Tag: sister

  • ನಾಯಿಗಳಿಗೆ ರೊಟ್ಟಿ ಮಾಡದ ಅಕ್ಕನಿಗೆ ಗುಂಡಿಟ್ಟ ತಮ್ಮ

    ನಾಯಿಗಳಿಗೆ ರೊಟ್ಟಿ ಮಾಡದ ಅಕ್ಕನಿಗೆ ಗುಂಡಿಟ್ಟ ತಮ್ಮ

    – ತಲೆ, ಎದೆಗೆ ಗುಂಡಿಕ್ಕಿ ಕೊಂದ

    ಲಕ್ನೋ: ತನ್ನ ಸಾಕು ನಾಯಿಗಳಿಗೆ ರೊಟ್ಟಿ ಮಾಡದಕ್ಕೆ ತಮ್ಮನೇ ಅಕ್ಕನಿಗೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಗರದ ಕೈಲಾಶ್ ವಾಟಿಕಾ ಕಾಲೋನಿಯಲ್ಲಿ ನಡೆದಿದೆ.

    ಆಶೀಶ್ ಕುಮಾರ್ ಅಕ್ಕನನ್ನ ಕೊಂದ ತಮ್ಮ. ಕೈಲಾಶ್ ವಾಟಿಕಾ ಕಾಲೋನಿಯಲ್ಲಿ ಅಣ್ಣ ಯೋಗೇಂದ್ರ, ತಾಯಿ ಸರೋಜ, ಸೋದರಿ ಪರೂಲ್ ಜೊತೆ ವಾಸವಾಗಿದ್ದು, 20ಕ್ಕೂ ಅಧಿಕ ನಾಯಿಗಳನ್ನ ಸಾಕಿದ್ದನು. ಆಶೀಷ್ ವಿವಿಧ ತಳಿಯ ನಾಯಿಗಳನ್ನ ಸಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದನು.

    ಸೋಮವಾರ ರಾತ್ರಿ ಸುಮಾರು 7.30ಕ್ಕೆ ಸೋದರಿ ಪರೂಲ್ ಗೆ ನಾಯಿಗಳಿಗೆ ರೊಟ್ಟಿ ಮಾಡಲು ಹೇಳಿದ್ದಾನೆ. ಆದ್ರೆ ಪರೂಲ್ ರೊಟ್ಟಿ ಮಾಡಲು ಒಪ್ಪಿಲ್ಲ. ಇದೇ ವಿಷಯವಾಗಿ ಇಬ್ಬರ ಮಧ್ಯೆ ಜಗಳವೇ ನಡೆದಿದೆ. ಕೋಪದಲ್ಲಿ ಆಶೀಷ್ ತನ್ನ ಬಳಿಯಲ್ಲಿದ್ದ ಗನ್ ನಿಂದ ಅಕ್ಕನ ಎದೆ ಮತ್ತು ತಲೆ ಭಾಗಕ್ಕೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

    ಘಟನೆ ವೇಳೆ ಯೋಗೇಂದ್ರ ದೆಹಲಿಯಲ್ಲಿದ್ದು, ತಾಯಿ ಮನೆಯಲ್ಲಿದ್ದರು. ಗುಂಡಿನ ಸದ್ದು ಕೇಳಿದ ಸ್ಥಳೀಯರು ದೌಡಾಯಿಸಿ ಆರೋಪಿ ಆಶೀಷ್ ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಕೋಪದಲ್ಲಿ ಅಕ್ಕನನ್ನ ಕೊಲೆ ಮಾಡಿರೋದಕ್ಕೆ ಆರೋಪಿ ಪಶ್ಚಾತ್ತಾಪ ಪಡುತ್ತಿದ್ದು. ತಪ್ಪೊಪ್ಪಿಕೊಂಡಿದ್ದಾನೆ.

  • ಲೋಕಲ್ ಡೈರಿ ಎಲೆಕ್ಷನ್ ಘರ್ಷಣೆ- ಅಕ್ಕನನ್ನೇ ಎಳೆದಾಡಿ ತಮ್ಮ ಕಿರಿಕ್

    ಲೋಕಲ್ ಡೈರಿ ಎಲೆಕ್ಷನ್ ಘರ್ಷಣೆ- ಅಕ್ಕನನ್ನೇ ಎಳೆದಾಡಿ ತಮ್ಮ ಕಿರಿಕ್

    ಮಂಡ್ಯ: ನಗರದಲ್ಲಿ ಲೋಕಲ್ ವಾರ್ ಕಾವೇರಿದ್ದು, ಸ್ಥಳೀಯ ಚುನಾವಣೆಯಲ್ಲಿ ಸಂಬಂಧಿಕರೇ ವೈರಿಗಳಾದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದಿದೆ.

    ಗ್ರಾ.ಪಂ ಚುನಾವಣೆ ನಡುವೆ ಡೈರಿ ಚುನಾವಣೆಗೂ ಬಿಗ್ ಫೈಟ್ ನಡೆಯುತ್ತಿದೆ. ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಈ ಗಲಾಟೆ ನಡೆದಿದೆ. ಚುನಾವಣೆಗಾಗಿ ಸ್ವಂತ ಕುಟುಂಬಸ್ಥರ ನಡುವೆ ಕಿತ್ತಾಟ ನಡೆದಿದೆ. ಎಲೆಕ್ಷನ್ ವಿಚಾರವಾಗಿ ಸ್ವಂತ ಅಕ್ಕನ ಮೇಲೆ ತಮ್ಮನೇ ಹಲ್ಲೆ ಮಾಡಿದ್ದಾನೆ.

    ಸಹಕಾರ ಸಂಘದ ಸದಸ್ಯರಾಗಿರುವ ಶಾರದಮ್ಮಗೆ ಸಹೋದರ ರಾಜೇಗೌಡ ಬಂಕಾಪುರದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದ್ದನು. ಈ ವೇಳೆ ಶಾರದಮ್ಮ, ನಾನು ಬಂಕಾಪುರದ ಹೆಣ್ಣು ಮಗಳಾದರೂ ಮದುವೆ ಬಳಿಕ ಗೊಲ್ಲರಹಳ್ಳಿ ಸೊಸೆಯಾಗಿದ್ದೇನೆ. ಹೀಗಾಗಿ ನಾನು ನಿಮ್ಮೂರಿಗೆ ಬೆಂಬಲ ನೀಡಲ್ಲ ಎಂದು ಖಾರವಾಗಿಯೇ ತಿಳಿಸಿದ್ದಾರೆ.

    ಅಕ್ಕನ ಮಾತಿನಿಂದ ಅಸಮಾಧಾನಗೊಂಡ ರಾಜೇಗೌಡ, ಶಾರದಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಚುನಾವಣೆಗೆ ತೆರಳದಂತೆ ಅಕ್ಕನನ್ನು ಹಿಡಿದು ಎಳೆದಾಡಿದ್ದಾನೆ. ಬಳಿಕ ಶಾರದಮ್ಮ ಪುತ್ರನ ಮಧ್ಯಪ್ರವೇಶದಿಂದ ಜಗಳ ಅಲ್ಲಿಗೆ ನಿಂತಿದೆ.

  • ವಿಷ ನೀಡಿ ತಾಯಿ, ಸೋದರಿಯನ್ನ ಚಿರನಿದ್ರೆಗೆ ಕಳಿಸಿದ ಎಂ.ಟೆಕ್ ವಿದ್ಯಾರ್ಥಿ

    ವಿಷ ನೀಡಿ ತಾಯಿ, ಸೋದರಿಯನ್ನ ಚಿರನಿದ್ರೆಗೆ ಕಳಿಸಿದ ಎಂ.ಟೆಕ್ ವಿದ್ಯಾರ್ಥಿ

    – ಕ್ರಿಕೆಟ್ ಬೆಟ್ಟಿಂಗ್‍ಗೆ ಹೋಯ್ತು ಎರಡು ಅಮಾಯಕ ಜೀವ

    ಹೈದರಾಬಾದ್: ಮನೆಯ ಮಗನೇ ವಿಷ ನೀಡಿ ತಾಯಿ ಮತ್ತು ಸೋದರಿಯನ್ನ ಕೊಲೆಗೈದ ಘಟನೆ ತೆಲಂಗಾಣದ ಮೆಡಚಲ್-ಮಲಕಾಜಗಿರಿಯಲ್ಲಿ ನಡೆದಿದೆ.

    23 ವರ್ಷದ ಸಾಯಿನಾಥ್ ರೆಡ್ಡಿ ತಾಯಿ ಮತ್ತು ಸೋದರಿಯನ್ನ ಚಿರನಿದ್ರೆಗೆ ಕಳುಹಿಸಿ ಕತ್ತಲೆ ಕೋಣೆ ಸೇರಿದ್ದಾನೆ. ಸುನಿತಾ (44) ಮತ್ತು ಅನುಜಾ (22) ಮೃತ ದುರ್ದೈವಿಗಳು. ಎಂ.ಟೆಕ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಯಿನಾಥ್ ಕ್ರಿಕೆಟ್ ಬೆಟ್ಟಿಂಗ್ ದಾಸನಾಗಿದ್ದನು. ಇದೀಗ ಅದೇ ಕ್ರಿಕೆಟ್ ಬೆಟ್ಟಿಂಗ್ ಗಾಗಿ ತಂಗಿ, ತಾಯಿಯನ್ನ ಕೊಂದು ಜೈಲುಪಾಲಾಗಿದ್ದಾನೆ.

    ಹಣ, ಬಂಗಾರ ಕದ್ದ: ಸಾಯಿನಾಥ್ ತಾಯಿಗೆ ಗೊತ್ತಾಗದೇ ಅವರ ಖಾತೆಯಿಂದ ಸುಮಾರು 20 ಲಕ್ಷ ರೂ. ಡ್ರಾ ಮಾಡಿದ್ದಾನೆ. ಎಲ್ಲ ಹಣವನ್ನ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಾಕಿ ಸೋತು ಸುಣ್ಣವಾಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಸಾಯಿನಾಥ್ ಮನೆಯಲ್ಲಿದ್ದ 150 ಗ್ರಾಂ ಚಿನ್ನ ಕದ್ದು ಅದನ್ನು ಜೂಜಿನಲ್ಲಿ ಸೋತಿದ್ದಾನೆ.

    ಇಬ್ಬರ ಕೊಲೆಗೆ ಪ್ಲಾನ್: ಇನ್ನು ಹಣ ಮತ್ತು ಚಿನ್ನ ಕದ್ದ ವಿಷಯ ಗೊತ್ತಾಗುತ್ತಲೇ ಸುನಿತಾ ಮತ್ತು ಅನುಜಾ ಶಾಕ್ ಆಗಿದ್ದರು. ಹಣ ಮತ್ತು ಚಿನ್ನ ತೆಗೆದುಕೊಂಡು ಬರುವಂತೆ ಸಾಯಿನಾಥ್ ಗೆ ಎಚ್ಚರಿಕೆ ಸಹ ನೀಡಿದ್ದರು. ಆದ್ರೆ ಜೂಜಾಟದಲ್ಲಿ ಎಲ್ಲವನ್ನ ಕಳೆದುಕೊಂಡಿದ್ದ ಸಾಯಿನಾಥ್, ತಂಗಿ ಮತ್ತು ತಾಯಿಯನ್ನ ಕೊಲ್ಲಲು ನಿರ್ಧರಿಸಿದ್ದರು. ಮನೆಯಲ್ಲಿ ಪದೇ ಪದೇ ಹಣದ ವಿಚಾರ ಪ್ರಸ್ತಾಪಿಸುತ್ತಿದ್ದರಿಂದ ಇಬ್ಬರನ್ನ ಚಿರನಿದ್ರೆಗೆ ಕಳುಹಿಸಲು ಸಾಯಿನಾಥ್ ಪ್ಲಾನ್ ಮಾಡಿಕೊಂಡಿದ್ದನು.

    ಊಟದಲ್ಲಿ ವಿಷ: ನವೆಂಬರ್ 23ರಂದು ಮಾಡಿದ ಅಡುಗೆಯಲ್ಲಿ ವಿಷ ಸೇರಿಸಿದ್ದಾನೆ. ವಿಷ ಮಿಶ್ರಿತ ಆಹಾರ ಸೇವಿಸಿದ ತಾಯಿ ಮತ್ತು ಸೋದರಿ ಅಸ್ವಸ್ಥಗೊಂಡಾಗ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಅನುಜಾ ನವೆಂಬರ್ 27ರಂದು ಮೃತರಾದ್ರೆ, ತಾಯಿ ಸುನಿತಾ ನವೆಂಬರ್ 28ರಂದು ಗಾಂಧಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಮೂರು ವರ್ಷಗಳ ಹಿಂದೆ ಆರೋಪಿ ಸಾಯಿನಾಥ್ ತಂದೆ ಮೃತರಾಗಿದ್ದರು. ತಾಯಿ ಮತ್ತು ತಂಗಿ ಜೊತೆ ಸಾಯಿನಾಥ್ ವಾಸವಾಗಿದ್ದನು. ಆರೋಪಿ ಹಲವು ದಿನಗಳಿಂದ ಬೆಟ್ಟಿಂಗ್ ನಲ್ಲಿ ಭಾಗಿಯಾಗುತ್ತಿದ್ದನು. ಇದೇ ಬೆಟ್ಟಿಂಗ್ ಕುಟುಂಬದ ಲಕ್ಷಾಂತರ ರೂಪಾಯಿ ಸೋತಿದ್ದನು. ತಾಯಿ ಮತ್ತು ತಂಗಿ ಹಣ, ಚಿನ್ನ ಕೇಳಿದಾಗ ಇಬ್ಬರನ್ನ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

     

     

  • 10 ವರ್ಷದ ಲವ್ ಫೇಲ್- ಭಗ್ನ ಪ್ರೇಮಿ ಆತ್ಮಹತ್ಯೆ

    10 ವರ್ಷದ ಲವ್ ಫೇಲ್- ಭಗ್ನ ಪ್ರೇಮಿ ಆತ್ಮಹತ್ಯೆ

    – ಫಿಕ್ಸ್ ಆಗಿದ್ದ ತಂಗಿ ಮದ್ವೆಯೂ ಕ್ಯಾನ್ಸಲ್

    ಮೈಸೂರು: ತಂಗಿ ಮದುವೆ ರದ್ದು ಹಾಗೂ ಇತ್ತ ತನ್ನ ಲವ್ ಕೂಡ ಫೇಲ್ ಆಗಿರುವುದರಿಂದ ಮನನೊಂದು ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ವಿಜಯಶ್ರೀಪುರದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಚೇತನ್ ಶರ್ಮ(29) ಎಂದು ಗುರುತಿಸಲಾಗಿದೆ. ಡಿಪ್ಲಮೋ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್, ಮೂಲತಃ ಬೆಂಗಳೂರು ನಿವಾಸಿ. ಈತ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದನು.

    ಈತ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಇದೀಗ ಲವ್ ಫೇಲ್ ಆಗಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಇತ್ತೀಚೆಗಷ್ಟೇ ಫಿಕ್ಸ್ ಆಗಿದ್ದ ತಂಗಿ ಮದುವೆ ಕೂಡ ರದ್ದಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಚೇತನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಅಲ್ಲದೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 6 ದಿನ 15 ಜನರಿಂದ ಅಪ್ರಾಪ್ತ ಇಬ್ಬರು ಸೋದರಿಯರ ಮೇಲೆ ಗ್ಯಾಂಗ್‍ರೇಪ್

    6 ದಿನ 15 ಜನರಿಂದ ಅಪ್ರಾಪ್ತ ಇಬ್ಬರು ಸೋದರಿಯರ ಮೇಲೆ ಗ್ಯಾಂಗ್‍ರೇಪ್

    – ಬಾಲಕಿಯರಿಗೆ ನಶೆ ಪದಾರ್ಥ ನೀಡಿ ಅತ್ಯಾಚಾರ
    – ಮಾರುಕಟ್ಟೆಯ ಜನಸಂದಣಿಯಲ್ಲಿ ಬಿಟ್ಟು ನೀಚರು ಎಸ್ಕೇಪ್

    ಇಸ್ಲಾಮಾಬಾದ್: ಆರು ದಿನ 15 ಜನರು ಇಬ್ಬರು ಅಪ್ರಾಪ್ತ ಸೋದರಿಯರನ್ನು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಾಕಿಸ್ತಾನದ ಫೆಸ್ಲಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಮಹಿಳೆ ಸಂಘಟನೆಗಳು ಸೇರಿದಂತೆ ಬಹುತೇಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಕಾಮುಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

    15 ಮತ್ತು 17 ವರ್ಷದ ಬಾಲಕಿಯರನ್ನ 11 ಜನ ಪ್ಲಾನ್ ಮಾಡಿ ಅಪಹರಿಸಿದ್ದಾರೆ. ನಂತರ ಇಬ್ಬರನ್ನ ಪ್ರತ್ಯೇಕವಾಗಿ ಫೆಸ್ಲಾಬಾದ್ ವ್ಯಾಪ್ತಿಯಲ್ಲಿರಿಸಿದ್ದಾರೆ. ಆರು ದಿನವೂ ಇಬ್ಬರನ್ನ ನಶೆಯಲ್ಲಿರುವಂತೆ ನೋಡಿಕೊಂಡ ನೀಚರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಆರು ದಿನಗಳ ಬಳಿಕ ಓರ್ವ ಬಾಲಕಿಯನ್ನ ಜಂಗ್ ಬಜಾರ್ ಮತ್ತು ಮತ್ತೋರ್ವಳನ್ನ ಗುಜರಾನ್ವಾಲ್ ಮಾರುಕಟ್ಟೆಯ ಜನಸಂದಣಿಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.

    ತಾಯಿಯ ಕಣ್ಣೀರು: ಸೆಪ್ಟೆಂಬರ್ 11ರಂದು ಇಬ್ಬರು ಮಕ್ಕಳನ್ನ ಅಪಹರಿಸಲಾಗಿತ್ತು. ಆರು ದಿನಗಳ ಬಳಿಕ ಮಕ್ಕಳು ಮನೆಗೆ ಬಂದಾಗ ಅತ್ಯಾಚಾರ ನಡೆದಿರುವ ವಿಷಯ ತಿಳಿಯಿತು. ಎಲ್ಲ 15 ಜನ ಮಕ್ಕಳಿಗೆ ಆರು ದಿನ ನಶೆ ಪದಾರ್ಥ ನೀಡುವ ಮೂಲಕ ಮಂಪರಿನಲ್ಲಿರುವಂತೆ ನೋಡಿಕೊಂಡಿದ್ದರು. ಆರ್ಥಿಕವಾಗಿ ಸಬಲರಾಗಿರದ ಕಾರಣ ಕಾನೂನು ಹೋರಾಟ ನಡೆಸಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಈ ಊರು ತೊರೆದು ಬೇರೆ ಸ್ಥಳದಲ್ಲಿ ನೆಲಸಲು ತೀರ್ಮಾನಿಸಿದ್ದೇವೆ ಎಂದು ಸಂತ್ರಸ್ತ ಬಾಲಕಿಯರ ತಾಯಿ ಕಣ್ಣೀರು ಹಾಕುತ್ತಾರೆ.

    ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರೂ ಇದುವರೆಗೂ ಯಾವ ಆರೋಪಿಯನ್ನ ಬಂಧಿಸಿಲ್ಲ. ಪೊಲೀಸರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಹುತೇಕ ಸಂಘಟನೆಗಳ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ.

  • ಮರ್ಯಾದಾ ಹತ್ಯೆ- ಪ್ರೀತಿಸಿ ಮದ್ವೆಯಾಗಿದಕ್ಕೆ ತಮ್ಮನಿಂದ ಅಕ್ಕನ ಕೊಲೆ

    ಮರ್ಯಾದಾ ಹತ್ಯೆ- ಪ್ರೀತಿಸಿ ಮದ್ವೆಯಾಗಿದಕ್ಕೆ ತಮ್ಮನಿಂದ ಅಕ್ಕನ ಕೊಲೆ

    – ಆರು ತಿಂಗಳ ಹಿಂದೆ ಮದ್ವೆಯಾಗಿದ್ದ ಬ್ಯಾಂಕ್ ಉದ್ಯೋಗಿಗಳು
    – ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದು ತಪ್ಪಾಯ್ತು
    – ಪತ್ನಿ ಸಾವು, ಗಂಭೀರ ಸ್ಥಿತಿಯಲ್ಲಿರೂ ಪತಿಗೆ ಚಿಕಿತ್ಸೆ

    ಕೊಪ್ಪಳ: ಜಿಲ್ಲೆಯ ಕಾರಟಗಿಯಲ್ಲಿ ನಡೆದ ಮಾರಣಾಂತಿಕ ದಾಳಿ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಕೊಲೆಯಾದ ಮಹಿಳೆಯ ಸೋದರನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ತಮ್ಮನೇ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಸೋದರಿ ತ್ರಿವೇಣಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ತ್ರಿವೇಣಿ ಪತಿ ವಿನೋದ್ ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅವಿನಾಶ್ ಸೋದರಿಯನ್ನ ಕೊಲೆಗೈದ ಕ್ರೂರಿ ತಮ್ಮ. ಮುಧೋಳ ತಾಲೂಕಿನ ನಿವಾಸಿಗಳಾಗಿದ್ದ ವಿನೋದ್ (30) ಮತ್ತು ತ್ರಿವೇಣಿ (35) ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಐದು ವರ್ಷ ಸೀನಿಯರ್ ಆಗಿದ್ದ ತ್ರಿವೇಣಿ ತಮ್ಮ ಜೂನಿಯರ್ ವಿನೋದ್ ಅವರನ್ನ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ವಯಸ್ಸು ಅಡ್ಡಿಯಾಗಿರಲಿಲ್ಲ. ಆದ್ರೆ ಮದುವೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ಆರು ತಿಂಗಳ ಹಿಂದೆ ವಿನೋದ್ ಮತ್ತು ತ್ರಿವೇಣಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು.

    ಮದುವೆ ಬಳಿಕ ತ್ರಿವೇಣಿ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಗ್ರಾಮದಲ್ಲಿ ತ್ರಿವೇಣಿ ಮದುವೆ ಫೋಟೋ ನೋಡಿದ್ದ ಜನರು ಮಾತನಾಡಕೊಳ್ಳಲಾರಂಭಿಸಿದ್ದರು. ಇದರಿಂದ ಅವಮಾನಿತನಾದ ಅವಿನಾಶ್, ಅಕ್ಕ ಮತ್ತು ಮಾವನ ಕೊಲೆಗೆ ನಿರ್ಧರಿಸಿ, ಎರಡು ದಿನಗಳ ಹಿಂದೆ ಸ್ನೇಹಿತರ ಜೊತೆ ಕಾರಟಗಿ ಬಂದಿದ್ದನು. ಎರಡು ದಿನ ಅಕ್ಕನ ಚಲನವಲನ ಗಮನಿಸಿ ಶನಿವಾರ ದಾಳಿ ನಡೆಸಿ ಕೊಲೆಗೈದಿದ್ದಾನೆ.

    ಸದ್ಯ ಪೊಲೀಸರು ಆರೋಪಿ ಅವಿನಾಶ್ ನನ್ನು ಬಂಧಿಸಿ, ಇನ್ನಿಬ್ಬರು ಪರಾರಿಯಾಗಿದ್ದಾರೆ. ತಮ್ಮನೇ ಅಕ್ಕನನ್ನು ಕೊಲೆ ಮಾಡಿದ್ದರಿಂದ ತ್ರಿವೇಣಿ ಶವವನ್ನ ವಶಕ್ಕೆ ಪಡೆಯಲು ಯಾರು ಮುಂದಾಗಿಲ್ಲ.

    ಇಬ್ಬರು ಬ್ಯಾಂಕ್ ಉದ್ಯೋಗಿಗಳಾಗಿದ್ದು, ಕಾರಟಗಿಯಲ್ಲಿ ವಾಸವಾಗಿದ್ದರು. ವಿನೋದ್ ಕಾರಟಗಿಯ ಖಾಸಗಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ತ್ರಿವೇಣಿ ಬಳ್ಳಾರಿ ಸಿರಗುಪ್ಪದ ಬಿರೇಶ್ವರ ಪತ್ತಿನ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ತಮ್ಮ ಕೆಲಸ ಮುಗಿಸಿಕೊಂಡು ದಂಪತಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಮೂವರು ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯ ಪರಿಣಾಮ ತ್ರೀವೇಣಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳು ವಿನೋದ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯಿಂದ ಬಳ್ಳಾರಿಗೆ ರವಾನಿಸಲಾಗಿದೆ.

  • ಪ್ರೀತಿಗೆ ಅಡ್ಡಿಯಾದ ತಂಗಿಯನ್ನ ಇನಿಯನ ಜೊತೆ ಸೇರಿ ಕೊಂದ್ಳು

    ಪ್ರೀತಿಗೆ ಅಡ್ಡಿಯಾದ ತಂಗಿಯನ್ನ ಇನಿಯನ ಜೊತೆ ಸೇರಿ ಕೊಂದ್ಳು

    -ಪರಾರಿ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್ ಖಾಲಿಯಾಗಿ ಸಿಕ್ಕಿ ಬಿದ್ರು
    -ಕತ್ತು ಹಿಸುಕಿ ಕೊಲೆಗೈದು, ರೈಲ್ವೇ ಟ್ರ್ಯಾಕ್ ಬಳಿ ಶವ ಎಸೆದ್ರು

    ಲಕ್ನೋ: ಪ್ರೀತಿಗೆ ಅಡ್ಡಿಯಾದ ತಂಗಿಯನ್ನ ಇನಿಯನ ಜೊತೆ ಸೇರಿ ಕೊಂದ್ಳು ಪ್ರೀತಿಗೆ ಅಡ್ಡಿಯಾದ 10 ವರ್ಷದ ತಂಗಿಯನ್ನ 15 ವರ್ಷದ ಅಕ್ಕ ತನ್ನ ಪ್ರಿಯತಮನ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಪ್ರಕರಣ ದಾಖಲಾದ 10 ಗಂಟೆಯಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಳಗ್ಗೆ ತರಕಾರಿ ತರೋದಾಗಿ ಅಕ್ಕ-ತಂಗಿ ಮನೆಯಿಂದ ಹೊರ ಹೋಗಿದ್ದರು. ಸಂಜೆಯಾದ್ರು ಮನೆಗೆ ಹಿಂದಿರುಗಿದ ಹಿನ್ನೆಲೆ ಬಾಲಕಿಯರ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕಿ ಮತ್ತು ಆಕೆಯ ಪ್ರಿಯಕರ ಪ್ರಮೋದ್ ಕುಮಾರ್ ಬಿಂದ್ ಎಂಬಾತನನ್ನು ಬಂಧಿಸಿದ್ದಾರೆ.

    ಗ್ರಾಮದ ಬಾಲಕಿ ಎರಡು ವರ್ಷಗಳಿಂದ ಪ್ರಮೋದ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ ಇಬ್ಬರ ಪ್ರೇಮ ಪ್ರಸಂಗಕ್ಕೆ ಸೋದರಿ ಅಡ್ಡಿಯಾಗಿದ್ದಳು. ತರಕಾರಿ ತರಲು ಸೈಕಲ್ ಮೇಲೆ ಕರೆದುಕೊಂಡು ಹೋಗುವದಾಗಿ ಹೇಳಿ ತಂಗಿ ಜೊತೆ ಬಂದಿದ್ದಾಳೆ. ಮಾರ್ಗ ಮಧ್ಯೆ ಪ್ರಮೋದ ಜೊತೆಯಾಗಿದ್ದು, ಮೂವರು ಮಿರ್ಜಾಪುರದ ಹೋಟೆಲ್ ನಲ್ಲಿ ಊಟ ಮಾಡಿದ್ದಾರೆ.

    ಊಟದ ಬಳಿಕ ರಾಜಪುರ ನಗರದ ಬಳಿ ಕುಳಿತಾಗ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಅನುಮಾನ ಬಾರದಿರಲಿ ಎಂದು ಶವವನ್ನು ರೈಲ್ವೇ ಟ್ರ್ಯಾಕ್ ಬಳಿ ಬಿಸಾಡಿದ್ದಾರೆ. ಇನ್ನೇನು ಪರಾರಿ ಆಗಬೇಕೆನ್ನುವಷ್ಟರಲ್ಲಿ ಬೈಕಿನಲ್ಲಿದ್ದ ಪೆಟ್ರೋಲ್ ಖಾಲಿಯಾದ ಪರಿಣಾಮ ಮಾರ್ಗ ಮಧ್ಯೆಯ ನಿಂತಿದ್ದಾರೆ. ಇತ್ತ ಕಾರ್ಯಪ್ರವೃತ್ತರಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

  • ಸೋದರಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಕಿರಾತಕ

    ಸೋದರಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಕಿರಾತಕ

    – ಗರ್ಭಿಣಿ ಆಗುತ್ತಿದ್ದಂತೆ ಹುಡುಗಿ ಆತ್ಮಹತ್ಯೆ

    ಶಿವಮೊಗ್ಗ: ತನ್ನ ದೊಡ್ಡಮ್ಮನ ಮಗನೊಂದಿಗೆ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾದ 16 ವರ್ಷದ ಹುಡುಗಿಯೊಬ್ಬಳು ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ತೀರ್ಥಹಳ್ಳಿ ಮೂಲದ ಆರೋಪಿ ಮೃತ ಹುಡುಗಿಗೆ ದೊಡ್ಡಮ್ಮನ ಮಗನಾಗಿದ್ದು, ಸಂಬಂಧದಲ್ಲಿ ಸಹೋದರನಾಗಬೇಕು. ಆದರೆ ಹುಡುಗಿಗೆ ತಾನೇ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದನು.

    ಇತ್ತೀಚೆಗೆ ಆಕೆ ಐದು ತಿಂಗಳ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆ ನಾಪತ್ತೆಯಾಗಿದ್ದನು. ಇದರಿಂದ ಮನನೊಂದ ಹುಡುಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಸಾಯುವ ಮುನ್ನ, ನನ್ನ ಸಾವಿಗೆ ರಾಘವೇಂದ್ರನೇ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ರಿಪ್ಪನ್ ಪೇಟೆ ಪೊಲೀಸರು ಡೆತ್‍ನೋಟ್ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತಂತೆ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ಲೀಸ್ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಹಾಕಿ – ತಂದೆಗೆ ಸಹೋದರಿ ಬರೆದ ಪತ್ರ ವೈರಲ್

    ಪ್ಲೀಸ್ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಹಾಕಿ – ತಂದೆಗೆ ಸಹೋದರಿ ಬರೆದ ಪತ್ರ ವೈರಲ್

    ಬಾಲ್ಯದಲ್ಲಿ ಮನೆಯಲ್ಲಿ ಅಣ್ಣ-ತಂಗಿ ಜಗಳವಾಡುವುದು, ಕಾಡಿಸುವುದು ಸಾಮಾನ್ಯ. ಸಣ್ಣ-ಪುಟ್ಟ ವಿಚಾರಗಳಿಗೂ ಇಬ್ಬರು ಮಧ್ಯೆ ಜೋರಾಗಿ ಗಲಾಟೆ ಕೂಡ ಆಗುತ್ತದೆ. ಕೆಲವೊಮ್ಮ ಕಾರಣಗಳೇ ಇಲ್ಲದೇ ಜಗಳವಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಸಹೋದರಿ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ ಎಂದು ತನ್ನ ತಂದೆಗೆ ಪತ್ರ ಬರೆದಿದ್ದಾಳೆ. ಇದೀಗ ಆ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸ್ವತಃ ಸಹೋದರನೇ ಆ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರಿನಲ್ಲಿ ಈ ಪತ್ರ ಸಖತ್ ವೈರಲ್ ಆಗುತ್ತಿದೆ. ಕ್ರಿಶ್ ಪರ್ಮರ್ ಎಂಬಾತ ಬಾಲ್ಯದಲ್ಲಿ ತನ್ನ ಸಹೋದರಿ ತಮ್ಮ ತಂದೆಗೆ ಬರೆದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ನನ್ನ ತಂಗಿ ತಂದೆಗೆ ಬರೆದದ್ದು ಇದನ್ನೇ” ಎಂದು ಕ್ರಿಶ್ ಬರೆದುಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಪ್ರೀತಿಯ ತಂದೆಗೆ, ದಯವಿಟ್ಟು ಕ್ರಿಶ್ ಪರ್ಮರ್ ನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ. ಆತ ನನಗೆ ಕಾರಣವೇ ಇಲ್ಲದೆ ಹೊಡೆಯುತ್ತಿದ್ದಾನೆ. ಅಲ್ಲದೇ ಅವನು ನನ್ನ ಮೇಲೆ ಜಂಪ್ ಮಾಡಿ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ದಯವಿಟ್ಟು ಆದಷ್ಟು ಬೇಗ ಆತನನ್ನು ಜೈಲಿಗೆ ಕಳುಹಿಸಿ” ಎಂದು ಸಹೋದರಿ ಮನವಿ ಮಾಡಿಕೊಂಡಿದ್ದಾಳೆ.

    ಅಲ್ಲದೇ ಕೊನೆಯಲ್ಲಿ ನಿಮ್ಮ ಪ್ರೀತಿಯ ಮಗಳು ಅನಯಾ ಪರ್ಮರ್, ‘Sister of Stupid krisha parmar’ ಎಂದು ಬರೆದು ಸಹಿ ಹಾಕಿದ್ದಾಳೆ. ಇದೀಗ ಈ ತಮಾಷೆಯ ಪತ್ರ ವೈರಲ್ ಆಗಿದ್ದು, ನೆಟ್ಟಿಗರು ಫನ್ನಿ ಫನ್ನಿಯಾಗಿ ಕಮೆಂಟ್ ಮಾಡುವ ಮೂಲಕ ತಮ್ಮ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

    “ನನ್ನ ಸಹೋದರಿ ಈ ಪತ್ರವನ್ನು ಬರೆದಾಗ 8 ಅಥವಾ 9 ವರ್ಷ ವಯಸ್ಸಿನವನಾಗಿದ್ದಳು. ನಾನು ಇದನ್ನು ಒಂದು ತಿಂಗಳ ಹಿಂದೆಯಷ್ಟೆ ತಿಳಿದುಕೊಂಡೆ” ಎಂದು ಕ್ರಿಶ್ ಹೇಳಿದ್ದಾಳೆ.

  • ಸೋದರಿಯ ಶವಸಂಸ್ಕಾರಕ್ಕೆ ಬಂದು ಬಾವನನ್ನು ಹತೈಗೈದ ಅಣ್ಣ

    ಸೋದರಿಯ ಶವಸಂಸ್ಕಾರಕ್ಕೆ ಬಂದು ಬಾವನನ್ನು ಹತೈಗೈದ ಅಣ್ಣ

    – ಆರು ಗಂಟೆಗಳಲ್ಲೇ ಆರೋಪಿಗಳ ಬಂಧನ

    ಬೆಂಗಳೂರು: ಭಾನುವಾರ ಕಾಡುಗೋಡಿಯಲ್ಲಿ ನಡೆದ ಹೆಚ್.ಎ.ಎಲ್ ಉದ್ಯೋಗಿ ರಾಜೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಕೊಲೆ ನಡೆದ ಆರು ಗಂಟೆಗಳಲ್ಲಿ ಬಂಧಿಸುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳನ್ನು ಜಾನ್‍ಪಾಲ್ ಹಾಗೂ ದಿನೇಶ್ ಎಂದು ಗುರುತಿಸಲಾಗಿದೆ. ಆರೋಪಿ ಜಾನ್‍ಪಾಲ್ ತಂಗಿ ಜಾಸ್ಮಿನ್‍ಗೆ ಏಳು ವರ್ಷಗಳ ಹಿಂದೆ ರಾಜೇಶ್ ಜೊತೆ ವಿವಾಹ ಮಾಡಲಾಗಿತ್ತು. ಇವರಿಗೆ ಐದು ವರ್ಷದ ಗಂಡು ಹಾಗೂ ಮೂರು ತಿಂಗಳ ಹೆಣ್ಣು ಮಗು ಇದ್ದು, ಕಾಡುಗೋಡಿಯ ವೀರಸ್ವಾಮಿರೆಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದರು.

    ಕಳೆದ ನಾಲ್ಕು ತಿಂಗಳ ಹಿಂದೆ ಜಾಸ್ಮಿನ್ ಮತ್ತು ರಾಜೇಶ್ ನಡುವೆ ಜಗಳವಾಗಿದ್ದು, ಜಾಸ್ಮಿನ್ ಕೆಜಿಎಫ್‍ನಲ್ಲಿರುವ ತನ್ನ ತವರು ಮನೆಗೆ ಹೋಗಿ ಅಲ್ಲೆ ವಾಸವಿದ್ದಳು. ಆದರೆ ಇದೇ ತಿಂಗಳ 15 ರಂದು ಜಾಸ್ಮಿನ್ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ವಿಷಯ ತಿಳಿದ ಜಾಸ್ಮಿನ್ ಅಣ್ಣ ಯೋಧನಾಗಿರುವ ಜಾನ್‍ಪಾಲ್ ರಜೆಯ ಮೇಲೆ ತಂಗಿಯ ಶವಸಂಸ್ಕಾರಕ್ಕೆ ಬಂದಿದ್ದನು. ತಂಗಿಯ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ತಿಳಿದು ತನ್ನ ಚಿಕ್ಕಪ್ಪನ ಮಗನಾದ ದಿನೇಶ್ ಜೊತೆಗೂಡಿ ಕೊಲೆ ಮಾಡಲು ಪ್ಲಾನ್ ಮಾಡಿದ್ದನು. ಅದರಂತೆಯೇ ಕೆಜಿಎಫ್‍ನಿಂದ ಕಾಡುಗೋಡಿಗೆ ಬಂದಿದ್ದ ರಾಜೇಶ್‍ನನ್ನು ಕಾಡುಗೋಡಿ ವೀರಸ್ವಾಮಿರೆಡ್ಡಿ ಲೇಔಟ್‍ನ ಮಯೂರ ಬೇಕರಿ ಬಳಿ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

    ವಿಷಯ ತಿಳಿದ ಕಾಡುಗೋಡಿ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ಕೊಲೆ ನಡೆದ ಆರು ಗಂಟೆಗಳಲ್ಲಿಯೇ ಇಬ್ಬರು ಆರೋಪಿಗಳನ್ನು ಬಂಗಾರ ಪೇಟೆಯಲ್ಲಿ ಬಂಧಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.