Tag: skin care

  • ಮನೆ ಮದ್ದು | ಮೊಡವೆಯ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಸುಲಭ ಪರಿಹಾರ

    ಮನೆ ಮದ್ದು | ಮೊಡವೆಯ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಸುಲಭ ಪರಿಹಾರ

    ಇಂದಿನ ಯುವಜನ ದೈಹಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡ್ತಾರೆ. ಅದಕ್ಕಾಗಿ ಟಿವಿ ಜಾಹೀರಾತಿನಲ್ಲಿ ತೋರಿಸುವ, ಬ್ಯೂಟಿ ಪ್ರೊಡಕ್ಟ್‌ಗಳನ್ನ ದುಬಾರಿ ಹಣ ಕೊಟ್ಟು ಖರೀದಿ ಮಾಡ್ತಾರೆ. ಇಂತಹ ರಾಸಾಯನಿಕ ವಸ್ತುಗಳ ಬಳಕೆಯಿಂದಾಗಿ ಮುಖದಲ್ಲಿ ಮೊಡವೆಗಳ ಸಮಸ್ಯೆಗಳು (Pimple Problem) ಹೆಚ್ಚಾಗುತ್ತದೆ. ಕೆಲವರಂತೂ ಈ ಮೊಡವೆಗಳಿಂದ ಮುಕ್ತಿ ಪಡೆಯಲು ಹರಸಾಹಸ ಪಡುತ್ತಾರೆ. ದುಬಾರಿ ಕಾಸ್ಮೆಟಿಕ್ ಖರೀದಿಸಿ ಮುಖಕ್ಕೆ ಹಚ್ಚಿ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ.

    ಈ ಪಿಂಪಲ್ (Pimple) ಸಮಸ್ಯೆ ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಅನ್ನೋದು ಕೆಲವರ ಅಭಿಪ್ರಾಯ. ಇನ್ನೂ ಕೆಲವರು ಇದೇ ಸಮಸ್ಯೆಯಿಂದ ಕೊರಗುತ್ತಿರುತ್ತಾರೆ. ಈ ಮೊಡವೆಗಳು ಕೆಲವೊಮ್ಮೆ ಹಾರ್ಮೋನ್ ಸಮಸ್ಯೆಯಿಂದ ಅಥವಾ ನಮ್ಮ ಆಹಾರ ಶೈಲಿಯಿಂದ ಬರುತ್ತದೆ. ಆದ್ರೆ ಇದನ್ನು ಹೋಗಲಾಡಿರುವ ಉಪಾಯ ಗೊತ್ತಿದ್ದವರು ಚಿಂತೆ ಮಾಡಬೇಕಿಲ್ಲ, ಕೊರಗುತ್ತಾ ಕೂರಬೇಕಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಸುಲಭವಾಗಿ ಮೊಡವೆ ಸಮಸ್ಯೆಯಿಂದ ಹೊರಬರುವುದು ಹೇಗೆ? ಅನ್ನೋದನ್ನ ತಿಳಿಯಬೇಕಾದ್ರೆ ಮುಂದೆ ಓದಿ…

    ಜೇನು ತುಪ್ಪ (Honey)
    ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಜೇನುತುಪ್ಪ ಮೊಡವೆ ನಿವಾರಿಸಲು ಸಹಕಾರಿ. ರಾತ್ರಿ ಮಲಗುವ ಮುನ್ನ ಮೊಡವೆ ಇರುವ ಭಾಗಕ್ಕೆ ಜೇನುತುಪ್ಪ ಹಚ್ಚಿ, ಬ್ಯಾಂಡೇಜ್‌ನಿಂದ ಮುಚ್ಚಬೇಕು. ರಾತ್ರಿಯಿಡೀ ಹಾಗೆ ಬಿಟ್ಟು, ಬೆಳಗ್ಗೆ ಎದ್ದ ಕೂಡಲೇ ಬ್ಯಾಂಡೇಜ್ ತೆಗೆದು ಮುಖವನ್ನು ತೊಳೆಯಬೇಕು. ಇದೇ ರೀತಿ ಮೊಡವೆ ಏಳುವ ಜಾಗಗಳಿಗೆ ಮಾಡಿದರೆ ಸುಲಭವಾಗಿ ಈ ಸಮಸ್ಯೆಯಿಂದ ಹೊರಬರಬಹುದು.

    ಐಸ್‌ಕ್ಯೂಬ್ (Ice Cube)
    ಐಸ್‌ಕ್ಯೂಬ್‌ನಿಂದಲೂ ಮುಖದಲ್ಲಿರುವ ಮೊಡವೆಯಿಂದ ನಿವಾರಣೆ ಪಡೆಯಬಹುದು. ಪ್ರತಿದಿನ 2 ರಿಂದ 3 ಬಾರಿ ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳು ಮಾಯವಾಗುತ್ತದೆ. ಈ ಐಸ್‌ಕ್ಯೂಬ್‌ಗಳಿಂದ ಮಸಾಜ್ ಮಾಡುವುದರಿಂದ ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೇ ಚರ್ಮವನ್ನು ಹೆಚ್ಚು ತೆವವಾಗಿಸುತ್ತದೆ. ಇನ್ನು ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದಕ್ಕೇ 7ರಿಂದ 8 ಐಸ್‌ಕ್ಯೂಬ್‌ಗಳನ್ನು ಹಾಕಿ ಮುಖವನ್ನು ಈ ನೀರಿನಲ್ಲಿ 2 ರಿಂದ 3 ನಿಮಿಷ ಇಡಬೇಕು. ಇದೇ ರೀತಿ 2 ರಿಂದ 3 ಬಾರಿ ಮಾಡುವುದರಿಂದ ಮುಖದಲ್ಲಿರುವ ಡೆಡ್ ಸ್ಕಿನ್ ಸೆಲ್ಸ್‌ಗಳನ್ನ ಹೋಗಲಾಡಿಸುತ್ತದೆ.

    ಪಪ್ಪಾಯಿ ಹಣ್ಣು (Papaya)
    ಪಪ್ಪಾಯಿ ಹಣ್ಣು ವಿಟಮಿನ್ ಸಿ ಅಂಶವನ್ನು ಹೊಂದಿದೆ. ಪೂರ್ತಿ ಹಣ್ಣಾಗಿರುವ ಪಪ್ಪಾಯಿಯನ್ನು ಸಣ್ಣಗೆ ತುಂಡು ಮಾಡಿ, ಇದರಿಂದ ಮುಖಕ್ಕೆ ಮಸಾಜ್ ಮಾಡಬೇಕು. ಇದು ಸಹ ಮುಖದಲ್ಲಿರುವ ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ. 5 ನಿಮಿಷಗಳ ಬಳಿಕ ಮುಖವನ್ನು ಉಗುರು ಬೆಚ್ಚ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮ ಮುಖದಲ್ಲಿರುವ ಮೊಡವೆಯನ್ನು ಸುಲಭವಾಗಿ ನಿವಾರಿಸುತ್ತದೆ.

    ಅಲೋವೆರಾ (Alovera)
    ಇದು ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದ್ದು, ಉರಿಯೂತ ನಿವಾರಕವಾಗಿದೆ. ಅಲ್ಲದೇ ಮೊಡವೆಯನ್ನು ಪರಿಣಾಮಕಾರಿಯಾಗಿ ಶಮನ ಮಾಡಲು ಅಲೋವೆರಾ ಸಹಾಯ ಮಾಡುತ್ತದೆ. ಅಲೋವೆರಾವು ಹೆಚ್ಚು ನೀರಿನಾಂಶವನ್ನು ಹೊಂದಿರುವುದರಿಂದ ತ್ವಚೆಗೆ ತೇವಾಂಶವನ್ನು ನೀಡಿ, ಉತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಮುಖವನ್ನು ಚೆನ್ನಾಗಿ ತೊಳೆದು, ಬಳಿಕ ಅಲೋವೆರಾ ಜೆಲ್ ಅಥವಾ ಲೋಳೆಯನ್ನು ತ್ವಚೆಗೆ ಅನ್ವಯಿಸಬೇಕು. 30 ನಿಮಿಷದ ನಂತರ ಪುನಃ ಮುಖವನ್ನು ತೊಳೆಯಿರಿ.

    ತೆಂಗಿನ ಎಣ್ಣೆ (Coconut Oil)
    ಬಹುಪಯೋಗಿ ತೆಂಗಿನ ಎಣ್ಣೆಯು ಸೌಂದರ್ಯ ಹೆಚ್ಚಿಸಲೂ ಬಳಸಲಾಗುತ್ತದೆ. ಆಹಾರದ ತಯಾರಿಕೆಗೂ ತೆಂಗಿನ ಎಣ್ಣೆಯನ್ನು ಉಪಯೋಗಿಸುತ್ತಾರೆ. ತೆಂಗಿನ ಎಣ್ಣೆಯು ಉರಿಯೂತ ನಿವಾರಣೆ ಗುಣ ಮತ್ತು ಬ್ಯಾಕ್ಟೀರಿಯಾ ವಿರೋಧಿ ಸಂಯುಕ್ತಗಳನ್ನು ಹೊಂದಿದೆ. ತೆಂಗಿನ ಎಣ್ಣೆಯು ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ರಾತ್ರಿ ಮಲಗುವ ಮುನ್ನ ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆದಷ್ಟೂ ಬೇಗ ಮೊಡವೆಯನ್ನು ನಿವಾರಣೆ ಮಾಡುತ್ತದೆ. ಅಲ್ಲದೇ ಮೊಡವೆಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ.

    ಮೊಸರು (Curd)
    ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಶುಷ್ಕ ತ್ವಚೆಯನ್ನು ಹೊಂದಲು ಸಹಕಾರಿಯಾಗಿದೆ. ಮುಖದ ಭಾಗಕ್ಕೆ ಮೊಸರನ್ನು ಹಚ್ಚಿ, 10 ನಿಮಿಷಗಳ ಕಾಲ ಅಥವಾ ಒಣಗುವವರೆಗೆ ಹಾಗೆಯೇ ಬಿಡಿ, ನಂತರ ತೊಳೆಯಿರಿ. ಅಲ್ಲದೇ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದಲೂ ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಉತ್ತಮ ಮಾರ್ಗವಾಗಿದೆ.

    ಮೊಡವೆಗಳಿಂದ ನಿವಾರಣೆ ಪಡೆಯಲು ಬೇರೆ ಬೇರೆ ಕಾಸ್ಮೆಟಿಕ್ ಅಥವಾ ಮೆಡಿಸಿನ್‌ಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲೇ ಸಿಗುವ ವಸ್ತುಗಳಿಂದ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಈ ಮನೆಮದ್ದುಗಳು ಆರೋಗ್ಯಕ್ಕೆ ಅಡ್ಡಪರಿಣಾಮವನ್ನು ಬೀರದೆ ಶುಷ್ಕ ಹಾಗೂ ಕಾಂತಿಯುತ ತ್ವಚೆಯನ್ನು ಪಡೆಯಲು ಸಹಕರಿಸುತ್ತದೆ.

  • ಸನ್‍ಸ್ಕ್ರೀನ್‌ಗಳನ್ನು ಆಯ್ಕೆ ಮಾಡುವಾಗ ತಪ್ಪದೇ ಈ ಅಂಶಗಳನ್ನು ಗಮನಿಸಿ

    ಸನ್‍ಸ್ಕ್ರೀನ್‌ಗಳನ್ನು ಆಯ್ಕೆ ಮಾಡುವಾಗ ತಪ್ಪದೇ ಈ ಅಂಶಗಳನ್ನು ಗಮನಿಸಿ

    ಬೇಸಿಗೆ ಕಾಲ ಶುರುವಾಗಿದ್ದು, ಉರಿಬಿಸಿಲು ಮಾತ್ರ ಎಂದಿನಂತೆ ಈ ಬಾರಿಯೂ ಜೋರಾಗಿಯೇ ಇದೆ. ಅದರಲ್ಲೂ ಸೂರ್ಯನ ಕಿರಣಗಳು ನೇರವಾಗಿ ನಮ್ಮ ದೇಹದ ಮೇಲೆ ಬೀಳುವುದರಿಂದ ಚರ್ಮವು ಹಾನಿಯಾಗುತ್ತದೆ. ಸನ್ ಟ್ಯಾನ್, ಸನ್ ಬರ್ನ್ ನಂತಹ ಸಮಸ್ಯೆಗಳು ಎದುರಾಗುತ್ತದೆ. ಸುಡು ಬಿಸಿಲಿನಲ್ಲಿ ಮೈಯೊಡ್ಡಿಕೊಂಡು ಹೋದರೆ, ಮೈಯೆಲ್ಲಾ ಕಲೆಗಳು ಮೂಡುವುದು. ಅದರಲ್ಲೂ ಕೈ ಮತ್ತು ಮುಖದ ಮೇಲೆ ಇದು ಹೆಚ್ಚಾಗಿರುವುದು.

    ಬೇಸಿಗೆಯ ಕಾಲ ಬಂತೆಂದರೆ ಆರೋಗ್ಯ ಕಾಳಜಿ ಮಾತ್ರವಲ್ಲ, ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಕಾಳಜಿ ಮಾಡಿದರೂ ಸುಡುವ ಬಿಸಿಲಿನಿಂದ ಚರ್ಮವು ಬೇಗನೇ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ ಶುಷ್ಕವಾಗುತ್ತದೆ. ಬೇಸಿಗೆಯಲ್ಲಿ ಟ್ಯಾನಿಂಗ್ (Tanning), ಪಿಗ್ಮೆಂಟೇಶನ್ ಮತ್ತು ಸನ್ ಬರ್ನ್ ಸಾಮಾನ್ಯ ಸಮಸ್ಯೆಗಳಾಗಿವೆ. ಹಾಗೇ, ಸೂರ್ಯನ UVA ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಚರ್ಮ ಹಾನಿಗೊಳಗಾಗುತ್ತದೆ.

    ಬೇಸಿಗೆಯಲ್ಲಿ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ (Sunscreen) ಅಥವಾ ಲೋಷನ್‌ಗಳು ಅತ್ಯಗತ್ಯ. ಆದರೆ ಅನೇಕ ಮಂದಿ ಸನ್‍ಸ್ಕ್ರೀನ್ ಹಚ್ಚಿ ಕೂಡ ಸಮಸ್ಯೆಗೊಳಗಾಗುತ್ತಾರೆ. ಏಕೆಂದರೆ ಕೆಲ ಲೋಷನ್‌ಗಳು ಕೆಲವರ ಚರ್ಮದ ಪ್ರಕಾರಕ್ಕೆ ಸರಿ ಹೊಂದುವುದಿಲ್ಲ ಅಥವಾ ಮೊಡವೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ನಮ್ಮ ಚರ್ಮದ ವಿಧ ಹಾಗೂ ಯಾವ ಬಗೆಯ ಸನ್‍ಸ್ಕ್ರೀನ್ ಕ್ರೀಮ್ ಬಳಕೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

    ಚರ್ಮಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಒಣ ಚರ್ಮ (Dry Skin), ಎಣ್ಣೆಯುಕ್ತ ಚರ್ಮ (Oily Skin), ಸಂಯೋಜಿತ ಚರ್ಮಗಳು (Combination Skin). ಇದರಲ್ಲಿ ಕೆಲವರ ಚರ್ಮ ಒಂದೊಂದು ರೀತಿಯ ವಿಧಗಳಿಗೆ ಹೊಂದಿಕೊಂಡಿರುತ್ತದೆ. ಈ ಮೂರು ವಿಧದ ಚರ್ಮದ ರೀತಿ ಹೊಂದಿರುವವರೆಗೂ ಬೇರೆ ಬೇರೆ ರೀತಿಯಾದಂತಹ ಚರ್ಮದ ಆರೈಕೆಯ ನಿಯಮಗಳಿರುತ್ತದೆ. ಅದರ ಅನುಗುಣವಾಗಿಯೇ ಚರ್ಮಕ್ಕೆ ಸರಿಹೊಂದುವ ಸನ್‍ಸ್ಕ್ರೀನ್ ಅಥವಾ ಲೋಷನ್‌ಗಳನ್ನು ಬಳಸಬೇಕು.

    ಸೂರ್ಯನ ಕಿರಣದಿಂದ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ ಕ್ರೀಮ್ ಅಥವಾ ಲೋಷನ್‌ಗಳನ್ನು ಬಳಸುತ್ತೇವೆ. ಇದು ಚರ್ಮದ ಮೇಲೆ ಉಂಟಾಗುವ ಹಾನಿ ಹಾಗೂ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಸನ್‌ಸ್ಕ್ರೀನ್‌ಗಳನ್ನು ಗಣನೀಯವಾಗಿ ಬಳಸುವುದರಿಂದ ಮುಖದಲ್ಲಿ ಮೊಡವೆ, ಶುಷ್ಕತೆ, ಸುಕ್ಕು, ತುರಿಕೆ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂದು ಸಲಹೆ ನೀಡಲಾಗುವುದು. ಜೊತೆಗೆ ಚರ್ಮವು ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ.

    ಸನ್‌ಸ್ಕ್ರೀನ್‌ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:
    ಸನ್‌ಸ್ಕ್ರೀನ್‌ ಕ್ರೀಮ್‍ಗಳನ್ನು ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಮೊದಲು ಗಮನಿಸಬೇಕು. ಎಸ್‍ಪಿಎಫ್ (SPF) ಎಂದರೆ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್, ಇದು UVB ವಿಕಿರಣದ ವಿರುದ್ಧ ಸನ್‌ಸ್ಕ್ರೀನ್ ನೀಡುವ ರಕ್ಷಣೆಯ ಮಟ್ಟವನ್ನು ಅಳೆಯುತ್ತದೆ. ಸನ್‌ಸ್ಕ್ರೀನ್‌ಗಳು SPF 15, SPF 30 ಮತ್ತು SPF 50 ನಂತಹ ವಿಧಗಳಿವೆ.

    ಸನ್‌ಸ್ಕ್ರೀನ್‌ಗಳನ್ನು ಆರಿಸುವಾಗ 30+ ಎಸ್‍ಪಿಎಫ್ ಗಿಂತ ಹೆಚ್ಚಿರಬೇಕು. 30 ಎಸ್‍ಪಿಎಫ್ ಕ್ರೀಮ್ ಗಳು ಶೇಕಡಾ 97 ರಷ್ಟು ಯುವಿಬಿ ಕಿರಣಗಳಿಂದ ರಕ್ಷಿಸಿದರೆ, 50 ಎಸ್‍ಪಿಎಫ್ ಕ್ರೀಮ್ ಶೇಕಡಾ 100ರಷ್ಟು ಯುವಿಬಿ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಸನ್‌ಸ್ಕ್ರೀನ್‌ನಲ್ಲಿ ಆಕ್ಟಿನೊಕ್ಸೇಟ್ ಮತ್ತು ಆಕ್ಸಿಬೆನ್‍ಝೋನ್ ನಂತಹ ಅಂಶಗಳು ಇವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಕೆಲವರಿಗೆ ರಾಸಾಯನಿಕ ಉತ್ಪನ್ನಗಳಿಂದ ಅಲರ್ಜಿ ಉಂಟಾಗುವುದು. ಹಾಗಾಗಿ ಸನ್ ಸ್ಕ್ರೀನ್‌ಗಳನ್ನು ಆರಿಸುವಾಗ ಎಚ್ಚರವಹಿಸಬೇಕು.


    ಸನ್‌ಸ್ಕ್ರೀನ್‌ಗಳನ್ನು ಬಳಸುವ ವಿಧಾನ
    ಸನ್‌ಸ್ಕ್ರೀನ್‌ ಹಚ್ಚುವ ಮೊದಲು ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಜೊತೆಗೆ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಕ್ರೀಮ್ ಅನ್ನು ಮುಖಕ್ಕೆ ಅನ್ವಯಿಸುವ ಮೊದಲು ನಿಮ್ಮ ಕೈಗಳಿಗೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವ ಮೊದಲು ಅಂದರೆ 30 ನಿಮಿಷ ಮೊದಲು ಮುಖದ ಭಾಗಗಳಿಗೆ ಹಾಗೂ ಕೈಕಾಲುಗಳಿಗೆ ಕ್ರೀಮ್‌ಗಳನ್ನು ಹಚ್ಚಿಕೊಳ್ಳಬೇಕು. ಹೆಚ್ಚು ಬೆವರುವರಾದರೆ ಅಥವಾ ಮುಖವನ್ನು ಆಗಾಗ ಉಚ್ಚಿಕೊಳ್ಳುವವರಾದರೆ ಪ್ರತಿ 2 ಗಂಟೆಗೊಮ್ಮೆ ಸನ್‌ಸ್ಕ್ರೀನ್‌ಗಳನ್ನು ಹಚ್ಚಿಕೊಳ್ಳಬೇಕು.

    ಈ ರೀತಿಯಾಗಿ ಬಿಸಿಲಿನಿಂದ ಮುಖದ ಸೌಂದರ್ಯ ವನ್ನು ಕಾಪಾಡಿಕೊಳ್ಳಬಹುದು. ಸನ್‌ಸ್ಕ್ರೀನ್‌ಗಳನ್ನು ಬರೀ ಬೇಸಿಗೆಗಾಲದ ಹೊರತು ಎಲ್ಲಾ ಕಾಲಗಳಲ್ಲೂ ಬಳಸುವುದರಿಂದ ಚರ್ಮವು ಸುಂದರವಾಗಿರುತ್ತದೆ. ಮತ್ತು ಮುಖದ ಸುಕ್ಕುಗಳನ್ನು ನಿವಾರಿಸುತ್ತದೆ.

  • ಬರುತ್ತಿದೆ ಹೋಳಿ- ಚರ್ಮ ಸುರಕ್ಷತೆಗೆ ಇರಲಿ ಒಂದಿಷ್ಟು ಕಾಳಜಿ

    ಬರುತ್ತಿದೆ ಹೋಳಿ- ಚರ್ಮ ಸುರಕ್ಷತೆಗೆ ಇರಲಿ ಒಂದಿಷ್ಟು ಕಾಳಜಿ

    2022ರ ಹೋಳಿ ಹಬ್ಬ ಹತ್ತಿರವಾಗುತ್ತಿದೆ. ಎಲ್ಲೆಡೆ ಬಗೆ-ಬಗೆಯ ಬಣ್ಣಗಳು ರಂಗೇರಿಸಲು ಸಜ್ಜಾಗುತ್ತಿವೆ. ಹೌದು… ಹೋಳಿ ಎಂದೊಡನೆ ಎಲ್ಲರಿಗೂ ನೆನಪಾಗುವುದೇ ಬಣ್ಣದ ರಂಗು. ಅಂದು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ, ನೀರಿನೊಂದಿಗೆ ಮಿಶ್ರಣ ಮಾಡಿ ಹೋಳಿ ಹಾಡುತ್ತಾ ಸಂಭ್ರಮಿಸುತ್ತಾರೆ. ಸೆಲಿಬ್ರೆಟಿಗಳ ಮನೆಗಳಲ್ಲಂತೂ ಇದು ಕೊಂಚ ಹೆಚ್ಚೆಂದೇ ಹೇಳಬಹುದು. ಆದರೆ, ಬಣ್ಣ ಹಾಕುವುದು ಸಂಭ್ರಮಕ್ಕೆ ಅಷ್ಟೇ ಅಲ್ಲ ಅಪಾಯವನ್ನೂ ಉಂಟುಮಾಡುತ್ತದೆ. ಬಣ್ಣದಲ್ಲಿ ಅಡಗಿರುವ ಹಾನಿಕಾರಕ ರಾಸಾಯನಿಕ ಅಂಶಗಳು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಿಮ್ಮ ಚರ್ಮದ ಮೇಲೂ ಒಂದಿಷ್ಟು ಕಾಳಜಿ ಇರಬೇಕು. ಅದಕ್ಕೇನು ಮಾಡಬೇಕು? ಎಂಬುದರ ಬಗ್ಗೆ ಚರ್ಮರೋಗತಜ್ಞರಾದ ಪೂಜಾ ನಾಗದೇವ್ ಅವರು ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ. ಅವುಗಳನ್ನಿಲ್ಲಿ ನೋಡಬಹುದು.

    ಐಸ್‍ಕ್ಯೂಬ್ ಹಚ್ಚಿ: ಚರ್ಮವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮೊದಲು ಮುಖವನ್ನು ಐಸ್‍ಕ್ಯೂಬ್‍ಗಳಿಂದ ಉಜ್ಜಬೇಕು. ಇದರಿಂದ ಚರ್ಮದ ಮೇಲೆ ತೆರೆದ ರಂಧ್ರಗಳಿದ್ದರೆ ಮುಚ್ಚಿಕೊಳ್ಳುತ್ತದೆ. ಹೋಳಿ ಹಬ್ಬದಲ್ಲಿ ಕೆಮಿಕಲ್ ಬಣ್ಣಗಳಿಂದ ಚರ್ಮದ ಕಾಂತಿ ಹಾಳಾಗುವುದನ್ನು ತಪ್ಪಿಸುತ್ತದೆ. ಐಸ್ ಕ್ಯೂಬ್‍ನಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ ಸಾವಯವ ತೈಲವನ್ನು ಹಾಕಿದರೆ, ನಂತರದಲ್ಲಿ ಉಂಟಾಗುವ ಮೊಡವೆಗಳನ್ನು ತಡೆಯಬಹುದು. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ತೆಂಗಿನ ಎಣ್ಣೆ ಸೂಕ್ತ: ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ದೇಹ ಅಥವಾ ಮುಖಕ್ಕೆ ಮಂದವಾಗಿ ಮಾಯಿಶ್ಚರೈಸರ್ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚುವುದು ಸೂಕ್ತ. ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮವು ಎಣ್ಣೆಯನ್ನು ಬಹುಬೇಗನೇ ಹೀರಿಕೊಳ್ಳುತ್ತದೆ. ಇದರಿಂದ ಬಣ್ಣ ಹಾಕಿದರೂ ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ಇದು ನೋಡಿಕೊಳ್ಳುತ್ತದೆ. ನಂತರ ಬಣ್ಣವನ್ನು ನೀರಿನಿಂದ ಸುಲಭವಾಗಿ ತೆಗೆದುಹಾಕಬಹುದು.

    ಸೂರ್ಯನಕಾಂತಿ ಮರೆಮಾಚದಿರಲಿ:  ಸಹಜವಾಗಿ ಹೋಳಿ ಹಬ್ಬ ಹೊರಾಂಗಣದಲ್ಲಿಯೇ ನಡೆಯುವುದರಿಂದ ಸೂರ್ಯನ ಬೆಳಕಿಗೆ ಹೋಳಿ ಬಣ್ಣ ಹಾಗೂ ನೀರಿಗೆ ನಿರಂತರವಾಗಿ ಒಡ್ಡಿಕೊಳ್ಳುತ್ತದೆ. ಇದರಿಂದ ಚರ್ಮವನ್ನು ನಿರ್ಜಲೀಕರಣಗೊಳಿಸಬಹುದು. ಇದರಿಂದಾಗಿ ಒಮ್ಮೆ ಚರ್ಮವು ಬೇರೊಂದು ಬಣ್ಣಕ್ಕೆ ತಿರುಗಿದರೆ ಸ್ವ-ಭಾವಕ್ಕೆ ಮರುಪಡೆಯುವುದು ತುಂಬಾ ಕಷ್ಟವಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕ. ಇದನ್ನೂ ಓದಿ: ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

    ಉಗುರು ಬಣ್ಣ ಹಚ್ಚಿ: ನೀವು ಇಷ್ಟ ಪಡುವ ಯಾವುದೇ ಬಣ್ಣದಿಂದ ನಿಮ್ಮ ಕೈ ಮತ್ತು ಕಾಲಿನ ಬೆರಳುಗಳು ಅದೇ ಬಣ್ಣದ ಸ್ವರೂಪ ಪಡೆಯಬಹುದು. ಹಾಗಾಗಿ ನೀವು ಉಗುರು ಬಣ್ಣವನ್ನು ಹಚ್ಚುವುದರಿದ ಅದು ನೈಜ ಚರ್ಮದ ಬಣ್ಣದಿಂದ ಸುರಕ್ಷಿತವಾಗಿರಿಸುತ್ತದೆ. ಹೋಳಿಯ ನಂತರ ನೇಲ್ ಪಾಲಿಶ್ ರಿಮೂವರ್ ಅನ್ನು ಬಳಸಿ ಉಗುರು ಬಣ್ಣ ಮತ್ತು ಎಲ್ಲಾ ಹೋಳಿ ಬಣ್ಣವನ್ನು ಒಂದೇ ಸಮಯದಲ್ಲಿ ಸುಲಭವಾಗಿ ತೆಗೆದುಹಾಕಬಹುದು. ನೀವು ವರ್ಣರಂಜಿತ ಉಗುರು ಬಣ್ಣವನ್ನು ಬಳಸಲು ಬಯಸದಿದ್ದರೆ, ಸ್ಪಷ್ಟವಾದ ಟಾಪ್ ಕೋಟ್ ಸಾಕು.

    ಲಿಪ್ ಬಗ್ಗೆಯೂ ಕೇರ್ ಇರಲಿ:  ಹೋಳಿಯ ಬಣ್ಣದಲ್ಲಿ ಮಿಶ್ರಣಗೊಂಡಿರುವ ಬಣ್ಣಗಳನ್ನು ಮುಖಕ್ಕೆ ಎರಚಿದಾಗ ಇದರಲ್ಲಿನ ಹಾನಿಕಾರಕ ರಾಸಾಯನಿಕಗಳು ತುಟಿಯ ಅಂದವನ್ನು ಹಾಳುಮಾಡುತ್ತವೆ. ಆದ್ದರಿಂದ ಲಿಪ್‍ಬಾಮ್ ಅನ್ನು ಹಚ್ಚಿ, ಇದರಿಂದ ತುಟಿಯ ಮೇಲೆ ಕೂರುವ ಒಂದು ಪದರವು ಬಣ್ಣಗಳಿಂದ ರಕ್ಷಣೆ ಒದಗಿಸುತ್ತದೆ.

  • ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ. ಈ ಸಮಸ್ಯೆಗಾಗಿ ಕೆಲವು ಟಿಪ್ಸ್​ ಈ ಕೆಳಗಿನಂತೆ ನೀಡಲಾಗಿದೆ.

    ತುಟಿ ಒಡೆಯುವುದು, ಪಾದಗಳು ಬಿರುಕು ಬಿಡುವುದು, ಕೂದಲು ಉದುರುವುದು ಸರ್ವಸಾಮಾನ್ಯವಾಗಿದೆ. ಹಲವರಿಗೆ ಚಳಿಗಾಗಲದಲ್ಲಿ ಈ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಕೆ ಮಾಡಿರುತ್ತೀರ. ಆದರೆ ನೀವೆ ಮನೆಯಲ್ಲಿ ನಿಮ್ಮನ್ನು ನೀವು ಚಳಿಗಾಲದಲ್ಲಿ ಆರೈಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ:   ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್

    * ನೀರು, ಹೆಚ್ಚು ಹೆಚ್ಚು ಕುಡಿಯುವುದರಿಂದ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜ್ಯೂಸ್, ಬಿಸಿ ಸೂಪ್‍ಗಳನ್ನು ಆಗಾಗ ಕುಡಿಯುತ್ತಿರಬೇಕು.
    * ಪೌಷ್ಟಿಕಾಂಶಕ್ಕಾಗಿ ಪಾಲಕ, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ಕ್ಯಾಲೋರಿಭರಿತ ತರಕಾರಿಗಳನ್ನು ಸೇವಿಸಿ. ಪಾಲಕ್ ನಂತಹ ಹಸಿರು ತರಕಾರಿಗಳಲ್ಲಿ ನೀರಿನಂಶ ಸಮೃದ್ಧವಾಗಿವೆ. ಆದ್ದರಿಂದ, ಹೆಚ್ಚು ಹಸಿರು ತರಕಾರಿಗಳನ್ನು ತಿನ್ನುವುದು ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    * ಚಳಿಗಾದಲ್ಲಿ ಸ್ನಾನ ಮಾಡುವಾಗ ಸೋಪ್ ಬಳಸುವ ಬದಲಾಗಿ ಕಡಲೆ ಹಿಟ್ಟನ್ನು ಬಳಸಬಹುದಾಗಿದೆ.
    * ಅರಿಶಿಣ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖ ಮತ್ತು ಕೈ, ಕಾಲಗಳಿಗೆ ಹಚ್ಚಿ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ಚರ್ಮದ ಆರೈಕೆ ಮಾಡಬಹುದಾಗಿದೆ.

    * ಹೆಚ್ಚಿನವರಲ್ಲಿ ಪಾದಗಳಲ್ಲಿ ಬಿರುಕು ಕಾಣಿಕೊಳ್ಳುತ್ತದೆ. ಹೀಗಾಗಿ ಅಂತಹವರು ರಾತ್ರಿ ಮಲಗುವಾಗ ಮತ್ತು ಹೊರಗೆ ಹೊಗುವ ವೇಳೆ ಸಾಕ್ಸ್ ಧರಿಸುವುದನ್ನು ರೂಢಿಮಾಡಿಕೊಳ್ಳುವುದು ಉತ್ತಮವಾಗಿದೆ.
    * ಎಣ್ಣೆ ಚರ್ಮವನ್ನು ಹೊಂದಿದವರು ರೋಸ್ ವಾಟರ್, ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

    * ತುಟಿ ಒಡೆಯುವುದು, ಒರಟಾಗುವಂತಿದ್ದರೆ ನೀವು ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ, ಹಾಲಿನಕೆನೆಯನ್ನು ಹಚ್ಚಿ ಮಲಗುವ ಅಭ್ಯಾಸವನ್ನು ಚಳಿಗಾಲದಲ್ಲಿ ಮಾಡಿಕೊಳ್ಳಬೇಕು.
    * ಕೂದಲು ಉದುರುವ ಸಮಸ್ಯೆ ಚಳಿಗಾಗಲದಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ನೀವು ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ತುಸು ಬಿಸಿಮಾಡಿಕೊಂಡು ಹಚ್ಚುವುದು ಒಳ್ಳೆಯದಾಗಿದೆ.

    * ಉಣ್ಣೆಯ ಬಟ್ಟೆಯನ್ನು ಧರಿಸುವುದು, ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದರಿಂದ ಚಳಿಯಿಂದ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
    * ಸ್ವೆಟರ್, ಸ್ಕಾರ್ಪ್, ಸಾಕ್ಸ್ ಚಳಿಗಾಲದಲ್ಲಿ ಬಳಕೆ ಮಾಡುವುದು ಉತ್ತಮವಾಗಿದೆ.


    * ಚಳಿಗಾಲದಲ್ಲಿ ತೈಲ ಆಧಾರಿತ ಮಾಯಿಶ್ಚರೈಸ್‍ಗಳಾದ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯಂತಹ ನೈಸರ್ಗಿಕ ತೈಲಗಳು ನಿಮ್ಮ ಚರ್ಮವನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ.

  • ತ್ವಚೆ ಡಲ್ ಆಗಿದೆಯಾ ಮೊಟ್ಟೆಯ ಫೇಸ್ ಪ್ಯಾಕ್ ಬಳಸಿ

    ತ್ವಚೆ ಡಲ್ ಆಗಿದೆಯಾ ಮೊಟ್ಟೆಯ ಫೇಸ್ ಪ್ಯಾಕ್ ಬಳಸಿ

    ರಾಸಾಯನಿಕ ಅಂಶ ಇರುವ ಕ್ರೀಮ್‍ಗಳನ್ನು ಬಳಸುವುದರಿಂದ ಅದು ನಿಮ್ಮ ತ್ವಚೆಯನ್ನು ಅತ್ಯಂತ ಶುಷ್ಕ ಮತ್ತು ದುರ್ಬಲವಾಗುವಂತೆ ಮಾಡುತ್ತದೆ. ಆದ್ದರಿಂದ ತ್ವಚೆಯನ್ನು ಆರೋಗ್ಯವಾಗಿಡುವ ಫೇಸ್ ಪ್ಯಾಕ್ ಬಳಸಿ. ನೀವು ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ನಿಮ್ಮ ತ್ವಚೆ ಅಂದವಾಗಿ ಕಾಣುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಬಹುಶಃ ನೈಸರ್ಗಿಕ ಪದಾರ್ಥಗಳಿಗೆ ಪರ್ಯಾಯವಾಗಿ ಮತ್ತೊಂದಿಲ್ಲ ಎಂದೇ ಹೇಳಬಹುದು.

    ಮೊಡವೆಗಳು, ಚರ್ಮ ಸುಕ್ಕುಗಟ್ಟುವುದು ಹೀಗೆ ಇನ್ನಿತರ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತವೆ. ಇದರಿಂದ ಮುಖದ ಸೌಂದರ್ಯ ಹಾಳಾಗುವುದು ಮಾತ್ರವಲ್ಲದೆ ಚರ್ಮದ ಮೃದುತ್ವ ಕೂಡ ಮೊದಲಿನಂತೆ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲು ನೀವು ಮೊಟ್ಟೆಯಿಂದ ತಯಾರಿಸುವ ಕೆಲವು ಫೇಸ್ ಮಾಸ್ಕ್‌ಗಳನ್ನು ಬಳಸಿ.

    * ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ನೀರಿನಿಂದ ತೊಳೆಯಿರಿ. ಒಂದು ಕೋಳಿ ಮೊಟ್ಟೆಯನ್ನು ತೆಗೆದುಕೊಂಡು ಅದರ ಬಿಳಿಭಾಗವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಬೇಕು. ಸುಮಾರು 10 ರಿಂದ 15 ನಿಮಿಷಗಳು ಇದನ್ನು ಹಾಗೆ ಇರಲು ಬಿಟ್ಟು, ಶುದ್ಧವಾದ ನೀರಿನಿಂದ ನಂತರ ಮುಖ ತೊಳೆದುಕೊಳ್ಳಿ. ನಿಮ್ಮ ರಕ್ತಸಂಚಾರವನ್ನು ಅತ್ಯುತ್ತಮಗೊಳಿಸುವ ಮತ್ತು ನಿಮ್ಮ ತ್ವಚೆಗೆ ಮೊದಲಿಗಿಂತ ಹೊಳಪಿನ ಪ್ರಭಾವವನ್ನು ಒದಗಿಸುವ ಗುಣವನ್ನು ಇದು ಪಡೆದಿರುವುದರಿಂದ ನಿಮ್ಮ ಚರ್ಮದ ಮೇಲಿನ ಸುಕ್ಕುಗಳು ಮಾಯವಾಗಿ ನಿಮ್ಮ ತ್ವಚೆ ಸದೃಢತೆಯಿಂದ ಕೂಡಿರುತ್ತದೆ. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    * ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೊಟ್ಟೆಯ ಬಿಳಿ ಭಾಗ, ಕ್ಯಾರೆಟ್ ಪೆಸ್ಟ್, ಹಾಲನ್ನು ಹಾಕಿ ಮಿಶ್ರಣ ಮಾಡಿ ಗಟ್ಟಿಯಾದ ಪೇಸ್ಟ್‍ನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಸುಮಾರು 15 ರಿಂದ 20 ನಿಮಿಷಗಳ ಇದನ್ನು ಹಾಗೆ ಇರಲು ಬಿಟ್ಟು ನಂತರ ತಂಪಾದ ನೀರಿನಲ್ಲಿ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಸುಕ್ಕನ್ನು ಹೊಗಲಾಡಿಸುತ್ತದೆ.

    * ಮೊಟ್ಟೆಯ ಬಿಳಿ ಭಾಗ, ಕಡಲೆಹಿಟ್ಟು ಮತ್ತು ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸವನ್ನು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರು ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ಕಾಲಹಾಗೇ ಬಿಟ್ಟು ನಂತರ ಮುಖವನ್ನು ತೊಳೆಯಿರಿ. ನಿಂಬೆಹಣ್ಣಿಗೆ ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಸ್ವಚ್ಛಮಾಡುವ ಗುಣಲಕ್ಷಣಗಳು ಇರುವುದರಿಂದ ಚರ್ಮದಲ್ಲಿ ಕಂಡುಬರುವ ಕೊಳೆ ಮತ್ತು ತ್ವಚೆಯ ರಂಧ್ರಗಳಲ್ಲಿ ಕಂಡುಬರುವ ಕಲುಷಿತ ಅಂಶಗಳು ಇಲ್ಲವಾಗುತ್ತವೆ.

  • ಬೇಸಿಗೆಯ ಬಿಸಿಲಿಗೆ ಚರ್ಮದ ಕಾಂತಿ ರಕ್ಷಣೆ ಮಾಡೋದು ಹೇಗೆ?

    ಬೇಸಿಗೆಯ ಬಿಸಿಲಿಗೆ ಚರ್ಮದ ಕಾಂತಿ ರಕ್ಷಣೆ ಮಾಡೋದು ಹೇಗೆ?

    ಮಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯದ ಕುರಿತಾಗಿ ಕಾಳಜಿಯನ್ನು ವಹಿಸುತ್ತಾರೆ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಬಣ್ಣವು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇಂತಹ ಸಮಸ್ಯೆಗೆ ಕೆಲವು ಮನೆ ಮನೆಮದ್ದು ಮತ್ತು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದಾಗಿದೆ.

    * ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿ ಬಂದಿದ್ದೀರಾ ಎಂದಾದರೆ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ತ್ವಚೆಯ ತಾಪಮಾನ ಕುಗ್ಗುವುದರಿಂದ ತ್ವಚೆ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.

    * ಬಿಸಿಲಿನಲ್ಲಿ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ, ಪ್ರತಿ 2 ಗಂಟೆಗಳಿಗೊಮ್ಮೆ ಮಾರುಕಟ್ಟೆಯಲ್ಲಿ ಸಿಗುವ ಸನ್‍ಸ್ಕ್ರೀನ್ ಲೋಶನ್ ಚರ್ಮಗಳಿಗೆ ಹಚ್ಚ ಬಹುದಾಗಿದೆ.

    * ಬಿಸಿಲು ಮುಖಕ್ಕೆ ತಾಗದಂತೆ ಹ್ಯಾಟ್ ಹಾಕಿ, ಸ್ಟಾಲ್ ಉಪಯೋಗಿಸಿ, ಬಿಸಿಲಿನಲ್ಲಿ ಚಲಿಸುವಾಗ ಕೊಡೆ ಬಳಸಿ ಸೂರ್ಯನ ಪ್ರಖರ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಬಹುದು.

    * ಬೇಸಿಗೆ ಕಾಲದಲ್ಲಿ ದೇಹ ತ್ವಚೆ ಡ್ರೈ ಆಗುತ್ತಿರುತ್ತದೆ. ವಿಟಮಿನ್‍ಗಳನ್ನು ಹೊಂದಿರುವ ಹಣ್ಣು ಹಂಪಲುಗಳು, ಹಣ್ಣಿನ ರಸವನ್ನು ಸೇವಿಸಿ ದೇಹವನ್ನು ತಂಪಾಗಿರಿಸುವ ಮೂಲಕವೂ ಚರ್ಮದ ಕಾಂತಿಯನ್ನು ಕಾಪಾಡಬಹುದಾಗಿದೆ.

    * ಸಹಜವಾಗಿಯೇ ಬೇಸಿಗೆಯಲ್ಲಿ ಹೆಚ್ಚು ಬೆವರುತ್ತೇವೆ. ಆದ್ದರಿಂದ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕನಿಷ್ಠ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಒಳ್ಳೆಯದು.

    * ನಿಂಬೆ ರಸಕ್ಕೆ ಮೊಸರು ಅಥವಾ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖ ತೊಳೆದರೆ ಫ್ರೆಶ್ ಅನ್ನಿಸುತ್ತದೆ.


    * ಬೇಸಿಗೆಯಲ್ಲಿ ತಣ್ಣಿರಿನಿಂದ ಮುಖ ತೊಳೆಯಿರಿ. ಮೆತ್ತನೆಯ ಬಟ್ಟೆಯಿಂದ ಮುಖ ಒರೆಸಿ, ರೋಸ್ ವಾಟರ್ ಹಚ್ಚಬಹುದಾಗಿದೆ.

    * ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಅರಿಶಿಣ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಇಮ್ಮಡಿಯಾಗುತ್ತದೆ.

    * ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಮತ್ತು ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯಿರಿ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ಜ್ಯೂಸ್ ಹಚ್ಚಬಹುದು.

  • ನಿಮ್ಮ ತ್ವಚೆಗೆ ಸೂಟ್ ಆಗುವ ಲಿಪ್‍ಸ್ಟಿಕ್ ಆಯ್ಕೆ ಮಾಡುವುದೇಗೆ ಗೊತ್ತಾ?

    ನಿಮ್ಮ ತ್ವಚೆಗೆ ಸೂಟ್ ಆಗುವ ಲಿಪ್‍ಸ್ಟಿಕ್ ಆಯ್ಕೆ ಮಾಡುವುದೇಗೆ ಗೊತ್ತಾ?

    ಸಾಮಾನ್ಯವಾಗಿ ಬಟ್ಟೆ, ಒಡವೆ, ಚಪ್ಪಲಿ ಮೇಕಪ್ ಮೇಲೆ ಆಸಕ್ತಿ ತೋರಿಸುವ ಹುಡುಗಿಯರು ಲಿಪ್‍ಸ್ಟಿಕ್ ಮೇಲೆ ಕೂಡ ಹೆಚ್ಚು ಗಮನ ಹರಿಸುತ್ತಾರೆ ಎಂದರೆ ತಪ್ಪಾಗಲಾರದು. ಲಿಪ್‍ಸ್ಟಿಕ್ ತುಟಿಯ ಅಂದವನ್ನು ಹೆಚ್ಚಿಸುವುದಾಗಿದ್ದು, ಸೀರೆ, ಮಾಡೆರ್ನ್ ಹೀಗೆ ನಾವು ಧರಿಸುವ ಎಲ್ಲಾ ರೀತಿಯ ಬಟ್ಟೆಗಳಿಗೂ ಸುಂದರವಾಗಿ ಕಾಣಿಸುತ್ತದೆ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ತನಕ ಕೂಡ ಲಿಪ್‍ಸ್ಟಿಕ್ ಹೆಣ್ಣು ಮಕ್ಕಳಿಗೆ ಪ್ರಿಯವಾದ ವಸ್ತು.

    ಫ್ಯಾಷನ್ ಕೂಡ ನೀವು ಬಳಸುವ ಲಿಪ್‍ಸ್ಟಿಕ್ ಮೇಲೆ ಆಧಾರಿತವಾಗಿರುತ್ತದೆ. ಎಲ್ಲಾ ರೀತಿಯ ತ್ವಚೆಗಳಿಗೆ ಎಲ್ಲಾ ಬಣ್ಣದ ಲಿಪ್‍ಸ್ಟಿಕ್ ಸೂಟ್ ಆಗುವುದಿಲ್ಲ. ಫ್ಯಾಷನ್ ಬ್ರಾಂಡ್‍ಗಳು ಕೂಡ ತ್ವಚೆಯ ಮೇಲೆ ಕೇಂದ್ರೀಕರಿಸುತ್ತವೆ. ಹಾಗಾಗಿ ನಮ್ಮ ಮೈ ಬಣ್ಣಕ್ಕೆ ಸೂಟ್ ಆಗುವಂತಹ ಲಿಪ್‍ಸ್ಟಿಕ್‍ಗಳನ್ನು ಬಳಸಬೇಕು. ಆದರೆ ಲಿಪ್‍ಸ್ಟಿಕ್ ಬಗ್ಗೆ ತಿಳಿಯದೇ ಇರುವವರು ಎಲ್ಲಾ ರೀತಿಯ ಲಿಪ್‍ಸ್ಟಿಕ್ ಗಳನ್ನು ಬಳಸುತ್ತಾರೆ. ಅಂತಹವರಿಗೆ ತಮ್ಮ ಮೈ ಬಣ್ಣಕ್ಕೆ ಸರಿಹೊಂದುವಂತಹ ಲಿಪ್‍ಸ್ಟಿಕ್ ಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬ ವಿಚಾರ ಕುರಿತಂತೆ ಒಂದಷ್ಟು ಟಿಪ್ಸ್ ಈ ಕೆಳಗಿನಂತಿವೆ.

     

    ಲಿಪ್‍ಸ್ಟಿಕ್ ಖರೀದಿಸುವುದು ಹೇಗೆ?
    ಸಾಮಾನ್ಯವಾಗಿ ಲಿಪ್‍ಸ್ಟಿಕ್ ಖರೀದಿಸಲು ಹೋದಾಗ ಹುಡುಗಿಯರು ತಮ್ಮ ಕೈ ಬೆರಳಿನ ತುದಿಯಲ್ಲಿ ಲಿಪ್‍ಸ್ಟಿಕ್ ಅನ್ನು ಹಚ್ಚಿ ಪ್ರಯತ್ನಿಬೇಕು. ನಿಮ್ಮ ಕೈ ಬಣ್ಣವು ನಿಮ್ಮ ತುಟಿಯ ಬಣ್ಣಕ್ಕಿಂತ ವಿಭಿನ್ನವಾಗಿರುತ್ತದೆ. ಹಾಗಾಗಿ ಕೈ ಮೇಲೆ ಹಚ್ಚಿದ ಲಿಪ್‍ಸ್ಟಿಕ್ ನನ್ನು ಮುಖದ ಪಕ್ಕ ಇರಿಸಿಕೊಂಡು ಕನ್ನಡಿ ಮುಂದೆ ನಿಂತು ಪರಿಶೀಲಿಸಬೇಕು. ಬಳಿಕ ಆ ಬಣ್ಣವು ನಿಮ್ಮ ಲಿಪ್‍ಗೆ ಸೂಟ್ ಆಗುತ್ತದೆ ಎಂದರೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

    ಸ್ಕಿನ್ ಟೋನ್‍ಗಳಿಗೆ ಸೂಟ್ ಆಗುವ ಲಿಪ್‍ಸ್ಟಿಕ್ ಯಾವುದು?
    ಲಿಪ್‍ಸ್ಟಿಕ್ ಬಣ್ಣ ನಿಮಗೆ ಸುಂದರವಾಗಿ ಕಾಣಿಸುತ್ತದೆಯೇ ಎಂದು ತಿಳಿಯಲು ಮೊದಲು ನಿಮ್ಮ ತ್ವಚೆ ಬಿಳಿಯೋ, ಕಪ್ಪೋ, ಗೋಧಿ ಮೈ ಬಣ್ಣದ ತ್ವಚೆಯೋ ಎಂಬುವುದನ್ನು ಅರಿತುಕೊಳ್ಳಬೇಕು.

    ಬಿಳಿ ಬಣ್ಣದ ತ್ವಚೆ: ಬಿಳಿ ಬಣ್ಣದ ಮೈ ಕಾಂತಿ ಹೊಂದಿರುವವರಿಗೆ ಮೀಡಿಯಂ ಬಣ್ಣದ ಲಿಪ್‍ಸ್ಟಿಕ್ ಗಳು ಸುಂದರವಾಗಿ ಕಾಣಿಸುತ್ತದೆ. ಅದರಲ್ಲಿಯೂ ಕಂದು ಬ್ರೌನ್ ಬಣ್ಣದ ಲಿಪ್‍ಸ್ಟಿಕ್ ಹಾಗೂ ಕಿತ್ತಳೆ(ಆರೆಂಜ್) ಬಣ್ಣದ ಲಿಪ್‍ಸ್ಟಿಕ್ ನಿಮಗೆ ಎದ್ದು ಕಾಣಿಸುತ್ತದೆ.

    ಗೋಧಿ ಬಣ್ಣದ ತ್ವಚೆ: ಗೋಧಿ ಬಣ್ಣದ ಮೈ ಕಾಂತಿ ಹೊಂದಿರುವವರು ಬ್ರೌನ್ ಕಲರ್ ಮತ್ತು ಪೀಚ್ ಕಲರ್ ಲಿಪ್‍ಸ್ಟಿಕ್ ಉಪಯೋಗಿಸಬೇಕು. ಇದು ನಿಮ್ಮ ತುಟಿಗೆ ಸುಂದರವಾಗಿ ಕಾಣಿಸುತ್ತದೆ.

    ಕಂದು ಬಣ್ಣದ ತ್ವಚೆ: ಬ್ರೌನ್, ಬೆರ್ರಿ ಶೇಡ್‍ಗಳು, ಕಿತ್ತಳೆ ಮತ್ತು ಕೆಂಪು ಬಣ್ಣದ ಲಿಪ್‍ಸ್ಟಿಕ್ ಗಳು ಕಂದು ಬಣ್ಣದ ಮೈ ಕಾಂತಿ ಹೊಂದಿರುವ ನಿಮ್ಮ ತುಟಿಗಳಿಗೆ ಆಕರ್ಷಕವಾಗಿ ಕಂಗೊಳಿಸುತ್ತದೆ.

    ಕಪ್ಪು ಬಣ್ಣದ ತ್ವಚೆ: ನಿಮ್ಮ ಮೈ ಕಾಂತಿ ಕಪ್ಪಾಗಿದ್ದರೆ ಬ್ರೌನ್, ಕೆಂಪು ಮತ್ತು ನೇರಳೆ ಬಣ್ಣದಂತಹ ಲಿಪ್‍ಸ್ಟಿಕ್ ಗಳನ್ನು ಆಯ್ಕೆ ಮಾಡುವುದು ಉತ್ತಮ. ಈ ಬಣ್ಣ ಹೊಂದಿರುವವರಿಗೆ ಕಿತ್ತಳೆ ಬಣ್ಣದ ಲಿಪ್‍ಸ್ಟಿಕ್ ಸೂಟ್ ಆಗುವುದಿಲ್ಲ. ಹಾಗಾಗಿ ಆ ಬಣ್ಣದ ಲಿಪ್‍ಸ್ಟಿಕ್ ನಿಂದ ದೂರವಿರಿ.

  • ಅರಿಶಿಣ, ಕೊಬ್ಬರಿ ಎಣ್ಣೆ, ಕಹಿಬೇವು, ಕಡಲೆಹಿಟ್ಟಿನಿಂದ ಮಳೆಗಾಲದಲ್ಲಿ ತ್ವಚೆಯ ರಕ್ಷಣೆ

    ಅರಿಶಿಣ, ಕೊಬ್ಬರಿ ಎಣ್ಣೆ, ಕಹಿಬೇವು, ಕಡಲೆಹಿಟ್ಟಿನಿಂದ ಮಳೆಗಾಲದಲ್ಲಿ ತ್ವಚೆಯ ರಕ್ಷಣೆ

    ನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ಮಳೆಯಲ್ಲಿ ಆರೋಗ್ಯ ರೀತಿಯ ತ್ವಚೆಯ ರಕ್ಷಣೆ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಶೀತ, ಉಸಿರಾಟದ ತೊಂದರೆ ಮತ್ತು ಚರ್ಮದ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಕಾಲಕ್ಕೆ ತಕ್ಕಂತೆ ನಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಪುರುಷರ ತ್ವಚೆಯ ರಕ್ಷಣೆಗಾಗಿ ನಾಲ್ಕು ಸರಳ ಹೆಲ್ತ್ ಟಿಪ್ಸ್

    ಸಾಮಾನ್ಯವಾಗಿ ಮಳೆಗಾಲದಲ್ಲಿ ವಾತಾವರಣದಲ್ಲಿ ಅಧಿಕ ತೇವಾಂಶವಿರುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ, ಅಲರ್ಜಿ, ಒಡಕು ಇಂತಹ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಈ ರೀತಿ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಅನುಸರಿಸಬೇಕಾದರೆ ಕೆಲ ಉಪಯುಕ್ತ ಸಲಹೆಗಳು ನಿಮಗಾಗಿ ಇಲ್ಲಿವೆ.

    * ಮಳೆಗಾಲದಲ್ಲಿ ನಮ್ಮ ರೋಗ-ನಿರೋಧಕ ಶಕ್ತಿಯನ್ನು ನಾವು ಹೆಚ್ಚಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಏಕೆಂದರೆ ಸೋಂಕುಗಳ ಹಾವಳಿ ಈ ಸಮಯದಲ್ಲಿ ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯ ಬೇರೆ ಸಮಯಕ್ಕೆ ಹೋಲಿಸಿದರೆ ಮಳೆಗಾಲದಲ್ಲಿ ಹೆಚ್ಚು ಹದಗೆಡುತ್ತದೆ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದು ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಸೋಂಕುಕಾರಕ ಕ್ರಿಮಿಗಳನ್ನು ಹೊರಹಾಕುವಲ್ಲಿ ತುಂಬಾ ಸಹಾಯಕ.

    * ಮಳೆಗಾಲದಲ ವಾತಾವರಣದಲ್ಲಿ ತೇವಾಂಶ ಅಧಿಕವಿರುವುದರಿಂದ ತ್ವಚೆಯಲ್ಲಿ ತುರಿಕೆ. ಅಲರ್ಜಿ ಮುಂತಾದ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಲೋಳೆಸರದಲ್ಲಿ ಏನಾದರೂ ತ್ವಚೆ ಅಲರ್ಜಿ ಆಗಿದ್ದರೆ ಅದನ್ನು ಗುಣಪಡಿಸುವ ಸಾಮರ್ಥ್ಯ ಇದೆ. ತಾಜಾ ಲೋಳೆಸರವನ್ನು ತ್ವಚೆ ಅಲರ್ಜಿಯಾಗಿರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಡಿಮೆಯಾಗುವುದು. ಅಲ್ಲದೆ ಲೋಳೆಸರ ಹಚ್ಚುವುದರಿಂದ ತ್ವಚೆ ಕಾಂತಿ ಹೆಚ್ಚುವುದು.
    * ಕಹಿಬೇವಿನಲ್ಲಿ ಸೋಂಕು ನಿವಾರಕ ಗುಣವಿದೆ. ಹೀಗಾಗಿ ಮೊಡವೆ, ಕಪ್ಪು ಕಲೆ, ಮೈ ಮೇಲೆ ಗುಳ್ಳೆಗಳು ಇವುಗಳನ್ನು ಗುಣಪಡಿಸುವಲ್ಲಿ ಕಹಿಬೇವು ಸಹಕಾರಿ.

    * ಮೊಡವೆ, ಕಪ್ಪುಕಲೆ ಮುಂತಾದ ತೊಂದರೆಗೆ ಮುಖಕ್ಕೆ ಅರಿಶಿಣ ಹಚ್ಚಿದರೆ ಒಳ್ಳೆಯದು. ಅರಿಶಿಣವನ್ನು ಆಹಾರದಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಮಳೆಗಾಲದ ಆಹಾರದಲ್ಲಿ ಅರಿಶಿಣ ಇರಬೇಕು.
    * ಬಿಸಿ ನೀರಿಗೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಸ್ನಾನ ಮಾಡುವುದು. ಇದರಿಂದ ಚರ್ಮದಲ್ಲಿನ ಡ್ರೈನೆಸ್ ಹೋಗುತ್ತದೆ.
    * ತ್ವಚೆ ಒಣಗಿದಂತೆ ಅಥವಾ ತುರಿಕೆಯಂತಹ ಸಮಸ್ಯೆ ಕಂಡುಬಂದರೆ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದು.
    * ಸ್ನಾನದ ನೀರಿನಲ್ಲಿ ಗುಲಾಬಿ ಎಸಳುಗಳನ್ನು ಹಾಕಿ ಕೆಲ ಸಮಯದ ಬಳಿಕ ಆ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ಮಳೆಗಾಲದಲ್ಲಿ ತ್ವಚೆ ಕಾಂತಿಯುತವಾಗಿರುತ್ತದೆ.

    * ಮುಖದಲ್ಲಿ ತುರಿಕೆಯಂತಹ ಸಮಸ್ಯೆ ಇದ್ದರೆ ಒಂದು ಚಮಚ ಕೊಬ್ಬರಿ ಎಣ್ಣೆಗೆ ಸ್ವಲ್ಪ ಸಕ್ಕರೆ ಬೆರೆಸಿ ಹಚ್ಚಿ. ಎರಡು ನಿಮಷ ಸ್ಕ್ರಬ್ ಮಾಡಿ. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
    * ಹೆಚ್ಚಾಗಿ ನೀರು ಕುಡಿಯುವುದು ಕೂಡ ತ್ವಚೆಯ ರಕ್ಷಣೆಗೆ ಉಪಯೋಗಕಾರಿ
    * ಮುಖದಲ್ಲಿ ಮೊಡವೆ, ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಆಯಿಂಟ್‍ಮೆಂಟ್ ಬದಲಾಗಿ ಅರಿಶಿಣ ಹಚ್ಚುವುದು ಉತ್ತಮ.
    * ಮಳೆಗಾಲದಲ್ಲಿ ವಾರಕ್ಕೊಮ್ಮೆ ತಲೆ ಸ್ನಾನ ಮಾಡುವುದು ಉತ್ತಮ. ತೇವ ಇರುವಾಗಲೇ ಕೂದದಲನ್ನು ಬಾಚಬಾರದು. ಆದಷ್ಟೂ ಬಿಸಿಲಿನಲ್ಲಿ ಕೂದಲನ್ನು ಒಣಗಿಸಬೇಕು.

    * ಎಣ್ಣೆ ಚರ್ಮದವರು ಮುಣದ ಅಂದವನ್ನು ಕಾಪಾಡಿಕೊಳ್ಳಲು ಸೋಪು ಬಳಸುವುದುಕ್ಕಿಂತ ಕಡಲೆಹಿಟ್ಟಿನಿಂದ ಮುಖ ತೊಳೆಯುವುದು ಉತ್ತಮ.
    * ಪಪ್ಪಾಯ ಹಣ್ಣನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಎಣ್ಣೆ ಅಂಶ ಕಡಿಮೆಯಾಗುವಂತೆ ಮಾಡಬಹುದು.

  • ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ

    ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ

    ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನರು ತಂಪು ಪಾನೀಯ, ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ.

    ಬಿಸಿಲಿನ ಧಗೆಗೆ ಮೈ ಉರಿದು ಚರ್ಮದಲ್ಲಿ ಬಿಸಿಲಿನಿಂದ ಕಪ್ಪು ಕಲೆಗಳು ಹಾಗೂ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬಿಸಿಲಿನಲ್ಲಿ ತ್ವಚೆಯನ್ನು ಆರೈಕೆಗೆ ಮಾಡುವುದು ಮುಖ್ಯವಾಗುತ್ತದೆ.

    ಬಿಸಿಲಿನಿಂದ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಲು ಕೆಲವೊಂದು ಉಪಯುಕ್ತ ಟಿಪ್ಸ್:

    1. ಬಟ್ಟೆ: ಮೊದಲಿಗೆ ಬಿಸಿಲಿಗೆ ಮನೆಯಿಂದ ಹೊರ ಹೋಗುವಾಗ ಬಿಗಿ ಉಡುಪು ಧರಿಸಬಾರದು. ಚರ್ಮ ಮುಚ್ಚುವ ಅಥವಾ ಹತ್ತಿಯ ಬಟ್ಟೆಗಳನ್ನು ಧರಿಸಿದರೆ ಉತ್ತಮ. ಸೆಕೆಗೆ ಮೈತುಂಬ ಬಟ್ಟೆ ಧರಿಸಲು ಬಹುತೇಕರು ಇಷ್ಟ ಪಡುವುದಿಲ್ಲ. ಆದರೆ ಚರ್ಮದ ರಕ್ಷಣೆಗಾಗಿ ಎಷ್ಟು ಸಾಧ್ಯವೋ ಅಷ್ಟು ಚರ್ಮವು ಮುಚ್ಚಿಕೊಳ್ಳುವಂತಹ ಉಡುಪನ್ನು ಧರಿಸಬೇಕಾಗುತ್ತಿದೆ. ಸೂರ್ಯನಿಂದ ನಿಮ್ಮ ಮುಖವನ್ನು ರಕ್ಷಿಸಲು ಹ್ಯಾಟ್ ಮತ್ತು ಸನ್‍ಗ್ಲಾಸ್ ಬಳಸಬಹುದು.

    2. ದ್ರವ ಪದಾರ್ಥ: ಬೇಸಿಗೆ ಕಾಲದಲ್ಲಿ ದೇಹ, ತ್ವಚೆ ಎಲ್ಲವೂ ಬಿಸಿಲಿಗೆ ಡ್ರೈ ಆಗುತ್ತಿರುತ್ತದೆ. ಹೀಗಾಗಿ ಹೆಚ್ಚಾಗಿ ದ್ರವ ಪದಾರ್ಥ ಸೇವಿಸಬೇಕು. ಇದು ಬೇಸಿಗೆಯಲ್ಲಿ ಚರ್ಮದ ರಕ್ಷಣೆಗೆ ಮುಖ್ಯವಾಗುತ್ತದೆ. ಸಹಜವಾಗಿಯೇ ಬೇಸಿಗೆಯಲ್ಲಿ ಹೆಚ್ಚು ಬೆವರುತ್ತೇವೆ. ಆದ್ದರಿಂದ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕನಿಷ್ಠ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಸೂಕ್ತ.

    3. ತಂಪು ಪಾನೀಯ: ಬೇಸಿಗೆಯಲ್ಲಿ ತಂಪಾಗುತ್ತದೆ ಎಂದು ತಂಪು ಪಾನೀಯ ಸೇವಿಸುವುದು ಉತ್ತಮವಲ್ಲ. ಬದಲಿಗೆ ನೀರು, ಎಳನೀರು, ವಿವಿಧ ಹಣ್ಣಿನ ಜ್ಯೂಸ್‍ಗಳು ಆರೋಗ್ಯಕ್ಕೆ ಉತ್ತಮ. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು.

    4. ಸನ್ ಸ್ಕ್ರೀನ್: ಸುಡುವ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ಯುವತಿಯರು ಮತ್ತು ಮಹಿಳೆಯರು ಸನ್ ಸ್ಕ್ರೀನ್ ಮೊರೆ ಹೋಗುತ್ತಾರೆ. ತಮ್ಮ ಚರ್ಮಕ್ಕೆ ಹೊಂದುವ ಸನ್ ಸ್ಕ್ರೀನ್ ಬಳಸಿದರೆ ಒಳ್ಳೆಯದು. ಎಣ್ಣೆ ತ್ವಚೆ ಇರುವವರಿಗೆ ಜೆಲ್ ಸನ್ ಸ್ಕ್ರೀನ್ ಉತ್ತಮ, ಒಣಚರ್ಮ ಇರುವವರಿಗೆ ಸನ್ ಸ್ಕ್ರೀನ್ ಉತ್ತಮ. ಹೀಗಾಗಿ ಬೇಸಿಗೆಯಲ್ಲಿ ದಿನದಲ್ಲಿ ಎರಡು ಬಾರಿ ಸನ್ ಸ್ಕ್ರೀನ್ ಬಳಸಬೇಕು.

    5. ಕೂದಲ ರಕ್ಷಣೆ: ಹೆಚ್ಚಿನ ಸೂರ್ಯನ ಶಾಖದಿಂದ ತಲೆಗೂದಲು ಒಣಗಬಹುದು ಮತ್ತು ಮಸುಕಾಗಬಹುದು. ಹೀಗಾಗಿ ಮನೆಯ ಹೊರಗೆ ಹೋಗುವಾಗ ಹ್ಯಾಟ್ ಬಳಸುವುದು ಉತ್ತಮ.

    6. ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣು ಬೇಸಿಗೆ ಆಪ್ತಮಿತ್ರ ಎಂದು ಹೇಳಬಹುದು. ಯಾಕೆಂದರೆ ಹೆಚ್ಚು ನೀರಿನಾಂಶ ಹೊಂದಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ತೇವಾಂಶ ನೀಡಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಒಂದು ತುಂಡು ಕಲ್ಲಂಗಡಿ ಹಣ್ಣನ್ನು ಮುಖಕ್ಕೆ ಉಜ್ಜಿಕೊಳ್ಳಿ. 20 ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧವೂ ಹೋರಾಡುವ ಗುಣವನ್ನು ಹೊಂದಿರುವ ಸಮೃದ್ಧ ಹಣ್ಣಾಗಿದೆ.

    7. ಅಲೋವೆರಾ (ಲೋಳೆರಸ): ಲೋಳೆರಸ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಧನಾತ್ಮಕವಾಗಿ ಕಾಪಾಡುತ್ತದೆ. ತಾಜಾ ಅಲೋವೆರಾ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿ ಕೊಳ್ಳಿ.

    8. ಸೌತೆಕಾಯಿ: ಸೌತೆಕಾಯಿ ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದಲ್ಲದೆ, ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಬಿಸಿಲಿನಿಂದಾಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಹಚ್ಚಿದರೆ ತಂಪಾಗುತ್ತದೆ. ಜೊತೆಗೆ ಹೊಳಪು ಬರುತ್ತದೆ.

    9. ನಿಂಬೆಹಣ್ಣು: ನಿಂಬೆ ರಸಕ್ಕೆ ಮೊಸರು ಅಥವಾ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷ ಕಳೆದು ಮುಖ ತೊಳೆದು ನೋಡಿ, ಫ್ರೆಶ್ ಅನ್ನಿಸುತ್ತದೆ. ಮುಖ ತೊಳೆದ ನಂತರ ಮೆತ್ತನೆಯ ಬಟ್ಟೆಯಿಂದ ಮುಖ ಒರೆಸಿ, ರೋಸ್‍ ವಾಟರ್ ಕೂಡ ಹಚ್ಚಬಹುದು. ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಅರಿಶಿಣ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಇಮ್ಮಡಿಯಾಗುತ್ತದೆ.

    10. ಧೂಳು: ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಮತ್ತು ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯಿರಿ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ಜ್ಯೂಸ್ ಹಚ್ಚಬಹುದು.

    11. ತುಳಸಿ ಎಲೆ: ಬಿಸಿನೀರಿಗೆ ತುಳಸಿ ಎಲೆಗಳನ್ನು ಸೇರಿಸಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿಡಿ. ಸುಮಾರು ಐದು ನಿಮಿಷಗಳ ಬಳಿಕ ಈ ಹಬೆಯನ್ನು ಮುಖದ ಚರ್ಮಕ್ಕೆ ಒಡ್ಡುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮೊಡವೆಗಳಿಗೆ ಕಾರಣವಾಗುವ ಧೂಳಿನ ಅಂಶವನ್ನು ಹೋಗಲಾಡಿಸಬಹುದು.

    12. ಪುದೀನಾ ಹಾಗೂ ಮೊಸರು: ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ನಂತರ ಅದನ್ನು ಫೇಸ್ ಪ್ಯಾಕ್ ರೀತಿ ಮಾಡಿಕೊಂಡು, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಜೊತೆಗೆ ಮುಖ ಮತ್ತಷ್ಟು ಕಾಂತಿಯುಕ್ತವಾಗುತ್ತದೆ.

  • ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಕೆಲ ದಿನಗಳಲ್ಲಿ ಬಣ್ಣಗಳ ಹೋಳಿ ಹಬ್ಬ ಬಂದೇ ಬಿಡುತ್ತದೆ. ಎಲ್ಲರೂ ಓಕುಳಿ ಹಬ್ಬದಲ್ಲಿ ಮಿಂದೇಳಲು ಈಗಿನಿಂದಲೇ ಸಿದ್ಧರಾಗುತ್ತಿದ್ದೀರ. ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಬಣ್ಣದ ಹಬ್ಬವನ್ನು ಆಚರಿಸುತ್ತೇವೆ. ವಿಶೇಷ ಪೂಜೆ ಮಾಡಿ ಸಿಹಿ ಹಂಚಿ ಕಾಮನ ದಹನ ಮಾಡಿ ಸಂಭ್ರಮಿಸುತ್ತೇವೆ. ಜೊತೆಗೆ ಎಲ್ಲದರಗಿಂತ ಮಿಗಿಲಾಗಿ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಫುಲ್ ಎಂಜಾಯ್ ಮಾಡುತ್ತೀರಿ.

    ಆದರೆ ಎಲ್ಲಿಂದರಲ್ಲಿ ಕಡಿಮೆ ಬೆಲೆಗೆ ಸಿಗುವ ಬಣ್ಣಗಳ ಖರೀದಿ ಬಗ್ಗೆ ಎಚ್ಚರವಿರಬೇಕು. ಕೆಲ ಹೊತ್ತಿನ ಬಣ್ಣ ಬದುಕಿನ ರಂಗನ್ನೇ ಕಿತ್ತುಕೊಳ್ಳಬಾರದು. ಹೀಗಾಗಿ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ದೂರವಿದ್ದರೆ ಒಳಿತು. ನಿಮ್ಮ ಚರ್ಮ, ತ್ವಚೆ, ಕೂದಲಿನ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆ ವಹಿಸಬೇಕು. ಹಾಗಾದರೆ ಆರೋಗ್ಯಕರ ಕಲರ್ ಫುಲ್ ಹೋಳಿಯಾಟ ಹೇಗೆ ಆಡಬೇಕು ಎಂಬ ಬಗ್ಗೆ ಸರಳವಾದ ಸಲಹೆಗಳು ನಿಮಗಾಗಿ. ಒಮ್ಮೆ ಈ ಸಲಹೆಗಳನ್ನು ಪಾಲಿಸಿ ನೋಡಿ ನೀವು ಕಾಮನ ಹಬ್ಬಕ್ಕಿಂತಲೂ ಹೆಚ್ಚು ಸಂಭ್ರಮಿಸುತ್ತೀರ.

    ಸಲಹೆಗಳು:
    * ಮೊಟ್ಟಮೊದಲಿಗೆ ಹೋಳಿ ಹಬ್ಬಕ್ಕೆ ಪರಿಸರ ಸ್ನೇಹಿ ಬಣ್ಣ ಬಳಸಿರಿ.
    * ಒತ್ತಾಯದಿಂದ ಬಣ್ಣ ಎರಚುವುದು, ತಲೆ ಮೇಲೆ ಮೊಟ್ಟೆ ಒಡೆಯುವುದು, ಕೊಳತೆ ತರಕಾರಿ ಬಳಕೆ ಬೇಡ.
    * ಚರ್ಮದ ಸಮಸ್ಯೆ ಹಾಗೂ ಅಲರ್ಜಿ ಇರುವವರು ಬಣ್ಣದಾಟದಿಂದ ಹೊರಗಿದ್ದರೆ ಒಳಿತು. ಇಲ್ಲವಾದಲ್ಲಿ ಧೂಳು, ರಾಸಾಯನಿಕ ನಿಮ್ಮ ದೇಹ ಸೇರಿ ಉಸಿರಾಟ ಸಮಸ್ಯೆ, ಕೆಮ್ಮು, ಅಸ್ತಮಾ ಸಮಸ್ಯೆ ಎದುರಾಗಬಹುದು.
    * ಆಚರಣೆ ಬಳಿಕ ಉತ್ತಮವಾದ ಸೋಪ್ ಬಳಿಸಿ ಸ್ನಾನ ಮಾಡುವುದು ಅಗತ್ಯ.
    * ರಾಸಾಯನಿಕ ಮಿಶ್ರಣದ ಬಣ್ಣದ ಬಳಕೆಯಿಂದ ಕಣ್ಣಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ನ್ಯಾಚುರಲ್ ಕಲರ್ ಬಳಸಬೇಕು. ಕಣ್ಣಿನ ಹಾನಿ ತಪ್ಪಿಸಲು ಕನ್ನಡಕ ಬಳಸಿ.

    * ಒಂದು ವೇಳೆ ಕಣ್ಣಿಗೆ ಬಣ್ಣ ಬಿದ್ದರೆ, ಕಣ್ಣನ್ನು ಉಜ್ಜುವುದು, ರಬ್ ಮಾಡುವುದು ಮಾಡಲೇ ಬಾರದು. ಎರಡೂ ರೆಪ್ಪೆಗಳನ್ನು ಅಗಲವಾಗಿ ತೆರೆದು ಶುದ್ಧ ನೀರಿನಿಂದ ತೊಳೆಯಬೇಕು.
    * ಸಾವಯವ ಬಣ್ಣಗಳನ್ನು ಮನೆಯಲ್ಲೇ ತಯಾರಿಸಬಹುದು. ಗೋರಂಟಿ ಸೊಪ್ಪು, ಚೆಂಡು ಹೂ, ಅರಿಶಿನ ಪುಡಿ ಬಳಸಿ ಮನೆಯಲ್ಲಿ ಬಣ್ಣ ತಯಾರಿಸಬಹುದು.
    * ಹೋಳಿ ವೇಳೆ ತುಂಬು ತೋಳಿನ ಬಟ್ಟೆ ಧರಿಸಿದ್ದರೆ ಉತ್ತಮ.
    * ಮಕ್ಕಳು ಬಣ್ಣ ಆಡುವಾಗ ಪಾಲಕರು ಜಾಗೃತೆ ವಹಿಸಿರಿ.
    * ಮುಖ, ತೋಳು, ಕಾಲುಗಳು ಮತ್ತು ಚರ್ಮದ ಯಾವುದೇ ತೆರೆದ ಭಾಗಕ್ಕೆ ಕ್ರೀಮ್ ಹಚ್ಚಿ ಹೊರಡಿ.
    * ಕಣ್ಣುಗಳ ರಕ್ಷಣೆಗಾಗಿ ಸನ್‍ಗ್ಲಾಸ್ ಧರಿಸುವುದು ಉತ್ತಮ.

    * ಕಡುಗಾಢವಾದ ಬಣ್ಣಗಳ ಬಳಕೆ ಬೇಡ. ರಾಸಾಯನಿಕಗಳ ಬಳಕೆ ಹೆಚ್ಚಿರುವುದರಿಂದ ಹಾನಿಯೂ ಹೆಚ್ಚಿರುತ್ತದೆ..
    * ದೇಹದ ತೆರೆದ ಭಾಗದಲ್ಲಿ ಬಣ್ಣ ತಗುಲಿ ತುರಿಕೆ, ಕೆರೆತ, ನವೆ ಉಂಟಾದರೆ ತಕ್ಷಣವೇ ಶುದ್ಧ ನೀರಿನಿಂದ ತೊಳೆದುಕೊಳ್ಳಿ.
    * ಮುಖಕ್ಕೆ ತಗುಲಿರುವ, ಅಂಟಿರುವ ಬಣ್ಣ ತೆಗೆಯಲು ಮೊದಲು ಮುಖವನ್ನು ತಣ್ಣೀರಿನಲ್ಲಿ ಅದ್ದಿ ಬಳಿಕ ಸೌಮ್ಯವಾದ ಕ್ರೀಮ್ ಹಚ್ಚಿ, ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಮುಖಕ್ಕೆ ಅಂಟಿರುವ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.

    * ಹಾಲಿಗೆ ಸೂರ್ಯಕಾಂತಿ, ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಯಾವುದಾದರೊಂದು ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಚರ್ಮಕ್ಕೆ ಹಚ್ಚಿ. ಇದರಿಂದ ಮುಖ ಮಾತ್ರವಲ್ಲದೇ, ದೇಹದಿಂದಲೂ ಬಣ್ಣವನ್ನು ತೆಗೆಯಬಹುದಾಗಿದೆ
    * ಜೊತೆಗೆ ಅರ್ಧ ಕಪ್ ಗಟ್ಟಿ ಮೊಸರಿಗೆ 2 ಚಮಚ ಜೇನುತುಪ್ಪ ಹಾಗೂ ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮುಖ, ಕುತ್ತಿಗೆಗೆ ಹಚ್ಚಿ ಸುಮಾರು ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ತೊಳೆಯುವುದರಿಂದ ಅಂಟಿರುವ ಬಣ್ಣ ಹೋಗುತ್ತದೆ. ಚರ್ಮದ ತಾಜತೆ ಹಾಗೇ ಉಳಿದಿರುತ್ತದೆ.

    ಇನ್ನು ಓಕುಳಿಯಾಟದ ವೇಳೆ ಕೂದಲಿಗಾಗುವ ಹಾನಿಯನ್ನು ತಡೆಯಬೇಕಾದ್ರೆ:
    * ಕೂದಲಿಗೆ ಬಣ್ಣವಾದಲ್ಲಿ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಕೂದಲಿಗೆ ಅಂಟಿಕೊಂಡಿದ್ದ ಬಣ್ಣ ಹೋಗೋವರೆಗೂ ನಿಧಾನವಾಗಿ ಉಜ್ಜಿ ತೊಳೆಯಬೇಕು.
    * ಗಟ್ಟಿ ಮೊಸರಿನಲ್ಲಿ ಮೆಂತ್ಯಕಾಳುಗಳನ್ನು ನೆನಸಿಡಿ. 5-10 ನಿಮಿಷದ ನಂತರ ಅದನ್ನು ತಲೆಗೆ ಹಚ್ಚಿ ಅರ್ಧಗಂಟೆ ಹಾಗೇ ಬಿಡಬೇಕು. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
    * ಪರಸ್ಪರ ಬಣ್ಣ ಎರಚಾಡುವುದಕ್ಕೂ ಮುಂಚೆಯೇ ಹೇರ್ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮೆದುಳಿನ ರಕ್ತ ಸಂಚಲನ ಹೆಚ್ಚಾಗಿ, ಕೂದಲಿನ ಬುಡ ಗಟ್ಟಿಯಾಗುತ್ತದೆ.
    * ಬೆಚ್ಚಗಿನ ಕೊಬ್ಬರಿಯನ್ನು ತಲೆಕೂದಲಿಗೆ ಹಚ್ಚಿ, ಕೂದಲ ಬುಡಕ್ಕೆ ಮಸಾಜ್ ಮಾಡಬೇಕು. ಇದರಿಂದ ಕೂದಲಿಗೆ ರಾಸಾಯನಿಕ ಮಿಶ್ರಿತ ಬಣ್ಣ ಅಂಟುವುದನ್ನು ತಡೆಯಬಹುದು.
    * ಓಕುಳಿಯಾಟದ ವೇಳೆ ಕೂದಲು ಬಿಡುವ ಬದಲಾಗಿ ಕೂದಲನ್ನು ಒಟ್ಟು ಮಾಡಿ ಜಡೆ ಎಣೆದುಕೊಂಡರೆ ಉತ್ತಮ.

    ಹೋಳಿ ಹಬ್ಬದಲ್ಲಿ ಬಣ್ಣ ಎರಚಾಡಲು ತಯಾರಿ ಇಲ್ಲದಿದ್ದರೆ ಏನಾಗುತ್ತೆ?:
    * ನಿಮ್ಮ ಅವಶ್ಯಕತೆಯೆ, ಕ್ರೇಜ್‍ಅನ್ನೇ ಬಂಡವಾಳ ಮಾಡಿಕೊಂಡು ಮಾರುಕಟ್ಟೆಯಲ್ಲಿ ಮನಸೋಇಚ್ಛೆ ಕಲರ್‍ಗಳು ದಾಂಗುಡಿ ಇಟ್ಟಿವೆ. ಇದರಿಂದ ಎಚ್ಚರವಾಗಿರಬೇಕು. ಇಲ್ಲವಾದಲ್ಲಿ ತೊಂದರೆ ಕಟ್ಟಿಟ್ಟಬುತ್ತಿ.
    * ಕ್ವಾಲಿಟಿ ಇಲ್ಲದ ಬಣ್ಣಗಳ ಬಳಕೆಯಿಂದ ಚರ್ಮದ ಸಮಸ್ಯೆ, ಉಸಿರಾಟದ ಸಮಸ್ಯೆ, ಕಣ್ಣಿನ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಇವೆ.
    * ಸಾಮಾನ್ಯವಾಗಿ ಬಣ್ಣಗಳಲ್ಲಿ ಟಾಕ್ಸಿಕ್ ರಾಸಾಯನಿಕ ಇರುವುದರಿಂದ ಅದು ಕಣ್ಣಿಗೆ ಬಿದ್ದ ಕೂಡಲೇ ಕಣ್ಣು ಕೆಂಪಗಾಗುವುದು, ನೋಯುವುದು, ಇಲ್ಲವೆ ಕಣ್ಣಿನ ಕಣ್ಣಗುಡ್ಡೆಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ.
    * ಅಸ್ತಮಾ, ಉಸಿರಾಟದ ತೊಂದರೆ ಇರುವವರು ಶ್ವಾಸಕೋಶದ ತೊಂದರೆ ಅನುಭವಿಸಬೇಕಾಗುತ್ತದೆ.
    * ಬಣ್ಣ ಗುಣಮಟ್ಟದಲ್ಲವಾದರೆ ಅಲರ್ಜಿ, ತುರಿಕೆಯಂತಹ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

    ಯಾವ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಯವ್ಯಾವ ತೊಂದರೆಗಳು ಉಂಟಾಗುತ್ತೆ:
    * ಹಸಿರು ರಾಸಾಯನಿಕ ಬಣ್ಣದಲ್ಲಿರುವ ಕಾಪರ್ ಸಲ್ಫೇಟ್ – ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ.
    * ನೇರಳೆ ರಾಸಾಯನಿಕ ಬಣ್ಣದಲ್ಲಿರುವ ಕ್ರೋಮಿಯಂ ಅಯೋಡೈಡ್ – ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತೆ.
    * ಕಪ್ಪು ರಾಸಾಯನಿಕ ಬಣ್ಣದಲ್ಲಿರುವ ಲೆಡ್ ಆಕ್ಸೈಡ್ – ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತೆ.
    * ಕೆಂಪು ರಾಸಾಯನಿಕ ಬಣ್ಣದಲ್ಲಿರುವ ಮಕ್ರ್ಯೂರಿಕ್ ಸಲ್ಫೇಟ್ – ಚರ್ಮ ಸಮಸ್ಯೆಗೆ ಕಾರಣವಾಗುತ್ತೆ
    * ಸಿಲ್ವರ್ ರಾಸಾಯನಿಕ ಬಣ್ಣದಲ್ಲಿರುವ ಅಲ್ಯುಮಿನಿಯಂ ಬ್ರೋಮೈಡ್ – ತುರಿಕೆ, ಕೆರೆತ ಸಮಸ್ಯೆಗೆ ಕಾರಣವಾಗುತ್ತೆ.