Tag: sisters

  • Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    ಮೈಸೂರು: ಬಾತ್‌ರೂಂನಲ್ಲಿ (Bathroom) ಗ್ಯಾಸ್ ಗೀಸರ್ (Gas Geyser) ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ (Sisters) ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆ ಪಿರಿಯಾಪಟ್ಟಣ (Piriyapatna) ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

    ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು. ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ (Carbon Monoxide) ಸೋರಿಕೆಯಾಗಿ ಘಟನೆ ಸಂಭವಿಸಿದೆ. ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಬಾತ್‌ರೂಂಗೆ ಹೋದಾಗ ಘಟನೆ ನಡೆದಿದೆ. ಬಹಳ ಹೊತ್ತು ಕಳೆದರು ಬಾತ್‌ರೂಂನಿಂದ ಅಕ್ಕ, ತಂಗಿ ಹೊರಬಾರದ ಹಿನ್ನೆಲೆ ತಂದೆ ಅಲ್ತಾಫ್ ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ಈ ವೇಳೆ ಬಾಗಿಲು ಒಡೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರೋದು ಗೊತ್ತಾಗಿದೆ. ಇದನ್ನೂ ಓದಿ: ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ರಸ್ತೆಗೆ ಬಿದ್ದ ಟೆಕ್ಕಿ – ಲಾರಿ ಹರಿದು ದುರ್ಮರಣ

    ತಕ್ಷಣವೇ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟುಹೊತ್ತಿಗಾಗಲೇ ಇಬ್ಬರೂ ಮೃತಪಟ್ಟಿದ್ದರು. ಕೋಣೆಯಲ್ಲಿ ಕಿಟಕಿ ಇರದ ಹಿನ್ನೆಲೆ ಉಸಿರುಗಟ್ಟಿದೆ ಎನ್ನಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

  • National Siblings day | ಮರೆಯಲಾಗದ ಅವಳು..

    National Siblings day | ಮರೆಯಲಾಗದ ಅವಳು..

    ತಾಯಿ, ಆಕೆ ದೇವರ ಸಮಾನವಾದರೆ, ಆ ದೇವರೇ ನನಗೆ ನೀಡಿದ ಎರಡನೇ ತಾಯಿ ಇವಳು. ನೋವು ಎಂದಾಗ ನನಗಾಗಿ ಮರುಗಿದವಳು. ಸುಖದಲ್ಲಿ ನನ್ನೊಂದಿಗೆ ನಡೆದವಳು. ಹಸಿದಾಗ ತುತ್ತು ನೀಡಿದವಳು. ತನ್ನೆಲ್ಲಾ ಕಷ್ಟವನ್ನು ಬದಿಗೊತ್ತಿ ನನಗಾಗಿಯೇ ಜೀವ ಮುಡಿಪಿಟ್ಟವಳು. ಆಕೆಯ ಬಗ್ಗೆ ಬರೆದಷ್ಟು ಮುಗಿಯದು. ನನಗೆ ದೇವರು ನೀಡಿದ ಅತ್ಯಮೂಲ್ಯ ಉಡುಗೊರೆ ಎಂದರೆ ನನ್ನ ಒಡಹುಟ್ಟಿದ ಅಕ್ಕ.

    ಥೇಟ್ ಅಮ್ಮನಂತಹುದೇ ಇನ್ನೊಂದು ಜೀವ. ಜೀವಕ್ಕೆ ಜೀವ ಕೊಡುವ ಗೆಳತಿಯಾಗುತ್ತಾಳೆ, ಬದ್ಧ ವೈರಿಯೂ ಆಗಿರುತ್ತಾಳೆ. ಮುನಿಸಿಕೊಂಡು ಮಾತು ಬಿಡುತ್ತಾಳೆ. ಮತ್ತೊಮ್ಮೆ ಮಗುವಿನಂತೆ ನನ್ನ ಮುದ್ದು ಮಾಡುತ್ತಾಳೆ. ಅಂದದಲ್ಲಿ ಸುದ್ರೂಪಿಯಾಗಿರುವ ಅವಳು, ತಾಳ್ಮೆಯಲ್ಲಿ ಭೂದೇವಿಯನ್ನು ಹೋಲುತ್ತಾಳೆ. ಹೌದು ಅವಳೇ ನನ್ನ ಪ್ರೀತಿಯ ‘ಅಕ್ಕ’.

    ನನ್ನ ಜೀವನದ ಮೊದಲ ಆದರ್ಶ ಮಹಿಳೆ ಎಂದರೆ ನನ್ನ ಅಕ್ಕ. ಅವಳನ್ನು ನೋಡಿ ಬೆಳೆದವಳು ನಾನು. ಆದರೆ ಆಕೆಯದು ಭೂದೇವಿಯ ತಾಳ್ಮೆಯಾದರೆ ನಾನು ಆಕೆ ತದ್ವಿರುದ್ಧ ಮುಗಿನ ತುದಿಯಲ್ಲಿ ಕೋಪವನ್ನು ಇಟ್ಟುಕೊಂಡವಳು. ಹಠಹಿಡಿದಾಗ ನನ್ನ ಕಿವಿ ಹಿಂಡಿ ಬುದ್ಧಿ ಹೇಳಿ ಸರಿದಾರಿಗೆ ತಂದು ನನ್ನ ಪ್ರತಿ ಹೆಜ್ಜೆ ಹೆಜ್ಜೆಗೂ ಕಾವಲಾಗಿ ನಿಂತು ದೂರದಿಂದಲೇ ನನ್ನ ಯಶಸ್ಸನ್ನು ನೋಡುತ್ತಿದ್ದಳು.

    ಅಕ್ಕನಿಗೆ ಏನೇ ತಂದು ಕೊಟ್ಟರೂ ಅದು ತನಗೂ ಬೇಕು. ಅಕ್ಕ ಚೂಡಿ ಹಾಕುವಷ್ಟು ದೊಡ್ಡವಳಾಗಿದ್ದಾಳೆಂದು ಚೂಡಿ ತಂದು ಕೊಟ್ಟರೆ, ತನಗೆ ಚೂಡಿ ಹಾಕಲು ಬರದಿದ್ದರೂ ಚಿಂತೆಯಿಲ್ಲ. ನನಗೂ ಅದು ಬೇಕು. ತಂಗಿಯ ಈ ತರಹದ ಹಠಗಳಿಗೆ ಪಾಪ ಅಕ್ಕ ಕರ್ಣನಂತೆ ತ್ಯಾಗಮಯಿಯಾದವಳು. ನನ್ನ ತಪ್ಪಿಗೆ ಎಷ್ಟೋ ಸಲ ಬೈಸಿಕೊಂಡು ಸದಾ ನನ್ನ ಜೊತೆಗಿದ್ದ ಜೀವ ಅವಳು.

    ಚಿಕ್ಕವಳಿದ್ದಾಗ ಅಕ್ಕನ ಬೆಲೆ ಗೊತ್ತಾಗದ ನನಗೆ ಊರು ಬಿಟ್ಟು ಬಂದ ಮೇಲೆ ಎಲ್ಲವೂ ತಿಳಿಯಿತು. ಪ್ರತಿಯೊಂದು ಕ್ಷಣವು ನಾನು ಆಕೆಯನ್ನು ನೆನಪಿಸಿಕೊಂಡು, ಆಕೆಯೊಂದಿಗಿದ್ದ ಕ್ಷಣಗಳನ್ನೆಲ್ಲಾ ಮೆಲುಕು ಹಾಕುತ್ತಿರುತ್ತೇನೆ. ಕೈ ತುತ್ತು ಕೊಟ್ಟಾಗ ಬೇಡ ಎಂದವಳು. ಈಗ ಆ ಒಂದು ತುತ್ತಿಗಾಗಿ ಹಾತೊರೆಯುತ್ತಿರುತ್ತೇನೆ. ಆಕೆ ನನ್ನೊಂದಿಗೆ ಇರದಿದ್ದಾಗ ಆಕಾಶವೇ ನನ್ನ ತಲೆ ಮೇಲೆ ಬಿದ್ದಂತ ಅನುಭವವಾಗಿದ್ದು ಉಂಟು. ಪ್ರತಿದಿನ ಕರೆ ಮಾಡಿದಾಗ ಕಷ್ಟ ಆಗ್ತಾ ಇದ್ಯಾ? ಎಂದು ಅವಳು ಕೇಳಿದಾಗೆಲ್ಲಾ ಗಂಟಲು ತನಕ ಬಂದ ಮಾತುಗಳೆಲ್ಲಾ ಹಾಗೇ ಇಳಿದು ಹೋಗುತ್ತಿತ್ತು.

    ನನ್ನ ಜೀವನದಲ್ಲಿ ಕಷ್ಟಗಳನ್ನು ಸುಳಿಯಲು ಬಿಡದ ಆಕೆಗೆ ಇನ್ನಾದರೂ ಸಂತೋಷವೊಂದೇ ಇರಲಿ ಎಂಬ ಕಿರು ಆಸೆ ನನ್ನದು. ಮನೆಯಲ್ಲಿದ್ದಾಗ ನನ್ನ ಆರೈಕೆಯಲ್ಲೇ ದಿನ ಕಳೆಯುತ್ತಿದ್ದವಳಿಗೆ ಈಗ ಕೈ ಕಾಲು ಕಟ್ಟಿ ಹಾಕಿದ ಅನುಭವ. ನನ್ನ ಬರುವಿಕೆಗೇ ಶಬರಿಯಂತೆ ಕಾಯುವ ಅವಳು. ಹೆತ್ತಮ್ಮನಿಗಿಂತಲೂ ಮಿಗಿಲು ನನಗೆ. ಆಕೆ ನನ್ನ ಜೀವನದಲ್ಲಿ ಇರದೇ ಇರುತ್ತಿದ್ದರೆ ನಾನು ಶೂನ್ಯವಾಗಿರುತ್ತಿದೆ ಎಂದು ಅದೆಷ್ಟೋ ಬಾರಿ ಅನ್ನಿಸಿದ್ದು ಉಂಟು. ನನಗಾಗಿ ಆಕೆಯ ಸಂತಸವನ್ನು ತ್ಯಾಗ ಮಾಡಿ, ಜವಾಬ್ದಾರಿಯೆಂಬ ಮೂಟೆಯನ್ನು ಹೆಗಲ ಮೇಲೆ ಹೊತ್ತು ನನ್ನೊಂದಿಗೆ ಬಂದವಳು ಅವಳು.

    ಜೀವದ ಗೆಳತಿಯಂತೆ ನನ್ನೊಂದಿಗೆ ಬಂದ ಆಕೆಗೆ ಮದುವೆಯಾಗಿ ಗಂಡನ ಮನೆ ಸೇರಿದರೆ ನನ್ನ ಗತಿ ಮುಂದೇನು ಎಂಬುವುದೇ ಚಿಂತೆಯಾಗಿದೆ. ಗಂಡ ಮನೆ ಸೇರಿದ ಅವಳು ನನ್ನ ಮರೆತು ಬಿಟ್ಟರೆ ಎಂಬ ಭಯ ಹಾಗೂ ಅಲ್ಲಿ ಆಕೆ ಹೊಂದಿಕೊಳ್ಳುವಳೇ ಎಂಬ ಚಿಂತೆ ಸದಾ ನನ್ನ ಕಾಡುತ್ತಿರುತ್ತದೆ. ಕಷ್ಟ ಬಂದರೂ ಅದನ್ನು ಮರೆಮಾಚಿ ಎಲ್ಲರಿಗೂ ಪ್ರೀತಿ ಹಂಚುವ ಮನಸ್ಸಿನವಳಿಗೆ ಕಷ್ಟವೇ ಸೋಕದಿರಲಿ ಎಂಬ ಕೋರಿಕೆ ನನ್ನದು. ನನ್ನ ಜೀವನದ ದೇವತೆಯ ಖುಷಿಯನ್ನೇ ಬಯಸುವ ಪ್ರೀತಿಯ ಮುದ್ದು, ಪೆದ್ದು ತಂಗಿ ನಾನು.

  • ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ಚಂಡೀಗಢ: ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ (Sisters) ಮೃತದೇಹ ತಮ್ಮ ಮನೆಯಲ್ಲಿಯೇ ಟ್ರಂಕ್‌ನಲ್ಲಿ (Trunk) ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್ (Jalandhar) ಜಿಲ್ಲೆಯ ಕಾನ್ಪುರ (Kanpur) ಗ್ರಾಮದಲ್ಲಿ ನಡೆದಿದೆ.

    ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ. ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು ಐವರು ಮಕ್ಕಳಿದ್ದರು. ಕೆಲಸದಿಂದ ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

    ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ. ಮರುದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ತಿಳಿದುಬಂದಿದೆ. ಈ ವೇಳೆ ಟ್ರಂಕ್ ಅನ್ನು ತೆರದಾಗ ಮೂವರು ಬಾಲಕಿಯರ ಮೃತದೇಹಗಳು ಅದರಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

    ಬಾಲಕಿಯರ ಸಾವು ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಹೋದರಿಯರ ಸಾವಿನ ಕಾರಣವನ್ನು ತಿಳಿಯಲು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ ಬಾಲಕಿಯರ ತಂದೆಗೆ ಕುಡಿತದ ಚಟವಿದ್ದು, ಮನೆಯ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜನರನ್ನು ಲೆಕ್ಕಿಸದೇ ಗುಂಡು ಹಾರಿಸಿದ ದುಷ್ಕರ್ಮಿಗಳು – ಸಹೋದರನನ್ನು ಕಾಪಾಡಲು ಹೋಗಿ ಸಹೋದರಿಯರಿಬ್ಬರು ಬಲಿ

    ಜನರನ್ನು ಲೆಕ್ಕಿಸದೇ ಗುಂಡು ಹಾರಿಸಿದ ದುಷ್ಕರ್ಮಿಗಳು – ಸಹೋದರನನ್ನು ಕಾಪಾಡಲು ಹೋಗಿ ಸಹೋದರಿಯರಿಬ್ಬರು ಬಲಿ

    ನವದೆಹಲಿ: ಸಹೋದರನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಹೋಗಿ ನೆರೆದವರೆದುರಲ್ಲೇ ಸಹೋದರಿಯರಿಬ್ಬರು (Sisters) ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಗುಂಡೇಟಿನ ಭೀಕರ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಘಟನೆ ಭಾನುವಾರ ದೆಹಲಿಯ ಆರ್‌ಕೆ ಪುರಂ (RK Puram) ಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಕರು ಸ್ಥಳದಲ್ಲೇ ನೆರೆದಿದ್ದ ಹತ್ತಾರು ಜನರನ್ನು ಲೆಕ್ಕಿಸದೇ ಗುಂಡುಗಳನ್ನು ಹಾರಿಸಿದ್ದಾರೆ. ತಮ್ಮ ಸಹೋದರನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಹೋದ ಸಹೋದರಿಯರಾದ ಪಿಂಕಿ (30) ಹಾಗೂ ಜ್ಯೋತಿ (29) ಗುಂಡು ತಗುಲಿ ಸಾವನ್ನಪ್ಪಿದ್ದಾರೆ.

    ಹಣದ ವಿಚಾರಕ್ಕೆ ದುಷ್ಕರ್ಮಿಗಳು ಮೃತ ಮಹಿಳೆಯರ ಸಹೋದರನನ್ನು ಹುಡುಕಿಕೊಂಡು ಬಂದಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಹತ್ತಾರು ಜನರಿದ್ದರೂ ಕಿಡಿಗೇಡಿಗಳು ನಿರ್ಭೀತರಾಗಿ ಗುಂಡು ಹಾರಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಆದರೂ ಅವರು ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಉರಿಯುವ ಬಿಸಿಲಿಗೆ 54 ಮಂದಿ ಬಲಿ, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ಬದಲು ಕೇಂದ್ರ ಸರ್ಕಾರ ಇಡೀ ದೆಹಲಿಯ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಟೀಕಿಸಿದ್ದಾರೆ.

    ಇದೀಗ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಆರೋಪದ ಜೊತೆ ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಪ್ರೇಮಿಗಳಿಬ್ಬರ ದುರಂತ ಅಂತ್ಯ

  • ಸಹೋದರಿಯರ ಅಕೌಂಟ್‍ಗೆ ಲಕ್ಷ ಲಕ್ಷ ಟ್ರಾನ್ಸ್‌ಫರ್- ವಿದೇಶದಿಂದಲೇ ಶಾರಿಕ್‍ಗೆ ಸಂದಾಯವಾಗ್ತಿತ್ತಾ ಹಣ?

    ಸಹೋದರಿಯರ ಅಕೌಂಟ್‍ಗೆ ಲಕ್ಷ ಲಕ್ಷ ಟ್ರಾನ್ಸ್‌ಫರ್- ವಿದೇಶದಿಂದಲೇ ಶಾರಿಕ್‍ಗೆ ಸಂದಾಯವಾಗ್ತಿತ್ತಾ ಹಣ?

    ಬೆಂಗಳೂರು/ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೆ ಮಹತ್ವದ ವಿಚರವೊಂದು ಸಿಕ್ಕಿದೆ. ಶಂಕಿತ ಶಾರೀಕ್‍ನಿಂದ ಸಹೋದರಿಯರ ಅಕೌಂಟ್‍ (Sisters Bank Account) ಗೆ ಲಕ್ಷ ಲಕ್ಷ ಹಣ ಹೋಗಿರುವುದು ಬಯಲಾಗಿದೆ.

    ಇಷ್ಟೊಂದು ಹಣ ಶಾರೀಕ್‍ಗೆ ಬರುತ್ತಿದ್ದಿದ್ದು ಎಲ್ಲಿಂದ..?, ಭಾರತವನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಫಂಡಿಂಗ್ ಮಾಡಲಾಗ್ತಿದ್ಯಾ..?, ಶಾರೀಕ್‍ಗೂ ವಿದೇಶದಿಂದಲೇ ಫಂಡಿಂಗ್ ಎಂಬ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.‌ ಇದನ್ನೂ ಓದಿ; ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್- ಶಾರಿಕ್ ವಿಚಾರಣೆಗೆ ಎನ್‍ಐಎ ಸಿದ್ಧತೆ

    ಈಗಾಗಲೇ ಅರಾಫತ್ ಕೂಡ ದುಬೈ (Dubai) ನಲ್ಲಿ ನೆಲೆ ಊರಿದ್ದಾನೆ. ಭಾರತವನ್ನು ಟಾರ್ಗೆಟ್ ಮಾಡೋದಕ್ಕೆ ವಿದೇಶದಿಂದ ಮೊದಲಿಂದಲೂ ಫಡಿಂಗ್ ಆಗ್ತಿದೆ. ಈಗಲೂ ಕೂಡ ಅದೇ ವಿಚಾರದಲ್ಲಿ ಫಡಿಂಗ್ ಆಗಿದೆ ಅನ್ನೋ ಅನುಮಾನ ಶುರುವಾಗಿದೆ. ಹೀಗಾಗಿ ಪೊಲೀಸರು ಈ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

    ಇತ್ತ ಮಂಗಳೂರಿನ ಆತ್ಮಾಹುತಿ ಬಾಂಬ್ ಹಿಂದಿನ ರಹಸ್ಯ ಬಯಲಾಗಿದ್ದು, ತನ್ನ ಸ್ನೇಹಿತ ಮಾಝ್ ಬಂಧನ ಸಹಿಸಲಾಗದೇ ಶಾರೀಕ್ ಈ ಕೃತ್ಯ ಎಸಗಿದ್ದಾನೆ. ಜಬೀವುಲ್ಲಾನ ಬಂಧನ ಬಳಿಕ ಯಾಸೀನ್, ಮಾಝ್‍ನನ್ನು ಬಂಧಿಸಲಾಗಿತ್ತು. ಈ ಮೂವರು ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ರು. ಮಾಝ್ ಬಂಧನ ಬೆನ್ನಲ್ಲೇ ಶಾರೀಕ್ ಪ್ರತೀಕಾರಕ್ಕೆ ಇಳಿದಿದ್ದ. ಅಲ್ಲದೇ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಈ ಮೂವರು ಹೊಂದಿದ್ದರು ಎಂಬುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    ಭೋಪಾಲ್: ಒಂದೇ ಮರಕ್ಕೆ ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

    ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಪತ್ತೆಯಾಗಿದ್ದು, ಈ ಘಟನೆ ಖಾಂಡ್ವಾದ ಜವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಖೇಡಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    crime

    ಮೃತ ಸಹೋದರಿಯರನ್ನು ಸೋನು, ಸಾವಿತ್ರಿ ಮತ್ತು ಲಲಿತಾ ಎಂದು ಗುರುತಿಸಲಾಗಿದ್ದು, ಮೂವರು ಕೂಡ ತಮ್ಮ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ಇದೀಗ ಮೂವರು ಸಹೋದರಿಯರು ಸಾವನ್ನಪ್ಪಿದ್ದು ತನ್ನ ತಾಯಿ, ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ಇದನ್ನೂ ಓದಿ: ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

    ಈ ಕುರಿತಂತೆ ಮಾಹಿತಿ ದೊರೆತ ಪೊಲೀಸರು ನಂತರ ಘಟನಾ ಸ್ಥಳಿಕ್ಕೆ ಆಗಮಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದ ಹಿನ್ನೆಲೆ ಸಾವಿನ ಹಿಂದಿನ ಪ್ರಮುಖ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿದಿನ ಸಾಯೋದಕ್ಕಿಂತ ಒಂದೇ ದಿನ ಸಾಯೋದು ಒಳಿತು – ಮೂವರು ಸಹೋದರಿಯರು ಮಕ್ಕಳೊಂದಿಗೆ ಆತ್ಮಹತ್ಯೆ

    ಜೈಪುರ: ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಶನಿವಾರ ರಾಜಸ್ಥಾನದ ಜೈಪುರ ಜಿಲ್ಲೆ, ದುಡು ಪಟ್ಟಣದ ಬಾವಿಯೊಂದರಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಸಹೋದರಿಯರು ತಮ್ಮ ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಜನರಲ್ಲಿ ಪ್ರಶ್ನೆ ಮೂಡಿದೆ.

    ಕಲು ದೇವಿ(27), ಮಮತಾ(23) ಹಾಗೂ ಕಮಲೇಶ್(20) ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲು ದೇವಿಯ ಇಬ್ಬರು ಮಕ್ಕಳಲ್ಲಿ ಓರ್ವನಿಗೆ 4 ವರ್ಷ ಹಾಗೂ ಇನ್ನೊಂದು ಕೇವಲ 27 ದಿನದ ಹಸುಗೂಸು. ಅಲ್ಲದೇ ಮಮತಾ ಹಾಗೂ ಕಮಲೇಶ್ ಇಬ್ಬರೂ ತುಂಬು ಗರ್ಭಿಣಿಯರಾಗಿದ್ದರು.

    ಈ ಮೂವರು ಸಹೋದರಿಯರು ಹಾಗೂ ಮಕ್ಕಳು ಬುಧವಾರ ನಾಪತ್ತೆಯಾಗಿದ್ದರು. ಶನಿವಾರದವರೆಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಅವರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಘಟನೆಗೂ ಒಂದು ದಿನ ಮುನ್ನ ಮಮತಾ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಪ್ರತಿದಿನ ಸಾಯುವುದಕ್ಕಿಂತ ಒಮ್ಮೆ ಸಾಯುವುದೇ ಉತ್ತಮ ಎಂದು ಬರೆದಿದ್ದಳು. ಇದನ್ನೂ ಓದಿ: ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ ದೇಶ ವಿರೋಧಿ ಚಿಂತನೆ – ಬಿಜೆಪಿ ಸಂಸದ ಅಲ್ಫೋನ್ಸ್ ಹೇಳಿಕೆ

    ಮೂವರು ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಸಹೋದರಿಯರು ಒಂದೇ ಕುಟುಂಬದ ಮೂವರನ್ನು 2003ರಲ್ಲಿಯೇ ಬಾಲ್ಯ ವಿವಾಹವಾಗಿದ್ದರು. ಅವರ ಪತಿಯರು ಪ್ರತಿ ದಿನ ಕುಡಿದು ಬಂದು, ಅಮಲಿನಲ್ಲಿ ಪತ್ನಿಯರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಇತ್ತೀಚೆಗೆ ಕಲು ದೇವಿಗೆ ತನ್ನ ಅತ್ತಿಗೆ ಥಳಿಸಿದ್ದು, 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಕೆಯ ಕಣ್ಣಿಗೆ ಗಾಯಗಳಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಿರಿಯ ಸಹೋದರಿ ಕಮಲೇಶ್‌ಗೂ ಇತ್ತೀಚೆಗೆ ತನ್ನ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡಿದ ಬಳಿಕ ಥಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂವರಿಗೂ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದು, ಓದಿ, ಸಂಪಾದಿಸಬೇಕು ಅಂದುಕೊಂಡಿದ್ದರು. ಮಮತಾ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಕಲು ಅಂತಿಮ ವರ್ಷದ ಬಿಎ ಓದುತ್ತಿದ್ದಳು ಹಾಗೂ ಕಮಲೇಶ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದಳು. ಆದರೆ ಕೇವಲ 5-6ನೇ ತರಗತಿ ಓದಿದ್ದ ಪತಿಯರಿಗೆ ಮಹಿಳೆಯರು ವಿದ್ಯಾಭ್ಯಾಸ ಮಾಡುವುದು ಇಷ್ಟವಿರಲಿಲ್ಲ. ಇದನ್ನೂ ಓದಿ: ಎರಡು ವರ್ಷಗಳ ನಂತರ ಭಾರತ- ಬಾಂಗ್ಲಾ ರೈಲು ಸಂಚಾರ ಪುನಾರಂಭ

    ಸಹೋದರಿಯರ ಶವಗಳು ತಮ್ಮ ಮನೆಯಿಂದ 2 ಕಿಮೀ ದೂರದ ಬಾವಿಯಲ್ಲಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಪತಿಯರಾದ ನರ್ಸಿ, ಗೊರಿಯೊ ಹಾಗೂ ಮುಖೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವರದಕ್ಷಿಣೆ ವಿಚಾರದ ಬಗೆಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮುಹೂರ್ತದ ವೇಳೆ ಕರೆಂಟ್ ಕಟ್ – ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ

    ಮುಹೂರ್ತದ ವೇಳೆ ಕರೆಂಟ್ ಕಟ್ – ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ

    ಭೋಪಾಲ್: ಅಕ್ಕನಿಗೆ ನಿಶ್ಚಯವಾಗಿದ್ದ ವರನೊಂದಿಗೆ ತಂಗಿ ಮದುವೆಯಾಗಿದ್ದು, ತಂಗಿಗೆ ನಿಶ್ಚಯವಾದ ವರನೊಂದಿಗೆ ಅಕ್ಕ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

    ಹೌದು, ಮದುವೆ ವೇಳೆ ವಿದ್ಯುತ್ ವ್ಯತ್ಯಯವಾಗಿದ್ದು, ಅಕ್ಕ ತಂಗಿಗೆ ನೋಡಿದ್ದ ವರನನ್ನು, ತಂಗಿ ಅಕ್ಕನಿಗೆ ನೋಡಿದ್ದ ವರನನ್ನು ವಿವಾಹವಾಗಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ

    MARRIAGE

    ರಮೇಶ್‍ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾಗೆ ಬೇರೆ, ಬೇರೆ ಊರಿನ ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಭಾನುವಾರ ಮುಹೂರ್ತದ ವೇಳೆ ಕರೆಂಟ್ ಕಟ್ ಹೋಗಿದ್ದು, ಅಕ್ಕ, ತಂಗಿ ಇಬ್ಬರು ಒಂದೇ ಬಣ್ಣದ ಉಡುಗೆ ಮತ್ತು ಹೂ ಮುಡಿದುಕೊಂಡಿದ್ದರಿಂದ ಅದಲು, ಬದಲು ಆಗಿ ವರರ ಜೊತೆಗೆ ಮದುವೆಯಾಗಿದೆ.  ಇದನ್ನೂ ಓದಿ: ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    MARRIAGE

    ಮದುವೆ ವೇಳೆ ಪುರೋಹಿತರು ಕೂಡ ಬದಲಾಗಿದ್ದ ವಧುಗಳ ಕೈ ಹಿಡಿದು ವರರಿಗೆ ಅಗ್ನಿ ಕುಂಡಲವನ್ನು ಸುತ್ತಿಸಿದ್ದಾರೆ. ಆದರೆ ಈ ವೇಳೆ ಸಹ ವಧು ಬದಲಾಗಿರುವ ವಿಚಾರ ತಿಳಿದಿಲ್ಲ. ಆದರೆ ವಿವಾಹ ನಂತರ ವರರಿಬ್ಬರು ತಮ್ಮ ಪತ್ನಿಯನ್ನು ಮನೆಗೆ ಕರೆದೊಯ್ದಾಗ ಅದಲು, ಬದಲು ಆಗಿರುವ ವಿಚಾರ ತಿಳಿದುಬಂದಿದೆ. ಇದೀಗ ವಧು-ವರರು ಮರುದಿನ ಮತ್ತೊಮ್ಮೆ ವಿವಾಹ ಮಾಡುವಂತೆ ಕೇಳಿಕೊಂಡಿದ್ದಾರೆ.

  • ಮಡಿಲಲ್ಲಿ ತಂಗಿಯನ್ನುಟ್ಟುಕೊಂಡು ತರಗತಿಗೆ ಹಾಜರಾಗಿದ್ದ ಬಾಲಕಿಗೆ ಬೋರ್ಡಿಂಗ್ ಸ್ಕೂಲ್‍ನಲ್ಲಿ ಫ್ರೀ ಸೀಟ್

    ಮಡಿಲಲ್ಲಿ ತಂಗಿಯನ್ನುಟ್ಟುಕೊಂಡು ತರಗತಿಗೆ ಹಾಜರಾಗಿದ್ದ ಬಾಲಕಿಗೆ ಬೋರ್ಡಿಂಗ್ ಸ್ಕೂಲ್‍ನಲ್ಲಿ ಫ್ರೀ ಸೀಟ್

    ಇಂಫಾಲ್: ಎರಡು ವರ್ಷದ ಸಹೋದರಿಯನ್ನು ಮಡಿಲಲ್ಲಿಟ್ಟುಕೊಂಡು ತರಗತಿಗೆ ಹಾಜರಾಗಿದ್ದ ಮಣಿಪುರದ 10 ವರ್ಷದ ಬಾಲಕಿಯ ಫೋಟೋ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಬಾಲಕಿಗೆ ಇಂಫಾಲ್‍ನ ಬೋರ್ಡಿಂಗ್ ಶಾಲೆಯಲ್ಲಿ ಪ್ರವೇಶಾತಿ ಸಿಕ್ಕಿದೆ.

    ಈ ಕುರಿತ ಮಾಹಿತಿಯನ್ನು ಮಣಿಪುರ ಸರ್ಕಾರದ ವಿದ್ಯುತ್, ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಬಿಸ್ವಜೀತ್ ತೊಂಗಮ್ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಮೇನಿಂಗ್ಸಿನ್ಲಿಯು ಪಮೇಯ್ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ. ಭರವಸೆ ನೀಡಿದಂತೆ ನಾನು ಅವಳನ್ನು ಇಂಫಾಲ್‍ನಲ್ಲಿರುವ ಬೋರ್ಡಿಂಗ್ ಶಾಲೆಯಾದ ಸ್ಲೋಪ್‍ಲ್ಯಾಂಡ್ ಪಬ್ಲಿಕ್ ಸ್ಕೂಲ್‍ಗೆ ಸೇರಿಸಿದ್ದೇನೆ. ಬಣ್ಣಗಳಂತೆ ಅವಳು ಕಂಗೋಳಿಸಲಿ ಎಂದು ನಾನು ನಯಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಸಚಿವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ರಷ್ಯಾದ ಜನರಲ್‌ಗಳನ್ನು ಕೊಲ್ಲಲು ಉಕ್ರೇನ್‌ಗೆ ಅಮೆರಿಕ ಗುಪ್ತಚರ ಸಹಾಯ

    ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಪಮೇಯ್ ತಮ್ಮ ಮಡಿಲಲ್ಲಿ ಎರಡು ವರ್ಷದ ಮಗುವನ್ನು ಮಲಗಿಸಿಕೊಂಡು ಓದುತ್ತಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಫೋಟೋವನ್ನು ಗಮನಿಸಿದ ಸಚಿವರು ಬಾಲಕಿಯ ಕುಟುಂಬವನ್ನು ಪತ್ತೆ ಹಚ್ಚಿ ಅವರನ್ನು ಇಂಫಾಲ್‍ಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೀಗ ಬಾಲಕಿ ಪದವಿ ಶಿಕ್ಷಣ ಪೂರೈಸುವವರೆಗೂ ಶಿಕ್ಷಣದ ವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು 2 ವರ್ಷ ಸಹಿಸಿಕೊಳ್ಳಬೇಕು: ಹಣಕಾಸು ಸಚಿವ

  • ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಚಾಮರಾಜನಗರ: ಸೀಬೆ ಹಣ್ಣು ಕೀಳಲು ಹೋಗಿ ಇಬ್ಬರು ಬಾಲಕಿಯರು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.

    ಪೂಜಾ (10) ಪುಣ್ಯ (15) ಮೃತ ಬಾಲಕಿಯರು. ಈ ಇಬ್ಬರು ದುರ್ದೈವಿಗಳು ರೇಚಣ್ಣ ಎಂಬವರ ಪುತ್ರಿಯರಾಗಿದ್ದಾರೆ. ಇಂದು ಬೆಳಗ್ಗೆ ತಿಂಡಿ ತಿಂದು ಬಳಿಕ ಸೀಬೆ ಹಣ್ಣು ಕೀಳಲೆಂದು ಜಮೀನಿಗೆ ತೆರಳಿದ್ದಾರೆ. ಅಲ್ಲದೆ ಸೀಬೆ ಮರ ಹತ್ತಿ ಹಣ್ಣು ಕೀಳುತ್ತಿರುವಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ.

     

    ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.