Tag: sisters

  • ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿ

    ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿ

    -ಒಟ್ಟಿಗೆ ಸಮಾಧಿ ಮಾಡಿ ಕಣ್ಣೀರಿಟ್ಟ ಪೋಷಕರು

    ತಿರುವನಂತಪುರಂ: ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿಯಾದ ಮನಕಲಕುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

    ಮಲಪ್ಪುರಂ ಜಿಲ್ಲೆಯ ನಿಲಾಂಬೂರು ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಪುಟ್ಟ ಕವಲಪ್ಪರ ಗ್ರಾಮದ ಅನಘಾ (4) ಮತ್ತು ಅಲೀನಾ(8) ಮೃತ ಸಹೋದರಿಯರು. ಮುತಪ್ಪನ್ ಕುನ್ನು ಬೆಟ್ಟದಲ್ಲಿ ಗುರುವಾರ ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟಿದ್ದ ಸಹೋದರಿಯರ ಮೃತದೇಹವು ಸೋಮವಾರ ಸಿಕ್ಕಿದ್ದು, ಅಂದೇ ಇಬ್ಬರನ್ನು ಒಂದೇ ಜಾಗದಲ್ಲಿ ಸಮಾಧಿ ಮಾಡಿ ಪೋಷಕರು ಕಣ್ಣೀರಿಟ್ಟಿದ್ದಾರೆ.

    ಪುಟ್ಟ ಕವಲಪ್ಪರ ಗ್ರಾಮದ ವಿಕ್ಟರ್ ಹಾಗೂ ಥಾಮಸ್ ಸಹೋದರರ ಮನೆಯು ಕವಲಪ್ಪರ ಗ್ರಾಮದ ಮುತಪ್ಪಂಕ್ ಬೆಟ್ಟದ ಅತ್ಯಂತ ಮೇಲ್ಭಾಗದಲ್ಲಿತ್ತು. ಈ ಇಬ್ಬರಲ್ಲಿ ಒಬ್ಬರು ಬಡಗಿ ಮತ್ತು ಮತ್ತೊಬ್ಬರು ಪೇಂಟಿಂಗ್ ಕೆಲಸ ಮಾಡಿ, ಜೀವನ ನಡೆಸುತ್ತಿದ್ದರು. ವಿಕ್ಟರ್ ಹಾಗೂ ಥಾಮಸ್ ಅವರಿಗೆ ಐವರು ಮಕ್ಕಳಿದ್ದು, ಪತ್ನಿಯರ ಜೊತೆಗೆ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡ ಮಳೆ ಅವರ ಬದುಕನ್ನೇ ಕಿತ್ತುಕೊಂಡಿದೆ.

    ವಿಕ್ಟರ್ ಹಾಗೂ ಥಾಮಸ್ ಅವರ ಮಕ್ಕಳಾದ ಅನಘಾ ಮತ್ತು ಅಲೀನಾ ಒಟ್ಟಾಗಿ ಇರುತ್ತಿದ್ದರು. ಮಲಗುವಾಗಲೂ ಅಷ್ಟೇ ಒಂದೇ ಚಾಪೆಯ ಮೇಲೆ ಪರಸ್ಪರ ತಬ್ಬಿಕೊಂಡು ಮಲಗುತ್ತಿದ್ದರು. ಆದರೆ ಗುರುವಾರ ರಾತ್ರಿ ಕವಲಪ್ಪರಾದ ಮುತಪ್ಪಂಕ್ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ಸುಮಾರು 40 ಮನೆಗಳು ನಾಶವಾದವು. ಈ ವೇಳೆ ವಿಕ್ಟೋರ್ ಹಾಗೂ ಥಾಮಸ್ ಅವರ ಮನೆ ಭೂಕುಸಿತಕ್ಕೆ ಒಳಗಾಗಿ ಮಣ್ಣಿನ ಅಡಿ ಸಿಲುಕ್ಕಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಅವರು ಪತ್ನಿಯರು ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಆಚೆಗೆ ಬಂದಿದ್ದರು. ಆದರೆ ಅನಘಾ ಮತ್ತು ಅಲೀನಾ ಮನೆಯಲ್ಲಿಯೇ ಉಳಿದಿದ್ದರಿಂದ ಮಣ್ಣಿನ ಅಡಿ ಸಿಕ್ಕು ಮೃತಪಟ್ಟಿದ್ದರು.

    ಮನೆಯಿಂದ ಹೊರಗೆ ಬಂದಿದ್ದ ವಿಕ್ಟರ್ ಇಬ್ಬರು ಹುಡುಗಿಯರನ್ನು ಹುಡುಕಲು ಇತರರೊಂದಿಗೆ ಮರಳಿದ್ದರು. ಮನೆ ಸಂಪೂರ್ಣವಾಗಿ ನೆಲ ಸಮವಾಗಿತ್ತು. ಇದನ್ನು ನೋಡಿದ ಅವರು ಸುಮಾರು ಗಂಟೆಗಳ ಕಾಲ ಮಣ್ಣು ಅಗೆದರು. ಆದರೆ ಮಕ್ಕಳು ಸಿಗಲಿಲ್ಲ ಎಂದು ಕವಲಪ್ಪರ ನಿವಾಸಿ ಅಯ್ಯಪ್ಪನ್ ಹೇಳಿದ್ದಾರೆ.

    ಮಲಪ್ಪುರಂ ಜಿಲ್ಲೆಯ ಭೂತಾನಂನ ಸೇಂಟ್ ಮೇರಿಸ್ ಚರ್ಚ್ ನಲ್ಲಿ ಸೋಮವಾರ ಜನಸಮೂಹ ಜಮಾಯಿಸಿತ್ತು. ಪೋಷಕರು ಕಣ್ಣೀರಿಡುತ್ತಾ ಅನಘಾ ಹಾಗೂ ಅಲೀನಾ ಮೃತ ದೇಹವನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿ ಇಟ್ಟು ಸಮಾಧಿ ಮಾಡಿದರು. ಈ ವೇಳೆ ಅಲ್ಲಿ ನೆರೆದಿದ್ದ ಜನರು ಪುಟ್ಟ ಮಕ್ಕಳನ್ನು ನೆನೆದು ಕಣ್ಣೀರಿಟ್ಟರು.

    ಗುರುವಾರ ಸಂಭವಿಸಿದ ಗುಟ್ಟ ಕುಸಿತದಲ್ಲಿ ಸಾವನ್ನಪ್ಪಿದವರ ಪೈಕಿ ಇಬ್ಬರು ಬಾಲಕಿಯರು ಸೇರಿದಂತೆ 14 ಜನರ ಮೃತ ದೇಹಗಳು 55ಕ್ಕೂ ಹೆಚ್ಚು ಜನರ ಮೃತ ದೇಹಗಳು ಅವಶೇಷಗಳ ಅಡಿಯಲ್ಲಿವೆ ಎಂದು ಹೇಳಲಾಗುತ್ತಿದೆ.

  • ಉದ್ಯಮಿಯನ್ನು ಪ್ರಜ್ಞೆ ತಪ್ಪಿಸಿ ದರೋಡೆಗೈದ ಸಹೋದರಿಯರು

    ಉದ್ಯಮಿಯನ್ನು ಪ್ರಜ್ಞೆ ತಪ್ಪಿಸಿ ದರೋಡೆಗೈದ ಸಹೋದರಿಯರು

    ಲಕ್ನೋ: ಉದ್ಯಮಿಯೊಬ್ಬರನ್ನು ಪ್ರಜ್ಞೆ ತಪ್ಪಿಸಿ ನಂತರ ಮೂವರು ಸಹೋದರಿಯರು ಸೇರಿ ಅವನ ಹತ್ತಿರ ಇದ್ದ ದುಡ್ಡು ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಈ ಘಟನೆ ಶನಿವಾರ ನಡೆದಿದ್ದು, ಮೂರು ಜನ ಸಹೋದರಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಸಹೋದರಿಯರನ್ನು, ರಾಜಸ್ಥಾನದ ಬಿಕಾನೆರ್ ಮೂಲದ 25 ವರ್ಷದ ವಿಜಯಲಕ್ಷ್ಮಿ ಮತ್ತು ಅವಳ ಸಹೋದರಿ 21 ವರ್ಷದ ಕೃಷ್ಣ ಮತ್ತು ಇವರ ಸೋದರಸಂಬಂಧಿ ಬುಲಂದ್‍ಶಹರ್‍ ನ 27 ವರ್ಷದ ಸುನೀತಾ ಎಂದು ಗುರುತಿಸಲಾಗಿದೆ. ಇದರಲ್ಲಿ ಸುನೀತಾ ವಿಧವೆಯಾಗಿದ್ದು, ಈ ಹಿಂದೆ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಉಳಿದ ಇಬ್ಬರು ಆರೋಪಿಗಳು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

    ಪೊಲೀಸರು ಹೇಳುವ ಪ್ರಕಾರ, ಮಹಿಳೆಯರು ಮೊದಲು ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿ ನಂತರ ಅವನನ್ನು ಹೋಟೆಲ್‍ಗೆ ಎಂದು ಕರೆದುಕೊಂಡು ಹೋಗಿ, ನಂತರ ಉದ್ಯಮಿಗೆ ಜಾಸ್ತಿ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪಿಸಿ ನಂತರ ಅವನ ಹತ್ತಿರ ಇರುವ ಎಲ್ಲಾ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಹೇಳಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಮೊಬೈಲ್‍ಗಳು, ಎರಡು ವಾಚ್‍ಗಳು ಮತ್ತು ಉದ್ಯಮಿಯ ಕಾರಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಈ ವೇಳೆ ಪೊಲೀಸ್ ವಿಚಾರಣೆಯಲ್ಲಿ ನಡೆದ ಘಟನೆಯನ್ನು ಒಪ್ಪಿಕೊಂಡಿರುವ ಸಹೋದರಿಯರು, ಉದ್ಯಮಿಯ ಕ್ರೆಡಿಟ್ ಕಾರ್ಡ್ ಬಳಸಿ 15,000 ರೂಪಾಯಿ ಹಣವನ್ನು ಎರಡು ಬಾರಿ ಡ್ರಾ ಮಾಡಿರುವುದಾಗಿ ಮತ್ತು ಅವರ ಡೆಬಿಟ್ ಕಾರ್ಡ್ ಬಳಸಿ 4,500 ರೂಗಳನ್ನು ಡ್ರಾ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ಉದ್ಯಮಿಯೂ ಮದ್ಯಪಾನ ಮಾಡಿ ಪ್ರಜ್ಞಾಹೀನನಾಗಿದ್ದಾಗ, ನಾವು ಅವನ ಮೊಬೈಲ್ ಪಿನ್ ಪಡೆದುಕೊಂಡು ನಂತರ ಅವನ ಪೇಟಿಎಂ ಮೂಲಕ 26,000 ರೂಗಳನ್ನು ವಿವಿಧ ಮೂರು ನಂಬರ್ ಗೆ ವರ್ಗಾಯಿಸಿದ್ದೇವೆ. ನಂತರ ನಾವು ಕ್ಯಾಬ್ ಮಾಡಿಕೊಂಡು ಮನೆಗೆ ಹೋದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

    ಈ ಹಿಂದೆಯೂ ಈ ಮೂವರು ಸಹೋದರಿಯರು ನಕಲಿ ಗುರುತಿನ ಚೀಟಿಗಳನ್ನು ತೋರಿಸುವ ಮೂಲಕ ಪ್ರವೇಶ ಶುಲ್ಕವಿಲ್ಲದೆ ಪಬ್‍ಗಳಿಗೆ ಹೋಗಿದ್ದ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈ ಹಿಂದೆ ಈ ಮೂವರು ಸಹೋದರಿಯರು ಸೇರಿ ಹಲವಾರು ಪುರುಷರನ್ನು ಈ ರೀತಿಯಲ್ಲೇ ವಂಚನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಕಸಿನ್ ಸಹೋದರಿಯನ್ನೇ ಮದ್ವೆಯಾಗಿ ಫೇಸ್‍ಬುಕ್‍ನಲ್ಲಿ ಯುವತಿಯಿಂದ ಪೋಸ್ಟ್

    ಕಸಿನ್ ಸಹೋದರಿಯನ್ನೇ ಮದ್ವೆಯಾಗಿ ಫೇಸ್‍ಬುಕ್‍ನಲ್ಲಿ ಯುವತಿಯಿಂದ ಪೋಸ್ಟ್

    ಲಕ್ನೋ: ಕಸಿನ್ ಸಹೋದರಿಯನ್ನೇ ಮದುವೆಯಾಗಿ ಯುವತಿಯೊಬ್ಬಳು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಎಲ್ಲರಿಗೂ ಶಾಕ್ ನೀಡಿದ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ.

    ವಾರಾಣಾಸಿಯ ರೋಹನಿಯಾ ನಿವಾಸಿಯಾದ ಕಸಿನ್ ಸಹೋದರಿಯರು ಪೋಷಕರ ವಿರುದ್ಧವಾಗಿ ಹೋಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಆ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

    ಬುಧವಾರ ಸಹೋದರಿಯರು ಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿದ್ದ ಅರ್ಚಕರಿಗೆ ಮದುವೆ ಮಾಡಿಸಿ ಎಂದು ಹೇಳಿದ್ದಾರೆ. ಆದರೆ ಅರ್ಚಕರು ಮದುವೆ ಮಾಡಿಸಲು ನಿರಾಕರಿಸುತ್ತಾರೆ. ಪಂಡಿತ ನಿರಾಕರಿಸಿದರೂ ಸಹ ಸಹೋದರಿಯರು ದೇವಸ್ಥಾನದ ಒಳಗೆ ಕುಳಿತ್ತಿದ್ದರು.

    ಸಹೋದರಿಯರು ಜೀನ್ಸ್, ಟೀ-ಶರ್ಟ್ ಧರಿಸಿ ಅದಕ್ಕೆ ಕೆಂಪು ಬಣ್ಣದ ಚುನ್ನಿ ಹಾಕಿ ಮದುವೆ ಮಾಡಿಕೊಂಡರು. ಸಹೋದರಿಯರು ಮದುವೆ ಆಗುವ ಹೊತ್ತಿಗೆ ದೇವಸ್ಥಾನದ ಬಳಿ ಹೆಚ್ಚು ಜನ ಸೇರಿದ್ದರು. ಅಹಿತಕರ ಘಟನೆ ನಡೆಯುವ ಮೊದಲೇ ಸಹೋದರಿಯರು ಅಲ್ಲಿಂದ ಹೊರಟು ಹೋದರು.

    ಸಹೋದರಿಯರನ್ನು ಮದುವೆ ಮಾಡಿಸಿದ್ದಕ್ಕೆ ಕೆಲವರು ಪಂಡಿತರನ್ನು ಟೀಕಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಡಿತ, ಒಬ್ಬಳು ಯುವತಿ ಕಾನ್‍ಪುರದವಳಾಗಿದ್ದು, ಮತ್ತೊಬ್ಬಳು ವಿದ್ಯಾಭ್ಯಾಸಕ್ಕೆ ಎಂದು ಕಸಿನ್ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

  • 11 ಲಕ್ಷ ಕಮೀಷನ್ ನೀಡಿ ಸೋದರಿಯರನ್ನು ಮದ್ವೆಯಾದ ಅಣ್ಣ-ತಮ್ಮ

    11 ಲಕ್ಷ ಕಮೀಷನ್ ನೀಡಿ ಸೋದರಿಯರನ್ನು ಮದ್ವೆಯಾದ ಅಣ್ಣ-ತಮ್ಮ

    -ನಗದು, ಆಭರಣದ ಜೊತೆ ಮಿಂಚಿನಂತೆ ಪರಾರಿಯಾದ ಮಿಂಚುಳ್ಳಿಯರು

    ಜೈಪುರ: ಮದುವೆಯಾದ ನಾಲ್ಕು ದಿನದಲ್ಲಿ ಪತಿಯಂದರಿಗೆ ಹಾಲಿನಲ್ಲಿ ನಶೆ ಪದಾರ್ಥ ಬೆರೆಸಿ ಸೋದರಿಯರಿಬ್ಬರು ಮನೆಯಲ್ಲಿ ನಗದು-ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಮನೆಯಲ್ಲಿಯ ಆಭರಣಗಳ ಜೊತೆಗೆ 11 ಲಕ್ಷದೊಂದಿಗೆ ಸೋದರಿಯರು ಮಿಂಚಿನಂತೆ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಜೈಪುರದ ಹರಮಾಡ ಪೊಲೀಸ್ ಠಾಣಾ ವ್ಯಾಪ್ತಿಯ ಪೊಖರಿಯಾವಸ ಎಂಬಲ್ಲಿ ನಡೆದಿದೆ.

    ಈ ಸಂಬಂಧ ಮೋಸಕ್ಕೊಳಗಾದ ಸಹೋದರರಲ್ಲಿ ಹಿರಿಯಣ್ಣ, ಮದುವೆ ಮಾಡಿಸಿದ ದಲ್ಲಾಳಿ ಮತ್ತು ಯುವತಿಯರಿಬ್ಬರ ವಿರುದ್ಧ ಹರಮಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ರಾಮನಾರಾಯಣ್ ಮತ್ತು ರಾಜೇಶ್ ಎಂಬ ಸೋದರರಿಗೆ ಚೌಥಮಲ್ (ಹಿರಿಯ ಸೋದರ) ಎಂಬವರು ದಲ್ಲಾಳಿ ಗಜಾನಂದ್ ಎಂಬಾತನನ್ನು ಸಂಪರ್ಕಿಸಿದ್ದರು. ದಲ್ಲಾಳಿ ಸುರೇಶ್ ಎಂಬವರ ಮನೆಯಲ್ಲಿ ಕನ್ಯೆಯರನ್ನು ತೋರಿಸಿದ್ದನು. ಈ ವೇಳೆ ಸುರೇಶ್ ಮತ್ತು ಗಜಾನಂದ್ ವಧು ದಕ್ಷಿಣೆ ಮತ್ತು ಕಮೀಷನ್ 11 ಲಕ್ಷ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದರು.

    ವಧುದಕ್ಷಿಣೆಯೊಂದಿಗೆ ಕಮೀಷನ್ ನೀಡಿದ ಚೌಥಮಲ್, ಫೆಬ್ರವರಿ 19ರಂದು ಸಾಮೇದ್ ಬಳಿಯ ಮೈರಿಜ್ ಗಾರ್ಡನ್ ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಮದುವೆಗಾಗಿಯೇ ವರನ ಕುಟುಂಬಸ್ಥರು 9 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದರು. ಫೆಬ್ರವರಿ 23ರಂದು ಸೋದರಿಯರಿಬ್ಬರು ತಮ್ಮ ಪತಿಯಂದಿರಿಗೆ ಮದ್ದು ಬರುವ ಔಷಧಿ ನೀಡಿ ಮನೆಯಲ್ಲಿಯ ನಗದು, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. .

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೋದರಿಯರನ್ನ ಕೂಡಿ ಹಾಕಿ 2 ದಿನ ಮೂವರಿಂದ ನಿರಂತರ ಗ್ಯಾಂಗ್‍ರೇಪ್

    ಸೋದರಿಯರನ್ನ ಕೂಡಿ ಹಾಕಿ 2 ದಿನ ಮೂವರಿಂದ ನಿರಂತರ ಗ್ಯಾಂಗ್‍ರೇಪ್

    ಅಗರ್ತಲಾ: 13 ವರ್ಷದ ಅಪ್ರಾಪ್ತೆ ಮತ್ತು ಆಕೆಯ ಸಹೋದರಿಯನ್ನು ಅಪಹರಿಸಿ ಎರಡು ದಿನಗಳ ಕಾಲ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷದ ಆಟೋರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಆಟೋ ಚಾಲಕ ಸೇರಿ ಮೂವರು ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೂವರಲ್ಲಿ ಈತನೇ ಮುಖ್ಯ ಆರೋಪಿ ಎಂದು ತಿಳಿದುಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆ ವಿವರ:
    ಸಂತ್ರಸ್ತ ಸಹೋದರಿಯರು ಮನೆಗೆ ಹೋಗಲು ಕೈಲಾಶಹಾರ್ ಪಟ್ಟಣದ ಸೇತುವೆ ಬಳಿ ವಾಹನಕ್ಕಾಗಿ ಕಾಯುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಆಟೋರಿಕ್ಷಾ ಬಂದಿದೆ. ಇಬ್ಬರು ಸಹೋದರಿಯರು ಆ ಆಟೋ ರಿಕ್ಷಾವನ್ನು ಹತ್ತಿದ್ದಾರೆ. ಆದರೆ ದಾರಿ ಮಧ್ಯೆ ಆಟೋ ಚಾಲಕ ಇಬ್ಬರು ಪುರುಷ ಪ್ರಯಾಣಿಕರನ್ನು ಆಟೋಗೆ ಹತ್ತಿಸಿಕೊಂಡಿದ್ದಾನೆ. ಆಟೋ ಚಾಲಕನು ಅವರನ್ನು ಮನೆಗೆ ಬಿಡುವ ಬದಲು ಇಬ್ಬರ ಜೊತೆ ಸೇರಿ ಅವರಿಗೆ ಟವೆಲ್ ಹೊದಿಸಿ ಖೌವಾ ಜಿಲ್ಲೆಯ ತೆಲಿಯಮುರಾ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ ಅಂತ ಸಂತ್ರಸ್ತೆಯರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಇಬ್ಬರನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನಿರಂತರವಾಗಿ ಮೂವರು ಕಾಮುಕರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಎರಡು ದಿನಗಳ ನಂತರ ಸಂತ್ರಸ್ತೆಯರನ್ನು ಟೆಲಿಮೂರ ರೈಲು ನಿಲ್ದಾಣದಲ್ಲಿ ಬಳಿ ಬಿಟ್ಟಿದ್ದಾರೆ. ಅಲ್ಲಿ ಅವರು ಸರ್ಕಾರಿ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಸಂಪಾ ದಾಸ್ ತಿಳಿಸಿದ್ದಾರೆ.

    ನಾವು ಸಂತ್ರಸ್ತೆಯರನ್ನು ನಮ್ಮ ವಶದಲ್ಲಿರಿಸಿಕೊಂಡು ಪೋಷಕರಿಗೆ ಮಾಹಿತಿ ತಿಳಿಸಿದ್ದೆವು. ಬಳಿಕ ಅವರು ಬಂದು ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯ ತಾಯಿ ಸಲ್ಲಿಸಿದ ದೂರಿನ ಆಧಾರದ ಮೇರೆಗೆ ಆಟೋರಿಕ್ಷಾ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸ್ವಪನ್ ದೇಬ್ಬರ್ಮಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೊಡಗಿನ ಭಾರೀ ಮಳೆ, ಭೂ ಕುಸಿತದಲ್ಲಿ ಸಾವನ್ನೇ ಗೆದ್ದ ವೃದ್ಧ ಸಹೋದರಿಯರು

    ಕೊಡಗಿನ ಭಾರೀ ಮಳೆ, ಭೂ ಕುಸಿತದಲ್ಲಿ ಸಾವನ್ನೇ ಗೆದ್ದ ವೃದ್ಧ ಸಹೋದರಿಯರು

    ಮಡಿಕೇರಿ: ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಭೂ ಕುಸಿತಕ್ಕೆ ಕೊಡಗಿನ ಜನ ಬೆದರಿ ಪ್ರಾಣ ಉಳಿಸಿಕೊಳ್ಳೋಕೆ ಪರದಾಡಿದರು. ತಾವು ಸಂಪಾದಿಸಿದ್ದು ಏನೂ ಬೇಡ ಸದ್ಯ ಪ್ರಾಣ ಉಳಿದರೆ ಸಾಕು ಅಂತ ಎಲ್ಲವನ್ನೂ ಬಿಟ್ಟು ಊರನ್ನೇ ತೊರೆದು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದರು.

    ಆದರೆ ಮಡಿಕೇರಿ ಸಮೀಪದ ಕೊಯನಾಡಿನ ಈ ವೃದ್ಧ ಸಹೋದರಿಯರು ಮಾತ್ರ ಪ್ರಾಣಕ್ಕೆ ಸಂಕಟ ಬಂದರೂ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಲಿಲ್ಲ. ಅದಕ್ಕೆ ಕಾರಣ ಇವರು ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು. ಆಗಸ್ಟ್ 15ರ ನಂತರ ಸುರಿದ ಭಾರೀ ಮಳೆಗೆ ಪಯಸ್ವಿನಿ ನದಿ ಉಕ್ಕಿ ಆಯಿಶಾ ಹಾಗೂ ಸೈನಬಾ ಇರುವ ಮನೆಯ ಮೆಟ್ಟಿಲಿನವರೆಗೆ ನೀರು ಹರಿದು ಆತಂಕ ಸೃಷ್ಟಿಸಿತ್ತು.

    ನದಿಯ ಅಬ್ಬರ ಸ್ವಲ್ಪ ಹೆಚ್ಚಾದರೂ ಇಡೀ ಮನೆಯೇ ಕೊಚ್ಚಿ ಹೋಗುವ ಭೀತಿ ಕಾಡಿತ್ತು. 80 ವರ್ಷ ಆಸುಪಾಸಿನ ಆಯಿಶಾ ತಂಗಿ ಸೈನಬಾ ಹುಟ್ಟುತ್ತಲೇ ಅಂಗವಿಕಲರು, ತಮ್ಮನ್ನೇ ನಂಬಿರುವ ಜಾನುವಾರುಗಳು ಜೊತೆಗಿದೆ. ಹೇಗೆ ಮನೆ ಬಿಟ್ಟು ಅವರನ್ನೆಲ್ಲಾ ಕರೆದುಕೊಂಡು ಬರೋದು ಎಂದು ನಿರಾಶ್ರಿತ ಕೇಂದ್ರಕ್ಕೆ ಬನ್ನಿ ಅಂತ ಕರೆದರೂ ಈ ಇಬ್ಬರು ಮಾತ್ರ ಮನೆ ಬಿಟ್ಟು ಕದಲಲಿಲ್ಲ.

    ನಾವು ಸಾಕಿದ ಜಾನುವಾರುಗಳನ್ನು ಬಿಟ್ಟು ಬರುವುದಿಲ್ಲ, ಜಾನುವಾರುಗಳ ಜೊತೆಗೆ ಇರುತ್ತೀವಿ. ಸತ್ತರೆ ಇಲ್ಲೇ ಸಾಯುತ್ತೇವೆ ಎಂದು ಹಠ ಹಿಡಿದು ಮನೆಯ ಸುತ್ತಲೂ ಆವರಿಸಿದ್ದ ನೀರು ಹಾಗೂ ಭೋರ್ಗರೆಯುತ್ತಿದ್ದ ಪಯಸ್ವಿನಿ ನದಿಯ ತಟದಲ್ಲೇ ಇದ್ದರು. ಇದೀಗ ಮಳೆಯ ಅಬ್ಬರ ಕಡಿಮೆಯಾಗಿ ಸಹೋದರಿಯರು ಸಾವನ್ನೇ ಗೆದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ರಾಪ್ತ ಸೋದರಿಯರ ಕಿಡ್ನಾಪ್-ಅತ್ಯಾಚಾರಗೈದು ಊರಿಗೆ ಬಿಟ್ಟು ಹೋದ್ರು

    ಅಪ್ರಾಪ್ತ ಸೋದರಿಯರ ಕಿಡ್ನಾಪ್-ಅತ್ಯಾಚಾರಗೈದು ಊರಿಗೆ ಬಿಟ್ಟು ಹೋದ್ರು

    ಭೋಪಾಲ್: ಅಪ್ರಾಪ್ತ ಇಬ್ಬರು ಸಹೋದರಿಯರನ್ನು ಅಪಹರಿಸಿ, ಅತ್ಯಾಚಾರ ಎಸೆಗಿದ ಬಳಿಕ ಗ್ರಾಮಕ್ಕೆ ಬಿಟ್ಟು ಹೋದ ಘಟನೆ ಮಧ್ಯಪ್ರದೇಶ ರಾಜ್ಯದ ಅಷ್ಟತೆಹಸಿಲ್ ಎಂಬಲ್ಲಿ ನಡೆದಿದೆ.

    9 ಮತ್ತು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹೋದರಿಯರು ಅತ್ಯಾಚಾರಕ್ಕೊಳಗಾದ ಬಾಲಕಿಯರು. ಬಾಲಕಿ ಇಬ್ಬರನ್ನು ಅಪಹರಿಸಿದ ಇಂದೋರ್-ಭೋಪಾಲ್ ರಸ್ತೆಯ ಹೋಟೆಲ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ. ಈಗಾಗಲೇ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಅತ್ಯಾಚಾರಗೈದ ಇಬ್ಬರು ಯುವಕರು ಬಾಲಕಿಯರ ಗ್ರಾಮದ ನಿವಾಸಿಗಳಾಗಿದ್ದು, ಇನ್ನಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಲೋಕೇಂದ್ರ (19) ಮತ್ತು ಕ್ರಿಪಲ್ (21) ಬಂಧಿತ ಆರೋಪಿಗಳಾಗಿದ್ದು, ಸಂಜಯ್ ಹಾಗು ರಾಜ್ ಎಂಬಾತರು ಘಟನೆ ಬಳಿಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಬಾಲಕಿಯರಿಬ್ಬರನ್ನು ಅಪಹರಿಸಿದ ಯುವಕರು ಹೋಟೆಲ್ ಗೆ ಕರೆದುಕೊಂಡು ಹೋಗಿ ಇಬ್ಬರನ್ನ ಬೇರೆ ಬೇರೆ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಹೋಟೆಲ್‍ನಲ್ಲಿ ಕಿರುಚಿದ್ರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಕಾಮುಕರು ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸೆಗಿದ್ದಾರೆ. ಸಂಜೆ ಹೋಟೆಲಿಗೆ ಬಂದ ಮತ್ತಿಬ್ಬರು ಸಹ ಬಾಲಕಿಯರನ್ನು ಅತ್ಯಾಚಾರಗೈದಿದ್ದಾರೆ.

    ಆರೋಪಿಗಳು ಶನಿವಾರ ಇಬ್ಬರು ಸಹೋದರಿಯರನ್ನು ಅವರ ಗ್ರಾಮಕ್ಕೆ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಮನೆ ತಲುಪಿದ ಸಹೋದರಿಯರ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ಹೋಟೆಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚೂಡಿದಾರಕ್ಕಾಗಿ ಜಗಳವಾಡಿ ಪ್ರಾಣಬಿಟ್ಟ ಅಕ್ಕ- ತಂಗಿ!

    ಚೂಡಿದಾರಕ್ಕಾಗಿ ಜಗಳವಾಡಿ ಪ್ರಾಣಬಿಟ್ಟ ಅಕ್ಕ- ತಂಗಿ!

    ಮೈಸೂರು: ಬಟ್ಟೆಯ ವಿಚಾರಕ್ಕಾಗಿ ಜಗಳವಾಡಿ, ಮನಸ್ತಾಪದಿಂದ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕಾಳಬಸವಹುಂಡಿ ಗ್ರಾಮದಲ್ಲಿ ನಡೆದಿದೆ.

    ಕಾಳಬಸವಹುಂಡಿ ಗ್ರಾಮದ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾದ ಅನು(16) ಹಾಗೂ ಕವಿತಾ (30) ಮೃತ ಸಹೋದರಿಯರು. ಚೂಡಿದಾರಕ್ಕಾಗಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ಅನು ಹಾಗೂ ಮೂಗಿಯಾಗಿದ್ದ ಅಕ್ಕ ಕವಿತಾ ಜಗಳವಾಡಿದ್ದರು. ಇದರಿಂದ ಮನನೊಂದ ಅನು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಅನು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಮೃತದೇಹದ ಮುಂದೆ ರೋಧಿಸುತ್ತಿದ್ದರು. ಈ ವೇಳೆ ಹಿತ್ತಲಿಗೆ ಹೋದ ಕವಿತಾ ಕೇಬಲ್ ವೈರ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡೂ ಮೃತ ದೇಹವನ್ನು ತಲಕಾಡು ಸಮುದಾಯ ಆಸ್ಪತ್ರೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತು ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಹೋದರಿಯರ ಮನಸೆಳೆವ ಜಲ ಯೋಗ!

    ಸಹೋದರಿಯರ ಮನಸೆಳೆವ ಜಲ ಯೋಗ!

    ಬೆಂಗಳೂರು: ಇಂದು ನಾಲ್ಕನೇ ವಿಶ್ವ ಯೋಗದಿನದ ನಿಮಿತ್ತ ಸಹೋದರಿಯರಿಬ್ಬರು ನೀರಿನಲ್ಲಿ ಯೋಗ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಆನೇಕಲ್ ಪಟ್ಟಣದ ನಿತ್ಯಾಶ್ರೀ ಹಾಗೂ ತನುಶ್ರೀ ಎಂಬ ಇಬ್ಬರು ಸಹೋದರಿಯರು ನೀರಿನ ಮೇಲೆ ತೇಲುತ್ತ ಕೈಯಲ್ಲಿ ದೀಪ ಹಿಡಿದು ವಿವಿಧ ಯೋಗದ ಆಸನಗಳನ್ನು ಪ್ರದರ್ಶನ ಮಾಡಿದ್ದಾರೆ. ಇವರಿಬ್ಬರೂ ನೀರಲ್ಲಿ ದೀಪ ನಂದದಂತೆ ಯೋಗಾಸನ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.

    ನಿತ್ಯಾಶ್ರೀ ಹಾಗೂ ತನುಶ್ರೀಯವರಿಗೆ ತಂದೆ ಸುಬ್ರಹ್ಮಣ್ಯ ಅವರೇ ಗುರುಗಳು. ಸುಬ್ರಹ್ಮಣ್ಯ ಅವರು ಕೂಡಾ ಯಾವುದೇ ಗುರುಗಳಿಂದ ಜಲ ಯೋಗವನ್ನು ಕಲಿತಿಲ್ಲವಂತೆ. ಋಷಿಮುನಿಗಳ ಜಲ ಯೋಗದ ಕುರಿತು ಓದಿ, ತಿಳಿದು ತಾವೇ ಸ್ವಯಂ ಕಲಿತಿದ್ದಾರೆ. ಹಾಗೇ ತಮ್ಮ ಮಕ್ಕಳಿಗೂ ಜಲ ಯೋಗವನ್ನು ಕಲಿಸಿದ್ದಾರೆ.

    ಎಲೆ ಮರೆಕಾಯಿಯಂತಿದ್ದ ನಿತ್ಯಾಶ್ರೀ ಹಾಗೂ ತನುಶ್ರೀ ಸಹೋದರಿಯರ ಪ್ರತಿಭೆ ವಿಶ್ವ ಯೋಗ ದಿನದಿಂದಾಗಿ ಬೆಳಕಿಗೆ ಬಂದಿದ್ದು, ಸದ್ಯ ಈ ಸಹೋದರಿಯರು ಅನೇಕರ ಮನೆ ಮಾತಾಗಿದ್ದಾರೆ.

  • ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

    ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

    ಕೋಲಾರ/ಚಿತ್ರದುರ್ಗ: ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿದೆ.

    ಭವ್ಯ (10) ಮತ್ತು ಶಿಲ್ಪಾ(7) ಮೃತ ಸಹೋದರಿಯರು. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಗುರುವಾರ ಆಟವಾಡಲು ಹೋದಾಗ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಶಿಲ್ಪಾಳ ಶವ ದೊರಕಿದ್ದು, ಭವ್ಯ ಶವ ಪತ್ತೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳುಬಾಳು ಗುರುಪೀಠ ಶಾಂತಿ ವನದಲ್ಲಿರುವ ರೋಚೆಕ್ ಚೆಕ್ ಡ್ಯಾಂನಲ್ಲಿ ನಡೆದಿದೆ.

    ದರ್ಶನ್(12), ಶಿವರಾಜ್(15) ಮತ್ತು ಆಕಾಶ್(15) ಮೃತ ದುರ್ದೈವಿಗಳು. ಬಾಲಕರು ಬೇಸಿಗೆ ಶಿಬಿರಕ್ಕೆ ಬಂದಿದ್ದು, ಚೆಕ್ ಡ್ಯಾಂನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಭರಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.