವ ಸೂರ್ಯಕುಮಾರ್ ಯಾದವ್ ಈ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ ಬ್ಯಾಟ್ಸ್‌ಮನ್‌ ಸಹ ಆಗಿದ್ದಾರೆ. ಭಾರತದ ಮಿಸ್ಟರ್ 360 ಎಂದೇ ಕರೆಯುವ ಸೂರ್ಯಕುಮಾರ್ ಯಾದವ್‌ನನ್ನು ಅಭಿಮಾನಿಗಳು ಎಬಿಡಿಗೆ (Ab de Villiers) ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ. ಅಲ್ಲದೇ ಇಬ್ಬರಲ್ಲಿ ಯಾರು ಬೆಸ್ಟ್‌? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಭಿಮಾನಿಗಳು ಸೂರ್ಯ ಟಿ20 (T20) ಸ್ಪೆಷಲಿಸ್ಟ್‌ ಆದ್ರೆ, ಎಬಿಡಿ ಎಲ್ಲ ಆವೃತ್ತಿಗಳಲ್ಲೂ ಬೆಸ್ಟ್‌ ಬ್ಯಾಟ್ಸ್‌ಮನ್‌ ಅವರ ಆಟ ಅವರವರಿಗೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ಕೀವಿಸ್ (New Zealand) ವಿರುದ್ಧ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಸೂರ್ಯ ಕೇವಲ 49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ, 51 ಎಸೆತಗಳಲ್ಲಿ ಅಜೇಯ 111 ರನ್ ಚಚ್ಚಿ ಮಿಂಚಿದ್ದಾರೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಂತರ ಸ್ಪೋಟಕ ಶತಕ ಸಿಡಿಸಿದ 2ನೇ ಆಟಗಾರರಾಗಿದ್ದರು. ಇದು ಟಿ20 ನಲ್ಲಿ ಸೂರ್ಯಕುಮಾರ್ ಸಿಡಿಸಿದ 2ನೇ ಶತಕವಾಗಿದೆ. ಇದನ್ನೂ ಓದಿ: ಶತಕ ಸಿಡಿಸಿ ಮೆರೆದ ಸೂರ್ಯ – ಕೀವಿಸ್ ಕಿವಿ ಹಿಂಡಿದ ಭಾರತ

    ಸೂರ್ಯ ಈಗ ಸಿಕ್ಸರ್ ವೀರ:
    ಸ್ಫೋಟಕ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಈ ವರ್ಷದ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪರ್ ಆಗಿದ್ದಾರೆ. ಈ ಆವೃತ್ತಿಯಲ್ಲಿ ಒಟ್ಟು 60 ಸಿಕ್ಸರ್ ಸಿಡಿಸಿದ ಸೂರ್ಯ ಮೊದಲ ಸ್ಥಾನದಲ್ಲಿದ್ದರೆ 43 ಸಿಕ್ಸರ್ ಸಿಡಿಸಿದ ಎಂ.ಡಿ ವಸೀಮ್ 2ನೇ ಸ್ಥಾನದಲ್ಲಿ ಹಾಗೂ 39 ಸಿಕ್ಸರ್ ಸಿಡಿಸಿದ ವೆಸ್ಟ್ ಇಂಡೀಸ್‌ನ ರೋವ್ಮನ್ ಪೋವೆಲ್ ನಂತರದ ಸ್ಥಾನದಲ್ಲಿದ್ದಾರೆ.

    ಭಾನುವಾರ ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 18.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕೆಳದುಕೊಂಡು 65 ರನ್‌ಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿತು.

    Live Tv
    [brid partner=56869869 player=32851 video=960834 autoplay=true]

  • ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ನವದೆಹಲಿ: ಭಾರತ ತನ್ನ ಸ್ವಾತಂತ್ರ‍್ಯದ 75 ವರ್ಷಗಳನ್ನು ಪೂರೈಸಿದ್ದು, ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಿ ಸಂಭ್ರಮಿಸಲಾಗುತ್ತಿದೆ. ಈ ಕ್ಷಣಕ್ಕೆ ಇನ್ನೂ ಹೆಚ್ಚಿನ ವಿಶೇಷತೆ ನೀಡಲು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ.

    ಸ್ಪೇಸ್ ಕಿಡ್ಜ್ ಇಂಡಿಯಾವು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ. ಧ್ವಜವನ್ನು ಭೂಮಿಯಿಂದ ಸುಮಾರು 1,06,000 ಅಡಿ ಎತ್ತರಕ್ಕೆ ಬಲೂನ್‌ನಲ್ಲಿ ಕಳುಹಿಸಲಾಗಿದೆ. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹಾಗೂ ಐತಿಹಾಸಿಕ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಸ್ಪೇಸ್ ಕಿಡ್ಜ್ ಇಂಡಿಯಾ ಬಾನಿನಲ್ಲಿ ಬಾವುಟವನ್ನು ಹಾರಿಸಿದೆ.

    ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯು ದೇಶಕ್ಕಾಗಿ ಯುವ ವಿಜ್ಞಾನಿಗಳನ್ನು ಸೃಷ್ಟಿಸುತ್ತದೆ ಹಾಗೂ ಪ್ರಪಂಚದಾದ್ಯಂತ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಈ ಸಂಸ್ಥೆ ಇತ್ತೀಚೆಗೆ ಉಪಗ್ರಹವನ್ನು ಲೋ ಅರ್ಥ್ ಆರ್ಬಿಟ್‌ಗೆ ಉಡಾಯಿಸಿತು. 75ನೇ ಸ್ವಾತಂತ್ರ್ಯವನ್ನು ಗುರುತಿಸಲು ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಸೇರಿ ಆಜಾದಿಸ್ಯಾಟ್ ಅನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಉಪಗ್ರಹವನ್ನು ಉಡಾವಣೆ ಮಾಡಲು ಬಳಸಿದ್ದ ಎಸ್‌ಎಸ್‌ಎಲ್‌ವಿ ರಾಕೆಟ್‌ನ ಮಿಷನ್ ವಿಫಲವಾಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 5 ಹೊಸ ಯೋಜನೆಗಳನ್ನು ಘೋಷಣೆ ಮಾಡಿದ ಸಿಎಂ

    Live Tv

  • ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ವಾಷಿಂಗ್ಟನ್: 13 ದಶಕೋಟಿ ವರ್ಷಗಳಷ್ಟು ಹಿಂದೆ ಜಗತ್ತು ಹೇಗಿತ್ತು? ಅಂದಿನ ಆಗಸದಲ್ಲಿ ಕಾಣುತ್ತಿದ್ದ ಶತಕೋಟಿ ತಾರೆಗಳು, ನಕ್ಷತ್ರಪುಂಜಗಳು ಯಾವ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವೈಟ್‌ಹೌಸ್‌ನಲ್ಲಿ, 13 ದಶಕೋಟಿ ವರ್ಷಗಳಷ್ಟು ಹಿಂದಿನ ಬಾಹ್ಯಾಕಾಶ ಲೋಕವನ್ನು ತೆರೆದಿಡಲಾಗಿದೆ.

    ಜೇಮ್ಸ್ ವೆಬ್ ಟೆಲಿಸ್ಕೋಪ್ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದು, ಇದು ಪ್ರಪಂಚ ಹುಟ್ಟಿದ ಸಮಯ ಆಕಾಶ ಹೇಗೆ ಕಾಣಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದೆ. ನೀಲಿ, ಕಿತ್ತಳೆ ಹಾಗೂ ಬಿಳಿ ಬಣ್ಣದಲ್ಲಿರುವ ಗ್ಯಾಲಾಕ್ಸಿಗಳು ಗಮನ ಸೆಳೆದಿವೆ. ಇನ್ನೂ ವಿಶೇಷವಾಗಿ ಈ ಟೆಲಿಸ್ಕೋಪ್ ತೆಗೆದಿರುವ ಮೊದಲ ಚಿತ್ರ ಇದಾಗಿದೆ. ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ

    2021ರ ಡಿಸೆಂಬರ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಅಮೆರಿಕ ಅಂತರಿಕ್ಷಕ್ಕೆ ಕಳುಹಿಸಿತ್ತು. ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್‌ಬ್ಯಾಂಗ್ (ಮಹಾಸ್ಫೋಟ) ಸಂಭವಿಸಿದ 800 ವರ್ಷಗಳ ಬಳಿಕದ ಚಿತ್ರಣ ಇದು ಎಂದು ತಜ್ಞರು ಅಂದಾಜು ಮಾಡಿದ್ದು, ಇದೊಂದು ಐತಿಹಾಸಿಕ ದಿನ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಇನ್ನು ಮುಂದೆ ಸೃಷ್ಟಿಗೆ ಕಾರಣವಾದ, ವಿಸ್ಮಯ ವಿಚಾರಗಳು ಹಾಗೂ ಅತ್ಯಗತ್ಯ ಮಾಹಿತಿಗಳನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಫೋಟೋಗಳನ್ನು ಸೆರೆಹಿಡಿಯುವ ಮೂಲಕ ಒದಗಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು

    ಆಗಸದಲ್ಲಿ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಅಮೆರಿಕದ 52 ಉಪಗ್ರಹಗಳು

    ಉಡುಪಿ: ಕರಾವಳಿ ಆಗಸದಲ್ಲಿ ಸೋಮವಾರ ರಾತ್ರಿ ಕೌತುಕವೊಂದು ನಡೆದಿದೆ. ಸಾಲಿನಲ್ಲಿ ನಕ್ಷತ್ರಗಳು ಚಲಿಸಿದಂತೆ ಉಪಗ್ರಹಗಳು ಬಾನಿನಲ್ಲಿ ಗೋಚರಿಸಿದ್ದು ಉಡುಪಿ ಜನತೆಯನ್ನು ನಿಬ್ಬೆರಗಾಗಿಸಿದೆ.

    ಅಮೇರಿಕಾದ ಕ್ಯಾಲಿಫೋರ್ನಿಯಾದಿಂದ ಉಪಗ್ರಹಗಳು ಇಂಟರ್‌ನೆಟ್ ಶನಿವಾರ ಲಾಂಚ್ ಮಾಡಲಾಗಿದೆ. ಈ ಉಪಗ್ರಹ ಬಾನಲ್ಲಿ ಸಾಲಾಗಿ ಪರಿಭ್ರಮಿಸುತ್ತದೆ. ಈ ದೃಶ್ಯ ಉಡುಪಿಯಲ್ಲಿ ಜನರ ಬರಿಗಣ್ಣಿಗೆ ಕಾಣಿಸಿದೆ. ಎಲೋನ್‌ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿಗೆ ಸೇರಿದ ಉಪಗ್ರಹಗಳು ಇವು. ಸ್ಟಾರ್ ಲಿಂಕ್ ಕಂಪನಿಯು ಈಗಾಗಲೇ ಸುಮಾರು 60 ಕ್ಕೂ ಮಿಕ್ಕಿ ಇಂತಹ ಉಪಗ್ರಹಗಳನ್ನು ನಭಕ್ಕೆ ಬಿಡುಗಡೆ ಮಾಡಿದೆ. ಈ ಪೈಕಿ 52 ಉಪಗ್ರಹ ಒಂದೇ ದಿನ ಉಡಾವಣೆ ಮಾಡಲಾಗಿದೆ. ಇದನ್ನೂ ಓದಿ: ಬೊಮ್ಮಾಯಿ 1 ತಿಂಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ನಮ್ಮ ಶಾಪ ತಟ್ಟದೇ ಇರಲ್ಲ: ಬಸವಪ್ರಕಾಶ ಸ್ವಾಮೀಜಿ

    ಮುಂದಿನ ದಿನಗಳಲ್ಲಿ ಸುಮಾರು 1,800 ಇಂಟರ್‌ನೆಟ್ ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸುವ ತಯಾರಿ ನಡೆಸಲಾಗುತ್ತಿದ್ದು, ಮುಂದೊಂದು ದಿನ ವಿಶ್ವಕ್ಕೆ ಉಚಿತ ಅಥವಾ ಬಹಳ ಕಡಿಮೆ ಮೊತ್ತಕ್ಕೆ ಇಂಟರ್‌ನೆಟ್ ಲಭ್ಯ ಆಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಇಂಟರ್‌ನೆಟ್ ಸುಲಭವಾಗಿ ಜನರ ಮೊಬೈಲ್ ಕಂಪ್ಯೂಟರ್‌ಗಳಿಗೆ ಕೊಡಿಸುವ ಉದ್ದೇಶ ಸಂಸ್ಥೆಗೆ ಇದೆ. ಇದನ್ನೂ ಓದಿ: ಇಸ್ರೋ ವಿಶ್ವದಾಖಲೆ ಮುರಿದ ಸ್ಪೇಸ್ ಎಕ್ಸ್ – ಕಡಿಮೆ ಬೆಲೆಯಲ್ಲಿ ಉಪಗ್ರಹ ಉಡಾವಣೆ

  • ಆಗಸದಲ್ಲಿಂದು ಅಪರೂಪದ ನೀಲಿಚಂದ್ರ – ಏನಿದು ಬ್ಲೂ ಮೂನ್? ಖಗೋಳ ತಜ್ಞರು, ಜ್ಯೋತಿಷಿಗಳು ಹೇಳೋದು ಏನು?

    ಆಗಸದಲ್ಲಿಂದು ಅಪರೂಪದ ನೀಲಿಚಂದ್ರ – ಏನಿದು ಬ್ಲೂ ಮೂನ್? ಖಗೋಳ ತಜ್ಞರು, ಜ್ಯೋತಿಷಿಗಳು ಹೇಳೋದು ಏನು?

    ಬೆಂಗಳೂರು: ನೀಲಿಯಾಕಾಶದಲ್ಲಿ ಇಂದು ಅಪರೂಪದಲ್ಲಿ ಅಪರೂಪವಾದ ಬ್ಲೂ ಮೂನ್ ಕಾಣಿಸಲಿದೆ. ಬ್ಲೂಮೂನ್‍ನ ಕಣ್ತುಂಬಿಕೊಳ್ಳುವ ತವಕ ಜನರಲ್ಲಿ ಮನೆ ಮಾಡಿದೆ. ಅಷ್ಟಕ್ಕೂ ಏನಿದು ಬ್ಲೂಮೂನ್? ಯಾವಾಗ ನೀಲಿಚಂದ್ರ ಗೋಚರಿಸ್ತಾನೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

    ಏನಿದು ಬ್ಲೂ ಮೂನ್?
    ಇಂದು ರಾತ್ರಿ ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದ್ದು, ರಾತ್ರಿ 8.19ಕ್ಕೆ ಸರಿಯಾಗಿ ಬ್ಲೂ ಮೂನ್ ಗೋಚರವಾಗಲಿದೆ. ಸಾಮಾನ್ಯವಾಗಿ ತಿಂಗಳಿಗೆ ಒಂದು ಹುಣ್ಣಿಮೆ ಬರುತ್ತದೆ. ಆದರೆ ಈ ಬಾರಿ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದಿದೆ. ತಿಂಗಳ ಎರಡನೇ ಹುಣ್ಣಿಮೆಯಂದು ಕಾಣುವ ಚಂದ್ರನನ್ನು ಬ್ಲೂ ಮೂನ್ ಎಂದು ಕರೆಯುತ್ತಾರೆ. ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದರ್ಥವಲ್ಲ. ಅ.1 ರಂದು ಮೊದಲ ಹುಣ್ಣಿಮೆ ಬಂದಿದ್ದರೆ ಅ.31ರಂದು ಇಂದು ಎರಡನೇ ಹುಣ್ಣಿಮೆ ಬಂದಿದೆ.

    ಎಷ್ಟು ಅವಧಿ ಬೇಕು?
    ಗ್ರಗೋರಿಯನ್ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್ ಆಗಿರುತ್ತದೆ. 30 ದಿನ ತುಂಬಲು ಬಾಕಿ ಉಳಿದ ಸಮವೆಲ್ಲ ಸೇರಿ ಕೊನೆಗೆ ಒಂದು ತಿಂಗಳಿನಲ್ಲಿ 2 ಹುಣ್ಣಿಮೆ ಬರುತ್ತದೆ. ಸಾಮಾನ್ಯವಾಗಿ ಎರಡು-ಮೂರು ವರ್ಷಕ್ಕೊಮ್ಮೆ ಈ ವಿದ್ಯಮಾನ ಘಟಿಸುತ್ತದೆ. ಈ ಹಿಂದೆ 2018ರಲ್ಲಿ ಬ್ಲೂ ಮೂನ್ ಗೋಚರಿಸಿತ್ತು. 31 ದಿನಗಳು ಇರುವ ತಿಂಗಳಿನಲ್ಲಿ ಬ್ಲೂ ಮೂನ್ ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ 30 ದಿನಗಳಲ್ಲಿ ಬ್ಲೂ ಮೂನ್ ಗೋಚರಿಸುವುದು ಅಪರೂಪ.

    ಖಗೋಳ ತಜ್ಞರು ಏನು ಹೇಳುತ್ತಾರೆ?
    ಇದು ಖಗೋಳದಲ್ಲಿ ಸಹಜ ಪ್ರಕ್ರಿಯೆಯಾಗಿದ್ದು ಸ್ವಾಭಾವಿಕ ಹುಣ್ಣಿಮೆ. ಆದರೆ ಅಪರೂಪ ಅಷ್ಟೇ. ಎಲ್ಲಾ ಹುಣ್ಣಿಮೆಯ ರೀತಿಯೇ ಈ ಹುಣ್ಣಿಮೆ ಕೂಡ. ಬ್ಲೂಮೂನ್ ಎಂದಾಕ್ಷಣ ಇಂದು ಚಂದಿರನ ಬಣ್ಣ ನೀಲಿ ಇರುವುದಿಲ್ಲ. ಬ್ಲೂಮೂನ್‍ಗೂ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ಲಾನಿಟೋರಿಯಂ ಹಿರಿಯ ವಿಜ್ಞಾನಿ ಡಾ.ಆನಂದ್ ಹೇಳಿದ್ದಾರೆ.

    ಜ್ಯೋತಿಷಿಗಳು ಏನ್ ಹೇಳುತ್ತಾರೆ?
    ಈ ಬಾರಿಯ ಬ್ಲೂ ಮೂನ್ ಶುಭಕಾರಕವಾಗಿದ್ದು ನೀಲಚಂದ್ರನ ದರ್ಶನದಿಂದ ಲೋಕ ಕ್ಷೇಮ. ಶಾಂತಿ, ನೆಮ್ಮದಿ ದಯಪಾಲಿಸುತ್ತದೆ. ಆದರೆ ಕೆಲವು ಜನರಿಗೆ ಈ ಬ್ಲೂ ಮೂನ್ ಬಾಧಕಾರಕವಾಗಲಿದೆ. ಶೀಘ್ರವೇ ಕೋವಿಡ್‍ನಿಂದ ಜಗತ್ತಿಗೆ ಮುಕ್ತಿ ಸಿಗಲಿದೆ ಎಂದು ಗವಿ ಗಂಗಾಧರ ದೇವಾಲಯದ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.

    ಈ ಬಾರಿಯ ಹುಣ್ಣಿಮೆಯಿಂದ ಒಂದಿಷ್ಟು ಜನಕ್ಕೆ, ಒಂದಿಷ್ಟು ರಾಶಿಯವರಿಗೆ ಸಮಸ್ಯೆಯಾಗಬಹುದು. ದೇವಿ ಅಥವಾ ಪರಶಿವನ ಆರಾಧನೆಯಿಂದ ಒಳಿತಾಗಲಿದೆ. ಮುಂಬರುವ ದಿನಗಳಲ್ಲಿ ಪ್ರಕೃತಿಯ ವೈಪರೀತ್ಯ ಆಗಲಿದೆ. ಕೋವಿಡ್ ಮಹಾಮಾರಿಯಿಂದ ಸದ್ಯದಲ್ಲೇ ಮುಕ್ತಿ ಸಿಗಲಿದೆ ಎಂದು ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗುರೂಜಿ ತಿಳಿಸಿದ್ದಾರೆ.

    ಹಿಂದಿನ ದಿನವೇ ದುರಂತ:
    ಬ್ಲೂ ಮೂನ್ ಹಿಂದಿನ ದಿನವೇ ವಿಶ್ವದ ಹಲವೆಡೆ ಸಾವು ನೋವು ಸಂಭವಿಸಿದೆ. ತೀವ್ರ ಭೂಕಂಪಕ್ಕೆ ಟರ್ಕಿ, ಗ್ರೀಸ್, ಬಲ್ಗೇರಿಯಾ ತತ್ತರಗೊಂಡಿದ್ದು ನೋಡನೋಡುತ್ತಲೇ ಕಟ್ಟಡಗಳು ಧರೆಗೆ ಬಿದ್ದಿದೆ. 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಮಿನಿ ಸುನಾಮಿಯಿಂದ ಟರ್ಕಿಯ ನಗರಗಳಿಗೆ ನೀರು ನುಗ್ಗಿದೆ. ಗ್ರೀಸ್ ರಾಜಧಾನಿ ಅಥೆನ್ಸ್, ಸಮೋವಾ ದ್ವೀಪ ಸಮೂಹ ಮತ್ತು ಬಲ್ಗೇರಿಯಾದಲ್ಲಿಯೂ ಭೂಮಿ ಕಂಪಿಸಿದ್ದು, ಜನ ಮನೆಗಳಿಂದ ಓಡೋಡಿ ಬಂದಿದ್ದಾರೆ.

  • ಅಕ್ಟೋಬರ್ 31ಕ್ಕೆ ‘ಬ್ಲೂ ಮೂನ್’ ವಿದ್ಯಮಾನ- ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ

    ಅಕ್ಟೋಬರ್ 31ಕ್ಕೆ ‘ಬ್ಲೂ ಮೂನ್’ ವಿದ್ಯಮಾನ- ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ

    ಬೆಂಗಳೂರು: ಅಕ್ಟೋಬರ್ 31ಕ್ಕೆ ನಭೋಮಂಡದಲ್ಲಿ ಬ್ಲೂ ಮೂನ್ ವಿದ್ಯಮಾನ ಜರುಗಲಿದೆ. ಬ್ಲೂ ಮೂನ್ ಅಂದ್ರೆ ಚಂದಿರ ನೀಲಿ ಬಣ್ಣಕ್ಕೆ ಬದಲಾಗಲ್ಲ. ಚಂದ್ರನ ಮೂಲ ಬಣ್ಣವಾಗಿರುವ ನೀಲಿ ಬಣ್ಣದಲ್ಲೇ ಚಂದ್ರನಿರಲಿದ್ದಾನೆ.

    ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬರುವ ಪ್ರಾಕೃತಿಕ ವಿದ್ಯಮಾನವನ್ನೇ ಬ್ಲೂಮೂನ್ ಅಂತಾ ಕರೆಯುತ್ತಾರೆ. ಪ್ರತಿ 2 ಅಥವಾ 3 ವರ್ಷಕ್ಕೊಮ್ಮೆ ಒಂದೇ ತಿಂಗಳಲ್ಲಿ 2 ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಈ ರೀತಿ ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುವ ವಿಶೇಷತೆಯನ್ನ ಬ್ಲೂಮೂನ್ ಎಂದು ಹೇಳಲಾಗುತ್ತದೆ. ಖಗೋಳ ಶಾಸ್ತ್ರದ ಪ್ರಕಾರ 29.531 ದಿನ ಅಥವಾ 29 ದಿನ, 12 ಗಂಟೆ 44 ನಿಮಿಷ, 38 ಸೆಕೆಂಡುಗಳಿಗೆ ಒಂದು ಚಂದ್ರಮಾನ ತಿಂಗಳು ಅಂತಾ ಪರಿಗಣಿಸಲಾಗುತ್ತದೆ. ಹೀಗಾಗಿ 2-3 ವರ್ಷಗಳಿಗೆ ಒಮ್ಮೆ 31 ದಿನ ಇರುವ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುತ್ತದೆ.

    ಈ ತಿಂಗಳು ಅಕ್ಟೋಬರ್ 1ರಂದು ಹುಣ್ಣಿಮೆ ಘಟಿಸಿತ್ತು. ಈಗ ಇದೇ ತಿಂಗಳು ಅಕ್ಟೋಬರ್ 31ಕ್ಕೆ ಇನ್ನೊಂದು ಹುಣ್ಣಿಮೆ ಘಟಿಸುತ್ತಿದೆ. 2018ರಲ್ಲಿ ಕೂಡಾ ಬ್ಲೂಮೂನ್ ಸಂಭವಿಸಿತ್ತು. ಈಗ 2020 ಅಕ್ಟೋಬರ್ ನಲ್ಲಿ ಸಂಭವಿಸುತ್ತಿದೆ. ಮುಂದಿನ ಬ್ಲೂಮೂನ್ 2023ರ ಆಗಸ್ಟ್ 31ಕ್ಕೆ ಸಂಭವಿಸಲಿದೆ ಅನ್ನೋದು ವಿಜ್ಞಾನಿಗಳ ಮಾತಾಗಿದೆ. ಹಾಗಾಗಿ ಇದೊಂದು ಸಾಮಾನ್ಯ ವಿದ್ಯಮಾನ. ಸೌರವ್ಯೂಹದ ಸಾಮಾನ್ಯ ಪ್ರಕ್ರಿಯೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

    ಚಂದ್ರ ಮತ್ತು ಸೂರ್ಯ ಗ್ರಹಣ ಕೂಡಾ ವಿಜ್ಞಾನಿಗಳ ಪ್ರಕಾರ, ಸಾಮಾನ್ಯ ಪ್ರಕ್ರಿಯೆ. ಆದರೆ ಗ್ರಹಣ ಕಾಲ ಮತ್ತು ನಂತರದಲ್ಲಿ ಆಗುವ ಅನಾಹುತಗಳನ್ನ ಮಾನವ ಸಂಕುಲ ಅನುಭವಿಸಿಕೊಂಡು ಬರುತ್ತಿದೆ. ಸೂರ್ಯ ಗ್ರಹಣವಾದ್ರೆ, ರವಿ ಅಗ್ನಿಕಾರಕ ಆಗಿರೋದರಿಂದ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತವೆ. ಚಂದ್ರಗ್ರಹಣವಾದ್ರೆ ಶಶಿ ಜಲಕಾರಕನಾಗಿರೋದ್ರಿಂದ ಜಲಪ್ರಳಯಕ್ಕೆ ಆಗುತ್ತೆ. ಈಗ ಅಕ್ಟೋಬರ್ 31ರಂದು ನಡೆಯಲಿರುವ ವಿಸ್ಮಯ ಚಂದ್ರನಿಗೆ ಸಂಬಂಧಿಸಿರೋದ್ರಿಂದ ಜಲಾಸುರ ಮತ್ತೆ ಆರ್ಭಟಿಸಲಿದ್ದಾನೆ ಎಂಬುವುದು ಜ್ಯೋತಿಷಿಗಳ ಮಾತು.

  • ಆಗಸದಲ್ಲಿ ಮಿನುಗುವ ಹವಳವಾಗಲಿದ್ದಾನೆ ಮಂಗಳ – ಇಂದು ಬಾನಲ್ಲಿ ನಡೆಯುತ್ತೆ ವಿಸ್ಮಯ

    ಆಗಸದಲ್ಲಿ ಮಿನುಗುವ ಹವಳವಾಗಲಿದ್ದಾನೆ ಮಂಗಳ – ಇಂದು ಬಾನಲ್ಲಿ ನಡೆಯುತ್ತೆ ವಿಸ್ಮಯ

    – ಖಗೋಳ ಶಾಸ್ತ್ರಜ್ಞ ಎ.ಪಿ ಭಟ್ ಮಾಹಿತಿ

    ಉಡುಪಿ: ಸಪ್ಟೆಂಬರ್ ತಿಂಗಳು ಪೂರ್ತಿ ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ ಹವಳ ಹೊಳೆಯಲಿದೆ. ಕಡು ಕೆಂಬಣ್ಣದಲ್ಲಿ ಮಂಗಳ ಗ್ರಹ ಬಹಳ ಆಕರ್ಷಕವಾಗಿ ಗೋಚರವಾಗುತ್ತಿದೆ. ಭೂಮಿ ಮೇಲೆ ನಿಂತರೆ ಆಗಸದಲ್ಲಿ ನಡೆಯುವ ಬದಲಾವಣೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಎಲ್ಲರಿಗೂ ಇದೆ.

    ಅಕ್ಟೊಬರ್ 13ರಂದು ಮಂಗಳ ಗ್ರಹ, ಭೂಮಿಗೆ ಸಮೀಪ ಬರುತ್ತಿದೆ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಮಂಗಳ ಹತ್ತಿರ ಬರುವ ಈ ವಿದ್ಯಮಾನವನ್ನು ಮಾರ್ಸ್ ಒಪೋಸಿಶನ್ ಎನ್ನುತ್ತಾರೆ. ಹೀಗೆ ಹತ್ತಿರ ಬಂದಾಗ ಮಂಗಳ ಬಹಳ ದೊಡ್ಡದಾಗಿ ಕಂಡು ಇಡೀ ರಾತ್ರಿ ಆಗಸದಲ್ಲಿ ಹವಳದಂತೆ ಕಾಣಿಸಲಿದೆ.

    ಸುಮಾರು 24 ಕೋಟಿ ಕಿ.ಮೀ ದೂರದಲ್ಲಿ ದೀರ್ಘ ವ್ರತ್ತಾಕಾರದಲ್ಲಿ ಸೂರ್ಯನಿಗೆ ಸುತ್ತು ಬರಲು ಈ ಮಂಗಳ ಗ್ರಹಕ್ಕೆ 687 ದಿನಗಳು ಬೇಕು. ಭೂಮಿಯೂ ಸುಮಾರು 15 ಕೋಟಿ ಕಿ.ಮೀ ದೂರದಲ್ಲಿ ಸೂರ್ಯನ ಸುತ್ತುವುದರಿಂದ ಈ ಎರಡೂ ಗ್ರಹಗಳು 2 ವರ್ಷ 50 ದಿನಗಳಲ್ಲಿ ಸಮಿಪಿಸಿ ಮತ್ತೆ ದೂರ ಸರಿಯುತ್ತವೆ ಎಂದು ಖಗೋಳ ಶಾಸ್ತ್ರಜ್ಞ ಎ.ಪಿ ಭಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಅಕ್ಟೋಬರ್ 13ರಂದು ಭೂಮಿಗೆ 6.2 ಕೋಟಿ ಕಿಲೋ ಮೀಟರ್ ದೂರದಲ್ಲಿ, ಹತ್ತಿರ ಬಂದು ಸುಂದರವಾಗಿ ದೊಡ್ಡದಾಗಿ ಕಾಣುತ್ತದೆ. 2021ರ ನವೆಂಬರ್ ಹೊತ್ತಿಗೆ ಭೂಮಿಯಿಂದ 39 ಕೋಟಿ ಕೀಮೀ ದೂರದಲ್ಲಿರುತ್ತಾ ಚಿಕ್ಕದಾಗಿ ಗೋಚರಿಸುತ್ತದೆ. ಮಳೆ ಕಡಿಮೆಯಾಗಿದೆ. ಮೋಡ ಸರಿದು ಆಗಸ ಸ್ವಚ್ಛವಾಗಿರುವ ಈ ಸಂದರ್ಭದಲ್ಲಿ ಈ ವಿದ್ಯಾಮಾನವನ್ನು ಕಣ್ತುಂಬಿಕೊಳ್ಳಿ ಎಂದು ಭಟ್ ಸಲಹೆ ನೀಡಿದ್ದಾರೆ.

    ಸಂಜೆಯಾದೊಡನೆ ಪೂರ್ವ ಆಕಾಶದಲ್ಲಿ, ಶುಕ್ರ ಗ್ರಹದ ಹೊಳಪನ್ನೂ ಮಂಗಳ ಮೀರಿಸಿದೆ. ಈ ತಿಂಗಳು ಪೂರ್ತಿ ಹೀಗೆ ಕಾಣುತ್ತದೆ. ನಾಡಿದ್ದು ಅಕ್ಟೋಬರ್ ಒಂದರಂದು ಮಂಗಳ ಹುಣ್ಣಿಮೆ ಚಂದ್ರನ ಪಕ್ಕದಲ್ಲಿರುತ್ತದೆ. ಇವುಗಳ ಜೊತೆಗೆ ನೆತ್ತಿಯ ಮೇಲೆ ಗುರು, ಶನಿ ಗ್ರಹಗಳನ್ನೂ ಬರೀ ಕಣ್ಣಿನಿಂದಲೇ ಗುರುತಿಸಬಹುದು. ರಾಜ್ಯದಲ್ಲಿ ಮಳೆ ಸುರಿಯುತ್ತಿರುವುದರಿಂದ ಮೋಡವಿಲ್ಲದ ಕಡೆ ಈ ಕೌತುಕ ಕಣ್ತುಂಬಿಕೊಳ್ಳಬಹುದು.

  • ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್

    ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್

    – ವೀಕೆಂಡ್‍ನಲ್ಲಿ ಸೂಪರ್ ಮೂನ್ ಸಂಭ್ರಮ
    – ವಿಜ್ಞಾನಿಗಳ ಪಾಲಿಗೆ ವಿಸ್ಮಯ, ಜ್ಯೋತಿಷಿಗಳ ಪಾಲಿಗೆ ಭಯ

    ಬೆಂಗಳೂರು: ಇಂದು ಹಾಗೂ ನಾಳೆ ಆಗಸದಲ್ಲೊಂದು ವಿಸ್ಮಯ ನಡೆಯಲಿದೆ. ಚಂದದ ಚಂದ್ರಮಾಮ ಇನ್ನಷ್ಟು ಪ್ರಜ್ವಲಿಸುತ್ತಾನೆ. ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್ ಸಂಭ್ರಮ ಇರಲಿದೆ.

    ಪ್ರತಿ ತಿಂಗಳು ಹುಣ್ಣಿಮೆ ಘಟಿಸೋದು ಸಾಮಾನ್ಯ. ಆದರೆ ಇಂದು ಶುರುವಾಗಿ ನಾಳೆ ಭಾನುವಾರದವರೆಗೆ ಆಗಸದಲ್ಲಿ ಕಂಗೊಳಿಸುತ್ತಾನಲ್ಲ ಚಂದಿರ ಅದು ಮಾತ್ರ ಕಣ್ಣಿಗೆ ಸೊಗಸಾದ ದೃಶ್ಯ ವೈಭವ. ಈ ಬಾರಿಯ ಮಾಘ ಮಾಸದಲ್ಲಿ ಬಂದ ಹುಣ್ಣಿಮೆ ಚಂದಿರ, ಸೂಪರ್ ಮೂನ್ ಆಗಿದೆ. ಶನಿವಾರ ಸಂಜೆ 4 ಗಂಟೆ 2 ನಿಮಿಷಕ್ಕೆ ಶುರುವಾಗಿ ಭಾನುವಾರ ಮಧ್ಯಾಹ್ನ 1 ಗಂಟೆ 3 ನಿಮಿಷಕ್ಕೆ ಈ ಮಾಘ ಹುಣ್ಣಿಮೆ ಮುಗಿಯಲಿದೆ.

    ಸೂಪರ್ ಮೂನ್ ನಿಮ್ಮ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಬೇಗನೆ ಉದಯವಾಗುವ ಚಂದ್ರ ನಿಧಾನವಾಗಿ ಮುಳುಗುತ್ತಾನೆ. ಭೂಮಿಯ ಸಮೀಪದಲ್ಲಿ ಬರುವ ಚಂದ್ರ ನಿಮಗೆ ಹತ್ತಿರದಲ್ಲೇ ಇರುವ ಭಾವನೆಯನ್ನ ಮೂಡಿಸುತ್ತಾನೆ. ಈ ಬಾರಿ ಬೆಳದಿಂಗಳು ಬೆಳಕು ದುಪ್ಪಟ್ಟಾಗಲಿದೆ ಎಂದು ಖ್ಯಾತ ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ ಹೇಳಿದರು.

    ವಿಜ್ಞಾನಿಗಳ ಪಾಲಿನ ಈ ವಿಸ್ಮಯ, ಜ್ಯೋತಿಷ್ಯದಲ್ಲಿ ಮಾತ್ರ ಸಣ್ಣ ಆತಂಕ ಹುಟ್ಟಿಸಿದೆ. ಹುಣ್ಣಿಮೆಯು ಶನಿ ನಕ್ಷತ್ರದಲ್ಲಿ ಘಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೌರ್ಣಮಿಯ ಮೇಲೆ ಶನಿಯ ನೇರ ದೃಷ್ಠಿ ಇದೆ. ಗ್ರಹಣದ ಬೆನ್ನಲ್ಲೆ ಬಂದ ಪೌರ್ಣಿಮೆ ಶ್ರೇಷ್ಠದಿನವಾದರೂ ಸೂಪರ್ ಮೂನ್ ಪ್ರಕೃತಿಯ ಮೇಲೆ ಅಸಹಜ ಪರಿಣಾಮ ಬೀರುತ್ತದೆ. ಪೌರ್ಣಿಮೆಯ ಅವಧಿ ಸುದೀರ್ಘವಾಗಿರುವುದರಿಂದ ಮನುಷ್ಯರಲ್ಲಿ ಮಾನಸಿಕ ತೊಳಲಾಟ, ದ್ವಂದ್ವಗಳು ಹೆಚ್ಚಾಗುತ್ತವೆ ಎಂದು ರೇಣುಕಾರಾಧ್ಯ ಗುರೂಜಿ ತಿಳಿಸಿದರು.

    ಈ ಮಾಘ ಹುಣ್ಣಿಮೆಯನ್ನ ಭರತ ಹುಣ್ಣಿಮೆ ಅಂತನೂ ಕರೆಯಲಾಗುತ್ತೆ. ಪೂರ್ಣ ಚಂದಿರನ ದರ್ಶನ ಆಗುವುದರಿಂದ ಜಲಗಂಡಾತರವಾಗುವ ಸಾಧ್ಯತೆ ಇದೆ. ಗ್ರಹಣಗಳ ನಂತರ ಬಂದಿರುವ ಪೂರ್ಣ ಹುಣ್ಣಿಮೆಯ ಪರಿಣಾಮ, ರಾಜ್ಯ ಹಾಗೂ ಕೇಂದ್ರದಲ್ಲೂ ಅವಘಡಗಳು ನಡೆಯಬಹುದು ಎಂದು ಗವಿಗಂಗಾಧರದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತರು ಹೇಳಿದರು.

    ಸೂಪರ್ ಮೂನ್ ಕೆಟ್ಟ ಪರಿಣಾಮ ತಪ್ಪಿಸಲು ಶಿವನ ಆರಾಧನೆ ಮಾಡಬೇಕು ಅನ್ನೋದು ಜ್ಯೋತಿಷಿಗಳ ಸಲಹೆ. ಆದರೆ ಆಗಸ ನೋಡಿ ಚಂದಮಾಮಾನ ಕಣ್ತುಂಬಿಸಿಕೊಳ್ಳಿ ಎಂಬುವುದು ವಿಜ್ಞಾನಿಗಳ ಸಲಹೆ.

  • ಶಿವ-ಗಂಗಾ ವಿವಾಹ ಮಹೋತ್ಸವದ ವೇಳೆ ಆಕಾಶದಲ್ಲಿ ಶಿವಲಿಂಗ ದರ್ಶನ

    ಶಿವ-ಗಂಗಾ ವಿವಾಹ ಮಹೋತ್ಸವದ ವೇಳೆ ಆಕಾಶದಲ್ಲಿ ಶಿವಲಿಂಗ ದರ್ಶನ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಭಾನುವಾರ ಸಂಜೆ ನಡೆದ ಶಿವ-ಗಂಗಾ ವಿವಾಹ ಮಹೋತ್ಸವದ ಸಂದರ್ಭದಲ್ಲಿ ಅಚ್ಚರಿಯೊಂದು ನಡೆದಿದೆ.

    ಕಡಲತೀರದಲ್ಲಿ ಶಿವ-ಗಂಗಾ ವಿವಾಹ ಮಹೋತ್ಸವ ನೆರವೇರುವ ಸಂದರ್ಭದಲ್ಲಿ ಆಕಾಶದಲ್ಲಿ ಮೋಡವು ಶಿವಲಿಂಗದ ಆಕಾರದಲ್ಲಿ ಗೋಚರಿಸಿದೆ. ಇದನ್ನು ಕಂಡು ಭಕ್ತಾದಿಗಳು ವಿಸ್ಮಯಗೊಂಡಿದ್ದಾರೆ. ಅಚ್ಚರಿಯಿಂದ ಮೋಡದಲ್ಲಿ ಮೂಡಿದ್ದ ಶಿವಲಿಂಗಕ್ಕೆ ನಮಿಸಿದ್ದಾರೆ.

    ಸೂರ್ಯಾಸ್ತದ ಬಳಿಕ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ವಧುವಾಗಿ ಬಂದ ಗಂಗಾಮಾತೆ ಶಿವನನ್ನು ವಿವಾಹವಾಗುವ ವೇಳೆಗೆ ಮೋಡದಲ್ಲಿ ಶಿವಲಿಂಗದ ರೂಪ ಮೂಡಿತ್ತು. ಇದನ್ನು ಕಂಡ ಸ್ಥಳದಲ್ಲಿ ನೆರೆದಿದ್ದ ಭಕ್ತರು ಅಚ್ಚರಿಪಟ್ಟರು. ಅಲ್ಲದೆ ಕೆಲವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡಿದ್ದರೆ, ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ.

    ಈ ವಿಸ್ಮಯ ದೃಶ್ಯವನ್ನು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಮೋಡದಲ್ಲಿ ಮೂಡಿದ್ದ ಶಿವಲಿಂಗ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.